#ಶ್ರೀವಾಣಿ
🔶 ದೇವನು ಅಬಂಧಿತ🔶
ಒಬ್ಬ ಆಗರ್ಭ ಸಿರಿವಂತ ಇದ್ದ. ಒಂದು ದಿನ ಆತನಿಗೆ ತನ್ನ ಸಂಪತ್ತಿನ ಬಲದಿಂದ ದೇವರನ್ನು ಹೇಗಾದರೂ ಬಂಧಿಸಬೇಕು ಎನಿಸಿತು. ಯಾರೋ ಹೇಳಿದರು- 'ಹಾಗಾದರೆ ನೀನು ಒಂದು ಭವ್ಯವಾದ ಮಂದಿರವನ್ನು ಕಟ್ಟು. ಖಂಡಿತವಾಗಿಯೂ ದೇವರು ಅದರಲ್ಲಿ ತಾನಾಗಿಯೇ ಬಂದು ನೆಲೆಸುತ್ತಾನೆ.!'
ಸಿರಿವಂತನು ದೇಶ - ವಿದೇಶಗಳಿಂದ ಪ್ರಸಿದ್ಧ ಶಿಲ್ಪಿಗಳನ್ನು ಕರೆಯಿಸಿದ. ಹತ್ತಾರು ವರುಷ ಅವರೆಲ್ಲ ದುಡಿದು ಸುಪ್ರಸಿದ್ದ ಸುಂದರ ಮಂದಿರ ಕಟ್ಟಿದರು. ಒಂದು ದಿನ ಶುಭಮುಹೂರ್ತದಲ್ಲಿ ದೇವರ ಮೂರ್ತಿಯ ಪ್ರತಿಷ್ಠಾಪನೆಯು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. 'ದೇವರು ನನ್ನ ಮಂದಿರದಲ್ಲಿ ಬಂಧಿತನಾದ!' ಎಂದು ಸಿರಿವಂತ ಭಾವಿಸಿದ. ಅದೇ ಸಂತಸದಲ್ಲಿ ಸಿರಿವಂತ ಮನೆಗೆ ಹೋಗಿ ಮಲಗಿದ. ಹತ್ತಿರದಲ್ಲಿಯೇ ಆತನ ಮೂಮ್ಮಗನೂ ಮಲಗಿದ್ದ.
"ನಮ್ಮಜ್ಜ ದೇವರನ್ನು ಮಂದಿರದಲ್ಲಿ ಕೂಡಿಹಾಕಿದ್ದಾನೆ. ಆತನನ್ನು ಮುಕ್ತಗೊಳಿಸಬೇಕು." ಎಂದು ಬಾಲಕ ಚಿಂತಿಸಿದ. ನಿದ್ರೆ ಬರಲಿಲ್ಲ. ಮಧ್ಯರಾತ್ರಿಯಲ್ಲಿ ಬಾಲಕನು ಅಜ್ಜನ ಪಕ್ಕದಲ್ಲಿದ್ದ ಕೀಲಿಕೈ ತೆಗೆದುಕೊಂಡು ಮಂದಿರಕ್ಕೆ ಬಂದ. ದೊಡ್ಡ ದೇವರ ಗುಡಿಗೆ ದೊಡ್ಡ ಕೀಲಿಕೈ ಹಾಕಲಾಗಿತ್ತು. ಬಾಲಕನಿಗೆ ಅದು ನಿಲುಕಲಿಲ್ಲ. ಆದರೂ ಆತ ಬಾಗಿಲ ಕೀಲಿತೆಗೆಯಲು ಪ್ರಯತ್ನಿಸುತ್ತಿದ್ದ. ಅಷ್ಟರಲ್ಲಿ ಹಿಂದಿನಿಂದ ಯಾರೋ ಬಾಲಕನ ಬೆನ್ನು ಚಪ್ಪರಿಸಿ ಕೇಳಿದರು- "ಮಗು, ಏನು ಮಾಡುತ್ತಿರುವೆ ಈ ಮಧ್ಯರಾತ್ರಿಯಲ್ಲಿ ?" ಬಾಲಕ ಹೇಳಿದ - "ನಮ್ಮಜ್ಜ ಇಲ್ಲಿ ದೇವರನ್ನು ಬಂಧಿಸಿ ಬಿಟ್ಟಿದ್ದಾನೆ. ಆತನನ್ನು ಮುಕ್ತಗೊಳಿಸುತ್ತಿರುವೆ!" ಆ ವ್ಯಕ್ತಿ ಹೇಳಿದ - "ನಿಮ್ಮ ಅಜ್ಜನಿಗೆ ಎಲ್ಲೋ ಭ್ರಮೆಯಾಗಿದೆ. ದೇವರನ್ನು ಬಂಧಿಸುವ ಶಕ್ತಿ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ! ದೇವರು ಜಗದಗಲ, ಮುಗಿಲಗಲ, ಮಿಗೆಯಗಲ!......... ನಿತ್ಯಮುಕ್ತ!" ಈ ಮಾತನ್ನು ಕೇಳುತ್ತಲೇ ಬಾಲಕನಿಗೆ ಅಪಾರ ಹರ್ಷವಾಯಿತು! ಆ ಬಾಲಕನನ್ನು ಸಂತೈಸಿದವನು ಬೇರೆ ಯಾರೂ ಅಲ್ಲ ದಯಾಸಾಗರನಾದ ದೇವರೇ!.
ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ
🔸🔸🔸🔸🔸🔸🔸🔸🔸
A solid truth :-
“When u start loving somebody, u start caring about yourself..
But when u start caring about others, somebody starts loving u….
🍀🌸🍀🌸🍀🌸🍀🌸🍀
Beautiful Tomorrow Never Comes !When It Comes,Its Already TODAY !In The Search For Beautiful Tomorrow,DON’T Lose Your Wonderful “TODAY”……..
ಜ್ಞಾನ ದೀವಿಗೆ:
🌻 ಬದುಕೇ ಬಂಗಾರ🌻
ನಮ್ಮ ಬದುಕನ್ನು ರೂಪಿಸುವ ಸಂಗತಿಗಳು ಒಂದಲ್ಲ, ಎರಡಲ್ಲ ಹತ್ತು ಹಲವು. ಸುತ್ತ ಮುತ್ತಲಿನ ನಿಸರ್ಗ, ಜನ, ವಸ್ತುಗಳು, ಘಟನೆಗಳು ಮೊದಲಾದವುಗಳು ನಮ್ಮ ಬದುಕನ್ನು ರೂಪಿಸುತ್ತವೆ. ನಮ್ಮ ಬದುಕು ಹೇಗೆ ಇರಬೇಕು ಎಂಬುದನ್ನು ಮೊದಲು ನಾವು ನಿರ್ಧರಿಸಬೇಕು. ಆ ಬಳಿಕ ನಾವು ಅದಕ್ಕೆ ತಕ್ಕ ಪರಿಸರ ನಿರ್ಮಿಸಿಕೊಳ್ಳಬೇಕು. ನಾವು ಬಯಸುವ ಬದುಕೇ ಬೇರೆ, ಪರಿಸರವೇ ಬೇರೆಯಾದರೆ ನಮ್ಮ ಬಯಕೆ ಕೈಗೂಡುವುದಿಲ್ಲ. ಕನಸು ನನಸಾಗುವುದಿಲ್ಲ, ಸಂಕಲ್ಪ ಸಾಕಾರವಾಗುವುದಿಲ್ಲ. ಅಂತೆಯೇ ಎಲ್ಲರೂ ಪರಿಸರಕ್ಕೆ ಹೆಚ್ಚಿನ ಮಹತ್ವ ನೀಡಿದರು. ನಾವಿರುವ ಪರಿಸರವು ಹಚ್ಚಹಸಿರಾಗಿದ್ದರೆ, ತಂಪು ತಂಪಾಗಿದ್ದರೆ ನಮ್ಮ ಮನಸ್ಸು ಅರಳುತ್ತದೆ. ಹಾಗಲ್ಲದೆ ಒಂದು ಹನಿ ನೀರಿಲ್ಲದ, ಒಂದು ಹಸಿರೆಲೆ ಇಲ್ಲದ ಮರುಭೂಮಿಯಲ್ಲಿ, ಬರಡು ಭೂಮಿಯಲ್ಲಿ ನಮ್ಮ ಮನಸ್ಸು ಅರಳುವುದು ಹೇಗೆ? ಜೀವನದಲ್ಲಿ ಸಂತಸದ ಸುಗಂಧ ತುಂಬಿ ಬರುವುದು ಹೇಗೆ? ಓರ್ವ ಸಂತರು ಹೇಳುತ್ತಾರೆ 'ಪರಿಸರವು ಸ್ವಚ್ಛವೂ ಸುಂದರವೂ ಆಗಿದ್ದರೆ ನಮ್ಮ ಬದುಕೇ ಬಂಗಾರವಾಗುತ್ತದೆ'.
ನಿರೂಪಣೆ: ಡಾ.ಶ್ರದ್ಧಾನಂದ ಶ್ರೀ
ಗುರುದೇವಾಶ್ರಮ, ಕಾಗವಾಡ, ಸದಲಗಾ
🔶 ದೇವನು ಅಬಂಧಿತ🔶
ಒಬ್ಬ ಆಗರ್ಭ ಸಿರಿವಂತ ಇದ್ದ. ಒಂದು ದಿನ ಆತನಿಗೆ ತನ್ನ ಸಂಪತ್ತಿನ ಬಲದಿಂದ ದೇವರನ್ನು ಹೇಗಾದರೂ ಬಂಧಿಸಬೇಕು ಎನಿಸಿತು. ಯಾರೋ ಹೇಳಿದರು- 'ಹಾಗಾದರೆ ನೀನು ಒಂದು ಭವ್ಯವಾದ ಮಂದಿರವನ್ನು ಕಟ್ಟು. ಖಂಡಿತವಾಗಿಯೂ ದೇವರು ಅದರಲ್ಲಿ ತಾನಾಗಿಯೇ ಬಂದು ನೆಲೆಸುತ್ತಾನೆ.!'
ಸಿರಿವಂತನು ದೇಶ - ವಿದೇಶಗಳಿಂದ ಪ್ರಸಿದ್ಧ ಶಿಲ್ಪಿಗಳನ್ನು ಕರೆಯಿಸಿದ. ಹತ್ತಾರು ವರುಷ ಅವರೆಲ್ಲ ದುಡಿದು ಸುಪ್ರಸಿದ್ದ ಸುಂದರ ಮಂದಿರ ಕಟ್ಟಿದರು. ಒಂದು ದಿನ ಶುಭಮುಹೂರ್ತದಲ್ಲಿ ದೇವರ ಮೂರ್ತಿಯ ಪ್ರತಿಷ್ಠಾಪನೆಯು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. 'ದೇವರು ನನ್ನ ಮಂದಿರದಲ್ಲಿ ಬಂಧಿತನಾದ!' ಎಂದು ಸಿರಿವಂತ ಭಾವಿಸಿದ. ಅದೇ ಸಂತಸದಲ್ಲಿ ಸಿರಿವಂತ ಮನೆಗೆ ಹೋಗಿ ಮಲಗಿದ. ಹತ್ತಿರದಲ್ಲಿಯೇ ಆತನ ಮೂಮ್ಮಗನೂ ಮಲಗಿದ್ದ.
"ನಮ್ಮಜ್ಜ ದೇವರನ್ನು ಮಂದಿರದಲ್ಲಿ ಕೂಡಿಹಾಕಿದ್ದಾನೆ. ಆತನನ್ನು ಮುಕ್ತಗೊಳಿಸಬೇಕು." ಎಂದು ಬಾಲಕ ಚಿಂತಿಸಿದ. ನಿದ್ರೆ ಬರಲಿಲ್ಲ. ಮಧ್ಯರಾತ್ರಿಯಲ್ಲಿ ಬಾಲಕನು ಅಜ್ಜನ ಪಕ್ಕದಲ್ಲಿದ್ದ ಕೀಲಿಕೈ ತೆಗೆದುಕೊಂಡು ಮಂದಿರಕ್ಕೆ ಬಂದ. ದೊಡ್ಡ ದೇವರ ಗುಡಿಗೆ ದೊಡ್ಡ ಕೀಲಿಕೈ ಹಾಕಲಾಗಿತ್ತು. ಬಾಲಕನಿಗೆ ಅದು ನಿಲುಕಲಿಲ್ಲ. ಆದರೂ ಆತ ಬಾಗಿಲ ಕೀಲಿತೆಗೆಯಲು ಪ್ರಯತ್ನಿಸುತ್ತಿದ್ದ. ಅಷ್ಟರಲ್ಲಿ ಹಿಂದಿನಿಂದ ಯಾರೋ ಬಾಲಕನ ಬೆನ್ನು ಚಪ್ಪರಿಸಿ ಕೇಳಿದರು- "ಮಗು, ಏನು ಮಾಡುತ್ತಿರುವೆ ಈ ಮಧ್ಯರಾತ್ರಿಯಲ್ಲಿ ?" ಬಾಲಕ ಹೇಳಿದ - "ನಮ್ಮಜ್ಜ ಇಲ್ಲಿ ದೇವರನ್ನು ಬಂಧಿಸಿ ಬಿಟ್ಟಿದ್ದಾನೆ. ಆತನನ್ನು ಮುಕ್ತಗೊಳಿಸುತ್ತಿರುವೆ!" ಆ ವ್ಯಕ್ತಿ ಹೇಳಿದ - "ನಿಮ್ಮ ಅಜ್ಜನಿಗೆ ಎಲ್ಲೋ ಭ್ರಮೆಯಾಗಿದೆ. ದೇವರನ್ನು ಬಂಧಿಸುವ ಶಕ್ತಿ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ! ದೇವರು ಜಗದಗಲ, ಮುಗಿಲಗಲ, ಮಿಗೆಯಗಲ!......... ನಿತ್ಯಮುಕ್ತ!" ಈ ಮಾತನ್ನು ಕೇಳುತ್ತಲೇ ಬಾಲಕನಿಗೆ ಅಪಾರ ಹರ್ಷವಾಯಿತು! ಆ ಬಾಲಕನನ್ನು ಸಂತೈಸಿದವನು ಬೇರೆ ಯಾರೂ ಅಲ್ಲ ದಯಾಸಾಗರನಾದ ದೇವರೇ!.
ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ
🔸🔸🔸🔸🔸🔸🔸🔸🔸
A solid truth :-
“When u start loving somebody, u start caring about yourself..
But when u start caring about others, somebody starts loving u….
🍀🌸🍀🌸🍀🌸🍀🌸🍀
Beautiful Tomorrow Never Comes !When It Comes,Its Already TODAY !In The Search For Beautiful Tomorrow,DON’T Lose Your Wonderful “TODAY”……..
ಜ್ಞಾನ ದೀವಿಗೆ:
🌻 ಬದುಕೇ ಬಂಗಾರ🌻
ನಮ್ಮ ಬದುಕನ್ನು ರೂಪಿಸುವ ಸಂಗತಿಗಳು ಒಂದಲ್ಲ, ಎರಡಲ್ಲ ಹತ್ತು ಹಲವು. ಸುತ್ತ ಮುತ್ತಲಿನ ನಿಸರ್ಗ, ಜನ, ವಸ್ತುಗಳು, ಘಟನೆಗಳು ಮೊದಲಾದವುಗಳು ನಮ್ಮ ಬದುಕನ್ನು ರೂಪಿಸುತ್ತವೆ. ನಮ್ಮ ಬದುಕು ಹೇಗೆ ಇರಬೇಕು ಎಂಬುದನ್ನು ಮೊದಲು ನಾವು ನಿರ್ಧರಿಸಬೇಕು. ಆ ಬಳಿಕ ನಾವು ಅದಕ್ಕೆ ತಕ್ಕ ಪರಿಸರ ನಿರ್ಮಿಸಿಕೊಳ್ಳಬೇಕು. ನಾವು ಬಯಸುವ ಬದುಕೇ ಬೇರೆ, ಪರಿಸರವೇ ಬೇರೆಯಾದರೆ ನಮ್ಮ ಬಯಕೆ ಕೈಗೂಡುವುದಿಲ್ಲ. ಕನಸು ನನಸಾಗುವುದಿಲ್ಲ, ಸಂಕಲ್ಪ ಸಾಕಾರವಾಗುವುದಿಲ್ಲ. ಅಂತೆಯೇ ಎಲ್ಲರೂ ಪರಿಸರಕ್ಕೆ ಹೆಚ್ಚಿನ ಮಹತ್ವ ನೀಡಿದರು. ನಾವಿರುವ ಪರಿಸರವು ಹಚ್ಚಹಸಿರಾಗಿದ್ದರೆ, ತಂಪು ತಂಪಾಗಿದ್ದರೆ ನಮ್ಮ ಮನಸ್ಸು ಅರಳುತ್ತದೆ. ಹಾಗಲ್ಲದೆ ಒಂದು ಹನಿ ನೀರಿಲ್ಲದ, ಒಂದು ಹಸಿರೆಲೆ ಇಲ್ಲದ ಮರುಭೂಮಿಯಲ್ಲಿ, ಬರಡು ಭೂಮಿಯಲ್ಲಿ ನಮ್ಮ ಮನಸ್ಸು ಅರಳುವುದು ಹೇಗೆ? ಜೀವನದಲ್ಲಿ ಸಂತಸದ ಸುಗಂಧ ತುಂಬಿ ಬರುವುದು ಹೇಗೆ? ಓರ್ವ ಸಂತರು ಹೇಳುತ್ತಾರೆ 'ಪರಿಸರವು ಸ್ವಚ್ಛವೂ ಸುಂದರವೂ ಆಗಿದ್ದರೆ ನಮ್ಮ ಬದುಕೇ ಬಂಗಾರವಾಗುತ್ತದೆ'.
ನಿರೂಪಣೆ: ಡಾ.ಶ್ರದ್ಧಾನಂದ ಶ್ರೀ
ಗುರುದೇವಾಶ್ರಮ, ಕಾಗವಾಡ, ಸದಲಗಾ
No comments:
Post a Comment