ನಮ್ಮ ದೇಹದಲ್ಲೇ ಇದೆ ವಿಭಿನ್ನತೆ!
ಡಾ. ಗಿರಿಧರ ಕಜೆ ಎಂ.ಡಿ.(ಆಯು)
ಒಬ್ಬವ್ಯಕ್ತಿ ಒಂದೇ ದೇಹಪ್ರಕೃತಿಯ ಲಕ್ಷಣಗಳನ್ನು ಹೊಂದಿರುವುದಿಲ್ಲ. ಬದಲಾಗಿ, ಮೂರು ಪ್ರಕೃತಿಗಳ ವಿಭಿನ್ನ ಗುಣಗಳ ಸಮೂಹವಾಗಿರುತ್ತಾನೆ. ಯಾವ ಪ್ರಕೃತಿಯ ಗುಣಗಳು ಓರ್ವನಲ್ಲಿ ಅಧಿಕವಾಗಿದೆಯೋ ಅದರ ಆಧಾರದಲ್ಲಿ ಆ ವ್ಯಕ್ತಿಯ ಪ್ರಕೃತಿ ನಿರ್ಧರಿತವಾಗುತ್ತದೆ. ಇಂತಹ ಪಮ್ಯರ್ುಟೇಶನ್ ಮತ್ತು ಕಾಂಬಿನೇಶನ್ನಿಂದಾಗಿ ವ್ಯಕ್ತಿತ್ವವು ಒಬ್ಬರಿಂದ ಒಬ್ಬರಿಗೆ ಸಂಪೂರ್ಣ ವಾಗಿ ಭಿನ್ನವಾಗುತ್ತ ಹೋಗುತ್ತದೆ. ನ್ಯಾಯವೈದ್ಯಶಾಸ್ತ್ರದ ಪ್ರಕಾರ ಜಗತ್ತಿನಲ್ಲಿ ಹೆಚ್ಚೆಂದರೆ ಕೇವಲ ಹತ್ತುಮಂದಿಗೆ ಬೆರಳಚ್ಚು ಒಂದೇ ಸಮನಾಗಿ ಇರಲೂಬಹುದು! ಜೀವಜಗತ್ತಿನಲ್ಲಿ ಎಷ್ಟೊಂದು ವೈವಿಧ್ಯ. ಇದಕ್ಕೆ ನಮ್ಮ ಶರೀರಪ್ರಕೃತಿಯೂ ಹೊರತಲ್ಲ. ಆದ್ದರಿಂದಲೇ ಸಮನಾದ ಹೆಸರಿನ ಒಂದೇ ಆಹಾರ-ವಿಹಾರ-ಆಚಾರ-ಸಂಸ್ಕೃತಿ -ಪರಿಸರ-ವಯಸ್ಸು-ಉಡುಗೆ-
ತೊಡುಗೆ ಉಳ್ಳ ಅವಳಿ ಮಕ್ಕಳಲ್ಲಿ ಒಂದೇ ಕಾಯಿಲೆಯಿದ್ದರೆ, ಬೇರೆಬೇರೆ ಔಷಧಗಳು ಬೇಕಾಗುತ್ತದೆ ಎನ್ನುವ ಆಯುರ್ವೆದತತ್ತ್ವ ಸದೃಢವಾಗಿದೆ. ಅವಳಿ ಮಕ್ಕಳಲ್ಲಿ ಒಂದು ಮಗು ದಿನಕ್ಕೆ 16 ಘಂಟೆ ನಿದ್ರಿಸಿದರೆ ಇನ್ನೊಂದು 12 ಗಂಟೆ ನಿದ್ರೆಯಿಂದಲೇ ತೃಪ್ತವಾಗುತ್ತದೆ. ಕೇವಲ ವಯಸ್ಸಿಗನುಗುಣವಾಗಿ ನಿದ್ರೆ ಎಂಬ ಆಧುನಿಕತತ್ತ್ವ ಇಲ್ಲಿ ತಲೆಕೆಳಗಾಗುತ್ತದೆ. ಆಯುರ್ವೆದದ ಪ್ರಕಾರ ಹೆಚ್ಚಿನನಿದ್ರೆಗೆ ಕಫಪ್ರಕೃತಿ ಕಾರಣವಾದರೆ, ಕಡಿಮೆನಿದ್ರೆ ಸಾಕಾಗಲು ವಾತಪ್ರಕೃತಿಯೇ ಮೂಲವಾಗಿದೆ. ಕುಡಿಯಲು ಕಾಫಿ ನೀಡಿದಾಗ ಕೆಲವರು ಬಿಸಿಕಡಿಮೆಯಾಯಿತೆಂದು ಗೊಣಗಿದರೆ ಇನ್ನು ಕೆಲವರು ಮತ್ತೂ ತಣ್ಣಗಾಗುವ ತನಕ ಕಾದು ಸೇವಿಸುತ್ತಾರೆ. ಪ್ರವಾಸ ಹೋಗುವ ಆಲೋಚನೆ ಬಂದಾಗ ಮನೆಯಲ್ಲಿ ಒಂದಿಬ್ಬರು ಚಳಿಗಾಲದಲ್ಲಿ ಬೆಚ್ಚಗಿನ ಪ್ರದೇಶಕ್ಕೆ ಹೋಗಲು ಒಲವು ತೋರಿದರೆ ಇನ್ನಿಬ್ಬರು ಬೇಸಿಗೆಯಲ್ಲಿ ತಂಪಾದಸ್ಥಳ ಸೇರಲು ಬಯಸುತ್ತಾರೆ. ವಾತ ಹಾಗು ಕಫಪ್ರಕೃತಿಯವರಿಗೆ ಬಿಸಿ ಇಷ್ಟವಾದರೆ ಪಿತ್ತಪ್ರಕೃತಿಯವರು ಅಪೇಕ್ಷಿಸುವುದು ತಂಪನ್ನೇ.
ಆಯುರ್ವೆದದಲ್ಲಿ ಒಬ್ಬ ವ್ಯಕ್ತಿಯ ಶರೀರಪ್ರಕೃತಿ ಮಾತ್ರವಲ್ಲ ಮಾನಸಿಕ ಪ್ರಕೃತಿಯನ್ನೂ ಸವಿಸ್ತಾರವಾಗಿ ವಿವರಿಸಿದ್ದಾರೆ! ಇವುಗಳನ್ನು ತಿಳಿದುಕೊಳ್ಳುವುದರಿಂದ ನಮ್ಮನ್ನು ಹೆಚ್ಚು ಅರಿಯಬಹುದು. ನಮಗೆ ಸೂಕ್ತವಾದ ಆಹಾರವಸ್ತು, ಆಹಾರಪದ್ಧತಿಗಳನ್ನು
ನಿಖರವಾಗಿ ನಿರ್ಧರಿಸಬಹುದು. ಇತರರನ್ನು ಅರಿತು ಹೆಚ್ಚಿನ ಹೊಂದಾಣಿಕೆಯನ್ನು ಹೊಂದಬಹುದು. ಚಿಕಿತ್ಸೆಯನ್ನು ಸುಲಭಗೊಳಿಸಬಹುದು. ಮನೆ ಹಾಗೂ ಕಚೇರಿಯ ವಾತಾವರಣ ಉತ್ತಮಗೊಳಿಸಬಹುದು. ದೇಹಪ್ರಕೃತಿಯ ಭಿನ್ನತೆ ಅರಿತರೆ ಜೀವನದಲ್ಲಿ ಖಿನ್ನತೆ ಇರದು.
ಪಂಚಸೂತ್ರಗಳು
ಮುಸುಂಬಿ: ಕೆಮ್ಮು ಕಡಿಮೆಮಾಡಲು ಸಹಕಾರಿ.
ಮೂಲಂಗಿ: ಕಣ್ಣಿನ ರೋಗಗಳಿದ್ದಾಗ ಹಿತ.
ಬಡೆಸೊಪ್ಪು: ಚರ್ಮವ್ಯಾಧಿಗಳಲ್ಲಿ ಅನುಕೂಲಕರ.
ಸಾಸಿವೆ: ಗುಲ್ಮ/ಪ್ಲೀಹದ ತೊಂದರೆ ಸರಿಪಡಿಸಲು ಸಹಕಾರಿ.
ಕೊನೇ ಹನಿ
ಜಾಜಿಮಲ್ಲಿಗೆಯ ಐದಾರು ಎಲೆಗಳನ್ನು ಸೇವಿಸಿದರೆ ಬಾಯಿಹುಣ್ಣು ಶೀಘ್ರ ಉಪಶಮನ.
ಡಾ. ಗಿರಿಧರ ಕಜೆ ಎಂ.ಡಿ.(ಆಯು)
ಒಬ್ಬವ್ಯಕ್ತಿ ಒಂದೇ ದೇಹಪ್ರಕೃತಿಯ ಲಕ್ಷಣಗಳನ್ನು ಹೊಂದಿರುವುದಿಲ್ಲ. ಬದಲಾಗಿ, ಮೂರು ಪ್ರಕೃತಿಗಳ ವಿಭಿನ್ನ ಗುಣಗಳ ಸಮೂಹವಾಗಿರುತ್ತಾನೆ. ಯಾವ ಪ್ರಕೃತಿಯ ಗುಣಗಳು ಓರ್ವನಲ್ಲಿ ಅಧಿಕವಾಗಿದೆಯೋ ಅದರ ಆಧಾರದಲ್ಲಿ ಆ ವ್ಯಕ್ತಿಯ ಪ್ರಕೃತಿ ನಿರ್ಧರಿತವಾಗುತ್ತದೆ. ಇಂತಹ ಪಮ್ಯರ್ುಟೇಶನ್ ಮತ್ತು ಕಾಂಬಿನೇಶನ್ನಿಂದಾಗಿ ವ್ಯಕ್ತಿತ್ವವು ಒಬ್ಬರಿಂದ ಒಬ್ಬರಿಗೆ ಸಂಪೂರ್ಣ ವಾಗಿ ಭಿನ್ನವಾಗುತ್ತ ಹೋಗುತ್ತದೆ. ನ್ಯಾಯವೈದ್ಯಶಾಸ್ತ್ರದ ಪ್ರಕಾರ ಜಗತ್ತಿನಲ್ಲಿ ಹೆಚ್ಚೆಂದರೆ ಕೇವಲ ಹತ್ತುಮಂದಿಗೆ ಬೆರಳಚ್ಚು ಒಂದೇ ಸಮನಾಗಿ ಇರಲೂಬಹುದು! ಜೀವಜಗತ್ತಿನಲ್ಲಿ ಎಷ್ಟೊಂದು ವೈವಿಧ್ಯ. ಇದಕ್ಕೆ ನಮ್ಮ ಶರೀರಪ್ರಕೃತಿಯೂ ಹೊರತಲ್ಲ. ಆದ್ದರಿಂದಲೇ ಸಮನಾದ ಹೆಸರಿನ ಒಂದೇ ಆಹಾರ-ವಿಹಾರ-ಆಚಾರ-ಸಂಸ್ಕೃತಿ -ಪರಿಸರ-ವಯಸ್ಸು-ಉಡುಗೆ-
ತೊಡುಗೆ ಉಳ್ಳ ಅವಳಿ ಮಕ್ಕಳಲ್ಲಿ ಒಂದೇ ಕಾಯಿಲೆಯಿದ್ದರೆ, ಬೇರೆಬೇರೆ ಔಷಧಗಳು ಬೇಕಾಗುತ್ತದೆ ಎನ್ನುವ ಆಯುರ್ವೆದತತ್ತ್ವ ಸದೃಢವಾಗಿದೆ. ಅವಳಿ ಮಕ್ಕಳಲ್ಲಿ ಒಂದು ಮಗು ದಿನಕ್ಕೆ 16 ಘಂಟೆ ನಿದ್ರಿಸಿದರೆ ಇನ್ನೊಂದು 12 ಗಂಟೆ ನಿದ್ರೆಯಿಂದಲೇ ತೃಪ್ತವಾಗುತ್ತದೆ. ಕೇವಲ ವಯಸ್ಸಿಗನುಗುಣವಾಗಿ ನಿದ್ರೆ ಎಂಬ ಆಧುನಿಕತತ್ತ್ವ ಇಲ್ಲಿ ತಲೆಕೆಳಗಾಗುತ್ತದೆ. ಆಯುರ್ವೆದದ ಪ್ರಕಾರ ಹೆಚ್ಚಿನನಿದ್ರೆಗೆ ಕಫಪ್ರಕೃತಿ ಕಾರಣವಾದರೆ, ಕಡಿಮೆನಿದ್ರೆ ಸಾಕಾಗಲು ವಾತಪ್ರಕೃತಿಯೇ ಮೂಲವಾಗಿದೆ. ಕುಡಿಯಲು ಕಾಫಿ ನೀಡಿದಾಗ ಕೆಲವರು ಬಿಸಿಕಡಿಮೆಯಾಯಿತೆಂದು ಗೊಣಗಿದರೆ ಇನ್ನು ಕೆಲವರು ಮತ್ತೂ ತಣ್ಣಗಾಗುವ ತನಕ ಕಾದು ಸೇವಿಸುತ್ತಾರೆ. ಪ್ರವಾಸ ಹೋಗುವ ಆಲೋಚನೆ ಬಂದಾಗ ಮನೆಯಲ್ಲಿ ಒಂದಿಬ್ಬರು ಚಳಿಗಾಲದಲ್ಲಿ ಬೆಚ್ಚಗಿನ ಪ್ರದೇಶಕ್ಕೆ ಹೋಗಲು ಒಲವು ತೋರಿದರೆ ಇನ್ನಿಬ್ಬರು ಬೇಸಿಗೆಯಲ್ಲಿ ತಂಪಾದಸ್ಥಳ ಸೇರಲು ಬಯಸುತ್ತಾರೆ. ವಾತ ಹಾಗು ಕಫಪ್ರಕೃತಿಯವರಿಗೆ ಬಿಸಿ ಇಷ್ಟವಾದರೆ ಪಿತ್ತಪ್ರಕೃತಿಯವರು ಅಪೇಕ್ಷಿಸುವುದು ತಂಪನ್ನೇ.
ಆಯುರ್ವೆದದಲ್ಲಿ ಒಬ್ಬ ವ್ಯಕ್ತಿಯ ಶರೀರಪ್ರಕೃತಿ ಮಾತ್ರವಲ್ಲ ಮಾನಸಿಕ ಪ್ರಕೃತಿಯನ್ನೂ ಸವಿಸ್ತಾರವಾಗಿ ವಿವರಿಸಿದ್ದಾರೆ! ಇವುಗಳನ್ನು ತಿಳಿದುಕೊಳ್ಳುವುದರಿಂದ ನಮ್ಮನ್ನು ಹೆಚ್ಚು ಅರಿಯಬಹುದು. ನಮಗೆ ಸೂಕ್ತವಾದ ಆಹಾರವಸ್ತು, ಆಹಾರಪದ್ಧತಿಗಳನ್ನು
ನಿಖರವಾಗಿ ನಿರ್ಧರಿಸಬಹುದು. ಇತರರನ್ನು ಅರಿತು ಹೆಚ್ಚಿನ ಹೊಂದಾಣಿಕೆಯನ್ನು ಹೊಂದಬಹುದು. ಚಿಕಿತ್ಸೆಯನ್ನು ಸುಲಭಗೊಳಿಸಬಹುದು. ಮನೆ ಹಾಗೂ ಕಚೇರಿಯ ವಾತಾವರಣ ಉತ್ತಮಗೊಳಿಸಬಹುದು. ದೇಹಪ್ರಕೃತಿಯ ಭಿನ್ನತೆ ಅರಿತರೆ ಜೀವನದಲ್ಲಿ ಖಿನ್ನತೆ ಇರದು.
ಪಂಚಸೂತ್ರಗಳು
ಮುಸುಂಬಿ: ಕೆಮ್ಮು ಕಡಿಮೆಮಾಡಲು ಸಹಕಾರಿ.
ಮೂಲಂಗಿ: ಕಣ್ಣಿನ ರೋಗಗಳಿದ್ದಾಗ ಹಿತ.
ಬಡೆಸೊಪ್ಪು: ಚರ್ಮವ್ಯಾಧಿಗಳಲ್ಲಿ ಅನುಕೂಲಕರ.
ಸಾಸಿವೆ: ಗುಲ್ಮ/ಪ್ಲೀಹದ ತೊಂದರೆ ಸರಿಪಡಿಸಲು ಸಹಕಾರಿ.
ಕೊನೇ ಹನಿ
ಜಾಜಿಮಲ್ಲಿಗೆಯ ಐದಾರು ಎಲೆಗಳನ್ನು ಸೇವಿಸಿದರೆ ಬಾಯಿಹುಣ್ಣು ಶೀಘ್ರ ಉಪಶಮನ.
No comments:
Post a Comment