✨ಶ್ರೀವಾಣಿ✨
💫✨💫✨💫✨💫✨💫
ವಸ್ತು ಎಲ್ಲಿಯವರೆಗೆ ಸೀಮಿತವಾಗಿರುತ್ತದೆ ಅಲ್ಲಿಯವರೆಗೆ ಆಧಾರ ಇರಬೇಕಲ್ಲ. ಎಲ್ಲ ಪದಾರ್ಥಗಳಿಗೆ ಭೂಮಿ ಆಧಾರ. ಆದರೆ ಭೂಮಿ ಆಂತರಿಕ್ಷದಲ್ಲಿ ತೇಲುತ್ತಾ ಇದೆ. ಈ ಭೂಮಿಯ ಚಲನೆಗೆ, ಅಸ್ತಿತ್ವಕ್ಕೆ ಆಧಾರ ಬೇಕಲ್ಲ! ಎಲ್ಲಾ ವಸ್ತುಗಳು ಆಕಾಶದಲ್ಲಿ ತೇಲುತ್ತಾ ಇವೆ. ಆಕಾಶ ಸರಿಸಿದರೆ ಎಲ್ಲಾ ನಿರಾಧಾರ ಆಗುತ್ತದೆ. ಇಂತಹ ಅವಕಾಶ, ಬಯಲು ಸರ್ವ ಪದಾರ್ಥಗಳ ಆಧಾರ.
ಭೌತಶಾಸ್ತ್ರಜ್ಞರು ಹೇಳುವ ಪ್ರಕಾರ ಆಕಾಶವೂ ಶಾಶ್ವತವಲ್ಲ! ಸ್ಟೀಪನ್ ಹಾಕಿನ್ ನಂತವರು ಒಂದು ಸಿದ್ಧಾಂತ ಮಂಡಿಸಿದ್ದಾರೆ. ಈ ಆಕಾಶ, ಪದಾರ್ಥಗಳು, ಭೂಮಿ ಇವು ಪ್ರತ್ಯೇಕ ಅಲ್ಲ. ಇವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇದರ ಅರ್ಥ ಇಷ್ಟೇ ಈ ಜಗತ್ತು ಮೊದಲು ಇರಲಿಲ್ಲ, ಕೊನೆಗೊಮ್ಮೆ ಮರೆಯಾಗುತ್ತದೆ. ಸಮಸ್ತ ಪದಾರ್ಥಗಳೆಲ್ಲಾ ಮರೆಯಾಗುತ್ತವೆ. ಎಲ್ಲಾ ಮರೆಯಾಗಿ ಉಳಿಯುತ್ತದೆಯಲ್ಲ ಅದು ಪರಮ ಸತ್ಯ. ಅದು ದೇವರು, ಪರಮ ಆಧಾರ.
ಯಾವುದು ಎಲ್ಲಾ ಪದಾರ್ಥಗಳಿಗೆ, ಜೀವಜಗತ್ತಿಗೆ ಆಧಾರವಾಗಿದೆಯೋ ಅದು ಪರಮ ಆಧಾರ. ಅದು ಮೂಲ ಅಸ್ತಿತ್ವ, ಅದು ಇಲ್ಲದಿದ್ದರೆ ನಾನು ಇಲ್ಲ, ನೀನು ಇಲ್ಲ, ಜಗತ್ತೇ ಇಲ್ಲ.
ಒಬ್ಬ ಕವಿ ಬರೆಯುತ್ತಾನೆ:
Who flies the kite?
I, said the boy.
I, said the wind.
I, said the string...because I am a thing I fly the kite...
I, said the tail... I make it sail...
All are right ... All are wrong said the unknown voice.
ಒಂದು ಗಾಳಿಪಟ ಹೀಗೆ ಆಕಾಶದಲ್ಲಿ ಹಾರುತ್ತದೆ...
ಒಬ್ಬ ಮಹಾಶಯ ಕೇಳುತ್ತಾನೆ. ಯಾರು ಈ ಪಟವನ್ನು ಹಾರಿಸುತ್ತಿದ್ದಾರೆ.
ಹುಡುಗ ಹೇಳಿದ, ನಾನು ಹಾರಿಸುತ್ತಿದ್ದೇನೆ. ನನ್ನ ಆನಂದಕ್ಕೆ ನಾನು ಹಾರಿಸುತ್ತಿದ್ದೇನೆ.
ಗಾಳಿ ಹೇಳಿತು ನಾನು ಹಾರಿಸುತ್ತಿದ್ದೇನೆ. ನನ್ನ ಇಚ್ಛೆಯಂತೆ ಹಾರಿಸುತ್ತಿದ್ದೇನೆ.
ದಾರ ಹೇಳಿತು ನಾನು ಹಾರಿಸುತ್ತಿದ್ದೇನೆ.
ಪತಂಗದ ಬಾಲ ಹೇಳಿತು ನಾನು ಹಾರಿಸುತ್ತಿದ್ದೇನೆ. ನಾನಿಲ್ಲದಿದ್ದರೆ ಪಟ ಹಾರುತ್ತಿರಲಿಲ್ಲ.
ಆಗ ಒಂದು ವಾಣಿ ಹೇಳಿತು ಎಲ್ಲರೂ ಖರೇ ಹೇಳುತ್ತಿದ್ದಾರೆ. ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ.
ಎಷ್ಟು ಮಜ ಇದೆ.
ಹುಡಗನಿಗೆ ಹಾರಿಸಲು ಬರಲ್ಲ,
ಗಾಳಿಗೆ ಹಾರಿಸಲು ಬರಲ್ಲ,
ಬಾಲಕ್ಕೆ...
ದಾರಕ್ಕೆ...
ಹಾರಿಸಲು ಬರಲ್ಲ.
ಆದರೆ ಎಲ್ಲವನ್ನು ಹಾರಿಸುವ ಅದ್ಭುತ ಶಕ್ತಿ ಇದೆ. ಅದನ್ನು ಮರೆತು ಎಲ್ಲರೂ ಮಾತನಾಡುತ್ತಾರೆ.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು
💫💫💫💫💫💫💫💫💫
💫✨💫✨💫✨💫✨💫
ವಸ್ತು ಎಲ್ಲಿಯವರೆಗೆ ಸೀಮಿತವಾಗಿರುತ್ತದೆ ಅಲ್ಲಿಯವರೆಗೆ ಆಧಾರ ಇರಬೇಕಲ್ಲ. ಎಲ್ಲ ಪದಾರ್ಥಗಳಿಗೆ ಭೂಮಿ ಆಧಾರ. ಆದರೆ ಭೂಮಿ ಆಂತರಿಕ್ಷದಲ್ಲಿ ತೇಲುತ್ತಾ ಇದೆ. ಈ ಭೂಮಿಯ ಚಲನೆಗೆ, ಅಸ್ತಿತ್ವಕ್ಕೆ ಆಧಾರ ಬೇಕಲ್ಲ! ಎಲ್ಲಾ ವಸ್ತುಗಳು ಆಕಾಶದಲ್ಲಿ ತೇಲುತ್ತಾ ಇವೆ. ಆಕಾಶ ಸರಿಸಿದರೆ ಎಲ್ಲಾ ನಿರಾಧಾರ ಆಗುತ್ತದೆ. ಇಂತಹ ಅವಕಾಶ, ಬಯಲು ಸರ್ವ ಪದಾರ್ಥಗಳ ಆಧಾರ.
ಭೌತಶಾಸ್ತ್ರಜ್ಞರು ಹೇಳುವ ಪ್ರಕಾರ ಆಕಾಶವೂ ಶಾಶ್ವತವಲ್ಲ! ಸ್ಟೀಪನ್ ಹಾಕಿನ್ ನಂತವರು ಒಂದು ಸಿದ್ಧಾಂತ ಮಂಡಿಸಿದ್ದಾರೆ. ಈ ಆಕಾಶ, ಪದಾರ್ಥಗಳು, ಭೂಮಿ ಇವು ಪ್ರತ್ಯೇಕ ಅಲ್ಲ. ಇವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇದರ ಅರ್ಥ ಇಷ್ಟೇ ಈ ಜಗತ್ತು ಮೊದಲು ಇರಲಿಲ್ಲ, ಕೊನೆಗೊಮ್ಮೆ ಮರೆಯಾಗುತ್ತದೆ. ಸಮಸ್ತ ಪದಾರ್ಥಗಳೆಲ್ಲಾ ಮರೆಯಾಗುತ್ತವೆ. ಎಲ್ಲಾ ಮರೆಯಾಗಿ ಉಳಿಯುತ್ತದೆಯಲ್ಲ ಅದು ಪರಮ ಸತ್ಯ. ಅದು ದೇವರು, ಪರಮ ಆಧಾರ.
ಯಾವುದು ಎಲ್ಲಾ ಪದಾರ್ಥಗಳಿಗೆ, ಜೀವಜಗತ್ತಿಗೆ ಆಧಾರವಾಗಿದೆಯೋ ಅದು ಪರಮ ಆಧಾರ. ಅದು ಮೂಲ ಅಸ್ತಿತ್ವ, ಅದು ಇಲ್ಲದಿದ್ದರೆ ನಾನು ಇಲ್ಲ, ನೀನು ಇಲ್ಲ, ಜಗತ್ತೇ ಇಲ್ಲ.
ಒಬ್ಬ ಕವಿ ಬರೆಯುತ್ತಾನೆ:
Who flies the kite?
I, said the boy.
I, said the wind.
I, said the string...because I am a thing I fly the kite...
I, said the tail... I make it sail...
All are right ... All are wrong said the unknown voice.
ಒಂದು ಗಾಳಿಪಟ ಹೀಗೆ ಆಕಾಶದಲ್ಲಿ ಹಾರುತ್ತದೆ...
ಒಬ್ಬ ಮಹಾಶಯ ಕೇಳುತ್ತಾನೆ. ಯಾರು ಈ ಪಟವನ್ನು ಹಾರಿಸುತ್ತಿದ್ದಾರೆ.
ಹುಡುಗ ಹೇಳಿದ, ನಾನು ಹಾರಿಸುತ್ತಿದ್ದೇನೆ. ನನ್ನ ಆನಂದಕ್ಕೆ ನಾನು ಹಾರಿಸುತ್ತಿದ್ದೇನೆ.
ಗಾಳಿ ಹೇಳಿತು ನಾನು ಹಾರಿಸುತ್ತಿದ್ದೇನೆ. ನನ್ನ ಇಚ್ಛೆಯಂತೆ ಹಾರಿಸುತ್ತಿದ್ದೇನೆ.
ದಾರ ಹೇಳಿತು ನಾನು ಹಾರಿಸುತ್ತಿದ್ದೇನೆ.
ಪತಂಗದ ಬಾಲ ಹೇಳಿತು ನಾನು ಹಾರಿಸುತ್ತಿದ್ದೇನೆ. ನಾನಿಲ್ಲದಿದ್ದರೆ ಪಟ ಹಾರುತ್ತಿರಲಿಲ್ಲ.
ಆಗ ಒಂದು ವಾಣಿ ಹೇಳಿತು ಎಲ್ಲರೂ ಖರೇ ಹೇಳುತ್ತಿದ್ದಾರೆ. ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ.
ಎಷ್ಟು ಮಜ ಇದೆ.
ಹುಡಗನಿಗೆ ಹಾರಿಸಲು ಬರಲ್ಲ,
ಗಾಳಿಗೆ ಹಾರಿಸಲು ಬರಲ್ಲ,
ಬಾಲಕ್ಕೆ...
ದಾರಕ್ಕೆ...
ಹಾರಿಸಲು ಬರಲ್ಲ.
ಆದರೆ ಎಲ್ಲವನ್ನು ಹಾರಿಸುವ ಅದ್ಭುತ ಶಕ್ತಿ ಇದೆ. ಅದನ್ನು ಮರೆತು ಎಲ್ಲರೂ ಮಾತನಾಡುತ್ತಾರೆ.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು
💫💫💫💫💫💫💫💫💫
No comments:
Post a Comment