💥ರೂಪಕ್ಕೆ ಗುಣವೇ ಭೂಷಣ💥
ಮನೆಯಲ್ಲಿ ಕೊಳಕಿದ್ದರೆ ಶುದ್ಧ ಮಾಡಬಹುದು. ಹಾಗೆಯೇ ಮನಸ್ಸನ್ನು ಶುದ್ಧ ಮಾಡಲು ಸಾಧ್ಯವಿಲ್ಲ. ಯಾರಾದರೂ ನಮ್ಮನ್ನು ಬೈದರೆ ಕೋಪ ಬರುತ್ತದೆ. ಈ ಕೋಪವನ್ನು ಗೆಲ್ಲುವುದು ಹೇಗೆ? ಅವುಗಳನ್ನು ತ್ಯಜಿಸುವುದಕ್ಕಿಂತ ಮೊದಲು ಅದರ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು. ಅವು ಹೇಗೆ ಬರುತ್ತವೆ? ಅವುಗಳಿಂದ ನಮ್ಮಲ್ಲಾಗುವ ಬದಲಾವಣೆಗಳೇನು? ಇವನ್ನು ಚಿಂತಿಸಬೇಕು. ಹೀಗೆ ಮಾಡಿದಾಗ ತಾನಾಗಿಯೇ ಉತ್ತರ ಸಿಗುತ್ತದೆ.
ಸಮಗ್ರವಾಗಿ ಹೇಳುವುದಾದರೆ, ನಮ್ಮ ಮೊದಲ ತೊಂದರೆಯೆಂದರೆ ಮನಸ್ಸಿನ ಕಲ್ಮಷಗಳನ್ನು ತಿಳಿಯದೆ ಇರುವುದು. ಅವು ವ್ಯಕ್ತವಾದಾಗ ತಾತ್ಕಾಲಿಕವಾಗಿ ಅರಿತಿರುತ್ತೇವೆ. ಆದರೆ ನಮಗೆ ಅವುಗಳ ನೈಜ ರೂಪ ಗೊತ್ತಿಲ್ಲ. ಅವು ನಮ್ಮಲ್ಲಿ ಮಾಡುವ ಅಡಚಣೆಗಳನ್ನು ಗಮನಿಸದಿರುವುದು. ಅವುಗಳಿಂದುಂಟಾಗುವ ತೊಂದರೆಗಳನ್ನು ಕಲ್ಮಷವೆಂದು ಪರಿಗಣಿಸದೆ, ನಾವು ಸಾಮಾನ್ಯ ಮನುಷ್ಯರು, ಇವನ್ನು ಅನುಭವಿಸಬೇಕೆಂದು ಅಂದುಕೊಳ್ಳುವುದು. ಚಂಚಲತೆಯನ್ನೇ ಸರಿಯೆಂದು ಸುಮ್ಮನಾಗುವುದು. ಇದೇ ನಾವು ಮಾಡುವ ದೊಡ್ಡ ತಪ್ಪು. ಇಷ್ಟು ಮಾತ್ರವಲ್ಲದೆ, ಕೆಲವು ತಪ್ಪು ಅಭಿಪ್ರಾಯಗಳನ್ನು ಸತ್ಯವೆಂದು ವಾದಿಸುವುದು.
ಉದಾಹರಣೆಗೆ ‘ಈ ಜಗತ್ತಿನಲ್ಲಿ ಕೋಪ ಮಾಡಿಕೊಳ್ಳದಿದ್ದರೆ ಏನೂ ಮಾಡಲಿಕ್ಕಾಗುವುದಿಲ್ಲ, ಕೋಪ ಮಾಡಿಕೊಳ್ಳದಿದ್ದರೆ ಜನ ನನ್ನನ್ನು ಗೌರವಿಸುವುದಿಲ್ಲ, ಕೋಪ ಮಾಡಿಕೊಳ್ಳುವುದು ಸರಿ’ - ಹೀಗೆ ವಾದಿಸುತ್ತ ತಮ್ಮ ತಪ್ಪನ್ನು ಸರಿಯೆಂದು ಸಮರ್ಥಿಸಿಕೊಳ್ಳುತ್ತಾರೆ. ಜೀವನದಲ್ಲಿ ಕೋಪ ಬೇಕು, ಅದು ನಮ್ಮ ಅಧಿನದಲ್ಲಿರಬೇಕು. ಆದರೆ ನಾವು ಸಾಮಾನ್ಯವಾಗಿ ಅದರ ಅಧಿನದಲ್ಲೇ ಇರುತ್ತೇವೆ. ಅದಕ್ಕಾಗಿ ಸಾಧನೆ ಬೇಕು. ಕೆಟ್ಟ ಗುಣಗಳನ್ನು ತ್ಯಜಿಸಬೇಕು. ಸದ್ಗುಣಗಳನ್ನು ವೃದ್ಧಿಸಿಕೊಳ್ಳಬೇಕು. ‘ನರಸ್ಯ ಆಭರಣಂ ರೂಪಂ, ರೂಪಸ್ಯ ಆಭರಣಂ ಗುಣಃ’ ಮನುಷ್ಯನಿಗೆ ಆತನ ರೂಪವೇ ಆಭರಣ, ಆ ರೂಪಕ್ಕೆ ಗುಣವೇ ಭೂಷಣ.
Swami adityanand saraswati
#ಶ್ರೀವಾಣಿ
🌸🌼🌸🌼🌸🌼🌸🌼🌸🌼
ಎಷ್ಟೋ ಸಲ ಅನಿಸುತ್ತದೆ. ನನಗೂ ಪ್ರಶ್ನೆ ಬರುತ್ತದೆ, ನಿಮಗೂ ಬರುತ್ತದೆ.
ಬದುಕಿನ ಉದ್ದೇಶವೇನು?
We have to live beatifully, richly.
ನಾವು
ಚಂದವಾಗಿರಬೇಕು
ಸ್ವಚ್ಛವಾಗಿರಬೇಕು
ಸುಂದರವಾಗಿರಬೇಕು
ಸಮೃದ್ಧವಾಗಿರಬೇಕು.
ನಮ್ಮ ಬದುಕು ನಮಗೆ ಆನಂದವಾಗಬೇಕು. ಹಾಗೆ ನಾವು ಬದುಕಬೇಕು ಅಂತ.
ನಿಸರ್ಗ ಏನೆಲ್ಲಾ ಮಾಡಿ ಒಂದು ರೂಪ ಕೊಟ್ಟಿದೆ. ಇಂತಹ ಬದುಕನ್ನು ಎಲ್ಲಾದರೂ ಹೇಗಾದರೂ ಚಲ್ಲಬಾರದು.
ಬದುಕಿನ
ಕ್ಷಣ
ಕ್ಷಣ
ಕ್ಷಣ
ಕ್ಷಣ
ಬಹಳ ಮಹತ್ವದ್ದು.
ಬದುಕು ಇಡಿಯಾಗಿ ಬರುವುದಿಲ್ಲ. ಈಗ ನನಗೆ ನೂರು ವರ್ಷ ಅಂದರೆ ಅವು ಒಂದೇ ಸಲಕ್ಕೆ ಬರುತ್ತವೇನು?
ಇಲ್ಲ ಕ್ಷಣ ಕ್ಷಣ ಕ್ಷಣವಾಗಿ ಬರುತ್ತವೆ.
ಬದುಕು ಅಂದರೆ ಕ್ಷಣ.
ನೂರು ವರ್ಷ ಇದ್ದರೂ ಸಹಿತ ಅದು ಬರುವುದು ಕ್ಷಣ ಕ್ಷಣವಾಗಿ. ನೀವು ಎಷ್ಟೇ ದೊಡ್ಡವರಿರಬಹುದು. ಬದುಕು ಒಮ್ಮೆಲೆ ಒಂದು ದಿವಸ ಬರುವುದಿಲ್ಲ ಅಥವಾ ಒಂದು ವರ್ಷ ಒಂದೇ ಸಲಕ್ಕೆ ಬರುವುದಿಲ್ಲ.
ನೀವಿರಲಿ, ನಾನಿರಲಿ ಯಾರಿದ್ದರೂ ಸಹಿತ ಕ್ಷಣ ಕ್ಷಣ ಕ್ಷಣ.
ಅಂದರೆ ಪ್ರತಿ ಕ್ಷಣವೂ ಬದುಕು.
Every minute is a life.
ಅಲ್ಲವೇನು?
ಈ ಕ್ಷಣ ಸುಂದರವಾದರೆ ಬದುಕು ಸುಂದರ. ಈ ಕ್ಷಣ ಹೊಲಸಾಯಿತು ಅಂದರೆ ಬದುಕು ಹೊಲಸಾಗುತ್ತದೆ. ಈ ಕ್ಷಣ ಶ್ರೀಮಂತವಾದರೆ ಬದುಕು ಶ್ರೀಮಂತ. ಈ ಕ್ಷಣ ಬಡವಾಯಿತು ಬದುಕು ಬಡವ. ಕ್ಷಣ ಬಹಳ ಮಹತ್ವದ್ದು. ಎಷ್ಟು ಅದ್ಭುತವಾಗಿದೆ. ಜಗತ್ತು ಇರುವುದೇ ಈ ರೀತಿ. ಕ್ಷಣ ಕ್ಷಣವಾಗಿ ಬರುತ್ತಾ ಇರುತ್ತದೆ.
ಆದರೆ ನಾವೇನು ಮಾಡುತ್ತೇವೆ?! ನಾವು ಈ ಕ್ಷಣದಲ್ಲಿ ಇರುತ್ತೇವೆ, ನಮ್ಮ ಮನಸ್ಸು ಹಿಂದಿನ ಕ್ಷಣದಲ್ಲಿ ಇರುತ್ತದೆ. ಆದ್ದರಿಂದಲೆ ಈ ಕ್ಷಣದ ಅನುಭವವಿಲ್ಲ, ಹಿಂದಿನ ಕ್ಷಣದಲ್ಲಿ ತಾಪ ತಪ್ಪುವುದಿಲ್ಲ. ನಾವು ಯಾವಾಗಲೂ ಹಿಂದಿನ ಕ್ಷಣದಲ್ಲಿ ಇರುವ ಪ್ರಯತ್ನ ಮಾಡುತ್ತೇವೆ. ಇಲ್ಲವೇ ಬಹಳ ಮುಂದಿನ ಕ್ಷಣಗಳಲ್ಲಿ ಇರುವ ಪ್ರಯತ್ನ ಮಾಡುತ್ತೇವೆ.
ಇರಬಾರದು ಅಂತಲ್ಲ. ಎಷ್ಟು ಅವಶ್ಯವಿದೆಯೋ ಅಷ್ಟು ಇರಬೇಕು. ಈ ಕ್ಷಣ ಕೆಡದಂತೆ ಹಿಂದಿನ ಕ್ಷಣಗಳನ್ನು ನಾವು ನೆನಪು ಮಾಡಿಕೊಂಡಿರುವುದು. ಈ ಕ್ಷಣ ಕೆಡದಂತೆ ಭಾವೀ ಕ್ಷಣಗಳನ್ನು ಭಾವಿಸಿಕೊಂಡಿರುವುದು. ಈ ಕ್ಷಣ ಕೆಡಬಾರದು. ಈ ಕ್ಷಣಕ್ಕೆ ಬಹಳ ಮಹತ್ವವಿದೆ. ನೂರು ವರ್ಷ ನಾವು ಬದುಕುವುದಿಲ್ಲ.
We live only for a movement.
ಯಾವ ಕ್ಷಣ ಇದ್ದರೂ, ಬಹಳ ಕ್ಷಣ ಇದ್ದರೂ ನಾವು ಬದುಕುತ್ತಿರುವುದು ಒಂದು ಕ್ಷಣ ಮಾತ್ರ. ಆದ್ದರಿಂದ ಕ್ಷಣದ ಬಗ್ಗೆ ಮಹತ್ವವಿರಬೇಕು. ಕ್ಷಣ ಯಾವಾಗ ಶ್ರೀಮಂತವಾಗುತ್ತದೆ? ಬದುಕು ಯಾವಾಗ ಶ್ರೀಮಂತವಾಗುತ್ತದೆ?
ಆ ಕ್ಷಣವನ್ನು ಚೆನ್ನಾಗಿ ಬಳಸಿದಾಗ.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು.
ಮನೆಯಲ್ಲಿ ಕೊಳಕಿದ್ದರೆ ಶುದ್ಧ ಮಾಡಬಹುದು. ಹಾಗೆಯೇ ಮನಸ್ಸನ್ನು ಶುದ್ಧ ಮಾಡಲು ಸಾಧ್ಯವಿಲ್ಲ. ಯಾರಾದರೂ ನಮ್ಮನ್ನು ಬೈದರೆ ಕೋಪ ಬರುತ್ತದೆ. ಈ ಕೋಪವನ್ನು ಗೆಲ್ಲುವುದು ಹೇಗೆ? ಅವುಗಳನ್ನು ತ್ಯಜಿಸುವುದಕ್ಕಿಂತ ಮೊದಲು ಅದರ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು. ಅವು ಹೇಗೆ ಬರುತ್ತವೆ? ಅವುಗಳಿಂದ ನಮ್ಮಲ್ಲಾಗುವ ಬದಲಾವಣೆಗಳೇನು? ಇವನ್ನು ಚಿಂತಿಸಬೇಕು. ಹೀಗೆ ಮಾಡಿದಾಗ ತಾನಾಗಿಯೇ ಉತ್ತರ ಸಿಗುತ್ತದೆ.
ಸಮಗ್ರವಾಗಿ ಹೇಳುವುದಾದರೆ, ನಮ್ಮ ಮೊದಲ ತೊಂದರೆಯೆಂದರೆ ಮನಸ್ಸಿನ ಕಲ್ಮಷಗಳನ್ನು ತಿಳಿಯದೆ ಇರುವುದು. ಅವು ವ್ಯಕ್ತವಾದಾಗ ತಾತ್ಕಾಲಿಕವಾಗಿ ಅರಿತಿರುತ್ತೇವೆ. ಆದರೆ ನಮಗೆ ಅವುಗಳ ನೈಜ ರೂಪ ಗೊತ್ತಿಲ್ಲ. ಅವು ನಮ್ಮಲ್ಲಿ ಮಾಡುವ ಅಡಚಣೆಗಳನ್ನು ಗಮನಿಸದಿರುವುದು. ಅವುಗಳಿಂದುಂಟಾಗುವ ತೊಂದರೆಗಳನ್ನು ಕಲ್ಮಷವೆಂದು ಪರಿಗಣಿಸದೆ, ನಾವು ಸಾಮಾನ್ಯ ಮನುಷ್ಯರು, ಇವನ್ನು ಅನುಭವಿಸಬೇಕೆಂದು ಅಂದುಕೊಳ್ಳುವುದು. ಚಂಚಲತೆಯನ್ನೇ ಸರಿಯೆಂದು ಸುಮ್ಮನಾಗುವುದು. ಇದೇ ನಾವು ಮಾಡುವ ದೊಡ್ಡ ತಪ್ಪು. ಇಷ್ಟು ಮಾತ್ರವಲ್ಲದೆ, ಕೆಲವು ತಪ್ಪು ಅಭಿಪ್ರಾಯಗಳನ್ನು ಸತ್ಯವೆಂದು ವಾದಿಸುವುದು.
ಉದಾಹರಣೆಗೆ ‘ಈ ಜಗತ್ತಿನಲ್ಲಿ ಕೋಪ ಮಾಡಿಕೊಳ್ಳದಿದ್ದರೆ ಏನೂ ಮಾಡಲಿಕ್ಕಾಗುವುದಿಲ್ಲ, ಕೋಪ ಮಾಡಿಕೊಳ್ಳದಿದ್ದರೆ ಜನ ನನ್ನನ್ನು ಗೌರವಿಸುವುದಿಲ್ಲ, ಕೋಪ ಮಾಡಿಕೊಳ್ಳುವುದು ಸರಿ’ - ಹೀಗೆ ವಾದಿಸುತ್ತ ತಮ್ಮ ತಪ್ಪನ್ನು ಸರಿಯೆಂದು ಸಮರ್ಥಿಸಿಕೊಳ್ಳುತ್ತಾರೆ. ಜೀವನದಲ್ಲಿ ಕೋಪ ಬೇಕು, ಅದು ನಮ್ಮ ಅಧಿನದಲ್ಲಿರಬೇಕು. ಆದರೆ ನಾವು ಸಾಮಾನ್ಯವಾಗಿ ಅದರ ಅಧಿನದಲ್ಲೇ ಇರುತ್ತೇವೆ. ಅದಕ್ಕಾಗಿ ಸಾಧನೆ ಬೇಕು. ಕೆಟ್ಟ ಗುಣಗಳನ್ನು ತ್ಯಜಿಸಬೇಕು. ಸದ್ಗುಣಗಳನ್ನು ವೃದ್ಧಿಸಿಕೊಳ್ಳಬೇಕು. ‘ನರಸ್ಯ ಆಭರಣಂ ರೂಪಂ, ರೂಪಸ್ಯ ಆಭರಣಂ ಗುಣಃ’ ಮನುಷ್ಯನಿಗೆ ಆತನ ರೂಪವೇ ಆಭರಣ, ಆ ರೂಪಕ್ಕೆ ಗುಣವೇ ಭೂಷಣ.
Swami adityanand saraswati
#ಶ್ರೀವಾಣಿ
🌸🌼🌸🌼🌸🌼🌸🌼🌸🌼
ಎಷ್ಟೋ ಸಲ ಅನಿಸುತ್ತದೆ. ನನಗೂ ಪ್ರಶ್ನೆ ಬರುತ್ತದೆ, ನಿಮಗೂ ಬರುತ್ತದೆ.
ಬದುಕಿನ ಉದ್ದೇಶವೇನು?
We have to live beatifully, richly.
ನಾವು
ಚಂದವಾಗಿರಬೇಕು
ಸ್ವಚ್ಛವಾಗಿರಬೇಕು
ಸುಂದರವಾಗಿರಬೇಕು
ಸಮೃದ್ಧವಾಗಿರಬೇಕು.
ನಮ್ಮ ಬದುಕು ನಮಗೆ ಆನಂದವಾಗಬೇಕು. ಹಾಗೆ ನಾವು ಬದುಕಬೇಕು ಅಂತ.
ನಿಸರ್ಗ ಏನೆಲ್ಲಾ ಮಾಡಿ ಒಂದು ರೂಪ ಕೊಟ್ಟಿದೆ. ಇಂತಹ ಬದುಕನ್ನು ಎಲ್ಲಾದರೂ ಹೇಗಾದರೂ ಚಲ್ಲಬಾರದು.
ಬದುಕಿನ
ಕ್ಷಣ
ಕ್ಷಣ
ಕ್ಷಣ
ಕ್ಷಣ
ಬಹಳ ಮಹತ್ವದ್ದು.
ಬದುಕು ಇಡಿಯಾಗಿ ಬರುವುದಿಲ್ಲ. ಈಗ ನನಗೆ ನೂರು ವರ್ಷ ಅಂದರೆ ಅವು ಒಂದೇ ಸಲಕ್ಕೆ ಬರುತ್ತವೇನು?
ಇಲ್ಲ ಕ್ಷಣ ಕ್ಷಣ ಕ್ಷಣವಾಗಿ ಬರುತ್ತವೆ.
ಬದುಕು ಅಂದರೆ ಕ್ಷಣ.
ನೂರು ವರ್ಷ ಇದ್ದರೂ ಸಹಿತ ಅದು ಬರುವುದು ಕ್ಷಣ ಕ್ಷಣವಾಗಿ. ನೀವು ಎಷ್ಟೇ ದೊಡ್ಡವರಿರಬಹುದು. ಬದುಕು ಒಮ್ಮೆಲೆ ಒಂದು ದಿವಸ ಬರುವುದಿಲ್ಲ ಅಥವಾ ಒಂದು ವರ್ಷ ಒಂದೇ ಸಲಕ್ಕೆ ಬರುವುದಿಲ್ಲ.
ನೀವಿರಲಿ, ನಾನಿರಲಿ ಯಾರಿದ್ದರೂ ಸಹಿತ ಕ್ಷಣ ಕ್ಷಣ ಕ್ಷಣ.
ಅಂದರೆ ಪ್ರತಿ ಕ್ಷಣವೂ ಬದುಕು.
Every minute is a life.
ಅಲ್ಲವೇನು?
ಈ ಕ್ಷಣ ಸುಂದರವಾದರೆ ಬದುಕು ಸುಂದರ. ಈ ಕ್ಷಣ ಹೊಲಸಾಯಿತು ಅಂದರೆ ಬದುಕು ಹೊಲಸಾಗುತ್ತದೆ. ಈ ಕ್ಷಣ ಶ್ರೀಮಂತವಾದರೆ ಬದುಕು ಶ್ರೀಮಂತ. ಈ ಕ್ಷಣ ಬಡವಾಯಿತು ಬದುಕು ಬಡವ. ಕ್ಷಣ ಬಹಳ ಮಹತ್ವದ್ದು. ಎಷ್ಟು ಅದ್ಭುತವಾಗಿದೆ. ಜಗತ್ತು ಇರುವುದೇ ಈ ರೀತಿ. ಕ್ಷಣ ಕ್ಷಣವಾಗಿ ಬರುತ್ತಾ ಇರುತ್ತದೆ.
ಆದರೆ ನಾವೇನು ಮಾಡುತ್ತೇವೆ?! ನಾವು ಈ ಕ್ಷಣದಲ್ಲಿ ಇರುತ್ತೇವೆ, ನಮ್ಮ ಮನಸ್ಸು ಹಿಂದಿನ ಕ್ಷಣದಲ್ಲಿ ಇರುತ್ತದೆ. ಆದ್ದರಿಂದಲೆ ಈ ಕ್ಷಣದ ಅನುಭವವಿಲ್ಲ, ಹಿಂದಿನ ಕ್ಷಣದಲ್ಲಿ ತಾಪ ತಪ್ಪುವುದಿಲ್ಲ. ನಾವು ಯಾವಾಗಲೂ ಹಿಂದಿನ ಕ್ಷಣದಲ್ಲಿ ಇರುವ ಪ್ರಯತ್ನ ಮಾಡುತ್ತೇವೆ. ಇಲ್ಲವೇ ಬಹಳ ಮುಂದಿನ ಕ್ಷಣಗಳಲ್ಲಿ ಇರುವ ಪ್ರಯತ್ನ ಮಾಡುತ್ತೇವೆ.
ಇರಬಾರದು ಅಂತಲ್ಲ. ಎಷ್ಟು ಅವಶ್ಯವಿದೆಯೋ ಅಷ್ಟು ಇರಬೇಕು. ಈ ಕ್ಷಣ ಕೆಡದಂತೆ ಹಿಂದಿನ ಕ್ಷಣಗಳನ್ನು ನಾವು ನೆನಪು ಮಾಡಿಕೊಂಡಿರುವುದು. ಈ ಕ್ಷಣ ಕೆಡದಂತೆ ಭಾವೀ ಕ್ಷಣಗಳನ್ನು ಭಾವಿಸಿಕೊಂಡಿರುವುದು. ಈ ಕ್ಷಣ ಕೆಡಬಾರದು. ಈ ಕ್ಷಣಕ್ಕೆ ಬಹಳ ಮಹತ್ವವಿದೆ. ನೂರು ವರ್ಷ ನಾವು ಬದುಕುವುದಿಲ್ಲ.
We live only for a movement.
ಯಾವ ಕ್ಷಣ ಇದ್ದರೂ, ಬಹಳ ಕ್ಷಣ ಇದ್ದರೂ ನಾವು ಬದುಕುತ್ತಿರುವುದು ಒಂದು ಕ್ಷಣ ಮಾತ್ರ. ಆದ್ದರಿಂದ ಕ್ಷಣದ ಬಗ್ಗೆ ಮಹತ್ವವಿರಬೇಕು. ಕ್ಷಣ ಯಾವಾಗ ಶ್ರೀಮಂತವಾಗುತ್ತದೆ? ಬದುಕು ಯಾವಾಗ ಶ್ರೀಮಂತವಾಗುತ್ತದೆ?
ಆ ಕ್ಷಣವನ್ನು ಚೆನ್ನಾಗಿ ಬಳಸಿದಾಗ.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು.
No comments:
Post a Comment