ಆಯ್ಕೆ ರಹಿತತೆಯೇ ಪರಮಾನಂದ [OSHO]
ನೀವು ಯಾವುದಕ್ಕಾದರೂ ಅಂಟಿ ಕೊಳ್ಳುವುದರ ಅರ್ಥ ಅದರಲ್ಲಿ ನೀನು ಜೀವ ಇಟ್ಟಿದ್ದೀಯ ಎಂದು . ನಿನ್ನ ಅಂಟಿ ಕೊಳ್ಳುವಿಕೆ ಅಸ್ತಿತ್ವದ ಚಕ್ರ ಸುತ್ತುವುದನ್ನು ನಿಲ್ಲಿಸಲಾರದು . ಅದು ಸುತ್ತುತ್ತಲೇ ಇರುತ್ತದೆ . ಆಗ ನೀನು ವಿರುದ್ಧದಲ್ಲಿ ಬೀಳಲೇ ಬೇಕಾಗುತ್ತದೆ . ಆದ್ದರಿಂದ ಅಲ್ಲಿ ದುಃಖ ಮತ್ತು ವೇದನೆ ಇರುತ್ತದೆ ಅಸ್ತಿತ್ವವು ತಿಳಿದೂ ತಿಳಿದೂ ನಿಮ್ಮ ಪ್ರೇಮ ಆನಂದ , ಸಂತೋಷದ ಅನುಭೂತಿಗಳನ್ನು ನಾಶ ಮಾಡಿತೇನೋ ಎಂಬಂತೆ .
ಅಸ್ತಿತ್ವ ಏನೂ ಮಾಡಿಲ್ಲ . ನಿಮ್ಮ ಜೀವನದಲ್ಲಿ ಏನೇ ಆಗುತ್ತಿದ್ದರೂ ಅದಕ್ಕೆ ಕೇವಲ ನೀವೇ ಹೊಣೆ ಗಾರರು . ನೀವು ಅಂಟಿ ಕೊಳ್ಳದೇ ಇದ್ದಿದ್ದರೆ ವರ್ತುಲವು ಸುತ್ತುತ್ತಿತ್ತು . ಅಂಟಿಕೊಳ್ಳದೆ ನೀವು ಆನಂದಿಸಬಹುದಿತ್ತು . ಅದು ಹೊರಟು ಹೋದಾಗಲೂ ನೀವು ಅನಂದಿಸುತ್ತಲೇ ಇರುತ್ತಿದ್ದಿರಿ
ಇದು ಸ್ವಲ್ಪ ಸೂಕ್ಷ್ಮವಾದುದು ನೀವು ಸಂತಸದ ಕ್ಷಣವನ್ನು ಆನಂದಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ ಅದು ಎಷ್ಟೇ ಆನಂದಕರವಾಗಿದ್ದರೂ ಸ್ವಲ್ಪ ಸಮಯದ ನಂತರ ಅದು ದಣಿಸುವುದು . ಇಪ್ಪತ್ನಾಲ್ಕು ಘಂಟೆಗಳೂ ನೀವು ಆನಂದಿತರಾಗಿರಲು ಸಾಧ್ಯವಿಲ್ಲ ನೀವು ಬಳಲಿ ಸುಸ್ತಾಗುವಿರಿ . ಪ್ರೇಮಕ್ಕೂ ಅದರದ್ದೇ ಆದ ಮಿತಿ ಇದೆ .
ಕ್ಷಣ ಮಾತ್ರಕ್ಕೆ ಏನೋ ಒಂದು ಮಹತ್ವದ್ದಾಗಬಹುದು . ನೀವು ಚುಂಬಿಸುವಿರಿ . ಅದೇ ನೀವು ಒಂದು ಘಂಟೆ ಎರಡು ಘಂಟೆ ಮೂರು ಘಂಟೆ ಕಾಲ ಆ ವ್ಯಕ್ತಿಯನ್ನು ನಿರಂತರವಾಗಿ ಚುಂಬಿಸುತ್ತಲೇ ಇದ್ದಲ್ಲಿ , ಸಮಯ ಹೆಚ್ಚಾದಂತೆ ನಿಮ್ಮ ಚುಂಬನದ ಆನಂದ ಹೆಚ್ಚುತ್ತಾ ಹೋಗುವುದೇನು ? ಇಲ್ಲಾ ಅದು ಕ್ಷೀಣಿಸುತ್ತಾ ಹೋಗುತ್ತದೆ . ಸಮಯ ಹೆಚ್ಚಾದಂತೆ ಸಂತೋಷ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ಒಂದು ಹಂತದಲ್ಲಿ ಅದ ಅಸಹ್ಯಕರ ಆಗುತ್ತದೆ .
ಆನಂದವನ್ನು ನೀವು ಅದು ಯಾವಾಗಲೂ ಇರಬೇಕು ಎಂದು ಆಲೋಚಿಸದೆ ಆನಂದಿಸಿದಲ್ಲಿ , ಆಗ ಯಾವ ಸಮಸ್ಯೆಯೂ ಇರುವುದಿಲ್ಲ ಸಂತೋಷ ಬಂದಾಗ ಆನಂದಿಸಿ ಅದು ಹೋದಾಗ ಹೋಯಿತೆಂದು ಆನಂದಿಸಿ ಏಕೆಂದರೆ ಅದು ಶಾಶ್ವತವಾಗಿ ಇದ್ದುಬಿಟ್ಟರೆ ಅದು ಆನಂದವಾಗಿರುವುದಿಲ್ಲ ಅದು ಯಾತನೆ ಯಾಗಿಬಿಡುತ್ತದೆ .
ಅಸ್ತಿತ್ವ ನಿಮಗಿಂತಲೂ ಹೆಚ್ಚು ವಿವೇಕಿ . ಮಹತ್ವ ವನ್ನು ಕಳೆದುಕೊಳ್ಳುವುದಕ್ಕೂ ಮುಂಚೆಯೇ ಅಸ್ತಿತ್ವ ಅವನ್ನು ನಿಮ್ಮಿಂದ ದೂರ ಮಾಡಿಬಿಡುತ್ತದೆ . ಸುಂದರ ಆಗಬೇಕು ಎನ್ನುವುದು ಒಳ್ಳೆಯದೇ ಆದರೆ ಅವುಗಳ ನಡುವೆ ಅಂತರ ಇರಬೇಕು. ವಿರಾಮ ಇರಬೇಕು . ನಿಮಗೆ ಪ್ರೆಮದಿಂದಲೂ ವಿಶ್ರಾಂತಿ ಇರಬೇಕು ಆನಂದದಿಂದಲೂ ವಿಶ್ರಾಂತಿ ಬೇಕಾಗುತ್ತದೆ . ಎಲ್ಲದರಿಂದಲೂ ವಿಶ್ರಾಂತಿ ಬೇಕಾಗುತ್ತದೆ ಆ ವಿಶ್ರಾಂತಿ ನಿಮ್ಮ ಸಂತೋಷಕ್ಕೆ ವಿರುದ್ಧವಾದುದು ಎಂದು ಪರಿಗಣಿಸಬೇಡಿ . ನಿಜವಾಗಿ ಅವು ನಿಮ್ಮ ಪರವಾದುದೇ ಅದು ಮತ್ತೆ ಪುನಃ ಅದನ್ನು ಹೊಂದುವ ಸಂಭವ್ಯತೆಗೆ ಭೂಮಿಕೆಯನ್ನು ಸೃಷ್ಟಿಸುತ್ತದೆ .
ಏನೇ ಬರಲಿ ಅದನ್ನು ಆನಂದಿಸಿ . ಅದು ಹೋಗುತ್ತದೆ . ಮತ್ತೇನೋ ಬರುತ್ತದೆ ಅದನ್ನೂ ಆನಂದಿಸಿ . ಹಗಲು ಸುಂದರ ಮತ್ತು ರಾತ್ರಿಗೂ ಸುಂದರತೆ ಇದೆ ಎರಡನ್ನೂ ಆನಂದಿಸಬಾರದೇಕೆ ? ಆ ಎರಡನ್ನೂ ನೀವು ಆನಂದಿಸಲು ಆಗುವುದು ಕೇವಲ ನೀವು ಒಂದಕ್ಕೆ ಅಂಟಿ ಕೊಳ್ಳದಿದ್ದಾಗ ಮಾತ್ರ . ಆದ್ದರಿಂದ ಆಯ್ಕೆ ರಹಿತ ವ್ಯಕ್ತಿ ಮಾತ್ರ ಜೀವನದ ಸಂಪೂರ್ಣ ಸಾರವನ್ನು ಹಿಂದಿ ಪಡೆದುಕೊಳ್ಳುವನು . ಇದುವೇ ಜೀವಿಸುವ ಕಲೆಯಾಗಿದೆ . ಆನಂದಿಸುವ ಮಾರ್ಗವನ್ನು ಕಂಡುಕೊಳ್ಳುವುದು . ಆದರೆ ಮೂಲ ಭೂತ ಷರತ್ತನ್ನು ನೆನಪಿಟ್ಟುಕೊಳ್ಳಬೇಕು ಆಯ್ಕೆ ರಹಿತರಾಗಿರುವುದು . ಅದು ನಿಮಗೆ ಸಾಧ್ಯವಾಗುವುದು ನೀವು ಜಾಗೃತಿ ಅರಿವು ಎಚ್ಚರ ವಾಗಿದ್ದಾಗ ಮಾತ್ರ . ಇಲ್ಲವಾದಲ್ಲಿ ನೇವು ಆಯ್ಕೆಯೊಳಗೆ ಬೀಳುವಿರಿ .
ಜೀವನ ನಿಶ್ಚಿತವಾಗಿ ಒಂದು ಕಲೆ , ಎಲ್ಲಕ್ಕಿಂತ ಮಿಗಿಲಾದ ಕಲೆ . ಅತಿ ಚಿಕ್ಕ ಸೂತ್ರ ಎಂದರೆ ಆಯ್ಕೆ ರಹಿತ ಅರಿವು . ಇದು ಎಲ್ಲ ಪರಿಸ್ಥಿತಿಗಳಿಗೂ ಎಲ್ಲ ಸಮಸ್ಯೆಗಳಿಗೂ ಅನ್ವಯಿಸುತ್ತದೆ .
Posted by Ramesh Gupta
ನೀವು ಯಾವುದಕ್ಕಾದರೂ ಅಂಟಿ ಕೊಳ್ಳುವುದರ ಅರ್ಥ ಅದರಲ್ಲಿ ನೀನು ಜೀವ ಇಟ್ಟಿದ್ದೀಯ ಎಂದು . ನಿನ್ನ ಅಂಟಿ ಕೊಳ್ಳುವಿಕೆ ಅಸ್ತಿತ್ವದ ಚಕ್ರ ಸುತ್ತುವುದನ್ನು ನಿಲ್ಲಿಸಲಾರದು . ಅದು ಸುತ್ತುತ್ತಲೇ ಇರುತ್ತದೆ . ಆಗ ನೀನು ವಿರುದ್ಧದಲ್ಲಿ ಬೀಳಲೇ ಬೇಕಾಗುತ್ತದೆ . ಆದ್ದರಿಂದ ಅಲ್ಲಿ ದುಃಖ ಮತ್ತು ವೇದನೆ ಇರುತ್ತದೆ ಅಸ್ತಿತ್ವವು ತಿಳಿದೂ ತಿಳಿದೂ ನಿಮ್ಮ ಪ್ರೇಮ ಆನಂದ , ಸಂತೋಷದ ಅನುಭೂತಿಗಳನ್ನು ನಾಶ ಮಾಡಿತೇನೋ ಎಂಬಂತೆ .
ಅಸ್ತಿತ್ವ ಏನೂ ಮಾಡಿಲ್ಲ . ನಿಮ್ಮ ಜೀವನದಲ್ಲಿ ಏನೇ ಆಗುತ್ತಿದ್ದರೂ ಅದಕ್ಕೆ ಕೇವಲ ನೀವೇ ಹೊಣೆ ಗಾರರು . ನೀವು ಅಂಟಿ ಕೊಳ್ಳದೇ ಇದ್ದಿದ್ದರೆ ವರ್ತುಲವು ಸುತ್ತುತ್ತಿತ್ತು . ಅಂಟಿಕೊಳ್ಳದೆ ನೀವು ಆನಂದಿಸಬಹುದಿತ್ತು . ಅದು ಹೊರಟು ಹೋದಾಗಲೂ ನೀವು ಅನಂದಿಸುತ್ತಲೇ ಇರುತ್ತಿದ್ದಿರಿ
ಇದು ಸ್ವಲ್ಪ ಸೂಕ್ಷ್ಮವಾದುದು ನೀವು ಸಂತಸದ ಕ್ಷಣವನ್ನು ಆನಂದಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ ಅದು ಎಷ್ಟೇ ಆನಂದಕರವಾಗಿದ್ದರೂ ಸ್ವಲ್ಪ ಸಮಯದ ನಂತರ ಅದು ದಣಿಸುವುದು . ಇಪ್ಪತ್ನಾಲ್ಕು ಘಂಟೆಗಳೂ ನೀವು ಆನಂದಿತರಾಗಿರಲು ಸಾಧ್ಯವಿಲ್ಲ ನೀವು ಬಳಲಿ ಸುಸ್ತಾಗುವಿರಿ . ಪ್ರೇಮಕ್ಕೂ ಅದರದ್ದೇ ಆದ ಮಿತಿ ಇದೆ .
ಕ್ಷಣ ಮಾತ್ರಕ್ಕೆ ಏನೋ ಒಂದು ಮಹತ್ವದ್ದಾಗಬಹುದು . ನೀವು ಚುಂಬಿಸುವಿರಿ . ಅದೇ ನೀವು ಒಂದು ಘಂಟೆ ಎರಡು ಘಂಟೆ ಮೂರು ಘಂಟೆ ಕಾಲ ಆ ವ್ಯಕ್ತಿಯನ್ನು ನಿರಂತರವಾಗಿ ಚುಂಬಿಸುತ್ತಲೇ ಇದ್ದಲ್ಲಿ , ಸಮಯ ಹೆಚ್ಚಾದಂತೆ ನಿಮ್ಮ ಚುಂಬನದ ಆನಂದ ಹೆಚ್ಚುತ್ತಾ ಹೋಗುವುದೇನು ? ಇಲ್ಲಾ ಅದು ಕ್ಷೀಣಿಸುತ್ತಾ ಹೋಗುತ್ತದೆ . ಸಮಯ ಹೆಚ್ಚಾದಂತೆ ಸಂತೋಷ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ಒಂದು ಹಂತದಲ್ಲಿ ಅದ ಅಸಹ್ಯಕರ ಆಗುತ್ತದೆ .
ಆನಂದವನ್ನು ನೀವು ಅದು ಯಾವಾಗಲೂ ಇರಬೇಕು ಎಂದು ಆಲೋಚಿಸದೆ ಆನಂದಿಸಿದಲ್ಲಿ , ಆಗ ಯಾವ ಸಮಸ್ಯೆಯೂ ಇರುವುದಿಲ್ಲ ಸಂತೋಷ ಬಂದಾಗ ಆನಂದಿಸಿ ಅದು ಹೋದಾಗ ಹೋಯಿತೆಂದು ಆನಂದಿಸಿ ಏಕೆಂದರೆ ಅದು ಶಾಶ್ವತವಾಗಿ ಇದ್ದುಬಿಟ್ಟರೆ ಅದು ಆನಂದವಾಗಿರುವುದಿಲ್ಲ ಅದು ಯಾತನೆ ಯಾಗಿಬಿಡುತ್ತದೆ .
ಅಸ್ತಿತ್ವ ನಿಮಗಿಂತಲೂ ಹೆಚ್ಚು ವಿವೇಕಿ . ಮಹತ್ವ ವನ್ನು ಕಳೆದುಕೊಳ್ಳುವುದಕ್ಕೂ ಮುಂಚೆಯೇ ಅಸ್ತಿತ್ವ ಅವನ್ನು ನಿಮ್ಮಿಂದ ದೂರ ಮಾಡಿಬಿಡುತ್ತದೆ . ಸುಂದರ ಆಗಬೇಕು ಎನ್ನುವುದು ಒಳ್ಳೆಯದೇ ಆದರೆ ಅವುಗಳ ನಡುವೆ ಅಂತರ ಇರಬೇಕು. ವಿರಾಮ ಇರಬೇಕು . ನಿಮಗೆ ಪ್ರೆಮದಿಂದಲೂ ವಿಶ್ರಾಂತಿ ಇರಬೇಕು ಆನಂದದಿಂದಲೂ ವಿಶ್ರಾಂತಿ ಬೇಕಾಗುತ್ತದೆ . ಎಲ್ಲದರಿಂದಲೂ ವಿಶ್ರಾಂತಿ ಬೇಕಾಗುತ್ತದೆ ಆ ವಿಶ್ರಾಂತಿ ನಿಮ್ಮ ಸಂತೋಷಕ್ಕೆ ವಿರುದ್ಧವಾದುದು ಎಂದು ಪರಿಗಣಿಸಬೇಡಿ . ನಿಜವಾಗಿ ಅವು ನಿಮ್ಮ ಪರವಾದುದೇ ಅದು ಮತ್ತೆ ಪುನಃ ಅದನ್ನು ಹೊಂದುವ ಸಂಭವ್ಯತೆಗೆ ಭೂಮಿಕೆಯನ್ನು ಸೃಷ್ಟಿಸುತ್ತದೆ .
ಏನೇ ಬರಲಿ ಅದನ್ನು ಆನಂದಿಸಿ . ಅದು ಹೋಗುತ್ತದೆ . ಮತ್ತೇನೋ ಬರುತ್ತದೆ ಅದನ್ನೂ ಆನಂದಿಸಿ . ಹಗಲು ಸುಂದರ ಮತ್ತು ರಾತ್ರಿಗೂ ಸುಂದರತೆ ಇದೆ ಎರಡನ್ನೂ ಆನಂದಿಸಬಾರದೇಕೆ ? ಆ ಎರಡನ್ನೂ ನೀವು ಆನಂದಿಸಲು ಆಗುವುದು ಕೇವಲ ನೀವು ಒಂದಕ್ಕೆ ಅಂಟಿ ಕೊಳ್ಳದಿದ್ದಾಗ ಮಾತ್ರ . ಆದ್ದರಿಂದ ಆಯ್ಕೆ ರಹಿತ ವ್ಯಕ್ತಿ ಮಾತ್ರ ಜೀವನದ ಸಂಪೂರ್ಣ ಸಾರವನ್ನು ಹಿಂದಿ ಪಡೆದುಕೊಳ್ಳುವನು . ಇದುವೇ ಜೀವಿಸುವ ಕಲೆಯಾಗಿದೆ . ಆನಂದಿಸುವ ಮಾರ್ಗವನ್ನು ಕಂಡುಕೊಳ್ಳುವುದು . ಆದರೆ ಮೂಲ ಭೂತ ಷರತ್ತನ್ನು ನೆನಪಿಟ್ಟುಕೊಳ್ಳಬೇಕು ಆಯ್ಕೆ ರಹಿತರಾಗಿರುವುದು . ಅದು ನಿಮಗೆ ಸಾಧ್ಯವಾಗುವುದು ನೀವು ಜಾಗೃತಿ ಅರಿವು ಎಚ್ಚರ ವಾಗಿದ್ದಾಗ ಮಾತ್ರ . ಇಲ್ಲವಾದಲ್ಲಿ ನೇವು ಆಯ್ಕೆಯೊಳಗೆ ಬೀಳುವಿರಿ .
ಜೀವನ ನಿಶ್ಚಿತವಾಗಿ ಒಂದು ಕಲೆ , ಎಲ್ಲಕ್ಕಿಂತ ಮಿಗಿಲಾದ ಕಲೆ . ಅತಿ ಚಿಕ್ಕ ಸೂತ್ರ ಎಂದರೆ ಆಯ್ಕೆ ರಹಿತ ಅರಿವು . ಇದು ಎಲ್ಲ ಪರಿಸ್ಥಿತಿಗಳಿಗೂ ಎಲ್ಲ ಸಮಸ್ಯೆಗಳಿಗೂ ಅನ್ವಯಿಸುತ್ತದೆ .
Posted by Ramesh Gupta
No comments:
Post a Comment