🌺 ಶ್ರೀವಾಣಿ 🌺
ಒಬ್ಬ ಮಾಲೀಕ ತೋಟ ಬೆಳೆಸಿದ್ದಾನೆ. ಅಲ್ಲಿ ಹೂಗಿಡಗಳಿವೆ. ಹಣ್ಣಿನ ಮರಗಳಿವೆ. ಹಸಿರು ಹಾಸು ಹಾಸಿದೆ, ತಂಪಾದ ಗಾಳಿ ಬೀಸಿದೆ. ತೋಟದ ಒಳಗೆ ಸುಂದರ ವಾತಾವರಣವಿದೆ. ಮಾಲೀಕನಿಗೆ ತೋಟದಲ್ಲಿ ಎಷ್ಟು ಗಿಡಗಳಿವೆ, ಎಷ್ಟು ಹಣ್ಣುಗಳಿವೆ ಅನ್ನೋದಷ್ಟೇ ಗೊತ್ತಿದೆ. ಅಲ್ಲಿರುವ ಸುಂದರ ವಾತಾವರಣವನ್ನು ಅನುಭವಿಸುವುದಕ್ಕೆ ವೇಳೆ ಇಲ್ಲ. ಅದೇ ತೋಟಕ್ಕೆ ಇನ್ನೊಬ್ಬ ಬರುತ್ತಾನೆ, ಅಲ್ಲಿರುವ ಸುಂದರ ವಾತಾವರಣ ನೋಡುತ್ತಾನೆ, ಆನಂದ ಪಡುತ್ತಾನೆ, ಸವಿಯುತ್ತಾನೆ. ಅಲ್ಲಿರುವ ವಾತಾವರಣಕ್ಕೆ ಮುಗ್ಧನಾಗುತ್ತಾನೆ. ಇದು ಅನುಭಾವ. ತೋಟದ ಒಡೆಯನಿಗೆ ಜ್ಞಾನವಿದೆ. ಅನುಭಾವವಿಲ್ಲ. ಎರಡಕ್ಕೂ ಎಷ್ಟು ವ್ಯತ್ಯಾಸ. ಹಾಗೇ ಜಗತ್ತಿನಲ್ಲಿ ಹುಟ್ಟದ ಮೇಲೆ ಜ್ಞಾನ ತಿಳಿದುಕೊಳ್ಳವುದಷ್ಟೇ ಅಲ್ಲ, ಅನುಭವಿಸಬೇಕು. ಜ್ಞಾನಮಿಶ್ರಿತ ಅನುಭವ ಪಡೆಯಬೇಕು. ಅದು ಅನುಭಾವ.
ಮನೆ ಕಟ್ಟಿಸಿದ್ದೇವೆ, ಬಣ್ಣ ತುಂಬಿದ್ದೇವೆ, ವಸ್ತುಗಳನ್ನು ತಂದಿದ್ದೇವೆ. ಆದರೆ ಸುಖವನ್ನೇ ಪಡದಿದ್ರೆ, ಅದು ಶ್ರೀಮಂತಿಕೆಯ ಮನೆ ಅಷ್ಟೇ. ಎಲ್ಲದನ್ನು ಮನುಷ್ಯ ಅನುಭವಿಸಬೇಕು. ಇದಕ್ಕೆ ಸುಂದರ ಹೃದಯ ಬೇಕು. ಜ್ಞಾನ ಯಾರು ಬೇಕಾದರೂ ಪಡೆಯಬಹುದು. ಆದರೆ ಅನುಭವಿಸೋಕೆ ಹೃದಯ ಬೇಕು.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು.
🌿🌿🌿🌿🌿🌿🌿🌿🌿
ಒಬ್ಬ ಮಾಲೀಕ ತೋಟ ಬೆಳೆಸಿದ್ದಾನೆ. ಅಲ್ಲಿ ಹೂಗಿಡಗಳಿವೆ. ಹಣ್ಣಿನ ಮರಗಳಿವೆ. ಹಸಿರು ಹಾಸು ಹಾಸಿದೆ, ತಂಪಾದ ಗಾಳಿ ಬೀಸಿದೆ. ತೋಟದ ಒಳಗೆ ಸುಂದರ ವಾತಾವರಣವಿದೆ. ಮಾಲೀಕನಿಗೆ ತೋಟದಲ್ಲಿ ಎಷ್ಟು ಗಿಡಗಳಿವೆ, ಎಷ್ಟು ಹಣ್ಣುಗಳಿವೆ ಅನ್ನೋದಷ್ಟೇ ಗೊತ್ತಿದೆ. ಅಲ್ಲಿರುವ ಸುಂದರ ವಾತಾವರಣವನ್ನು ಅನುಭವಿಸುವುದಕ್ಕೆ ವೇಳೆ ಇಲ್ಲ. ಅದೇ ತೋಟಕ್ಕೆ ಇನ್ನೊಬ್ಬ ಬರುತ್ತಾನೆ, ಅಲ್ಲಿರುವ ಸುಂದರ ವಾತಾವರಣ ನೋಡುತ್ತಾನೆ, ಆನಂದ ಪಡುತ್ತಾನೆ, ಸವಿಯುತ್ತಾನೆ. ಅಲ್ಲಿರುವ ವಾತಾವರಣಕ್ಕೆ ಮುಗ್ಧನಾಗುತ್ತಾನೆ. ಇದು ಅನುಭಾವ. ತೋಟದ ಒಡೆಯನಿಗೆ ಜ್ಞಾನವಿದೆ. ಅನುಭಾವವಿಲ್ಲ. ಎರಡಕ್ಕೂ ಎಷ್ಟು ವ್ಯತ್ಯಾಸ. ಹಾಗೇ ಜಗತ್ತಿನಲ್ಲಿ ಹುಟ್ಟದ ಮೇಲೆ ಜ್ಞಾನ ತಿಳಿದುಕೊಳ್ಳವುದಷ್ಟೇ ಅಲ್ಲ, ಅನುಭವಿಸಬೇಕು. ಜ್ಞಾನಮಿಶ್ರಿತ ಅನುಭವ ಪಡೆಯಬೇಕು. ಅದು ಅನುಭಾವ.
ಮನೆ ಕಟ್ಟಿಸಿದ್ದೇವೆ, ಬಣ್ಣ ತುಂಬಿದ್ದೇವೆ, ವಸ್ತುಗಳನ್ನು ತಂದಿದ್ದೇವೆ. ಆದರೆ ಸುಖವನ್ನೇ ಪಡದಿದ್ರೆ, ಅದು ಶ್ರೀಮಂತಿಕೆಯ ಮನೆ ಅಷ್ಟೇ. ಎಲ್ಲದನ್ನು ಮನುಷ್ಯ ಅನುಭವಿಸಬೇಕು. ಇದಕ್ಕೆ ಸುಂದರ ಹೃದಯ ಬೇಕು. ಜ್ಞಾನ ಯಾರು ಬೇಕಾದರೂ ಪಡೆಯಬಹುದು. ಆದರೆ ಅನುಭವಿಸೋಕೆ ಹೃದಯ ಬೇಕು.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು.
🌿🌿🌿🌿🌿🌿🌿🌿🌿
No comments:
Post a Comment