🔹ಶ್ರೀವಾಣಿ🔹
🔺ದೇವರೇ_ದೊಡ್ಡವನು 🔺
ಒಬ್ಬ ರಾಜನು ಅತ್ಯಂತ ಜನಪ್ರಿಯನಾಗಿದ್ದ. ಬಲಿಷ್ಠ ಸಾಮ್ರಾಟನಾದ ಆತನಿಗೆ ಸಿರಿಸಂಪದ ಯಥೇಚ್ಚವಾಗಿತ್ತು. ಆದರೆ ಅಷ್ಟೇ ಧಾರ್ಮಿಕನಾಗಿದ್ದ. ಒಂದು ದಿನ ರಾಜನು ಸಾಗರದ ದಡದಲ್ಲಿ ಕುಳಿತಿದ್ದ. ಸಾಗರದ ಭವ್ಯತೆಯನ್ನು ಅನುಭವಿಸುತ್ತಿದ್ದ. ಇದೇ ಸಮಯವೆಂದು ಹೊಗಳುಭಟ್ಟರು ರಾಜನನ್ನು ಸುತ್ತಿಸತೊಡಗಿದರು. ‘ರಾಜರೇ’ ನೀವು ಜಗದೊಡೆಯರು. ನಿಮ್ಮನ್ನು ಎದುರಿಸುವ ಸಾಮರ್ಥ್ಯ ಈ ಪ್ರಪಂಚದಲ್ಲಿ ಯಾರಿಗೂ ಇಲ್ಲ!’
“ಹಾಗಲ್ಲ ನಾನು ಈ ಪ್ರಪಂಚದ ಎದುರು ಅತ್ಯಂತ ಸಣ್ಣವ. ಸುಮ್ಮನೆ ನನ್ನನ್ನು ಸುತ್ತಿಸಬೇಡಿ” ಎಂದು ರಾಜ ವಿನಂತಿಸಿದ. ಆದರೆ ಹೋಗಳುಭಟ್ಟರು ಕೇಳಲಿಲ್ಲ. ಮತ್ತೆ ಹೇಳಿದರು- “ಸಾಧ್ಯವಿಲ್ಲ. ನೀವು ಅಜೆಯರು ನಿಮ್ಮನ್ನು ಎದುರಿಸುವ ಶಕ್ತಿ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ಈಗ ನೀವು ಆಜ್ಞೆ ಮಾಡಿದರೆ ಈ ಸಾಗರವೂ ಹಿಂದೆ ಸರಿಯುತ್ತದೆ.”
‘ಹೀಗೋ, ಬನ್ನಿ ನೋಡೋಣ’ ಎಂದ ರಾಜ. ‘ಸಾಗರವೇ ಹಿಂದೆ ಸರಿ’ ಎಂದ, ಒಂದು ಕ್ಷಣ ಸಾಗರ ಹಿಂದೆ ಸರಿದಂತಾಯಿತು. ಮರುಕ್ಷಣವೆ ಬೆಟ್ಟದೆತ್ತರದ ತೆರೆ ರಾಜನತ್ತಲೇ ಧಾವಿಸಿತು. ಭಟ್ಟಂಗಿಗಳು ಹೇಳದೇ ಕೇಳದೇ ಓಡಿ ಹೋಗಿದ್ದರು. ಈ ಪ್ರಪಂಚದಲ್ಲಿ ಪರಮಾತ್ಮನೇ ದೊಡ್ಡವನು?.
ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ
🍁🔺🔺🍁🔺🔺🍁🔺🔺
🔺ದೇವರೇ_ದೊಡ್ಡವನು 🔺
ಒಬ್ಬ ರಾಜನು ಅತ್ಯಂತ ಜನಪ್ರಿಯನಾಗಿದ್ದ. ಬಲಿಷ್ಠ ಸಾಮ್ರಾಟನಾದ ಆತನಿಗೆ ಸಿರಿಸಂಪದ ಯಥೇಚ್ಚವಾಗಿತ್ತು. ಆದರೆ ಅಷ್ಟೇ ಧಾರ್ಮಿಕನಾಗಿದ್ದ. ಒಂದು ದಿನ ರಾಜನು ಸಾಗರದ ದಡದಲ್ಲಿ ಕುಳಿತಿದ್ದ. ಸಾಗರದ ಭವ್ಯತೆಯನ್ನು ಅನುಭವಿಸುತ್ತಿದ್ದ. ಇದೇ ಸಮಯವೆಂದು ಹೊಗಳುಭಟ್ಟರು ರಾಜನನ್ನು ಸುತ್ತಿಸತೊಡಗಿದರು. ‘ರಾಜರೇ’ ನೀವು ಜಗದೊಡೆಯರು. ನಿಮ್ಮನ್ನು ಎದುರಿಸುವ ಸಾಮರ್ಥ್ಯ ಈ ಪ್ರಪಂಚದಲ್ಲಿ ಯಾರಿಗೂ ಇಲ್ಲ!’
“ಹಾಗಲ್ಲ ನಾನು ಈ ಪ್ರಪಂಚದ ಎದುರು ಅತ್ಯಂತ ಸಣ್ಣವ. ಸುಮ್ಮನೆ ನನ್ನನ್ನು ಸುತ್ತಿಸಬೇಡಿ” ಎಂದು ರಾಜ ವಿನಂತಿಸಿದ. ಆದರೆ ಹೋಗಳುಭಟ್ಟರು ಕೇಳಲಿಲ್ಲ. ಮತ್ತೆ ಹೇಳಿದರು- “ಸಾಧ್ಯವಿಲ್ಲ. ನೀವು ಅಜೆಯರು ನಿಮ್ಮನ್ನು ಎದುರಿಸುವ ಶಕ್ತಿ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ಈಗ ನೀವು ಆಜ್ಞೆ ಮಾಡಿದರೆ ಈ ಸಾಗರವೂ ಹಿಂದೆ ಸರಿಯುತ್ತದೆ.”
‘ಹೀಗೋ, ಬನ್ನಿ ನೋಡೋಣ’ ಎಂದ ರಾಜ. ‘ಸಾಗರವೇ ಹಿಂದೆ ಸರಿ’ ಎಂದ, ಒಂದು ಕ್ಷಣ ಸಾಗರ ಹಿಂದೆ ಸರಿದಂತಾಯಿತು. ಮರುಕ್ಷಣವೆ ಬೆಟ್ಟದೆತ್ತರದ ತೆರೆ ರಾಜನತ್ತಲೇ ಧಾವಿಸಿತು. ಭಟ್ಟಂಗಿಗಳು ಹೇಳದೇ ಕೇಳದೇ ಓಡಿ ಹೋಗಿದ್ದರು. ಈ ಪ್ರಪಂಚದಲ್ಲಿ ಪರಮಾತ್ಮನೇ ದೊಡ್ಡವನು?.
ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ
🍁🔺🔺🍁🔺🔺🍁🔺🔺
No comments:
Post a Comment