Monday, 1 August 2016

💫ಶ್ರೀವಾಣಿ💫


💫ಶ್ರೀವಾಣಿ💫


ತಾವು ಯಾರು? ಅನ್ನುವುದನ್ನು ಮರೆತು ಬಿಡಬೇಕು. ನಾನು ವ್ಯಾಪಾರಿ,
ಡಾಕ್ಟರ್,
ಲಾಯರ್,
ಹೆಣ್ಣು,
ಗಂಡು
ಈ ಎಲ್ಲಾ ವಿಚಾರಗಳು ತೆಲೆಯಾಗ ಇದ್ದವು ಅಂದರೆ,  ಸತ್ಯ ಎದೆಯೊಳಗೆ ಹೋಗುವುದಿಲ್ಲ. ನೀವು ಯಾರಾದರೂ ಇರಬಹುದು ಸತ್ಯದ ಎದುರಿಗೆ ನಾನಾರು? ನೀವ್ಯಾರು?
ಸಾಗರದ ಎದುರಿಗೆ
     ಕೃಷ್ಣ,
     ಗೋದಾವರಿ,
     ಕಾವೇರಿ,
     ಗಂಗಾ,
     ಬ್ರಹ್ಮಪುತ್ರ,
     ಸಿಂಧೂ,
     ತೇಮ್ಸ,
     ಮೆಸುಸಿಪಿ,
     ಟೈಗ್ರಿಸ್,
     ಯೂಪ್ರಟಿಸ್,
     ಓಲ್ಗ
ಯಾವ ನದಿಯಾದರೇನಂತೆ ಸಾಗರದ ದಡಕ್ಕೆ ಹೋದ ಬಳಿಕ ನದಿಗಳೆಲ್ಲಾ ಶಾಂತವಾಗುತ್ತವೆ.
ಹಾಗೆಯೇ ಸತ್ಸಂಗದಲ್ಲಿ,
ಇದೊಂದು ಸಾಗರ. ಇಲ್ಲಿ ಬಂದ ಬಳಿಕ ನಾವು ನಮ್ಮನ್ನು ಮರೆಯೋದು. ನಾನು ಹೇಳುವುದು
ಚಂದ ಇರಬಹುದು,
ಚಂದ ಇರಲಿಕ್ಕಿಲ್ಲ,
ಸರಿ ಇರಬಹುದು,
ತಪ್ಪಿರಬಹುದು.
ಯಾವ ಸಿದ್ಧಾಂತವನ್ನೂ ತೆಲೆಯೊಳಗೆ ಹಾಕಿಕೊಳ್ಳಬೇಡಿ. ಇಲ್ಲಿ ಬಂದು ಮೌನವಾಗಿರೋದು.
ಒಂದು ಕ್ಷಣ ಜೀವನದಲ್ಲಿ ಮೌನವಾಗಿರಬೇಕಷ್ಟೆ. ಮನಸ್ಸು ಖಾಲಿಯಾಗಿ ಮೌನವಾಗಿರಬೇಕು.

ಮೌನವಾಗಿರುವ ಮನಸ್ಸು ಶ್ರೀಮಂತ ಆಗಲಿಕ್ಕೆ ಶುರುವಾಗುತ್ತದೆ.

ಕೆಳಗೆ ಭೂತಾಯಿ ಸ್ಪರ್ಶ,
ಮೇಲೆ ಆಕಾಶದ ಸ್ಪರ್ಶ,
ಎರಡರ ಮಧ್ಯದಲ್ಲಿ ಜ್ಞಾನ ಸ್ಪರ್ಶ, ಭಕ್ತಿಯ ಸ್ಪರ್ಶ ಆಗುತ್ತದೆ.
ಸುಮ್ಮನೆ ಒಂದು ಕ್ಷಣ ಶಾಂತವಾಗಿ ಕುಳಿತಿರುವುದು.

ತಾಯಿ ಜೋಗುಳ ಹಾಡುತ್ತಾಳೆ.
ಮಗು ಮಲಗಬೇಕು ಅಂತ ಹಾಡುತ್ತಾಳೆ. ಆಕೆ ಹಾಡಿನ ವೈಭವದಾಗ ಇರುವುದಿಲ್ಲ,
ಹಾಡಬೇಕು ಅಂತ ಹಾಡುವುದಿಲ್ಲ. ಮಗು ಮಲಗಬೇಕು ಅಂತ ಹಾಡುತ್ತಾಳೆ. ತಾಯಿಗೆ ಹಾಡು ಮುಖ್ಯ ಅಲ್ಲ. ಮಗು ಮಲಗುವುದು ಮುಖ್ಯ. ಮಗು ಪಲ್ಲವಿಗೆ ಮಲಗಿತು, ಹಾಡು ಪಲ್ಲವಿಗೇ ಮುಗಿಯಿತು.

ಹಾಗೆಯೇ ಪ್ರವಚನ ಮುಖ್ಯ ಅಲ್ಲ,
ಮನಸ್ಸು ಸಮಾಧಾನ ಪಡೆಯುವುದು ಮುಖ್ಯ.
ಮನಸ್ಸು ಶಾಂತವಾಗುವುದು ಮುಖ್ಯ.

We have to experience
silence,
perfect silence
within ourself, the most precious if there is anything in this world, it is a peace of mind.

ಜಗತ್ತಿನಲ್ಲಿ ಅಪ್ರತಿಮ ವಸ್ತುವೊಂದನ್ನು ಮನುಷ್ಯ ಪಡೆಯಬೇಕಾದದ್ದು ಇದ್ದರೆ ಅದು ಶಾಂತಿ.

ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು.

✨✨✨✨✨✨✨✨✨

No comments:

Post a Comment