ಬೇಡಿಕೆ ನೋಡಿ ಭರವಸೆ
ಹೋದಲ್ಲಿ ಬಂದಲ್ಲಿ ಪ್ರಜಾ ಜನರ ತಾತ್ಕಾಲಿಕ ಮೆಚ್ಚುಗೆ ಪಡೆಯುವುದಕ್ಕಾಗಿ ಮತ್ತು ಚಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕಾಗಿ ರಾಜಕೀಯ ಧುರೀಣರು ಅವರ ಬೇಡಿಕೆಗಳ ಅಗತ್ಯಾನಗತ್ಯಗಳನ್ನು ಮತ್ತು ಈಡೇರಿಕೆಯ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸದೆ ಪೊಳ್ಳು ಭರವಸೆಗಳನ್ನು ನೀಡುತ್ತಾ ಹೋಗುವುದು ತೀರಾ ಸಾಮಾನ್ಯ. ಚುನಾವಣೆ ಬಂತೆಂದರೆ ಕೇಳುವುದೇ ಬೇಡ. ಭರವಸೆಗಳ ಮಹಾಪೂರವೇ ಹರಿಯತೊಡಗುತ್ತದೆ.
ಆದರೆ ಎಲ್ಲಾ ರಾಜಕೀಯ ಮುಂದಾಳುಗಳೂ ಹೀಗಿರುದಿಲ್ಲ. ಅವರು ಪರಿಸ್ಥಿತಿಯ ಸೂಕ್ಷ್ಮವಾದ ಅವಲೋಕನ ಮಾಡಿಯೇ ಆಶ್ವಾಸನೆ ನೀಡುತ್ತಾರೆ. ಒಂದು ವೇಳೆ ಜನರ ಬೇಡಿಕೆಯು ಸಮಂಜಸವಲ್ಲದೆ ಹೋದರೆ ಅದಕ್ಕೆ ಸೂಕ್ತವಾದ ಕಾರಣವನ್ನು ಕೊಡುತ್ತಾರೆ. ಸಜ್ಜನ, ಪ್ರಾಮಾಣಿಕ ನಾಯಕರೆಂದು ಹೆಸರು ಪಡೆದ ಲಾಲ್ಬಹದ್ದೂರ್ ಶಾಸ್ತ್ರಿಯವರು ಇದಕ್ಕೆ ಒಳ್ಳೆಯ ನಿದರ್ಶನ.
ಆದರೆ ಎಲ್ಲಾ ರಾಜಕೀಯ ಮುಂದಾಳುಗಳೂ ಹೀಗಿರುದಿಲ್ಲ. ಅವರು ಪರಿಸ್ಥಿತಿಯ ಸೂಕ್ಷ್ಮವಾದ ಅವಲೋಕನ ಮಾಡಿಯೇ ಆಶ್ವಾಸನೆ ನೀಡುತ್ತಾರೆ. ಒಂದು ವೇಳೆ ಜನರ ಬೇಡಿಕೆಯು ಸಮಂಜಸವಲ್ಲದೆ ಹೋದರೆ ಅದಕ್ಕೆ ಸೂಕ್ತವಾದ ಕಾರಣವನ್ನು ಕೊಡುತ್ತಾರೆ. ಸಜ್ಜನ, ಪ್ರಾಮಾಣಿಕ ನಾಯಕರೆಂದು ಹೆಸರು ಪಡೆದ ಲಾಲ್ಬಹದ್ದೂರ್ ಶಾಸ್ತ್ರಿಯವರು ಇದಕ್ಕೆ ಒಳ್ಳೆಯ ನಿದರ್ಶನ.
ಪ್ರಥಮ ಮಹಾಚುನಾವಣೆಯ ಘೋಷಣೆ ಆಗಿತ್ತು. ಅಷ್ಟು ಹೊತ್ತಿಗಾಗಲೇ ಅಧಿಕಾರ ಪ್ರಾಪ್ತಿಗಾಗಿ ಕಾಂಗ್ರೆಸ್ ನಾಯಕರ ನಡುವೆ ಕಚ್ಚಾಟ ಪ್ರಾರಂಭಗೊಂಡಿತ್ತು. ಕೆಲವರು ಇದರಿಂದ ನೊಂದು ಸಮಾಜವಾದೀ ಪಕ್ಷ ಸೇರಿದ್ದರು. ಲಾಲ್ಬಹಾದ್ದೂರ್ ಶಾಸ್ತ್ರಿಯವರು ಚುನಾವಣಾ ಪ್ರಚಾರ ಪ್ರವಾಸ ಮಾಡುತ್ತಾ ಜಸರಾ ಎಂಬ ಪಟ್ಟಣಕ್ಕೆ ಬಂದರು. ಶಾಸ್ತ್ರಿಯವರನ್ನು ಮುತ್ತಿಗೆ ಹಾಕಿದ ಕೆಲವರು ‘‘ಶಾಸ್ತ್ರೀಜಿ, ಬೇಸರಿಸಬೇಡಿ. ಅನ್ಯಮಾರ್ಗವಿಲ್ಲದೆ ನಾವು ಸಮಾಜವಾದಿ ಪಕ್ಷಕ್ಕೆ ಸೇರಿದ್ದೇವೆ. ನಮ್ಮ ಒಂದು ಸಣ್ಣ ಬೇಡಿಕೆ ಇದೆ. ಅದನ್ನು ಈಡೇರಿಸಲು ನೀವು ತಯಾರಿದ್ದರೆ ನಾವು ನಿಮಗೆ ಚುನಾವಣೆ ವೇಳೆ ಬೆಂಬಲ ನೀಡುತ್ತೇವೆ’’ ಎಂದರು.
‘‘ನಾವಿರುವುದೇ ಜನಸೇವೆಗೆ. ದಯವಿಟ್ಟು ನಿಮ್ಮ ಬೇಡಿಕೆ ತಿಳಿಸಿ. ತದನಂತರವೇ ನಾನು ಉತ್ತರ ಹೇಳಬಲ್ಲೆ’’ ಎಂದು ಶಾಸ್ತ್ರಿಯವರು ಹೇಳಿದರು. ಆಗ ಅವರನ್ನು ಸುತ್ತುವರಿದ ಜನರು ‘‘ನಮ್ಮ ಜಸರಾ ನಿಲ್ದಾಣದಲ್ಲಿ ಮೇಲ್ಗಾಡಿ ನಿಲ್ಲುವಂತಾಗಬೇಕು. ಇದೇ ನಮ್ಮ ಬೇಡಿಕೆ’’ ಎಂದರು.
ಶಾಸ್ತ್ರಿಯವರ ಜಾಗದಲ್ಲಿ ಬೇರೆ ಯಾವ ಮುಂದಾಳು ಇದ್ದರೂ ಕೂಡಲೇ ಜನರ ಬೇಡಿಕೆಗೆ ಒಪ್ಪಿಗೆ ಸೂಚಿಸುತ್ತಿದ್ದರು. ಏಕೆಂದರೆ ಮಹತ್ತ್ವದ ಚುನಾವಣೆಯಾದ್ದರಿಂದ ಜನತೆಯ ಬೆಂಬಲ ಅತ್ಯಗತ್ಯವಾಗಿತ್ತು. ಹೀಗಿದ್ದರೂ ಶಾಸ್ತ್ರೀಜಿ ಪ್ರಾಮಾಣಿಕತೆಯ ಹಾದಿ ಹಿಡಿದರು.
‘‘ನಾವಿರುವುದೇ ಜನಸೇವೆಗೆ. ದಯವಿಟ್ಟು ನಿಮ್ಮ ಬೇಡಿಕೆ ತಿಳಿಸಿ. ತದನಂತರವೇ ನಾನು ಉತ್ತರ ಹೇಳಬಲ್ಲೆ’’ ಎಂದು ಶಾಸ್ತ್ರಿಯವರು ಹೇಳಿದರು. ಆಗ ಅವರನ್ನು ಸುತ್ತುವರಿದ ಜನರು ‘‘ನಮ್ಮ ಜಸರಾ ನಿಲ್ದಾಣದಲ್ಲಿ ಮೇಲ್ಗಾಡಿ ನಿಲ್ಲುವಂತಾಗಬೇಕು. ಇದೇ ನಮ್ಮ ಬೇಡಿಕೆ’’ ಎಂದರು.
ಶಾಸ್ತ್ರಿಯವರ ಜಾಗದಲ್ಲಿ ಬೇರೆ ಯಾವ ಮುಂದಾಳು ಇದ್ದರೂ ಕೂಡಲೇ ಜನರ ಬೇಡಿಕೆಗೆ ಒಪ್ಪಿಗೆ ಸೂಚಿಸುತ್ತಿದ್ದರು. ಏಕೆಂದರೆ ಮಹತ್ತ್ವದ ಚುನಾವಣೆಯಾದ್ದರಿಂದ ಜನತೆಯ ಬೆಂಬಲ ಅತ್ಯಗತ್ಯವಾಗಿತ್ತು. ಹೀಗಿದ್ದರೂ ಶಾಸ್ತ್ರೀಜಿ ಪ್ರಾಮಾಣಿಕತೆಯ ಹಾದಿ ಹಿಡಿದರು.
‘‘ಮಿತ್ರರೇ, ಸಂದರ್ಭ ಬಂದಾಗ ಇಂತಹ ಒತ್ತಡ ಹಾಕುವುದು ಸಹಜವೇ. ಆದರೆ ನಿಮ್ಮ ಹಾಗೆ ಉಳಿದ ಊರುಗಳಲ್ಲೂ ಜನ ಇಂತಹದೇ ಬೇಡಿಕೆ ಮುಂದಿಡಬಹುದು. ಪ್ರತಿ ನಿಲ್ದಾಣದಲ್ಲೂ ನಿಲ್ಲಿಸುವ ನಿರ್ಣಯ ತೆಗೆದುಕೊಂಡರೆ ಮೇಲ್ಗಾಡಿಗೂ ಪ್ಯಾಸೆಂಜರ್ ಗಾಡಿಗೂ ವ್ಯತ್ಯಾಸವೇ ಉಳಿಯಲಾರದು. ದಯವಿಟ್ಟು ಅರ್ಥ ಮಾಡಿಕೊಳ್ಳಿ.’’ ಶಾಸ್ತ್ರಿಯವರ ಅಪ್ಪಟ ಪ್ರಾಮಾಣಿಕತೆ ಜನರಿಗೆ ಹಿಡಿಸಿತು. ಅವರು ತಮ್ಮ ಬೇಡಿಕೆಯನ್ನು ಹಿಂತೆಗೆದುಕೊಂಡು ಶಾಸ್ತ್ರಿಯವರಿಗೆ ಮತ ನೀಡಲು ನಿರ್ಧರಿಸಿದರು.
§
ಅರ್ತಿಕಜೆ
No comments:
Post a Comment