ಬೆನ್ನು ನೋವು
ಡಾ. ವೆಂಕಟ್ರಮಣ ಹೆಗಡೆ
ಇಂದಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಬೆನ್ನು ನೋವು, ಸೊಂಟ ನೋವು ಕಂಡುಬರುತ್ತದೆ. ಹೆಚ್ಚು ಹೊತ್ತು ಒಂದೇ ತೆರನಾಗಿ ಕುಳಿತುಕೊಳ್ಳುವುದು, ಒಂದೇ ರೀತಿಯಾದಂತಹ ಕೆಲಸಮಾಡುತ್ತಿರುವುದು ಇದಕ್ಕೆ ಸಾಮಾನ್ಯ ಕಾರಣ. ಬೆನ್ನಿನ ಮಾಂಸಖಂಡಗಳಿಗೆ ಸರಿಯಾಗಿ ಎಲ್ಲ ರೀತಿಯಲ್ಲಿ ಕೆಲಸವಿಲ್ಲದೇ ಒಂದೇ ಕಡೆ ಹೆಚ್ಚು ಒತ್ತಡಯುತವಾಗಿರುವದು. ಮುಂದೆ ಮಾತ್ರ ಬಗ್ಗಿ ಕಾರ್ಯ ನಿರ್ವಹಿಸುವುದು, ಒಂದು ಪಕ್ಕಕ್ಕೆ ಮಾತ್ರ ತಿರುಗಿ ಕೆಲಸ ಮಾಡುವುದು, ಇಂತಹವುಗಳಿಂದ ಬೆನ್ನು ನೋವು ಬರುವಂತಹ ಪ್ರಮೇಯಗಳು ಅಧಿಕ.
ಅದಕ್ಕಾಗಿ ಮಾಂಸಖಂಡಗಳನ್ನು ಸ್ವಸ್ಥವಾಗಿಸಿಕೊಳ್ಳುವುದು ಅಗತ್ಯ. ಇದಕ್ಕೆ ವ್ಯಾಯಾಮ ಅತ್ಯಂತ ಪರಿಣಾಮಕಾರಿ ಪರಿಹಾರ. ತಜ್ಞ ಯೋಗ ವೈದ್ಯರ ಸಲಹೆ ಪಡೆದು ಬೆನ್ನುನೋವಿಗಾಗಿ ಸೂಕ್ತ ವ್ಯಾಯಾಮ ಹಾಗೂ ಯೋಗವನ್ನು ಪ್ರತಿನಿತ್ಯ ಮಾಡುತ್ತ ಬಂದಲ್ಲಿ ಬೆನ್ನಿನ ಮಾಂಸಖಂಡಗಳಿಗೆ ರಕ್ತಸಂಚಾರ ಸರಿಯಾಗಿ ನೋವು ಕಡಿಮೆಯಾಗಲು ಸಹಾಯಕವಾಗುತ್ತದೆ.
ಜೊತೆಯಲ್ಲಿ ಪ್ರಕೃತಿ ಚಿಕಿತ್ಸೆಗಳು ಬೆನ್ನುನೋವನ್ನು ಕಡಿಮೆ ಮಾಡಲು ಸಹಕಾರಿ. ನಿಸರ್ಗ ಚಿಕಿತ್ಸೆಗಳಾದ ಅಕ್ಯುಪ್ರೆಷರ್, ಕಟಿಸ್ನಾನ, ಬೆನ್ನು ಹುರಿಸ್ನಾನ, ಸ್ಪೈನಲ್ ಸ್ನಾನ, ಉಗಿ ಸ್ನಾನ, ಅಂಡರ್ ವಾಟರ್ ಮಸಾಜ್, ಹೈಡ್ರೋ ಥೆರಪಿ, ಆಯಸ್ಕಾಂತ ಚಿಕತ್ಸೆ, ಫಿಸಿಯೊಥೆರಪಿ ಇಲೆಕ್ಟ್ರೋಥೆರಪಿ, ಬೆಳಕಿನ ಚಿಕಿತ್ಸೆ, ಸೂಜಿ ಚಿಕಿತ್ಸೆ, ಮುಂತಾದ ಚಿಕಿತ್ಸೆಗಳು ಬೆನ್ನುನೋವು ಕಡಿಮೆಯಾಗಲು ಸಹಾಯಕವಾಗುವುದು.
ಕ್ಯಾಲ್ಸಿಯಂಯುಕ್ತ ಆಹಾರ ಸೇವನೆ ಅತ್ಯಗತ್ಯ. ಹಾಲು, ಹಸಿರುಸೊಪ್ಪುಗಳು, ತರಕಾರಿಗಳು, ನಟ್ಸ್ ಗಳು, ಹಣ್ಣುಗಳನ್ನು ಹೆಚ್ಚು ಸೇವಿಸಬೇಕು. ಜೀವಸತ್ವ ವಿಟಮಿನ್ ಡಿ ಸಾಕಷ್ಟು ಸಿಗಲು ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ 30 ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ಮೈ ಒಡ್ಡುವುದೊಳಿತು. ಇದರಿಂದಾಗಿ ವಿಟಮಿನ್ ಡಿ ಸಹಾಯದಿಂದ ದೇಹದಲ್ಲೆಲ್ಲ ಕ್ಯಾಲ್ಸಿಯಂ ಅಂಶ ಸರಿಯಾಗಿ ಸಂಚಾರವಾಗಿ ಮಾಂಸಖಂಡಗಳು ಸದೃಢವಾಗಿ ನೋವು ನಿವಾರಣೆಯಾಗುತ್ತದೆ. ನೋವಿರುವ ಸ್ಥಳಕ್ಕೆ, ಎಣ್ಣೆ ಹಾಕಿ ಮಾಲಿಶ್ ಮಾಡಿದಾಗ ಕೆಲವೊಮ್ಮೆ ನೋವು ಹೆಚ್ಚಾಗಬಹುದು. ಬದಲಿಗೆ ನೋವು ನಿವಾರಣೆಯ ಯಾವುದೇ ತೈಲವನ್ನು ಹಚ್ಚಿ ಬಿಸಿನೀರಿನ ಬ್ಯಾಗ್ನ್ನು ಅದರ ಮೇಲಿಡುವುದು.
ಆದ್ದರಿಂದ ವ್ಯಾಯಾಮ, ಚಿಕಿತ್ಸೆ, ಆಹಾರ ಈ ಮೂರರ ಮಿಳಿತದಿಂದಾಗಿ ನೋವಿರುವ ಭಾಗಕ್ಕೆ ರಕ್ತಸಂಚಾರ ಸರಿಯಾಗಿ ಆಗಿ ನೋವು ಕಡಿಮೆಯಾಗಲು ಸಹಾಯಕವಾಗುವುದು. ಜೊತೆಯಲ್ಲಿ ಪ್ರಕೃತಿದತ್ತವಾದ ಈ ವ್ಯವಸ್ಥೆಯಿಂದಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಸುಲಭವಾಗಿ ನೋವನ್ನು ಕಡಿಮೆಮಾಡಿಕೊಳ್ಳಬಹುದು.
ಕೊನೇ ಹನಿ
ಒಂದು ಲೋಟ ಜೀರಿಗೆ ಕಷಾಯಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಪಿತ್ತದೋಷ ನಿವಾರಣೆಯಾಗುತ್ತದೆ.
ಡಾ. ವೆಂಕಟ್ರಮಣ ಹೆಗಡೆ
ಇಂದಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಬೆನ್ನು ನೋವು, ಸೊಂಟ ನೋವು ಕಂಡುಬರುತ್ತದೆ. ಹೆಚ್ಚು ಹೊತ್ತು ಒಂದೇ ತೆರನಾಗಿ ಕುಳಿತುಕೊಳ್ಳುವುದು, ಒಂದೇ ರೀತಿಯಾದಂತಹ ಕೆಲಸಮಾಡುತ್ತಿರುವುದು ಇದಕ್ಕೆ ಸಾಮಾನ್ಯ ಕಾರಣ. ಬೆನ್ನಿನ ಮಾಂಸಖಂಡಗಳಿಗೆ ಸರಿಯಾಗಿ ಎಲ್ಲ ರೀತಿಯಲ್ಲಿ ಕೆಲಸವಿಲ್ಲದೇ ಒಂದೇ ಕಡೆ ಹೆಚ್ಚು ಒತ್ತಡಯುತವಾಗಿರುವದು. ಮುಂದೆ ಮಾತ್ರ ಬಗ್ಗಿ ಕಾರ್ಯ ನಿರ್ವಹಿಸುವುದು, ಒಂದು ಪಕ್ಕಕ್ಕೆ ಮಾತ್ರ ತಿರುಗಿ ಕೆಲಸ ಮಾಡುವುದು, ಇಂತಹವುಗಳಿಂದ ಬೆನ್ನು ನೋವು ಬರುವಂತಹ ಪ್ರಮೇಯಗಳು ಅಧಿಕ.
ಅದಕ್ಕಾಗಿ ಮಾಂಸಖಂಡಗಳನ್ನು ಸ್ವಸ್ಥವಾಗಿಸಿಕೊಳ್ಳುವುದು ಅಗತ್ಯ. ಇದಕ್ಕೆ ವ್ಯಾಯಾಮ ಅತ್ಯಂತ ಪರಿಣಾಮಕಾರಿ ಪರಿಹಾರ. ತಜ್ಞ ಯೋಗ ವೈದ್ಯರ ಸಲಹೆ ಪಡೆದು ಬೆನ್ನುನೋವಿಗಾಗಿ ಸೂಕ್ತ ವ್ಯಾಯಾಮ ಹಾಗೂ ಯೋಗವನ್ನು ಪ್ರತಿನಿತ್ಯ ಮಾಡುತ್ತ ಬಂದಲ್ಲಿ ಬೆನ್ನಿನ ಮಾಂಸಖಂಡಗಳಿಗೆ ರಕ್ತಸಂಚಾರ ಸರಿಯಾಗಿ ನೋವು ಕಡಿಮೆಯಾಗಲು ಸಹಾಯಕವಾಗುತ್ತದೆ.
ಜೊತೆಯಲ್ಲಿ ಪ್ರಕೃತಿ ಚಿಕಿತ್ಸೆಗಳು ಬೆನ್ನುನೋವನ್ನು ಕಡಿಮೆ ಮಾಡಲು ಸಹಕಾರಿ. ನಿಸರ್ಗ ಚಿಕಿತ್ಸೆಗಳಾದ ಅಕ್ಯುಪ್ರೆಷರ್, ಕಟಿಸ್ನಾನ, ಬೆನ್ನು ಹುರಿಸ್ನಾನ, ಸ್ಪೈನಲ್ ಸ್ನಾನ, ಉಗಿ ಸ್ನಾನ, ಅಂಡರ್ ವಾಟರ್ ಮಸಾಜ್, ಹೈಡ್ರೋ ಥೆರಪಿ, ಆಯಸ್ಕಾಂತ ಚಿಕತ್ಸೆ, ಫಿಸಿಯೊಥೆರಪಿ ಇಲೆಕ್ಟ್ರೋಥೆರಪಿ, ಬೆಳಕಿನ ಚಿಕಿತ್ಸೆ, ಸೂಜಿ ಚಿಕಿತ್ಸೆ, ಮುಂತಾದ ಚಿಕಿತ್ಸೆಗಳು ಬೆನ್ನುನೋವು ಕಡಿಮೆಯಾಗಲು ಸಹಾಯಕವಾಗುವುದು.
ಕ್ಯಾಲ್ಸಿಯಂಯುಕ್ತ ಆಹಾರ ಸೇವನೆ ಅತ್ಯಗತ್ಯ. ಹಾಲು, ಹಸಿರುಸೊಪ್ಪುಗಳು, ತರಕಾರಿಗಳು, ನಟ್ಸ್ ಗಳು, ಹಣ್ಣುಗಳನ್ನು ಹೆಚ್ಚು ಸೇವಿಸಬೇಕು. ಜೀವಸತ್ವ ವಿಟಮಿನ್ ಡಿ ಸಾಕಷ್ಟು ಸಿಗಲು ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ 30 ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ಮೈ ಒಡ್ಡುವುದೊಳಿತು. ಇದರಿಂದಾಗಿ ವಿಟಮಿನ್ ಡಿ ಸಹಾಯದಿಂದ ದೇಹದಲ್ಲೆಲ್ಲ ಕ್ಯಾಲ್ಸಿಯಂ ಅಂಶ ಸರಿಯಾಗಿ ಸಂಚಾರವಾಗಿ ಮಾಂಸಖಂಡಗಳು ಸದೃಢವಾಗಿ ನೋವು ನಿವಾರಣೆಯಾಗುತ್ತದೆ. ನೋವಿರುವ ಸ್ಥಳಕ್ಕೆ, ಎಣ್ಣೆ ಹಾಕಿ ಮಾಲಿಶ್ ಮಾಡಿದಾಗ ಕೆಲವೊಮ್ಮೆ ನೋವು ಹೆಚ್ಚಾಗಬಹುದು. ಬದಲಿಗೆ ನೋವು ನಿವಾರಣೆಯ ಯಾವುದೇ ತೈಲವನ್ನು ಹಚ್ಚಿ ಬಿಸಿನೀರಿನ ಬ್ಯಾಗ್ನ್ನು ಅದರ ಮೇಲಿಡುವುದು.
ಆದ್ದರಿಂದ ವ್ಯಾಯಾಮ, ಚಿಕಿತ್ಸೆ, ಆಹಾರ ಈ ಮೂರರ ಮಿಳಿತದಿಂದಾಗಿ ನೋವಿರುವ ಭಾಗಕ್ಕೆ ರಕ್ತಸಂಚಾರ ಸರಿಯಾಗಿ ಆಗಿ ನೋವು ಕಡಿಮೆಯಾಗಲು ಸಹಾಯಕವಾಗುವುದು. ಜೊತೆಯಲ್ಲಿ ಪ್ರಕೃತಿದತ್ತವಾದ ಈ ವ್ಯವಸ್ಥೆಯಿಂದಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಸುಲಭವಾಗಿ ನೋವನ್ನು ಕಡಿಮೆಮಾಡಿಕೊಳ್ಳಬಹುದು.
ಕೊನೇ ಹನಿ
ಒಂದು ಲೋಟ ಜೀರಿಗೆ ಕಷಾಯಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಪಿತ್ತದೋಷ ನಿವಾರಣೆಯಾಗುತ್ತದೆ.
No comments:
Post a Comment