ಜ್ಞಾನದೀವಿಗೆ:
✨ ನಗುನಗುತಾ ನಲಿ✨
ಸತ್ಯದರ್ಶನ ಪಡೆದು ಸುಂದರ ಜೀವನ ಸಾಗಿಸುವುದಕ್ಕೆ ಕೆಲವು ಅಡತಡೆಗಳಿವೆ. ಅದರಲ್ಲಿ ಮೊದಲನೆಯದೆಂದರೆ ಮಮಕಾರ. ಇದೆಲ್ಲವೂ ನಾನು ಮಾಡಿದ್ದು, ನನ್ನಿಂದಲೇ ಆಯಿತು ಎನ್ನುವುದೇ ಮಮಕಾರ. ಈ ಜಗತ್ತಿನ ಒಡೆಯರು ನಾವಲ್ಲ. ಈ ರವಿ, ತಾರೆ, ಶಶಿಗಳನ್ನು ಬೆಳಗಿಸಿದವರು ನಾವಲ್ಲ. ಅಸಂಖ್ಯ ಗ್ರಹ-ತಾರೆಗಳನ್ನು, ನಭೋಮಂಡಲದಲ್ಲಿ ತೇಲಿಸಿ ಬಿಟ್ಟವರು ನಾವಲ್ಲ. ಒಬ್ಬ ಸೂರ್ಯನೇ ಹತ್ತು ಲಕ್ಷ ಭೂಮಿಗಳನ್ನೂ ನುಂಗಿ ಹಾಕುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಇಂಥ ಲಕ್ಷಾಂತರ ಸೂರ್ಯರು ಸೇರಿ ಒಂದು ಸೂರ್ಯಸಾಗರವಾಗುತ್ತದೆ. ಆ ಲಕ್ಷಾಂತರ ಸೂರ್ಯಸಾಗರಗಳು ಸೇರಿ ಈ ಬೃಹತ್ ಬ್ರಹ್ಮಾಂಡವಾಗಿದೆ. ಇಂಥ ವಿಶಾಲ ವಿಶ್ವವನ್ನು ಈ ಹುಲುಮಾನವನು ನಿರ್ಮಿಸಲು ಎಂದೆಂದಿಗೂ ಸಾಧ್ಯವಿಲ್ಲ!
ಪಶು, ಪಕ್ಷಿ, ಪ್ರಾಣಿ, ಹೂವು, ಹಣ್ಣು, ಕಾಯಿ, ಸಮಸ್ತ ಸಸ್ಯರಾಶಿ, ಜೀವಸಂಕುಲ ನಮ್ಮ್ಮಿಂದಾದುದಲ್ಲ. ನಾವು ಇಲ್ಲಿಗೆ ಬರುವ ಮೊದಲೇ ಎಲ್ಲವೂ ಇದೆ. ಸುಖ-ಶಾಂತಿಯ ಸುಂದರ ಜೀವನ ಸಾಗಿಸುವುದಕ್ಕೆ ಏನೇನು ಬೇಕೋ ಅದೆಲ್ಲವೂ ಇಲ್ಲಿದೆ. ಆ ಮಹಾದೇವನು ಮಾಡಿದ ಈ ಸತ್ಯಂ ಶಿವಂ ಸುಂದರಂ ಸೃಷ್ಟಿಯನ್ನು ನೋಡಿ ನಕ್ಕು, ನಲಿಯಲು ನಾವು ಇಲ್ಲಿಗೆ ಬಂದೆವು. ಏನಾದರೂ ಗಳಿಸಿ, ಉಳಿಸಿ ಅದರ ಮೇಲೆ ಅಧಿಕಾರ ಸ್ಥಾಪಿಸಲು ಬರಲಿಲ್ಲ.
ನಿರೂಪಣೆ: ಡಾ.ಶ್ರದ್ಧಾನಂದ ಶ್ರೀ
ಗುರುದೇವಾಶ್ರಮ, ಕಾಗವಾಡ, ಸದಲಗಾ
🔆 ಶಾಶ್ವತ ಪರಿಹಾರ🔆
ಒಬ್ಬ ಸಾಧು ಇದ್ದ. ಆತನ ಬಳಿಗೆ ಒಬ್ಬ ವ್ಯಕ್ತಿ ಹೋಗಿ, ತನ್ನ ಸಂಕಟವನ್ನು ಕಡಿಮೆ ಮಾಡುವಂತೆ ಕೇಳಿಕೊಂಡ. ಆಗ ಸಾಧು ಆತನಿಗೆ ಇಂದು 'ನಾನು ನಿನ್ನ ಒಂದು ಸಂಕಟವನ್ನು ಕಡಿಮೆ ಮಾಡಿದರೆ ನಾಳೆ ಇನ್ನೊಂದು ಸಂಕಟ ಎದುರಾಗುವುದಿಲ್ಲವೆಂದು ಭಾವಿಸುತ್ತಿರುವೆಯಾ?' ಎಂದು ಕೇಳಿದ. ಆತ 'ಯಾವುದೇ ಸಂಕಟ ಎದುರಾಗುವುದಿಲ್ಲವೆಂದು ಹೇಗೆ ಹೇಳಲಾಗುತ್ತದೆ. ಈ ಬದುಕೇ ಸಂಕಟಗಳ ಸರಮಾಲೆ' ಎಂದ. ಆಗ ಸಾಧು ಆತನಿಗೆ 'ನೀನು ನಾಳೆ ಮತ್ತೆ ಬರುವೆ, ನಾನು ನಿನ್ನ ಸಂಕಟವನ್ನು ದೂರ ಮಾಡುವೆ, ಆದರೆ ಮೂರನೇ ದಿನದ ಕಥೆ ಏನು? ಒಂದು ದಿನ ನಾನು ಇಲ್ಲವಾಗುತ್ತೇನೆ. ಆಗ ನಿನ್ನ ಸಂಕಟವನ್ನು ಯಾರು ಕಡಿಮೆ ಮಾಡುತ್ತಾರೆ? ಆದ್ದರಿಂದ ನೀನು ನನ್ನಿಂದ ನಿನ್ನ ಸಂಕಟಕ್ಕೆ ಸಮಾಧಾನವನ್ನು ಪಡೆಯಬೇಡ. ಬದಲಿಗೆ ನನ್ನಿಂದ ಅಂತಃದೃಷ್ಟಿಯನ್ನು ಬೇಡು. ಆ ಅಂತಃದೃಷ್ಟಿಯ ಸಹಾಯದಿಂದ ನಿನ್ನ ಎಲ್ಲಾ ರೀತಿಯ ಸಂಕಟವನ್ನು ಭರಿಸುವ ಸಾಮರ್ಥ್ಯ ನಿನಗೆ ದೊರೆಯುವುದು. ನೀನೇ ಸ್ವಯಂ ಸಮಾಧಾನವನ್ನು ಕಂಡುಕೊಳ್ಳಬಲ್ಲ ಮಾರ್ಗವನ್ನು ಕೇಳಿ ತಿಳಿದುಕೋ. ಒಬ್ಬ ಅಂಧ ವ್ಯಕ್ತಿ ನನ್ನ ಬಳಿಗೆ ಬಂದು ನಾನು ಈ ಕೋಣೆಯಿಂದ ಹೊರಗೆ ಹೋಗಬೇಕು ಬಾಗಿಲು ಎಲ್ಲಿದೆ ಎಂದು ಕೇಳಿದರೆ ನಾನು ಹೇಳಬಲ್ಲೆ. ಆತ ಪುನಃ ಮಾರನೆಯ ದಿನವೂ ಬಂದು ಬಾಗಿಲು ಎಲ್ಲದೆ? ಎಂದು ಕೇಳುತ್ತಾನೆ. ಇನ್ನೊಂದು ಮನೆಗೆ ಹೋದರೆ ಅಲ್ಲೂ ಸಹ ಬಾಗಿಲು ಎಲ್ಲಿದೆ ಎಂದು ಕೇಳುತ್ತಾನೆ. ಆತ ಯಾವುದೇ ಮನೆಗೆ ಹೋದರೂ ಬಾಗಿಲು ಎಲ್ಲಿದೆ ಎಂದು ಕೇಳುತ್ತಲೇ ಇರುತ್ತಾನೆ. ನನಗೆ ಆತನ ಮೇಲೆ ಅನುಕಂಪವಿದ್ದರೆ ಆಗ ಅವನಿಗೆ ಬಾಗಿಲು ಎಲ್ಲಿದೆ ಎಂದು ನಾನು ಹೇಳುವುದಿಲ್ಲ ಬದಲಿಗೆ ಆತನ ಕಣ್ಣುಗಳನ್ನು ಸರಿಪಡಿಸುವ ಉಪಾಯ ಹೇಳುತ್ತೇನೆ. ಬಾಗಿಲು ಎಲ್ಲಿದೆ ಎಂದು ಹೇಳುವುದರಿಂದ ಏನು ಪ್ರಯೋಜನ?! ಬಾಗಿಲು ಎಲ್ಲಿದೆ ಎಂದು ಹೇಳುವುದು ವಿಚಾರವನ್ನು ಕೊಟ್ಟಂತೆ. ವಿವೇಕವನ್ನು ಪಡೆಯುವಂತೆ ಮಾಡುವುದು ಕಣ್ಣನ್ನು ಸರಿಪಡಿಸಿದಂತೆ; ದೃಷ್ಟಿ ನೀಡಿದಂತೆ. ಬಾಗಿಲು ಎಲ್ಲಿದೆ ಎಂದು ತೋರಿಸಿ ನೀವು ಆತನ ಒಂದು ಸಂಕಟವನ್ನು ದೂರ ಮಾಡಬಹುದು. ಆದರೆ ಆತನ ಎಲ್ಲ ಸಮಸ್ಯೆಗಳೂ ಬಗೆ ಹರಿಯುವುದಿಲ್ಲ. ಆತನ ಸಮಸ್ಯೆಗಳು ಬಗೆಹರಿಯಲು ಆತನೊಳಗಿನ ಅಂತಃದೃಷ್ಟಿ ಜಾಗೃತವಾಗಬೇಕು, ಒಳಗಿನ ವಿವೇಕ ಜಾಗೃತವಾಗಬೇಕು.
ಆದ್ದರಿಂದಲೇ ಮಹಾವೀರ ತನ್ನ ವಿಚಾರವನ್ನು ಕಲಿಸಲಿಲ್ಲ ಬದಲಿಗೆ ವಿವೇಕವನ್ನು ತೋರಿಸಿಕೊಟ್ಟಿದ್ದಾನೆ. ನಿಮಗೆ ಯಾರಾದರೂ ಮಹಾವೀರನು ಇಂತಹ ವಿಚಾರವನ್ನು ಕಲಿಸಿದ ಎಂದು ಹೇಳಿದರೆ ಅವರು ನೂರಕ್ಕೆ ನೂರರಷ್ಟು ಅಸತ್ಯವನ್ನು ನುಡಿಯುತ್ತಿರುವರು. ಮಹಾವೀರ ಅಹಿಂಸೆ ಎಂಬ ವಿಚಾರವನ್ನು ಕಲಿಸಲಿಲ್ಲ; ಅಪರಿಗ್ರಹವನ್ನು ಕಲಿಸಲಿಲ್ಲ. ಆತ ಅಂತಃದೃಷ್ಟಿಯನ್ನು ಕಲಿಸಿದ. ಅಂತಃದೃಷ್ಟಿ ಜಾಗೃತವಾಗುವುದರೊಂದಿಗೆ ಅಹಿಂಸೆ ತಾನಾಗಿಯೇ ಬರುತ್ತದೆ. ಅಪರಿಗ್ರಹವೂ ತಾನಾಗಿಯೇ ಬರುತ್ತದೆ.
* ಓಶೋ
✨ ನಗುನಗುತಾ ನಲಿ✨
ಸತ್ಯದರ್ಶನ ಪಡೆದು ಸುಂದರ ಜೀವನ ಸಾಗಿಸುವುದಕ್ಕೆ ಕೆಲವು ಅಡತಡೆಗಳಿವೆ. ಅದರಲ್ಲಿ ಮೊದಲನೆಯದೆಂದರೆ ಮಮಕಾರ. ಇದೆಲ್ಲವೂ ನಾನು ಮಾಡಿದ್ದು, ನನ್ನಿಂದಲೇ ಆಯಿತು ಎನ್ನುವುದೇ ಮಮಕಾರ. ಈ ಜಗತ್ತಿನ ಒಡೆಯರು ನಾವಲ್ಲ. ಈ ರವಿ, ತಾರೆ, ಶಶಿಗಳನ್ನು ಬೆಳಗಿಸಿದವರು ನಾವಲ್ಲ. ಅಸಂಖ್ಯ ಗ್ರಹ-ತಾರೆಗಳನ್ನು, ನಭೋಮಂಡಲದಲ್ಲಿ ತೇಲಿಸಿ ಬಿಟ್ಟವರು ನಾವಲ್ಲ. ಒಬ್ಬ ಸೂರ್ಯನೇ ಹತ್ತು ಲಕ್ಷ ಭೂಮಿಗಳನ್ನೂ ನುಂಗಿ ಹಾಕುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಇಂಥ ಲಕ್ಷಾಂತರ ಸೂರ್ಯರು ಸೇರಿ ಒಂದು ಸೂರ್ಯಸಾಗರವಾಗುತ್ತದೆ. ಆ ಲಕ್ಷಾಂತರ ಸೂರ್ಯಸಾಗರಗಳು ಸೇರಿ ಈ ಬೃಹತ್ ಬ್ರಹ್ಮಾಂಡವಾಗಿದೆ. ಇಂಥ ವಿಶಾಲ ವಿಶ್ವವನ್ನು ಈ ಹುಲುಮಾನವನು ನಿರ್ಮಿಸಲು ಎಂದೆಂದಿಗೂ ಸಾಧ್ಯವಿಲ್ಲ!
ಪಶು, ಪಕ್ಷಿ, ಪ್ರಾಣಿ, ಹೂವು, ಹಣ್ಣು, ಕಾಯಿ, ಸಮಸ್ತ ಸಸ್ಯರಾಶಿ, ಜೀವಸಂಕುಲ ನಮ್ಮ್ಮಿಂದಾದುದಲ್ಲ. ನಾವು ಇಲ್ಲಿಗೆ ಬರುವ ಮೊದಲೇ ಎಲ್ಲವೂ ಇದೆ. ಸುಖ-ಶಾಂತಿಯ ಸುಂದರ ಜೀವನ ಸಾಗಿಸುವುದಕ್ಕೆ ಏನೇನು ಬೇಕೋ ಅದೆಲ್ಲವೂ ಇಲ್ಲಿದೆ. ಆ ಮಹಾದೇವನು ಮಾಡಿದ ಈ ಸತ್ಯಂ ಶಿವಂ ಸುಂದರಂ ಸೃಷ್ಟಿಯನ್ನು ನೋಡಿ ನಕ್ಕು, ನಲಿಯಲು ನಾವು ಇಲ್ಲಿಗೆ ಬಂದೆವು. ಏನಾದರೂ ಗಳಿಸಿ, ಉಳಿಸಿ ಅದರ ಮೇಲೆ ಅಧಿಕಾರ ಸ್ಥಾಪಿಸಲು ಬರಲಿಲ್ಲ.
ನಿರೂಪಣೆ: ಡಾ.ಶ್ರದ್ಧಾನಂದ ಶ್ರೀ
ಗುರುದೇವಾಶ್ರಮ, ಕಾಗವಾಡ, ಸದಲಗಾ
🔆 ಶಾಶ್ವತ ಪರಿಹಾರ🔆
ಒಬ್ಬ ಸಾಧು ಇದ್ದ. ಆತನ ಬಳಿಗೆ ಒಬ್ಬ ವ್ಯಕ್ತಿ ಹೋಗಿ, ತನ್ನ ಸಂಕಟವನ್ನು ಕಡಿಮೆ ಮಾಡುವಂತೆ ಕೇಳಿಕೊಂಡ. ಆಗ ಸಾಧು ಆತನಿಗೆ ಇಂದು 'ನಾನು ನಿನ್ನ ಒಂದು ಸಂಕಟವನ್ನು ಕಡಿಮೆ ಮಾಡಿದರೆ ನಾಳೆ ಇನ್ನೊಂದು ಸಂಕಟ ಎದುರಾಗುವುದಿಲ್ಲವೆಂದು ಭಾವಿಸುತ್ತಿರುವೆಯಾ?' ಎಂದು ಕೇಳಿದ. ಆತ 'ಯಾವುದೇ ಸಂಕಟ ಎದುರಾಗುವುದಿಲ್ಲವೆಂದು ಹೇಗೆ ಹೇಳಲಾಗುತ್ತದೆ. ಈ ಬದುಕೇ ಸಂಕಟಗಳ ಸರಮಾಲೆ' ಎಂದ. ಆಗ ಸಾಧು ಆತನಿಗೆ 'ನೀನು ನಾಳೆ ಮತ್ತೆ ಬರುವೆ, ನಾನು ನಿನ್ನ ಸಂಕಟವನ್ನು ದೂರ ಮಾಡುವೆ, ಆದರೆ ಮೂರನೇ ದಿನದ ಕಥೆ ಏನು? ಒಂದು ದಿನ ನಾನು ಇಲ್ಲವಾಗುತ್ತೇನೆ. ಆಗ ನಿನ್ನ ಸಂಕಟವನ್ನು ಯಾರು ಕಡಿಮೆ ಮಾಡುತ್ತಾರೆ? ಆದ್ದರಿಂದ ನೀನು ನನ್ನಿಂದ ನಿನ್ನ ಸಂಕಟಕ್ಕೆ ಸಮಾಧಾನವನ್ನು ಪಡೆಯಬೇಡ. ಬದಲಿಗೆ ನನ್ನಿಂದ ಅಂತಃದೃಷ್ಟಿಯನ್ನು ಬೇಡು. ಆ ಅಂತಃದೃಷ್ಟಿಯ ಸಹಾಯದಿಂದ ನಿನ್ನ ಎಲ್ಲಾ ರೀತಿಯ ಸಂಕಟವನ್ನು ಭರಿಸುವ ಸಾಮರ್ಥ್ಯ ನಿನಗೆ ದೊರೆಯುವುದು. ನೀನೇ ಸ್ವಯಂ ಸಮಾಧಾನವನ್ನು ಕಂಡುಕೊಳ್ಳಬಲ್ಲ ಮಾರ್ಗವನ್ನು ಕೇಳಿ ತಿಳಿದುಕೋ. ಒಬ್ಬ ಅಂಧ ವ್ಯಕ್ತಿ ನನ್ನ ಬಳಿಗೆ ಬಂದು ನಾನು ಈ ಕೋಣೆಯಿಂದ ಹೊರಗೆ ಹೋಗಬೇಕು ಬಾಗಿಲು ಎಲ್ಲಿದೆ ಎಂದು ಕೇಳಿದರೆ ನಾನು ಹೇಳಬಲ್ಲೆ. ಆತ ಪುನಃ ಮಾರನೆಯ ದಿನವೂ ಬಂದು ಬಾಗಿಲು ಎಲ್ಲದೆ? ಎಂದು ಕೇಳುತ್ತಾನೆ. ಇನ್ನೊಂದು ಮನೆಗೆ ಹೋದರೆ ಅಲ್ಲೂ ಸಹ ಬಾಗಿಲು ಎಲ್ಲಿದೆ ಎಂದು ಕೇಳುತ್ತಾನೆ. ಆತ ಯಾವುದೇ ಮನೆಗೆ ಹೋದರೂ ಬಾಗಿಲು ಎಲ್ಲಿದೆ ಎಂದು ಕೇಳುತ್ತಲೇ ಇರುತ್ತಾನೆ. ನನಗೆ ಆತನ ಮೇಲೆ ಅನುಕಂಪವಿದ್ದರೆ ಆಗ ಅವನಿಗೆ ಬಾಗಿಲು ಎಲ್ಲಿದೆ ಎಂದು ನಾನು ಹೇಳುವುದಿಲ್ಲ ಬದಲಿಗೆ ಆತನ ಕಣ್ಣುಗಳನ್ನು ಸರಿಪಡಿಸುವ ಉಪಾಯ ಹೇಳುತ್ತೇನೆ. ಬಾಗಿಲು ಎಲ್ಲಿದೆ ಎಂದು ಹೇಳುವುದರಿಂದ ಏನು ಪ್ರಯೋಜನ?! ಬಾಗಿಲು ಎಲ್ಲಿದೆ ಎಂದು ಹೇಳುವುದು ವಿಚಾರವನ್ನು ಕೊಟ್ಟಂತೆ. ವಿವೇಕವನ್ನು ಪಡೆಯುವಂತೆ ಮಾಡುವುದು ಕಣ್ಣನ್ನು ಸರಿಪಡಿಸಿದಂತೆ; ದೃಷ್ಟಿ ನೀಡಿದಂತೆ. ಬಾಗಿಲು ಎಲ್ಲಿದೆ ಎಂದು ತೋರಿಸಿ ನೀವು ಆತನ ಒಂದು ಸಂಕಟವನ್ನು ದೂರ ಮಾಡಬಹುದು. ಆದರೆ ಆತನ ಎಲ್ಲ ಸಮಸ್ಯೆಗಳೂ ಬಗೆ ಹರಿಯುವುದಿಲ್ಲ. ಆತನ ಸಮಸ್ಯೆಗಳು ಬಗೆಹರಿಯಲು ಆತನೊಳಗಿನ ಅಂತಃದೃಷ್ಟಿ ಜಾಗೃತವಾಗಬೇಕು, ಒಳಗಿನ ವಿವೇಕ ಜಾಗೃತವಾಗಬೇಕು.
ಆದ್ದರಿಂದಲೇ ಮಹಾವೀರ ತನ್ನ ವಿಚಾರವನ್ನು ಕಲಿಸಲಿಲ್ಲ ಬದಲಿಗೆ ವಿವೇಕವನ್ನು ತೋರಿಸಿಕೊಟ್ಟಿದ್ದಾನೆ. ನಿಮಗೆ ಯಾರಾದರೂ ಮಹಾವೀರನು ಇಂತಹ ವಿಚಾರವನ್ನು ಕಲಿಸಿದ ಎಂದು ಹೇಳಿದರೆ ಅವರು ನೂರಕ್ಕೆ ನೂರರಷ್ಟು ಅಸತ್ಯವನ್ನು ನುಡಿಯುತ್ತಿರುವರು. ಮಹಾವೀರ ಅಹಿಂಸೆ ಎಂಬ ವಿಚಾರವನ್ನು ಕಲಿಸಲಿಲ್ಲ; ಅಪರಿಗ್ರಹವನ್ನು ಕಲಿಸಲಿಲ್ಲ. ಆತ ಅಂತಃದೃಷ್ಟಿಯನ್ನು ಕಲಿಸಿದ. ಅಂತಃದೃಷ್ಟಿ ಜಾಗೃತವಾಗುವುದರೊಂದಿಗೆ ಅಹಿಂಸೆ ತಾನಾಗಿಯೇ ಬರುತ್ತದೆ. ಅಪರಿಗ್ರಹವೂ ತಾನಾಗಿಯೇ ಬರುತ್ತದೆ.
* ಓಶೋ
No comments:
Post a Comment