ಸ್ವಾತಂತ್ರ್ಯ ಎಂದರೇನು?
ಒಬ್ಬ ವ್ಯಕ್ತಿ ತನ್ನಷ್ಟಕ್ಕೆ ತಾನು ಜೀವಿಸುವುದು ಸ್ವಾತಂತ್ರ್ಯವೇ? ವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಸ್ವಾತಂತ್ರ್ಯ ಕರೆಯುತ್ತೇವೆಯೇ? ಸ್ವಾತಂತ್ರ್ಯ ಎಂದರೆ ನಮ್ಮಿಚ್ಛೆಯಂತೆ ನಾವು ಬದುಕುವುದು ಮತ್ತು ವರ್ತಿಸುವುದೇ? ಹಾಗಾದರೇ ಸ್ವೇಚ್ಛಾಚಾರವೇ ಸ್ವಾತಂತ್ರ್ಯವೇ?
ಬ್ರಿಟಿಷರ ವಿರುದ್ಧ ಸೈನ್ಯ ಕಟ್ಟಿ ಹೋರಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್, ಶತ್ರುವಿನ ನೆಲದಲ್ಲೇ ದೇಶಭಕ್ತಿಯನ್ನು ಮೊಳಗಿಸಿದ ಶ್ರದ್ದಾಪುರುಷ ವೀರ ಸಾವರ್ಕರ್, ಪಂಜಾಬಿನ ಕ್ರಾಂತಿಸಿಂಹ ಭಗತ್ ಸಿಂಗ್, ಅಪ್ರತಿಮ ಕ್ರಾಂತಿಕಾರಿ ಚಂದ್ರಶೇಖರ್ ಅಜಾದ್, ಮಹಾರಾಷ್ಟ್ರದ ಚಾಪೇಕರ್ ಬಂಧುಗಳು, ದೂರದ ಏಡನ್ ನಲ್ಲಿ ಅತ್ಯಂತ ದಯನೀಯವಾಗಿ ಸತ್ತುಹೋದ ವಾಸುದೇವ ಬಲವಂತ ಫಡಕೆ ಮುಂತಾದ ಲಕ್ಷಾಂತರ ಜನ ಸ್ವಾತಂತ್ರ್ಯಯೋಧರು ವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ತಮ್ಮ ಮುಂದಿನ ಜನಾಂಗ ಎಲ್ಲ ವಿಧಗಳ ನೈತಿಕ ಅಧಃಪತನದ ದಾರಿಯಲ್ಲಿ ಸಾಗಲೆಂದು ಸ್ವಾತಂತ್ರ್ಯದೇವಿಗೆ ತಮ್ಮ ರುಧಿರಾಭಿಷೇಕ ಮಾಡಿದರೇ?
ವ್ಕಕ್ತಿ ಸ್ವಾತಂತ್ರ್ಯವೇ ಸ್ವಾತಂತ್ರ್ಯವಲ್ಲ. ಸ್ವೇಚ್ಛಾಚಾರಕ್ಕೂ ಸ್ವಾತಂತ್ರ್ಯಕ್ಕೂ ವ್ಯತ್ಯಾಸವಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಆರುವರೆ ಲಕ್ಷ ಸ್ವಾತಂತ್ರ್ಯ ಯೋಧರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಆದರೆ ನಮಗೆ ನಿಜ ಸ್ವಾತಂತ್ರ್ಯದ ಅರ್ಥ ಗೊತ್ತಿಲ್ಲ. ಸ್ವಾತಂತ್ರ್ಯವೆಂದರೆ ನಮ್ಮ ದೇಶದ ಸಾರ್ವಭೌಮತೆಯನ್ನು ಎತ್ತಿಹಿಡಿಯುವುದು. ಈ ಸಾರ್ವಭೌಮತೆಗಾಗಿಯೇ ನಮ್ಮ ಸ್ವಾತಂತ್ರ್ಯ ಯೋಧರು ಬಲಿದಾನ ಮಾಡಿದ್ದು. ಒಂದು ದಿನ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ನಾವು ನಮ್ಮ ಸ್ವಾತಂತ್ರ್ಯ ಯೋಧರನ್ನು ಮರೆತುಬಿಡುತ್ತಿದ್ದೇವೆ.
ಬನ್ನಿ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಈ ದೇಶದ ಭವ್ಯತೆಯನ್ನು ಹಾಡಿ ಹೊಗಳೋಣ. ಈ ದೇಶಕ್ಕಾಗಿ ಮಡಿದ ಸ್ವಾತಂತ್ರ್ಯ ಯೋಧರನ್ನು ನೆನೆಯೋಣ.
vasundara p
No comments:
Post a Comment