🌺ಅಮೃತ ಧಾರೆ🌺
... [by enlightened master jaggi vaasudev]
🔱ಸಮಯ ಸಂದರ್ಭ ಹಾಗೂ ಸನ್ನಿವೇಶಗಳು ಎಲ್ಲಾ ಯಾವತ್ತೂ ನಿಮ್ಮ ಪರವಾಗಿಯೇ ಇರುವುದಿಲ್ಲ . ಯಾಕೆಂದರೆ ಈ ಪರಿಸರ ಈ ಜಗತ್ತು ನಿರ್ಮಾಣವಾಗಿರುವುದು ಕೇವಲ ನಿಮಗಾಗಿ ಮಾತ್ರವಲ್ಲ . ಸನ್ನಿವೇಶವನ್ನು ನಿಮ್ಮ ಪರವಾಗಿ ಇಟ್ಟುಕೊಳ್ಳುವುದು ಜಾಣತನ .
🔱ಸದಾ ಒಳ್ಳೆಯ ಚಿಂತನಗಳೇ ನಡೆಯಬೇಕೆಂದು ಆಶಿಸುವುದು ಸಕಾರಾತ್ಮಕ ಚಿಂತನೆಯಲ್ಲ ಏನೇ ಆದರೂ ಒಳ್ಳೆಯದಕ್ಕೆ ಆಗಿರಬಹುದು ಎಂದು ಯೋಚಿಸುವುದು ಸಕಾರಾತ್ಮಕ ಚಿಂತನೆ .
🔱ಜೀವನ ಯಾವತ್ತೂ ಒಂದೇ ರೀತಿ ಇರುವುದಿಲ್ಲ ಅಲ್ಲದೆ ಅದು ಸದಾ ನಿಮ್ಮ ಪರವಾಗಿಯೇ ಇರುವುದಿಲ್ಲ . ಆದ್ದರಿಂದ ನಿಮಗೆ ಹಿತವಲ್ಲದ ಸಂದರ್ಭ ಎದುರಾದಾಗ ಕಂಗಾಲಾಗದೆ ತಾಳ್ಮೆಯಿಂದ ಎದುರಿಸಿ ಅದರಿಂದ ಪಾರಾಗುವ ಮಾರ್ಗಗಳು ನಿಮಗೇ ಗೊತ್ತಾಗುತ್ತವ.
🔱ನಿಮ್ಮ ಮನಸ್ಸನ್ನು ನೀವು ಎಲ್ಲಿಂದ ಪಡೆದಿರಿ ? ಹುಟ್ಟಿದಂದಿನಿಂದ ನಿಮ್ಮ ಸುತ್ತ ಮುತ್ತ ನಿಮ್ಮ ಮೇಲೆ ಬಂದು ಬಿದ್ದ ವಿಷಯಗಳು ,ಕಲಿತ ಪಾಠಗಳು ತಿಳಿದುಕೊಂಡ ವಿಚಾರಗಳು ಪಡೆದ ಅನುಭವಗಳು ಸಮಾಜದಿಂದ ಹೊರಿಸಲಾದ ವಿಚಾರಗಳು ಈ ಎಲ್ಲವನ್ನೂ ಸೇರಿಸಿ ತುಂಬಿಸಿಕೊಂಡ ಕಸದ ತೊಟ್ಟಿಯೇ ಮನಸ್ಸು .
🔱ಉತ್ಸಾಹವಾಗಲಿ ಬೇಸರಿಕೆಯಾಗಲಿ ಅವು ಎರಡೂ ನಿಮ್ಮ ಮನಸ್ಸಿನದೇ ಸೃಷ್ಟಿ , ನೀವು ನಿಮ್ಮ ಮನಸ್ಸಿಗನುಗುಣವಾಗಿ ಜೀವನವನ್ನು ನಡೆಸುತ್ತಿರುವುದರಿಂದ ನಿನ್ನೆ ಮಾಡಿದುದನ್ನೇ ಮತ್ತೆ ಮತ್ತೆ ಮಾಡುತ್ತಿದ್ದೇವೆ ಎಂಬ ಭಾವನೆ ನಿಮ್ಮನ್ನು ಆವರಿಸುತ್ತದೆ .
🔱ನಿನ್ನೆ ಎಂಬುದು ನೆನಪು . ನಿನ್ನೆ ಮೋಡಗಳು ಹೇಗೆ ಎಲ್ಲೆಲ್ಲಿ ಹೇಗಿದ್ದವು ಎಂಬುದನ್ನು ಆಕಾಶ ಲೆಕ್ಕ ನೋಡಲಿಲ್ಲ ಎಷ್ಟು ಅಲೆಗಳು ತನ್ನ ತೀರಕ್ಕೆ ಬಂದು ಅಪ್ಪಳಿಸಿದವೆಂದು ಕಡಲು ಲೆಕ್ಕ ಬರೆದುಕೊಂಡಿಲ್ಲ ಆದರೆ ಮಾನವನು ಮಾತ್ರವೇ ನೆನಪುಗಳನ್ನು ಹೊರೆಯಾಗಿಟ್ಟುಕೊಂಡು ಜೀವಿಸುವನು .
🔱ಜೀವನವು ಎಂದಿಗೂ ಆಯಾಸಗೊಳ್ಳುವುದಿಲ್ಲ . ನೀವು ಜೀವಿಸಿರುವ ಭೂಮಿಯೂ ಸಹಾ ನಿಲ್ಲದೆ ಸುತ್ತು ಹಾಕುತ್ತಲೇ ಇರುತ್ತದೆ ಯಾವುದೇ ಕಾಲದಲ್ಲಿ ನೀವು ತಲೆಯೆತ್ತಿ ನೋಡಿದರೂ ಆಕಾಶದಲ್ಲಿ ಒಂದು ಹೊಸತನವನ್ನು ಕಾಣುತ್ತೀರಿ ನಿಮ್ಮ ಮನಸ್ಸು ಮಾತ್ರ ಅದನ್ನು ಸವಿಯಲು ತಿಳಿಯದೆ ಒದ್ದಾಡುತ್ತಿರುತ್ತದೆ .
🔱ನಿಮ್ಮ ಜಿಗುಪ್ಸೆಗೆ ಕಾರಣ ಬೇರೇನೂ ಅಲ್ಲ ನಿಮ್ಮ ಮನಸ್ಸನ್ನು ಹೇಗೆ ಬಳಸಿಕೊಳ್ಳುವುದು ಎಂಬುದು ನಿಮಗೆ ಗೊತ್ತಿಲ್ಲದಿರುವುದೇ ಆಗಿದೆ . ಆದ್ದರಿಂದ ಅದು ನಿಮ್ಮನ್ನು ಬಳಸಿಕೊಳ್ಳುತ್ತಿದೆ .
🍁✨🍁✨🍁✨🍁✨🍁
No comments:
Post a Comment