🔹ಶ್ರೀವಾಣಿ 🔹
ಬದುಕಿನ ಬಗ್ಗೆ ನಾವೆಲ್ಲಾ ಚಿಂತನೆ ನಡೆಸುತ್ತಿದ್ದೇವೆ. ನಮ್ಮ ಬದುಕು ಹೇಗಿರಬೇಕು? ಹೇಗಿರಬಾರದು? ಎಂಬದನ್ನು ತಿಳಿದು ನಡೆಯಬೇಕು.
ನೀವೆಲ್ಲಾ ಕೇಳಿರಬಹುದು ಜಾನ್ ರಸ್ಕಿನ್ ಹೆಸರನ್ನು ಈತ ಮಹಾನ್ ವಿದ್ವಾಂಸ, ತತ್ವಜ್ಞಾನಿ, ಇಂಗ್ಲೇಂಡ್ ದೇಶದವನು. 19ನೇ ಶತಮಾನದಲ್ಲಿ ಬದುಕಿ ಬಾಳಿದವನು, ಗಾಂಧೀಜಿ ಬಹಳಷ್ಟು ಮೆಚ್ಚಿಕೊಂಡಿದ್ದವರು. ಟಾಲ್ ಸ್ಟಾಯ್ ಹೇಗೋ ಹಾಗೇ ಜಾನ್ ರಸ್ಕಿನ್. ಈತನು "Un to the lost" ಎಂಬ ಶ್ರೇಷ್ಠ ಗ್ರಂಥವನ್ನು ಬರೆದಿದ್ದಾನೆ. ಗಾಂಧೀಜಿಯವರು ಆ ಗ್ರಂಥವನ್ನು ಓದಿ ಬಹಳಷ್ಟು ಪ್ರಭಾವಿತರಾಗಿದ್ದರು.
ಆತ ಬದುಕಿನ ಬಗ್ಗೆ ಹೀಗೆ ಹೇಳುತ್ತಾನೆ:
"There is no wealth, but life"
ಸಂಪತ್ತು ಎಂಬುದು ಇಲ್ಲ. ಆದರೆ ಜೀವನ ಇದೆ. ಆ ಜೀವನವೇ ಸಂಪತ್ತು.
If there is no life, there is no wealth.
ಜೀವನವಿಲ್ಲದಿದ್ದರೆ ಸಂಪತ್ತಿಲ್ಲ. ಸಂಪತ್ತಿನಿಂದಲೇ ಜೀವನ ಅಲ್ಲ. ಸಂಪತ್ತು ಬೇಡ ಅಂಥ ಅಲ್ಲ! ಆದರೆ ಅದೇ ಜೀವನ ಅಲ್ಲ. ಜೀವನ ಇಲ್ಲ ಅಂದರೆ ಸಂಪತ್ತಿಗೆ ಕಾಸಿನ ಕಿಮ್ಮತ್ತಿಲ್ಲ. ವಸ್ತುವಿಗೆ ಬೆಲೆ ಬಂದಿದೆ ಏಕೆ? ಜೀವನ ಇರೋದಿಕ್ಕೆ,
ಮನೆಗೆ ಬೆಲೆ ಬಂದಿದೆ, ಬಟ್ಟೆಗೆ ಬೆಲೆ ಬಂದಿದೆ,
ಒಡವೆಗಳಿಗೆ ಬೆಲೆ ಬಂದಿದೆ ಏಕೆ? ಬದುಕು ಇರೋದಿಕ್ಕೆ.
ಬದುಕೇ ಇಲ್ಲಾ ಅಂದರೆ ಇವುಗಳಿಗೆ ಎಲ್ಲಿದೆ ಕಿಮ್ಮತ್ತು. ಆಭರಣಕ್ಕೆ ಬೆಲೆ ಬಂದದ್ದು ಆಭರಣದಿಂದಲ್ಲ. ಮನೆಗೆ ಬೆಲೆ ಬಂದದ್ದು ಮನೆಯಿಂದಲ್ಲ! ಬದುಕಿನಿಂದಾಗಿ ಇವುಗಳಿಗೆ ಬೆಲೆ ಬಂದಿದೆ. ವಸ್ತುಗಳಿಗೆ ಬದುಕಿಲ್ಲ, ಆದರೆ ನಮ್ಮಗಳಿಗೆ ಬದುಕಿದೆ.
ದೇವರು ನನಗೊಂದು ಬದುಕು ಕೊಟ್ಟಾನಾs, ನಿಮಗೊಂದು ಬದುಕು ಕೊಟ್ಟಾನಾs, ಇಡೀ ಜೀವಜಂತುಗಳಿಗೆಲ್ಲಾ ಒಂದು ಬದುಕಿದೆ. ಆ ಬದುಕನ್ನು ಅರ್ಥಮಾಡಿಕೊಳ್ಳಬೇಕು.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು.
🔺🔺🔺🔺🔺🔺🔺🔺🔺
ಬದುಕಿನ ಬಗ್ಗೆ ನಾವೆಲ್ಲಾ ಚಿಂತನೆ ನಡೆಸುತ್ತಿದ್ದೇವೆ. ನಮ್ಮ ಬದುಕು ಹೇಗಿರಬೇಕು? ಹೇಗಿರಬಾರದು? ಎಂಬದನ್ನು ತಿಳಿದು ನಡೆಯಬೇಕು.
ನೀವೆಲ್ಲಾ ಕೇಳಿರಬಹುದು ಜಾನ್ ರಸ್ಕಿನ್ ಹೆಸರನ್ನು ಈತ ಮಹಾನ್ ವಿದ್ವಾಂಸ, ತತ್ವಜ್ಞಾನಿ, ಇಂಗ್ಲೇಂಡ್ ದೇಶದವನು. 19ನೇ ಶತಮಾನದಲ್ಲಿ ಬದುಕಿ ಬಾಳಿದವನು, ಗಾಂಧೀಜಿ ಬಹಳಷ್ಟು ಮೆಚ್ಚಿಕೊಂಡಿದ್ದವರು. ಟಾಲ್ ಸ್ಟಾಯ್ ಹೇಗೋ ಹಾಗೇ ಜಾನ್ ರಸ್ಕಿನ್. ಈತನು "Un to the lost" ಎಂಬ ಶ್ರೇಷ್ಠ ಗ್ರಂಥವನ್ನು ಬರೆದಿದ್ದಾನೆ. ಗಾಂಧೀಜಿಯವರು ಆ ಗ್ರಂಥವನ್ನು ಓದಿ ಬಹಳಷ್ಟು ಪ್ರಭಾವಿತರಾಗಿದ್ದರು.
ಆತ ಬದುಕಿನ ಬಗ್ಗೆ ಹೀಗೆ ಹೇಳುತ್ತಾನೆ:
"There is no wealth, but life"
ಸಂಪತ್ತು ಎಂಬುದು ಇಲ್ಲ. ಆದರೆ ಜೀವನ ಇದೆ. ಆ ಜೀವನವೇ ಸಂಪತ್ತು.
If there is no life, there is no wealth.
ಜೀವನವಿಲ್ಲದಿದ್ದರೆ ಸಂಪತ್ತಿಲ್ಲ. ಸಂಪತ್ತಿನಿಂದಲೇ ಜೀವನ ಅಲ್ಲ. ಸಂಪತ್ತು ಬೇಡ ಅಂಥ ಅಲ್ಲ! ಆದರೆ ಅದೇ ಜೀವನ ಅಲ್ಲ. ಜೀವನ ಇಲ್ಲ ಅಂದರೆ ಸಂಪತ್ತಿಗೆ ಕಾಸಿನ ಕಿಮ್ಮತ್ತಿಲ್ಲ. ವಸ್ತುವಿಗೆ ಬೆಲೆ ಬಂದಿದೆ ಏಕೆ? ಜೀವನ ಇರೋದಿಕ್ಕೆ,
ಮನೆಗೆ ಬೆಲೆ ಬಂದಿದೆ, ಬಟ್ಟೆಗೆ ಬೆಲೆ ಬಂದಿದೆ,
ಒಡವೆಗಳಿಗೆ ಬೆಲೆ ಬಂದಿದೆ ಏಕೆ? ಬದುಕು ಇರೋದಿಕ್ಕೆ.
ಬದುಕೇ ಇಲ್ಲಾ ಅಂದರೆ ಇವುಗಳಿಗೆ ಎಲ್ಲಿದೆ ಕಿಮ್ಮತ್ತು. ಆಭರಣಕ್ಕೆ ಬೆಲೆ ಬಂದದ್ದು ಆಭರಣದಿಂದಲ್ಲ. ಮನೆಗೆ ಬೆಲೆ ಬಂದದ್ದು ಮನೆಯಿಂದಲ್ಲ! ಬದುಕಿನಿಂದಾಗಿ ಇವುಗಳಿಗೆ ಬೆಲೆ ಬಂದಿದೆ. ವಸ್ತುಗಳಿಗೆ ಬದುಕಿಲ್ಲ, ಆದರೆ ನಮ್ಮಗಳಿಗೆ ಬದುಕಿದೆ.
ದೇವರು ನನಗೊಂದು ಬದುಕು ಕೊಟ್ಟಾನಾs, ನಿಮಗೊಂದು ಬದುಕು ಕೊಟ್ಟಾನಾs, ಇಡೀ ಜೀವಜಂತುಗಳಿಗೆಲ್ಲಾ ಒಂದು ಬದುಕಿದೆ. ಆ ಬದುಕನ್ನು ಅರ್ಥಮಾಡಿಕೊಳ್ಳಬೇಕು.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು.
🔺🔺🔺🔺🔺🔺🔺🔺🔺
No comments:
Post a Comment