Thursday, 4 August 2016

Osho. ..thoughts

"ಈ ಜೀವನ", "ಮತ್ತೊಂದು ಜೀವನ" ಎಂಬುದೇನೂ ಇಲ್ಲ - ಜೀವನವೊಂದೇ ಇರುವುದು.
There is no “this life,” “next life” – there is only life.

ಜೀವನದಲ್ಲಿ ಮುಂದೆ ಸಾಗುವುದರ ಕಡೆ ಗಮನ ನೀಡಿ.  ಸದಾಕಾಲ ಹಿನ್ನೋಟದ ಕನ್ನಡಿಯನ್ನು ನೋಡುವುದು ಅಪಘಾತಕ್ಕೆ ಕಾರಣವಾಗಬಹುದು.
See how to go ahead in life. Constantly looking at the  rear view mirror will make you crash.


ನಿಮಗೆ ಒಂದು ಮುಖ್ಯವಾದ ಹೊಣೆಗಾರಿಕೆಯಿದ್ದರೆ, ನಿಮಗೆ ಬಾಹ್ಯ ಪರಿಸ್ಥಿತಿಗಳಿಂದ ವಿಚಲಿತವಾಗದ ಅಥವಾ ಬದಲಾಗದ ಆಂತರಿಕ ಶಕ್ತಿ ಬೇಕಾಗುತ್ತದೆ.
When you have an important responsibility, you must have an inner strength that will not be changed or threatened by external situations.






ನೀವು ನಿಮ್ಮ ಶರೀರ, ಮನಸ್ಸು ಮತ್ತು ಭಾವನೆಗಳನ್ನು ಮುಕ್ತಗೊಳಿಸಿಕೊಂಡರೆ ನಿಮ್ಮ ಜೀವನವು ಸುಂದರವಾಗುವುದು. ನೀವು ನಿಮ್ಮ ಚೈತನ್ಯವನ್ನು ಮುಕ್ತಗೊಳಿಸಿದರೆ ಜೀವನವು ಅತ್ಯದ್ಭುತವಾಗುವುದು.
If you open up your body, mind, and emotions, your life will be pretty good. If you open up your energy system, it will become magical.






ಮಂತ್ರಪಠಣ ಎಂಬುದು ಸಾಂಸ್ಕೃತಿಕ ವಿಷಯವಲ್ಲ, ಅದು ಅಸ್ತಿತ್ವದ ಸಂಗತಿಯಾಗಿದೆ. ಅದು ಶಬ್ದಗಳ ಕುರಿತಾದುದು, ಅರ್ಥದ ಕುರಿತಾದುದಲ್ಲ.
A chant is not a cultural but an existential thing. It is about the sounds, not the meanings.



ನೀವು ಜೀವನವನ್ನು ಎಷ್ಟು ಕಡಿಮೆ ಅರ್ಥಮಾಡಿಕೊಂಡಿರುವಿರೋ ಅಷ್ಟರ ಮಟ್ಟಿಗೆ ಅದು ಆಕಸ್ಮಿಕ ಎಂದು ಭಾವಿಸುತ್ತೀರಿ. ಜೀವನವು ಆಕಸ್ಮಿಕವಲ್ಲ - ಎಲ್ಲವೂ ಕಾರಣ ಮತ್ತು ಪರಿಣಾಮದ ಮಿತಿಯಲ್ಲೇ ಸಂಭವಿಸುತ್ತವೆ.
The less you understand life, the more you think it is accidental. Life is not accidental – everything happens between cause and effect.




ಎರಡು ರೀತಿಗಳಲ್ಲಿ ನಿಮ್ಮನ್ನು ನೀವು ವಿಸ್ತರಿಸಿಕೊಳ್ಳಬಹುದು - ಒಂದು ವಿಜಯವನ್ನು ಸಾಧಿಸುವುದರ ಮೂಲಕ, ಮತ್ತೊಂದು ಒಳಗೂಡಿಸಿಕೊಳ್ಳುವುದರ ಮೂಲಕ. ಒಂದು ದುಃಖವನ್ನು ತರುತ್ತದೆ, ಇನ್ನೊಂದು ಸಂತೋಷವನ್ನು ಉಂಟುಮಾಡುತ್ತದೆ.
You can expand in two different ways – one is by conquest, another is by embrace. One brings misery, the other brings joy.


ಒಮ್ಮೆ ನಿಮ್ಮಲ್ಲಿ ಅರಿವು ಮೂಡಿತೆಂದರೆ, ಅಜ್ಞಾನ ಮತ್ತು ವ್ಯಕ್ತಿಪ್ರಜ್ಞೆ ಎರಡೂ ಇಲ್ಲವಾಗುವುವು.
Once you are conscious, both unconsciousness and self-consciousness evaporate.


ಅನವಶ್ಯಕವಾಗಿ, ಮೋಜು-ಮಸ್ತಿಗಾಗಿ ಯಾವುದೇ ಜೀವವನ್ನು ಕೊಲ್ಲುವುದು ಖಂಡಿತವಾಗಿಯೂ ಒಂದು ಅಪರಾಧ.
Killing any life unnecessarily, for pleasure or to splurge, is definitely a crime.


ನಿಮಗೆ ನೋಡುವ ಕಣ್ಣಿದ್ದರೆ, ಜೀವನವನ್ನು ಅನುಭವಿಸುವ ಸಂವೇದನಶೀಲತೆ ಇದ್ದರೆ, ನಿಮ್ಮೊಳಗೆ ಮತ್ತು ಹೊರಗೆ ಎಲ್ಲವೂ ಚಮತ್ಕಾರವೆನಿಸುವುದು.
If you have eyes to see, if you have sensitivity to feel life, within you and outside of you, everything is a miracle.


ಅಂತರ್ಮುಖರಾಗುವುದು ಬಹಳ ಸರಳವಾದ ಸಂಗತಿಯಾಗಿದೆ. ಬಹುಕಾಲದಿಂದ ನೀವು ಬಹಿರ್ಮುಖರಾಗಿರುವುದರಿಂದ ಅಂತರ್ಮುಖರಾಗುವುದು ನಿಮಗೆ ಕಷ್ಟಸಾಧ್ಯವೆನಿಸುತ್ತಿದೆ.
Turning inward is very simple. It is only since you have been looking outward for too long that turning inward appears far away.


ತೆರೆದ ಮನಸ್ಸಿನವರಾಗಿ ಇರುವುದು ಎಂದರೆ, ಪೂರ್ವಗ್ರಹೀತರಾಗದೇ, ಎಲ್ಲವನ್ನೂ ಅದು ಹೇಗಿದೆಯೋ ಹಾಗೆಯೇ ನೋಡುವುದು.
Openness means no conclusions – simply looking at everything the way it is.






ಸಂಪ್ರದಾಯವೆಂದರೆ ಮಾಡಿದ್ದನ್ನೇ ಮಾಡುವುದಲ್ಲ. ಹಿಂದಿನ ತಲೆಮಾರುಗಳ ವಿವೇಕ ಮತ್ತು ಅನುಭವವನ್ನು ನಿಮ್ಮ ಅಭಿವೃದ್ಧಿಗೆ ಮತ್ತು ಹೊಸ ಸಾಧ್ಯತೆಗಳಿಗೆ ಉಪಯೋಗಿಸಿಕೊಳ್ಳುವುದು.


ಅಸ್ತಿತ್ವದೊಂದಿಗೆ ನೀವು ತಾದಾತ್ಮ್ಯವನ್ನು ಹೊಂದಿದಾಗ ಮಾತ್ರ, ಅದು ಇರುವಂತೆಯೇ ತಿಳಿಯುವಿರಿ. ಇಲ್ಲವಾದರೆ, ಅದನ್ನು ನಿಮ್ಮ ಮನಸ್ಸು ಹೇಗೆ ವಿವರಿಸುತ್ತದೆಯೋ ಹಾಗೆ ತಿಳಿಯುವಿರಿ.

ಆಧ್ಯಾತ್ಮಿಕತೆ ಎಂದರೆ ಭೌತಿಕತೆಯನ್ನು ತ್ಯಜಿಸುವುದಲ್ಲ, ಅದನ್ನು ಮೀರಿಹೋಗುವುದು.

ನೀವು ಉತ್ಪಾದಿಸುವ ಪ್ರತಿಯೊಂದು ಆಲೋಚನೆಯೂ ಶರೀರದಲ್ಲಿ ಒಂದು ವಿದ್ಯುತ್ ಪ್ರಚೋದನೆಯನ್ನು ಉಂಟುಮಾಡುತ್ತದೆ.


ನಾಯಕತ್ವವೆಂದರೆ, ಒಳಗೂಡಿಸಿಕೊಳ್ಳುವುದು ಮತ್ತು ಬೆಂಬಲವಾಗಿ ನಿಲ್ಲುವುದು; ಪ್ರಾಬಲ್ಯ ಮತ್ತು ಅಧಿಕಾರವಲ್ಲ.


ಸಾಧನವೆಂದರೆ ನೀವು ಎಲ್ಲಿಗೋ ಹೋಗುವುದಲ್ಲ - ಸಾಧನವೆಂದರೆ ಅಸ್ತಿತ್ವದೊಂದಿಗೆ ತಾದಾತ್ಮ್ಯವನ್ನು ಸಾಧಿಸುವುದು.


ಸಮಸ್ಯೆಯು ಜೀವನದಲ್ಲಿಲ್ಲ. ನೀವು ನಿಮ್ಮ ಮನಸ್ಸಿನ ಜಬಾಬ್ದಾರಿಯನ್ನು ವಹಿಸಿಕೊಳ್ಳದೇ ಇರುವುದರಿಂದಲೇ ಸಮಸ್ಯೆ.


ಪೂರ್ಣಪ್ರಮಾಣದ ಮನುಷ್ಯನಾಗುವುದೆಂದರೆ ಪೂರ್ಣವಾಗಿ ಜೀವಿಸುವುದು, ನಿಮ್ಮ ಜೀವನದ ಪ್ರತಿಯೊಂದು ಅಂಶ, ಪ್ರತಿಯೊಂದು ಕ್ಷಣದಲ್ಲೂ ಪೂರ್ಣವಾಗಿ ಜೀವಿಸುವುದು.


ನಿಮ್ಮ ಪ್ರೀತಿ, ನಿಮ್ಮ ಸಂತೋಷ, ಮತ್ತು ನಿಮ್ಮ ಸಮೃದ್ಧತೆಯನ್ನು ಹಿಡಿದಿಡಬೇಡಿ. ನೀವು ಏನನ್ನು ನೀಡುತ್ತೀರೋ ಅದೇ ನಿಮ್ಮ ಗುಣವಾಗುವುದು, ನೀವು ಯಾವುದನ್ನು ಹಿಡಿದಿಡುತ್ತೀರೋ ಅದಲ್ಲ.


ಪ್ರತಿಯೊಬ್ಬ ಮನುಷ್ಯನಲ್ಲೂ ಏನೋ ಒಂದು ರೀತಿಯ ಪ್ರತಿಭೆಯಿರುವುದು, ಆದರೆ ಅವರು ಅದನ್ನು ಬೇರೆ ಯಾರಂತೆಯೋ ಆಗಲು ಹೋಗಿ ನಾಶಮಾಡುವರು


ತಮ್ಮ ಜೀವನವನ್ನು ನರಕವನ್ನಾಗಿಸಿಕೊಂಡವರಿಗೆ ಮಾತ್ರ ಸ್ವರ್ಗವು ಆಕರ್ಷಣೀಯವಾಗಿ ತೋರುವುದು.




























No comments:

Post a Comment