💐 *ಶ್ರೀವಾಣಿ* 💐
ಒಬ್ಬ ಝೆನ್ ಗುರು
ನದಿಯ ದಡದಲ್ಲಿ ಸುಂದರ ಆಶ್ರಮ.
ಪ್ರಶಾಂತ ವಾತಾವರಣ.
ಸುತ್ತಮುತ್ತ ಹಸಿರು ವನಸಿರಿ.
ರಮ್ಯ ನಿಸರ್ಗ ಸ್ವರ್ಗ!
ಅಲ್ಲಿಗೆ ಒಬ್ಬ ಸತ್ಯಶೋಧಕ ಸಾಧಕ ಬಂದ. ಗುರುಗಳಿಗೆ ವಂದಿಸಿ ಕೇಳಿದ -
"ನಾನು ಸತ್ಯ ತಿಳಿಯಬೇಕು.
ನಿರ್ವಾಣ ಪಥಿಕನಾಗಬೇಕು "
ಗುರು ಹೇಳಿದ -
"ನೀನು ತಪ್ಪಿ ನನ್ನ ಬಳಿಗೆ ಬಂದಿರುವೆ.
ನಾನು ಸತ್ಯ ತಿಳಿದವನಲ್ಲ.
ಅನುಭವಿಸದವ.
ತಿಳಿದವರು ಜ್ಞಾನಿಗಳು ಹೇಳುತ್ತಾರೆ.
ಅನುಭವಿಸಿದವರು ಹೇಳುವುದಿಲ್ಲ! "
ಸಾಧಕ ಕೇಳಿದ -
"ಗುರುಗಳೆ, ನಾನು ನಿಮ್ಮಂತೆ
ಸತ್ಯಾನುಭವಿ,
ದಿವ್ಯಾನುಭವಿ
ಆಗಬೇಕು"
ಗುರು - "ಹಾಗದರೆ ಈ ಮರದಡಿ ಸುಮ್ಮನೆ ಮೌನವಾಗಿ ಕುಳುತಿರು "
ಶಿಷ್ಯನು ಆಶ್ರಮದ ಎದುರಲ್ಲಿದ್ದ ವಿಶಾಲ ಮರದ ಕೆಳಗೆ ಧ್ಯಾನಸ್ಥನಾಗಿ ಕುಳಿತ. ವರುಷಗಳೇ ಉರುಳಿದವು.
ಗುರು ಹೇಳಲಿಲ್ಲ.
ಶಿಷ್ಯ ಕೇಳಲಿಲ್ಲ.
ಹತ್ತು ವರುಷಗಳ ಬಳಿಕ ಒಂದು ದಿನ ಗುರು ಶಿಷ್ಯನಿಗೆ ಹೇಳಿದ
"ಈಗ ನಿನ್ನ ಪ್ರಶ್ನೆ ಏನಿದೆ
ಕೇಳು ಉತ್ತರಿಸುತ್ತೇನೆ "
ಶಿಷ್ಯ ಹೇಳಿದ -
"ಗುರುಗಳೇ, ಹತ್ತು ವರುಷಗಳ ಹಿಂದೆ ಕೇಳಿದ್ದರೆ, ನಾನು ಹತ್ತು ಪ್ರಶ್ನೆಗಳನ್ನು ಕೇಳುತ್ತಿದ್ದೆ ಆದರೆ ಆ ವ್ಯಕ್ತಿ ಇಂದಿಲ್ಲ "
ಶಿಷ್ಯನು ಪರಮ ಸತ್ಯವನ್ನು ಅನುಭವಿಸಿದ್ದ, ಅನುಭಾವಿಯಾಗಿದ್ದ.
"ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಸ್ತು ಛಿನ್ನ ಸಂಶಯಃ ".
ಈಗ ಕೇಳುವ ಶಿಷ್ಯನಿಲ್ಲ.
ಹೇಳುವ ಗುರುವಿಲ್ಲ.
ಹೇಳುವುದು,
ಕೇಳುವುದು
ನಿಂತ ಬಳಿಕ ಸತ್ಯವು ತನಗೆ ತಾನೇ ಅನುಭವಕ್ಕೆ ಬರುತ್ತದೆ.
ಅಂತೆಯೇ ಹೇಳುವವನು ಇಲ್ಲದಂತೆ ಅಗುವವರೆಗೆ ಗುರುವು ಹೇಳಬೇಕು.
ಕೇಳುವವನು ಇಲ್ಲದಂತೆ ಆಗುವವರೆಗೆ ಶಿಷ್ಯನು ಕೇಳಬೇಕು.
ಗುರು - ಶಿಷ್ಯರಿಬ್ಬರೂ ತಮ್ಮನ್ನೇ ತಾವು ಮರೆತು
ಮೌನವಾದ
ಮರುಕ್ಷಣವೇ
ಸತ್ಯವು
ಪ್ರಕಟವಾಗುತ್ತದೆ.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು
🌷🌷🌷🌷🌷🌷🌷🌷🌷🌷
ಒಬ್ಬ ಝೆನ್ ಗುರು
ನದಿಯ ದಡದಲ್ಲಿ ಸುಂದರ ಆಶ್ರಮ.
ಪ್ರಶಾಂತ ವಾತಾವರಣ.
ಸುತ್ತಮುತ್ತ ಹಸಿರು ವನಸಿರಿ.
ರಮ್ಯ ನಿಸರ್ಗ ಸ್ವರ್ಗ!
ಅಲ್ಲಿಗೆ ಒಬ್ಬ ಸತ್ಯಶೋಧಕ ಸಾಧಕ ಬಂದ. ಗುರುಗಳಿಗೆ ವಂದಿಸಿ ಕೇಳಿದ -
"ನಾನು ಸತ್ಯ ತಿಳಿಯಬೇಕು.
ನಿರ್ವಾಣ ಪಥಿಕನಾಗಬೇಕು "
ಗುರು ಹೇಳಿದ -
"ನೀನು ತಪ್ಪಿ ನನ್ನ ಬಳಿಗೆ ಬಂದಿರುವೆ.
ನಾನು ಸತ್ಯ ತಿಳಿದವನಲ್ಲ.
ಅನುಭವಿಸದವ.
ತಿಳಿದವರು ಜ್ಞಾನಿಗಳು ಹೇಳುತ್ತಾರೆ.
ಅನುಭವಿಸಿದವರು ಹೇಳುವುದಿಲ್ಲ! "
ಸಾಧಕ ಕೇಳಿದ -
"ಗುರುಗಳೆ, ನಾನು ನಿಮ್ಮಂತೆ
ಸತ್ಯಾನುಭವಿ,
ದಿವ್ಯಾನುಭವಿ
ಆಗಬೇಕು"
ಗುರು - "ಹಾಗದರೆ ಈ ಮರದಡಿ ಸುಮ್ಮನೆ ಮೌನವಾಗಿ ಕುಳುತಿರು "
ಶಿಷ್ಯನು ಆಶ್ರಮದ ಎದುರಲ್ಲಿದ್ದ ವಿಶಾಲ ಮರದ ಕೆಳಗೆ ಧ್ಯಾನಸ್ಥನಾಗಿ ಕುಳಿತ. ವರುಷಗಳೇ ಉರುಳಿದವು.
ಗುರು ಹೇಳಲಿಲ್ಲ.
ಶಿಷ್ಯ ಕೇಳಲಿಲ್ಲ.
ಹತ್ತು ವರುಷಗಳ ಬಳಿಕ ಒಂದು ದಿನ ಗುರು ಶಿಷ್ಯನಿಗೆ ಹೇಳಿದ
"ಈಗ ನಿನ್ನ ಪ್ರಶ್ನೆ ಏನಿದೆ
ಕೇಳು ಉತ್ತರಿಸುತ್ತೇನೆ "
ಶಿಷ್ಯ ಹೇಳಿದ -
"ಗುರುಗಳೇ, ಹತ್ತು ವರುಷಗಳ ಹಿಂದೆ ಕೇಳಿದ್ದರೆ, ನಾನು ಹತ್ತು ಪ್ರಶ್ನೆಗಳನ್ನು ಕೇಳುತ್ತಿದ್ದೆ ಆದರೆ ಆ ವ್ಯಕ್ತಿ ಇಂದಿಲ್ಲ "
ಶಿಷ್ಯನು ಪರಮ ಸತ್ಯವನ್ನು ಅನುಭವಿಸಿದ್ದ, ಅನುಭಾವಿಯಾಗಿದ್ದ.
"ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಸ್ತು ಛಿನ್ನ ಸಂಶಯಃ ".
ಈಗ ಕೇಳುವ ಶಿಷ್ಯನಿಲ್ಲ.
ಹೇಳುವ ಗುರುವಿಲ್ಲ.
ಹೇಳುವುದು,
ಕೇಳುವುದು
ನಿಂತ ಬಳಿಕ ಸತ್ಯವು ತನಗೆ ತಾನೇ ಅನುಭವಕ್ಕೆ ಬರುತ್ತದೆ.
ಅಂತೆಯೇ ಹೇಳುವವನು ಇಲ್ಲದಂತೆ ಅಗುವವರೆಗೆ ಗುರುವು ಹೇಳಬೇಕು.
ಕೇಳುವವನು ಇಲ್ಲದಂತೆ ಆಗುವವರೆಗೆ ಶಿಷ್ಯನು ಕೇಳಬೇಕು.
ಗುರು - ಶಿಷ್ಯರಿಬ್ಬರೂ ತಮ್ಮನ್ನೇ ತಾವು ಮರೆತು
ಮೌನವಾದ
ಮರುಕ್ಷಣವೇ
ಸತ್ಯವು
ಪ್ರಕಟವಾಗುತ್ತದೆ.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು
🌷🌷🌷🌷🌷🌷🌷🌷🌷🌷
No comments:
Post a Comment