ಜ್ಞಾನದೀವಿಗೆ:
✨ ಮರಣ ಗೆದ್ದ ಮಹಾತ್ಮರು✨
ಯಾರೇ ಇರಲಿ ಎಲ್ಲರ ಬದುಕಿನಲ್ಲಿ ರೋಗ, ಮುಪ್ಪು, ಮರಣ, ಬಡತನ ಇವು ನಾಲ್ಕು ಇದ್ದದ್ದೆ ! ರೋಗ ಬರಬಾರದೆಂದು ಆಸ್ಪತ್ರೆಯಲ್ಲಿದ್ದರೆ ವೈದ್ಯರಿಗೇ ರೋಗ ಬಂದರೆ ಏನು ಮಾಡುವುದು? ಮುಪ್ಪು ಬರಬಾರದೆಂದು ಕೆಲವರು ಮನೆ ಬಿಟ್ಟು ಹೊರಗೆ ಬರುವುದಿಲ್ಲ. ಆಶ್ಚರ್ಯವೆಂದರೆ ಎಲ್ಲರಿಗಿಂತ ಮೊದಲು ಮುಪ್ಪು ಬರುವುದು ಅವರಿಗೇ! ಬಡತನ ಬಂದೀತೆಂದು ಉಣ್ಣುವುದು-ತಿನ್ನುವುದು ಬಿಟ್ಟರೆ ಅನಾರೋಗ್ಯವಾಗಿ ಇರುವುದನ್ನೆಲ್ಲ ಆಸ್ಪತ್ರೆಗೆ ಹಾಕಿ ಎಲ್ಲರಿಗಿಂತ ಹೆಚ್ಚು ಬಡವರಾಗಬೇಕಾದೀತು. ಮರಣಕ್ಕೆ ಹೆದರಿದವರಂತೂ ಎಲ್ಲರಿಗಿಂತ ಮೊದಲೇ ಇಹಲೋಕ ಯಾತ್ರೆ ಮುಗಿಸುತ್ತಾರೆ! ಜಾಣರಾದವರು ಮುಪ್ಪು, ಮರಣ, ರೋಗ, ರುಜಿ ಇವು ನಮಗಲ್ಲ , ದೇಹಕ್ಕೆ. ನಾನು ಅಮರಾತ್ಮನೆೆಂದು ಸದಾ ನಿಶ್ಚಿಂತರಾಗಿರುತ್ತಾರೆ. ಬಡತನ ಸಿರಿತನ ಯಾವುವೂ ಸ್ಥಿರವಲ್ಲವೆಂದು ಅವರು ಸದಾ ಸಂತೃಪ್ತರಾಗಿರುತ್ತಾರೆ. ಈ ಅಮರ ಆತ್ಮನ ಅರಿವುಳ್ಳವರೇ ಮರಣ ಗೆದ್ದ ಮಹಾತ್ಮರು.
ನಿರೂಪಣೆ: ಡಾ.ಶ್ರದ್ಧಾನಂದ ಶ್ರೀ
ಗುರುದೇವಾಶ್ರಮ, ಕಾಗವಾಡ, ಸದಲಗಾ
#ಶ್ರೀವಾಣಿ
🔶ವಿಸ್ಮರಣೆ🔶
ಒಮ್ಮೆ ವಿಶ್ವಾಮಿತ್ರನಿಗೆ ಬ್ರಹ್ಮರ್ಷಿ ಎಂಬ ಪದವಿಯನ್ನು ಪಡೆಯುವ ಪ್ರಬಲವಾದ ಇಚ್ಛೆಯಾಯಿತು. ಆತನಿಗೆ ಆ ಪದವಿಯನ್ನು ವಶಿಷ್ಠ ಮಹರ್ಷಿಗಳು ಕೊಡಬೇಕಾಗಿತ್ತು. ಆದರೆ ವಶಿಷ್ಠರು ರಾಜರ್ಷಿಯಾದ ವಿಶ್ವಾಮಿತ್ರನಿಗೆ ಬ್ರಹ್ಮರ್ಷಿ ಪದವಿ ಕೊಡಲು ಒಪ್ಪಲಿಲ್ಲ. ಅದರಿಂದ ಕೋಪಗೊಂಡ ವಿಶ್ವಾಮಿತ್ರನು ವಶಿಷ್ಠರ ಮಕ್ಕಳನ್ನು ಕೊಂದು ಹಾಕಿದ. 'ಅಪುತ್ರಸ್ಯ ಗತಿರ್ನಾಸ್ತಿ' ಎಂದರೆ 'ಮಕ್ಕಳಿಲ್ಲದವರಿಗೆ ಮೋಕ್ಷವಿಲ್ಲ-ಸದ್ಗತಿಯಿಲ್ಲ!' ಈ ಮಾತನ್ನು ನೆನೆದು ವಶಿಷ್ಠನಿಗೆ ಅಪಾರ ದುಃಖವಾಯಿತು. ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಾದ! 'ತಾವು ನಿರ್ಗುಣ-ನಿರ್ವಿಶೇಷನಾದ ಬ್ರಹ್ಮ!' ಎಂಬುದನ್ನು ವಶಿಷ್ಠ ಮಹರ್ಷಿಗಳು ಅದು ಹೇಗೆ ಮರೆತರೋ ಏನೋ! ಸ್ವ ಸ್ವರೂಪದ ವಿಷ್ಮರಣೆಯೇ ಸಕಲ ದುಃಖಕ್ಕೆ ಕಾರಣ!
ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ
✨ ಮರಣ ಗೆದ್ದ ಮಹಾತ್ಮರು✨
ಯಾರೇ ಇರಲಿ ಎಲ್ಲರ ಬದುಕಿನಲ್ಲಿ ರೋಗ, ಮುಪ್ಪು, ಮರಣ, ಬಡತನ ಇವು ನಾಲ್ಕು ಇದ್ದದ್ದೆ ! ರೋಗ ಬರಬಾರದೆಂದು ಆಸ್ಪತ್ರೆಯಲ್ಲಿದ್ದರೆ ವೈದ್ಯರಿಗೇ ರೋಗ ಬಂದರೆ ಏನು ಮಾಡುವುದು? ಮುಪ್ಪು ಬರಬಾರದೆಂದು ಕೆಲವರು ಮನೆ ಬಿಟ್ಟು ಹೊರಗೆ ಬರುವುದಿಲ್ಲ. ಆಶ್ಚರ್ಯವೆಂದರೆ ಎಲ್ಲರಿಗಿಂತ ಮೊದಲು ಮುಪ್ಪು ಬರುವುದು ಅವರಿಗೇ! ಬಡತನ ಬಂದೀತೆಂದು ಉಣ್ಣುವುದು-ತಿನ್ನುವುದು ಬಿಟ್ಟರೆ ಅನಾರೋಗ್ಯವಾಗಿ ಇರುವುದನ್ನೆಲ್ಲ ಆಸ್ಪತ್ರೆಗೆ ಹಾಕಿ ಎಲ್ಲರಿಗಿಂತ ಹೆಚ್ಚು ಬಡವರಾಗಬೇಕಾದೀತು. ಮರಣಕ್ಕೆ ಹೆದರಿದವರಂತೂ ಎಲ್ಲರಿಗಿಂತ ಮೊದಲೇ ಇಹಲೋಕ ಯಾತ್ರೆ ಮುಗಿಸುತ್ತಾರೆ! ಜಾಣರಾದವರು ಮುಪ್ಪು, ಮರಣ, ರೋಗ, ರುಜಿ ಇವು ನಮಗಲ್ಲ , ದೇಹಕ್ಕೆ. ನಾನು ಅಮರಾತ್ಮನೆೆಂದು ಸದಾ ನಿಶ್ಚಿಂತರಾಗಿರುತ್ತಾರೆ. ಬಡತನ ಸಿರಿತನ ಯಾವುವೂ ಸ್ಥಿರವಲ್ಲವೆಂದು ಅವರು ಸದಾ ಸಂತೃಪ್ತರಾಗಿರುತ್ತಾರೆ. ಈ ಅಮರ ಆತ್ಮನ ಅರಿವುಳ್ಳವರೇ ಮರಣ ಗೆದ್ದ ಮಹಾತ್ಮರು.
ನಿರೂಪಣೆ: ಡಾ.ಶ್ರದ್ಧಾನಂದ ಶ್ರೀ
ಗುರುದೇವಾಶ್ರಮ, ಕಾಗವಾಡ, ಸದಲಗಾ
#ಶ್ರೀವಾಣಿ
🔶ವಿಸ್ಮರಣೆ🔶
ಒಮ್ಮೆ ವಿಶ್ವಾಮಿತ್ರನಿಗೆ ಬ್ರಹ್ಮರ್ಷಿ ಎಂಬ ಪದವಿಯನ್ನು ಪಡೆಯುವ ಪ್ರಬಲವಾದ ಇಚ್ಛೆಯಾಯಿತು. ಆತನಿಗೆ ಆ ಪದವಿಯನ್ನು ವಶಿಷ್ಠ ಮಹರ್ಷಿಗಳು ಕೊಡಬೇಕಾಗಿತ್ತು. ಆದರೆ ವಶಿಷ್ಠರು ರಾಜರ್ಷಿಯಾದ ವಿಶ್ವಾಮಿತ್ರನಿಗೆ ಬ್ರಹ್ಮರ್ಷಿ ಪದವಿ ಕೊಡಲು ಒಪ್ಪಲಿಲ್ಲ. ಅದರಿಂದ ಕೋಪಗೊಂಡ ವಿಶ್ವಾಮಿತ್ರನು ವಶಿಷ್ಠರ ಮಕ್ಕಳನ್ನು ಕೊಂದು ಹಾಕಿದ. 'ಅಪುತ್ರಸ್ಯ ಗತಿರ್ನಾಸ್ತಿ' ಎಂದರೆ 'ಮಕ್ಕಳಿಲ್ಲದವರಿಗೆ ಮೋಕ್ಷವಿಲ್ಲ-ಸದ್ಗತಿಯಿಲ್ಲ!' ಈ ಮಾತನ್ನು ನೆನೆದು ವಶಿಷ್ಠನಿಗೆ ಅಪಾರ ದುಃಖವಾಯಿತು. ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಾದ! 'ತಾವು ನಿರ್ಗುಣ-ನಿರ್ವಿಶೇಷನಾದ ಬ್ರಹ್ಮ!' ಎಂಬುದನ್ನು ವಶಿಷ್ಠ ಮಹರ್ಷಿಗಳು ಅದು ಹೇಗೆ ಮರೆತರೋ ಏನೋ! ಸ್ವ ಸ್ವರೂಪದ ವಿಷ್ಮರಣೆಯೇ ಸಕಲ ದುಃಖಕ್ಕೆ ಕಾರಣ!
ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ
No comments:
Post a Comment