Tuesday, 23 August 2016

ನುಡಿಮುತ್ತುಗಳು

********


*💖ತಪ್ಪು ನಿಮ್ಮ ಅನುಭವಗಳನ್ನು ಹೆಚ್ಚಿಸುತ್ತದೆ, ಅನುಭವ ನಿಮ್ಮ ತಪ್ಪುಗಳನ್ನು ಕಡಿಮೆ ಮಾಡುತ್ತದೆ ನೀವು ತಪ್ಪಿನಿಂದ ಪಾಠ ಕಲಿತರೆ ಜನ ನಿಮ್ಮ ಯಶಸ್ಸು ನೋಡಿ ಪಾಠ ಕಲೀತಾರೆ*.



 *💖ಒಂದು ನಿಮಿಷದಲ್ಲಿ ಬದುಕು ಬದಲಾಗುತ್ತೆ ಅಂತ ಹೇಳೋಕಾಗಲ್ಲ, ಆದರೆ ಒಂದು ನಿಮಿಷದಲ್ಲಿ ತೆಗೆದುಕೊಂಡ ನಿರ್ಧಾರ ನಮ್ಮ ಬದುಕನ್ನು ಬದಲಾಯಿಸುತ್ತೆ*.



 *💖ಒಳ್ಳೆಯ ಅವಕಾಶ ತಪ್ಪಿಹೋಯಿತೆಂದು ಯಾವತ್ತೂ ಕಣ್ಣೀರು ಹಾಕಬೇಡಿ, ಕಣ್ಣೀರು ನಿಮ್ಮ ಮುಂದಿರುವ ಅವಕಾಶವನ್ನು ಮರೆಮಾಚುತ್ತದೆ*.



 *💖ನೋವು ಬಂದಾಗ ಜೀವನ ಇಷ್ಟ ಆಗುವುದಿಲ್ಲ ನಿಜ, ಆದರೆ – ಇಷ್ಟ ಆದವರು ಜೊತೆಯಾಗಿರುವಾಗ ನೋವಲ್ಲೂ ಕೂಡಾ ಏನೋ ಒಂಥರಾ ಖುಷಿ ಇರುತ್ತದೆ*.



 *💖ತಪ್ಪಾಯಿತು ಎನ್ನಲು ಎಂದೂ ನಾಚಿಕೆ ಪಡಬೇಡ. ಯಾಕೆಂದರೆ ಹಾಗೆನ್ನುವುದರ ಅರ್ಥ ನಿನ್ನೆಗಿಂತ ಇಂದು ಬುದ್ಧಿ ಹೆಚ್ಚಾಗಿದೆ ಎಂದು*.



 *💖ಸಂತೋಷದ ಸಮಯದಲ್ಲಿ ಚಪ್ಪಾಳೆ ಹೊಡೆಯುವ ಹತ್ತು ಬೆರಳಿಗಿಂತ, ದುಃಖದ ಸಮಯದಲ್ಲಿ ಕಣ್ಣೀರು ಒರೆಸುವ ಒಂದು ಬೆರಳು ಎಷ್ಟು ಪವಿತ್ರ ಅಲ್ವಾ*.



 *💖ಜೀವನದಲ್ಲಿ ನೀನು ಗೆದ್ದರೆ ನೀನು ಯಾರೆಂದು ಎಲ್ಲರಿಗೂ ಗೊತ್ತಾಗುತ್ತದೆ. ಒಂದು ವೇಳೆ ಸೋತರೆ ನಿನ್ನವರು ಯಾರೆಂದು ನಿನಗೆ ಗೊತ್ತಾಗುತ್ತದೆ*.



 *💖ಬದುಕಿನಲ್ಲಿ ಯಾರನ್ನೂ ನಂಬಬೇಡಿ. ನಿಮ್ಮ ನೆರಳನ್ನೂ ಕೂಡಾ ಯಾಕೆಂದರೆ ಸಂಜೆಯಾಗುತ್ತಲೆ ನೆರಳು ಕೂಡಾ ನಿಮ್ಮನ್ನು ಬಿಟ್ಟು ಹೋಗುತ್ತದೆ*.



 *💖ನಂಬಿಕೆಗಿಂತ ಸಂದೇಹವೇ ಜಾಸ್ತಿಯಾದರೆ ಯಾವ ಸಂಬಂಧವೂ ಉಳಿಯಲ್ಲ. ಸಂದೇಹದ ನಡುವೆ ನಂಬಿಕೆ ಗಟ್ಟಿ ಆದರೆ ಯಾವ ಮನಸ್ಸೂ ಮುರಿಯಲ್ಲ*



. *💖ನಾನು ನನ್ನ ಬಲಗೈಯಲ್ಲಿ ಏನು ಬೇಕಾದರೂ ಸಾಧಿಸಬಲ್ಲೆ, ಆದರೆ ನನ್ನ ಎಡಗೈಯನ್ನು ಅಮ್ಮ ಹಿಡಿದುಕೊಂಡು ಪ್ರೋತ್ಸಾಹಿಸಿದಾಗ ಮಾತ್ರ*.


 *💖ವಿಶಾಲ ಆಕಾಶವನ್ನು ಚಿಕ್ಕ ಕಣ್ಣಿನಲ್ಲೇ ನೋಡಬಹುದು. ಆದರೆ ಒಂದು ಒಳ್ಳೆ ಹೃದಯವನ್ನು ನೋಡಬೇಕಾದರೆ ನಮ್ಮ ಮನಸ್ಸು ವಿಶಾಲವಾಗಿರಬೇಕು*.



 *💖ಜೀವನ ಒಂದು ಸುಂದರವಾದ ರಂಗೋಲಿ. ಒಂದು ಚುಕ್ಕಿ ತಪ್ಪಿದರೂ ಹಾಳಾಗುತ್ತದೆ. ಅದಕ್ಕಾಗಿ ಜೀವನದ ಪ್ರತಿ ಹೆಜ್ಜೆಯಲ್ಲೂ ಗಮನ ಇರಲಿ*.



 *💖ಬದುಕು ಟೀಚರ್‌ಗಿಂತ ತುಂಬಾ ಸ್ಟ್ರಿಕ್ಟ್. ಯಾಕೆಂದರೆ ಟೀಚರ್ ಮೊದಲು ಪಾಠ ಮಾಡಿ ನಂತರ ಪರೀಕ್ಷೆ ಮಾಡ್ತಾರೆ. ಆದರೆ ಬದುಕು ಮೊದಲು ಪರೀಕ್ಷೆ ಮಾಡಿ ನಂತರ ಪಾಠ ಕಲಿಸುತ್ತದೆ*.


 *💖ಮನೆ ಬಿಟ್ಟು ಹೊರಡುವ ಮುನ್ನ ಮನದೊಳಗಿನ ಮಾತನ್ನೊಮ್ಮೆ ಆಲಿಸಿ*


. *********

No comments:

Post a Comment