Thursday, 4 August 2016

Osho ವಚನ ಸಾರಗಳು

ದಿವ್ಯತೆಯ ಅನುಭವ [OSHO]

ಯಾರೆಲ್ಲರೂ ಧ್ಯಾನದ ದಿಶೆಯಲ್ಲಿ ಯಾತ್ರಿಸುತ್ತಿರುತ್ತಾರೋ , ಅವರಿಗೆ ದಿವ್ಯತೆಯ ಅನುಭವ ಎಂದಿಗೂ ನಡುಗಿಸುವನ್ಥದ್ದಾಗಿರುವುದಿಲ್ಲ . ಉಳಿದವರಿಗೆ ಆ ದಿವ್ಯತೆಯ ಅನುಭವ ಪ್ರಾಥಮಿಕವಾಗಿ ಗಾಭರಿಯನ್ನು ಹುಟ್ಟಿ ಸುತ್ತದೆ ಏಕೆಂದರೆ ಅದು ಬಲು ಆಕಸ್ಮಿಕ ಮತ್ತು ಆನಂದ ಪೂರ್ಣ ಘಟನೆ ಯಾಗಿರುತ್ತದೆ . ಅದನ್ನು ಸಹಿಸುವುದು ಅವರಿಗೆ ಕಷ್ಟ ಆಗುವುದು . ಅತ್ಯಂತ ಆಕಸ್ಮಿಕ ಘಟನೆ ಆದ್ದರಿಂದ ಹೃದಯದ ಬಡಿತ ಸಹಾ ನಿಂತು ಹೋಗುವ ಸಾಧ್ಯತೆ ಉಂಟು . ದುಃಖ ಅಷ್ಟೊಂದು ನಡುಗಿಸುವುದಿಲ್ಲ . ಏಕೆಂದರೆ ನಮಗೆ ಅದು ರೂಢಿ ಯಾಗಿದೆ . ನಾವು ಅದರಲ್ಲೇ ಬೆಳೆಯುತ್ತೇವೆ . ದುಃಖ ನಮ್ಮ ಜೀವನ ಶೈಲಿ ಯಾಗಿದೆ ಹಾಗಾಗಿ ಎಷ್ಟೇ  ದೊಡ್ಡ ದುಃಖದ ವಿಷಯಗಳು ಘಟಿಸಿದರೂ ಒಂದೆರಡು ವಾರ ಅದನ್ನು ಭೋಗಿಸಿ ಮರೆತುಬಿಡುತ್ತೇವೆ . ನಮಗೆ ಅದರ ತಯಾರಿಕೆ ಇರುತ್ತದೆ . ಆದರೆ ಸುಖ ನಮ್ಮ ಜೀವನ ಶೈಲಿ ಅಲ್ಲ . ಒಮ್ಮೊಮ್ಮೆ ಚಿಕ್ಕ ಪುಟ್ಟ ಸುಖಗಳು ಬಂದರೂ ಸಹಿತ ರಾತ್ರಿ ನಮಗೆ ನಿದ್ರಿಸಲೂ ಆಗುವುದಿಲ್ಲ ಅದು ಬಲು ಭಾರದ್ದಾಗಿರುತ್ತದೆ .

     ಜಗತ್ತಿನಲ್ಲಿ ಅತ್ಯಂತ ದುಃಖವನ್ನು ಬ್ಹೊಗಿಸುವ ಶಕ್ತಿವಂತರು ಸಾಕಷ್ಟೇ ಇದ್ದಾರೆ , ಆದರೆ ಮಹಾ ಸುಖವನ್ನು ಅನುಭವಿಸಬಲ್ಲವರು ಅತಿ ವಿರಳ . ಪ್ರಾರ್ಥನೆಗಳನ್ನು ನಾವು ಸುಖಕ್ಕಾಗಿ ಮಾಡುತ್ತೇವೆ . ಆದರೆ ಇದ್ದಕ್ಕಿದ್ದಂತೆಯೇ ನಮಗೆ ಸುಖ ಏನಾದರೂ ಸಿಕ್ಕಿತು ಎಂದರೆ ಆಗ ಗೊತ್ತಾಗುತ್ತದೆ ,ಆಗ ಗೊತ್ತಾಗುತ್ತದೆ , ಆಗ ನಾವು ಸಹಾ ಕೂಗುತ್ತೇವೆ 'ಸಾಕು ನಮ್ಮಿಂದ ಇದನ್ನು ಸಹಿಸಲಾಗುವುದಿಲ್ಲ ,ವಾಪಸ್ಸು ತೆಗೆದುಕೋ ' ಎಂದು ಭಗವದ್ ಗೀತೆಯಲ್ಲಿ ಅರ್ಜುನನಿಗೆ ವಿಶ್ವ ರೂಪ ದರ್ಶನ ದಲ್ಲಿ ಆದದ್ದೂ ಇದುವೇ .

     ಇದಕ್ಕಾಗಿಯೇ ಭಗವಂತ ನಮಗೆ ಸುಖವನ್ನು ಕಂತು ಕಂತಾಗಿ ಕೊಡುವುದು ..

ಅರ್ಥ ಮಾಡಿ ಕೊಳ್ಳಬೇಕಾದ ವಿಚಾರ ವಿದು
ನೀವು ನಿಮ್ಮ ದೇಹವೇ ಆಗಿದ್ದೀರಿ. ಈಗ ನೀವು ಕೇವಲ ನಿಮ್ಮ ದೇಹವೇ ಆಗಿದ್ದೀರಿ , ಮತ್ತೇನೂ ಅಲ್ಲ.ಆತ್ಮ ಇತ್ಯಾದಿ ಗಳ ಬಗ್ಗೆ ನಿಮಗೆ ಕಲ್ಪನೆ ಇರಬಹುದು, ಆದರೆ ಇವು ಕಲ್ಪನೆ ಗಳು ಮಾತ್ರ. ಈಗ ನೀವು ಇರುವಂತೆ ಕೇವಲ ಶರೀರ ಮಾತ್ರ ವಾಗಿದ್ದೀರಿ ಈ ಕಲ್ಪನೆ ಯು ಸಹ ಭಯ ಆಧಾರಿತವಾದದ್ದು.
ಆತ್ಮ ಎಂಬುದು ಇದೆ ಯೋ ಇಲ್ಲವೋ ನಿಮಗೆ ತಿಳಿಯದು . ಶಾಶತ್ವತೆಯ ಸಾಕ್ಷಾತ್ಕಾರ ವಾಗುವಂತಹ ಅಂತರಾತ್ಮ ದ ಆಳಕ್ಕೆ ನೀವಿನ್ನೂ ಭೇದಿಸಿಲ್ಲ. ನೀವು ಕೇವಲ ಅದರ ಬಗ್ಗೆ ಕೇಳಿದ್ದೀರಿ ಅಷ್ಟೇ ಹಾಗೂ ಸಾವಿನ ಭಯದಿಂದಾಗಿ ನೀವು ಅದಕ್ಕೆ ಅಂಟಿಕೊಂಡು ಇದ್ದೀರಿ ಅಷ್ಟೇ.  ಸಾವು ನಿಶ್ಚಿತ ವಾದದ್ದು ಎಂದು ನಿಮಗೆ ತಿಳಿದಿದೆ ಹಾಗೂ ಸಾವು ಇಲ್ಲದ್ದು ಏನೋ ಒಂದು ಇರಲೆಂದು ನೀವು ಬಯಸುತ್ತಾ ನಂಬುತ್ತಾ ಇರುತ್ತೀರಿ  ಇದೊಂದು ಆಶಯ ಪೂರೈಕೆಯಾಗಿದೆ

ಆತ್ಮ ಇಲ್ಲ ಅಂತ ನಾನು ಹೇಳುತ್ತಿಲ್ಲ.  ಸಾವು ಇಲ್ಲದ್ದು ಏನೂ ಇಲ್ಲ ವೆಂದು ನಾನು ಹೇಳುತ್ತಿಲ್ಲ ಆದರೆ ನೀವು ಅದನ್ನು ನಂಬಿಕೊಂಡಿರುವ ಶರೀರ ಮಾತ್ರ ವಾಗಿದ್ದೀರಿ .ಈ ಕಾರಣದಿಂದಾಗಿ ನೀವು ನಿಮಗೆ ವಯಸ್ಸಾದಂತೆಲ್ಲಾ ಹೆಚ್ಚು ನಿಶ್ಶಕ್ತರಾದಂತೆಲ್ಲಾ ಅಮರ ಆತ್ಮದ ಬಗ್ಗೆ ಹೆಚ್ಚು  ನಂಬುತ್ತಾರೆ ಹೋಗುತ್ತೀರಿ.  ಅದರೆ ಇದರಿಂದ ಏನೂ ಪ್ರಯೋಜನವಿಲ್ಲ .

ಎಲ್ಲ ನಂಬಿಕೆ ಗಳೂ ಸಹ ಭಯ ಆಧಾರಿತವಾಗಿದೆ ಆದರೆ ಯಾರು ಹೀಗೆ ನಂಬುತ್ತಾರೋ ವಾಸ್ತವ ದಲ್ಲಿ ಆತ ತನ್ನನ್ನೇ ಮೋಸಗೊಳಿಸಿಕೊಳ್ಳುತ್ತಿರುತ್ತಾನೆ
ಸಾವಿಲ್ಲದ್ದು ಇದೆ ಆದರೆ ಅದನ್ನು ನೀವು ಅರಿತುಕೊಳ್ಳಬೇಕು . ಬರೀ ನಂಬುವುದರಿಂದ ಕೆಲಸ ಆಗದು ಇದಕ್ಕೆ ಧ್ಯಾನ ವೊಂದರಿಂದಲೇ ಸಾಧ್ಯ.



ಅರಿಷಡ್ವರ್ಗಗಳು ನಮ್ಮ ಶತೃಗಳೇನಲ್ಲ
ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯ ಗಳಾದ ಅರಿಷಡ್ವರ್ಗಗಳನ್ನು  ನಮ್ಮ ಶತೃ ಗ ಳೆಂದು ಹೇಳುತ್ತಾರೆ . ಅವುಗಳನ್ನು ಜಯಿಸಬೇಕು ಅಂತ ಹೇಳುತ್ತಾರೆ. ಆದರೆ ಅವು ಯಾವುದೂ ಕೂಡಾ ಶತೃಗಳಲ್ಲ. ಈ ಭಗವಂತನ ಸೃಷ್ಟಿಯಲ್ಲಿ ಅವುಗಳಿಗೂ ಕೂಡಾ ತನ್ನದೇ ಆದ ಪ್ರಾಧಾನ್ಯ ತೆಗಳಿವೆ.  ಅವೂ ಕೂಡಾ ಉಪಯೋಗ ಕರವೇ. ಆದರೆ ಅವನ್ನು ಅರಿತು ಉಪಯೋಗಿಸಬೇಕಷ್ಟೆ.  ಅರಿಯದಿದ್ದರೆ ಮಾತ್ರ. ಆಪತ್ತು.ಹಾಗಂದ್ರೆ ಮಾತ್ರಕ್ಕೆ ಅವು ನಮ್ಮ ಶತೃಗಳಲ್ಲ               ಅವುಗಳನ್ನು ಶತೃಗಳಂತೆ ಭಾವಿಸಿದರೆ ಆಗ ಅವುಗಳಿಂದ ನಮಗೆ ನಷ್ಟ ವೇ ಹೆಚ್ಚು.  ಯೋಚಿಸಿ ನೋಡಿ.
     ವಿದ್ಯುತ್ ಚ್ಛಕ್ತಿಯು ನಮಗೆ ಎಷ್ಟು  ಉಪಯೋಗಕರ. ಹಾಗಂತ ನಾವು ಅದನ್ನು ಕೈಗಳಿಂದ ಮುಟ್ಟಲಾಗುವುದೇನು . ಮುಟ್ಟಿ ದರೆ ಷಾಕ್ ಹೊಡೆಯುವುದೆಂದು ಅದನ್ನು ಶತೃವೆಂದು ಭಾವಿಸಿ ಅದನ್ನು ಉಪಯೋಗಿಸದೆ ಇರಲಾಗುವುದೇ.


ಆಚಲ ರಾಗುವ ವಿಧಾನಗಳು [ಓಶೋ ವಚನದಿಂದ ]

 ಜೀವನ ಎರಡು ಸಮ ತೋಲನಗಳನ್ನು ಹೊಂದಿದೆ . ಒಂದು ಇರುವಿಕೆಯದು , ಮತ್ತೊಂದು ಮಾಡುವಿಕೆಯದು .                            ನಿಮ್ಮ ಇರುವಿಕೆ ನಿಮ್ಮ ಸ್ವಭಾವ . ಅದು ಸದಾ ನಿಮ್ಮೊಂದಿಗೆ ಇದೆ . ಅದನ್ನು ಪಡೆಯಲು ನೀವೆನನ್ನೂ ಮಾಡಬೇಕಾಗಿಲ್ಲ . ನೀವು ಅದೇ ಆಗಿದ್ದೀರಿ . ನೀವು ಅದನ್ನು ಹೊಂದಿದ್ದೀರಿ ಎಂದಲ್ಲ , ನಿಮ್ಮ ಮತ್ತು ಅದರ ನಡುವೆ ಆ ಅಂತರವೂ ಸಹಾ ಇಲ್ಲ . ನೀವು ಅದೇ ಆಗಿರುವಿರಿ . ನೀವು ನಿಮ್ಮ ಇರುವಿಕೆ ಅಸ್ತಿತ್ವ ಆಗಿದ್ದೀರಿ .                                                    ಮಾಡುವಿಕೆ ಒಂದು ಸಾಧನೆಯಾಗಿದೆ . ನೀವು ಏನನ್ನು ಮಾಡುತ್ತೀರೋ ಅದು ಈಗಾಗಲೇ ಇಲ್ಲ . ನೀವು ಮಾಡಿದಲ್ಲಿ ಅದು ಆಗುವುದು , ನೀವು ಮಾಡದಿದ್ದಲ್ಲಿ ಅದು ಆಗುವುದಿಲ್ಲ .


ಓಶೋ ವಚನ ಸಾರ [ನಿಮ್ಮ ಸ್ವಭಾವಕ್ಕೆ ಕಿವಿಗೊಡಿ ]

ಮಾನವತೆಗೆ  ಘಟಿಸಿರುವ ಎಲ್ಲಕ್ಕಿಂತ ಮಿಗಿಲಾದ ದುರಂತ ಎಂದರೆ ಆಂತರಿಕ ವಿಭಜನೆ . ಆಂತರ್ಯದಲ್ಲಿ ಮಾನವ ಎಕವಾಗಿದ್ದಲ್ಲಿ ಆಟ ಯಾವ ರೀತಿಯ ಅಮಾನವೀಯತೆಯನ್ನೂ ಸಹಾ ಸಹಿಸುವುದಿಲ್ಲ . ತನ್ನ ಬುದ್ಧಿವಂತಿಕೆಗೆ ವಿರುದ್ಧವಾದುದು ಏನನ್ನೂ ಸಹಾ ಆತ  ಸಹಿಸುವುದಿಲ್ಲ . ಆತ ಯಾವುದೇ ರೀತಿಯ ಮೂರ್ಖತೆ , ಮೂಢ ನಂಬಿಕೆಗಳನ್ನು ಅದರ ಇತಿಹಾಸ ಎಷ್ಟೇ ದೀರ್ಘದ್ದಾಗಿರಲಿ ಅದು ಎಷ್ಟೇ ಸಂಮಾನದಿಂದ ಕೂಡಿ ದ್ದಾಗಿರಲಿ ಅವುಗಳನ್ನು ಸಹಿಸುವುದಿಲ್ಲ . ಯಾವ ವ್ಯಕ್ತಿ ಅಖಂಡ ನಾಗಿರುತ್ತಾನೋ ಆತನಲ್ಲಿ ಭೇದಿಸಿ ನೋಡುವ ದೃಷ್ಟಿ ಇರುತ್ತದೆ . ಅಷ್ಟೇ ಅಲ್ಲದೆ ತನ್ನ ಬುದ್ಧಿವಂತಿಕೆಗೆ ಸರಿ ಹೊಂದುವ ಕ್ರಿಯಾಶೀಳನಾಗುವ ಕ್ಷಮತೆಯನ್ನು ಆತ ಹೊಂದಿರುತ್ತಾನೆ .             ಸ್ವಾಭಾವಿಕ ವಾದದ್ದು ಏನನ್ನೇ  ಆಗಲಿ ನೀವು ಖಂಡಿಸಿದಿರಿ ಎಂದರೆ ನಿಮ್ಮನ್ನೇ ನೀವು ವಿಭಜಿಸಿಕೊಳ್ಳುತ್ತೀರಿ . ನೀವು ನಿಮ್ಮದೇ ಸ್ವಭಾವದ ವಿರುದ್ಧವಾಗುತ್ತೀರಿ . ವಿಭಜನೆ ಮೂಡುತ್ತದೆ .   ಯಾವುದೆಲ್ಲವೂ ಪ್ರಾಕೃತಿಕವೋ ಅದು ಒಳ್ಳೆಯದು . ಎಂದಾದರೂ ಸ್ವಾಭಾವಿಕ ಮತ್ತು ನೈತಿಕ ವಿಷಯಗಳ ನಡುವೆ ಆಯ್ಕೆ ಬಂದರೆ ನೈತಿಕವನ್ನು ಮರೆತುಬಿಡಿ  ಸ್ವಾಭಾವಿಕವಾದುದನ್ನೆ ಆಯ್ದುಕೊಳ್ಳಿ . ಸ್ವಾಭಾವಿಕ ಹಾಗೂ ಆದರ್ಶಗಳ ನಡುವೆ ಘರ್ಷಣೆ ಉಂಟಾದಲ್ಲಿ ಆದರ್ಶವನ್ನು ಬಿಟ್ಟು ಹಾಕಿ ಸ್ವಾಭಾವಿಕವಾದುದನ್ನೇ ಒಪ್ಪಿಕೊಳ್ಳಿ .             ನಿಮ್ಮ ಸ್ವಭಾವಕ್ಕೆ ಕಿವಿಗೊಡಿ , ಆಗ ನಿಧಾನವಾಗಿ , ದಿನ ಕಳೆದಂತೆ ನೀವು ಪುನಃ ಏಕತೆ ಆಗುವಿರಿ . ಯಾವತ್ತು ನೀವು ಏಕತೆ ಯಾಗುವಿರೋ ಆಗ ಜೀವನಕ್ಕೆ ಒಂದು ಸಂಪೂರ್ಣವಾಗಿ ಭಿನ್ನವಾದ ಅರ್ಥ ಇರುತ್ತದೆ . ಅದು ಜೀವಂತವಾಗಿರುತ್ತದೆ . ವಿದ್ರೋಹಿ ಆಗುವ ಸಾಮರ್ಥ್ಯವನ್ನು ಹೊಂದಿರುತ್ತದೆ . ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಸಮರ್ಥವಾಗಿರುತ್ತದೆ . ಪಣ ಒಡ್ಡುವ ಸಾಮರ್ಥ್ಯವನ್ನೂ ಅದು ಹೊಂದಿರುತ್ತದೆ . ಯಾವ ವ್ಯಕ್ತಿ ಅಖಂಡ ನಾಗಿರುತ್ತಾನೋ ಸಮಗ್ರನಾಗಿರುತ್ತಾನೊ , ಕೇವಲ ಆತ ಮಾತ್ರ ಪರಮಾತ್ಮನನ್ನು ತಲುಪುವಲ್ಲಿ ಯಶಸ್ವಿಯಾಗಬಲ್ಲ . ಏಕೆಂದರೆ ಆ ಯಾತ್ರೆ ದೀರ್ಘವಾದದ್ದು , ಕಷ್ಟ ಕಾರ್ಪಣ್ಯಗಳಿಂದ ಕೂಡಿದುದು ಆಗಿದೆ , ಅದಕ್ಕೆ ಮಹತ್ತರ ಸಮಗ್ರತೆ ಅಗತ್ಯವಾಗಿದೆ .
Posted by Ramesh Gupta

ಪ್ರಪ್ರಥಮ ಮೂಲ ಭೂತ ಶೋಧನೆ ತನ್ನ ಆಂತರಿಕತೆ ಆಗಿರಬೇಕು . [jaggi vaasudev]

ನಾನು ಕಂಡಂತೆ ಮಾನವತೆ ದಿಕ್ಕೆಟ್ಟಿದೆ . ಹೀಗಾಗಲು ಕಾರಣ , ಮಾನವ ಸ್ವತಹ ತನ್ನ ಆಂತರಿಕ ಅಸ್ತಿತ್ವದ ಅನ್ವೇಷಣೆಯ ಬದಲಾಗಿ ಭೌತಿಕ ಪ್ರಪಂಚದ ಅನ್ವೇಷಣೆಯನ್ನು ಆಯ್ದುಕೊಂದಿರುವುದೇ ಆಗಿದೆ . ಮನುಷ್ಯನಿಗೆ ತನಗಿಂತ ಹೆಚ್ಚು ಪ್ರಮುಖ್ಯವಾದುದು ಮತ್ತೇನೂ ಇರಬಾರದು , ಆತನ ಪ್ರಪ್ರಥಮ ಮೂಲ ಭೂತ ಶೋಧನೆ ತನ್ನ ಆಂತರಿಕತೆ  ಆಗಿರಬೇಕು .   ಮಾನವನು ತನ್ನನ್ನು ತಾನು ಅರಿಯದಿದ್ದಲ್ಲಿ ಆತನ ಉಳಿದೆಲ್ಲ ತಿಳುವಳಿಕೆಗಳೂ ಸಹಾ ಅನಧಿಕೃತ ವಾಗಿರುತ್ತದೆ . ಅಜ್ನಾನಿಯ ಕೈಯಲ್ಲಿ ಯಾವುದೂ  ಸಹಾ ಸೃಜನಾತ್ಮಕ ಆಗಲಾರದು . ಆದರೆ ಅರಿತವನ ಕೈಯಲ್ಲಿ ಅಜ್ಞಾನವೂ ಸಹಾ ಸೃಜನಾತ್ಮಕತೆಯ ಸಾಧನವಾಗಬಲ್ಲದು . ವ್ಯಕ್ತಿ ತನ್ನನ್ನು ತಾನು ಅರಿತುಕೊಂಡಲ್ಲಿ , ತನ್ನ ಧಣಿ ಆದಲ್ಲಿ ಕೇವಲ ಆಗ ಆತನ ಇತರೆ ಸಾಧನೆಗಳು ಮೌಲಿಕವಾಗುವುದು .   ಅಂತ್ಯವಿಲ್ಲದ ಭೌತಿಕ ಶಕ್ತಿ ನಮ್ಮ ಅಧೀನದಲ್ಲಿದೆ , ಆದರೆ ಮಾನವ ಹೃದಯದ ಆಳದ ಕಲ್ಪನೆಯೇ ನಮಗಿಲ್ಲವಾಗಿದೆ . ಭೌತಿಕ ವಸ್ತುಗಳ ಅಣು ರೇಣು ವಿನ ರೂಪು ರೇಖೆಗಳು ನಮಗೆ ತಿಳಿದಿದೆ . ಆದರೆ ಆತ್ಮದ ಅಣುವಿನ ರೂಪು ರೇಖೆಯ ಬಗ್ಗ್ಗೆ ನಮಗೇನೂ ತಿಳಿಯದು . ಇದು ನಮ್ಮ ಮಹಾ ದೌರ್ಭಾಗ್ಯವಾಗಿದೆ   ಆತ್ಮ ಜ್ಞಾನದಿಂದ ನಾವೇನನ್ನು ಅರಿಯಬಲ್ಲವೋ ಅದಕ್ಕೆ ಹೋಲಿಸಿದಲ್ಲಿ ಪದಾರ್ಥಗಳ ಬಗ್ಗೆ ನಾವಿಂದು ಏನನ್ನು ತಿಳಿದಿದ್ದೆವೋ ಅದು ಏನೇನೂ ಅಲ್ಲ .  

No comments:

Post a Comment