ಬೇಟಿ ಬಚಾವೋ, ಬೇಟಿ ಪಡಾವೋ-ಹೆಣ್ಣು ಮಕ್ಕಳ ರಕ್ಷಣೆ
ಮಗ ಮತ್ತು ಮಗಳು ಸಮಾನರು ಎನ್ನುವುದು ನಮ್ಮ ಮಂತ್ರವಾಗಿರಬೇಕು.
“ಹೆಣ್ಣು ಮಕ್ಕಳ ಜನನವನ್ನು ನಾವು ಖುಷಿಯಿಂದ ಸಂಭ್ರಮಿಸಬೇಕು. ನಾವು ನಮ್ಮ ಹೆಣ್ಣು ಮಕ್ಕಳ ಬಗ್ಗೆ ಒಂದೇ ರೀತಿಯ ಅಭಿಮಾನ ಹೊಂದಿರಬೇಕು. ನಿಮ್ಮ ಪುತ್ರಿಯ ಜನನವಾದಾಗ ಕನಿಷ್ಟ 5 ಗಿಡಗಳನ್ನು ನೆಟ್ಟು ಸಂಭ್ರಮಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ.”- ತಾವು ದತ್ತು ಪಡೆದಿರುವ ಜಯಪುರ ಗ್ರಾಮದಲ್ಲಿ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಮನವಿ.
2015ರ ಜನವರಿ 22 ರಂದು ಪ್ರಧಾನ ಮಂತ್ರಿಯವರು ಹರಿಯಾಣದ ಪಾಣಿಪತ್ ನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಚಾಲನೆ ನೀಡಿದರು. ಮಕ್ಕಳ ಲಿಂಗಾನುಪಾತ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಈ ಯೋಜನೆ ಉತ್ತರ ಕಂಡುಕೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿತವಾಗಿದೆ.
ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆಯ ಅನುಷ್ಠಾನ ಮತ್ತು ರಾಷ್ಟ್ರವ್ಯಾಪಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಮೊದಲ ಹಂತದಲ್ಲಿ ದೇಶದ 100 ಜಿಲ್ಲೆಗಳಲ್ಲಿ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ತರಬೇತಿ, ವಿಚಾರದ ಅರಿವು, ಜಾಗೃತಿ ಕಾರ್ಯಕ್ರಮಗಳು ಮತ್ತು ತಳಮಟ್ಟದಲ್ಲಿ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಜನರ ಮನಸ್ಸಿನಲ್ಲಿಯೇ ಬದಲಾವಣೆ ತರುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಎನ್ ಡಿ ಎ ಸರಕಾರವು, ಹೆಣ್ಣು ಮಕ್ಕಳ ಬಗೆಗಿನ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವ ಉದ್ದೇಶ ಹೊಂದಿದೆ. ಪುತ್ರಿಯೊಂದಿಗೆ ಸೆಲ್ಫಿ ಅಭಿಯಾನ ಆರಂಭಿಸಿದ ಹರಿಯಾಣದ ಬಿಬಿಪುರದ ಸರಪಂಚನನ್ನು ಪ್ರಧಾನ ಮಂತ್ರಿ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೊಗಳಿದ್ದರು. ಇದಾದ ಬಳಿಕ ಪ್ರಧಾನ ಮಂತ್ರಿಯವರು ದೇಶದ ಎಲ್ಲಾ ತಂದೆಯಂದಿರಿಗೂ ಮಗಳ ಜೊತೆ ಸೆಲ್ಫಿ ತೆಗೆಸಿಕೊಳ್ಳುವಂತೆ ಕರೆ ನೀಡಿದ್ದರು. ಇದಕ್ಕೆ ಭಾರೀ ಪ್ರತಿಕ್ರಿಯೆ ಲಭ್ಯವಾಗಿತ್ತು. ಕೇವಲ ಭಾರತವಷ್ಟೇ ಅಲ್ಲ, ವಿದೇಶಗಳಿಂದಲೂ ಜನರು ತಮ್ಮ ಮಗಳ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದರು. ಅಲ್ಲದೆ, ಇದು ಹೆಣ್ಣು ಮಕ್ಕಳನ್ನು ಹೊಂದಿರುವ ತಂದೆಯಂದಿರಿಗೆ ಹೆಮ್ಮೆಯ ಕ್ಷಣವೂ ಆಗಿತ್ತು.
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಆರಂಭಿಸಿದ ಬಳಿಕ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಬಹುಸ್ತರೀಯ ಜಿಲ್ಲಾ ಕಾರ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಹೆಚ್ಚಿನ ತರಬೇತಿ ನೀಡುವ ಉದ್ದೇಶದಿಂದ, ತರಬೇತುದಾರರಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು 2015ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ, ಈಗಾಗಲೇ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 9 ಹಂತದ ತರಬೇತಿಗಳನ್ನು ನಡೆಸಿದೆ.
ಸಮುದಾಯಗಳನ್ನು ದೊಡ್ಡ ಮಟ್ಟದಲ್ಲಿ ತಲುಪಲು, ಯೋಜನೆಯ ಮಾಹಿತಿಯನ್ನು ಜನರಿಗೆ ತಿಳಿಸಲು ಬಾರೀ ಪ್ರಮಾಣದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಗಳು, ಸೇನಾ ಶಾಲೆಗಳು ಮತ್ತು ಸರಕಾರಿ ಇಲಾಖೆಗಳನ್ನು ಬಳಸಿಕೊಂಡು ಹಲವು ಸಮಾವೇಶಗಳನ್ನು ಆಯೋಜಿಸಲಾಗಿದೆ.
ಹೆಣ್ಣು ಜಗತ್ತಿನ ಕಣ್ಣು
ಹೆಣ್ಣು ಜಗತ್ತಿನ ಕಣ್ಣು
ಸ್ನೇಹಿತರೇ
ಈಗಿನ ಜನತೆ ಒಡಲೊಳಗಿರುವ ಭ್ರೂಣ ಹೆಣ್ಣೆಂದು ತಿಳಿದೊಡನೆ ತೆಗಿಸಿಬಿಡುವ ಮನಸ್ಥಿತಿ ಹೊಂದಿದ್ದಾರೆ ಆದರೆ ಈ ಮುಟ್ಟಾಳರಿಗೆ ತಿಳಿದಿಲ್ಲಾ. ಇದೇ ಕೆಲಸ ತನ್ನ ಅಜ್ಜ ಮಾಡಿದ್ದರೆ ತನಗೆ ಶ್ರೇಷ್ಠ ತಾಯಿ ಸಿಗುತ್ತಿರಲಿಲ್ಲಾ ಎಂದು.ಇದೇ ಕೆಲಸ ತನ್ನ ತಂದೆ ಮಾಡಿದ್ದರೆ ಮುದ್ದಿನ ಅಕ್ಕ/ ತಂಗಿಯರು ಸಿಗುತ್ತಿರಲಿಲ್ಲಾ ಎಂದು. ಗಂಡಿನ ಆಶ್ರಯವಿಲ್ಲದೆ ಹೆಣ್ಣಿನ ಬದುಕು ಪರಿಪೂರ್ಣವಾಗುತ್ತದೆಯೋ ಇಲ್ಲವೊ ನನಗೆ ತಿಳಿದಿಲ್ಲಾ ಆದರೆ ಹೆಣ್ಣಿನ ಆಶ್ರಯ(ಪ್ರೀತಿ ಮಮತೆ ಮಮಕಾರ. ..ಇತ್ಯಾದಿ)ವಿಲ್ಲದೆ ಯಾವ ಗಂಡಿನ ಬದುಕು ಪರಿಪೂರ್ಣವಾಗಲು ಸಾದ್ಯವೇ ಇಲ್ಲಾ. ಹೌದು ಸ್ನೇಹಿತರೇ ಹೆಣ್ಣು ನಮ್ಮ ಜೀವನದಲ್ಲಿ ತಾಯಿ,ಅಕ್ಕ ತಂಗಿ, ಹೆಂಡತಿ ಮಗಳು ಎನ್ನುವ ಮಹಾತ್ತರವಾದ ಪಾತ್ರಗಳನ್ನು ನಿರ್ವಹಿಸುತ್ತಾಳೆ ತಾಯಿ ಇಲ್ಲದೆ ಜನ್ಮವಿಲ್ಲಾ. ಹೆಣ್ಣಿಲ್ಲದ ಮನೆ ಅದು ಮನೆಯೇ ಅಲ್ಲಾ ಹೆಣ್ಣಿಲ್ಲದಿದ್ದರೆ ಈ ಜಗತ್ತು ಶೂನ್ಯ ಮತ್ತು ಕತ್ತಲು. ಒಬ್ಬ ತಂದೆ ಎಂದಿಗು ಸಹ ತಾಯಿಯ ಸ್ಥಾನ ತುಂಬಲು ಸಾಧ್ಯವಿಲ್ಲಾ ಆದರೆ ಒಂದು ತಾಯಿ ಪರಿಪೂರ್ಣವಾಗಿ ತಂದೆಯ ಸ್ಥಾನ ತುಂಬುತ್ತಾಳೆ. ಹೆಣ್ಣು ಹುಟ್ಟುತ್ತಲೇ ಆಕೆಗೆ ಪ್ರೀತಿ ಮಮತೆ ಮಮಕಾರ ಕರುಣೆ ಸಹನೆ ಎನ್ನುವ ತಾಯ್ತನದ ಗುಣಗಳು ಬಂದಿರುತ್ತವೆ.ಆದರೆ ಗಂಡಿಗೆ ಐವತ್ತಾದರು ತನ್ನ ಜವಾಬ್ದಾರಿಯ ಅರಿವೇ ಇರುವುದಿಲ್ಲಾ ಎಲ್ಲಾರಿಗು ಹೆಣ್ಣು ಎಂದೊಡನೆ ನೆನಪಿಗೆ ಬರುವುದು ತಾಯಿ ಅಕ್ಕ ತಂಗಿ ಹೆಂಡತಿ ಮಗಳು ಮಾತ್ರ ಆದರೆ ಅತ್ತಿಗೆ ಎನ್ನುವ ಪಾತ್ರವು ಸಹ ನಮ್ಮ ಬಾಳಲಿ ಅತಿಮುಖ್ಯವಾಗಿದೆ ಅಕ್ಕ ತಂಗಿಯರು ಮದುವೆ ಮಾಡಿಕೋಂಡು ಹೋದ ನಂತರ ಅಣ್ಣನನ್ನು ಮದುವೆ ಮಾಡಿಕೊಂಡು ಮನೆಗೆ ಬರುವ ಆ ಹೆಣ್ಣು ಅಕ್ಕ ತಂಗಿಯರ ಸ್ಥಾನ ತುಂಬಿಕೊಂಡು ನಮಗೆ ತಿಳಿಯದೆಯೇ ತಾಯಿಯ ಸ್ಥಾನ ತುಂಬಿರುತ್ತಾರೆ ಆದಕಾರಣ ಅತ್ತಿಗೆ ತಾಯಿ ಸಮಾನವೇ ಸರಿ ಇಂತಹ ಹೆಣ್ಣಿನ ಮಹತ್ವಗಳನ್ನು ತಿಳಿದ ನಮ್ಮ ಹಿರಿಯರು ಎಲ್ಲ ಜೀವ ಜಲ(ನದಿ)ಗಳಿಗೆ ಕಾವೇರಿ ತುಂಗಾ ಭದ್ರ ಕಪಿಲ ಗಂಗಾ ನೇತ್ರಾವತಿ ಶರಾವತಿ ಎಂದು ಹೆಣ್ಣಿನ ಹೆಸರುಗಳನ್ನೇ ಇಟ್ಟಿದ್ದಾರೆ ಮತ್ತು ಭಾರತವನ್ನು ಭಾರತ ಮಾತೆ ಎಂದು ಕರ್ನಾಟಕವನ್ನು ತಾಯಿ ಭುವನೇಶ್ವರಿ ಎಂದು ಭಾಷೆಗಳನ್ನು ಗುರುತಿಸಲು ಮಾತೃಭಾಷೆ ಎನ್ನುವ ಪದ ಉಪಯೋಗಿಸುತ್ತಾ ತಾಯಿಗೆ ಶ್ರೇಷ್ಠ ಸ್ಥಾನ ನೀಡಿದ್ದಾರೆ ಇನ್ನು ಹೆಣ್ಣಿನ ಸಾಧನೆಯ ಬಗ್ಗೆ ಹೇಳುತ್ತಾ ಹೋದರೆ ಮತ್ತೋಂದು ಇತಿಹಾಸವೇ ಬರೆಯಬೇಕಾಗುತ್ತದೆ. ನನ್ನ ಪ್ರಕಾರ ಅವಕಾಶ ಸಿಕ್ಕಿ ಸಾಧಿಸಿದ ಹೆಣ್ಣುಮಕ್ಕಳಿಗಿಂತ ಅವಕಾಶ ವಂಚಿತರಾಗಿ ತಮ್ಮ ಜವಾಬ್ದಾರಿಗಳನ್ನು ಅರಿತು ತನ್ನ ಕೆಲಸ ಕಾರ್ಯಗಳನ್ನು ಸುಸುತ್ರವಾಗಿ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಹೆಣ್ಣುಮಗಳು ಸಾಧಕಿಯೇ ಸರಿ ನಮ್ಮ ಜೀವನದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸುವ ಹೆಣ್ಣಿಗು ಮತ್ತು ಹೆಣ್ಣಿನ ಜನ್ಮಕ್ಕು ಸಾವಿರ ನಮನಗಳು
ಮಗ ಮತ್ತು ಮಗಳು ಸಮಾನರು ಎನ್ನುವುದು ನಮ್ಮ ಮಂತ್ರವಾಗಿರಬೇಕು.
“ಹೆಣ್ಣು ಮಕ್ಕಳ ಜನನವನ್ನು ನಾವು ಖುಷಿಯಿಂದ ಸಂಭ್ರಮಿಸಬೇಕು. ನಾವು ನಮ್ಮ ಹೆಣ್ಣು ಮಕ್ಕಳ ಬಗ್ಗೆ ಒಂದೇ ರೀತಿಯ ಅಭಿಮಾನ ಹೊಂದಿರಬೇಕು. ನಿಮ್ಮ ಪುತ್ರಿಯ ಜನನವಾದಾಗ ಕನಿಷ್ಟ 5 ಗಿಡಗಳನ್ನು ನೆಟ್ಟು ಸಂಭ್ರಮಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ.”- ತಾವು ದತ್ತು ಪಡೆದಿರುವ ಜಯಪುರ ಗ್ರಾಮದಲ್ಲಿ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಮನವಿ.
2015ರ ಜನವರಿ 22 ರಂದು ಪ್ರಧಾನ ಮಂತ್ರಿಯವರು ಹರಿಯಾಣದ ಪಾಣಿಪತ್ ನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಚಾಲನೆ ನೀಡಿದರು. ಮಕ್ಕಳ ಲಿಂಗಾನುಪಾತ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಈ ಯೋಜನೆ ಉತ್ತರ ಕಂಡುಕೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿತವಾಗಿದೆ.
ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆಯ ಅನುಷ್ಠಾನ ಮತ್ತು ರಾಷ್ಟ್ರವ್ಯಾಪಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಮೊದಲ ಹಂತದಲ್ಲಿ ದೇಶದ 100 ಜಿಲ್ಲೆಗಳಲ್ಲಿ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ತರಬೇತಿ, ವಿಚಾರದ ಅರಿವು, ಜಾಗೃತಿ ಕಾರ್ಯಕ್ರಮಗಳು ಮತ್ತು ತಳಮಟ್ಟದಲ್ಲಿ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಜನರ ಮನಸ್ಸಿನಲ್ಲಿಯೇ ಬದಲಾವಣೆ ತರುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಎನ್ ಡಿ ಎ ಸರಕಾರವು, ಹೆಣ್ಣು ಮಕ್ಕಳ ಬಗೆಗಿನ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವ ಉದ್ದೇಶ ಹೊಂದಿದೆ. ಪುತ್ರಿಯೊಂದಿಗೆ ಸೆಲ್ಫಿ ಅಭಿಯಾನ ಆರಂಭಿಸಿದ ಹರಿಯಾಣದ ಬಿಬಿಪುರದ ಸರಪಂಚನನ್ನು ಪ್ರಧಾನ ಮಂತ್ರಿ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೊಗಳಿದ್ದರು. ಇದಾದ ಬಳಿಕ ಪ್ರಧಾನ ಮಂತ್ರಿಯವರು ದೇಶದ ಎಲ್ಲಾ ತಂದೆಯಂದಿರಿಗೂ ಮಗಳ ಜೊತೆ ಸೆಲ್ಫಿ ತೆಗೆಸಿಕೊಳ್ಳುವಂತೆ ಕರೆ ನೀಡಿದ್ದರು. ಇದಕ್ಕೆ ಭಾರೀ ಪ್ರತಿಕ್ರಿಯೆ ಲಭ್ಯವಾಗಿತ್ತು. ಕೇವಲ ಭಾರತವಷ್ಟೇ ಅಲ್ಲ, ವಿದೇಶಗಳಿಂದಲೂ ಜನರು ತಮ್ಮ ಮಗಳ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದರು. ಅಲ್ಲದೆ, ಇದು ಹೆಣ್ಣು ಮಕ್ಕಳನ್ನು ಹೊಂದಿರುವ ತಂದೆಯಂದಿರಿಗೆ ಹೆಮ್ಮೆಯ ಕ್ಷಣವೂ ಆಗಿತ್ತು.
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಆರಂಭಿಸಿದ ಬಳಿಕ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಬಹುಸ್ತರೀಯ ಜಿಲ್ಲಾ ಕಾರ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಹೆಚ್ಚಿನ ತರಬೇತಿ ನೀಡುವ ಉದ್ದೇಶದಿಂದ, ತರಬೇತುದಾರರಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು 2015ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ, ಈಗಾಗಲೇ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 9 ಹಂತದ ತರಬೇತಿಗಳನ್ನು ನಡೆಸಿದೆ.
ಸಮುದಾಯಗಳನ್ನು ದೊಡ್ಡ ಮಟ್ಟದಲ್ಲಿ ತಲುಪಲು, ಯೋಜನೆಯ ಮಾಹಿತಿಯನ್ನು ಜನರಿಗೆ ತಿಳಿಸಲು ಬಾರೀ ಪ್ರಮಾಣದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಗಳು, ಸೇನಾ ಶಾಲೆಗಳು ಮತ್ತು ಸರಕಾರಿ ಇಲಾಖೆಗಳನ್ನು ಬಳಸಿಕೊಂಡು ಹಲವು ಸಮಾವೇಶಗಳನ್ನು ಆಯೋಜಿಸಲಾಗಿದೆ.
ಹೆಣ್ಣು ಜಗತ್ತಿನ ಕಣ್ಣು
ಹೆಣ್ಣು ಜಗತ್ತಿನ ಕಣ್ಣು
ಸ್ನೇಹಿತರೇ
ಈಗಿನ ಜನತೆ ಒಡಲೊಳಗಿರುವ ಭ್ರೂಣ ಹೆಣ್ಣೆಂದು ತಿಳಿದೊಡನೆ ತೆಗಿಸಿಬಿಡುವ ಮನಸ್ಥಿತಿ ಹೊಂದಿದ್ದಾರೆ ಆದರೆ ಈ ಮುಟ್ಟಾಳರಿಗೆ ತಿಳಿದಿಲ್ಲಾ. ಇದೇ ಕೆಲಸ ತನ್ನ ಅಜ್ಜ ಮಾಡಿದ್ದರೆ ತನಗೆ ಶ್ರೇಷ್ಠ ತಾಯಿ ಸಿಗುತ್ತಿರಲಿಲ್ಲಾ ಎಂದು.ಇದೇ ಕೆಲಸ ತನ್ನ ತಂದೆ ಮಾಡಿದ್ದರೆ ಮುದ್ದಿನ ಅಕ್ಕ/ ತಂಗಿಯರು ಸಿಗುತ್ತಿರಲಿಲ್ಲಾ ಎಂದು. ಗಂಡಿನ ಆಶ್ರಯವಿಲ್ಲದೆ ಹೆಣ್ಣಿನ ಬದುಕು ಪರಿಪೂರ್ಣವಾಗುತ್ತದೆಯೋ ಇಲ್ಲವೊ ನನಗೆ ತಿಳಿದಿಲ್ಲಾ ಆದರೆ ಹೆಣ್ಣಿನ ಆಶ್ರಯ(ಪ್ರೀತಿ ಮಮತೆ ಮಮಕಾರ. ..ಇತ್ಯಾದಿ)ವಿಲ್ಲದೆ ಯಾವ ಗಂಡಿನ ಬದುಕು ಪರಿಪೂರ್ಣವಾಗಲು ಸಾದ್ಯವೇ ಇಲ್ಲಾ. ಹೌದು ಸ್ನೇಹಿತರೇ ಹೆಣ್ಣು ನಮ್ಮ ಜೀವನದಲ್ಲಿ ತಾಯಿ,ಅಕ್ಕ ತಂಗಿ, ಹೆಂಡತಿ ಮಗಳು ಎನ್ನುವ ಮಹಾತ್ತರವಾದ ಪಾತ್ರಗಳನ್ನು ನಿರ್ವಹಿಸುತ್ತಾಳೆ ತಾಯಿ ಇಲ್ಲದೆ ಜನ್ಮವಿಲ್ಲಾ. ಹೆಣ್ಣಿಲ್ಲದ ಮನೆ ಅದು ಮನೆಯೇ ಅಲ್ಲಾ ಹೆಣ್ಣಿಲ್ಲದಿದ್ದರೆ ಈ ಜಗತ್ತು ಶೂನ್ಯ ಮತ್ತು ಕತ್ತಲು. ಒಬ್ಬ ತಂದೆ ಎಂದಿಗು ಸಹ ತಾಯಿಯ ಸ್ಥಾನ ತುಂಬಲು ಸಾಧ್ಯವಿಲ್ಲಾ ಆದರೆ ಒಂದು ತಾಯಿ ಪರಿಪೂರ್ಣವಾಗಿ ತಂದೆಯ ಸ್ಥಾನ ತುಂಬುತ್ತಾಳೆ. ಹೆಣ್ಣು ಹುಟ್ಟುತ್ತಲೇ ಆಕೆಗೆ ಪ್ರೀತಿ ಮಮತೆ ಮಮಕಾರ ಕರುಣೆ ಸಹನೆ ಎನ್ನುವ ತಾಯ್ತನದ ಗುಣಗಳು ಬಂದಿರುತ್ತವೆ.ಆದರೆ ಗಂಡಿಗೆ ಐವತ್ತಾದರು ತನ್ನ ಜವಾಬ್ದಾರಿಯ ಅರಿವೇ ಇರುವುದಿಲ್ಲಾ ಎಲ್ಲಾರಿಗು ಹೆಣ್ಣು ಎಂದೊಡನೆ ನೆನಪಿಗೆ ಬರುವುದು ತಾಯಿ ಅಕ್ಕ ತಂಗಿ ಹೆಂಡತಿ ಮಗಳು ಮಾತ್ರ ಆದರೆ ಅತ್ತಿಗೆ ಎನ್ನುವ ಪಾತ್ರವು ಸಹ ನಮ್ಮ ಬಾಳಲಿ ಅತಿಮುಖ್ಯವಾಗಿದೆ ಅಕ್ಕ ತಂಗಿಯರು ಮದುವೆ ಮಾಡಿಕೋಂಡು ಹೋದ ನಂತರ ಅಣ್ಣನನ್ನು ಮದುವೆ ಮಾಡಿಕೊಂಡು ಮನೆಗೆ ಬರುವ ಆ ಹೆಣ್ಣು ಅಕ್ಕ ತಂಗಿಯರ ಸ್ಥಾನ ತುಂಬಿಕೊಂಡು ನಮಗೆ ತಿಳಿಯದೆಯೇ ತಾಯಿಯ ಸ್ಥಾನ ತುಂಬಿರುತ್ತಾರೆ ಆದಕಾರಣ ಅತ್ತಿಗೆ ತಾಯಿ ಸಮಾನವೇ ಸರಿ ಇಂತಹ ಹೆಣ್ಣಿನ ಮಹತ್ವಗಳನ್ನು ತಿಳಿದ ನಮ್ಮ ಹಿರಿಯರು ಎಲ್ಲ ಜೀವ ಜಲ(ನದಿ)ಗಳಿಗೆ ಕಾವೇರಿ ತುಂಗಾ ಭದ್ರ ಕಪಿಲ ಗಂಗಾ ನೇತ್ರಾವತಿ ಶರಾವತಿ ಎಂದು ಹೆಣ್ಣಿನ ಹೆಸರುಗಳನ್ನೇ ಇಟ್ಟಿದ್ದಾರೆ ಮತ್ತು ಭಾರತವನ್ನು ಭಾರತ ಮಾತೆ ಎಂದು ಕರ್ನಾಟಕವನ್ನು ತಾಯಿ ಭುವನೇಶ್ವರಿ ಎಂದು ಭಾಷೆಗಳನ್ನು ಗುರುತಿಸಲು ಮಾತೃಭಾಷೆ ಎನ್ನುವ ಪದ ಉಪಯೋಗಿಸುತ್ತಾ ತಾಯಿಗೆ ಶ್ರೇಷ್ಠ ಸ್ಥಾನ ನೀಡಿದ್ದಾರೆ ಇನ್ನು ಹೆಣ್ಣಿನ ಸಾಧನೆಯ ಬಗ್ಗೆ ಹೇಳುತ್ತಾ ಹೋದರೆ ಮತ್ತೋಂದು ಇತಿಹಾಸವೇ ಬರೆಯಬೇಕಾಗುತ್ತದೆ. ನನ್ನ ಪ್ರಕಾರ ಅವಕಾಶ ಸಿಕ್ಕಿ ಸಾಧಿಸಿದ ಹೆಣ್ಣುಮಕ್ಕಳಿಗಿಂತ ಅವಕಾಶ ವಂಚಿತರಾಗಿ ತಮ್ಮ ಜವಾಬ್ದಾರಿಗಳನ್ನು ಅರಿತು ತನ್ನ ಕೆಲಸ ಕಾರ್ಯಗಳನ್ನು ಸುಸುತ್ರವಾಗಿ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಹೆಣ್ಣುಮಗಳು ಸಾಧಕಿಯೇ ಸರಿ ನಮ್ಮ ಜೀವನದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸುವ ಹೆಣ್ಣಿಗು ಮತ್ತು ಹೆಣ್ಣಿನ ಜನ್ಮಕ್ಕು ಸಾವಿರ ನಮನಗಳು
Thanks sir
ReplyDeleteThanks sir
ReplyDelete