Monday, 1 August 2016

super messages (my collections)

🍁ಅತ್ಯಂತ ಶ್ರಮದಾಯಕವಾದ ಬೆವರು ಸುರಿಸುವ ವ್ಯಾಯಾಮದಿಂದ ನಾವು ಖುಷಿ ಪಡುವುದಿಲ್ಲವೇ ? ನಮಗೆ ಖುಷಿಯಾಗಲು  ಕಾರಣವಾದರೂ ಏನು? ನೀವು ಅದರಿಂದ ಖುಷಿ ಪಡಲು ಮುಂಚಿತವಾಗಿಯೇ ನಿರ್ಧರಿಸಿದ್ದೀರಿ . ಆದ್ದರಿಂದ ಅದು ಎಷ್ಟೇ ಶ್ರಮದಾಯಕವಾದರೂ ಅದರಿಂದ ನೀವು ಖುಷಿ ಪಡುತ್ತೀರಿ ಅದೇ ರೀತಿಯಾಗಿ ಯಾವುದೇ ಸಂಘರ್ಷ ಗಳಲ್ಲೂ  ಸಂತೋಷ ಪಡಲು ನಾವು ಮುಂಚಿತವಾಗಿಯೇ ನಿರ್ಧರಿಸಿದರೆ ಅದಕ್ಕೆ ಬೇಕಾದ ಆಂತರಿಕ ದ್ವಾರಗಳು ತೆರೆದುಕೊಳ್ಳುತ್ತವೆ ಈ ರೀತಿಯಾಗಿ ನಾವು ಪ್ರತಿ ಸಂಘರ್ಷದಲ್ಲೂ ಸಂಕಷ್ಟದಲ್ಲೂ ಖುಷಿ ಪಡಬಹುದು .


🍁ಭಗವಂತ ನಮಗೆ ಸಮಸ್ಯೆಗಳನ್ನು ಕೊಡುವುದು ನಮ್ಮನ್ನು ಕೆಡುಹುವುದಕ್ಕಲ್ಲಾ ,ವಿನಮ್ರವಾಗಿಸುವುದಕ್ಕೆ, ಎಂದು ನಾವು ಅರಿತಾಗ ನಾವು ಪವಿತ್ರರಾಗುತ್ತೇವೆ .


🍁ಜಗತ್ತಾಗಲೀ ಅದರ ವಿವರಗಳಾಗಲೀ ಕೇವಲ ನಮ್ಮ ಸೃಷ್ಟಿಗಳಷ್ಟೇ . ಜಗತ್ತು ಕೇವಲ ಒಂದು ಸಾಪೇಕ್ಷ ಸತ್ಯವಷ್ಟೇ . ಅದು ವಸ್ತು ನಿಷ್ಠ ಸತ್ಯವಲ್ಲ . ವ್ಯಕ್ತಿನಿಷ್ಟವಾದುದು .



🍁ಅಜ್ಞಾನ ಮತ್ತು ಜ್ಞಾನಗಳ ಮಿಶ್ರಣವೇ ಜೀವನ ಅದನ್ನು ಸೂಕ್ಷ್ಮ ಶ್ರುತಿಗೊಳಿಸಬೇಕಾಗಿದೆ . ಉದಾ ; ನಿಮ್ಮ ಮನೆಗೆ ಇಟಾಲಿಯನ್ ಮಾರ್ಬಲ್ ಬಳಸಿದರೂ ಅದನ್ನು ಚೆನ್ನಾಗಿ ಪಾಲಿಶ್ ಮಾಡದಿದ್ದರೆ ಅದು ತೀರಾ ಸಾಮಾನ್ಯವಾಗಿ ಕಾಣುತ್ತದೆ . ಹಾಗೆಯೇ ನಿಮ್ಮಲ್ಲಿಯ ಜ್ಞಾನವನ್ನು ನಮ್ರತೆ ಹಾಗೂ ಅರಿವಿನಿಂದ ಶುದ್ಧಿಗೊಳಿಸದಿದ್ದರೆ ಅದು ನಿಮ್ಮನ್ನು ಅನುಗ್ರಹಿಸಲಾರದು .


🍁ಭಗವಂತನು ಎಲ್ಲರಿಗೂ ಸಮಸ್ತವನ್ನು ನೀಡಿದ್ದಾನೆ ಅಂತೆಯೇ ಬುದ್ಧಿಯನ್ನೂ ಸಹಾ ಆದರೆ ನಾವು ಅದನ್ನು ಬಳಸುವುದಿಲ್ಲ , ಬಳಸಿಕೊಳ್ಳಬೇಕಷ್ಟೇ.  ಹಕ್ಕಿಗೆ ಮಳೆಯಿಂದ ರಕ್ಷಿಸಿಕೊಳ್ಳಲು ಗೂಡನ್ನು ಕಟ್ಟಿಕೊಳ್ಳುವ ಬುದ್ಧಿ ಶಕ್ತಿಯಿದೆ . ಅದು ಎಲ್ಲಿಂದ ಬಂತು ? ಅದು ಆ ಹಕ್ಕಿಯಲ್ಲೇ ಸುಪ್ತವಾಗಿತ್ತು .


🍁ಮನಸ್ಸು ದುರಾಸೆ ಮತ್ತು ಕುಯುಕ್ತಿಯಿಂದ ತುಂಬಿ ಇನ್ನೂ ಬೇಕು ಎಂದು ಸದಾ ಬಯಸುವುದರಿಂದ ಬದುಕು ಗೋಜಲಾಗುತ್ತದೆ . ಒಂದು ಹಕ್ಕಿ ನಾನು ಮನುಷ್ಯನಂತೆ ನಡೆಯಲಾರೆ ಎಂದು ದುಃಖ ಪಟ್ಟರೆ ನೀರು ಸೋರದ ಸುಂದರವಾದ ಗೂಡನ್ನು ಕಟ್ಟುವ ಸಾಮರ್ಥ್ಯವನ್ನೇ ಅದು ನಿರಾಕರಿಸಿದನ್ತಾಯ್ತು.  ದುರಾಶಾ ಭರಿತ ಮನಸ್ಸು ಬದುಕಿನ ಸಿರಿವಂತಿಕೆಯನ್ನು ನಿರಾಕರಿಸುತ್ತದೆ .


🍁 ದಡ್ಡತನ ಎಂಬುದು ಒಂದು ಬಗೆಯ ಪ್ರಜ್ಞಾ ಶೂನ್ಯತೆ . ನಿಮಗೆ ಏನೂ ಗೊತಿಲ್ಲವಾದರೂ ಎಲ್ಲಾ ತಿಳಿದವರಂತೆ ನಟಿಸುತ್ತೀರಿ . ಈ ನಾಟಕವನ್ನು ತಕ್ಷಣ ನಿಲ್ಲಿಸಿ.  ಇದು ನೀವು ನಿದ್ರಾವಸ್ಥೆಯಲ್ಲಿ ಬದುಕುತ್ತಿರುವುದರ ಲಕ್ಷಣ . ನಿದ್ರೆಯಿಂದ ನೀವು ಯಾವ ಕ್ಷಣದಲ್ಲಾದರೂ ಎಚರಗೊಳ್ಳ ಬಹುದು .


🍁ಸಮಸ್ಯೆ ಯಿಂದ ಮನುಷ್ಯ ದಡ್ದನಾಗುವುದಿಲ್ಲ  ಅವು ಎಚ್ಚರಿಕೆಯ ಗಂಟೆಗಳಷ್ಟೇ ಅದು ನಿಮ್ಮನ್ನು ಕ್ರಿಯಾಶೀಲರಾಗಲು ಶ್ರುಜನ ಶೀಲತೆಯಿಂದ ಅದನ್ನು ಬಗೆ ಹರಿಸಲು ಪ್ರೇರೇಪಿಸುತ್ತದೆ  .


🍁ಹಸಿವೆ ಒಂದು ಸಮಸ್ಯೆಯಲ್ಲ ನೀವು ಅದರಬಗ್ಗೆ ಕ್ರಿಯಾಶೀಲ ರಾಗಬೇಕೆಂಬ ಪ್ರೇರಣೆ ಅಷ್ಟೇ . ಪ್ರತಿಯೊಂದು ಸಮಸ್ಯೆಯೂ ಶ್ರುಜನ ಶೀಲತೆಗೆ ಆಹ್ವಾನ ಆದರೆ ಸಮಸ್ಯೆಯನ್ನು ದೊಡ್ಡದು ಮಾಡಲೂ ಬಾರದು ನಿರ್ಲಕ್ಷಿಸಲೂ ಬಾರದು . ನಿಮ್ಮಲ್ಲಿ ಸಾಹಸದ ಚೈತನ್ಯ ಇಲ್ಲವೆನಿಸಿದಾಗ ಈ ನೋವು ಉಂಟಾಗುತ್ತದೆ . 

No comments:

Post a Comment