Sunday, 7 August 2016

ಶ್ರೀವಾಣಿ 🔹ಅಹಂಭಾವ🔹

ಶ್ರೀವಾಣಿ

🔹ಅಹಂಭಾವ🔹

   ಸಂತನ ಬಳಿ ಒಬ್ಬ ರಾಜನು ಹೋದ. ಅವರಿಬ್ಬರ ಮಧ್ಯದಲ್ಲಿ ನಡೆದ ಸಂವಾದ ಹೀಗಿದೆ.
ರಾಜ - "ನಾನಾರು, ನಿಮಗೆ ಗೊತ್ತೇ?"
ಸಂತ - "ನನಗೆ ಗೊತ್ತಿಲ್ಲ !"
ರಾಜ - "ನಾನು ಈ ದೇಶದ ಚಕ್ರವರ್ತಿ !"
ಸಂತ - "ಎಷ್ಟು ವರುಷಗಳಿಂದ ?"
ರಾಜ - "ಹದಿನೈದು ವರುಷಗಳಿಂದ."
ಸಂತ - ಅದಕ್ಕೂ ಮೊದಲು ನೀನೇನು ರಾಜನಾಗಿರಲಿಲ್ಲ !"
ರಾಜ - "ಹೌದು !"
ಸಂತ - "ಈಗಲಾದರೂ ನೆರೆಹೊರೆಯ ರಾಜರು ನಿನ್ನನ್ನು ಸೋಲಿಸಿದರೆ ನೀನೇನು ರಾಜನಾಗಿರುವುದಿಲ್ಲ !"
ರಾಜ - "ಹೌದು"
ಸಂತ - "ಹಾಗಾದರೆ ನೀನು ಚಕ್ರವರ್ತಿ ಎಂಬುವುದು ಸತ್ಯವಲ್ಲ"
ಸಂತರ ಈ ನುಡಿಗಳನ್ನು ಕೇಳುತ್ತಲೇ ರಾಜನ ಮನದಲ್ಲಿದ್ದ ಅಹಂಭಾವ ಅಳಿಯಿತು. ಅರಿವಿನ ರವಿ ಉದಯಿಸಿದ !

ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ
🔹✨🔹✨🔹✨🔹✨🔹
           🔹ಮಧುವಿದ್ಯಾ🔹

ನನಗೆ ತಿಳಿದಂತೆ ನಿಮಗೆ ತಿಳಿದಿಲ್ಲವಾಗಿ ನನ್ನ ದೃಷ್ಟಿಯಲ್ಲಿ ನೀವು ಅಜ್ಞಾನಿಗಳು. ನಿಮಗೆ ತಿಳಿದಂತೆ ನನಗೆ ತಿಳಿದಿಲ್ಲವಾಗಿ ನಿಮ್ಮ ದೃಷ್ಟಿಯವಲ್ಲಿ ನಾನು ಅಜ್ಞಾನಿ. ಹೀಗಾಗಿ ಕಲಹ, ಸಂಘರ್ಷ. ಸಂತರು ಅನ್ಯೋನ್ಯ! ನಾವು ಅವರವರ ಗುಂಪು ಕಟ್ಟಿ ಸೆಣಸುತ್ತೇವೆ. 'ಅಕ್ಕನೇ ಸರಿ, ಅಲ್ಲಮನಲ್ಲ. ಅಲ್ಲಮನೇ ಸರಿ, ಅಕ್ಕನಲ್ಲ.' ಇದು ನಮ್ಮ ಭಾವ. ಅವರ ದೃಷ್ಟಿಯಲ್ಲಿ ಅವರು ಸ್ನೇಹಿತರು. ನಮ್ಮ ದೃಷ್ಟಿಯಲ್ಲಿ ವಿರೋಧಿಗಳು. ಅವರು ಪರಸ್ಪರರಿಗೆ ವಂದಿಸುತ್ತಾರೆ. ನಾವು ಮಾತ್ರ ಒಬ್ಬರು ಶ್ರೇಷ್ಠ ಇನ್ನೊಬ್ಬರು ತಿಳಿಯದವರು ಎಂದು ವಾದಿಸುತ್ತೇವೆ. ತಿಳಿವು ಮೂಡುವವರೆಗೆ ಸತ್ಯದ ಹೊಳಹು ಆಗುವವರಿಗೆ ಇಷ್ಟು ಇದ್ದುದೇ. "ಭಗವಚ್ಚಿಂತನ " ನಮಗೆ ವಿಶ್ವದೃಷ್ಟಿಯನ್ನೀಯುತ್ತದೆ.

ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು
🔹✨🔹✨🔹✨🔹✨🔹

No comments:

Post a Comment