ಆಯುರ್ವೆದ ಕಾರು ಇದ್ದಂತೆ!
ಡಾ. ಗಿರಿಧರ ಕಜೆ ಎಂ.ಡಿ.(ಆಯು)
ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ನಿತ್ಯವೂ ಅನ್ವೇಷಣೆ, ಸಂಶೋಧನೆ ಹಾಗೂ ಆವಿಷ್ಕಾರಗಳನ್ನು ಮಾಡುತ್ತಲೇ ಇರುತ್ತಾನೆ. ಅಂತೆಯೇ ಪ್ರತಿಯೊಬ್ಬರ ದೈನಂದಿನ ಚಟುವಟಿಕೆಗಳಿಗೆ ಬೇಕಾಗುವ ಅನೇಕ ವಸ್ತು ಹಾಗೂ ವಿಷಯಗಳನ್ನು ತನಗೆ ಬೇಕಾದಂತೆ ನಿರ್ವಿುಸಿಕೊಂಡಿದ್ದಾನೆ. ಬಹುದೂರ ಸುಲಭವಾಗಿ ಕ್ರಮಿಸಲು ವಾಹನಗಳು ಬಂದಿವೆ. ಒಂಟೆ, ಕುದುರೆ ಮೊದಲಾದ ಪ್ರಾಣಿಗಳಿಂದ ಹಿಡಿದು ಎತ್ತಿನಗಾಡಿ, ಜಟಕಾಬಂಡಿ, ರಥಗಳೂ ಅವರವರ ಮರ್ಜಿಗೆ ಸರಿಯಾಗಿ ಉಪಯೋಗಿಸಲ್ಪಟ್ಟಿವೆ. ಬಹುವಿಧದ ಆಕರ್ಷಕ ವಾಹನಗಳು ಇಂದಿನ ಜನರಿಗೆ ಸಾರಥ್ಯ ನೀಡಿದೆ.
ಆರೋಗ್ಯದ ದೃಷ್ಟಿಯಿಂದ ನೋಡಿದರೆ ಆಯುರ್ವೆದ ಕಾರು ಇದ್ದಂತೆ, ಅಲೋಪಥಿ ಆಂಬುಲೆನ್ಸ್ನಂತೆ ಎನ್ನಬಹುದು! ನೆಂಟರಿಷ್ಟರಲ್ಲಿಗೆ ತೆರಳಲು, ದೂರದ ಪಯಣಕ್ಕೆ, ಪಿಕ್ನಿಕ್ ಅಥವಾ ಪ್ರವಾಸಕ್ಕೆ ಹೋಗುವಾಗ, ಸಂತೋಷ ಸಮಯದಲ್ಲಿ ಕಾರನ್ನು ವಾಹನವಾಗಿ ಬಳಸುತ್ತೇವೆ. ವಾಹನಕ್ಕೆ ಕಷ್ಟದಲ್ಲಿ ಹತ್ತುವಷ್ಟು ಸಾಮರ್ಥ್ಯವಿದ್ದಾಗಲೂ ಕಾರೇ ಜನರ ಪ್ರಥಮ ಆಯ್ಕೆ. ಆರೋಗ್ಯದಲ್ಲಿ ಏರುಪೇರಾದಾಗ ವೈದ್ಯರಲ್ಲಿ ಚಿಕಿತ್ಸೆಗೆ ತೆರಳಲು ಅದೇ ಕಾರನ್ನು ಬಳಸುತ್ತೇವೆ. ಸ್ವಸ್ಥ ಅಸ್ವಸ್ಥರಾಗಿದ್ದಾಗ ಕಾರುಬೇಕು. ಅದೇ ರೀತಿಯಲ್ಲಿ ಆಯುರ್ವೆದವನ್ನು ಬಳಸಿಕೊಂಡರೆ ಜೀವನ ಚೆನ್ನಾಗಿರುತ್ತದೆ. ಚೆನ್ನಾಗಿದ್ದಾಗಲೂ, ತೊಂದರೆಗೊಳಗಾದಾಗಲೂ, ರೋಗದಿಂದ ಶಾಶ್ವತವಾಗಿ ಹೊರಬರಲು ಆಯುರ್ವೆದ ಅವಶ್ಯ. ನಡೆಯಲೂ ಸಾಧ್ಯವಿಲ್ಲದಂತಹ ಸಂದರ್ಭದಲ್ಲಿ, ಶಸ್ತ್ರಚಿಕಿತ್ಸೆ ತುರ್ತಾಗಿ ಆಗಲೇಬೇಕಾದ ಸಮಯದಲ್ಲಿ ಹಾಗೂ ಅನೇಕ ತುರ್ತಚಿಕಿತ್ಸೆಯ ಪರಿಸ್ಥಿತಿಗಳಲ್ಲಿ ಆಂಬುಲೆನ್ಸೇ ಬೇಕು. ಅದರಂತೆ ತುರ್ತಸ್ಥಿತಿಗಳಲ್ಲಿ, ಶಸ್ತ್ರಚಿಕಿತ್ಸೆಯ ಅನಿವಾರ್ಯತೆ ಇದ್ದಾಗ ಅಲೋಪಥಿ ಆಯ್ಕೆಯ ಚಿಕಿತ್ಸಾಪದ್ಧತಿ. ರಸ್ತೆಯಲ್ಲಿ ಆಂಬುಲೆನ್ಸ್ಗೇ ರಾಜಮರ್ಯಾದೆ. ಇದೇರೀತಿ ನಮ್ಮ ಸರಕಾರಗಳೂ ವರ್ತಿಸುತ್ತಿವೆ. ಹಾಗೆಂದು ಎಲ್ಲಾ ಸಂಚಾರ ಅವಶ್ಯಕತೆಗಳಿಗೆ ಆಂಬುಲೆನ್ಸನ್ನೇ ಬಳಸುವುದು ಸರಿಯಲ್ಲ. ಇರುವೆಯನ್ನು ಓಡಿಸಲು ಕೋವಿ ಬೇಕಿಲ್ಲ. ವಿವೇಚನೆಯಿಂದ ವಿಭಿನ್ನ ವೈದ್ಯಪದ್ಧತಿಗಳನ್ನು ಬಳಸಿಕೊಂಡರೆ ಮಾತ್ರ ಜಗತ್ತು ಆರೋಗ್ಯಮಯವಾಗಿರಬಹುದು.
ಪಂಚಸೂತ್ರಗಳು
ನೆಕ್ಕಿಗಿಡ: ಮಕ್ಕಳಲ್ಲಿ ಹಲ್ಲು ಬರುವ ಕಾಲದಲ್ಲಿನ ನೋವು ನಿವಾರಕ.
ಹಲಸಿನ ಬೀಜ: ಪುರುಷರಲ್ಲಿ ವೀರ್ಯಾಣು ವೃದ್ಧಿಗೆ ಸಹಕಾರಿ.
ಕಾಡುನೀರುಳ್ಳಿ: ಮೂತ್ರಪಿಂಡ ವೈಫಲ್ಯ ರೋಗಿಗಳಿಗೆ ಅನುಕೂಲಕಾರಿ.
ಹೆಸರುಕಾಳು: ಮಂದದೃಷ್ಟಿ ಮುಂತಾದ ನೇತ್ರರೋಗಗಳನ್ನು ಸರಿಪಡಿಸಲು ಉಪಯುಕ್ತ.
ತೆಂಗಿನಕಾಯಿ: ಕೂದಲು ಉದುರುವಿಕೆ ನಿಲ್ಲಿಸಿ ಸೊಂಪಾಗಿಸಲು ಹಿತ.
ಕೊನೇ ಹನಿ
ಬನ್ನಿಮರದ ಐದಾರು ಹೂಗಳನ್ನು ಸಕ್ಕರೆಯೊಂದಿಗೆ ಬೆರೆಸಿ ಸೇವಿಸಿದರೆ ಗರ್ಭಪಾತ ತಡೆಯುತ್ತದೆ.
ಡಾ. ಗಿರಿಧರ ಕಜೆ ಎಂ.ಡಿ.(ಆಯು)
ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ನಿತ್ಯವೂ ಅನ್ವೇಷಣೆ, ಸಂಶೋಧನೆ ಹಾಗೂ ಆವಿಷ್ಕಾರಗಳನ್ನು ಮಾಡುತ್ತಲೇ ಇರುತ್ತಾನೆ. ಅಂತೆಯೇ ಪ್ರತಿಯೊಬ್ಬರ ದೈನಂದಿನ ಚಟುವಟಿಕೆಗಳಿಗೆ ಬೇಕಾಗುವ ಅನೇಕ ವಸ್ತು ಹಾಗೂ ವಿಷಯಗಳನ್ನು ತನಗೆ ಬೇಕಾದಂತೆ ನಿರ್ವಿುಸಿಕೊಂಡಿದ್ದಾನೆ. ಬಹುದೂರ ಸುಲಭವಾಗಿ ಕ್ರಮಿಸಲು ವಾಹನಗಳು ಬಂದಿವೆ. ಒಂಟೆ, ಕುದುರೆ ಮೊದಲಾದ ಪ್ರಾಣಿಗಳಿಂದ ಹಿಡಿದು ಎತ್ತಿನಗಾಡಿ, ಜಟಕಾಬಂಡಿ, ರಥಗಳೂ ಅವರವರ ಮರ್ಜಿಗೆ ಸರಿಯಾಗಿ ಉಪಯೋಗಿಸಲ್ಪಟ್ಟಿವೆ. ಬಹುವಿಧದ ಆಕರ್ಷಕ ವಾಹನಗಳು ಇಂದಿನ ಜನರಿಗೆ ಸಾರಥ್ಯ ನೀಡಿದೆ.
ಆರೋಗ್ಯದ ದೃಷ್ಟಿಯಿಂದ ನೋಡಿದರೆ ಆಯುರ್ವೆದ ಕಾರು ಇದ್ದಂತೆ, ಅಲೋಪಥಿ ಆಂಬುಲೆನ್ಸ್ನಂತೆ ಎನ್ನಬಹುದು! ನೆಂಟರಿಷ್ಟರಲ್ಲಿಗೆ ತೆರಳಲು, ದೂರದ ಪಯಣಕ್ಕೆ, ಪಿಕ್ನಿಕ್ ಅಥವಾ ಪ್ರವಾಸಕ್ಕೆ ಹೋಗುವಾಗ, ಸಂತೋಷ ಸಮಯದಲ್ಲಿ ಕಾರನ್ನು ವಾಹನವಾಗಿ ಬಳಸುತ್ತೇವೆ. ವಾಹನಕ್ಕೆ ಕಷ್ಟದಲ್ಲಿ ಹತ್ತುವಷ್ಟು ಸಾಮರ್ಥ್ಯವಿದ್ದಾಗಲೂ ಕಾರೇ ಜನರ ಪ್ರಥಮ ಆಯ್ಕೆ. ಆರೋಗ್ಯದಲ್ಲಿ ಏರುಪೇರಾದಾಗ ವೈದ್ಯರಲ್ಲಿ ಚಿಕಿತ್ಸೆಗೆ ತೆರಳಲು ಅದೇ ಕಾರನ್ನು ಬಳಸುತ್ತೇವೆ. ಸ್ವಸ್ಥ ಅಸ್ವಸ್ಥರಾಗಿದ್ದಾಗ ಕಾರುಬೇಕು. ಅದೇ ರೀತಿಯಲ್ಲಿ ಆಯುರ್ವೆದವನ್ನು ಬಳಸಿಕೊಂಡರೆ ಜೀವನ ಚೆನ್ನಾಗಿರುತ್ತದೆ. ಚೆನ್ನಾಗಿದ್ದಾಗಲೂ, ತೊಂದರೆಗೊಳಗಾದಾಗಲೂ, ರೋಗದಿಂದ ಶಾಶ್ವತವಾಗಿ ಹೊರಬರಲು ಆಯುರ್ವೆದ ಅವಶ್ಯ. ನಡೆಯಲೂ ಸಾಧ್ಯವಿಲ್ಲದಂತಹ ಸಂದರ್ಭದಲ್ಲಿ, ಶಸ್ತ್ರಚಿಕಿತ್ಸೆ ತುರ್ತಾಗಿ ಆಗಲೇಬೇಕಾದ ಸಮಯದಲ್ಲಿ ಹಾಗೂ ಅನೇಕ ತುರ್ತಚಿಕಿತ್ಸೆಯ ಪರಿಸ್ಥಿತಿಗಳಲ್ಲಿ ಆಂಬುಲೆನ್ಸೇ ಬೇಕು. ಅದರಂತೆ ತುರ್ತಸ್ಥಿತಿಗಳಲ್ಲಿ, ಶಸ್ತ್ರಚಿಕಿತ್ಸೆಯ ಅನಿವಾರ್ಯತೆ ಇದ್ದಾಗ ಅಲೋಪಥಿ ಆಯ್ಕೆಯ ಚಿಕಿತ್ಸಾಪದ್ಧತಿ. ರಸ್ತೆಯಲ್ಲಿ ಆಂಬುಲೆನ್ಸ್ಗೇ ರಾಜಮರ್ಯಾದೆ. ಇದೇರೀತಿ ನಮ್ಮ ಸರಕಾರಗಳೂ ವರ್ತಿಸುತ್ತಿವೆ. ಹಾಗೆಂದು ಎಲ್ಲಾ ಸಂಚಾರ ಅವಶ್ಯಕತೆಗಳಿಗೆ ಆಂಬುಲೆನ್ಸನ್ನೇ ಬಳಸುವುದು ಸರಿಯಲ್ಲ. ಇರುವೆಯನ್ನು ಓಡಿಸಲು ಕೋವಿ ಬೇಕಿಲ್ಲ. ವಿವೇಚನೆಯಿಂದ ವಿಭಿನ್ನ ವೈದ್ಯಪದ್ಧತಿಗಳನ್ನು ಬಳಸಿಕೊಂಡರೆ ಮಾತ್ರ ಜಗತ್ತು ಆರೋಗ್ಯಮಯವಾಗಿರಬಹುದು.
ಪಂಚಸೂತ್ರಗಳು
ನೆಕ್ಕಿಗಿಡ: ಮಕ್ಕಳಲ್ಲಿ ಹಲ್ಲು ಬರುವ ಕಾಲದಲ್ಲಿನ ನೋವು ನಿವಾರಕ.
ಹಲಸಿನ ಬೀಜ: ಪುರುಷರಲ್ಲಿ ವೀರ್ಯಾಣು ವೃದ್ಧಿಗೆ ಸಹಕಾರಿ.
ಕಾಡುನೀರುಳ್ಳಿ: ಮೂತ್ರಪಿಂಡ ವೈಫಲ್ಯ ರೋಗಿಗಳಿಗೆ ಅನುಕೂಲಕಾರಿ.
ಹೆಸರುಕಾಳು: ಮಂದದೃಷ್ಟಿ ಮುಂತಾದ ನೇತ್ರರೋಗಗಳನ್ನು ಸರಿಪಡಿಸಲು ಉಪಯುಕ್ತ.
ತೆಂಗಿನಕಾಯಿ: ಕೂದಲು ಉದುರುವಿಕೆ ನಿಲ್ಲಿಸಿ ಸೊಂಪಾಗಿಸಲು ಹಿತ.
ಕೊನೇ ಹನಿ
ಬನ್ನಿಮರದ ಐದಾರು ಹೂಗಳನ್ನು ಸಕ್ಕರೆಯೊಂದಿಗೆ ಬೆರೆಸಿ ಸೇವಿಸಿದರೆ ಗರ್ಭಪಾತ ತಡೆಯುತ್ತದೆ.
No comments:
Post a Comment