✨ಕರ್ಮ ಬೇಡ, ಫಲ ಬೇಕು?✨
ನಮ್ಮ ಸಾಮಾಜಿಕ ಸಂದರ್ಭ ಬದುಕೆಲ್ಲವನ್ನೂ ಸವಾಲಿನ ರೂಪದಲ್ಲಿ ಮುಂದಿಟ್ಟಿದೆ. ನೀವು ಬದುಕಿನಲ್ಲಿ ಒಂದು ಚಿಕ್ಕ ಅವಕಾಶ ಪಡೆಯಲಿಕ್ಕೂ ಸೆಣಸಬೇಕಾದ ಪರಿಸ್ಥಿತಿ ಇದೆ. ಏನೇನೂ ಸೆಣಸಾಟವಿಲ್ಲದೇ ಜೀವನದ ಪಯಣ ನಡೆಸುವ ಅವಕಾಶ ಸಮಾಜದಲ್ಲಿ ತುಂಬಾ ಚಿಕ್ಕ ಗುಂಪಿಗೆ ಇದೆ. ಅದು ಅವರ ಪೂರ್ವಿಕರ ಜಾಣತನವೋ? ಭವಿಷ್ಯದ ಬಗೆಗಿನ ಮುನ್ನೋಟವೋ? ಅಂತೂ ಒಂದಷ್ಟು ಸುರಕ್ಷತೆ ಖಾತ್ರಿ ಇರುತ್ತದೆ. ಇಷ್ಟಿದ್ದಾಗಲೂ ಅದಕ್ಕೂ ಕೂಡಾ ತನ್ನನ್ನು ತಾನು ಸಂಭಾಳಿಸಿ ಕೊಳ್ಳಬೇಕಾದ ಇಕ್ಕಟ್ಟು ಇದ್ದೇ ಇದೆ. ಈ ಪೀಠಿಕೆ ಹಾಕಲು ಕಾರಣ ಇದೆ. ನಮ್ಮಲ್ಲಿ ಬಹಳಷ್ಟು ಜನರಿಗೆ ಎಲ್ಲವೂ ಸುಲಭವಾಗಿ ಕೈಗೆಟುಕ ಬೇಕು ಎನ್ನುವ ಧೋರಣೆ ದಿನೇ ದಿನೆ ಹೆಚ್ಚಾಗುತ್ತಿದೆ. ಓಹ್.., ಅದಕ್ಕಾ...? ಅಷ್ಟೊಂದು ಯಾಕೆ ರಿಸ್ಕ್ ತಗೋಬೇಕಾಗಿತ್ತು? ಎಂದು ಪ್ರಶ್ನಿಸುವ ಪರಿಪಾಠ ಇದೆ. ಅಷ್ಟೆಲ್ಲ ಮಾಡುವ ಬದಲು ಹೀಗೆ ಮಾಡಿದ್ರೆ ಆರಾಮಾಗಿರಬಹುದಿತ್ತು ಎನ್ನುತ್ತಾರೆ. ಯಾವುದನ್ನೂ ಪಡೆಯಲಿಕ್ಕಾದರೂ ಪರಿಶ್ರಮ ಹಾಕಬೇಕು ಎನ್ನವು ಮೂಲ ಗ್ರಹಿಕೆಯೇ ಮಾಯವಾಗುತ್ತಿದೆಯೇನೋ ಅನಿಸುತ್ತಿದೆ.
ಶ್ರೀಕೃಷ್ಣ ಭಗವದ್ಗೀತೆ ಯಲ್ಲಿ ಅರ್ಜುನನಿಗೆ ಹೇಳಿದ 'ಕರ್ಮಣ್ಯೇ ವಾದಿಕಾರಸ್ತೆ ಮಾಫಲೇಶು ಕದಾಚನ' ಎನ್ನುವ ಹೇಳಿಕೆ ಕೇಳಿರುತ್ತೀರಿ.'ನಿನ್ನ ಕರ್ಮವನ್ನು ನಿರ್ವಹಿಸು, ಫಲಾಫಲದ ನಿರೀಕ್ಷೆ ಬೇಡ' ಇದರ ತಾತ್ಪರ್ಯ. ಈಗ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಈಗ 'ಕರ್ಮ ನಿರ್ವಹಣೆ ಮಾಡದೇ ಫಲಾಫಲ ನಿರೀಕ್ಷಿಸುವ ಜನ' ಹೆಚ್ಚುತ್ತಿದ್ದಾರೆ. ಉದ್ಯೋಗ, ವ್ಯಾಪಾರ, ಆಸ್ತಿ ಸೃಜನೆ, ಅಧಿಕಾರ ಎಲ್ಲವೂ ತನ್ನ ಕೈಯಳತೆಗೆ ಬಂದು ಬೀಳಬೇಕು ಎನ್ನುವ ಮನೋಭಾವ ಬೆಳೆಯುತ್ತಿದೆ. ಈಗಲೂ ಇವನ್ನೆಲ್ಲ ಪಡೆಯುವವರು ಪರಿಶ್ರಮವಿಲ್ಲದೇ ಪಡೆಯುತ್ತಿಲ್ಲ. ಬಹುತೇಕರು ಸಾಧನೆಯ ಫಲಿತ ಮಾತ್ರ ನೋಡುತ್ತಿರುವುದರಿಂದ ಅದರ ಹಿಂದಿನ ಪರಿಶ್ರಮ ಕಾಣಿಸುವುದಿಲ್ಲ. ಯಾವುದೇ ಸಾಧನೆಯ ಹಿಂದಿನ ಪರಿಶ್ರಮಕ್ಕೆ ಹಲವು ಆಯಾಮಗಳು ಇರುತ್ತವೆ. ಬಹುತೇಕ ಅದು ಕಲ್ಲುಮುಳ್ಳಿನ ಹಾದಿಯೇ ಆಗಿರುತ್ತದೆ. ಅದೆಲ್ಲ ದಾಟಿ ಬಂದವನ ನಿರಾಳ ಭಾವದ ಸ್ಥಿತಿಯನ್ನು ಮಾತ್ರ ನಾವು ನೋಡುತ್ತಿರುತ್ತೇವೆ. ಹಾಗಾಗಿ, ಬಹಳಷ್ಟು ಜನ ಸಾಧಕ ರಾಗುವ ಹಗಲು ಕನಸು ಕಾಣುತ್ತಾರೆ. ಉನ್ನತ ಅಧಿಕಾರಿ, ಖ್ಯಾತ ನಟ, ನೃತ್ಯಪಟು, ಒಳ್ಳೆಯ ಆಡಳಿತಗಾರ ಹೀಗೆ ಏನೆಲ್ಲ ಸಾಧ್ಯವೋ ಅದನ್ನು ಕನಸುತ್ತಾರೆ. ಕನಸು ಒಳ್ಳೆಯದೇ. ಆದರೆ, ಅದನ್ನು ಕೈಗೆಟುಕಿಸಿಕೊಳ್ಳುವ ಪ್ರಾಯೋಗಿಕ ದಾರಿ ಕೂಡಾ ಅಷ್ಟೇ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ಮಾಡಬೇಕಾದ ಕೆಲಸ ಯಾವುದೇ ಇರಲಿ. ಅದು ಎಷ್ಟೇ ಕಷ್ಟವಾಗಿರಲಿ. ಅದರ ಬಗೆಗಿನ ಕಪೋಲ ಕಲ್ಪಿತ ಆಲೋಚನೆ ಬದಿಗಿಡಿ. ವಾಸ್ತವವಾಗಿ ಯಾವುದೇ ಕೆಲಸದಲ್ಲಿ ನೀವು ಕ್ರಿಯೆ ಗಿಳಿದಾಕ್ಷಣ ನಿಮ್ಮ ಹಿಡಿತಕ್ಕೆ ಸಿಗಲಾರಂಭಿಸುತ್ತದೆ. ಕನಿಷ್ಟ ಅದರ ಎಡರು, ತೊಡರು ನಿಮ್ಮ ಗಮನಕ್ಕೆ ಬರಲಾರಂಭಿಸುತ್ತವೆ. ಕ್ರಿಯೆಗಿರುವ ವಿಶೇಷ ಆಯಾಮ ಅದು. ಎಷ್ಟೋ ಬಾರಿ ನೀವು ಕ್ರಮಿಸ ಬೇಕಾದ ಹಾದಿಗಿಂತ ಅಷ್ಟು ಉದ್ದದ ದಾರಿ ಕ್ರಮಿಸಬೇಕಲ್ಲ ಎನ್ನುವ ಆಲೋಚನೆಯೇ ನಿಮ್ಮನ್ನು ದಿಗಿಲುಗೊಳಿಸುತ್ತದೆ. ಅದು ಎಷ್ಟೇ ಉದ್ದದ, ಅಗಾಧವಾದ ಹಾದಿಯಾಗಿರಲಿ ನೀವು ಕ್ರಮಿಸಿದಷ್ಟು ನಿಮ್ಮ ಹಿಡಿತಕ್ಕೆ ಸಿಗುತ್ತಿರುತ್ತದೆ. ನಿಮ್ಮನ್ನು ಗಮ್ಯಸ್ಥಾನಕ್ಕೆ ಹತ್ತಿರ ಕೊಂಡೊಯ್ಯತ್ತಿರುತ್ತದೆ. ಇದು ವಾಸ್ತವ. ಕ್ರಿಯೆಯಿಲ್ಲದೇ ಫಲಿತ ನಿರೀಕ್ಷಿಸುವುದೆಂದರೆ, ನೀರಿಗಳಿಯದೇ ದಡದಲ್ಲಿ ನಿಂತೇ ಈಜು ಕಲಿತಂತೆ ಸಂಭ್ರಮಿಸುವಷ್ಟೇ ಮೂರ್ಖತನದ್ದು. ಸಾಧಕರಾಗಬೇಕಾದವವರು ಕ್ರಿಯೆಗಳಿಯುವ ಬದ್ಧತೆ, ಜಾಣ್ಮೆ ಹೊಂದಿರಬೇಕು.
Shree basavamurty swamiji
🔹✨🔹✨🔹✨🔹✨🔹
ನಮ್ಮ ಸಾಮಾಜಿಕ ಸಂದರ್ಭ ಬದುಕೆಲ್ಲವನ್ನೂ ಸವಾಲಿನ ರೂಪದಲ್ಲಿ ಮುಂದಿಟ್ಟಿದೆ. ನೀವು ಬದುಕಿನಲ್ಲಿ ಒಂದು ಚಿಕ್ಕ ಅವಕಾಶ ಪಡೆಯಲಿಕ್ಕೂ ಸೆಣಸಬೇಕಾದ ಪರಿಸ್ಥಿತಿ ಇದೆ. ಏನೇನೂ ಸೆಣಸಾಟವಿಲ್ಲದೇ ಜೀವನದ ಪಯಣ ನಡೆಸುವ ಅವಕಾಶ ಸಮಾಜದಲ್ಲಿ ತುಂಬಾ ಚಿಕ್ಕ ಗುಂಪಿಗೆ ಇದೆ. ಅದು ಅವರ ಪೂರ್ವಿಕರ ಜಾಣತನವೋ? ಭವಿಷ್ಯದ ಬಗೆಗಿನ ಮುನ್ನೋಟವೋ? ಅಂತೂ ಒಂದಷ್ಟು ಸುರಕ್ಷತೆ ಖಾತ್ರಿ ಇರುತ್ತದೆ. ಇಷ್ಟಿದ್ದಾಗಲೂ ಅದಕ್ಕೂ ಕೂಡಾ ತನ್ನನ್ನು ತಾನು ಸಂಭಾಳಿಸಿ ಕೊಳ್ಳಬೇಕಾದ ಇಕ್ಕಟ್ಟು ಇದ್ದೇ ಇದೆ. ಈ ಪೀಠಿಕೆ ಹಾಕಲು ಕಾರಣ ಇದೆ. ನಮ್ಮಲ್ಲಿ ಬಹಳಷ್ಟು ಜನರಿಗೆ ಎಲ್ಲವೂ ಸುಲಭವಾಗಿ ಕೈಗೆಟುಕ ಬೇಕು ಎನ್ನುವ ಧೋರಣೆ ದಿನೇ ದಿನೆ ಹೆಚ್ಚಾಗುತ್ತಿದೆ. ಓಹ್.., ಅದಕ್ಕಾ...? ಅಷ್ಟೊಂದು ಯಾಕೆ ರಿಸ್ಕ್ ತಗೋಬೇಕಾಗಿತ್ತು? ಎಂದು ಪ್ರಶ್ನಿಸುವ ಪರಿಪಾಠ ಇದೆ. ಅಷ್ಟೆಲ್ಲ ಮಾಡುವ ಬದಲು ಹೀಗೆ ಮಾಡಿದ್ರೆ ಆರಾಮಾಗಿರಬಹುದಿತ್ತು ಎನ್ನುತ್ತಾರೆ. ಯಾವುದನ್ನೂ ಪಡೆಯಲಿಕ್ಕಾದರೂ ಪರಿಶ್ರಮ ಹಾಕಬೇಕು ಎನ್ನವು ಮೂಲ ಗ್ರಹಿಕೆಯೇ ಮಾಯವಾಗುತ್ತಿದೆಯೇನೋ ಅನಿಸುತ್ತಿದೆ.
ಶ್ರೀಕೃಷ್ಣ ಭಗವದ್ಗೀತೆ ಯಲ್ಲಿ ಅರ್ಜುನನಿಗೆ ಹೇಳಿದ 'ಕರ್ಮಣ್ಯೇ ವಾದಿಕಾರಸ್ತೆ ಮಾಫಲೇಶು ಕದಾಚನ' ಎನ್ನುವ ಹೇಳಿಕೆ ಕೇಳಿರುತ್ತೀರಿ.'ನಿನ್ನ ಕರ್ಮವನ್ನು ನಿರ್ವಹಿಸು, ಫಲಾಫಲದ ನಿರೀಕ್ಷೆ ಬೇಡ' ಇದರ ತಾತ್ಪರ್ಯ. ಈಗ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಈಗ 'ಕರ್ಮ ನಿರ್ವಹಣೆ ಮಾಡದೇ ಫಲಾಫಲ ನಿರೀಕ್ಷಿಸುವ ಜನ' ಹೆಚ್ಚುತ್ತಿದ್ದಾರೆ. ಉದ್ಯೋಗ, ವ್ಯಾಪಾರ, ಆಸ್ತಿ ಸೃಜನೆ, ಅಧಿಕಾರ ಎಲ್ಲವೂ ತನ್ನ ಕೈಯಳತೆಗೆ ಬಂದು ಬೀಳಬೇಕು ಎನ್ನುವ ಮನೋಭಾವ ಬೆಳೆಯುತ್ತಿದೆ. ಈಗಲೂ ಇವನ್ನೆಲ್ಲ ಪಡೆಯುವವರು ಪರಿಶ್ರಮವಿಲ್ಲದೇ ಪಡೆಯುತ್ತಿಲ್ಲ. ಬಹುತೇಕರು ಸಾಧನೆಯ ಫಲಿತ ಮಾತ್ರ ನೋಡುತ್ತಿರುವುದರಿಂದ ಅದರ ಹಿಂದಿನ ಪರಿಶ್ರಮ ಕಾಣಿಸುವುದಿಲ್ಲ. ಯಾವುದೇ ಸಾಧನೆಯ ಹಿಂದಿನ ಪರಿಶ್ರಮಕ್ಕೆ ಹಲವು ಆಯಾಮಗಳು ಇರುತ್ತವೆ. ಬಹುತೇಕ ಅದು ಕಲ್ಲುಮುಳ್ಳಿನ ಹಾದಿಯೇ ಆಗಿರುತ್ತದೆ. ಅದೆಲ್ಲ ದಾಟಿ ಬಂದವನ ನಿರಾಳ ಭಾವದ ಸ್ಥಿತಿಯನ್ನು ಮಾತ್ರ ನಾವು ನೋಡುತ್ತಿರುತ್ತೇವೆ. ಹಾಗಾಗಿ, ಬಹಳಷ್ಟು ಜನ ಸಾಧಕ ರಾಗುವ ಹಗಲು ಕನಸು ಕಾಣುತ್ತಾರೆ. ಉನ್ನತ ಅಧಿಕಾರಿ, ಖ್ಯಾತ ನಟ, ನೃತ್ಯಪಟು, ಒಳ್ಳೆಯ ಆಡಳಿತಗಾರ ಹೀಗೆ ಏನೆಲ್ಲ ಸಾಧ್ಯವೋ ಅದನ್ನು ಕನಸುತ್ತಾರೆ. ಕನಸು ಒಳ್ಳೆಯದೇ. ಆದರೆ, ಅದನ್ನು ಕೈಗೆಟುಕಿಸಿಕೊಳ್ಳುವ ಪ್ರಾಯೋಗಿಕ ದಾರಿ ಕೂಡಾ ಅಷ್ಟೇ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ಮಾಡಬೇಕಾದ ಕೆಲಸ ಯಾವುದೇ ಇರಲಿ. ಅದು ಎಷ್ಟೇ ಕಷ್ಟವಾಗಿರಲಿ. ಅದರ ಬಗೆಗಿನ ಕಪೋಲ ಕಲ್ಪಿತ ಆಲೋಚನೆ ಬದಿಗಿಡಿ. ವಾಸ್ತವವಾಗಿ ಯಾವುದೇ ಕೆಲಸದಲ್ಲಿ ನೀವು ಕ್ರಿಯೆ ಗಿಳಿದಾಕ್ಷಣ ನಿಮ್ಮ ಹಿಡಿತಕ್ಕೆ ಸಿಗಲಾರಂಭಿಸುತ್ತದೆ. ಕನಿಷ್ಟ ಅದರ ಎಡರು, ತೊಡರು ನಿಮ್ಮ ಗಮನಕ್ಕೆ ಬರಲಾರಂಭಿಸುತ್ತವೆ. ಕ್ರಿಯೆಗಿರುವ ವಿಶೇಷ ಆಯಾಮ ಅದು. ಎಷ್ಟೋ ಬಾರಿ ನೀವು ಕ್ರಮಿಸ ಬೇಕಾದ ಹಾದಿಗಿಂತ ಅಷ್ಟು ಉದ್ದದ ದಾರಿ ಕ್ರಮಿಸಬೇಕಲ್ಲ ಎನ್ನುವ ಆಲೋಚನೆಯೇ ನಿಮ್ಮನ್ನು ದಿಗಿಲುಗೊಳಿಸುತ್ತದೆ. ಅದು ಎಷ್ಟೇ ಉದ್ದದ, ಅಗಾಧವಾದ ಹಾದಿಯಾಗಿರಲಿ ನೀವು ಕ್ರಮಿಸಿದಷ್ಟು ನಿಮ್ಮ ಹಿಡಿತಕ್ಕೆ ಸಿಗುತ್ತಿರುತ್ತದೆ. ನಿಮ್ಮನ್ನು ಗಮ್ಯಸ್ಥಾನಕ್ಕೆ ಹತ್ತಿರ ಕೊಂಡೊಯ್ಯತ್ತಿರುತ್ತದೆ. ಇದು ವಾಸ್ತವ. ಕ್ರಿಯೆಯಿಲ್ಲದೇ ಫಲಿತ ನಿರೀಕ್ಷಿಸುವುದೆಂದರೆ, ನೀರಿಗಳಿಯದೇ ದಡದಲ್ಲಿ ನಿಂತೇ ಈಜು ಕಲಿತಂತೆ ಸಂಭ್ರಮಿಸುವಷ್ಟೇ ಮೂರ್ಖತನದ್ದು. ಸಾಧಕರಾಗಬೇಕಾದವವರು ಕ್ರಿಯೆಗಳಿಯುವ ಬದ್ಧತೆ, ಜಾಣ್ಮೆ ಹೊಂದಿರಬೇಕು.
Shree basavamurty swamiji
🔹✨🔹✨🔹✨🔹✨🔹
No comments:
Post a Comment