#ಶ್ರೀವಾಣಿ
✨🔸🔸🔸🔸🔸🔸✨
ಹಿಂಗಾs ಒಬ್ಬ ರೈತ.
ಹಣ್ಣಿನ ಮರ ಬೆಳೆಸಿದ್ದ.
ಮರ ದೊಡ್ಡದಾಗಿ ಮೈತುಂಬಾ ಹಣ್ಣು ಬಿಟ್ಟಿತ್ತು. ಹೋಗುವವರೆಲ್ಲಾ ನಿಂತು ನೋಡುವ ಹಾಗೆ ಹಣ್ಣು ಬಿಟ್ಟಿತ್ತು.
ಇದನ್ನು ಪಕ್ಕದ ಹೊಲದವನು ನೋಡಿ ಅಸೂಯೆ ಪಟ್ಟ.
ಮರ ಹಣ್ಣು ಬಿಟ್ಟಿದ್ದು ನೋಡಿ ಹೊಟ್ಟೆ ಉರಿದು, ಸಹಿಸಿಕೊಳ್ಳೋಕೆ ಆಗಲಿಲ್ಲ. ಒಂದು ರಾತ್ರಿ ಮರದ ಬಳಿ ಬಂದ. ಮರ ಹತ್ತಿದ. ಮರದಲ್ಲಿನ ಹಣ್ಣುಗಳನ್ನೆಲ್ಲಾ ಕೆಳಗೆ ಕಿತ್ತು ಬೀಳಿಸಿದ. ಹಣ್ಣಗಳು ಮರದ ಕೆಳಗೆ ಬಿದ್ದಿರುವುದನ್ನು ನೋಡಿ ಬಹಳ ಸಂತೋಷಪಟ್ಟ. ನಕ್ಕ, ಮನೆಗೆ ಬಂದ.
ಇದೂ ಒಂದು ರೀತಿಯ ಸುಖ. ಆದರೆ ಈ ಸುಖವನ್ನು ಯಾರಲ್ಲೂ ಹಂಚಿಕೊಳ್ಳುವಂತಿಲ್ಲ!
ಹಣ್ಣು ಕಿತ್ತದ್ದು ನಾನೆ ಅಂತ ಯಾರ ಹತ್ತಿರವೂ ಹೇಳುವಂತಿಲ್ಲ. ಹೇಳಿದರೆ ಏನಾಗಬಹುದು?
ಸುಖಕ್ಕೆ ನೆಮ್ಮದಿ ಇರುವುದಿಲ್ಲ.
ಹಿಂಗಾs ಇನ್ನೊಬ್ಬ ಫಲಿತ ಮರವನ್ನು ನೋಡಿದ ಸಂತೋಷಪಟ್ಟ.
ಆ ಮರದ ಮಾಲೀಕನ ಹತ್ತಿರ ಹೋದ, ಏನು ಮರ ಬೆಳಸಿದ್ದೀಯಾ! ನಾನಂತೂ ಇಂತಹ ಮರ ಜೀವನದಾಗ ನೋಡಿರಲಿಲ್ಲ. ಅಷ್ಟು ಚೆಂದವಾಗಿ ಬೆಳಸಿದ್ದೀಯಾ ಅಂದರೆ. ಮರ ಬೆಳೆದವನಿಗೂ ಸಂತೋಷ ಆಯ್ತು, ಮರ ನೋಡಿದವನಿಗೂ ಸಂತೋಷ ಆಯ್ತು. ಇಬ್ಬರೂ ಪರಸ್ಪರ ಸಂತೋಷವನ್ನು ಹಂಚಿಕೊಂಡರು. ಮರದ ಮಾಲೀಕ ಒಂದೆರಡು ಹಣ್ಣು
ಕಿತ್ತುಕೊಟ್ಟ,
ಕೂರಿಸಿದ,
ಉಪಚರಿಸಿದ.
ಇಲ್ಲಿ ಸುಖ ಹಂಚಿಕೊಂಡಿದ್ದರಿಂದ ಸುಖ ಹೆಚ್ಚಾಯಿತು.
ಹಾಗಾದರೆ, ನಮಗೆ ಯಾವ ತರದ ಸುಖ ಬೇಕು ಎಂಬುದನ್ನು ನೀವೇ ಯೋಚನೆ ಮಾಡಿ.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು.
✨🔸🔸🔸🔸🔸🔸✨
ಹಿಂಗಾs ಒಬ್ಬ ರೈತ.
ಹಣ್ಣಿನ ಮರ ಬೆಳೆಸಿದ್ದ.
ಮರ ದೊಡ್ಡದಾಗಿ ಮೈತುಂಬಾ ಹಣ್ಣು ಬಿಟ್ಟಿತ್ತು. ಹೋಗುವವರೆಲ್ಲಾ ನಿಂತು ನೋಡುವ ಹಾಗೆ ಹಣ್ಣು ಬಿಟ್ಟಿತ್ತು.
ಇದನ್ನು ಪಕ್ಕದ ಹೊಲದವನು ನೋಡಿ ಅಸೂಯೆ ಪಟ್ಟ.
ಮರ ಹಣ್ಣು ಬಿಟ್ಟಿದ್ದು ನೋಡಿ ಹೊಟ್ಟೆ ಉರಿದು, ಸಹಿಸಿಕೊಳ್ಳೋಕೆ ಆಗಲಿಲ್ಲ. ಒಂದು ರಾತ್ರಿ ಮರದ ಬಳಿ ಬಂದ. ಮರ ಹತ್ತಿದ. ಮರದಲ್ಲಿನ ಹಣ್ಣುಗಳನ್ನೆಲ್ಲಾ ಕೆಳಗೆ ಕಿತ್ತು ಬೀಳಿಸಿದ. ಹಣ್ಣಗಳು ಮರದ ಕೆಳಗೆ ಬಿದ್ದಿರುವುದನ್ನು ನೋಡಿ ಬಹಳ ಸಂತೋಷಪಟ್ಟ. ನಕ್ಕ, ಮನೆಗೆ ಬಂದ.
ಇದೂ ಒಂದು ರೀತಿಯ ಸುಖ. ಆದರೆ ಈ ಸುಖವನ್ನು ಯಾರಲ್ಲೂ ಹಂಚಿಕೊಳ್ಳುವಂತಿಲ್ಲ!
ಹಣ್ಣು ಕಿತ್ತದ್ದು ನಾನೆ ಅಂತ ಯಾರ ಹತ್ತಿರವೂ ಹೇಳುವಂತಿಲ್ಲ. ಹೇಳಿದರೆ ಏನಾಗಬಹುದು?
ಸುಖಕ್ಕೆ ನೆಮ್ಮದಿ ಇರುವುದಿಲ್ಲ.
ಹಿಂಗಾs ಇನ್ನೊಬ್ಬ ಫಲಿತ ಮರವನ್ನು ನೋಡಿದ ಸಂತೋಷಪಟ್ಟ.
ಆ ಮರದ ಮಾಲೀಕನ ಹತ್ತಿರ ಹೋದ, ಏನು ಮರ ಬೆಳಸಿದ್ದೀಯಾ! ನಾನಂತೂ ಇಂತಹ ಮರ ಜೀವನದಾಗ ನೋಡಿರಲಿಲ್ಲ. ಅಷ್ಟು ಚೆಂದವಾಗಿ ಬೆಳಸಿದ್ದೀಯಾ ಅಂದರೆ. ಮರ ಬೆಳೆದವನಿಗೂ ಸಂತೋಷ ಆಯ್ತು, ಮರ ನೋಡಿದವನಿಗೂ ಸಂತೋಷ ಆಯ್ತು. ಇಬ್ಬರೂ ಪರಸ್ಪರ ಸಂತೋಷವನ್ನು ಹಂಚಿಕೊಂಡರು. ಮರದ ಮಾಲೀಕ ಒಂದೆರಡು ಹಣ್ಣು
ಕಿತ್ತುಕೊಟ್ಟ,
ಕೂರಿಸಿದ,
ಉಪಚರಿಸಿದ.
ಇಲ್ಲಿ ಸುಖ ಹಂಚಿಕೊಂಡಿದ್ದರಿಂದ ಸುಖ ಹೆಚ್ಚಾಯಿತು.
ಹಾಗಾದರೆ, ನಮಗೆ ಯಾವ ತರದ ಸುಖ ಬೇಕು ಎಂಬುದನ್ನು ನೀವೇ ಯೋಚನೆ ಮಾಡಿ.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು.
No comments:
Post a Comment