Sunday, 28 August 2016

ಗುರು-ಶಿಷ್ಯರ ಅಪೂರ್ವ ಸಂಬಂಧ

ಗುರು-ಶಿಷ್ಯರ ಅಪೂರ್ವ ಸಂಬಂಧ

"ಗುರುಬ್ರಹ್ಮಾ ಗುರುರ್ವಿಷ್ಣು: ಗುರುರ್ದೇವೋ ಮಹೇಶ್ವರ:
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ:"

ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿಯಬೇಕು. ಗುರುವಿಲ್ಲದೆ ಕಲಿಯುವ ಯಾವುದೇ ವಿದ್ಯೆಯೂ ನಿರರ್ಥಕ. (ಏಕಲವ್ಯ ಸಹ ಮಾನಸಿಕವಾಗಿ ದ್ರೋಣಾಚಾರ್ಯರನ್ನು ಗುರುವಾಗಿ ಸ್ವೀಕರಿಸಿದ್ದವನು). ಗುರುವೆಂದರೆ ಶಿಕ್ಷಣವನ್ನು ನೀಡುವವನು ಮಾತ್ರವಲ್ಲ. ಭವದ ಬಂಧನವನ್ನು ನೀಗುವವನು ಎಂದು ಕವಿ ಸರ್ವಜ್ಞ. ಹೇಳುತ್ತಾನೆ.   ಅಲ್ಲದೇ "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದು ಹೇಳಲಾಗುತ್ತದೆ.  ಪ್ರಪಂಚದಲ್ಲಿ ಶಿಷ್ಯನಾದವನು ಯೋಗ್ಯ ಗುರುವಿಗಾಗಿ ಆಶಿಸುವಂತೆ, ಗುರುವಾದವನೂ ಅರ್ಹ ಶಿಷ್ಯನನ್ನು ಪಡೆಯಲು ಹಂಬಲಿಸುತ್ತಾನೆ. ಗುರುವಿಗೆ ನಾವು ಬಾಗಬೇಕು. ಬಾಗಿ ಮಾಗಬೇಕು, ಮಾಗಿ ಗುರಿಯೆಡೆಗೆ ಸಾಗಬೇಕು.   ಈ ರೀತಿ ಅಪರೂಪದ ಗುರು-ಶಿಷ್ಯರ ಸಂಬಂಧಗಳನ್ನು ತಿಳಿಸುವ ಎಷ್ಟೋ ಕಥೆಗಳನ್ನು ಮಹಾಭಾರತದಲ್ಲಿ ಕಾಣಬಹುದು. ಇಂಥವುಗಳಲ್ಲಿ ನಾನೀಗ  ಗುರು ಧೌಮ್ಯ  ಹಾಗೂ ಶಿಷ್ಯ ಉದ್ದಾಲಕ ಇವರ ಕುರಿತಾಗಿರುವ ಒಂದು ಕತೆಯನ್ನ ಹೇಳಬಯಸುತ್ತೇನೆ.

ಉದ್ದಾಲಕ!  ಇದು ಅವನ ಹೆಸರಲ್ಲ. ಅವನ ಹೆಸರು ಆರುಣಿ. ದೇಶ ಪಾಂಚಾಲ.  ಇವನ ಗುರುಗಳೇ ಆಯೋಧ ಧೌಮ್ಯ. ಗುರುಗಳು ಕಾಲಲ್ಲಿ ತೋರಿಸಿದ್ದನ್ನು ಶಿಷ್ಯನು ತಲೆಯಲ್ಲಿ ಹೊತ್ತು ಮಾಡುತ್ತಿದ್ದ. ಆರುಣಿ ಜ್ಙಾನಕ್ಕಾಗಿ ಹಾತೊರೆದು, ಸುಖ-ದು:ಖಗಳನ್ನೇ ತೊರೆದು ಗುರುಗಳನ್ನು ಶರಣು ಹೊಂದಿದ್ದ. ಶಿಷ್ಯರಿಗೆ ಮೊದಲು ಕಾಲು ಮೂಡಬೇಕು. ತಲೆ ಮೂಡುವುದು ನಂತರ. ಗುರುವಿನಿಂದ ಪಡೆದ ಹುಟ್ಟಿನಲ್ಲಿ  ಮೊದಲು ಕಾಲು, ನಂತರ ತಲೆ ಮೊಳೆಯುತ್ತದೆ. "ಆಚಾರ್ಯ ಪೂರ್ವ ರೂಪಂ. ಅಂತೇವಾಸ್ಯುತ್ತರ ರೂಪಂ." ಎಂದು ಹೇಳಲಾಗುತ್ತದೆ.



ಹೀಗೆ ಧೌಮ್ಯ ಗುರುಗಳೊಮ್ಮೆ ಆರುಣಿಯನ್ನು ಕರೆದು ಹೀಗೆ ಹೇಳುತ್ತಾರೆ. " ಮಗು, ಗದ್ದೆಯಲ್ಲಿ ನೀರು ನಿಲ್ಲಬೇಕು. ನಿಂತು ಭೂಮಿಯಲ್ಲಿ ಇಂಗಬೇಕು. ಆದರೆ ಗದ್ದೆಯ ಅಡ್ಡಗಟ್ಟಿಯಂತಿರುವ ಬದು ಒಡೆದುಹೋಗಿ ನೀರು ಹೊರಬರುತ್ತಿದೆ. ಅದನ್ನು ತಡೆ" ಎಂದು. ಗುರುಗಳ ಮಾತನ್ನು ತಲೆಯಲ್ಲಿ ಹೊತ್ತ ಆರುಣಿ, ಸೋರುತ್ತಿದ್ದ ಬದುವನ್ನು ಅಡ್ಡಗಟ್ಟಲು ಮಣ್ಣು ಕಲ್ಲುಗಳನ್ನು ಜೋಡಿಸಿದರೂ ಕಡಿಮೆಯಾಗದಿದ್ದಾಗ ಸ್ವತ: ತಾನೇ ಅಡ್ಡ ಮಲಗಿ ರಾತ್ರಿಯಿಡೀ ಅಲ್ಲೇ ಮಲಗುತ್ತಾನೆ.  ನಂತರ ಮರುದಿನ ಧೌಮ್ಯ ಗುರುಗಳು  ಇದನ್ನು ಗಮನಿಸಿದಾಗ  ಅವರಿಗೆ ಪರಮಾಶ್ಚರ್ಯವಾಗುತ್ತದೆ. ಬದುವಿಗೆ ತನ್ನ ದೇಹವನ್ನೇ ಮಣ್ಣಾಗಿ ಭಾವಿಸಿದ ಆರುಣಿಯ ಗುರುಭಕ್ತಿಯನ್ನು ಮೆಚ್ಚಿ,  ಅವನಿಗೆ ಉದ್ದಾಲಕ ನಾಗು ಎಂದು ಆಶೀರ್ವದಿಸುತ್ತಾರೆ.

"ನಾತಪಸ್ಕಾಯ, ನ ಚ  ಅಶುಶ್ರೋಷವೇ ನಾಶ್ರದ್ದದಾನಾಯ ನಾಪ್ರವಕ್ತ್ರೇಭ್ಯೋ ಬ್ರೂಯಾತ್ "  ಅಂದರೆ ತಪಸ್ಸಿಲ್ಲದವನಿಗೆ, ಗುರುಗಳಿಗೆ ಸೇವೆ ಮಾಡದವನಿಗೆ, ಶ್ರದ್ದೆಯಿಲ್ಲದವನಿಗೆ ಹಾಗೂ ತಾನು ತಿಳಿದುದನ್ನು ಇನ್ನೊಬ್ಬರಿಗೆ ಹೇಳುವ ಶಕ್ತಿಯಿಲ್ಲದವನಿಗೆ ಗುರೂಪದೇಶವು ಸಲ್ಲದು"  ಎಂದು ಹೇಳಲಾಗುತ್ತದೆ.

ಇಂದು ಗುರು ಶಿಕ್ಷಕನಾಗಿದ್ದಾನೆ. ಶಿಷ್ಯ ವಿದ್ಯಾರ್ಥಿಯಾಗಿದ್ದಾನೆ.  ಶಿಕ್ಷಣವೆನ್ನುವುದು ವ್ಯಾಪಾರವಾಗಿದೆ. ಕೆಲವು ಶಿಕ್ಷಕರು ತಮ್ಮ ಸ್ಥಾನಕ್ಕೆ ತಕ್ಕಂತೆ ಗೌರವಯುತವಾಗಿ ನಡೆದುಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗುತ್ತಾರೆ. ಮುಂತಾದ ಹಲವು ಆರೋಪಗಳೊಂದಿಗೆ ಶಿಕ್ಷಕನೆನ್ನುವ ಶಿಷ್ಯೋದ್ಧಾರಕನನ್ನು ನಾವಿಂದು ಕಟಕಟೆಯಲ್ಲಿ ನಿಲ್ಲಿಸಿದ್ದೇವೆ. ಶಿಕ್ಷಕ ನ ಸ್ಥಾನದಲ್ಲಿರುವವನು ತನ್ನ ಶಿಷ್ಯರಿಗಷ್ಟೇ ಅಲ್ಲ, ತನ್ನ ಆದರ್ಶದ ನಡತೆಯಿಂದ ಇಡೀ ಸಮಾಜಕ್ಕೇ ಗುರುವಾಗುತ್ತಾನೆ. ಆಗಬೇಕು ಕೂಡ. ಒಬ್ಬ ಗುರುವಿನ ಕರ್ತವ್ಯ, ಬುದ್ದಿವಂತ ವಿದ್ಯಾರ್ಥಿಗಳನ್ನು ರೂಪಿಸುವುದಷ್ಟೇ ಅಲ್ಲ. ಅವರನ್ನು ಪ್ರಜ್ಞಾವಂತ, ಸುಸಂಸ್ಕೃತ ನಾಗರಿಕರನ್ನಾಗಿ ರೂಪುಗೊಳಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ನಿರ್ಮಿಸುವ ಜವಾಬ್ದಾರಿ ಇದೆ. ಏಕೆಂದರೆ ಮುಂದೆ ಸಮೃದ್ದ ಸಮಾಜವೊಂದರ ನಿರ್ಮಾತೃಗಳಾಗಲಿರುವವರು ಈ ವಿದ್ಯಾರ್ಥಿಗಳೇ.

ಹಾಗೆಯೇ ವಿನಮ್ರತೆಯನ್ನು ಝಾಡಿಸಿಕೊಂಡಿರುವ, ದುಡ್ಡು ಮತ್ತು ಹೆತ್ತವರ ಅಧಿಕಾರದ ಬಲದಿಂದ ವಿದ್ಯಾಕೇಂದ್ರಗಳಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತಿರುವ, ಶಿಕ್ಷಕರೆಂದರೆ ಕೇವಲ ಅಂಕಗಳು ಎಂದು ಭಾವಿಸಿರುವ ಶಿಷ್ಯವರ್ಗಕ್ಕೂ "ಶಿಷ್ಯನಾದವರು ಹೇಗಿರಬೇಕು?" ಎಂದು ತಮ್ಮನ್ನು ಕೇಳಿಕೊಳ್ಳುವ ಅಗತ್ಯವಿದೆ.  ಪೋಷಕರು, ಸಮಾಜ, ಸರ್ಕಾರ, ಕಾನೂನುಗಳು ಕೂಡ ತಮ್ಮ ಹೊಣೆಗಾರಿಕೆಯನ್ನು ಅರಿತು ನಡೆಯಬೇಕಿದೆ.

ಸ್ಪಂದನಾ

How much do you earn ? – Meaningful Story , Message…..

⭐️How much do you earn ? – Meaningful Story , Message…..⭐️



How much do you earn ? – Meaningful Story , Message…..

A man came home from work late, tired and irritated, to find his 5-year old son waiting for him at the door.

SON: “Daddy, may I ask you a question?”
DAD: “Yeah sure, what is it?” replied the man.
SON: “Daddy, how much do you make an hour?”
DAD: “That’s none of your business. Why do you ask such a thing?” the man said angrily.
SON: “I just want to know. Please tell me, how much do you make an hour?”
DAD: “If you must know, I make Rs.100 an hour.”
SON: “Oh,” the little boy replied, with his head down.
SON: “Daddy, may I please borrow Rs.50?”

The father was furious, “If the only reason you asked that is so you can borrow some money to buy a silly toy or some other nonsense, then you march yourself straight to your room.The little boy quietly went to his room and shut the door.

———
The man had calmed down, and started to think: Maybe there was something he really needed to buy with that Rs.50 and he really didn’t ask for money very often. The man went to the door of the little boy’s room and opened the door.” Are you asleep, son?” He asked.
“No daddy, I’m awake,” replied the boy. “I’ve been thinking, maybe I was too hard on you earlier” said the man. Here’s the Rs.50 you asked for.”
———-
The little boy sat straight up, smiling. “Oh, thank you daddy!” He yelled. Then, reaching under his pillow he pulled out some crumpled up bills.The man saw that the boy already had money, started to get angry again. The little boy slowly counted out his money, and then looked up at his father. “Why do you want more money if you already have some?” the father grumbled.”Because I didn’t have enough, but now I do,” the little boy replied.
———-
“Daddy, I have Rs.100 now. Can I buy an hour of your time?
Please come home early tomorrow. I would like to have dinner with you.”
………………
The father was crushed. He put his arms around his little son, and he begged for his forgiveness.

A reminder to all of us working so hard in life. We should not let time slip through our fingers without having spent some time with those who really matter to us, those close to our hearts……..

⭐️⭐️⭐️⭐️⭐️⭐️⭐️⭐️⭐️

ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!

★ ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!

(ಮತ್ಯಾವ ಜೀವಸಂಕುಲದಲ್ಲೂ ಹೀಗಿಲ್ಲ)

★ ಗೋವಿನ ಒಂದು ಚಮಚ ತುಪ್ಪವನ್ನು ಬೆಂಕಿಗೆ ಸುರಿದಾಗ ಸುಮಾರು ಒಂದು ಟನ್ನುಗಳಷ್ಟು ಆಮ್ಲಜನಕ ಬಿಡುಗಡೆಯಾಗುತ್ತೆ !!.

★ ಗೋವಿಗೆ ವಿಷವನ್ನು ಸತತ 90 ದಿನಗಳವರೆವಿಗೂ ನೀಡುತ್ತಾ ಬಂದರೂ ಅದರ ಹಾಲಿನಲ್ಲಿ ವಿಷದ ಪ್ರಮಾಣ ಕಿಂಚಿತ್ತೂ ಇರುವುದಿಲ್ಲ...

ಮಿತ್ರರೇ,
ಈ ಮೆಸೆಜ್ ಓದಲು 5 ನಿಮಿಷ ಬೇಕಾಗಬಹುದು.ಸಮಯ ಮಾಡಿಕೊಂಡು ರಾತ್ರಿಯಾದರು ಓದಿ.
ಓದಿ ಆದ ಮೇಲೆ ಬೇರೆಯವರಿಗೂ ಕಳಿಸಿ, ಓದಲು ತಾಳ್ಮೆ ಇಲ್ಲದಿದ್ದರೆ ಕೂಡಲೇ ಫಾರ್ ವರ್ಡ್ ಮಾಡಿಬಿಡಿ....
ದೇಶ ಕಂಡ ಅತೀ ದೊಡ್ಡ ದುರಂತ "ಭೋಪಾಲ್ ಅನಿಲ ದುರಂತ" ನೀವು ಕೇಳಿರಬಹುದು. ಆ ದುರಂತ ಆದಾಗ ಸುಮಾರು 10 ಕಿ.ಮೀ ವರೆಗೆ ವಾಸವಿದ್ದ ಎಲ್ಲ ಜನರು ಸಾವೀಗಿಡಾದರು. ಆದರೆ ಕೇವಲ 1 ಕಿ.ಮೀ ದೂರವಿದ್ದ 4 ಬ್ರಾಹ್ಮಣ ಕುಟುಂಬಕ್ಕೆ ಏನೂ ಆಗಿರಲಿಲ್ಲ. ಇದರಿಂದ ಆಶ್ಚರ್ಯ ಚಕಿತರಾದರು ಸಂಶೋಧಕರು ಅವರ ಮನೆಯನ್ನು ಅಧ್ಯಯನ ನಡೆಸಿದಾಗ ಅವರ ಮನೆಯಲ್ಲಿ ದಿನ ನಿತ್ಯ 2 ಹೊತ್ತು "ಅಗ್ನಿ ಹೋತ್ರ" ಹೋಮ ಮಾಡುತ್ತಿದ್ದಾರೆಂದು ತಿಳಿಯಿತು. ಇದನ್ನು ತಿಳಿದ ಸಂಶೋಧಕರು ಬೇರೆ ಕಡೆ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂತು.
H I V ಪೀಡಿತ ಮಕ್ಕಳಿಗಾಗಿ ಮೈಸೂರಲ್ಲಿ ಒಂದು ಶಾಲೆ ಇದೆ. ಇದರ ಸ್ಥಾಪಕರಾದ ರಾಮದಾಸ್ (ಮಾಜಿ ಶಾಸಕರು) ತಮ್ಮ ವಿದ್ಯಾರ್ಥಿಗಳ ಮೇಲೆ ಇದರ ಪ್ರಯೋಗ ಮಾಡಿದರು . ಆಗ ಇಲ್ಲಿನ ಮಕ್ಕಳಲ್ಲೂ ಸಹ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು.
"ಅಗ್ನಿ ಹೋತ್ರ" ದ ವಿಧಾನ ಅಂದರೆ ಸಣ್ಣದಾದ ತಾಮ್ರದ ಹೋಮಕುಂಡಕ್ಕೆ ದನದ ಒಣ ಸಗಣಿ, ದನದ ತುಪ್ಪ ಹಾಕಿ ಅಗ್ನಿ ಸ್ಪರ್ಶ ಮಾಡಬೇಕು. ಇದನ್ನು ಬೆಳಿಗ್ಗೆ ಸೂರ್ಯೋದಯದ ಮೊದಲು, ಸಂಜೆ ಸೂರ್ಯಾಸ್ತದ ನಂತರ ಮಾಡಬೇಕು.
ಈ ಪೂಜೆ, ಹೋಮ, ಹವನ ಅಂದರೆ ಕೆಲವರಿಗೆ ಅಲರ್ಜಿ. ಆದರೆ ಇಲ್ಲಿ ವೈಜ್ಞಾನಿಕವಾಗಿ ಹೇಳುವುದಾದರೆ ತಾಮ್ರ ಬಿಸಿಯಾದಾಗ ಮತ್ತು ಸಗಣಿ, ತುಪ್ಪ ಸುಟ್ಟಾಗ ಬಿಡುಗಡೆಯಾಗುವ ಅನಿಲ ನಮ್ಮ ದೇಹ ಪ್ರವೇಶಿಸಿದಾಗ ನಮ್ಮ ದೇಹದ ನರಗಳೆಲ್ಲ ಶುದ್ಧವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ...

ಅಮಿತ್ ವೈದ್ಯ, ಇವರು ಅಮೇರಿಕಾದಲ್ಲಿ ನೆಲೆ ನಿಂತ ಭಾರತದ ಉದ್ಯಮಿ. ಇವರ ತಂದೆ ತಾಯಿ ಇಬ್ಬರು ಕ್ಯಾನ್ಸರ್ ನಿಂದ ತೀರಿ ಹೋಗುತ್ತಾರೆ. ಕೆಲವು ಸಮಯದಲ್ಲಿ ಅಮಿತ್ ರಿಗೂ ಕ್ಯಾನ್ಸರ್ ಬರುತ್ತದೆ.  ವೈದ್ಯರು 6 ತಿಂಗಳ ಕಾಲ ಮಾತ್ರ ಕಾಲಾವಕಾಶ ನೀಡುತ್ತಾರೆ. ತನ್ನ ಕೊನೆಯ ದಿನಗಳನ್ನು ಭಾರತದಲ್ಲಿ ಕಳೆಯಬೇಕೆಂದು ಗುಜರಾತ್ ಗೆ ಬಂದ ಅಮಿತ್,  ಒಬ್ಬರ ಪರಿಚಯದ ಮೇಲೆ ಕರ್ನಾಟಕಕ್ಕೆ ಬರುತ್ತಾರೆ. ಇಲ್ಲಿ ಒಂದು ಸಣ್ಣ ಚಿಕಿತ್ಸೆಗೆ ಒಳಪಡುತ್ತಾರೆ. ಕೆಲವೇ ತಿಂಗಳಲ್ಲಿ ಅವರ ಕ್ಯಾನ್ಸರ್ ಮಾಯವಾಗಿಬಿಟ್ಟಿದೆ. ಇಂದು ಬೇರೆಯವರಂತೆ ಆರೋಗ್ಯವಾಗಿ ಬದುಕುತ್ತಿದ್ದಾರೆ. ಅವರ ಮಾಡಿದ ಚಿಕಿತ್ಸೆ ಅಂದರೆ "ಪಂಚಗವ್ಯ ಚಿಕಿತ್ಸೆ".
ಇದೇ ಚಿಕಿತ್ಸೆ ಅನೇಕ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿದೆ. "ಪಂಚಗವ್ಯ" ಅಂದರೆ ಗೋಮೂತ್ರ, ಗೋಸಗಣಿ, ಗೋಹಾಲು, ಗೋತುಪ್ಪ, ಗೋಮೊಸರು ಇವೆಲ್ಲದರ ಮಿಶ್ರಣದಿಂದ ತಯಾರಾಗೋ ಔಷಧಿ.
ಈ ಚಿಕಿತ್ಸೆಯಿಂದ ಗುಣಮುಖರಾದ ಅಮಿತ್ ವೈದ್ಯ ಅವರು ಒಂದು ಇಂಗ್ಲಿಷ್  ಪುಸ್ತಕ ಬರೆದಿದ್ದಾರೆ.  ಅ
ಪುಸ್ತಕದ ಕನ್ನಡ ಹೆಸರು "ಒಂದು ದನ ನನ್ನ ಜೀವ ಹೇಗೆ ಕಾಪಾಡಿತು" ಎಂದು.
ದನವನ್ನು ದೇವರೆಂದು ಪೂಜಿಸೋ ಭಾರತೀಯರಾದ ನಮ್ಮಲ್ಲಿ ಎಷ್ಟೋ  ಜನಕ್ಕೆ ಇದರ ಮಾಹಿತಿ ಇಲ್ಲ.
ಎಷ್ಟೋ ಕಾಯಿಲೆಗಳಿಗೆ ಮೀನಿನಿಂದ ಔಷಧ ತಯಾರಿಸುತ್ತಾರೆ. ಮೀನು ತಿನ್ನದವರು ಔಷಧ ಮುಖಾಂತರ ಆದರು ತಿನ್ನಲೆ ಬೇಕು.
ಹಾಗೆಯೆ ವಿದೇಶಗಳಲ್ಲಿ ದನದ ಮೂತ್ರ, ಸಗಣಿ, ಮಾಂಸದಿಂದ ಔಷಧಿ ತಯಾರಿಸಿ ಭಾರತಕ್ಕೆ ಕಳಿಸುತ್ತಾರೆ.ಅದನ್ನು ನಾವು ತಿನ್ನುತ್ತೇವೆ.
ನಮ್ಮ ಮನೆಯಲ್ಲಿರುವ ದನದ ಬಗ್ಗೆ ನಮಗೆ ತಾತ್ಸಾರ.  ಇವುಗಳನ್ನು ನಾವು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ ನಾವು ವಿದೇಶಿ ಕಂಪನಿಯವರ ದನದ ಮಾಂಸದ ಔಷಧಿ ತಿನ್ನುವ ಅವಶ್ಯಕತೆ ಇರುತ್ತಿರಲಿಲ್ಲ.
ದನ ಎಂದು ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದ ಹಾಗೆ. ಚಿನ್ನದ ಮೊಟ್ಟೆ ಹಾಗೆ ದನಗಳು ನಮಗೆ ಚಿನ್ನದ ಜೀವನ ನಡೆಸಲು ಬೇಕಾಗುವ ಎಲ್ಲ ಅವಶ್ಯಕತೆಗಳನ್ನು ಕೊಡುತ್ತದೆ. ಆದರೆ ನಾವು ಅತೀ ಆಸೆಯಿಂದ ಕೋಳಿಯ ಹೊಟ್ಟೆ ಸೀಳಿದ ಹಾಗೆ ಧನವನ್ನು ಕಡಿದು ತಿನ್ನುತ್ತೇವೆ. ಇದು ಬೇಕಾ?
ಮನುಷ್ಯನ ದುರಾಸೆಗೆ ಕೊನೆ ಎಲ್ಲಿ.? ನಮ್ಮ ಮನೆಯಲ್ಲಿಯಲ್ಲಿ ಮೆಡಿಕಲ್ ಸೆಂಟರ್ ಇಟ್ಟುಕೊಂಡು ಕಾಯಿಲೆ ಬಂದಾಗ ಇಡೀ ಪ್ರಪಂಚ ಸುತ್ತುತ್ತೇವೆ.
ಕ್ಯಾನ್ಸರ್ ನಿಂದ ಹಿಡಿದು ತಲೆನೋವಿನ ತನಕ 5000 ಕಾಯಿಲೆಗಳಿಗೆ ದನದಲ್ಲಿ ಔಷಧಿ ಇದೆ ಅಂದರೆ ನಂಬಲೇಬೇಕು! !!!!!
ಎಬೋಲಾದಂತಹ ಹೊಸ ಖಾಯಿಲೆ ಇರಲಿ, ಇನ್ನು ಹೊಸದಾಗಿ ಹುಟ್ಟಿ ಯಾವುದೇ ಖಾಯಿಲೆ ಬರಲಿ ಅದಕ್ಕೆ ಗೋವಿನಿಂದ ಔಷಧಿ ಇದೆ.
 ದನದ ಮೂತ್ರದ ಬಗ್ಗೆ ಬಹಳ ಬೇಗ ಎಚ್ಚೆತ್ತ ಅಮೇರಿಕಾ, ಭಾರತದಲ್ಲಿರುವ ಗೋಮೂತ್ರದ ಬಗ್ಗೆ "ಪೇಟೆಂಟ್" ಗೆ ಹೋರಾಟ ನಡೆಸುತ್ತಾರೆಂದರೆ, ನಮಗೆ ಇನ್ನು ಯಾವಾಗ ಬುದ್ಧಿ ಬರುತ್ತದೆ?
ಪ್ರಪಂಚದ ಮುಂದುವರಿದ ಕೆಲವು ದೇಶಗಳ ಯುನಿವರ್ಸಿಟಿಗಳಲ್ಲಿ ಇದರ ಬಗ್ಗೆ ಒಂದು ವಿಷಯ ಇದೆ ಅಂದರೆ ನೀವು ನಂಬಲೇಬೇಕು.
ಸ್ವಾತಂತ್ರ್ಯ ಬಂದು 70 ವರ್ಷ ತುಂಬುತ್ತ ಬಂತು. ಇಷ್ಟು ವರ್ಷ ಮಲಗಿದ್ದು ಸಾಕು, ಇನ್ನಾದರು ಎಚ್ಚೆತ್ತು ಕೊಳ್ಳೊಣ.
ನಮಗಲ್ಲದಿದ್ದರು ನಮ್ಮ ಪೀಳಿಗೆಗಾದರೂ ಒಳ್ಳೆಯದಾಗಲಿ. ಮುಂದಿನ ಜನಾಂಗವಾದರೂ ಆರೋಗ್ಯವಂತ ಸಮಾಜವಾಗಲೀ.....
ಸೂಚನೆ: ಕೇವಲ ದೇಸಿತಳಿ ದನಗಳಿಂದ ಮಾತ್ರ ಔಷಧಿ ತಯಾರಿಸುತ್ತಾರೆ.
ಇಲ್ಲಿ ಕೇವಲ ಸಾಂಕೇತಿಕವಾಗಿ ನೀಡಲಾಗಿದ್ದು, ಔಷಧಿ ಪಡೆಯುವವರು ಪರಿಣಿತರ ಸಲಹೆ ಪಡೆಯಲೇಬೇಕು.

"ಆರೋಗ್ಯವಂತ ಸಮಾಜಕ್ಕಾಗಿ ಪ್ರಕಟಣೆ"

ಇಷ್ಟವಾದರೆ ಈ ಪುಟ like ಮಾಡಿ ಹಾಗೂ ಈ post share ಮಾಡಲು ಮರೆಯಬೇಡಿ.

ಬೇಟಿ ಬಚಾವೋ, ಬೇಟಿ ಪಡಾವೋ-ಹೆಣ್ಣು ಮಕ್ಕಳ ರಕ್ಷಣೆ

ಬೇಟಿ ಬಚಾವೋ, ಬೇಟಿ ಪಡಾವೋ-ಹೆಣ್ಣು ಮಕ್ಕಳ ರಕ್ಷಣೆ



ಮಗ ಮತ್ತು ಮಗಳು ಸಮಾನರು ಎನ್ನುವುದು ನಮ್ಮ ಮಂತ್ರವಾಗಿರಬೇಕು.

“ಹೆಣ್ಣು ಮಕ್ಕಳ ಜನನವನ್ನು ನಾವು ಖುಷಿಯಿಂದ ಸಂಭ್ರಮಿಸಬೇಕು. ನಾವು ನಮ್ಮ ಹೆಣ್ಣು ಮಕ್ಕಳ ಬಗ್ಗೆ ಒಂದೇ ರೀತಿಯ ಅಭಿಮಾನ ಹೊಂದಿರಬೇಕು. ನಿಮ್ಮ ಪುತ್ರಿಯ ಜನನವಾದಾಗ ಕನಿಷ್ಟ 5 ಗಿಡಗಳನ್ನು ನೆಟ್ಟು ಸಂಭ್ರಮಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ.”- ತಾವು ದತ್ತು ಪಡೆದಿರುವ ಜಯಪುರ ಗ್ರಾಮದಲ್ಲಿ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಮನವಿ.

2015ರ ಜನವರಿ 22 ರಂದು ಪ್ರಧಾನ ಮಂತ್ರಿಯವರು ಹರಿಯಾಣದ ಪಾಣಿಪತ್ ನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಚಾಲನೆ ನೀಡಿದರು. ಮಕ್ಕಳ ಲಿಂಗಾನುಪಾತ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಈ ಯೋಜನೆ ಉತ್ತರ ಕಂಡುಕೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿತವಾಗಿದೆ.

ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆಯ ಅನುಷ್ಠಾನ ಮತ್ತು ರಾಷ್ಟ್ರವ್ಯಾಪಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಮೊದಲ ಹಂತದಲ್ಲಿ ದೇಶದ 100 ಜಿಲ್ಲೆಗಳಲ್ಲಿ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ತರಬೇತಿ, ವಿಚಾರದ ಅರಿವು, ಜಾಗೃತಿ ಕಾರ್ಯಕ್ರಮಗಳು ಮತ್ತು ತಳಮಟ್ಟದಲ್ಲಿ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಜನರ ಮನಸ್ಸಿನಲ್ಲಿಯೇ ಬದಲಾವಣೆ ತರುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಎನ್ ಡಿ ಎ ಸರಕಾರವು, ಹೆಣ್ಣು ಮಕ್ಕಳ ಬಗೆಗಿನ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವ ಉದ್ದೇಶ ಹೊಂದಿದೆ. ಪುತ್ರಿಯೊಂದಿಗೆ ಸೆಲ್ಫಿ ಅಭಿಯಾನ ಆರಂಭಿಸಿದ ಹರಿಯಾಣದ ಬಿಬಿಪುರದ ಸರಪಂಚನನ್ನು ಪ್ರಧಾನ ಮಂತ್ರಿ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೊಗಳಿದ್ದರು. ಇದಾದ ಬಳಿಕ ಪ್ರಧಾನ ಮಂತ್ರಿಯವರು ದೇಶದ ಎಲ್ಲಾ ತಂದೆಯಂದಿರಿಗೂ ಮಗಳ ಜೊತೆ ಸೆಲ್ಫಿ ತೆಗೆಸಿಕೊಳ್ಳುವಂತೆ ಕರೆ ನೀಡಿದ್ದರು. ಇದಕ್ಕೆ ಭಾರೀ ಪ್ರತಿಕ್ರಿಯೆ ಲಭ್ಯವಾಗಿತ್ತು. ಕೇವಲ ಭಾರತವಷ್ಟೇ ಅಲ್ಲ, ವಿದೇಶಗಳಿಂದಲೂ ಜನರು ತಮ್ಮ ಮಗಳ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದರು. ಅಲ್ಲದೆ, ಇದು ಹೆಣ್ಣು ಮಕ್ಕಳನ್ನು ಹೊಂದಿರುವ ತಂದೆಯಂದಿರಿಗೆ ಹೆಮ್ಮೆಯ ಕ್ಷಣವೂ ಆಗಿತ್ತು.


ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಆರಂಭಿಸಿದ ಬಳಿಕ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಬಹುಸ್ತರೀಯ ಜಿಲ್ಲಾ ಕಾರ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಹೆಚ್ಚಿನ ತರಬೇತಿ ನೀಡುವ ಉದ್ದೇಶದಿಂದ, ತರಬೇತುದಾರರಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು 2015ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ, ಈಗಾಗಲೇ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 9 ಹಂತದ ತರಬೇತಿಗಳನ್ನು ನಡೆಸಿದೆ.

ಸಮುದಾಯಗಳನ್ನು ದೊಡ್ಡ ಮಟ್ಟದಲ್ಲಿ ತಲುಪಲು, ಯೋಜನೆಯ ಮಾಹಿತಿಯನ್ನು ಜನರಿಗೆ ತಿಳಿಸಲು ಬಾರೀ ಪ್ರಮಾಣದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಗಳು, ಸೇನಾ ಶಾಲೆಗಳು ಮತ್ತು ಸರಕಾರಿ ಇಲಾಖೆಗಳನ್ನು ಬಳಸಿಕೊಂಡು ಹಲವು ಸಮಾವೇಶಗಳನ್ನು ಆಯೋಜಿಸಲಾಗಿದೆ.
ಹೆಣ್ಣು ಜಗತ್ತಿನ ಕಣ್ಣು

ಹೆಣ್ಣು ಜಗತ್ತಿನ ಕಣ್ಣು

ಸ್ನೇಹಿತರೇ

         ಈಗಿನ ಜನತೆ ಒಡಲೊಳಗಿರುವ ಭ್ರೂಣ ಹೆಣ್ಣೆಂದು ತಿಳಿದೊಡನೆ ತೆಗಿಸಿಬಿಡುವ ಮನಸ್ಥಿತಿ ಹೊಂದಿದ್ದಾರೆ ಆದರೆ ಈ ಮುಟ್ಟಾಳರಿಗೆ ತಿಳಿದಿಲ್ಲಾ. ಇದೇ ಕೆಲಸ ತನ್ನ ಅಜ್ಜ ಮಾಡಿದ್ದರೆ ತನಗೆ ಶ್ರೇಷ್ಠ ತಾಯಿ ಸಿಗುತ್ತಿರಲಿಲ್ಲಾ ಎಂದು.ಇದೇ ಕೆಲಸ ತನ್ನ ತಂದೆ ಮಾಡಿದ್ದರೆ ಮುದ್ದಿನ ಅಕ್ಕ/ ತಂಗಿಯರು ಸಿಗುತ್ತಿರಲಿಲ್ಲಾ ಎಂದು. ಗಂಡಿನ ಆಶ್ರಯವಿಲ್ಲದೆ ಹೆಣ್ಣಿನ ಬದುಕು ಪರಿಪೂರ್ಣವಾಗುತ್ತದೆಯೋ ಇಲ್ಲವೊ ನನಗೆ ತಿಳಿದಿಲ್ಲಾ ಆದರೆ ಹೆಣ್ಣಿನ ಆಶ್ರಯ(ಪ್ರೀತಿ ಮಮತೆ ಮಮಕಾರ. ..ಇತ್ಯಾದಿ)ವಿಲ್ಲದೆ ಯಾವ ಗಂಡಿನ ಬದುಕು ಪರಿಪೂರ್ಣವಾಗಲು ಸಾದ್ಯವೇ ಇಲ್ಲಾ. ಹೌದು ಸ್ನೇಹಿತರೇ ಹೆಣ್ಣು ನಮ್ಮ ಜೀವನದಲ್ಲಿ ತಾಯಿ,ಅಕ್ಕ ತಂಗಿ, ಹೆಂಡತಿ ಮಗಳು ಎನ್ನುವ ಮಹಾತ್ತರವಾದ ಪಾತ್ರಗಳನ್ನು ನಿರ್ವಹಿಸುತ್ತಾಳೆ ತಾಯಿ ಇಲ್ಲದೆ ಜನ್ಮವಿಲ್ಲಾ. ಹೆಣ್ಣಿಲ್ಲದ ಮನೆ ಅದು ಮನೆಯೇ ಅಲ್ಲಾ ಹೆಣ್ಣಿಲ್ಲದಿದ್ದರೆ ಈ ಜಗತ್ತು ಶೂನ್ಯ ಮತ್ತು ಕತ್ತಲು. ಒಬ್ಬ ತಂದೆ ಎಂದಿಗು ಸಹ ತಾಯಿಯ ಸ್ಥಾನ ತುಂಬಲು ಸಾಧ್ಯವಿಲ್ಲಾ ಆದರೆ ಒಂದು ತಾಯಿ ಪರಿಪೂರ್ಣವಾಗಿ ತಂದೆಯ ಸ್ಥಾನ ತುಂಬುತ್ತಾಳೆ. ಹೆಣ್ಣು ಹುಟ್ಟುತ್ತಲೇ ಆಕೆಗೆ ಪ್ರೀತಿ ಮಮತೆ ಮಮಕಾರ ಕರುಣೆ ಸಹನೆ ಎನ್ನುವ ತಾಯ್ತನದ ಗುಣಗಳು ಬಂದಿರುತ್ತವೆ.ಆದರೆ ಗಂಡಿಗೆ ಐವತ್ತಾದರು ತನ್ನ ಜವಾಬ್ದಾರಿಯ ಅರಿವೇ ಇರುವುದಿಲ್ಲಾ ಎಲ್ಲಾರಿಗು ಹೆಣ್ಣು ಎಂದೊಡನೆ ನೆನಪಿಗೆ ಬರುವುದು ತಾಯಿ ಅಕ್ಕ ತಂಗಿ ಹೆಂಡತಿ ಮಗಳು ಮಾತ್ರ ಆದರೆ ಅತ್ತಿಗೆ ಎನ್ನುವ ಪಾತ್ರವು ಸಹ ನಮ್ಮ ಬಾಳಲಿ ಅತಿಮುಖ್ಯವಾಗಿದೆ ಅಕ್ಕ ತಂಗಿಯರು ಮದುವೆ ಮಾಡಿಕೋಂಡು ಹೋದ ನಂತರ ಅಣ್ಣನನ್ನು ಮದುವೆ ಮಾಡಿಕೊಂಡು ಮನೆಗೆ ಬರುವ ಆ ಹೆಣ್ಣು ಅಕ್ಕ ತಂಗಿಯರ ಸ್ಥಾನ ತುಂಬಿಕೊಂಡು ನಮಗೆ ತಿಳಿಯದೆಯೇ ತಾಯಿಯ ಸ್ಥಾನ ತುಂಬಿರುತ್ತಾರೆ ಆದಕಾರಣ ಅತ್ತಿಗೆ ತಾಯಿ ಸಮಾನವೇ ಸರಿ ಇಂತಹ ಹೆಣ್ಣಿನ ಮಹತ್ವಗಳನ್ನು ತಿಳಿದ ನಮ್ಮ ಹಿರಿಯರು ಎಲ್ಲ ಜೀವ ಜಲ(ನದಿ)ಗಳಿಗೆ ಕಾವೇರಿ ತುಂಗಾ ಭದ್ರ ಕಪಿಲ ಗಂಗಾ ನೇತ್ರಾವತಿ ಶರಾವತಿ ಎಂದು ಹೆಣ್ಣಿನ ಹೆಸರುಗಳನ್ನೇ ಇಟ್ಟಿದ್ದಾರೆ ಮತ್ತು ಭಾರತವನ್ನು ಭಾರತ ಮಾತೆ ಎಂದು ಕರ್ನಾಟಕವನ್ನು ತಾಯಿ ಭುವನೇಶ್ವರಿ ಎಂದು ಭಾಷೆಗಳನ್ನು ಗುರುತಿಸಲು ಮಾತೃಭಾಷೆ ಎನ್ನುವ ಪದ ಉಪಯೋಗಿಸುತ್ತಾ ತಾಯಿಗೆ ಶ್ರೇಷ್ಠ ಸ್ಥಾನ ನೀಡಿದ್ದಾರೆ ಇನ್ನು ಹೆಣ್ಣಿನ ಸಾಧನೆಯ ಬಗ್ಗೆ ಹೇಳುತ್ತಾ ಹೋದರೆ ಮತ್ತೋಂದು ಇತಿಹಾಸವೇ ಬರೆಯಬೇಕಾಗುತ್ತದೆ. ನನ್ನ ಪ್ರಕಾರ ಅವಕಾಶ ಸಿಕ್ಕಿ ಸಾಧಿಸಿದ ಹೆಣ್ಣುಮಕ್ಕಳಿಗಿಂತ ಅವಕಾಶ ವಂಚಿತರಾಗಿ ತಮ್ಮ ಜವಾಬ್ದಾರಿಗಳನ್ನು ಅರಿತು ತನ್ನ ಕೆಲಸ ಕಾರ್ಯಗಳನ್ನು ಸುಸುತ್ರವಾಗಿ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಹೆಣ್ಣುಮಗಳು ಸಾಧಕಿಯೇ ಸರಿ ನಮ್ಮ ಜೀವನದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸುವ ಹೆಣ್ಣಿಗು ಮತ್ತು ಹೆಣ್ಣಿನ ಜನ್ಮಕ್ಕು ಸಾವಿರ ನಮನಗಳು

ಟೀಕೆಗೆ ಕುಗ್ಗದೇ ಹೊಗಳಿಕೆಗೆ ಹಿಗ್ಗದೆ ನಡೆ

ಟೀಕೆಗೆ ಕುಗ್ಗದೇ ಹೊಗಳಿಕೆಗೆ ಹಿಗ್ಗದೆ ನಡೆ



'ಹೊಯಿದವರೆನ್ನ ಹೊರೆದವರೆಂಬೆ, ಬೈದವರೆನ್ನ ಬಂಧುಗಳೆಂಬೆ, ನಿಂದಿಸಿದವರೆನ್ನ ತಂದೆ ತಾಯಿಗಳೆಂಬೆ, ಆಳಿಗೊಂಡವರೆನ್ನ ಆಳ್ದರೆಂಬೆ, ಜರಿದವರೆನ್ನ ಜನ್ಮ ಬಂಧುಗಳೆಂಬೆ, ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ ಕೂಡಲ ಸಂಗಮದೇವಾ..' ಈಗ ಎಲ್ಲ ಕಡೆ ಇದೇ ಸಮಸ್ಯೆ. ಶಾಲೆಯಲ್ಲಿ ಮೇಷ್ಟ್ರು ಬೈದರು ಅಂತ ಮಕ್ಕಳು ಹೇಳಿದರೆ, ಆಫೀಸ್‌ನಲ್ಲಿ ಬಾಸ್‌ ಬೈದರು ಅಂತ ಯಜಮಾನ ಹೇಳ್ತಾರೆ. ನೀವು ಡ್ಯೂಟಿಗೆ ಹೋಗಿದ್ದಾಗ ಪಕ್ಕದ ಮನೆಯವರು ನಮ್ಮ ಬಗ್ಗೆ ಏನೇನೋ ಮಾತಾಡಿದ್ರಂತೆ ಅಂತ ಮನೆಯಾಕೆ ಯಜಮಾನನಿಗೆ ದೂರು ಹೇಳುತ್ತಾರೆ. ಎಲ್ಲ ಕಡೆ ಸುಖಾಸುಮ್ಮನೆ ಹೀಗೆ ಬೈಯುವವರು, ನಿಂದಿಸುವವರು, ಜರಿಯುವವರು ಇರುತ್ತಾರೆ. ಅದು ಅವರ ಜನ್ಮಜಾತ ಕಾಯಿಲೆಯೇನೋ ಎನ್ನುವಷ್ಟರ ಮಟ್ಟಿಗೆ ಟೀಕಿಸುವವರು ಇರುತ್ತಾರೆ. ಕೆಲವರು ತಮಗೆ ಯಾವುದೇ ರೀತಿ ಸಂಬಂಧ ಇಲ್ಲದವರನ್ನೂ ಟೀಕಿಸುವ ಪ್ರವೃತ್ತಿ ರೂಢಿಸಿಕೊಂಡಿರುತ್ತಾರೆ. ಅವರ ಗುಣಸ್ವಭಾವ ಬದಲಿಸಲಾಗದಷ್ಟು ಆಳವಾಗಿ ಬೇರೂರಿರುತ್ತದೆ. ಹಾಗೆಂದು, ಬಾಯಿಗೆ ಬಂದ ಹಾಗೆ ಮಾತನಾಡುವವರನ್ನು ಸುಮ್ಮನೆ ಬಿಡಲಾದೀತೆ? ನಮ್ಮ ಮಾನ ಮರ್ಯಾದೆ ಹರಾಜು ಹಾಕಿಕೊಳ್ಳಲಾದೀತೆ ಎಂದು ಅನಿಸುವುದು ಸಹಜ. ಹಾಗೆಂದು, ನೀವು ನಿಮ್ಮನ್ನು ಟೀಕಿಸುವವರಿಗೆಲ್ಲ ಉತ್ತರ ಕೊಡುತ್ತಾ ಹೋದರೆ, ಉತ್ತರ ಕೊಡುವ ಕೆಲಸ ಬಿಟ್ಟು ಬೇರೇನನ್ನೂ ಮಾಡಲಾಗದು. ಜಗದಗಲ, ಮುಗಿಲಗಲ ಎನ್ನುವಂತೆ ಟೀಕಿಸುವವರು, ನಿಂದಿಸುವವರ ಯಾದಿ ಇಷ್ಟೇ ಎಂದು ಹೇಳಲು ಬರುವುದಿಲ್ಲ. ಅದು ಚಿರಂತನ, ನಿತ್ಯನೂತನ ಎನ್ನುವಂತೆ ಹೊಸ ಹೊಸ ಮಾದರಿಯಲ್ಲಿ ನಮ್ಮನ್ನು ಟೀಕೆಯ ಕಟಕಟೆಯಲ್ಲಿ ನಿಲ್ಲಿಸುವವರು ಎದುರಾಗುತ್ತಲೇ ಇರುತ್ತಾರೆ. ಇಂತಹ ಅಂತೆಕಂತೆಗಳಿಗೆ ಕಿವಿಗೊಡದೇ ನೀವು ಕ್ರಿಯಾಶೀಲರಾದಲ್ಲಿ ಮಾತ್ರ ನಿಮ್ಮ ಬದುಕನ್ನು ನೀವು ಕಟ್ಟಿಕೊಳ್ಳಬಹುದು. ಟೀಕೆಗಳಿಗೆ ಒಂದೊಮ್ಮೆ ಕಿವಿಗೊಟ್ಟರೂ ಅದು ನಿಮ್ಮ ಅಭ್ಯುದಯಕ್ಕೆ ಸಹಾಯಕವಾಗುವಂತಿರಬೇಕು. ಇದನ್ನೇ ಬಸವಣ್ಣ ತಮ್ಮ ವಚನದಲ್ಲಿ ಹೇಳಿದ್ದಾರೆ. ಹೊಯಿದವರನ್ನು, ಬೈದವರನ್ನು, ನಿಂದಿಸಿದವರನ್ನು, ಆಳಿಗೊಂಡವರನ್ನು, ಜರಿದವರನ್ನು ಎಷ್ಟು ಆಪ್ತವಾಗಿ ನೋಡಿದ್ದಾರಲ್ಲವೇ? ಅಷ್ಟೇ ಅಲ್ಲ, ಹೀಗೆ ಮಾಡದೇ ಬರೀ ಹೊಗಳುವವರನ್ನು ಹೊನ್ನಶೂಲದಲಿಕ್ಕಿದವರೆಂಬೆ ಎಂದು ಹೇಳುವ ಮೂಲಕ ಹೊಗಳುವವರು ಎಷ್ಟು ಅಪಾಯಕಾರಿ ಅಂತಲೂ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಟೀಕಿಸುವವರು ಯಾವುದೇ ಉದ್ದೇಶಕ್ಕೆ ಟೀಕಿಸಲಿ. ನಮ್ಮನ್ನು ಒಂದಿಷ್ಟು ಆತ್ಮಾವಲೋಕನಕ್ಕಾದರೂ ಹಚ್ಚುತ್ತಾರೆ. ಓರೆ ಕೋರೆ ತಿದ್ದಿಕೊಳ್ಳಲು ಸಹಾಯ ಮಾಡುತ್ತಾರೆ. ಬಹುಶಃ ಇದೇ ಅರ್ಥದಲ್ಲಿ ಬಸವಣ್ಣ ಗ್ರಹಿಸಿದ್ದರಿಂದಲೇ ಅಂಥವರನ್ನು ಬಂಧುಗಳೆಂದೇ ಸ್ವೀಕರಿಸಿದ್ದಾರೆ. ಈ ಹೊಗಳುಭಟ್ಟರು ನಿಜಕ್ಕೂ ಅಪಾಯಕಾರಿಗಳು. ಎಲ್ಲ ಹುಳುಕು, ಓರೆಕೋರೆ ಮುಚ್ಚಿ ಫಲಾನುಭವಿಗಳಾಗುವವರು. ಪ್ರಯೋಜನ ಸಿಕ್ಕನಂತರ ತಮ್ಮ ಹಾದಿ ಹಿಡಿಯುತ್ತಾರೆ. ಇದಕ್ಕಿಂತ ನಮ್ಮನ್ನು ಟೀಕಿಸಿ, ಜರಿದು, ನಿಂದಿಸುವವರು ಸದಾ ನಮ್ಮನ್ನು ಎಚ್ಚರದ ದಾರಿಯಲ್ಲಿ ನಡೆಯುವಂತೆ ಮಾಡುತ್ತಾರೆ. ಆದರೆ, ನಾವು ಇಂತಹ ಟೀಕೆಗಳಿಂದ ಕುಗ್ಗದೇ ಪಾಠ ಕಲಿಯುತ್ತಾ ಮುಂದೆ ನಡೆಯಬೇಕು.


 -ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
✨🔹✨🔹✨🔹✨🔹✨

ಅಳುವಿನಲ್ಲೇ ಇದೆ ನಗು

♻️ಅಳುವಿನಲ್ಲೇ ಇದೆ ನಗು♻️


ಮನುಷ್ಯನ ಮನಸ್ಸು ಯಾವಾಗಲೂ ಸುಖವನ್ನು ಬಯಸುತ್ತದೆ; ಆದರೆ ಯಾರ ಜೀವನದಲ್ಲೇ ಆಗಲಿ ಬರಿಯ ಸುಖವಷ್ಟೆ ಇರಲು ಸಾಧ್ಯವೆ? ಝೆನ್‌ಗುರು ಕ್ಯೊಂಗ್‌ ಹೊ ‘ಅದಕ್ಕೇ ಜೀವನದ ಸುಖವನ್ನು ದುಃಖದಲ್ಲಿಯೇ ನೋಡಬೇಕಾಗುತ್ತದೆ; ಅನಾರೋಗ್ಯದಲ್ಲಿಯೇ ಆರೋಗ್ಯದ ಮದ್ದನ್ನು ಕಂಡುಕೊಳ್ಳಬೇಕು’ ಎಂದು ಉಪದೇಶಿಸಿದ್ದು. ಅವನ ಕೆಲವೊಂದು ಉಪದೇಶಗಳು ಇಂತಿವೆ:

* ಪೂರ್ಣಾರೋಗ್ಯವನ್ನು ಬಯಸದಿರಿ; ಏಕೆಂದರೆ ರೋಗವೇ ಬರದಿದ್ದರೆ ಲೋಭ ಮತ್ತು ಕಾಮಗಳು ಸದಾ ನಿಮ್ಮನ್ನು ಕಾಡಲು ತೊಡಗುತ್ತವೆ. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಅನಾರೋಗ್ಯದ ನರಳಾಟದಲ್ಲಿ ಉತ್ತಮ ಆರೋಗ್ಯದ ಔಷಧವನ್ನು ಹುಡುಕಿ.’

* ಸಮಸ್ಯೆಗಳೇ ಇಲ್ಲದ ಬದುಕನ್ನು ನಿರೀಕ್ಷಿಸಬೇಡಿ. ಸುಲಭವಾದ ಜೀವನದಿಂದ ನಿಮ್ಮ ಬುದ್ದಿ ಸೋಮಾರಿತನ ಮತ್ತು ಪೂರ್ವಗ್ರಹದ ಕಡೆಗೆ ತಿರುಗಬಹುದು. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಜೀವನದಲ್ಲಿ ಎದುರಾಗುವ ಅಡ್ಡಿಗಳನ್ನೂ ಕಷ್ಟಗಳನ್ನೂ ಒಪ್ಪಿಕೊಳ್ಳಿ.’

* ಅನಿರೀಕ್ಷಿತವಾದುದು ಏನೂ ಎದುರಾಗದೆಂಬ ಎಣಿಕೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಬೇಡಿ. ಆಕಸ್ಮಿಕತೆಯನ್ನು ಒದಗಿಸದ ಕೆಲಸವು ಗಟ್ಟಿಯಿರದ ತೀರ್ಮಾನವನ್ನಷ್ಟೆ ಕೊಡಬಲ್ಲದು. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಎದುರಾಗುವ ಎಲ್ಲ ಅನಿರೀಕ್ಷಿತ ಭೂತಗಳನ್ನು ಸ್ನೇಹದಿಂದಲೇ ಸ್ವೀಕರಿಸಿ ನಿಮ್ಮ ಕಠಿಣಾಭ್ಯಾಸವನ್ನು ಮುಂದುವರಿಸಿ.’

* ಸುಲಭವಾಗಿ ಕೆಲಸ ಮುಗಿದುಹೋಗಲಿ ಎಂದು ಆಶಿಸಬೇಡಿ. ಸುಲಭವಾಗಿ ಸಿಕ್ಕುವ ಸಂಗತಿಗಳು ನಿಮ್ಮ ಬಲವನ್ನು ಕಡಿಮೆ ಮಾಡಬಹುದು. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ನಿರಂತವಾಗಿಯೂ ಮತ್ತೆ ಮತ್ತೆ ತೊಡಗಿಕೊಳ್ಳುವುದರಿಂದಲೂ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿ.’

*ಸ್ನೇಹಿತರನ್ನು ಸಂಪಾದಿಸಿಕೊಳ್ಳಿ; ಆದರೆ ಅವರಿಂದ ನಿಮಗಾಗಿ ಯಾವ ಸಹಾಯವನ್ನೂ ನಿರೀಕ್ಷಿಸಬೇಡಿ. ನಿಮ್ಮ ಸ್ವಾರ್ಥಕ್ಕಾಗಿ ಏರ್ಪಟ್ಟ ಸ್ನೇಹವು ವಿಶ್ವಾಸವನ್ನು ನಾಶ ಮಾಡುತ್ತದೆ. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಹೃದಯದಲ್ಲಿ ಪರಿಶುದ್ಧತೆಯನ್ನು ತುಂಬಿಕೊಂಡು ದೀರ್ಘಕಾಲೀನ ಸ್ನೇಹವನ್ನು ಪಡೆಯಿರಿ.’

*ಪ್ರತಿಯೊಬ್ಬರೂ ನಿಮ್ಮ ಹೆಜ್ಜೆಯಲ್ಲೇ ಮುಂದುವರಿಯಬೇಕೆಂದು ಆಶಿಸಬೇಡಿ. ಎಲ್ಲರೂ ನಿಮ್ಮನ್ನೇ ಹಿಂಬಾಲಿಸುವಂತಾದರೆ ಆಗ ಅಹಂಕಾರ ನಿಮ್ಮ ಮೇಲೆ ಸವಾರಿ ಮಾಡಬಹುದು. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಜನರಿಗೆ ಶಾಂತಿ ಸಿಗಬೇಕೆಂಬುದುದೇ ನಿಮ್ಮ ಯೋಚನೆಯ ಗುರಿಯಾಗಲಿ.’

*ನೀವು ಮಾಡಿದ ದಾನದಿಂದ ಫಲವನ್ನು ಅಪೇಕ್ಷಿಸಬೇಡಿ. ಪ್ರತಿಫಲವನ್ನು ಅಪೇಕ್ಷಿಸುವುದರಿಂದ ನಿಮ್ಮ ಮನಸ್ಸು ವ್ಯಾಪಾರಕ್ಕೆ ಇಳಿಯುತ್ತದೆ. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಡಂಭಾಚಾರವನ್ನು ಹಳೆಯ ಚಪ್ಪಲಿಗಳನ್ನು ಎಸೆಯುವಂತೆ ಬಿಸಾಡಿ.’

*ನಿಮ್ಮ ಕೆಲಸದ ಮೌಲ್ಯವನ್ನು ಮೀರಿದ ಸಂಭಾವನೆಯನ್ನು ಸ್ವೀಕರಿಸಬೇಡಿ. ಅಕ್ರಮದಿಂದ ಸಾಧಿಸಿದ ಲಾಭವು ನಿಮ್ಮನೇ ಮೂರ್ಖನನ್ನಾಗಿಸುತ್ತದೆ. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಪ್ರಾಮಾಣಿಕತೆಯಲ್ಲಿ ಶ್ರೀಮಂತರಾಗಿರಿ.’

*ಮನಸ್ನಿನ ಏಕಾಗ್ರತೆಯನ್ನು ಸಾಧಿಸಲು ನಿಮ್ಮನ್ನು ನೀವೇ ಹಿಂಸಿಸಿಕೊಳ್ಳಬೇಡಿ. ಮನಸ್ಸು ಎಂದಿಗೂ ಶೋಷಣೆಯನ್ನು ಇಷ್ಟಪಡದು; ಇಷ್ಟಕ್ಕೂ ಮನಸ್ಸಿನ ಸ್ಪಷ್ಟತೆ ಎನ್ನುವುದು ದಂಡನೆಯ ಭಾಗವಲ್ಲವಷ್ಟೆ? ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಸಾಧನೆಯ ದಾರಿಯನ್ನು ನಿರಂತರ ಅಭ್ಯಾಸದಿಂದ ಶುದ್ಧಗೊಳಿಸಿಕೊಳ್ಳಿ.’

*ಎಲ್ಲ ಅಡ್ಡಿಗಳನ್ನೂ ಸಮಾನವಾಗಿ ಸ್ವೀಕರಿಸಿ. ಸಮಸ್ಯೆಗಳ ಗರಡಿಯಲ್ಲಿ ಪಳಗಿದವರಷ್ಟೆ ಸತ್ಯವನ್ನು ಹುಡುಕಬಲ್ಲವರಾಗಿರುತ್ತಾರೆ. ಯಾವುದೇ ಅಡ್ಡಿಯೂ ಅವರನ್ನು ಸೋಲಿಸಲಾರದು. ಸಮಸ್ಯೆಯನ್ನು ಎದುರಿಸುವುದೇ ಅವರ ದಿಟವಾದ ಸಂಪತ್ತು.

ಸೋಲು–ಗೆಲುವು, ಸುಖ–ದುಃಖ, ಲಾಭ–ನಷ್ಟ – ಇವೆಲ್ಲವೂ ಹಗಲು–ರಾತ್ರಿಗಳಂತೆ ಒಂದು ಇನ್ನೊಂದನ್ನು ಬಿಟ್ಟಿರಲಾರವು ಎನ್ನುವುದು ಝೆನ್‌ಗುರುವಿನ ಉಪದೇಶದ ಸಾರ.

ನಾವು ಜೀವನದ ಒಂದು ಮುಖವನ್ನಷ್ಟೆ ನೋಡಲು ಬಯಸುತ್ತಿರುತ್ತೇವೆ. ಆದರೆ ಜೀವನದ ಸೌಂದರ್ಯ ಇರುವುದು ಅದರ ಸಮಗ್ರತೆಯಲ್ಲಿ; ಎಂದರೆ ನಗು–ಅಳುಗಳ ಹೊಂದಾಣಿಕೆಯಲ್ಲಿ.

ಸಾವು-ಬದುಕು-ಮನೋವಿಕಾರ

ಸಾವು-ಬದುಕು-ಮನೋವಿಕಾರ



ಮಹಾರಾಷ್ಟ್ರದಲ್ಲಿ ಏಕನಾಥ. ಎಂಬ ಒಬ್ಬ ಸಾಧು ಇದ್ದರು.
 ಒಂದು ದಿನ ಬೆಳಿಗ್ಗೆ ಒಬ್ಬ ವ್ಯಕ್ತಿ ಏಕನಾಥರ ಬಳಿಗೆ ಬಂದು ಪ್ರಶ್ನೆಯೊಂದನ್ನು ಕೇಳಿದ. ನಾಥಜೀ ನಿಮ್ಮನ್ನು ನೋಡುತ್ತಿದ್ದಂತೆಯೇ ಒಂದು ಪ್ರಶ್ನೆ ಪದೇ ಪದೆ ಮನದಲ್ಲಿ ಹುಟ್ಟುತ್ತಿರುತ್ತದೆ. ನಿಮ್ಮ ಮನಸ್ಸಿನಲ್ಲಿ ಪಾಪ ಹುಟ್ಟುವುದೇ ಇಲ್ಲವೇ? ಕಾಮನೆಗಳು ಹುಟ್ಟುವುದೇ ಇಲ್ಲವೇ? ವಿಕಾರಗಳು ಜಾಗೃತವಾಗುವುದೇ ಇಲ್ಲವೇ? ನಾಥಜೀ ಕೇಳಿದರು. ''ಉತ್ತರವನ್ನು ಈಗಲೇ ಕೊಡಬೇಕೇ? ಒಂದು ನಿಮಿಷ ಕಾಯಿರಿ. ಒಂದು ತುರ್ತಿನ ವಿಷಯ ನಿಮಗೆ ಹೇಳಬೇಕಾಗಿದೆ. ಆ ಸಂದರ್ಭ ಬಂದಿತು. ಆಗ ಮೃತ್ಯುವಿನ ರೇಖೆ ತುಂಡಾಗಿರುವುದು ಗಮನಕ್ಕೆ ಬಂದು. ಇನ್ನು ಏಳು ದಿನಗಳ ನಂತರ ಸೂರ್ಯ ಮುಳುಗುವುದರೊಂದಿಗೆ ನೀವೂ ಮುಳುಗಿಹೋಗುವಿರಿ ಇದನ್ನು ಹೇಳಲೇಬೇಕೆಂದಿದ್ದೆ. ಏಕೆಂದರೆ ತಿಳಿದಿದ್ದೂ ಹೇಳದೇ ತಪ್ಪಾಗಬಾರದು.

ಈಗ ಏನು ಕೇಳಬೇಕೆಂದಿರುವಿರೋ ಅದನ್ನು ಮತ್ತೊಮ್ಮೆ ಕೇಳಿ.'' ಪ್ರಶ್ನೆ ಕೇಳಿದ ಈ ವ್ಯಕ್ತಿಯ ಕೈ ಕಾಲು ನಡುಗಲು ಆರಂಭವಾಯಿತು. ಕೇವಲ ಏಳು ದಿನಗಳು ಮಾತ್ರವೇ? ಆತನ ಒಳಗೆ ಇದ್ದಕ್ಕಿದಂತೆ ದುಃಖವೂ, ವಿಷಾದವೂ ಘನವಾಗಲಾರಂಭಿಸಿತು. ಆತ ಹೇಳಿದ. ''ನಾನು ಇನ್ನೊಮ್ಮೆ ಪ್ರಶ್ನೆ ಕೇಳಲು ಬರುತ್ತೇನೆ. ಈಗ ಕೇಳಲು ಯಾವ ಪ್ರಶ್ನೆಯೂ ಇಲ್ಲ,'' ಎಂದ. ನಾಥಜೀ ಆತನಿಗೆ ''ನಿಲ್ಲು, ನಿನ್ನದು ತುಂಬಾ ಬೆಲೆ ಬಾಳುವ ಪ್ರಶ್ನೆ. ಒಳ್ಳೆಯ ಚರ್ಚೆಯ ವಸ್ತುವಾಗಬಹುದು,''. ಆದರೆ ಆತ ''ಮತ್ತೆ ಬರುತ್ತೇನೆ. ಈಗ ಚರ್ಚೆ ಮಾಡಲು ನನ್ನಲ್ಲಿ ಯಾವ ಆಸಕ್ತಿಯೂ ಉಳಿದಿಲ್ಲ. ಮೃತ್ಯು ಎಲ್ಲ ರಸವನ್ನೂ, ನೀರಸವಾಗಿ ಮಾಡಿಬಿಟ್ಟಿದೆ,'' ಎಂದು ಹೊರ ಹೊರಟ. ಆತ ಅಲ್ಲಿಂದ ಎದ್ದು ತೂರಾಡುತ್ತಾ ನಡೆಯತೊಡಗಿದ. ಕಾಲುಗಳು ಕಂಪಿಸುತ್ತಿದ್ದವು. ಜನರು ಏನಾಯಿತು? ಎಂದು ವಿಚಾರಿಸುತ್ತಾ ಆತನನ್ನು ಮನೆಗೆ ತಲುಪಿಸಿದರು. ಇನ್ನು ಏಳೇ ದಿನಗಳು! ಆತನ ಧ್ವನಿ ಯಾವುದೋ ದೂರದಿಂದ ಬಂದ ಹಾಗಿತ್ತು. ಉಸಿರೇ ಉಡುಗಿಹೋಗಿತ್ತು. ಹಾಸಿಗೆಯ ಮೇಲೆ ಮಲಗಿದ.

ಎರಡನೇ ದಿನ ಪ್ರತಿಯೊಬ್ಬರ ಬಳಿಗೂ ಹೇಗೋ ಹೋಗಿ ಕ್ಷ ಮೆ ಬೇಡಿದ. ಯಾರೊಂದಿಗೆ ತಪ್ಪುಗಳು ಸಂಭವಿಸಿತ್ತೊ. ಕೆಟ್ಟ ಮಾತುಗಳನ್ನು ಆಡಿದ್ದನೋ ಅವರ ಕಾಲು ಹಿಡಿದ ಹಾಸಿಗೆಯ ಮೇಲೆ ಮಲಗಿ, ಗಂಟೆ-ಗಂಟೆಗೂ ಮೃತ್ಯು ಸಮೀಪಿಸುತ್ತಿರುವುದನ್ನು ನೋಡತೊಡಗಿದ. ಒಂದೊಂದು ಕ್ಷ ಣವೂ ಒಂದೇ ಪ್ರತೀಕ್ಷೆ ಕೋಣೆಯಲ್ಲಿ ಕುಳಿತಿದ್ದರೂ ಮರಣದ ಛಾಯೆ ಎದುರಿಗೆ ಘನವಾಗಲಾರಂಭಿಸಿತ್ತು. ಮೃತ್ಯು ಹಂತ ಹಂತವಾಗಿ ಆತನ ಮಂಚದವರೆಗೆ ಬರತೊಡಗಿತು. ಅದು ಮೃತ್ಯುವಿನ ಹೊರತೂ ಬೇರೇನೂ ಆಗಿರಲಿಕ್ಕಿಲ್ಲ. ಎಲ್ಲ ಕಾಮನೆಗಳು, ವಿಕಾರಗಳ ಜಾಗದಲ್ಲೂ ಮೃತ್ಯುವೇ ನಿಂತಿತ್ತು. ಸಾವು ಎದುರಾಗುತ್ತಿತ್ತು, ಕೈಗಳು ಕಂಪಿಸುತ್ತಿದ್ದವು. ಕಣ್ಣು ತೆರೆದರೆ ಎದುರಿಗೆ ಸಾವೇ ಕಾಣುತ್ತಿತ್ತು. ಉಸಿರೆಳೆದುಕೊಂಡರೂ ಆ ಉಸಿರಿನೊಳಗೂ ಮೃತ್ಯುವೇ ಪ್ರವೇಶಿಸುತ್ತಿರುವಂತೆ ಭಾಸವಾಗುತಿತ್ತು.

 ಏಳನೆಯ ದಿನ ಇನ್ನೇನು ಸೂರ್ಯ ಮುಳುಗುವ ಸಮಯದ ಮುನ್ನವೇ ಏಕನಾಥರು ಆತನ ಬಳಿ ಹೋಗಿ ''ನಿನ್ನ ಮೃತ್ಯು ಈಗ ನಿನ್ನ ಬಳಿಗೆ ಬರುತ್ತಿಲ್ಲ. ಕೇವಲ ನಿನ್ನ ಪ್ರಶ್ನೆಗೆ ಉತ್ತರ ನೀಡಿದೆ ಅಷ್ಟೇ. ಏಳು ದಿನಗಳ ನಂತರವೇ ಮೃತ್ಯುವಾಗಲಿ ಎಪ್ಪತ್ತು ವರ್ಷಗಳ ನಂತರವೇ ಮೃತ್ಯುವಾಗಲಿ ಅದರಲ್ಲಿ ಅಂತರವೇನಿದೆ? ಈ ಶರೀರ ಏಳು ದಿನಗಳ ನಂತ ಸಮಾಪ್ತವಾದರೇನು, ಎಪ್ಪತ್ತು ವರ್ಷಗಳ ನಂತರ ಸಮಾಪ್ತವಾದರೇನು. ನಿಜ ಹೇಳಬೇಕೆಂದರೆ, ಏಳು ದಿನಗಳು ಮತ್ತು ಎಪ್ಪತ್ತು ವರ್ಷಗಳ ನಡುವೆ ಯಾವುದೇ ಅಂತರವೂ ಇಲ್ಲ. ಸಾವಿನ ಕುರಿತು ಈ ಅರಿವೇ ನನ್ನಲ್ಲಿ ಯಾವ ವಿಕಾರವನ್ನು ಇಲ್ಲದಂತೆ ಮಾಡಿದೆ,'' ಎಂದರು.

-ಓಶೋ

ಹುಟ್ಟು ಸಾವು ನಡುವಿನ ಸಾರ್ಥಕ ಬಾಳು

ಹುಟ್ಟು ಸಾವು ನಡುವಿನ ಸಾರ್ಥಕ ಬಾಳು

Written by: * ರೂಪ ಎಸ್.



ಹುಟ್ಟು ನಮ್ಮ ಕೈಯಲಿಲ್ಲ, ಹಾಗೇ ಸಾವೂ ಕೂಡ (ಆತ್ಮಹತ್ಯೆಗಳನ್ನು ಹೊರತುಪಡಿಸಿ). ಆದರೆ ಇವರೆಡರ ನಡುವಿನ ಬದುಕು ನಮ್ಮ ಕ್ಯೆಯಲ್ಲೇ ಇದೆ, ಇದನ್ನು ನಮಗೆ ಬೇಕಾದಂತೆ ರೂಪಿಸಿಕೊಳ್ಳುವ ಅವಕಾಶ ನಮಗಿದೆ.

ಒಂದು ಮಗುವಿನ ಹುಟ್ಟಿನೊಂದಿಗೆ ಅನೇಕ ಆಸೆ ಕನಸುಗಳೂ ಹುಟ್ಟಿಕೊಳ್ಳುತ್ತವೆ. ಬದುಕಿನುದ್ದಕ್ಕೂ ಅವುಗಳನ್ನು ಪೂರೈಸಿಕೊಳ್ಳಲು ವ್ಯಕ್ತಿ ಹೆಣಗುತ್ತಾನೆ, ಹಾಗೆ ಸಫಲವಾಗುವುದು ಕೆಲವೇ ಕೆಲವು. ಇನ್ನುಳಿದವು ವ್ಯಕ್ತಿಯ ಸಾವಿನೊಂದಿಗೆ ಸಾಯುತ್ತವೆ. ವ್ಯಕ್ತಿ ಸಫಲಗೊಳಿಸಿಕೊಂಡ ಆಸೆ ಕನಸುಗಳಿಂದಲೇ ನಾವು ಅವನನ್ನು ನಾವು ಅಳೆಯುತ್ತೇವೆ. ಅವನ ಸಾಕಾರಗೊಳ್ಳದ ವ್ಯಕ್ತಿತ್ವಗಳಿಂದ ಅವನನ್ನು ನಾವು ಅಳೆಯುವುದಿಲ್ಲ, ಅಲ್ವೆ?

ಶರಣರ ಗುಣವನ್ನು ಮರಣದಲ್ಲಿ ಕಾಣು ಎಂಬಂತೆ ವ್ಯಕ್ತಿ ತೀರಿಕೊಂಡ ಮೇಲೆ ಆತ ಉಳಿಸಿ ಹೋದ, ಬೆಳೆಸಿಕೊಂಡ ವ್ಯಕ್ತಿತ್ವದ ಆಧಾರದ ಮೇಲೆ ಆತನ ಗುಣವನ್ನು ಅಳೆಯುತ್ತಾರೆ. ಸಮಾಜ ಸೇವೆ, ಬುದ್ಧಿವಂತಿಕೆ, ಒಳ್ಳೆಯತನಗಳಿಂದ ವ್ಯಕ್ತಿಯನ್ನು ತೂಗುತ್ತೇವೆ. ಜೀವನದಲ್ಲಿ ಮಾಡಿದ ಸಾಧನೆಯೇ ಆಸ್ತಿ ಅಂತಸ್ತು.

ಒಬ್ಬ ವ್ಯಕ್ತಿ ಸತ್ತಾಗ, ಆತ ಮಾಡಿದ ಸಾಧನೆಗಳೆಲ್ಲ ಚರ್ಚೆಗೆ ಬರುತ್ತವೆ. ಇಷ್ಟು ಬೇಗ ಸಾಯಬಾರದಿತ್ತು, ಎಂದೂ ಆತ ಕೆಡಕು ಬಯಸಿದವನಲ್ಲ, ಇಂಥವರು ಇದ್ದಿದ್ರಿಂದಾನೇ ಮಳೆಬೆಳೆಯೆಲ್ಲ ಆಗುತ್ತಿರುವುದು, ಇಂಥವರು ಸಿಗುವುದು ಲಕ್ಷಕ್ಕೊಬ್ಬರು, ಇನ್ನೂ ಇದ್ರಿದ್ರೆ ಚೆನ್ನಾಗಿತ್ತು, ಇವನ ಸಾವು ನಿಜಕ್ಕೂ ತುಂಬಲಾರದ ನಷ್ಟ.... ಮುಂತಾದ ಮಾತುಗಳು ಪುಂಖಾನುಪುಂಖವಾಗಿ ಹೊರಬರುತ್ತವೆ. ಅದೇ, ಸಮಾಜದಲ್ಲಿ ಯಾವುದೇ ಛಾಪು ಮೂಡಿಸದೇ ಸತ್ತರೆ ಅಥವಾ ಸಮಾಜಕ್ಕೆ ಬೇಡದವನಾಗಿ ಸತ್ತಿದ್ದರೆ... ಏನೇನಂತಾರೆ ಅಂತ ನೀವೇ ಊಹಿಸಿ.

ಗೆಳೆಯರೆ, ಸಾವನ್ನು ಕುರಿತ ಕಥೆ ನಿಮಗೆ ಹೇಳಲೇಬೇಕು. ವ್ಯಕ್ತಿಯೊಬ್ಬ ದೇವರಲ್ಲಿ ಹೀಗೆ ಬೇಡಿಕೊಂಡನಂತೆ. ದೇವ ನಾನು ಸತ್ತಾಗ ನನ್ನ ಸಾವಿಗೆ ದುಃಖಿಸಿ ಅಳುವ ಕೆಲವರಾದರೂ ಜನರಿರುವಂತೆ ಕರುಣಿಸು ಅಂತ. ಅದಕ್ಕೆ ದೇವರು, ಇದು ನನ್ನಿಂದ ಆಗದ ಕೆಲಸ. ಜನರು ಮೆಚ್ಚುವಂತೆ ನೀನು ಬದುಕಬೇಕು ಎಂದನಂತೆ...

ಈ ಕಥೆಯೊಳಗೆ ಬದುಕಿನ ಗೂಡಾರ್ಥವೇ ಅಡಗಿದೆಯಲ್ಲವೇ? ಹುಟ್ಟು ಸಾವು ಎನ್ನುವುದು ಯಾವುದೋ ಶಕ್ತಿಯ ಕ್ಯೆಯಲ್ಲಿದ್ದರೂ ಮಧ್ಯದ ಈ ಬದುಕಿನಲ್ಲಿ ಗುಣವಂತನಾಗುವುದು, ಕೆಡುಕನಾಗುವುದು ವ್ಯಕ್ತಿಯ ಕ್ಯೆಯಲ್ಲೇ ಇದೆಯಲ್ಲವೇ? ಸಾವಿನೆಡೆಗೆ ಏನಿದೆಯೋ ಯಾರಿಗೂ ತಿಳಿದಿಲ್ಲ. ನಾವೆಲ್ಲ ಒಳ್ಳೆಯವರಾಗಿ ಸಮಾಜಕ್ಕೆ ಬೇಕಾದವರಾಗಿ ಬದುಕಿದರೆ ಮುಂದೆ ಸ್ವರ್ಗದ ದಾರಿ ಸಿಗಲೂಬಹುದು.

ಸ್ವರ್ಗ ನರಕದ ಪರಿಕಲ್ಪನೆಗೆ ಒಬ್ಬೊಬ್ಬರು ಒಂದೊಂದು ವ್ಯಾಖ್ಯಾನ ನೀಡಬಹುದು. ಆದರೆ, ಒಬ್ಬ ಒಳ್ಳೆಯ ವ್ಯಕ್ತಿಯ ಸಾವಿಗೆ ಹಲವಾರು ಜನರು ಕಣ್ಣೀರು ಹರಿಸುತ್ತಾರೆಂಬುದು ನಿಜ. ಬಹುಶಃ ವ್ಯಕ್ತಿಯೊಬ್ಬನ ಸಾರ್ಥಕ ಬದುಕಿಗೆ ಇದೇ ದೊಡ್ಡ ಕೊಡುಗೆ. ಅಲ್ಲವೆ?

ದಿನವಿಡೀ ಕುಳಿತುಕೊಂಡೇ ಇದ್ದರೆ ಹೃದಯಕ್ಕೆ ಅಪಾಯ!

🔸🔸🔸🔸🔸🔸🔸🔸🔸
ದಿನವಿಡೀ ಕುಳಿತುಕೊಂಡೇ ಇದ್ದರೆ ಹೃದಯಕ್ಕೆ ಅಪಾಯ!

ದಿನವಿಡಿ ಕುಳಿತುಕೊಂಡೇ ಕೆಲಸ ಮಾಡಿಕೊಂಡು ಮನೆಗೆ ಬಂದ ಬಳಿಕ ಮತ್ತೆ ಟಿವಿ ಮುಂದೆ ಕುಳಿತುಕೊಂಡು ರಾತ್ರಿ ನಿದ್ರೆ ಮಾಡುವ ತನಕವೂ ಹೀಗೆ ಕುಳಿತುಕೊಂಡೇ ಇರುವವರು ನೀವಾಗಿದ್ದರೆ ಇದರ ಬಗ್ಗೆ ಎಚ್ಚರಿಕೆ ವಹಿಸಿಕೊಳ್ಳುವುದು ತುಂಬಾ ಮುಖ್ಯ. ದಿನವಿಡೀ ಕುಳಿತು ಕೆಲಸ ಮಾಡುವವರು, ತಪ್ಪದೇ ಈ ಲೇಖನ ಓದಿ....

ಯಾಕೆಂದರೆ ಕುಳಿತುಕೊಂಡೇ ಇರುವವರಿಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಕುಳಿತೇ ಇದ್ದರೆ ಹೃದಯ ಮತ್ತು ಇತರ ಅಂಗಾಂಗಗಳ ಕಾರ್ಯಚಟುವಟಿಕೆಗೆ ಸಮಸ್ಯೆಯಾಗಲಿದೆ. ಅದರಲ್ಲೂ ದೀರ್ಘಕಾಲದ ತನಕ ಕುಳಿತೇ ಇದ್ದರೆ ಅದರಿಂದ ಹೃದಯಕ್ಕೆ ಹಾನಿಯಾಗಲಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕುಳಿತೇ ಇರುವುದರಿಂದ ಮುಂದೆ ಹೃದಯಕ್ಕೆ ಯಾವ್ಯಾವ ಸಮಸ್ಯೆಯಾಗಲಿದೆ ಎನ್ನುವುದನ್ನು ತಿಳಿದುಕೊಳ್ಳಿ.   ಇದೇ ಕಾರಣಕ್ಕೆ 'ಹೃದ್ರೋಗ ಸಮಸ್ಯೆ' ಕಾಣಿಸಿಕೊಳ್ಳುವುದು!




ದೇಶಕ್ಕೆ ರಾಜಧಾನಿಯಿರುವಂತೆ ದೇಹಕ್ಕೆ ಕೂಡ ಹೃದಯವು ರಾಜಧಾನಿಯೆನ್ನಬಹುದು. ದೇಶ ಚೆನ್ನಾಗಿರಬೇಕಾದರೆ ರಾಜಧಾನಿ ಸರಿಯಿರಬೇಕು. ಅದೇ ಹೃದಯವು ಸರಿಯಾಗಿದ್ದರೆ ಎಲ್ಲವೂ ಸುಸೂತ್ರವಾಗಿದೆ ಎಂದರ್ಥ. ಹೃದಯವು ತನ್ನ ಕಾರ್ಯವನ್ನು ನಿಲ್ಲಿಸಿದರೆ ಆಗ ಜೀವ ಹೊರಟು ಹೋಗುತ್ತದೆ.    ಹೃದಯದ ಆರೋಗ್ಯಕ್ಕೆ, ನಿತ್ಯ 'ದಾಳಿಂಬೆ ಜ್ಯೂಸ್' ಕುಡಿಯಿರಿ

ಸಂಪೂರ್ಣ ದೇಹವನ್ನು ನೋಡಿಕೊಳ್ಳುವಲ್ಲಿ ಹೃದಯವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದೇ ಹೃದಯವನ್ನು ನಾವು ಯಾವ ರೀತಿಯಿಂದ ನೋಡಿಕೊಳ್ಳುತ್ತಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಹೃದಯವನ್ನು ಆರೋಗ್ಯವಾಗಿಡುವಲ್ಲಿ ನಮ್ಮ ಪಾತ್ರ ಎಷ್ಟಿದೆ ಎಂದು ತಿಳಿದುಕೊಳ್ಳಲೇಬೇಕು.      ಪುಟ್ಟ ಹೃದಯದ ಸ್ವಾಸ್ಥ್ಯಕ್ಕೆ-ಈ ಜ್ಯೂಸ್ ತಪ್ಪದೇ ಕುಡಿಯಿರಿ

ಎಣ್ಣೆ, ಎಣ್ಣೆಯುಕ್ತ ಆಹಾರ, ಅತಿಯಾದ ಮಾಂಸಾಹಾರ ಆಹಾರ ಇವುಗಳು ಹೃದಯದ ಆರೋಗ್ಯವನ್ನು ಕೆಡಿಸುವುದು. ಇದರಿಂದ ನಿಮ್ಮ ಹೃದಯಕ್ಕೆ ತುಂಬಾ ಹಾನಿಯಾಗಬಹುದು. ಹೃದಯದ ಆರೋಗ್ಯವನ್ನು ಯಾವ ರೀತಿಯಲ್ಲಿ ಮತ್ತು ಹೇಗೆ ಕಾಪಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳಲು ನೀವು ಈ ಲೇಖನವನ್ನು ಮುಂದಕ್ಕೆ ಓದಲೇಬೇಕು.      

ಅಡುಗೆಗೆ ಒಂದೇ ವಿಧದ ಎಣ್ಣೆ ಬಳಕೆ

ಈಗೀಗ ಕರಿದ ಪದಾರ್ಥಗಳೇ ಹೆಚ್ಚಿನವರಿಗೆ ಇಷ್ಟವಾಗುವ ಕಾರಣದಿಂದ ಎಣ್ಣೆಯು ಅತಿಯಾಗಿ ನಮ್ಮ ದೇಹವನ್ನು ಸೇರಿಕೊಳ್ಳುವುದು. ಇದರಿಂದ ಹೃದಯದ ಕಾಯಿಲೆ ಸಮಸ್ಯೆಯು ಹೆಚ್ಚಾಗಿರುತ್ತದೆ. ದೈನಂದಿನ ಆಹಾರ ಕ್ರಮದಲ್ಲಿ ಮೂರರಿಂದ ನಾಲ್ಕು ಚಮಚಕ್ಕಿಂತ ಹೆಚ್ಚಿನ ಎಣ್ಣೆ ಬಳಸಬೇಡಿ.



ಅಡುಗೆಗೆ ಒಂದೇ ವಿಧದ ಎಣ್ಣೆ ಬಳಕೆ

3-4 ತಿಂಗಳಿಗೊಮ್ಮೆ ಎಣ್ಣೆ ಬದಲಾಯಿಸುತ್ತಾ ಇರಿ. ತೆಂಗಿನ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಆಲಿವ್ ಎಣ್ಣೆ, ಸಾಸಿವೆ ಎಣ್ಣೆ ಹೀಗೆ ಬದಲಾಯಿಸುತ್ತಾ ಇದ್ದರೆ ವಿವಿಧ ರೀತಿಯ ಪೋಷಕಾಂಶಗಳು ನಿಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ಇದರಿಂದ ಹೃದಯವು ಆರೋಗ್ಯವಾಗಿರುತ್ತದೆ.


ಊಟದ ಬಳಿಕ ಸಿಹಿ ತಿನ್ನುವುದು

ಭಾರತದಲ್ಲಿ ಹೆಚ್ಚಿನವರು ಊಟದ ಬಳಿಕ ಸಿಹಿ ತಿನ್ನುವಂತಹ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಇದರಿಂದ ರಕ್ತದ ಗ್ಲೂಕೋಸ್ ಮಟ್ಟ ಹೆಚ್ಚಾಗಿ ಮಧುಮೇಹ ಕಾಣಿಸಿಕೊಳ್ಳಬಹುದು. ಸಿಹಿಯಲ್ಲಿ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆ ಇರುವುದರಿಂದ ಇದು ನಿಮ್ಮನ್ನು ಹೃದಯದ ಕಾಯಿಲೆಯ ಅಪಾಯಕ್ಕೆ ಒಡ್ಡಬಹುದು


ಅತಿಯಾಗಿ ಖಾರ ತಿನ್ನುವುದು

ಖಾರವಾಗಿರುವ ಮೆಣಸನ್ನು ತಿಂದರೆ ಅದರಿಂದ ತೂಕ ಕಳೆದುಕೊಳ್ಳಬಹುದು ಎಂದು ಹೇಳುತ್ತಾರೆ. ಆದರೆ ಕೆಂಪು ಮೆಣಸನ್ನು ಆಹಾರದಲ್ಲಿ ಅತಿಯಾಗಿ ಬಳಸುವುದು ಒಳ್ಳೆಯದಲ್ಲ. ಮೆಣಸು ವಿಶ್ರಾಂತಿಯಲ್ಲಿರುವ ಹೃದಯದ ಬಡಿತವನ್ನು ಕಡಿಮೆ ಮಾಡುವುದು ಮತ್ತು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ.



ಉಪಹಾರಕ್ಕೆ ಎಣ್ಣೆಯ ಆಹಾರ

ಬೆಳಗ್ಗಿನ ಉಪಹಾರಕ್ಕೆ ಎಣ್ಣೆಯಲ್ಲಿ ಮಾಡಿದಂತಹ ತಿಂಡಿಗಳನ್ನು ತಿಂದರೆ ಅದರಿಂದ ಜೀರ್ಣಕ್ರಿಯೆಯು ಕಡಿಮೆಯಾಗುವುದು ಮತ್ತು ಹೊಟ್ಟೆ ತುಂಬದೆ ಇರುವುದರಿಂದ ನೀವು ಮತ್ತಷ್ಟು ತಿನ್ನುತ್ತಲೇ ಇರುತ್ತೀರಿ. ಇದರಿಂದ ಕ್ಯಾಲರಿ ಸೇವನೆ ಹೆಚ್ಚಾಗುವುದು. ಉಪಹಾರದಲ್ಲಿ ಹೆಚ್ಚಿನ ಪ್ರೋಟೀನ್ ಕಡಿಮೆ ಕಾರ್ಬೋಹೈಡ್ರೆಟ್ಸ್ ಮತ್ತು ಕೊಬ್ಬಿನಾಂಶ ಸ್ವಲ್ಪವೇ ಇರುವ ಆಹಾರವನ್ನು ಸೇವಿಸಿ.

ಅಂಚೆ ವಿಳಾಸದಲ್ಲಿ ಪಿನ್‌ಕೋಡ್‌ ಯಾಕೆ ಬಳಸಬೇಕು


ಅಂಚೆ ವಿಳಾಸದಲ್ಲಿ ಪಿನ್‌ಕೋಡ್‌ ಯಾಕೆ ಬಳಸಬೇಕು




ಕಾಗದ ಕೊರಿಯರ್ ಎಲ್ಲ ನಿಮ್ಮ ಕೈಗೆ ಸಿಗಬೇಕಾದ್ರೆ PIN ಕೋಡ್ ಯಾಕೆ ಸರಿಯಾಗಿ ಬರೀಬೇಕು ಅಂತ ಗೊತ್ತಿರಲಿ

ಭಾರತ ತುಂಬ ದೊಡ್ಡ ದೇಶ, PIN code - ಪಿನ್ ಕೋಡ್ (Postal Index Number) - ಇದನ್ನ ಜಾರಿಗೆ ತಂದಿದ್ದು ಆಗಸ್ಟ್ 15, 1972 ರಲ್ಲಿ.  ಇದನ್ನ ಬೇರೆ ದೇಶಗಳಲ್ಲಿ ಜ಼ಿಪ್ ಕೋಡ್ ಅಂತಾನೂ ಕರೀತಾರೆ. ದೇಶದಲ್ಲಿರೋ ಯಾವುದೇ ಒಂದು
ಪ್ರದೇಶಾನ ಅಂಚೆ ಇಲಾಖೆಯೋರು ಗುರುತಿಸಕ್ಕೆ ಈ ನಂಬರನ್ನ ಬಳಸ್ತಾರೆ. ಯಾರಿಗಾದ್ರೂ ಕಾಗದ ಬರೆದಾಗ
ಅಡ್ರಸ್ಸಲ್ಲಿ ಪಿನ್ ಕೋಡ್ ಬರೀತಿವಲ್ಲ, ಅದರಿಂದ ಕಾಗದ ಸರಿಯಾದ ಜಾಗಕ್ಕೆ ಬೇಗ ಹೋಗಕ್ಕೆ ಸಹಾಯ ಮಾಡುತ್ತೆ ಹೇಗೆ
ಗೊತ್ತಾ? ಮುಂದೆ ಓದಿ...

*ಪಿನ್ಕೋಡ್ನಲ್ಲಿ 6 ಅಂಕಿ ಇರುತ್ತೆ. *
ಮೊದಲನೇ ಅಂಕಿ ದೇಶದ ಯಾವ ವಲಯ ಅಂತ ಹೇಳುತ್ತೆ
1,2 ಇದ್ರೆ ಉತ್ತರ ಭಾರತ
3,4 ಇದ್ರೆ ಪಶ್ಚಿಮ,
5,6 ಇದ್ರೆ ದಕ್ಷಿಣ,
7,8 ಇದ್ರೆ ಪೂರ್ವ.
ಆರ್ಮಿಗೆ ಸಂಬಂಧಿಸಿದ್ದಾದ್ರೆ PIN ಕೋಡ್ "9" ಅಂತ ಶುರುವಾಗುತ್ತೆ.

ಎರಡನೇ ಅಂಕಿ ಯಾವ ರಾಜ್ಯ/ಉಪವಲಯ ಅಂತ ಹೇಳುತ್ತೆ
560001 - ಇಲ್ಲಿ ಎರಡನೇ ಅಂಕಿ 6 ಸೂಚಿಸುತ್ತಿರೋ ಊರು ಬೆಂಗಳೂರು.

ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 9 ಪಿನ್ ವಲಯಗಳಿವೆ
ಮೂರನೇ ಅಂಕಿ ಯಾವ ಜಿಲ್ಲೆ ಅಂತ ಹೇಳುತ್ತೆ

560001 - ಅನ್ನೋದ್ರಲ್ಲಿ ಮೂರನೆ ಅಂಕಿ 0 ಬೆಂಗಳೂರು ಸಿಟಿ ಸೂಚಿಸತ್ತೆ.

ಕೊನೆ 3 ಅಂಕಿಗಳು ಯಾವ ಪೋಸ್ಟ್ ಆಫೀಸ್ ಅಂತ ಹೇಳುತ್ತೆ
560001  - ಇದ್ರಲ್ಲಿ ಕೊನೆ ಮೂರು ಅಂಕಿ ಬೆಂಗಳೂರಿನ ಜೆನರಲ್ ಪೋಸ್ಟ್ ಆಫೀಸ್ (G.P.O) ಸೂಚಿಸತ್ತೆ.

ಅಲ್ಲಿಂದ ನಿಮ್ಮ ಬೀದಿ, ಮನೆ ಅಡ್ರಸ್ ಹುಡುಕ್ಕೊಂಡು ಪೋಸ್ಟ್ ಮ್ಯಾನ್ ಬರ್ತಾರೆ...

ಗ್ಯಾಸ್‌ ಸಿಲಿಂಡರ್‌ ಬಳಸುವ ಮುನ್ನ ಈ ಮುನ್ನಚ್ಚರಿಕೆ ಕ್ರಮ ಅನುಸರಿಸಿ


ಗ್ಯಾಸ್‌ ಸಿಲಿಂಡರ್‌ ಬಳಸುವ ಮುನ್ನ ಈ ಮುನ್ನಚ್ಚರಿಕೆ ಕ್ರಮ ಅನುಸರಿಸಿ

ಗ್ಯಾಸ್‌ ಸಿಲಿಂಡರ್‌ ಅಡುಗೆ ಮಾಡಲು ಅತ್ಯಂತ ಸುಲಭವಾದ ಸಾಧನವಾಗಿದೆ. ಪ್ರತಿಯೊಂದು ಮನೆಯಲ್ಲಿಯೂ ಗ್ಯಾಸ್‌ ಸಿಲಿಂಡರ್ ಇದ್ದೇ ಇದೆ. ಆದರೆ ಅದನ್ನು ನಾವು ಸರಿಯಾದ ಕ್ರಮದಲ್ಲಿ ಬಳಕೆ ಮಾಡುವುದು ಮುಖ್ಯವಾಗಿದೆ. ಯಾಕೆಂದರೆ ಸ್ವಲ್ಪ ಎಚ್ಚರ ತಪ್ಪಿದರೂ ದುರಂತ ಸಂಭವಿಸುವ ಸಾಧ್ಯತೆ ಇದೆ.


ಹಾಗಾದರೆ ಯಾವ ರೀತಿ ಗ್ಯಾಸ್‌ ಸಿಲಿಂಡರ್‌ ಬಳಸುವ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ತಿಳಿಯಿರಿ...

🔸ಗ್ಯಾಸ್‌ ಸಿಲಿಂಡರ್‌ ಬಳಕೆ ಮಾಡುವಾಗ :


೧.ಅಡುಗೆ ಮನೆಯ ಎಲ್ಲಾ ಕಿಟಕಿಗಳನ್ನು ಓಪನ್‌ ಇಟ್ಟಿರಿ.

೨.ಬೆಂಕಿಯ ಬಳಿ ಯಾವುದೇ ಪ್ಲಾಸ್ಟಿಕ್‌ ಅಥವಾ ಪೇಪರ್‌ ವಸ್ತುಗಳನ್ನು ಬೆಂಕಿಯ ಬಳಿ ಇಡಬೇಡಿ.

೩.ಯಾವುದೇ ವಸ್ತುಗಳನ್ನು ಬೇಯಿಸಲು ಇಟ್ಟು ಹೊರಗೆ ಹೋಗಿ ಮರೆಯಬೇಡಿ. ಅದು ಕುದಿದು ಹೊರಗೆ ಚೆಲ್ಲುವುದರಿಂದ ಗ್ಯಾಸ್‌ ಲೀಕ್‌ ಆಗುವ ಸಾಧ್ಯತೆ ಇದೆ.

೪.ಸಿಲಿಂಡರ್ ಬಳಕೆ ಮಾಡದೇ ಇರುವ ಸಂದರ್ಭದಲ್ಲಿ ರೆಗ್ಯೂಲೇಟರ್‌ ನೋಬ್‌ ಆಫ್‌ ಮಾಡಿ.


🔸ಸಿಲಿಂಡರ್‌ ಬಳಕೆ ಕ್ರಮ :


೧.ಬಳಕೆ ಮಾಡದೇ ಇದ್ದಾಗ ಎಲ್‌ಪಿಜಿ ರೆಗ್ಯುಲೇಟರ್‌ ಡಿಸ್‌ಕನೆಕ್ಟ್‌ ಮಾಡಿ ನಂತರ ಸೇಫ್ಟ್‌ ಕ್ಯಾಪ್‌ ಮುಚ್ಚಿ ಬಿಡಿ.

೨.ಅದನ್ನು ಸರಿಯಾದ ಜಾಗದಲ್ಲಿ ಫಿಕ್ಸ್‌ ಮಾಡಿ ಜೊತೆಗೆ ಬೆಂಕಿಯ ಇತರ ವಸ್ತುಗಳಿಂದ ಅದನ್ನು ದೂರ ಇಡಿ.

೩.ಗ್ಯಾಸ್‌ ಲೀಕ್‌ ಆಗುತ್ತಿದೆಯೇ ಎಂದು ರೆಗ್ಯುಲರ್‌ ಆಗಿ ಚೆಕ್‌ ಮಾಡುತ್ತಿರಿ. ಸೋಪ್‌ ಸೊಲ್ಯೂಶನ್‌ ಬಳಸಿ ಈ ಕ್ರಮ ಅನುಸರಿಸಬಹುದು.


೪ ಲೀಕ್‌ ಆಗುತ್ತದೆಯೇ ಎಂದು ಪರೀಕ್ಷಿಸಲು ನೇರವಾಗಿ ಬೆಂಕಿ ಹಚ್ಚಬೇಡಿ.


೫.ಗ್ಯಾಸ್‌ ಸಿಲಿಂಡರ್‌ ಸರಿಯಾಗಿದೆಯೇ ಎಂದು ಪರೀಕ್ಷಿಸಿ. ಸರಿ ಇಲ್ಲ ಎಂದಾದರೆ ಕೂಡಲೇ ಸ್ಥಳೀಯ ಸಂಸ್ಥೆಗೆ ಕರೆ ಮಾಡಿ ಮಾಹಿತಿ ನೀಡಿ. 

ಹಿಂದೂಗಳು ಯಾಕೆ ದೇವಸ್ಥಾನದಲ್ಲಿ ಪೂಜೆ ಮಾಡ್ತಾರೆ ಗೊತ್ತಾ?

✨ಹಿಂದೂಗಳು ಯಾಕೆ ದೇವಸ್ಥಾನದಲ್ಲಿ ಪೂಜೆ ಮಾಡ್ತಾರೆ ಗೊತ್ತಾ?✨





ಭಾರತ ದೇಶವನ್ನು ತನ್ನ ಪರಂಪರೆ ಹಾಗೂ ಸಂಸ್ಕೃತಿಗಾಗಿ ಹೆಸರುಹೋದಂತಹ ದೇಶ. ಯಾವುದೇ ಹಬ್ಬ, ಸಡಗರ, ಯಶಸ್ಸು ಮಂದಿರಕ್ಕೆ ಹೋಗಿ ದೇವರ ದರ್ಶನ ಪಡೆಯದೆ ಪೂರ್ತಿಯಾಗುವುದಿಲ್ಲ. ಹಿಂದೂಗಳು ಮಂದಿರಗಳಲ್ಲಿ ಪೂಜೆ ಯಾಕೆ ಮಾಡ್ತಾರೆ ಎನ್ನವುದನ್ನು ನಿಮಗೆ ಗೊತ್ತಾ? ಅದರ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ.


✨ಪ್ರತಿಷ್ಠಾಪನ ಸ್ಥಾನ

ಯಾವುದೇ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕಾದರೆ ಅಲ್ಲಿ ಸಕಾರಾತ್ಮಕ ಗುಣಗಳಿರುವ ದಿಕ್ಕನ್ನು ಆಯ್ಕೆಮಾಡಿಕೊಳ್ಳಬೇಕಾಗುತ್ತದೆ. ಉತ್ತರದ ಕಡೆ ದೇವರ ಮೂರ್ತಿ, ದಕ್ಷಿಣದ ಕಡೆ ದೇವರ ಮಂದಿರವಿದ್ದರೆ ಒಳ್ಳೆಯದು. ಇದರಿಂದ ಸಕಾರಾತ್ಮಕ ಗುಣಗಳ ಫೀಲ್‌ ಆಗುತ್ತದೆ.


✨ಚಪ್ಪಲಿ ಹೊರಗಿಡುವುದು

ಹಿಂದಿನ ಕಾಲದಲ್ಲಿ ದೇವಸ್ಥಾನದ ನೆಲವನ್ನು ಪಾಸಿಟಿವಿಟಿಯನ್ನು ಜನರ ಒಳಗೆ ಸಂಚರಿಸುವಂತೆ ನಿರ್ಮಿಸಲಾಗುತ್ತಿತ್ತು. ಹಾಗಾಗಿ ಚಪ್ಪಲಿ ಹಾಕಿ ಹೋಗುವಂತಿರಲಿಲ್ಲ.  ನಂತರ ದೇವಸ್ಥಾನದಲ್ಲಿ ಬರೀ ಕಾಲಿನಲ್ಲಿ ಹೋಗುವುದು ಪದ್ಧತಿಯಾಗಿ ಬಿಟ್ಟಿದೆ.

✨ಗಂಟೆ ಬಾರಿಸುವುದು

ಮಂದಿರದ ಗಂಟೆ ಬಾರಿಸಿದಾಗ ಮೆದುಳಿನ ಎಡ ಹಾಗೂ ಬಲ ಭಾಗದಲ್ಲಿ ಒಂದು ರೀತಿಯ ಬೆಳಕು ಉತ್ಪನ್ನವಾಗುವ ರೀತಿಯಲ್ಲಿ ಮಂದಿರದ ಗಂಟೆಯನ್ನು ನಿರ್ಮಿಸಲಾಗುತ್ತಿತ್ತು. ಗಂಟೆ ಬಾರಿಸುತ್ತಿದ್ದಂತೆ ಅದು ಏಳು ಸೆಕೆಂಡ್‌ ವರೆಗೆ ಗಂಟೆ ಶಬ್ಧ ನಿಮ್ಮ ಮೆದುಳಿನಲ್ಲಿ ಏಕೋ ಆಗುತ್ತಿರುತ್ತದೆ.  ಇದರ ಮೂಲಕ ನಿಮ್ಮ ಶರೀರದ ಏಳು ಹೀಲಿಂಗ್‌ ಸೆಂಟರ್‌ ಆಕ್ಷಿವ್‌ ಆಗುತ್ತದೆ.

✨ತಿಲಕ ಹಚ್ಚಿಕೊಳ್ಳುವುದು

ತಿಲಕವನ್ನು ಎರಡು ಹುಬ್ಬುಗಳ ನಡುವೆ ಹಚ್ಚಿಕೊಳ್ಳಲಾಗುತ್ತದೆ. ಇದು ಪ್ರತಿಯೊಬ್ಬರ ತಾಂತ್ರಿಕ ಬಿಂದುವಾಗಿರುತ್ತದೆ. ತಿಲಕ ಹಚ್ಚಿಕೊಳ್ಳುವುದರಿಂದ ಶರೀರದಲ್ಲಿ ಶಕ್ತಿ ಸಂಚಾರ ಸರಿಯಾಗುತ್ತದೆ. ಜೊತೆಗೆ ನಿಮ್ಮ ಏಕಾಗ್ರತೆಯ ಕ್ಷಮತೆ ಕೂಡಾ ಹೆಚ್ಚುತ್ತದೆ.

✨ಕರ್ಪೂರ ಉರಿಸುವುದು

ಸಾಮಾನ್ಯವಾಗಿ ಮಂದಿರದಲ್ಲಿ ದೇವರ ಮೂರ್ತಿಯನ್ನು ಸ್ಥಾಪಿಸಿರುವಲ್ಲಿ ಕತ್ತಲೆ ಇರುತ್ತದೆ. ನೀವು ಕರ್ಪೂರ ಹಚ್ಚಿರುವುದನ್ನು ನೋಡಿದರೆ ನಿಮ್ಮ ಕಣ್ಣಿಗೆ ಉತ್ತಮ.


✨ಆರತಿ ತೆಗೆದುಕೊಳ್ಳುವುದು

ನೀವು ಆರತಿ ತೆಗೆದುಕೊಳ್ಳಲು ಬೆಂಕಿಯತ್ತ ಕೈ ಚಾಚಿದಾಗ  ನಿಮ್ಮ ಕೈಯನ್ನು ಬಿಸಿಯಾಗಿಸುತ್ತದೆ. ಅದೇ ಕೈಯಿಂದ ನೀವು ನಿಮ್ಮ ಕಣ್ಣಿಗೆ ಒತ್ತಿಕೊಂಡಾಗ ಅದು ನಿಮ್ಮ ಸೆನ್ಸ್‌ನ್ನು ಆಕ್ಟಿವ್‌ ಮಾಡಿಸುತ್ತದೆ.

ಕರಿಬೇವನ್ನು ಆಹಾರದಿಂದ ತೆಗೆದು ಎಸೆಯುವ ಮುನ್ನ ಯೋಚಿಸಿ

ಇನ್ನು ಕರಿಬೇವನ್ನು ಆಹಾರದಿಂದ ತೆಗೆದು ಎಸೆಯುವ ಮುನ್ನ ಯೋಚಿಸಿ


ಕರಿಬೇವು ಒಗ್ಗರಣೆಗೆ ಬೇಕೆಬೇಕು. ಇಲ್ಲದಿದ್ದರೆ ಸಾಂಬಾರ್ ಅಥವಾ ಯಾವುದೇ ಪದಾರ್ಥಗಳಾಗಲಿ ಅದರ ರುಚಿ ಸಿಗುವುದಿಲ್ಲ. ಒಂದೊಮ್ಮೆ ಕೊತ್ತಂಬರಿ ಸೊಪ್ಪು ಇಲ್ಲದಿದ್ದರೂ, ಕರಿಬೇವು ಮಾತ್ರ ಒಗ್ಗರಣೆಗೆ ಇರಲೇ ಬೇಕು. ಇಂಥ ಕರಿಬೇವು ಆರೋಗ್ಯ ಕಾಪಾಡುವ ಔಷಧವೂ ಆಗಿದೆ. ಕರಿಬೇವು ಅಪ್ಪಟ ಭಾರತದ ಮೂಲದ್ದೆಂದು ಹಲವು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ. ಆ ಕಾಲದಿಂದಲೂ ಕರಿಬೇವು ನಮ್ಮ ಪೂರ್ವಜರ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.


ಆರೋಗ್ಯ ಕಾಯಲು ಸಹ ಕರಿಬೇವು ಅತ್ಯಗತ್ಯ. ಇದನ್ನು ದೇಹದಲ್ಲಿರುವ ಟಾಕ್ಸಿಕ್ ಅಂಶಗಳನ್ನು ಹೊರ ಹಾಕಲು ಬಳಸಲಾಗುತ್ತದೆ. ಜತೆಗೆ ಇದು ದೇಹದಲ್ಲಿರುವ ಪಿತ್ತವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಅದಲ್ಲದೆ ವಾಂತಿ ಬರುವಂತಾಗುವಿಕೆ ಮತ್ತು ಅಜೀರ್ಣವನ್ನು ಸಹ ನಿವಾರಿಸುತ್ತದೆ. ಏಕೆಂದರೆ ಪಿತ್ತ ಹೆಚ್ಚಾಗಿದ್ದಲ್ಲಿ ನಾಸಿಯಾ ಮತ್ತು ಅಜೀರ್ಣ ಉಂಟಾಗುತ್ತದೆ. ಇದರಲ್ಲಿ ಅಲ್ಕಾಲಾಯ್ಡ್ ಕಾರ್ಬಾಜೋಲ್ ಇದ್ದು, ಅದು ಉರಿಬಾವು ನಿರೋಧಕ ಗುಣಗಳನ್ನು ಹೊಂದಿರುತ್ತದೆ. ಹೊಟ್ಟೆ ತೊಳೆಸುವಿಕೆಯಂತಹ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ ಎನ್ನುತ್ತಾರೆ ಆರ್ಯುವೇದ ವೈದ್ಯರು.


ಗರ್ಭಿಣಿಯಾಗಿರುವ ಸಮಯದಲ್ಲಿ ಮಹಿಳೆ ತನ್ನ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಈ ಸಂದರ್ಭದಲ್ಲಿ ಪ್ರಯಾಣ ಮಾಡುವಾಗ ಅಥವಾ ಬೆಳಗಿಗ್ಗೆ ಎದ್ದ ತಕ್ಷಣ ವಾಂತಿಯ ಬರುವಂತಹ ಸಮಸ್ಯೆ ಇರುತ್ತದೆ. ಇಂತಹ ಸಮಸ್ಯೆ ಎದುರಿಸುವವರು ಪ್ರತಿ ದಿನ ಕರಿಬೇವಿನ ಎಲೆಗಳನ್ನು ಅರೆದು ತಯಾರಿಸಿದ ಮಿಶ್ರಣವನ್ನು ನೀರಿನಲ್ಲಿ ಸೇರಿಸಿ ಕುಡಿದರೆ ಉತ್ತಮ ಪರಿಣಾಮ ದೊರಕುತ್ತದೆ


ಜೀರ್ಣ ಕ್ರಿಯೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದ ಸೊಪ್ಪು ಇದಾಗಿದೆ.  ದೇಹದಲ್ಲಿರುವ ಟಾಕ್ಸಿಕ್ ಅಂಶಗಳನ್ನು ಹೊರ ಹಾಕಲು ಸಹ ಇದನ್ನು ಬಳಸಲಾಗುತ್ತದೆ. ಜೊತೆಗೆ ಇದು ನಿಮ್ಮ ದೇಹದಲ್ಲಿರುವ ಪಿತ್ತವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.


ಕರಿಬೇವನ್ನು ಸೇವನೆ ಮಾಡುತ್ತಾ ಬಂದರೆ ದೇಹ ಊದಿಕೊಳ್ಳುವುದು ಅಥವಾ ಕೊಲೆಸ್ಟ್ರಾಲ್‌ ಹೆಚ್ಚಾಗುವ ಸಮಸ್ಯೆ ನಿವಾರಣೆಯಾಗಿ, ಫ್ಯಾಟ್‌ ಫ್ರೀ ದೇಹ ನಿಮ್ಮದಾಗುತ್ತದೆ.


ಕರಿಬೇವಿನ ಎಲೆಯಲ್ಲಿ ಐರನ್‌ ಮತ್ತು ಫೋಲಿಕ್‌ ಆಸಿಡ್‌ ಹೆಚ್ಚಿನ ಪ್ರಮಾಣದಲ್ಲಿದೆ. ಇದು ದೇಹಕ್ಕೆ ಬೇಕಾದ ಕಬ್ಬಿಣಾಂಶವನ್ನು ನೀಡಿ ರಕ್ತಹೀನತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.



ಮಧುಮೇಹಕ್ಕೆ ರಾಮಬಾಣ

 : ಪ್ರತಿದಿನ ಕರಿಬೇವಿನ ಎಲೆಗಳನ್ನು ಆಹಾರದ ಮೂಲಕ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.  ಕೆಲವೊಮ್ಮೆ ಅಜೀರ್ಣವಾದ ಕಾರಣ ಹಲವು ಅನಿಲಗಳು ಉತ್ಪತ್ತಿಯಾಗಿ ಹೊಟ್ಟೆ ಮತ್ತು ಎದೆಯಲ್ಲಿ ಭಾರಿ ಉರಿ ತರಿಸುತ್ತವೆ. ಇಂತಹ ಸಮಯದಲ್ಲಿ ಕರಿಬೇವನ್ನು ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ಮಾದರಿಯಲ್ಲಿ ತಯಾರಿಸಿ ಕುಡಿದರೆ ತಕ್ಷಣ ಎದೆಯಲ್ಲಿ ಉರಿ ಕಡಿಮೆಯಾಗುತ್ತದೆ.

ಕಿಡ್ನಿಕಲ್ಲು ತಡೆಯುವ ಕರಿಬೇವು :

 ಪ್ರತಿದಿನ ನಮ್ಮ ಆಹಾರದಲ್ಲಿ ಕರಿಬೇವು ಇರುವಂತೆ ನೋಡಿಕೊಳ್ಳಬೇಕು. ಆ ಮೂಲಕ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಂತೆ ಇದರಿಂದ ತಡೆಯಬಹುದು. ಹೆಚ್ಚಿನ ತೊಂದರೆ  ಕಂಡುಬಂದಲ್ಲಿ ಕರಿಬೇವಿನ ಎಲೆಗಳ ಜ್ಯೂಸ್ ಕುಡಿಯುವ ಮೂಲಕ ಉತ್ತಮ ಪರಿಹಾರ ಸಿಗುತ್ತದೆ.

ಕೂದಲುಗಳ ಬೆಳವಣಿಗೆಗೂ ಉಪಯುಕ್ತ

: ಸಾಮಾನ್ಯವಾಗಿ ಹೆಣ್ಣು ಮಕ್ಕಳು ಉದ್ದನೆಯ ಕೂದಲಿಗಾಗಿ ಇನ್ನಿಲ್ಲದ ಕಸರತ್ತು, ಆನೇಕ ಪ್ರಯೋಗಳನ್ನು ಮಾಡುತ್ತಿರುತ್ತಾರೆ, ನಾನಾ ಬಗೆಯ ಶಾಂಪೂ, ಹಾಗೂ ತೈಲಗಳನ್ನು ಬಳಸುತ್ತಿರುತ್ತಾರೆ. ನಿಮಗೆ ಆಶ್ಚರ್ಯವಾಗುವ ವಿಷಯವೇನೆಂದರೆ ಊಟದಲ್ಲಿ ಹಾಗೂ ನೇರವಾಗಿ ಹೆಚ್ಚು ಕರಿಬೇವು ಸೇವನೆಯಿಂದ ಸದೃಢವಾದ ಮತ್ತು ಉದ್ದನೆಯ ಕೂದಲುಗಳ ಬೆಳವಣಿಗೆಯಾಗುತ್ತವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

Tuesday, 23 August 2016

You start dying slowly. - By Pablo Neruda

"You start dying slowly" - By Pablo Neruda


 You start dying slowly if you do not travel, if you do not read,

 If you do not listen to the sounds of life,

 If you do not appreciate yourself. You start dying slowly When you kill your self-esteem; When you do not let others help you. You start dying slowly


 If you become a slave of your habits, Walking everyday on the same paths…

If you do not change your routine,


If you do not wear different colours Or you do not speak to those you fdon’t know. You start dying slowly

 If you avoid to feel passion And their turbulent emotions; Those which make your eyes glisten And your heart beat fast.

You start dying slowly

If you do not change your life when you are not satisfied with your job, or with your love,

 If you do not risk what is safe for the uncertain,

If you do not go after a dream,

If you do not allow yourself, At least once in your lifetime, To run away You start dying Slowly *********

Super lines

What is Poison? He replied with a beautiful answer - Anything which is more than our necessity is Poison. It may be Power, Wealth, Hunger, Ego, Greed, Laziness, Love, Ambition, Hate or anything


 What is fear.....? Non acceptance of uncertainty. If we accept that uncertainty, it becomes adventure...!


What is envy ? Non acceptance of good in others If we accept that good, it becomes inspiration...!


What is Anger? Non acceptance of things which are beyond our control. If we accept, it becomes tolerance...!


What is hatred? Non acceptance of person as he is. If we accept person unconditionally, it becomes love...! *********

Beautifully said!



*Beautifully said!*


A man just got married and was returning home with his wife.


 They were crossing a lake in a boat, when suddenly a great storm arose. The man was a warrior, but the woman became very much afraid because it seemed almost hopeless:



The boat was small and the storm was really huge, and any moment they were going to be drowned. But the man sat silently, calm and quiet, as if nothing was happening.


The woman was trembling and she said, “Are you not afraid ?”. This may be our last moment of life! It doesn’t seem that we will be able to reach the other shore. Only some miracle can save us; otherwise death is certain. Are you not afraid? Are you mad or something? Are you a stone or something?


 The man laughed and took the sword out of its sheath. The woman was even more puzzled: What he was doing?


Then he brought the naked sword close to the woman’s neck, so close that just a small gap was there, it was almost touching her neck. He said,” Are you afraid ?”



She started to laugh and said,” Why should I be afraid ?,If the sword is in your hands, why I should be afraid? I know you love me. ”


 He put the sword back and said, This is my answer”. I know God Loves me, and the storm is in His hands



 *SO WHATSOEVER IS GOING TO HAPPEN IS GOING TO BE GOOD.* If we survive, good; if we don’t survive, good ,because everything is in His hands and He cannot do anything wrong.

 *********

ನುಡಿಮುತ್ತುಗಳು

********


*💖ತಪ್ಪು ನಿಮ್ಮ ಅನುಭವಗಳನ್ನು ಹೆಚ್ಚಿಸುತ್ತದೆ, ಅನುಭವ ನಿಮ್ಮ ತಪ್ಪುಗಳನ್ನು ಕಡಿಮೆ ಮಾಡುತ್ತದೆ ನೀವು ತಪ್ಪಿನಿಂದ ಪಾಠ ಕಲಿತರೆ ಜನ ನಿಮ್ಮ ಯಶಸ್ಸು ನೋಡಿ ಪಾಠ ಕಲೀತಾರೆ*.



 *💖ಒಂದು ನಿಮಿಷದಲ್ಲಿ ಬದುಕು ಬದಲಾಗುತ್ತೆ ಅಂತ ಹೇಳೋಕಾಗಲ್ಲ, ಆದರೆ ಒಂದು ನಿಮಿಷದಲ್ಲಿ ತೆಗೆದುಕೊಂಡ ನಿರ್ಧಾರ ನಮ್ಮ ಬದುಕನ್ನು ಬದಲಾಯಿಸುತ್ತೆ*.



 *💖ಒಳ್ಳೆಯ ಅವಕಾಶ ತಪ್ಪಿಹೋಯಿತೆಂದು ಯಾವತ್ತೂ ಕಣ್ಣೀರು ಹಾಕಬೇಡಿ, ಕಣ್ಣೀರು ನಿಮ್ಮ ಮುಂದಿರುವ ಅವಕಾಶವನ್ನು ಮರೆಮಾಚುತ್ತದೆ*.



 *💖ನೋವು ಬಂದಾಗ ಜೀವನ ಇಷ್ಟ ಆಗುವುದಿಲ್ಲ ನಿಜ, ಆದರೆ – ಇಷ್ಟ ಆದವರು ಜೊತೆಯಾಗಿರುವಾಗ ನೋವಲ್ಲೂ ಕೂಡಾ ಏನೋ ಒಂಥರಾ ಖುಷಿ ಇರುತ್ತದೆ*.



 *💖ತಪ್ಪಾಯಿತು ಎನ್ನಲು ಎಂದೂ ನಾಚಿಕೆ ಪಡಬೇಡ. ಯಾಕೆಂದರೆ ಹಾಗೆನ್ನುವುದರ ಅರ್ಥ ನಿನ್ನೆಗಿಂತ ಇಂದು ಬುದ್ಧಿ ಹೆಚ್ಚಾಗಿದೆ ಎಂದು*.



 *💖ಸಂತೋಷದ ಸಮಯದಲ್ಲಿ ಚಪ್ಪಾಳೆ ಹೊಡೆಯುವ ಹತ್ತು ಬೆರಳಿಗಿಂತ, ದುಃಖದ ಸಮಯದಲ್ಲಿ ಕಣ್ಣೀರು ಒರೆಸುವ ಒಂದು ಬೆರಳು ಎಷ್ಟು ಪವಿತ್ರ ಅಲ್ವಾ*.



 *💖ಜೀವನದಲ್ಲಿ ನೀನು ಗೆದ್ದರೆ ನೀನು ಯಾರೆಂದು ಎಲ್ಲರಿಗೂ ಗೊತ್ತಾಗುತ್ತದೆ. ಒಂದು ವೇಳೆ ಸೋತರೆ ನಿನ್ನವರು ಯಾರೆಂದು ನಿನಗೆ ಗೊತ್ತಾಗುತ್ತದೆ*.



 *💖ಬದುಕಿನಲ್ಲಿ ಯಾರನ್ನೂ ನಂಬಬೇಡಿ. ನಿಮ್ಮ ನೆರಳನ್ನೂ ಕೂಡಾ ಯಾಕೆಂದರೆ ಸಂಜೆಯಾಗುತ್ತಲೆ ನೆರಳು ಕೂಡಾ ನಿಮ್ಮನ್ನು ಬಿಟ್ಟು ಹೋಗುತ್ತದೆ*.



 *💖ನಂಬಿಕೆಗಿಂತ ಸಂದೇಹವೇ ಜಾಸ್ತಿಯಾದರೆ ಯಾವ ಸಂಬಂಧವೂ ಉಳಿಯಲ್ಲ. ಸಂದೇಹದ ನಡುವೆ ನಂಬಿಕೆ ಗಟ್ಟಿ ಆದರೆ ಯಾವ ಮನಸ್ಸೂ ಮುರಿಯಲ್ಲ*



. *💖ನಾನು ನನ್ನ ಬಲಗೈಯಲ್ಲಿ ಏನು ಬೇಕಾದರೂ ಸಾಧಿಸಬಲ್ಲೆ, ಆದರೆ ನನ್ನ ಎಡಗೈಯನ್ನು ಅಮ್ಮ ಹಿಡಿದುಕೊಂಡು ಪ್ರೋತ್ಸಾಹಿಸಿದಾಗ ಮಾತ್ರ*.


 *💖ವಿಶಾಲ ಆಕಾಶವನ್ನು ಚಿಕ್ಕ ಕಣ್ಣಿನಲ್ಲೇ ನೋಡಬಹುದು. ಆದರೆ ಒಂದು ಒಳ್ಳೆ ಹೃದಯವನ್ನು ನೋಡಬೇಕಾದರೆ ನಮ್ಮ ಮನಸ್ಸು ವಿಶಾಲವಾಗಿರಬೇಕು*.



 *💖ಜೀವನ ಒಂದು ಸುಂದರವಾದ ರಂಗೋಲಿ. ಒಂದು ಚುಕ್ಕಿ ತಪ್ಪಿದರೂ ಹಾಳಾಗುತ್ತದೆ. ಅದಕ್ಕಾಗಿ ಜೀವನದ ಪ್ರತಿ ಹೆಜ್ಜೆಯಲ್ಲೂ ಗಮನ ಇರಲಿ*.



 *💖ಬದುಕು ಟೀಚರ್‌ಗಿಂತ ತುಂಬಾ ಸ್ಟ್ರಿಕ್ಟ್. ಯಾಕೆಂದರೆ ಟೀಚರ್ ಮೊದಲು ಪಾಠ ಮಾಡಿ ನಂತರ ಪರೀಕ್ಷೆ ಮಾಡ್ತಾರೆ. ಆದರೆ ಬದುಕು ಮೊದಲು ಪರೀಕ್ಷೆ ಮಾಡಿ ನಂತರ ಪಾಠ ಕಲಿಸುತ್ತದೆ*.


 *💖ಮನೆ ಬಿಟ್ಟು ಹೊರಡುವ ಮುನ್ನ ಮನದೊಳಗಿನ ಮಾತನ್ನೊಮ್ಮೆ ಆಲಿಸಿ*


. *********

ನಮ್ಮೊಳಗನ್ನು ಗಮನಿಸುವುದು?

ನಮ್ಮೊಳಗನ್ನು ಗಮನಿಸುವುದು?



ಸಂಪೂರ್ಣ ಗ್ರಹಿಸುವಿಕೆಯಲ್ಲಿ ಸಮಗ್ರ ಮಾನವ ಜನಾಂಗವೇ ಅಡಕವಾಗಿದೆ. ಅದು ದುಃಖದಿಂದ ಮುಕ್ತವಾದ ಸ್ಥಿತಿ. ಇಂದ್ರಿಯ ಸುಖ, ಲೈಂಗಿಕ ಸುಖ ಮುಂತಾದುವುಗಳ ಸ್ಪಂದನವನ್ನು ಸಂಪೂರ್ಣವಾಗಿ ಗಮನಿಸಿದಾಗ ನಿಮ್ಮ ಪ್ರಜ್ಞೆಯಲ್ಲಿ ತುಂಬಿಕೊಂಡಿರುವ ಎಲ್ಲ ಹುರುಳನ್ನೂ ನೀವು ಅರ್ಥಮಾಡಿಕೊಳ್ಳಬಲ್ಲಿರಿ.' ''ಗಮನಿಸುವ ಕ್ರಿಯೆಯನ್ನೇ ನೀವು ಪರೀಕ್ಷಿಸಲು ಆರಂಭಿಸಿದಾಗ ಏನಾಗುತ್ತದೆ ಎಲ್ಲ ಇಂದ್ರಿಯಗಳೂ ಜಾಗೃತಗೊಳ್ಳುತ್ತವೆ. ಮತ್ತು ಎಲ್ಲವೂ ಒಟ್ಟಿಗೆ ಸಮಗ್ರವಾಗಿ ಗಮನಿಸಲು ಆರಂಭಿಸುತ್ತವೆ. ಒಂದೇ ಇಂದ್ರಿಯದಿಂದ ಗಮನಿಸುವಾಗ ನೀವು ಗಮನಿಸುವುದೇ ಇಲ್ಲ. ಒಂದೇ ಇಂದ್ರಿಯದಿಂದ ಗಮನಿಸುವುದೆಂದರೆ ನೀವು ಅದಕ್ಕೆ ತರಬೇತಿ ಕೊಟ್ಟು ಕ್ರಿಯೆಯಲ್ಲಿ ತೊಡಗಿಸುವುದೆಂದೇ ಅರ್ಥ. ಇಂಥ ಪಾಶ್ರ್ವ ಪ್ರಕ್ರಿಯೆ ಏಕ ಕೇಂದ್ರಿತ ಏಕಾಗ್ರತೆಗೆ ಕಾರಣವಾಗುತ್ತದೆ. ಆದರೆ ನೀಜವಾದ ಗಮನಿಸುವಿಕೆಯಲ್ಲಿ ಕೇಂದ್ರವೇ ಇರುವುದಿಲ್ಲ. ಅಲ್ಲಿ ಗಮನಿಸುವಿಕೆಯು ತಂತಾನೇ ಹರಿಯುತ್ತಿರುತ್ತದೆ. ನಿಶ್ಚಲತೆ, ಜಡತ್ವಕ್ಕೆ ಅಲ್ಲಿ ಅವಕಾಶವಿಲ್ಲ. ಸದಾ ಹರಿಯುತ್ತಿರುವ ನದಿಯ ನೀರು ಅದರ ಹಿಂದಿರುವ ನೀರಿನ ರಾಶಿಯ ಒತ್ತಡದಿಂದ ಶಕ್ತಿಶಾಲಿಯಾಗುತ್ತ ಮುಂದುವರಿಯುವಂತೆ, ಇಂಥ ಗಮನಿಸುವಿಕೆ ತನ್ನ ಗಮನದ ಸತ್ವವನ್ನು ವೃದ್ಸಿಕೊಳ್ಳುತ್ತಲೇ ಹೋಗುತ್ತದೆ. ಇಂಥ ಸ್ಥಿತಿಯಲ್ಲಿ ನಮ್ಮ ಅಸಾಮಾನ್ಯವಾದದ್ದು ಸಂಭವಿಸುತ್ತದೆ. ಆನಂದವು ತಂತಾನೆ ಪ್ರಕಟಗೊಳ್ಳುತ್ತದೆ. ಆಕಾಶದ ಅನಂತತೆಯ ಅನುಭವವಾಗುತ್ತದೆ. ಅಪಾರವಾದ ಬಣ್ಣಗಳ ಸ್ಪಂದನದ ಅನುಭವವಾಗುತ್ತದೆ.

ಈ ಬಣ್ಣಗಳೇ ದೇವರು. ನೀವು ಪೂಜೆ ಮಾಡುವ ದೇವರಲ್ಲ ಇದು. ಈ ದೇವರು ಭೂಮಿಯ ಬಣ್ಣ, ಆಕಾಶದ ಬಣ್ಣ, ಹೂವಿನ ಅನುಪಮ ಬಣ್ಣಗಳ ಸೌಂದಯ...!'' ''ಕೇವಲ ಕಣ್ಣಿನಿಂದಲ್ಲದೆ, ಕಿವಿಯಿಂದ, ಎಲ್ಲ ಇಂದ್ರಿಯಗಳಿಂದ ಅಖಂಡವಾಗಿ ನೋಡಲು ಸಾಧ್ಯವಿದೆಯೇ ಕೇಳಲು, ಮುಟ್ಟಲು, ಮೂಸಲು ಸಾಧ್ಯವಿದೆಯೇ ಇದಕ್ಕೆ ಶಾಂತಿ, ಸಾಮರಸ್ಯಗಳಿರಬೇಕಾಗುತ್ತದೆ. ಈ ಸಾಮರಸ್ಯ ಒಂದೇ ಕೇಂದ್ರದತ್ತ ಏಕಮುಖದ ಚಲನೆಯಿಲ್ಲದಾಗ ಮಾತ್ರ ಸಾಧ್ಯ.


ಎಲ್ಲಿ ಸಾಮರಸ್ಯವಿಲ್ಲವೋ ಅಲ್ಲಿ ಅಹಮಿಕೆಯಿರುತ್ತದೆ. ಗಮನಿಸುವಿಕೆಯಿಂದರೆ ಅಹಮಿಕೆಯಿಲ್ಲ ತುಂಬು ಸಾಮರಸ್ಯ. ಅಂಥ ಸ್ಥಿತಿಯಲ್ಲಿ ಅಪಾರವಾದ ಶಕ್ತಿ ಸಂಚಯವಾಗುತ್ತದೆ. ಅದು ಹರಿಯುವ ಗಂಗಾನದಿಯಂತೆ ಹಾಗಾಗಿ ಗಮನಿಸುವಿಕೆಯೆಂದರೆ ಅನಂತ-ಅಪಾರಗಳ ನಿರಂತರ ಚಲನೆ. ಅಲ್ಲಿ ಜವಾಬ್ದಾರಿಯಿದೆ, ಪೋಷಣೆಯಿದೆ, ಪ್ರೀತಿ-ವಾತ್ಸಲ್ಯಗಳಿವೆ. ಆದರೆ ಯಾವುದೇ ನಿಶ್ಚಿತ ಉದ್ದೇಶವಿಲ್ಲ,'' ''ಮನುಷ್ಯನ ಮನಸ್ಸು ಪರಂಪರೆಯ ನೆನಪುಗಳ ಭಾರದಿಂದ ಮಲಿನಗೊಳ್ಳುತ್ತಿದೆಯೇ ಮಿಲಿಯಾಂತರ ವರ್ಷಗಳ ನೆನಪುಗಳ ಮೊತ್ತವಾದ ಮೆದುಳು ಈ ನೆನಪುಗಳಿಂದೆಲ್ಲ ಮುಕ್ತವಾಗಲು ಸಾಧ್ಯವೇ? ಸಾಧ್ಯ.

ಚಿತ್ರಗಳನ್ನು ದಾಖಲಿಸುವ ಮನಸ್ಸಿನ ಅಭ್ಯಾಸವೇ ನಿರಂತರತೆ ಕೊಡುವಂಥದು. ಅದು ನಿಲ್ಲಬೇಕು. ಮನಸ್ಸು ದಾಖಲಿಸುವುದನ್ನು ಕೊನೆಗೊಳಿಸಿದಾಗ ನಿರಂತರತೆ ಕೊನೆಗೊಳ್ಳುತ್ತದೆ. ಅಲ್ಲಿ ಸಂಪೂರ್ಣ ಶಿಸ್ತು ಇರುತ್ತದೆ. ಅಂದರೆ ನಿರಂತರತೆಯನ್ನು ಕೊನೆಗೊಳಿಸುವುದೇ ಶಿಸ್ತು. ಮೆದುಳು ಮುಗ್ಧತೆಯಿಂದ, ಹರೆಯದ ಹುರುಪಿನಿಂದ, ಹೊಸತನದಿಂದ, ಜೀವಂತಿಕೆಯಿಂದ ಇರುವುದು ಮುಖ್ಯ. ಆ ಸ್ಥಿತಿಯಲ್ಲಿ ಮಾತ್ರ ಅದು ಸಾಧ್ಯ. ಆದರೆ ಮೆದುಳು, ನೆನಪು, ವಿಚಾರ, ಜ್ಞಾನ, ಅನುಭವಗಳಿಗೆ ಒಗ್ಗಿಹೋಗಿ ತನ್ನ ಪರಿಶುದ್ಧ ಮೂಲಕ್ಕೆ, ಅಪ್ಪಟತನಕ್ಕೆ ಹಿಂತಿರುಗುವ ಸಾಧ್ಯತೆಗಳನ್ನೇ ಮರೆತಿದೆ...

.'' ಮೆದುಳು ತನ್ನನ್ನೇ ತಾನು ಸಂಪೂರ್ಣ ಪರಿಶುದ್ಧಗೊಳಿಸಿ ಕೊಂಡು... ಎಲ್ಲದರ ಶಕ್ತಿ ಕೇಂದ್ರವಾದ ಆಳ, ವಿಸ್ತಾರಗಳಿಲ್ಲದ ಉಗಮವನ್ನೇ ಮುಟ್ಟಬೇಕು. ಎಂದೂ ಭ್ರಷ್ಟಗೊಳ್ಳದ, ಕಾಲಾತೀತವಾದ ಗಾಢವಾದ ಕೃಪೆಯಿಂದ ಕೂಡಿದ ಸಮಗ್ರ ಶಿಸ್ತಿನ ಸ್ಥಿತಿ ಅದು. ಪ್ರತಿಯೊಬ್ಬನೂ ಈ ನೆಲೆ ಮುಟ್ಟಲು ಸಾಧ್ಯ. ಆದರೆ ಅದಕ್ಕೆ ಸಮಸ್ತ ಇಂದ್ರಿಯಗಳೂ ಸಮಗ್ರವಾಗಿ ತೆರೆದುಕೊಳ್ಳಬೇಕು.

* ಜಿ. ಕೃಷ್ಣಮೂರ್ತಿ
✨✨✨✨✨✨✨✨✨

This is something we should all read at least once a week!!!!! Make sure you read to the end!!!!!!

🍀🌺🍀🌺🍀🌺🍀🌺🌺


This is something we should all read at least once a week!!!!! Make sure you read to the end!!!!!!_


_Written by *Regina Brett*, 90 years old, of the Plain b Dealer, Cleveland , Ohio_ _To celebrate growing older, I once wrote few lessons life taught me. It is the most requested column I've ever written._



1. *Life isn't fair, but it's still good.* 2. *When in doubt, just take the next small step.*


3. *Your job won't take care of you when you are sick. Your friends and family will.*


 4. *You don't have to win every argument. Stay true to yourself.*



 5. *Cry with someone. It's more healing than crying alone.*



6. *It's OK to get angry with God. He can take it.* 7. *Make peace with your past so it won't mess up the present.*


8. *Don't compare your life to others. You have no idea what their journey is all about.*



9. *Take a deep breath every now and then. It calms the mind.*



10. *Get rid of anything that isn't useful. Clutter weighs you down in many ways.*



11. *Whatever doesn't kill you really does make you stronger.*



12. *It's never too late to be happy. But it’s all up to you and no one else.*



 13. *When it comes to going after what you love in life, don't take no for an answer.*



14. *Burn the candles, use the nice sheets, wear the fancy clothes. Don't save it for a special occasion. Today is special.*



15. *No one is in charge of your happiness but you.*


16. *Frame every so-called disaster with these words 'In five years, will this matter?'*



17. *Always choose life.*


 18. *Forgive others and yourself.*


19. *What other people think of you is none of your business.*



20. *Time heals almost everything. Give time a little time.*


21. *However good or bad a situation is, it will change.*


22. *Don't take yourself so seriously. No one else does.*


23. *Believe in miracles.*



24. *God loves you because of who God is, not because of anything you did or didn't do.*


 25. *Don't audit life. Show up and make the most of it now.*


 26. *Growing old beats the alternative of dying young.*


27. *Your children get only one childhood.*


28. *All that truly matters in the end is that you loved.*


29. *Get outside every day. Miracles are waiting everywhere.*


30. *Envy is waste of time. Accept what you already have, not what you need.*


31. *The best is yet to come...*


 32. *No matter how you feel, get up, dress up and show up.*


33. *Life isn't tied with a bow, but it's still a gift."*


🌺🍀🌺🍀🌺🍀🌺🍀🌺

ಜಲ ಸಂರಕ್ಷಣೆ

ಜಲ ಸಂರಕ್ಷಣೆ


ಇಂದು ಎಲ್ಲೆಡೆಯೂ ಜಲಸಂರಕ್ಷಣೆಯ ಮಾತು ಕೇಳಿಬರುತ್ತಿದೆ.  ಜಲಸಂರಕ್ಷಣೆ ಎಂದರೇನು? ಮುಂದಿನ ಪೀಳಿಗೆಗಳೂ ನಮ್ಮ ಹಾಗೆಯೇ ನೀರನ್ನು ಬಳಸುವುದಕ್ಕೆ ಅವಕಾಶ ಮಾಡಿಕೊಡುವುದೇ ಜಲಸಂರಕ್ಷಣೆ ಎಂದು ಸರಳವಾಗಿ ಹೇಳಬಹುದು.

ಜಲಸಂರಕ್ಷಣೆ ಯಾಕೆ ಬೇಕು? ನಮ್ಮ ಬದುಕಿನಲ್ಲಿ ನೀರಿಲ್ಲದೆ ಏನನ್ನೂ ಮಾಡಲಾಗುವುದಿಲ್ಲ. ಇಂಥ ನೀರೇ ಸಿಗದೆ ಹೋದರೆ ಬದುಕು ಬರಡಾಗುತ್ತದೆ. ನೀರಿಗಾಗಿ ಇಂದು ಎಲ್ಲೆಡೆ ಹಾಹಾಕಾರ ಕೇಳಿಬರುತ್ತಿದ.  ನಗರಗಳಲ್ಲಿ ನೀರಿನ ಸರಬರಾಜು ಅಸ್ತವ್ಯಸ್ತವಾಗುತ್ತಿದೆ. ಹಳ್ಳಿಗಳಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ. ಇನ್ನು ಹೊಲಗದ್ದೆಗಳಿಗೆ ಬೇಕಾದ ನೀರಂತೂ ಸಿಗುವುದೇ ಕಷ್ಟವಾಗಿದೆ.

ಹಾಗೆಂದು ನೀರು ಹೆಚ್ಚಾಗುತ್ತಲೂ ಇಲ್ಲ; ಕಡಿಮೆಯೂ ಆಗುವುದಿಲ್ಲ. ಭೂಮಿಯ ನೀರಿನ ಪ್ರಮಾಣ ಕಡಿಮೆಯಾಗದಿದ್ದರೂ, ನೀರು ಸಿಗದೆ ಹೋಗುತ್ತದೆ; ಬರಗಾಲ ಹೆಚ್ಚಾಗುತ್ತದೆ. ಆದ್ದರಿಂದಲೇ ಜಲಸಂರಕ್ಷಣೆಗೆ ಮಹತ್ವ ಬಂದಿದೆ.

ಜಲಸಂರಕ್ಷಣೆಯಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಮುಖ್ಯವಾದವು ಮಳೆನೀರು ಸಂಗ್ರಹ ಮತ್ತು ಛಾವಣಿ ನೀರು ಸಂಗ್ರಹ. ವರ್ಷದಲ್ಲಿ ಮೂರ್‍ನಾಲ್ಕು ತಿಂಗಳುಗಳ ಕಾಲ ಬೀಳುವ ಮಳೆನೀರನ್ನು ಸಂಗ್ರಹಿಸಿದರೆ  ಇಡೀ ವರ್ಷವೂ ನೀರಿನ ಸಮಸ್ಯೆ ಇಲ್ಲದೆ ಬಾಳಬಹುದು. ಈಗಾಗಲೇ ದೇಶದ ಹಲವು ನಗರ – ಹಳ್ಳಿಗಳಲ್ಲಿ ಈ ಪ್ರಯೋಗವು ಯಶಸ್ವಿಯಾಗಿ ನಡೆದಿದೆ. ಇದನ್ನು ಮಳೆ ಕೊಯ್ಲು ಎಂದು ಕರೆಯುತ್ತಾರೆ.

ಕೇವಲ ನೀರಿನ ಸಂಗ್ರಹವೇ ಜಲಸಂರಕ್ಷಣೆ ಆಗುವುದಿಲ್ಲ. ನಮ್ಮ ಮನೆಗಳಲ್ಲಿ ಬಳಸುವ ನೀರಿನ ಮಿತವ್ಯಯದ ಬಗ್ಗೆ ಗಮನ ಕೊಡುವುದು,  ನೀರು ಪೋಲಾಗದಂತೆ ಎಚ್ಚರ ವಹಿಸುವುದು, ಸಾರ್ವಜನಿಕ ಜಲ ಸರಬರಾಜು ವ್ಯವಸ್ಥೆಗಳಲ್ಲಿ ನೀರು ವ್ಯರ್ಥವಾಗದಂತೆ ನೋಡಿಕೊಳ್ಳುವುದು, ನೀರು ಬಳಕೆಯ ಬಗ್ಗೆ ನಿರಂತರವಾಗಿ ಜನಜಾಗೃತಿ ಮಾಡುವುದು – ಇವೆಲ್ಲವೂ ಜಲಸಂರಕ್ಷಣೆಯ ವಿವಿಧ ಮಾರ್ಗಗಳು.

ಇಂದು ಜಲಸಂರಕ್ಷಣೆಯ ಚಳವಳಿ ವ್ಯಾಪಕವಾಗಿ ಹಬ್ಬಿದೆ.  ಕರ್ನಾಟಕದಲ್ಲಿ ನೀರಿನ ಬಗ್ಗೆ ಶ್ರೀ ಪಡ್ರೆಯವರು ಮಾಡುತ್ತಿರುವ ಜಾಗೃತಿಯಿಂದಾಗಿ  ಸಾರ್ವಜನಿಕರು ಈ ಬಗ್ಗೆ ಗಮನ ನೀಡುತ್ತಿದ್ದಾರೆ.  ಪತ್ರಿಕೆಗಳಲ್ಲಿ ಈ ಬಗ್ಗೆ ಉತ್ತಮ ಲೇಖನಗಳು ಬರುತ್ತಿವೆ. ನೀರನ್ನು ಸಂರಕ್ಷಿಸುವ  ಬಗ್ಗೆ ಜನಜಾಗೃತಿ ಮಾಡಿದ ವ್ಯಕ್ತಿಗಳಿಗೆ ಸಮಾಜದ ಮಾನ್ಯತೆ ಸಿಗುತ್ತಿದೆ. ಇಷ್ಟಾಗಿಯೂ ಜಲಸಂರಕ್ಷಣೆಯ ಬಗ್ಗೆ ಉಚ್ಚ ಸ ಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ. ಸಮಾಜದ ಎಲ್ಲ ವರ್ಗಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿದಾಗಲೇ ಜಲಸಂರಕ್ಷಣೆಯು ನಿಜವಾಗಿ ಜಾರಿಯಾಗುತ್ತದೆ. ಸಮಾಜವು ಹಸನಾಗುತ್ತದೆ.


ಜಲ ಸಂರಕ್ಷಣೆಯ ಮಹತ್ವ ಪ್ರತಿಯೊಬ್ಬರು ತಿಳಿಯಬೇಕು



ಜಲ' ಈ ಎರಡಕ್ಷರದ ಪದ ಕೇವಲ ನೀರಲ್ಲ! ಅದು ಜೀವ ಕೊಡುವ ಶಕ್ತಿ. ಆ ಕಾರಣಕ್ಕೇ ಅದಕ್ಕೆ ಜೀವಜಲ ಎಂಬ ಹೆಸರು. ಈ ಜಲವನ್ನು ಆಯಾ ಪ್ರದೇಶ, ಭಾಷೆಯಲ್ಲಿ ವಿಭಿನ್ನವಾಗಿ ಕರೆಯಲಾಗಿದೆ. ಕನ್ನಡದಲ್ಲಿ ನೀರು, ಕೊಂಕಣಿಯಲ್ಲಿ ಉದಕ್, ತುಳುವಿನಲ್ಲಿ ನೀರ್, ಆಂಗ್ಲಭಾಷೆಯಲ್ಲಿ ವಾಟರ್, ಹಿಂದಿಯಲ್ಲಿ ಪಾನಿ, ಮಲೆಯಾಳಂನಲ್ಲಿ ವೆಳ್ಳಂ ಹೀಗೆ ಕರೆಯಲಾಗುತ್ತದೆ. ನೀರಿನ ಮಹತ್ವವನ್ನು ಪ್ರತಿಯೊಬ್ಬರು ಅರಿಯುವುದು ಪ್ರಸಕ್ತ ದಿನಗಳಲ್ಲಿ ಅನಿವಾರ್ಯ. ತನ್ಮೂಲಕ ಜಲ ಸಂರಕ್ಷಣೆಯನ್ನು ಪ್ರತಿಯೊಬ್ಬನೂ ಕೈಗೊಳ್ಳಬೇಕಾದ ಸ್ಥಿತಿಯೂ ಇಂದೊದಗಿ ಬಂದಿದೆ.
ದೈನಂದಿನ ಜನಜೀವನದ ಕಾರ್ಯಚಟುವಟಿಕೆಗಳಲ್ಲಿ ನೀರಗೆ ಪ್ರಮುಖ ಸ್ಥಾನವಿದೆ. ನೀರಿಲ್ಲದೆ ಪ್ರಾಣಿ, ಪಕ್ಷಿ ಜೀವಸಂಕುಲಗಳು ಬದುಕಲು ಸಾಧ್ಯವೇ ಇಲ್ಲ. ಆದರೆ ಇಂದು ಈ ಪ್ರಾಮುಖ್ಯವಾದ ನೀರಿಗೆ ತೊಂದರೆಯೊದಗುವು ಅಪಾಯಕಾರಿ ಸ್ಥಿತಿ ಬಂದೊದಗಿದೆ.
ಮಾನವನ ಅತಿಬುದ್ದಿವಂತಿಕೆಯಿಂದ ಪರಿಸರದಲ್ಲಿ ಅಸಮತೋಲನವುಂಟಾಗಿದೆ. ಇದು ನೇರವಾಗಿ ನೀರಿನ ಮೇಲೂ ಪರಿಣಾಮ ಬೀರತೊಡಗಿದೆ. ಇಂದು ನಿರಂತರ ಪರಿಸರ ಮಾಲಿನ್ಯ, ಪರಿಸರ ಹಾನಿ ನಡೆಯುತ್ತಿದೆ. ಬೃಹದಾಕಾರದ ಕಟ್ಟಡಗಳ ನಿಮರ್ಾಣ, ಉದ್ಯಮಗಳ ಸ್ಥಾಪನೆಗಾಗಿ ಹಸಿರ ಕಾಡಿಗೆ ಕೊಡಲಿಯೇಟು ಬೀಳಲಾರಂಭಿಸಿದೆ. ಇದರಿಂದಾಗಿ ಸರಿಯಾದ ಸಂದರ್ಭದಲ್ಲಿ ಮಳೆಯಿಲ್ಲ, ಮಳೆಯಿಲ್ಲದೆ ಬೆಳೆಯಿಲ್ಲ, ಬೆಳೆಯಿಲ್ಲದೆ ಆಹಾರ ಧಾನ್ಯಗಳಿಲ್ಲ ಎಂಬಂತ ಸ್ಥಿತಿ ಬಂದೊದಗಿದೆ. ಕಾಲ ಕಾಲಕ್ಕೆ ಮಳೆಯಾಗದೆ ಕೃಷಿಕರು ತೊಂದರೆಯನ್ನನುಭವಿಸುವಂತಾಗಿದೆ.
ಕಟ್ಟಡ ಕಾಮಗಾರಿ, ಇತರೆ ಕಾಮಗಾರಿಗಾಗಿ ನೀರಿನ ಅತಿಯಾದ ಬಳಕೆಯಿಂದಾಗುತ್ತಿದೆ. ನೀರನ್ನು ಹಿತ ಮಿತವಾಗಿ ಬಳಸಬೇಕು. ಜಲ ಮಾಲಿನ್ಯವನ್ನು ತಡೆಗಟ್ಟಬೇಕು. ಭೂಮಿಯಲ್ಲಿ ನೀರಿಂಗುವಂತೆ ಮಾಡಿ ಜಲ ಸಂರಕ್ಷಣೆಗೆ ನಾವು ಸಿದ್ಧರಾಗಬೇಕು. ಅಂತರ್ಜಲದ ಮಟ್ಟ ಏರಿಸುವಂತೆ ನಾವು ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕಾಗಿದೆ. ಕಾಯರ್ೋನ್ಮುಖರಾಗಬೇಕಾಗಿದೆ.

ಇಲ್ಲ ...ಇದು ಗೋಧಿಯ ರೊಟ್ಟಿ!

🔹🔹🔹🔹🔹🔹🔹🔹🔹
ಇಲ್ಲ ...ಇದು ಗೋಧಿಯ ರೊಟ್ಟಿ!


ಈ ವಿಶಾಲವಾದ ಬ್ರಹ್ಮಾಂಡದಲ್ಲಿ ಅನೇಕ ದೇಶಗಳಿವೆ. ಅನೇಕ ತರದ ಜನರಿದ್ದಾರೆ. ಭಿನ್ನ ಭಿನ್ನ ಸ್ವಭಾವದವರಿದ್ದಾರೆ. ಬಹುಭಾಷೆಗಳಿವೆ, ಅನೇಕ ತರದ ಉಡುಗೆ-ತೊಡುವವರೂ, ಅನೇಕ ಕಸುಬುಗಳನ್ನು ಮಾಡುವವರೂ ಇದ್ದಾರೆ. ಅನೇಕ ತರದ ಆಹಾರ-ವಿಹಾರ, ಆಚಾರ-ವಿಚಾರ, ಅಭ್ಯಾಸ-ಚಾಳಿಗಳ ಜನರಿರುತ್ತಾರೆ. ಇವರಲ್ಲಿ ಕೆಲವರು ಉತ್ತಮರು, ಮತ್ತು ಕೆಲವರು ಅಧಮರು ಎಂಬ ಭಾವನೆ ಕೆಲವರಲ್ಲಿದೆ. ಆದರೆ ಎಲ್ಲರೂ ಆ ಮಹಾಪಿತನಾದ ಭಗವಂತನ ಸೃಷ್ಟಿಯಾದ ಭೂಮಾತೆಯ ಪುತ್ರರಾದ್ದರಿಂದ ಭೇದ ಭಾವ ಸಲ್ಲದು ಎಂಬ ಸಂದೇಶ ನೀಡಿದ ಮಹರ್ಷಿ ದಯಾನಂದ ಸರಸ್ವತಿಯವರ ಪ್ರಸಂಗ ಅತ್ಯಂತ ಹೃದಯಸ್ಪರ್ಶಿಯಾಗಿದೆ.

ಆರ್ಯ ಸಮಾಜದ ಸ್ಥಾಪಕರಾದ ಸ್ವಾಮಿ ದಯಾನಂದರ ತತ್ವಾದರ್ಶಗಳಿಂದ ಪ್ರೇರಣೆ ಪಡೆದ ಅನುಯಾಯಿಗಳ ಸಂಖ್ಯೆ ಅಪಾರವಾಗಿತ್ತು. ಅವರ ಸತ್ಯ, ಸರಳತೆ, ಪರಿಶುದ್ಧತೆ, ಉನ್ನತಾದರ್ಶಗಳಿಗೆ ಮನಸೋತವರೆಲ್ಲ ಅನುಯಾಯಿಗಳಾಗಿ ಬಿಡುತ್ತಿದ್ದರು.

ಆರ್ಯ ಸಮಾಜದವರೆಲ್ಲರೂ ಒಂದು ಕುಟುಂಬವಿದ್ದಂತೆ. ಅಲ್ಲಿ ಶ್ರೀಮಂತರು-ಬಡವರು, ಮೇಲು-ಕೀಳು, ಸ್ಪೃಶ್ಯರು-ಅಸ್ಪೃಶ್ಯರು ಎಂಬ ಭೇದಭಾವಗಳಿಗೆ ಅವಕಾಶವಿಲ್ಲ ಎಂದು ಸ್ವಾಮಿ ದಯಾನಂದರು ಹೇಳಿದರೂ, ಅವರ ಅನುಯಾಯಿಗಳ ಪೈಕಿ ಉಚ್ಛ ಶ್ರೀಮಂತ ವರ್ಗ, ಉಚ್ಛ ವರ್ಣ-ಜಾತಿ-ಧರ್ಮಗಳಿಗೆ ಸೇರಿದ ಕೆಲ ಮಂದಿಗೆ ಈ ಸಮಾನತೆಯ ಆದರ್ಶ ಇಷ್ಟವಾಗುತ್ತಿರಲಿಲ್ಲ. ಆದರೆ ಸ್ವಾಮಿ ದಯಾನಂದರು ಯಾರನ್ನೂ ಲೆಕ್ಕಿಸದೆ, 'ಮೇಲು-ಕೀಳು' ಎಂಬ ಭೇದ-ಭಾವವನ್ನು ಮನ್ನಿಸದೆ ಎಲ್ಲರ ಮನೆ-ಮಠಗಳಿಗೂ, ಸಭೆ-ಸಮಾರಂಭಗಳಲ್ಲೂ ಪಾಲ್ಗೊಳ್ಳುತ್ತಿದ್ದರು.


ಒಮ್ಮೆ ಅವರನ್ನು ಚಪ್ಪಲಿ ಹೊಲಿಯುವ ವೃತ್ತಿಯ ಚಮ್ಮಾರನು ತನ್ನ ಮನೆಯ ಮಧ್ಯಾಹ್ನದ ಭೋಜನಕ್ಕೆ ಆಮಂತ್ರಿಸಿದಾಗ ಅವರು ಒಪ್ಪಿಕೊಂಡರು. ನಿಶ್ಚಿತ ವೇಳೆಯಲ್ಲಿ ಸ್ವಾಮೀಜಿಯವರು ಆ ಚಮ್ಮಾರನ ಮನೆಗೆ ಬಂದಾಗ ಅವನಿಗೆ ಬಹಳಷ್ಟು ಸಂತೋಷವಾಯಿತು. ಚಮ್ಮಾರನ ಮನೆಯಲ್ಲಿ ಅವರು ಊಟ ಮಾಡುತ್ತಿರುವಾಗಲೇ ಆ ಸುದ್ದಿ ಕೇಳಿ ಉಚ್ಛ ಜಾತಿಯ ಶ್ರೀಮಂತ ಅನುಯಾಯಿಗಳು ಬಂದು ಗರ್ಜಿಸುತ್ತಾ ಪ್ರಶ್ನಿಸಿದರು-''ಇದೇನು ಸ್ವಾಮೀಜಿ, ನೀವು ಚಮ್ಮಾರನ ರೊಟ್ಟಿ ತಿನ್ನುತ್ತಿದ್ದೀರಾ?,''

ಆಗ ಮುಗುಳುನಗುತ್ತಾ ಸ್ವಾಮಿಜಿ ಉತ್ತರಿಸಿದರು-''ಇಲ್ಲ, ಇದು ಗೋಧಿಯ ರೊಟ್ಟಿ!,''ಎಂದರು. ಮತ್ತೆ ಸಮಾಧಾನದಿಂದ ನುಡಿದರು-''ನಾನು ಎಲ್ಲ ಮನುಷ್ಯರನ್ನೂ ಏಕ ದೃಷ್ಟಿಯಿಂದ ಕಾಣುತ್ತೇನೆ. ಭೇದ ಭಾವಕ್ಕೆ ನನ್ನಲ್ಲಿ ಬೆಲೆ ಇಲ್ಲ. ನಾವೆಲ್ಲ ಒಂದೇ ಪರಮಪಿತನ ಮಕ್ಕಳಲ್ಲವೇ?,''ಎಂದಾಗ, ತಲೆಬಾಗಿದ ಆ ಜನರೆಲ್ಲರೂ ಅಲ್ಲೇ ರೊಟ್ಟಿ ತಿಂದು ಸಂತೃಪ್ತಿ ಪಡೆದರು.

ಸಂಕುಚಿತ ಬುದ್ಧಿಯನ್ನು ತೊರೆದು, ಆ ಜಾತಿ, ಈ ಜಾತಿ, ಆ ದೇಶ-ಈ ದೇಶ, ಮೇಲು-ಕೀಳು ಮೊದಲಾದ ಭೇದ-ಭಾವಗಳನ್ನು ತ್ಯಜಿಸಿ, ಎಲ್ಲರನ್ನೂ 'ಇವರು ತಮ್ಮವರೇ' ಎಂಬ ದೃಷ್ಟಿಯಿಂದ ನೋಡಲು ಕಲಿತಾಗ, 'ಇಡೀ ಪ್ರಪಂಚವೇ ನಮ್ಮ ಮನೆ. ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು' ಎಂಬ ಭಾವನೆಯುಂಟಾದಾಗ ಭಗವಂತನು ನಮ್ಮ ಮೇಲೆ ಅನುಗ್ರಹ ತೋರುವುದರಲ್ಲಿ ಸಂದೇಹವಿಲ್ಲ.

-ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ
🔸🔸🔸🔸🔸🔸🔸🔸🔸

Sharing a beautiful explanation about Lord Shiva’s vehicle Nandi and meditation.

Sharing a beautiful explanation about Lord Shiva’s vehicle Nandi and meditation.



 Generally, we see Nandi sitting directly opposite the main door of the temple where Shiva's idol or Shivalingam is located.


 He is not waiting for him to come out and say something. He is in waiting.


 Nandi is a symbolism of eternal waiting, because waiting is considered the greatest virtue in Indian culture. One who knows how to simply sit and wait is naturally meditative. He is not expecting anything. He will wait forever. Nandi is Shiva’s closest accomplice because he is the essence of receptivity.



Before you go into a temple, you must have the quality of Nandi - to simply sit.


So, just by sitting here, he is telling you, “When you go in, don’t do fanciful things.Don’t ask for this or that. Just go and sit like me."


The fundamental difference between Prayer & Meditation is that - Prayer means you are trying to talk to God. Meditation means you are willing to listen to God.


You are willing to just listen to existence, to the ultimate nature of creation. You have nothing to say, you simply listen. That is the quality of Nandi – he just sits, alert, not sleepy. He is not sitting passively. He is very active, full of alertness, full of life, but just being – that is Meditation!

🌊🌊🌊🌊🌊🌊🌊🌊🌊

ಶ್ರೀವಾಣಿ

ಶ್ರೀವಾಣಿ


ಭವ್ಯ ಸಾಗರ.  ಅಲ್ಲೊಂದು ಮೀನು ಕುಟುಂಬ.  ಅದರಲ್ಲಿ ಹತ್ತಾರು ಮೀನುಗಳು.  ಒಂದು ಮರಿ ಮೀನು.  ಒಮ್ಮೆ ಸಾಗರದಲ್ಲಿ ಅದು ತೇಲಾಡುತ್ತಾ ದೂರ ಹರಿದು ಹೋಯಿತು.  ತಿರುಗಿ ಬರುವುದರಲ್ಲಿ ಅದರ ಕುಟುಂಬದವರು ಯಾರೂ ಇರಲಿಲ್ಲ.  ಅವರೆಲ್ಲರೂ ಮೀನುಗಾರನ ಬಲೆಗೆ ಬಿದ್ದುಹೋಗಿದ್ದರು.  ತಾಯಿ –ತಂದೆ, ಬಂಧು-ಬಳಗ ಎಲ್ಲವನ್ನೂ ಕಳೆದುಕೊಂಡು ಮರಿಮೀನು ದುಃಖಿಸತೊಡಗಿತು.  ‘ನನಗೆ ಯಾರೂ ಇಲ್ಲ.  ನಾನು ಅನಾಥನಾದೆ’ ಎಂದು ಅದು ಗೋಳಿಡತೊಡಗಿತು.


ಅಷ್ಟರಲ್ಲಿ ‘ನಾನಿದ್ದೇನೆ,ಚಿಂತಿಸಬೇಡ’ ಎಂಬ ಧ್ವನಿ ಹತ್ತಿರದಲ್ಲೇ ಕೇಳಿಬಂತು.


ಮರಿಮೀನು ಸಂತಸದಿಂದ‘ಯಾರವರು?’ ಎಂದು ಪ್ರಶ್ನಿಸಿತು.


‘ನಾನು ಸಾಗರ!’ ಎಂದಿತು ಆ ಧ್ವನಿ.


‘ನೀನು ಎಲ್ಲಿರುವೆ?’ ಎಂದು ಮತ್ತೆ ಕೇಳಿತು ಮೀನು.


‘ನೀನು ಇರುವಲ್ಲಿಯೇ ನಾನು ಇರುವೆ.  ನೀನು ಜನಿಸಿದ್ದು,ಬಾಳಿ ಬೆಳೆಯುತ್ತಿರುವುದು ನನ್ನಲ್ಲಿಯೇ!  ನಾನು ಸದಾ ನಿನ್ನನ್ನು ರಕ್ಷಿಸುತ್ತೇನೆ,ಚಿಂತಿಸದಿರು!’ ಎಂದಿತು ಸಾಗರ.


ಅದನ್ನು ಕೇಳಿದ ಮರಿಮೀನು ಮತ್ತೆ ಉತ್ಸಾಹದಿಂದ ಬದುಕಲು ಅಣಿಯಾಯಿತು.


ದಯಾಸಾಗರನಾದ ದೇವನು ಸಕಲ ಜೀವರಾಶಿಯನ್ನೂ ಪೊರೆಯುವನು.  ಅವನೇ ನಮ್ಮೆಲ್ಲರ ಶಾಶ್ವತ ಮಿತ್ರನು!!



(ಶ್ರೀ ಸಿದ್ದೇಶ್ವರ ಸ್ವಾಮಿ,ಜ್ಞಾನಯೋಗಾಶ್ರಮ,ವಿಜಾಪುರ)

ಸೋಲು - ಗೆಲುವು

ಸೋಲು - ಗೆಲುವು


ಸಿಹಿಯು ರುಚಿಸಲು ನಾಲಿಗೆಯು ಕಹಿಯ ಸವಿದಿರಬೇಕು
ಸುಖದ ಅರಿವಾಗಲು ಜೀವನದ ಕಷ್ಟಗಳ ತಿಳಿದಿರಬೇಕು
ಬೆಳಕನು ಅರ್ಥೈಸಲು ಕತ್ತಲ ರಾತ್ರಿಯು ಕಳೆದಿರಬೇಕು
ಗೆಲುವನು ಸಂಭ್ರಮಿಸಲು ಸೋಲು ಹತ್ತಿರ ಸುಳಿದಿರಬೇಕು.

ಈಗಿನ ಸೋಲು ಆಗಲಿ ಮುಂದಿನ ಗೆಲುವಿಗೆ ಅಡಿಪಾಯ,
ಕುಗ್ಗದೆ ಮುನ್ನುಗ್ಗು, ಅರ್ಥಪೂರ್ಣ ಆಗ ದಕ್ಕುವ ಜಯ.


 Yesh
ಸೋಲು-ಗೆಲುವು

ಸೋಲು-ಗೆಲುವು
ಗೆದ್ದವರೆಲ್ಲ ಗೆಲ್ಲುವುದಿಲ್ಲ
ಸೋತವರೆಲ್ಲ ಸೋಲುವುದಿಲ್ಲ

ಗೆದ್ದು ಸೋತವರೆಷ್ಟೋ, ಸೋತು ಗೆದ್ದವರೂ ಅಷ್ಟೆ
ಬಿಂಬ ಪ್ರತಿಬಿಂಬಗಳಂತೆ ತಿರುಗುಮುರುಗು ಅಷ್ಟೆ
ಸೋಲಿನಲ್ಲೂ ಗೆಲುವಿದೆ, ಅದರಂತರವಿಷ್ಟೆ
ಗೆದ್ದು ಸೋತವರಿಗೆ ಬದುಕು ಸಿಗದು, ತಿಳಿಯಿಷ್ಟೆ
ಸೋತು ಗೆದ್ದವರ ಕಾಲಿಗೆ ಬದುಕು ಬೀಳುವುದಷ್ಟೆ

ಗೆಲುವಿಗೆ ಸೋಲಿನ ಭೀತಿ, ಸೋಲಿಗೆ ಗೆಲುವಿನ ಪ್ರೀತಿ
ಸೋಲುಗಳೇ ಸಂಶೋಧನೆಗೆ ಮೂಲ ನೀತಿ
ಗೆದ್ದ ಸುಖ ಕ್ಷಣಿಕವಾದರೆ, ಸೋಲಿನ ಸುಖಕೆ ಹತ್ತು ರೀತಿ
ಅದು ಬದುಕಿನುದ್ದಕ್ಕೂ ಹೆಣೆದುಕೊಳ್ಳುವ ಬಾಳಗೆಣತಿ

ಗೆದ್ದ ಸಂಬಂಧಗಳಿಗಿಂತ ಸೋತ ಸಂಬಂಧಗಳಿಗೆ ಆಯು ಹೆಚ್ಚು
ಗೆಲುವು ತಲೆಗೇರಬಾರದು, ಸೋಲು ಎದೆ ಸೇರಬಾರದು
ಸೋಲಿಗೆ ನೆಲವೆ ಬೇರಾದರೆ, ಗೆಲುವಿನ ನೆಲೆ ಬೇರೆ
ಅದಕೆ,ಸೋತವರು ಮರುಕಗೊಳ್ಳಬೇಕಿಲ್ಲ
ಸೋತವರಷ್ಟು ಸುಖಿಗಳು ಬೇರಿಲ್ಲ
ಸೋತು ಗೆದ್ದವರು ಸುಖಿಗಳು
ಅದಕೆ, ಸೋತು ಗೆಲ್ಲಬೇಕು!

ಗೆಲುವು ನಿಮ್ಮನ್ನು ಇಡೀ ಜಗತ್ತಿಗೆ ಪರಿಚಯಿಸುತ್ತದೆ. ಅದೇ ಸೋಲಿದೆಯಲ್ಲ, ಅದು ನಿಮಗೆ ಜಗತ್ತನ್ನು ಪರಿಚಯಿಸುತ್ತದೆ. ಸೋಲು ಕಲಿಸುವ ಪಾಠವನ್ನು ಗೆಲುವು ಹೇಳಿಕೊಡುವುದಿಲ್ಲ. ನಿಮ್ಮ ಸೋಲು ನಿಮಗೆ ಗೆಲುವಾಗಿ ಪರಿಣಮಿಸಬೇಕು.

Saturday, 20 August 2016

ಅರ್ಥ ಮಾಡಿ ಕೊಳ್ಳಬೇಕಾದ ವಿಚಾರ ವಿದು

🍀🌺🍀🌺🍀🌺🍀🌺🍀

ಅರ್ಥ ಮಾಡಿ ಕೊಳ್ಳಬೇಕಾದ ವಿಚಾರ ವಿದು


ನೀವು ನಿಮ್ಮ ದೇಹವೇ ಆಗಿದ್ದೀರಿ. ಈಗ ನೀವು ಕೇವಲ ನಿಮ್ಮ ದೇಹವೇ ಆಗಿದ್ದೀರಿ , ಮತ್ತೇನೂ ಅಲ್ಲ.ಆತ್ಮ ಇತ್ಯಾದಿ ಗಳ ಬಗ್ಗೆ ನಿಮಗೆ ಕಲ್ಪನೆ ಇರಬಹುದು, ಆದರೆ ಇವು ಕಲ್ಪನೆ ಗಳು ಮಾತ್ರ. ಈಗ ನೀವು ಇರುವಂತೆ ಕೇವಲ ಶರೀರ ಮಾತ್ರ ವಾಗಿದ್ದೀರಿ ಈ ಕಲ್ಪನೆ ಯು ಸಹ ಭಯ ಆಧಾರಿತವಾದದ್ದು.

ಆತ್ಮ ಎಂಬುದು ಇದೆ ಯೋ ಇಲ್ಲವೋ ನಿಮಗೆ ತಿಳಿಯದು . ಶಾಶತ್ವತೆಯ ಸಾಕ್ಷಾತ್ಕಾರ ವಾಗುವಂತಹ ಅಂತರಾತ್ಮ ದ ಆಳಕ್ಕೆ ನೀವಿನ್ನೂ ಭೇದಿಸಿಲ್ಲ. ನೀವು ಕೇವಲ ಅದರ ಬಗ್ಗೆ ಕೇಳಿದ್ದೀರಿ ಅಷ್ಟೇ ಹಾಗೂ ಸಾವಿನ ಭಯದಿಂದಾಗಿ ನೀವು ಅದಕ್ಕೆ ಅಂಟಿಕೊಂಡು ಇದ್ದೀರಿ ಅಷ್ಟೇ.  ಸಾವು ನಿಶ್ಚಿತ ವಾದದ್ದು ಎಂದು ನಿಮಗೆ ತಿಳಿದಿದೆ ಹಾಗೂ ಸಾವು ಇಲ್ಲದ್ದು ಏನೋ ಒಂದು ಇರಲೆಂದು ನೀವು ಬಯಸುತ್ತಾ ನಂಬುತ್ತಾ ಇರುತ್ತೀರಿ  ಇದೊಂದು ಆಶಯ ಪೂರೈಕೆಯಾಗಿದೆ

ಆತ್ಮ ಇಲ್ಲ ಅಂತ ನಾನು ಹೇಳುತ್ತಿಲ್ಲ.  ಸಾವು ಇಲ್ಲದ್ದು ಏನೂ ಇಲ್ಲ ವೆಂದು ನಾನು ಹೇಳುತ್ತಿಲ್ಲ ಆದರೆ ನೀವು ಅದನ್ನು ನಂಬಿಕೊಂಡಿರುವ ಶರೀರ ಮಾತ್ರ ವಾಗಿದ್ದೀರಿ .ಈ ಕಾರಣದಿಂದಾಗಿ ನೀವು ನಿಮಗೆ ವಯಸ್ಸಾದಂತೆಲ್ಲಾ ಹೆಚ್ಚು ನಿಶ್ಶಕ್ತರಾದಂತೆಲ್ಲಾ ಅಮರ ಆತ್ಮದ ಬಗ್ಗೆ ಹೆಚ್ಚು  ನಂಬುತ್ತಾರೆ ಹೋಗುತ್ತೀರಿ.  ಅದರೆ ಇದರಿಂದ ಏನೂ ಪ್ರಯೋಜನವಿಲ್ಲ .

ಎಲ್ಲ. ನಂಬಿಕೆ ಗಳೂ ಸಹ ಭಯ ಆಧಾರಿತವಾಗಿದೆ ಆದರೆ ಯಾರು ಹೀಗೆ ನಂಬುತ್ತಾರೋ ವಾಸ್ತವ ದಲ್ಲಿ ಆತ ತನ್ನನ್ನೇ ಮೋಸಗೊಳಿಸಿಕೊಳ್ಳುತ್ತಿರುತ್ತಾನೆ

ಸಾವಿಲ್ಲದ್ದು ಇದೆ ಆದರೆ ಅದನ್ನು ನೀವು ಅರಿತುಕೊಳ್ಳಬೇಕು . ಬರೀ ನಂಬುವುದರಿಂದ ಕೆಲಸ ಆಗದು ಇದಕ್ಕೆ ಧ್ಯಾನ ವೊಂದರಿಂದಲೇ ಸಾಧ್ಯ.


🌱🌱🌱🌱🌱🌱🌱🌱🌱

ಯಾರೇ ಕೂಗಾಡಲೀ,ಊರೇ ಹೋರಾಡಲೀ !!!"

" ಯಾರೇ ಕೂಗಾಡಲೀ,ಊರೇ ಹೋರಾಡಲೀ !!!"

ಬಹಳ ಹಿಂದೆ ಟಿಬೆಟ್ಟಿನ ಬೌದ್ಧ ಆಶ್ರಮ ಒಂದರಲ್ಲಿ ಬಹಳಷ್ಟು ಬೌದ್ಧ ಬಿಕ್ಷುಗಳು ಮೌನವಾಗಿ ಧ್ಯಾನ ಮಾಡುತ್ತಾ ಅಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದ್ದರಂತೆ.ಆಗಾಗ ಅಲ್ಲಿಗೆ ಎಲ್ಲೂ ವಾಸಿಯಾಗದಂತಹ ಮಾನಸಿಕ ಅಸ್ವಸ್ಥರನ್ನು ತಂದುಬಿಡುತ್ತಿದ್ದರಂತೆ.ಅಲ್ಲಿದ್ದ ಸನ್ಯಾಸಿಗಳು ತಮ್ಮ ಪಾಡಿಗೆತಾವು ತಮ್ಮ ಕೆಲಸಮಾಡುತ್ತಾ,ಧ್ಯಾನ ಮಾಡುತ್ತಾ,ಮೌನದಿಂದ ಇರುತ್ತಿದ್ದರಂತೆ.ಮಾನಸಿಕ ಅಸ್ವಸ್ಥರನ್ನು ,ತಮ್ಮ ಸಾಧನೆಯನ್ನೂ,ಮನೋನಿಗ್ರಹವನ್ನೂ, ಪರೀಕ್ಷೆಮಾಡಲು ಬಂದಿರುವ ಗುರುಗಳು ಎಂದುಭಾವಿಸುತ್ತಿದ್ದರಂತೆ.ಅವರು ಎಷ್ಟೇಕೂಗಾಡಿದರೂ,ಗಲಾಟೆ ಮಾಡಿದರೂ,ಯಾರೂಅವರ ಕಡೆ ಗಮನವನ್ನೇ ಕೊಡದೆ,ಮೌನವಾಗಿ ಧ್ಯಾನಮಾಡುತ್ತಾ ಇದ್ದು ಬಿಡುತ್ತಿದ್ದರಂತೆ!ಅವರನ್ನು ಯಾರೂವಿಚಾರಿಸಲೂ ಹೋಗುತ್ತಿರಲಿಲ್ಲವಂತೆ.ಯಾವುದೇಕಾರಣಕ್ಕೂ ಅವರನ್ನು ಅಲ್ಲಿಂದ ತಪ್ಪಿಸಿಕೊಳ್ಳಲುಬಿಡುತ್ತಿರಲಿಲ್ಲವಂತೆ.ಮಾನಸಿಕ ಅಸ್ವಸ್ಥರು ಕೂಗಿ ,ಗಲಾಟೆ ಮಾಡಿ,ಸುಸ್ತಾಗಿ ಕೆಲವೇ ದಿನಗಳಲ್ಲಿ ತಣ್ಣಗಾಗಿ,ಅಲ್ಲಿರುವ 'ಬುದ್ಧಿಸ್ಟ್ ಮಾಂಕ್' ಗಳಂತೆ ತಾವೂ ತಮ್ಮ ಪಾಡಿಗೆ ಮೌನವಾಗಿ ಧ್ಯಾನ ಮಾಡುತ್ತಾ ಕುಳಿತು ಬಿಡುತ್ತಿದ್ದರಂತೆ!ಅಲ್ಲಿದ್ದ ಕೆಲವೇ ತಿಂಗಳುಗಳಲ್ಲಿ ಸಂಪೂರ್ಣ ಗುಣಮುಖರಾಗಿ ಹೊರಬರುತ್ತಿದ್ದರಂತೆ.ಮನಸ್ಸು ತಣ್ಣಗಾದಾಗ ಮನಸ್ಸಿನ ಹೊಯ್ದಾಟ,ತಳಮಳ,ಮಾನಸಿಕ ಸಮಸ್ಯೆಗಳು ಇಲ್ಲವಾಗುತ್ತವೆ!

ಧನುರಾಸನದಿಂದ ಬೆನ್ನು ನೋವು ನಿವಾರಣೆ

ಧನುರಾಸನದಿಂದ ಬೆನ್ನು ನೋವು ನಿವಾರಣೆ


ಧನು ಎಂದರೆ ಬಿಲ್ಲು. ಈ ಆಸನದ ಅಂತಿಮ ಸ್ಥಿತಿ ಬಿಲ್ಲಿನಾಕಾರವನ್ನು ಹೋಲುತ್ತದೆ. ಬೆನ್ನು ನೋವು ನಿವಾರಣೆಗೆ ಇದು ತುಂಬಾ ಉಪಯುಕ್ತ ಆಸನ.

ವಿಧಾನ:

* ಹೊಟ್ಟೆಯ ಮೇಲೆ ಮಲಗಿ ಕೈಗಳನ್ನು ತೊಡೆಗಳ ಅಕ್ಕ ಪಕ್ಕದಲ್ಲಿರಿಸಿ.

* ಉಸಿರು ಬಿಡುತ್ತಾ ಎರಡೂ ಕಾಲುಗಳನ್ನು ಹಿಂದಕ್ಕೆ ಮಡಚಿ.

* ಕೈಗಳಿಂದ ಕಾಲಿನ ಮಣಿಗಂಟುಗಳನ್ನು ಹಿಡಿದುಕೊಳ್ಳಿ.

* ಉಸಿರು ತೆಗೆದುಕೊಳ್ಳುತ್ತಾ ಬೆನ್ನು ಬಗ್ಗಿಸಿ ತಲೆ ಮತ್ತು ಕಾಲುಗಳನ್ನು ಮೇಲೆತ್ತಿ. 5 ಬಾರಿ ಉಸಿರಾಡಿ.

* ಉಸಿರು ಬಿಡುತ್ತಾ ತಲೆ ನೆಲದಲ್ಲಿರಿಸಿ.

* ಉಸಿರು ತೆಗೆದುಕೊಳ್ಳುತ್ತಾ ಕೈಗಳನ್ನು ವಿಶ್ರಾಂತ ಸ್ಥಿತಿಗೆ ಇಳಿಸಿ ಕಾಲು ಚಾಚಿ.

ಉಪಯೋಗಗಳು:

* ಸಂಧಿನೋವು ಮತ್ತು ಕುತ್ತಿಗೆ ನೋವನ್ನು ಕಡಿಮೆ ಮಾಡುತ್ತದೆ.

* ಮಂಡಿನೋವು ಮತ್ತು ಭುಜದ ನೋವಿಗೆ ಉಪಯುಕ್ತ.

* ಉಸಿರಾಟ ಕ್ರಿಯೆ ಚುರುಕು ಮಾಡುತ್ತದೆ.

* ಬೊಜ್ಜು ನಿವಾರಣೆ ಮಾಡುತ್ತದೆ.

ಎಚ್ಚರಿಕೆ:   ಹರ್ನಿಯಾ ಮತ್ತು ತೀವ್ರ ಮಂಡಿನೋವು ಇರುವವರು ಈ ಆಸನ ಮಾಡಬಾರದು.

ಒಳ-ಹೊರಗಿನ ಹುಡುಕಾಟ

♻️ಒಳ-ಹೊರಗಿನ ಹುಡುಕಾಟ♻️



ಸುಖವೆಂದು ಪರಿಚಿತವಾಗುವುದು ನಿಧಾನವಾಗಿ ದುಃಖವಾಗಿ ಪರಿಣಮಿಸುವುದು. ಯಾವುದನ್ನು ನಾವು ಸುಖವೆಂದು ಭಾವಿಸಿ ಅದನ್ನು ಹೊಂದಲು ಬಯಸುವೆವೋ ಅದನ್ನು ಹೊಂದಿದ ಕೆಲ ಸಮಯದಲ್ಲೇ ಅದು ಸುಖವೆಂದು ಭಾಸವಾಗುವುದಿಲ್ಲ. ಸ್ವಲ್ಪಕಾಲ ಕಳೆದ ನಂತರ ಅದೇ ದುಃಖವೆಂದು ಭಾಸವಾಗಲಾರಂಭಿಸುತ್ತದೆ. ತುಂಬಾ ಸುಖವನ್ನು ಹೊಂದಿದಾಗ ಅದರ ತೀವ್ರತೆಯಲ್ಲಿ ಮೃತ್ಯುವು ಸಂಭವಿಸುವುದು ಸಾಧ್ಯ ಎಂಬುದನ್ನು ಗಮನಿಸಿದ್ದೀರಾ? ನಿಶ್ಚಿತವಾಗಿಯೂ ಮೃತ್ಯು ಸುಖ ತರುವುದಿಲ್ಲ. ತೀವ್ರವಾದ ಸುಖದ ಆವೇಗದಿಂದಾಗಿಯೇ ವ್ಯಕ್ತಿಯ ಹೃದಯ ಬಡಿತ ನಿಂತು ಹೋಗುವುದನ್ನೂ ನೀವು ಕಂಡಿರುವಿರಾ? ಸುಖವೂ ಕೂಡ ಅಂತರಾಳದಲ್ಲಿ ಅಶಾಂತಿಯೇ ಆಗಿರುವುದು. ಅದು ಹೆಚ್ಚಾಗುವುದರಿಂದ ಅಂತರಾಳದಲ್ಲಿ ಅಶಾಂತಿಯೇ ಆಗಿರುವುದು. ಅದು ಹೆಚ್ಚಾಗುವುದರಿಂದ ನಮ್ಮ ಪ್ರಾಣಕ್ಕೆ ಕಂಟಕವಾಗಬಹುದು. ಕೆಲವೊಂದು ವಸ್ತುಗಳು ಸ್ವಲ್ಪವೇ ಸುಖವನ್ನು ಕೊಟ್ಟು ಒಂದು ಹಂತದ ನಂತರ ಅವೇ ನೋವಾಗಿ ಕಾಡುತ್ತವೆ.

ಯಾವ ಊಟ ಪ್ರಿಯವಾಗಿರುವುದು ಅದು ಅತಿಯಾದರೆ ಹಿಂಸೆಯಾಗಿ ಭಾಸವಾಗುತ್ತದೆ. ಇನ್ನೂ ಹೆಚ್ಚಾದರೆ ದುಃಖವಾಗಿ ನಂತರ ಅದೇ ಮೃತ್ಯುವಾಗಿ ಪರಿಣಮಿಸುತ್ತದೆ. ಹೀಗೆ ಯಾವುದು ಮೊದಲು ಪ್ರಿಯವಾಗಿರುವುದೋ ಅಂತ್ಯದಲ್ಲಿ ನೋವಿಗೆ ಈಡು ಮಾಡುತ್ತದೆ. ನೋವು ಮತ್ತು ನಲಿವು ನಾವು ಭಾವಿಸಿರುವಂತೆ ಎರಡು ಬೇರೆ ಬೇರೆ ವಸ್ತುಗಳಲ್ಲ. ಅವು ಒಂದು ವಸ್ತುವಿನ ಭಿನ್ನ ಸ್ಥಿತಿಗಳಾಗಿವೆ. ಯಾವುದು ನಮಗೆ ಆರಂಭದಲ್ಲಿ ದುಃಖವೆನಿಸುವುದೋ ಕೆಲ ಕಾಲದ ಪರಿಚಯದ ನಂತರ ಅದೇ ಸುಖವಾಗಿ ಪರಿಣಮಿಸುವುದು. ನಾವೆಲ್ಲರೂ ಆನಂದವನ್ನು ಹುಡುಕುತ್ತಿದ್ದೇವೆ ಆದರೆ ಆ ಆನಂದ ಎಲ್ಲಿ ಕಳೆದು ಹೋಗಿದೆ ಎಂಬುದನ್ನು ಮಾತ್ರ ಕೇಳುತ್ತಿಲ್ಲ. ಈ ಜಗತ್ತಿನಲ್ಲಿ ನಾವಾಗಲಿ ಬೇರೆಯವರಾಗಲಿ, ಬೇರೆ ಏನನ್ನೂ ಹುಡುಕುತ್ತಿಲ್ಲ. ಅವರೆಲ್ಲರೂ ಹುಡುಕುತ್ತಿರುವುದು ಆನಂದವನ್ನೇ. ಆದರೆ ಇದು ಎಲ್ಲಿ ಕಳೆದು ಹೋಗಿದೆ ಎಂದು ಮಾತ್ರ ಕೇಳುತ್ತಿಲ್ಲ. ನಿಶ್ಚಿತವಾಗಿಯೂ ನೀವು ಅದನ್ನು ಕಳೆದುಕೊಂಡಿಲ್ಲದಿದ್ದರೆ ಆಗ ಅದನ್ನು ಹುಡುಕುವ ಪ್ರಶ್ನೆಯೇ ಇರುತ್ತಿರಲಿಲ್ಲ. ಏಕೆಂದರೆ ಆಗ ಅದರ ಪರಿಚಯವೇ ಇರುತ್ತಿರಲಿಲ್ಲ.

ಏನನ್ನಾದರೂ ಹುಡುಕುತ್ತಿದ್ದೇವೆ ಎಂದರೆ ಅದನ್ನು ಕಳೆದುಕೊಂಡಿದ್ದೇವೆ ಎಂದರ್ಥ. ಏಕೆಂದರೆ ಏನನ್ನಾದರೂ ಕಳೆದುಕೊಳ್ಳದಿದ್ದರೆ ಅದನ್ನು ಅರಸುವ ಪ್ರಶ್ನೆಯೇ ಬರುವುದಿಲ್ಲ. ಯಾವುದರ ಪರಿಚಯ ಇಲ್ಲವೋ, ನೆನಪು ಇಲ್ಲವೋ ಅದನ್ನು ಹುಡುಕುವುದು ಸಾಧ್ಯವಿಲ್ಲ. ಮೊದಲು ಎಲ್ಲಿ ಕಳೆದು ಹೋಗಿದೆ ಎಂಬುದನ್ನು ಕೇಳಿ. ಬೇರೆಯವರ ಮನೆಯಲ್ಲಿ ಹುಡುಕುವ ಮೊದಲು ನಿಮ್ಮ ಮನೆಯಲ್ಲಿ ಹುಡುಕಿ. ಆದರೆ ನಾವು ತುಂಬ ವಿಚಿತ್ರ ಆಸಾಮಿಗಳು. ಕಳೆದುಕೊಂಡಿದ್ದನ್ನು ಮೊದಲು ಹೊರಗೆ ಹುಡುಕುತ್ತೇವೆ. ಆದರೆ ಅಲ್ಲಿ ಅನಂತಾನಂತ ಜನ್ಮಗಳಲ್ಲಿ ಹುಡುಕಿದರೂ ಈ ಜಗತ್ತು ಮುಗಿಯುವುದೇ ಇಲ್ಲ. ಆದ್ದರಿಂದ ಈ ವಿಶಾಲ ಜಗತ್ತಿನಲ್ಲಿ ಹುಡುಕುವ ಮುನ್ನ ಈ ನಮ್ಮ ಪುಟ್ಟ ಮನೆಯಲ್ಲೊಮ್ಮೆ ಹುಡುಕೋಣ. ಒಂದು ವೇಳೆ ಅಲ್ಲಿ ಸಿಗದೇ ಇದ್ದರೆ ಹೊರಗಡೆ ಹುಡುಕಲು ಹೋಗಬೇಕು. ಯಾರು ಮೊದಲು ತಮ್ಮ ಒಳಗೆ ಆನಂದವನ್ನು ಹುಡುಕುತ್ತಾರೋ ಅವರು ಇನ್ನೆಂದೂ ಹೊರಗೆ ಹುಡುಕಲು ಹೋಗುವುದಿಲ್ಲ.


ಆದರೆ ಹೊರಗಡೆ ಹುಡುಕುತ್ತಿರುವವರು ಇನ್ನೂ ಹುಡುಕುತ್ತಲೇ ಇದ್ದಾರೆ. ಒಳಗಡೆ ಅದ್ಭುತವಾದುದು ವಿರಾಜಮಾನವಾಗಿದೆ. ಅಲ್ಲಿ ನಮ್ಮದೇ ಆದ ಒಂದು ಸ್ವರೂಪವಿದೆ. ಅಲ್ಲಿ ನಿಮಗೆ ಎಲ್ಲ ವಿಷಯಗಳ ಬಗ್ಗೆ ಒಂದು ಮಿಂಚು ಹೊಳದೇ ತೀರುತ್ತದೆ.

* ಓಶೋ

♻️♻️♻️♻️♻️♻️♻️♻️♻️

ALWAYS RISE ABOVE ALL THE LAUGHTER AND CRITICISM. STAY STRONG.' "

✨✨✨✨✨✨✨✨✨

"ALWAYS RISE ABOVE ALL THE LAUGHTER AND CRITICISM. STAY STRONG.' "


One day a school teacher wrote on the board the following:
9×1=7
9×2=18
9×3=27
9×4=36
9×5=45
9×6=54
9×7=63
9×8=72
9×9=81
9×10=90
When she was done, she looked to the students and they were all laughing at her, because of the first equation which was wrong, and then the teacher said the following,
"I wrote that first one wrong on purpose, because I wanted you to learn something important. This was for you to know how the world out there will treat you. You can see that I wrote RIGHT 9 times, but none of you congratulated me for it; you all laughed and criticized me because of one wrong thing I did. So this is the lesson...:
'The world will never appreciate the good you do a million times, but will criticize the one wrong thing you do... But don't get discouraged, ALWAYS RISE ABOVE ALL THE LAUGHTER AND CRITICISM. STAY STRONG.' "

✨✨✨✨✨✨✨✨✨

ನುಡಿಮುತ್ತುಗಳು

🔹ನುಡಿಮುತ್ತುಗಳು🔹


ಸುಖ ಸ್ನೇಹಿತರನ್ನು ಕರೆ ತರುತ್ತದೆ; ಕಷ್ಟ ಅವರ ಅರ್ಹತೆಯನ್ನು ಪರೀಕ್ಷಿಸುತ್ತದೆ.-
               ಪಬ್ಲಿಯಸ್ ಸೈರಸ್



ಶಾಂತಿ ನಮ್ಮೊಳಗಿನಿಂದ ಬರುವಂತಹದ್ದು. ಅದನ್ನು ಹೊರಗಿನಿಂದ ನಿರೀಕ್ಷಿಸಬೇಡಿ.-
                   ಭಗವಾನ್ ಬುದ್ಧ



ಅಹಂಕಾರವಿಲ್ಲದ ಮನುಷ್ಯ ಯಾವ ಧರ್ಮಗ್ರಂಥವನ್ನೂ ಓದದೆ,  ಯಾವ ಮಂದಿರವನ್ನೂ ಪ್ರವೇಶಿಸದೆ ಮೋಕ್ಷ ಪಡೆಯಬಹುದು. -- ಸ್ವಾಮಿ ವಿವೇಕಾನಂದ



ಉಪದೇಶ ಮಾಡುವವನ ದೋಷ ತಕ್ಷಣ ನಮ್ಮನ್ನು ಆಕರ್ಷಿಸುತ್ತದೆ.-
                         ಲೂಥರ್



ಹಿಂಸೆ ಎಂದಿಗೂ ನಮ್ಮ ಗುರಿಯನ್ನು ಸಾಧಿಸಲಾರದು-ಗಾಂಧೀಜಿ



ಕೆಲಸವಿಲ್ಲದೆ ಕ್ಷಣ ಕಳೆದರೂ ಅದು ಕಳ್ಳತನ ಮಾಡಿದಂತೆ-      ಗಾಂಧೀಜಿ


ಭವಿಷ್ಯವನ್ನು ನಾವೇ ರೂಪಿಸಿಕೊಂಡರೂ, ಅದು ವಿಧಿ ಎಂದುಕೊಳ್ಳವುದು ಮೂಢತನ.
- ಬೆಂಜಮಿನ್ ಡಿಸ್ರೇಲಿ



ಜ್ಞಾನಿಗಳು ತಮ್ಮ ದೋಷವನ್ನು ಮೊದಲು ಕಂಡುಕೊಳ್ಳುತ್ತಾರೆ -ವಿವೇಕಾನಂದ



ಪ್ರಪಂಚದಲ್ಲಿ ಮರಣವಿಲ್ಲದ ವರ ಪಡೆದಿರುವ ವಸ್ತು `ಪುಸ್ತಕ.

~-ಗಯಟೆ



ನೀನು ಬೇರೆಯವರ ಯೋಗ್ಯತೆ ಅಳೆಯುತ್ತಿದ್ದಿಯಾದರೆ ನಿನಗೆ ಪ್ರೀತಿಸಲು ಸಮಯವೇ ಇರುವುದಿಲ್ಲ. -                ಮದರ್ ತೆರೇಸಾ



ಧರ್ಮದ ಇರುವಿಕೆಯಲ್ಲಿ ಮನುಷ್ಯ ಇಷ್ಟೊಂದು ದುಷ್ಟನಾಗಿರುವಾಗ, ಧರ್ಮವೇ ಇಲ್ಲದಿದ್ದರೆ ಅವನು ಏನಾಗಬಹುದಿತ್ತು? -ಬೆಂಜಮಿನ್ ಫ್ರಾಂಕ್ಲಿನ್



ಸುಳ್ಳು ಹೇಳುವುದರಿಂದ ಯಾರದ್ದಾದರೂ ಪ್ರಾಣ ಉಳಿಯುವಂತಿದ್ದರೆ ಅದು ಪಾಪ ಆಗುವುದಿಲ್ಲ -              ರವೀಂದ್ರನಾಥ ಟ್ಯಾಗೋರ್



ಸರಳ ಜೀವನ ಮತ್ತು ಮೇಲ್ಮಟ್ಟದ ವಿಚಾರ ಮನುಷ್ಯನನ್ನು ಮಹಾನ್ ಆಗಿ ಮಾಡುತ್ತದೆ-
                     ಗಾಂಧೀಜಿ



ಫಲ ಸಿಕ್ಕುವವರೆಗೆ ಪ್ರಯತ್ನ ಕೈಬಿಡಬಾರದು  -    

                 ವಿನೋಬಾ ಭಾವೆ .



ಸಂಪ್ರದಾಯದ ಬಾವಿಯಲ್ಲಿ ತೇಲುವುದು ಒಳ್ಳೆಯದು. ಅದರಲ್ಲಿ ಮುಳುಗುವುದು ಆತ್ಮಹತ್ಯೆ-

                   ಗಾಂಧೀಜಿ



ಉತ್ಸಾಹ ಇಲ್ಲದ ಹೊರತು ಸಾಧನೆ ಅಸಾಧ್ಯ-

                     ಎಮರ್ಸ್ ನ್



ಆತ್ಮವಿಶ್ವಾಸ ಸಫಲತೆಯ ಮೂಲ ರಹಸ್ಯ-

                ಎಮರ್ಸ್ ನ್



ಒಳ್ಳೆಯದನ್ನು ಬಯಸುವ ಗುಣ ಕೆಲವರಿಗೆ ನೀವು ಎಷ್ಟೇ ಒಳ್ಳೆಯದನ್ನು ಮಾಡಿ,  ಒಳ್ಳೆಯದನ್ನೇ ಬಯಸಿ ಅವರಿಗೆ ಅದು ಸಹ್ಯವಾಗುವುದಿಲ್ಲ. ಏಕೆಂದರೆ ಅದಕ್ಕೆ ಅವರು ಯೋಗ್ಯರಾಗಿರುವ...



“Do not judge a person by what others say. The person may be true to you but not to others, because the same sun which melts the ice harden...



ಮನಸ್ಸು ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸಿಕೊಳ್ಳದ ಹೊರತು ಇನ್ನಾವುದೂ ಸರಿಯಾಗದು. --ಡಿ.ವಿ.ಜಿ



ಉನ್ನತಿಯ ದಾರಿಯಲ್ಲಿ ಸಭ್ಯತೆಯ ಅಗತ್ಯ ಹೆಚ್ಚು ಇರುತ್ತದೆ-ಯಂಗ್

🔱🔱🔱🔱🔱🔱🔱🔱🔱




If you have faith in all the three hundred and thirty millions of your mythological gods, … and still have no faith in yourselves, there is no salvation for you. Have faith in yourselves, and stand up on that faith and be strong; that is what we need.




Whatever you think, that you will be. If you think yourselves weak, weak you will be; if you think yourselves strong, strong you will be.



ಜೀವನವೆಂದರೆ ತಿರುವುಗಳ ಕಣಿವೆ..

🔹ಜೀವನವೆಂದರೆ ತಿರುವುಗಳ ಕಣಿವೆ...🔹


ಮನುಷ್ಯನ ಜೀವನದಲ್ಲಿ ಆಗುವ ಬದಲಾವಣೆಗಳು ಹೇಗೆ? ಯಾವಾಗ? ಎಂಬುದು ಹೇಳಲು ಅಸಾಧ್ಯ. ಜೀವನದಲ್ಲಾಗುವ ವ್ಯಕ್ತಿಗತ ಬದಲಾವಣೆಗಳಿಗೆ ಅಥವಾ ಲಕ್ಷಣಗಳಿಗೆ 'ಹೊಸ ತಿರುವು' ಎನ್ನುಬಹುದು. ಅನೇಕ ಸಂದರ್ಭಗಳಲ್ಲಿ ನಮ್ಮೆದುರಿಗೆ ಹೇಗಿದ್ದವರು, ಹೇಗಾದರು ಎಂದು ಹೇಳುತ್ತಿರುತ್ತಾರೆ. ಇಂದು ಹೀಗೆ ಇದ್ದವರು ನಾಳೆ ಹೀಗೆಯೇ ಇರಬೇಕೆಂದೇನೂ ಇಲ್ಲ. ಕೆಲವರು ಶೂನ್ಯದಿಂದ ಉನ್ನತ ಸ್ಥಿತಿಗೆ ತಲುಬಹುದು. ಮತ್ತೆ ಕೆಲವರು ಮೇಲಿದ್ದವರು ಜೀವನದಲ್ಲಿ ಅಧೋಗತಿಗೆ ಇಳಿದವರು ಇದ್ದಾರೆ. ಇದು ಅನೇಕ ಸಂದರ್ಭಗಳಲ್ಲಿ ಆರ್ಥಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಈ ಎಲ್ಲದರ ನಡುವೆ ಇದ್ದು ಇಲ್ಲದಂತೆ ಇರುವುದೆಲ್ಲ ತೊರೆದು, ಜೀವನವೆಂದರೆ ಇಷ್ಟೇನಾ? ನನ್ನೆದುರಿನಲ್ಲಿರುವವರ ಪರಿಸ್ಥಿತಿ ದೈನೇಸಿ ಸ್ಥಿತಿಯಲ್ಲಿರುವಾಗ ನಾನೊಬ್ಬ ಸುಖ, ಭೋಗ ಅನುಭವಿಸಿದರೆ ಅಥವಾ ನನ್ನೊಬ್ಬನ ತ್ಯಾಗದಿಂದ ದೇಶಕ್ಕೆ, ಸಮಾಜಕ್ಕೆ ಒಳಿತಾಗುತ್ತದೆ ಎಂದರೆ ಅದಕ್ಕೆ ನಾನೇಕೆ ಮಾದರಿಯಾಗಬಾರದು ಎಂದು ಬದಲಾದ ಅನೇಕ ವ್ಯಕ್ತಿಗಳು ದಾರ್ಶನಿಕರು, ಸಂತರು, ತ್ಯಾಗಿಗಳು ಆಗಿದ್ದಾರೆ. ಮತ್ತೆ ಕೆಲವರಿಗೆ ತಮ್ಮ ಜೀವನದಲ್ಲಿ ಆಗುವ ಘಟನಾವಳಿಗಳೇ ಬದಲಾವಣೆಗೆ ಪ್ರಮುಖ ಹೆಜ್ಜೆಗಳಾಗಿವೆ. ಮಹರ್ಷಿ ಅರವಿಂದ ಘೋಷ್‌ ಭಾರತ ಕಂಡ ಸಾಧಕ ಸಂತರಲ್ಲಿ ದಂತ ಕತೆ. ಕೇವಲ ಏಳು ವರ್ಷದವರಿದ್ದಾಗಲೇ ಅವರ ತಂದೆ ಅರವಿಂದರನ್ನು ವಿದ್ಯಾಭ್ಯಾಸ ಕ್ಕಾಗಿ ಲಂಡನ್‌ಗೆ ಕಳುಹಿಸುತ್ತಾರೆ. ಅಪಾರ ಪಾಂಡಿತ್ಯ, ಜ್ಞಾನವನ್ನು ಯೂರೋಪ್‌ನಲ್ಲಿ ಪಡೆಯುತ್ತಾರೆ. ಒಂದೂವರೆ ದಶಕದ ನಂತರ ಭಾರತಕ್ಕೆ ವಾಪಾಸು ಬರುವ ಅರವಿಂದರು ದೇಶದ ವಿದ್ಯಮಾನಗಳ ತಿಳಿಯುತ್ತಾರೆ. ಸ್ವಾತಂತ್ರ್ಯ ಹೋರಾಟಕ್ಕಿಳಿದು ಸ್ವರಾಜ್ಯದ ಕನಸು ಕಾಣುತ್ತಾರೆ. 1908ರಲ್ಲಿ ಅಲಿಪುರದಲ್ಲಿ ಬಾಂಬ್‌ ಸ್ಪೋಟದ ಪ್ರಕರಣದಲ್ಲಿ ಅರವಿಂದರು ಒಂದು ವರ್ಷ ಜೈಲು ಶಿಕ್ಷೆಗೊಳಗಾಗುತ್ತಾರೆ. ಜೈಲು ವಾಸದಲ್ಲಿ ಭಗವದ್ಗೀತೆ, ಉಪನಿಷತ್ತುಗಳ ಅಧ್ಯಯನ ನಡೆಸುತ್ತಾರೆ. ನಂತರ ಅವುಗಳಲ್ಲಿ ಸೂಚಿಸಿರುವ ಸಾಧನ ಮಾರ್ಗಗಳಾಗಿರುವ ತತ್ವ ಗಳನ್ನು ಅನುಸರಿಸುವುದು ಹೇಗೆ ಎಂಬುದನ್ನು ಅರಿಯುವ ಪ್ರಯತ್ನ ಮಾಡುತ್ತಾರೆ. ಜೈಲಿನ ಜೀವನ ಮುಗಿಯುವ ವೇಳೆಗೆ ಅರವಿಂದರು ಆಧ್ಯಾತ್ಮದ ವಿಚಾರಗಳಿಗೆ ಮಾರು ಹೋಗಿರುತ್ತಾರೆ. ಸನಾತನ ಧರ್ಮವೆಂದರೆ ನಾವು ನಂಬಿರುವಷ್ಟ್ಟು ಚಿಕ್ಕದಾಗಿಲ್ಲ. ಮನುಷ್ಯನ ಎಲ್ಲ ಸಮಸ್ಯೆಗಳಿಗೆ ಮತ್ತು ಪುರಾತನ ತಿಳುವಳಿಕೆಗೆ ಕಂಡು ಕೊಂಡು ನೀಡಲಾಗುವ ಉತ್ತರಗಳು ಅಲ್ಲಿವೆ. ಮೇಲು, ಕೀಳು, ಅಂತರಗಳನ್ನು ಸೃಷ್ಟಿಸಿದ್ದಾರೆ ಎಂಬುದನ್ನು ಅರಿಯುತ್ತಾರೆ. ಮುಂದೆ ಆಧ್ಯಾತ್ಮಿಕ ದಾರ್ಶನಿಕರಾಗುತ್ತಾರೆ. ಜಗತ್ತಿನಲ್ಲಿ ಕಂಡುಕೊಳ್ಳುವುದು ದರ್ಶನ ಕಾಣದೆ ನಡೆಯುವಂಥUದ್ದು ಘಟನೆ, ಸಂಗತಿ, ಮನಸ್ಥಿತಿಗಳು. ಇವುಗಳ ಜತೆಗೆ ಜೀವ ಪರ ಚಿಂತನೆ, ಸಕಾರಾತ್ಮಕ ಭಾವನೆಗಳು ನಮ್ಮನ್ನು ಆಧ್ಯಾತ್ಮದೆಡೆಗೆ ಕೊಂಡೊಯ್ಯುತ್ತವೆ. ಇದು ಬದುಕಿನ ಅಂತಿಮ ವ್ಯವಸ್ಥೆ, ಅಪಘಾತದಲ್ಲಿ ಬದುಕುಳಿದವರು, ವರ್ಣರಂಜಿತ ಬದುಕು ನಡೆಸಿದವರು, ಶ್ರೀಮಂತಿಕೆಯ ಉತ್ತುಂಗ ತಲುಪಿದವರಿಗೆ ಕೊನೆಗೆ ಏನೂ ಬೇಡವಾಗಿ ಎಲ್ಲವನ್ನೂ ಸಮಾಜಕ್ಕೆ ಅರ್ಪಿಸಿ. ಆಧ್ಯಾತ್ಮದೆಡೆಗೆ ನಡೆದವರು, ಆ ಚಿಂತನೆಗೆ ಸಾಗುವವರು ಸದಾ ಇರುತ್ತಾರೆ. ಅಂತಹವರಿಂದ ಈ ಭೂಮಿಗೆ ಅಲ್ಪ ಋುಣವಾದರೂ ಸಂದಾಯವಾಗುತ್ತದೆ. ಮಹರ್ಷಿ ಅರವಿಂದ ಘೋಷ್‌ ರಂಥವರು ನಮಗೆ ಮಾದರಿ. ನಮ್ಮ ಸ್ವಾತಂತ್ರ್ಯೋತ್ಸವದ ದಿನವೇ ಅವರ ಹುಟ್ಟು ಹಬ್ಬ. ಅಂತಹ ಮಹನೀಯರ ಸ್ಮರಣೆ ನಮ್ಮ ಕರ್ತವ್ಯ.

 - ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
♦️♦️♦️♦️♦️♦️♦️♦️♦️

Ae Mere Watan Ke Logo Lyrics, Meaning & English Translation.

Ae Mere Watan Ke Logo Lyrics, Meaning & English Translation.


Song: Ae Mere Watan Ke Logo
Artist/Singer: Lata Mangeshkar

Meaning: Ae Mere Watan ke Loge is a call/shout to the people on India and literally it means O! the people of motherland

Ae mere vatan ke logon
Tum khoob laga lo naara
Ye shubh din hai ham sab ka
Lehera lo tiranga pyaara

O! the people of my motherland!
Raise all the slogans you desire,
This is a great day for us all,
Hoist your beloved tricolor,


Par mat bhoolo seema par
Eeeron ne hai praan ganvae
Kuch yaad unhein bhi kar lo
Kuch yaad unhein bhi kar lo
Jo laut ke ghar na aaye
Jo laut ke ghar na aaye

But don't forget on the border,
The brave did lose their lives,
And remember each great soldier,
Who did not return home ever,


Ae mere vatan ke logon
Zara aankh mein bhar lo paani
Jo shaheed hue hain unki
Zara yaad karo qurbaani

O! the people of my motherland!
Shed a few tears,
For those who martyred on ice,
Remember their great sacrifice!


Ae mere vatan ke logon
Zara aankh mein bhar lo paani
Jo shaheed hue hain unki
Zara yaad karo qurbaani

Tum bhool na jaao unko
Is liye kahi ye kahaani
Jo shaheed hue hain unki
Zara yaad karo qurbaani

You don't forget them,
That is why I am reciting you the tale


Jab ghayal hua himaalaya
Khatre mein padi aazadi
Jab tak thi saans lade woh
Jab tak thi saans lade woh
Phir apni laash bichha di

When injured was the Himalayan might,
Our freedom was in jeopardy,
Till their last breath did they fight,
And then laid their dead body,


Sangeen pe dhar kar maatha
So gaye amar balidaani
Jo shaheed hue hain unki
Zara yaad karo qurbaani

Resting their head on the soil,
Sacrificed and slept immortal,
For those who martyred on ice,
Remember their great sacrifice!


Jab desh mein thi diwali
Woh khel rahe the holi
Jab ham baithe the gharon mein
Woh jhel rahe the goli
The dhanya javaan woh aapane
Thi dhanya woh unki javaani
Jo shaheed

When the country celebrated Diwali,
They played with their blood the game of Holi,
When we were sitting safe at our homes,
They dealt with deadly bullets and bombs.
Blessed they were those soldiers,
Blessed were their youths,


Koi sikh koi jaat maraatha
Koi sikh koi jaat maraatha
Koi gurakha koi madaraasi
Koi gurakha koi madaraasi
Sarhad pe marane vaala
Sarhad pe marane vaala
Har veer tha bhaaratvaasi

For those who martyred on ice,
Remember their great sacrifice!
Some Sikh, some Jaat and Maratha,
Some were Gurkha or Madrasi,
But each soldier who died on the border,
Was a brave Hindustani.


Jo khoon gira parvat par
Woh khoon tha hindustaani
Jo shaheed hue hain unki
Zara yaad karo qurbaani

The blood that stained the mountain,
That blood was that of an Indian,
For those who martyred on ice,
Remember their great sacrifice!


Thi khoon se lath-path kaaya
Phir bhi bandook uthaake
Dus dus ko ek ne maara
Phir gir gaye hosh ganva ke

With blood their body was drenched,
Yet they lifted their rifle and aimed,
One killed tens of the enemy,
Then fell down unconsciously.


Jab ant samay aaya to
Jab ant samay aaya to
Keh gaye ke ab marate hain
Khush rahana desh ke pyaaron
Khush rahana desh ke pyaaron
Ab hum to safar karate hain
Ab hum to safar karate hain

When the final moment came on,
They said they will die now,
Be happy! O beloved of the nation,
We embark on eternal journey now,


Kya log the woh deewane
Kya log the woh abhimaani
Jo shaheed hue hain unki
Zara yaad karo qurbaani

How great were those patriots,
How great was their pride,


Tum bhool na jaao unko
Is liye kahi ye kahaani
Jo shaheed hue hain unki
zara yaad karo qurbaani

For those who martyred on ice,
Remember their great sacrifice!
Don't you ever forget their glory,
So I narrate this noble story,
For those who martyred on ice,
Remember their great sacrifice!

Jay hind jay hind ki sena
Jay hind jay hind ki sena
Jay hind jay hind jay hind

Victory to India!, Victory to her army!
Victory to India!
Victory to India!
Victory to India!

Here are 5 of Swami Vivekananda’s most inspiring quotes, that stand true even today.

♦️♦️♦️♦️♦️♦️♦️♦️♦️

Here are 5 of Swami Vivekananda’s most inspiring quotes, that stand true even today.

“Who is helping you, don’t forget them. Who is loving you, don’t hate them. Who is believing you, don’t cheat them.”

“Anything that makes you weak physically, intellectually and spiritually, reject as poison.”

“Relationships are more important than life, but it is important for those relationships to have life in them.”

“Like me or hate me, both are in my favor. If you like me I am in your heart, if you hate me I am in your mind.”

“Fill the brain with high thoughts, highest ideals, place them day and night before you, and out of that will come great work.”

🔸🔸🔸🔸🔸🔸🔸🔸🔸

ಶ್ರೀ ವಾಣಿ 🍁ಆಸೆಗಳನ್ನು ಜಯಿಸಿರುವವನೇ ಅರಸ🍁

ಶ್ರೀ ವಾಣಿ

🍁ಆಸೆಗಳನ್ನು ಜಯಿಸಿರುವವನೇ ಅರಸ🍁


ಘನಕ್ಕೆ ಘನವಾಗುವುದೆಂದರೆ ಅಥವಾ ಶರಣ-ಸಂತನಾಗುವುದೆಂದರೆ ಸಂತೃಪ್ತ ಜೀವನ ಸಾಗಿಸುವುದು. ತುಂಬಿದ ಕೊಡವು ಹಳ್ಳದಲ್ಲಿದ್ದರೇನು, ನದಿಯಲ್ಲಿದ್ದರೇನು, ಸಮುದ್ರದಲ್ಲಿದ್ದರೇನು? ಏನೂ ವ್ಯತ್ಯಾಸವಾಗುವುದಿಲ್ಲ. ಹಾಗೆಯೇ ಘನಕ್ಕೆ ಘನವಾದ ಮಹಾತ್ಮನು ಅಡವಿಯಲ್ಲಿದ್ದರೇನು, ಅರಮನೆಯಲ್ಲಿದ್ದರೇನು? ಅವನು ಸದಾ ಸಂತೃಪ್ತನು. ಪರಿಪೂರ್ಣನಾದವನಿಗೆ, ಪರಿತೃಪ್ತನಾದವನಿಗೆ ಯಾವುದರ ಹಂಗೂ ಇಲ್ಲ. ಸುತ್ತಮುತ್ತ ಸಿರಿ-ಸಂಪತ್ತು ಸುರಿಯುತ್ತಿದ್ದರೂ ಅವನು ಅದನ್ನು ಕಣ್ಣೆತ್ತಿ ನೋಡುವುದಿಲ್ಲ. ಸಂತ ತುಕಾರಾಮ ಮಹಾರಾಜರ ಮನೆಯಲ್ಲಿ ಬಡತನವಿದ್ದರೂ, ಅವರ ಮನದಲ್ಲಿ ಬಡತನ ಇರಲಿಲ್ಲ. ಸರಳ ಸಾತ್ವಿಕ ಸಂತೃಪ್ತ ಜೀವನ ಸಾಗಿಸುತ್ತಿದ್ದರು. ಒಂದು ದಿನ ಒಬ್ಬ ಶ್ರೀಮಂತನು ತುಕಾರಾಮರ ಮನೆಗೆ ಸಾಕಷ್ಟು ಧನ ಧಾನ್ಯ ಕೊಟ್ಟು ಕಳುಹಿಸಿದ. ಅದನ್ನು ನೋಡಿದ ತುಕಾರಾಮ ಮಹಾರಾಜರು ಆ ಧನ-ಧಾನ್ಯ ತಂದವರಿಗೆ ಹೇಳಿದರು- ''ನಿಮ್ಮ ಸಾಹುಕಾರರ ಉದಾರ ಗುಣವನ್ನು ನಾನು ಮೆಚ್ಚಿಕೊಳ್ಳುತ್ತೇನೆ. ಆದರೆ ಅವರು ಕಳುಹಿಸಿದ ಧನ ಧಾನ್ಯದ ಅವಶ್ಯಕತೆ ನನಗಿಲ್ಲ,'' ಇಂಥ ಹೃದಯವಂತರೇ ಸಿರಿವಂತರು. ನಮ್ಮ ಹತ್ತಿರ ಕೋಟಿ ಹಣವಿದ್ದರೂ ನಾವು ಬೇಡುತ್ತಿದ್ದರೆ, ಬಡವರೇ! ನಮ್ಮಲ್ಲಿ ನಾಲ್ಕೇ ದುಡ್ಡಿದ್ದರು ಚಿಂತೆಯಿಲ್ಲ, ನಾವು ಮತ್ತೊಬ್ಬರ ಹಣಕ್ಕೆ ಆಶೆ ಮಾಡದೇ ಇದ್ದರೆ ಅದೇ ನಿಜವಾದ ಸಿರಿವಂತಿಕೆ! ಒಬ್ಬ ಬಡ ರೈತನು ಒಂದು ಹಣ್ಣಿನ ತೋಟವನ್ನು ಮಾಡಿದ್ದ. ಒಂದು ದಿನ ಒಬ್ಬ ಮಹಾರಾಜನು ಅವನ ತೋಟಕ್ಕೆ ಬಂದ. ಬಡವರ ಮನೆಗೆ ಭಾಗ್ಯಲಕ್ಷ್ಮಿಯೇ ಬಂದಂತಾುತೆಂದು ಸಂತಸದಿಂದ ರೈತನು ರಾಜನನ್ನು ಸ್ವಾಗತಿಸಿದ. ಇಂದು ಮಹಾರಾಜರೇ ನನ್ನ ಅತಿಥಿಯಾಗಿರುವುದರಿಂದ ನನ್ನಷ್ಟು ಭಾಗ್ಯವಂತರು ಸಿರಿವಂತರು ಯಾರೂ ಇಲ್ಲವೆಂದು ರೈತನು ಭಾವಿಸಿದ. ಹಣ್ಣು - ಹಂಪಲವಿತ್ತು ಮಹಾರಾಜನಿಗೆ ಸತ್ಕರಿಸಿದ. ಸಂತುಷ್ಟನಾದ ಮಹಾರಾಜನು ತನ್ನ ಕೊರಳಿನಲ್ಲಿದ್ದ ಬೆಲೆಬಾಳುವ ಮುತ್ತಿನ ಹಾರವನ್ನು ರೈತನಿಗೆ ಕೊಡಲು ಹೋದ. ರೈತ ಹೇಳಿದ ''ಮಹಾರಾಜರೇ ಇದೇನು ಹೂವಲ್ಲ, ಹಣ್ಣಲ್ಲ. ಒಂದುವೇಳೆ ಹೂವು ಹಣ್ಣಿನ ತೋಟ ಮಾಡದೇ ಬರೀ ಮುತ್ತು ರತ್ನ ಸಂಗ್ರಹಿಸಿದ್ದರೆ ನೀವೇಕೆ ಇಲ್ಲಿಗೆ ಬರುತ್ತಿದ್ದಿರಿ? ನನಗೆ ಈ ಮುತ್ತಿನ ಹಾರ ಬೇಡ, ಮುತ್ತಿನಂಥ ನಿಮ್ಮ ಎರಡು ಸಂತಸದ ನುಡಿಗಳೇ ಸಾಕು!,'' ಮಹಾರಾಜ ಹೇಳಿದ-''ನೀನು ಗುಡಿಸಲಿನಲ್ಲಿದ್ದರೂ ಅರಸನಂತಿರುವೆ ನಾನು ಅರಮನೆಯಲ್ಲಿದ್ದರೂ ಗುಡಿಸಲಿನಲ್ಲಿದ್ದಂತೆಯೇ ಇರುವೆನು. ರಾಜ್ಯಗಳನ್ನು ಜಯಿಸುವ ಆಸೆ ನನ್ನಲ್ಲಿ ಇನ್ನೂ ತುಂಬಿತುಳುಕುತ್ತಿದೆ. ಆಸೆಯನಳಿದಿರುವ ನೀನೇ ನಿಜವಾದ ಅರಸ!,'' ಕೆಲವರು ಎಂಟು ಹತ್ತು ರೂಪಾಯ ಟೊಪ್ಪಿಗೆಯನ್ನೇ ಧರಿಸಿರುತ್ತಾರೆ. ಆದರೆ ಮಂತ್ರಿ ಮಹೋದಯರಿಗೂ ಇಲ್ಲದ ಸಂತಸ ಪಡುತ್ತಿರುತ್ತಾರೆ. ಇನ್ನು ಕೆಲವರು ನೂರಾರು ರೂಪಾಯಿ ಪಟಕಾ ಅಥವಾ ರುಮಾಲ ಧರಿಸಿರುತ್ತಾರೆ. ಆದರೆ ಕಿರೀಟ ಧರಿಸಿದ ರಾಜ ಮಹಾರಾಜರಿಗೂ ಇಲ್ಲದ ಸಂತಸ ಅವರು ಅನುಭವಿಸುತ್ತಿರುತ್ತಾರೆ. ಚಿನ್ನದ ಕಿರೀಟ ಧರಿಸಿದ ರಾಜನಿಗೆ ರಸ್ತೆಗಿಳಿಯುವ ಧೈರ್ಯವಿಲ್ಲ. ಆದರೆ ಟೋಪಿ, ರುಮಾಲು ಧರಿಸಿದವರು ಧೈರ್ಯದಿಂದ ದೇಶ-ದೇಶವನ್ನೆಲ್ಲ ಸುತ್ತಿ ಬರುತ್ತಾರೆ. ಬದುಕುವ ಕಲೆ ಗೊತ್ತಿದ್ದವರು ಇದ್ದುದರಲ್ಲಿಯೇ ಮಹಾರಾಜರಂತೆ ಸಂತೃಪ್ತಿಯಿಂದಿರುತ್ತಾರೆ. ಇದರರ್ಥ ನಾವು ಸಿರಿ-ಸಂಪದ ಗಳಿಸಬಾರದೆಂದಲ್ಲ, ಆದರೆ ಸಂತೃಪ್ತಿಯಿಂದಿರುವುದನ್ನು ಮರೆಯಬಾರದಷ್ಟೇ! ನಮ್ಮ ತಟ್ಟೆಯಲ್ಲಿ ರೊಟ್ಟಿ ಇರುವಾಗ ಅನ್ಯರ ತಟ್ಟೆಯಲ್ಲಿರುವ ಹೋಳಿಗೆ ನೋಡಿ ರೊಟ್ಟಿಯನ್ನು ತಿನ್ನದೆ ಉಪವಾಸ ಮರುಗಬಾರದಷ್ಟೆ !

ಆಧಾರ : ಬದುಕು ಆರಾಧನೆ * ಶ್ರೀ ಸಿದ್ದೇಶ್ವರ ಸ್ವಾಮೀಜಿ
✨✨✨✨✨✨✨✨✨

ರಕ್ಷಾಬಂಧನ

ರಕ್ಷಾಬಂಧನ


೧. ಇತಿಹಾಸ
ಅ. ‘ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡಳು ಮತ್ತು ನಾರಾಯಣನನ್ನು ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು.'
ಆ. ಭವಿಷ್ಯಪುರಾಣದಲ್ಲಿ ಹೇಳಿರುವಂತೆ ರಕ್ಷಾಬಂಧನವು ಮೂಲತಃ ರಾಜರಿಗಾಗಿತ್ತು. ರಾಖಿಯ ಒಂದು ಹೊಸ ಪದ್ಧತಿಯು ಇತಿಹಾಸಕಾಲದಿಂದ ಪ್ರಾರಂಭವಾಯಿತು.

೨. ಭಾವನಿಕ ಮಹತ್ವ: ರಾಖಿಯನ್ನು ಸಹೋದರಿಯು ಸಹೋದರನ ಕೈಗೆ ಕಟ್ಟುವುದಿರುತ್ತದೆ. ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ. ಸಹೋದರಿಯು ಸಹೋದರನಿಗೆ ರಾಖಿಯನ್ನು ಕಟ್ಟುವುದಕ್ಕಿಂತ ಯಾರಾದರೊಬ್ಬ ತರುಣನು/ಪುರುಷನು ಯಾರಾದರೊಬ್ಬ ತರುಣಿಯಿಂದ/ಸ್ತ್ರೀಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುವುದು ಹೆಚ್ಚು ಮಹತ್ವ ದ್ದಾಗಿದೆ; ಇದರಿಂದ ತರುಣಿಯ ಕಡೆಗೆ/ಸ್ತ್ರೀಯರ ಕಡೆಗೆ ನೋಡುವ ವಿಶೇಷವಾಗಿ ಯುವಕರ ಮತ್ತು ಪುರುಷರ ದೃಷ್ಟಿಕೋನವು ಬದಲಾಗುತ್ತದೆ.



೩. ರಾಖಿಯನ್ನು ಕಟ್ಟುವುದು: ಅಕ್ಕಿ, ಬಂಗಾರ ಮತ್ತು ಬಿಳಿಸಾಸಿವೆಗಳನ್ನು ಒಂದುಗೂಡಿಸಿ ಸೆರಗಿನಲ್ಲಿ ಕಟ್ಟಿದರೆ ರಕ್ಷಾ ಅರ್ಥಾತ್ ರಾಖಿಯು ತಯಾರಾಗುತ್ತದೆ.

ಏನ ಬದ್ಧೋ ಬಲೀ ರಾಜಾ ದಾನವೇಂದ್ರೋ ಮಹಾಬಲಃ|
ತೇನ ತ್ವಾಮಪಿ ಬಧ್ನಾಮಿ ರಕ್ಷೇ ಮಾ ಚಲ ಮಾ ಚಲ||

ಅರ್ಥ: ಮಹಾಬಲಿ ಮತ್ತು ದಾನವೇಂದ್ರನಾದ ಬಲಿರಾಜನು ಯಾವುದರಿಂದ ಬದ್ಧನಾದನೋ, ಆ ರಾಖಿಯಿಂದ ನಾನು ನಿನ್ನನ್ನೂ ಕಟ್ಟುತ್ತೇನೆ. ಎಲೈ ರಾಖಿಯೇ, ನೀನು ವಿಚಲಿತಳಾಗಬೇಡ.

೪. ಪ್ರಾರ್ಥನೆ: ಸಹೋದರಿಯು ಸಹೋದರನ ಕಲ್ಯಾಣಕ್ಕಾಗಿ ಮತ್ತು ಸಹೋದರನು ಸಹೋದರಿಯ ರಕ್ಷಣೆಗಾಗಿ ಪ್ರಾರ್ಥನೆಯನ್ನು ಮಾಡುವುದರೊಂದಿಗೆ ಇಬ್ಬರೂ ‘ರಾಷ್ಟ್ರ ಮತ್ತು ಧರ್ಮರಕ್ಷಣೆಗಾಗಿ ನಮ್ಮಿಂದ ಪ್ರಯತ್ನವಾಗಲಿ’, ಎಂದು ಈಶ್ವರನಲ್ಲಿ ಪ್ರಾರ್ಥನೆಯನ್ನು ಮಾಡಬೇಕು.

ರಾಖಿಯು ಹೇಗಿರಬೇಕು ?
ರಾಖಿಯಿಂದ ಪಸರಿಸುವ ಲಹರಿಗಳು ಸಹೋದರ ಸಹೋದರಿ ಇಬ್ಬರಿಗೂ ಲಾಭದಾಯಕವಾಗಿವೆ. ಆದುದರಿಂದ ಚಿತ್ರ-ವಿಚಿತ್ರ ರಾಖಿಗಳನ್ನು ಉಪಯೋಗಿಸುವುದಕ್ಕಿಂತ ಈಶ್ವರೀ ತತ್ತ್ವತ್ವವನ್ನು ಆಕರ್ಷಿಸುವ ಸಾಮರ್ಥ್ಯವುಳ್ಳ ರಾಖಿಗಳನ್ನು ಉಪಯೋಗಿಸಬೇಕು. ಇಲ್ಲದಿದ್ದರೆ ಆ ರಾಖಿಯ ತ್ರಿಗುಣಗಳು (ಸತ್ತ್ವ, ರಜ, ತಮ) ಧರಿಸಿದವರ ಜೀವದ ಮೇಲೆ ಪರಿಣಾಮ ಬೀರುತ್ತವೆ.

ಮಣೆಯ ಸುತ್ತಲೂ ರಂಗೋಲಿಯನ್ನು ಬಿಡಿಸುವ ಹಿಂದಿನ ಉದ್ದೇಶ
ರಾಖಿಯನ್ನು ಕಟ್ಟಿಸಿಕೊಳ್ಳುವಾಗ ಸಹೋದರನು ಕುಳಿತುಕೊಳ್ಳುವ ಮಣೆಯ ಸುತ್ತಲೂ ಸಾತ್ವಿಕ ರಂಗೋಲಿಯನ್ನು ಬಿಡಿಸಬೇಕು. ಸಾತ್ವಿಕ ರಂಗೋಲಿಯಿಂದ ಸಾತ್ವಿಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಅದರಿಂದ ವಾತಾವರಣವು ಸಾತ್ವಿಕವಾಗುತ್ತದೆ.

ತುಪ್ಪದ ನಿಲಾಂಜನದಿಂದ ಆರತಿ ಬೆಳಗುವುದು
ರಾಖಿಯನ್ನು ಕಟ್ಟಿದ ನಂತರ ಸಹೋದರನಿಗೆ ತುಪ್ಪದ ನೀಲಾಂಜನದಿಂದ ಆರತಿಯನ್ನು ಬೆಳಗಿಸುತ್ತಾರೆ. ತುಪ್ಪದ ದೀಪವು ಶಾಂತರೀತಿಯಲ್ಲಿ ಉರಿಯುತ್ತದೆ. ಅದರಿಂದ ಸಹೋದರನಲ್ಲಿ ಶಾಂತ ರೀತಿಯಲ್ಲಿ ವಿಚಾರ ಮಾಡುವ ಬುದ್ಧಿಯು ವೃದ್ಧಿಯಾಗುವಲ್ಲಿ ಸಹಾಯವಾಗುತ್ತದೆ.

ಆರತಿಯ ತಟ್ಟೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡದಿರುವ ಕಾರಣ
ಆರತಿಯ ತಟ್ಟೆಯಲ್ಲಿ ದುಡ್ಡು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಇಡಬಾರದು. ಇಂತಹ ವಸ್ತುಗಳನ್ನು ಇಟ್ಟರೆ ಸಹೋದರಿಯ ಮನಸ್ಸಿನಲ್ಲಿ ಆ ದಿಕ್ಕಿನಲ್ಲಿ ಅಪೇಕ್ಷೆ ನಿರ್ಮಾಣವಾಗಿ ಅದೇ ಸಂಸ್ಕಾರ ಪ್ರಬಲವಾಗುತ್ತದೆ. ಇದರಿಂದ ಅವಳಲ್ಲಿ ರಜ ತಮ ಸಂಸ್ಕಾರಗಳ ಪ್ರಮಾಣ ಹೆಚ್ಚಾಗಿ ಅವಳಲ್ಲಿರುವ ಪ್ರೇಮವು ಕಡಿಮೆ ಆಗಿ ಸಹೋದರನ ಜೊತೆ ಕಲಹ ನಿರ್ಮಾಣವಾಗುತ್ತದೆ.

ಸಹೋದರನಿಗೆ ರಾಖಿಯನ್ನು ಕಟ್ಟುವಾಗ ಸಹೋದರಿಯು ದ್ರೌಪದಿಯ ಭಾವವಿಟ್ಟುಕೊಂಡಿರಬೇಕು
ಶ್ರೀ ಕೃಷ್ಣನ ಬೆರಳಿನ ರಕ್ತಸ್ರಾವವನ್ನು ತಡೆಯಲು ದ್ರೌಪದಿಯು ತನ್ನ ಸೀರೆಯ ತುಂಡನ್ನು ಹರಿದು ಶ್ರೀ ಕೃಷ್ಣನ ಬೆರಳಿಗೆ ಕಟ್ಟಿದಳು. ಸಹೋದರಿಯು ತನ್ನ ಸಹೋದರನಿಗಾಗುವ ಕಷ್ಟವನ್ನು ಸಹಿಸುವುದಿಲ್ಲ. ಅವನ ಮೇಲೆ ಬಂದಿರುವ ಸಂಕಟವನ್ನು ದೂರ ಮಾಡಲು ಅವಳು ಎಲ್ಲವನ್ನು ಮಾಡಲು ಸಿದ್ಧವಾಗುತ್ತಾಳೆ. ರಾಖಿ ಹುಣ್ಣಿಮೆಯಂದು ಪ್ರತಿಯೊಬ್ಬ ಸಹೋದರಿಯು ರಾಖಿಯನ್ನು ಕಟ್ಟುವಾಗ ಇದೇ ಭಾವವನ್ನು ಇಟ್ಟುಕೊಳ್ಳಬೇಕು.

ರಕ್ಷಾಬಂಧನದಂದು ಸಹೋದರಿಯು ಯಾವುದೇ ಅಪೇಕ್ಷೆಗಳನ್ನು ಇಟ್ಟುಕೊಳ್ಳದೆ ರಾಖಿ ಕಟ್ಟುವುದರ ಮಹತ್ವ
ರಕ್ಷಾಬಂಧನದಂದು ಸಹೋದರಿಯು ತನ್ನ ಸಹೋದರನಿಂದ ಯಾವುದೇ ವಸ್ತುವನ್ನು ಪಡೆಯುವ ಅಪೇಕ್ಷೆಯನ್ನು ಇಟ್ಟುಕೊಂಡರೆ, ಆ ದಿನ ಪ್ರಾಪ್ತವಾಗುವ ಆಧ್ಯಾತ್ಮಿಕ ಲಾಭದಿಂದ ವಂಚಿತಳಾಗುತ್ತಾಳೆ. ಆಧ್ಯಾತ್ಮಿಕ ದೃಷ್ಟಿಯಲ್ಲಿ ಕೊಡುಕೊಳ್ಳುವ ಲೆಕ್ಕವನ್ನು ಕಡಿಮೆ ಮಾಡಲು ಈ ದಿನವು ಮಹತ್ವದ್ದಾಗಿದೆ.

ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಮಾಡಬೇಕಾದ ಪ್ರಯತ್ನಗಳು
ಅ. ಈ ದಿನವನ್ನು ನೆನಪಿಟ್ಟುಕೊಂಡು ಸಹೋದರ ಸಹೋದರಿಯ ಬಾಂಧವ್ಯವನ್ನು ಬಲಪಡಿಸಲು ಪ್ರಯತ್ನಿಸಬೇಕು
ಆ. ಸಮಾಜದಲ್ಲಿರುವ ಇತರರೊಂದಿಗಿರುವ ಬಾಂಧವ್ಯ ವೃದ್ಧಿಸಲು ಪ್ರಯತ್ನಿಸಬೇಕು
ಇ. ಈಶ್ವರನಲ್ಲಿರುವ ಶ್ರದ್ಧೆಯನ್ನು ಹೆಚ್ಚಿಸಲು ಪ್ರಯತ್ನ ಮಾಡಬೇಕು

ರಾಖಿಯ ಮಾಧ್ಯಮದಿಂದಾಗುವ ದೇವತೆಗಳ ವಿಡಂಬನೆಯನ್ನು ತಡೆಗಟ್ಟಿರಿ!



ಇತ್ತೀಚೆಗೆ ರಾಖಿಯ ಮೇಲೆ ‘ಓಂ’ ಅಥವಾ ದೇವತೆಗಳ ಚಿತ್ರಗಳಿರುತ್ತವೆ. ರಾಖಿಯನ್ನು ಉಪಯೋಗಿಸಿದ ನಂತರ ಅದು ಆಚೀಚೆ ಬಿದ್ದು ದೇವತೆಗಳ ಅಥವಾ ಧರ್ಮಪ್ರತೀಕಗಳ ವಿಡಂಬನೆಯಾಗುತ್ತದೆ. ಇದರಿಂದ ಪಾಪ ತಗಲುತ್ತದೆ. ಇದನ್ನು ತಡೆಗಟ್ಟಲು ರಾಖಿಯನ್ನು ನೀರಿನಲ್ಲಿ ವಿಸರ್ಜಿಸಬೇಕು!

ಕೆರೆಗೆ ಹಾರ

ಕೆರೆಗೆ ಹಾರ

              ಬರದೂರ ಗ್ರಾಮದ ಭರಮ ದನ ಮೇಯಲು ಬಿಟ್ಟು ನೆರಳು ಹುಡುಕಿ ಬನ್ನಿ ಮರದ ಕೆಳಗೆ ಕುಳಿತ. ಸೂರ್ಯ ಏರಿ ಬಂದು ಬೆವರಿಳಿಸ ಹತ್ತಿದ. ಬುತ್ತಿ ಬಿಚ್ಚಲು ಇನ್ನೂ ಸಮಯವಿತ್ತು. ಗಂಟಲು ಬಿಸಲೇರಿ ಬಾಟಲಿ ನೀರು ಬೇಡುತ್ತಿತ್ತು. ನೀರು ಗುಟಕರಿಸಿ ನುಂಗುವಾಗ ಯಾಕೋ ನೀರು ಗಂಟಲಿಗೆ ಸಿಕ್ಕಂತಾಗಿ ಮೇಲೆ ಕೆಳಗೆ ನೋಡಿ ನೀರು ಸರಾಗವಾಗಿ ಇಳಿಯುವಂತೆ ಮಾಡಿಕೊಂಡು ಒಮ್ಮೆ ಖ್ಯಾಕರಿಸಿ ಉಸಿರೆಳೆದುಕೊಂಡ. ಅದೇ ವೇಳೆಗೆ ಹೊಲದ ಬದಿಯ  ಚಕ್ಕಡಿ ಹಾದಿಯಲ್ಲಿ ಒಂದು ಜೀಪು ತೂರಾಡಿಕೊಂಡು ಬಂದು ನಿಂತಿತು. ಅದರಿಂದ ನಾಲ್ಕಾರು ಜನರು ಅವರ ಸರಂಜಾಮುಗಳು ಇಳಿದವು. ಅವರು ಲೊಚ ಲೊಚ ಮಾತಾಡುತ್ತಾ ಭರಮನ ಮುಂದೆ ಹಬ್ಬಿ ನಿಂತ ಬೂದಿ ಬಸಪ್ಪನ ಗುಡ್ಡವನ್ನೆ ಉದ್ದೇಶಿಸಿ ಏನೋ ಗಲಗಲ ಮಾತಾಡ ಹತ್ತಿದರು. ಅವರು ಗುಡ್ಡವನ್ನೆ ಮಾತಾಡಿಸುವ ಶಕ್ತಿ ಉಳ್ಳವರೇನೋ ಎನ್ನುವ ಭಾಸ ಭರಮನಿಗಾಯಿತು. ತಾನೂ ದಡಬಡಿಸಿ ಎದ್ದುನಿಂತ. ಅವರ ಪೈಕಿ ಒಬ್ಬ ಇವನನ್ನು ಕಂಡವನೇ ಇವನ ಹತ್ತಿರ ಬಂದ. “ತಂಬಾಕೈತೇನು?” ಎಂದು ಕೇಳಿದ. ಯಾರೋ ದೊಡ್ಡ ಸಾಹೇಬನಂತೆ ತೋರುವ ವ್ಯಕ್ತಿ ತನ್ನನ್ನು ತಂಬಾಕು ಕೇಳಿದ್ದು ನೋಡಿ ಗಾಬರಿಯಾಗಿ “ಐತಿ ತೊಗೊರಿ” ಎಂದು ಸ್ಟಾರ್ ಪಾಕೀಟಿನಲ್ಲಿದ್ದ ತಂಬಾಕು ಕೊಟ್ಟ. ತಂಬಾಕು ಸುಣ್ಣ ಬೆರಿಸಿ ತಿಕ್ಕಿ ಒಸಡಿನಲ್ಲಿಟ್ಟುಕೊಂಡು “ಈ ಹೊಲ ನಿಮ್ಮದೇನು?” ಎಂದು ಕೇಳಿದ. “ಹೌದರಿ, ಈ ಬೂದಿ ಬಸಪ್ಪನ ಗುಡ್ಡದ ಕೆಳಗೆ ಇರೊ ಹೊಲದ ಪೈಕಿ ಮೂರು ಎಕರೆ ನಂದು ಮೂರು ಎಕರೆ ನಮ್ಮಣ್ಣಂದರಿ, ಯಾಕರಿ ಸಾಹೇಬರ ಏನಾತ್ರಿ? ಎಂದ. “ ಯಾಕಿಲ್ಲ ಸರ್ಕಾರ ಇಲ್ಲಿ ಒಂದ ಕೆರಿ ಕಟ್ಟಬೇಕಂತ ಮಾಡೈತಿ. ನೀ ಏನ್ ಚಿಂತಿ ಮಾಡಬ್ಯಾಡ, ನಿನ್ನ ಹೊಲ ಕೆರಿ ಕಟ್ಟಾಕಂತ ತೊಗಂಡರೂ, ಅದಕ್ಕ ಸರ್ಕಾರದಿಂದ  ರೊಕ್ಕಾ ಕೊಡತಾರ. ” ಇಷ್ಟು ಹೇಳಿ ಪಿಚ್ಚ ಅಂತ ಒಮ್ಮೆ ತಂಬಾಕು ರಸ ಉಗಳಿ ದುಡು ದುಡು ಎಂದು ಮುಂದೆ ಸಾಗಿದ್ದ ತನ್ನ ಗುಂಪು ಸೇರಿದ. ತಂಬಾಕು ತಿಂದು ಹಾಗೇ ಹೊಗದೇ ಭರಮನ ತಲೆಯಲ್ಲಿ ಹುಳು ಬಿಟ್ಟು ಹೋದ ವ್ಯಕ್ತಿ ನೀರಾವರಿ ಇಲಾಖೆಯಲ್ಲಿ ಇಂಜಿನಿಯರಾಗಿರುವ ಹನುಮರೆಡ್ಡಿ.

                     ಭರಮನ ತಂದೆ ಶಿವಪ್ಪನಿಗೆ ಆರು ಜನ ಹೆಣ್ಣು ಮಕ್ಕಳು ಇಬ್ಬರೇ ಗಂಡು ಮಕ್ಕಳು. ಕಡೆಗೆ ಹುಟ್ಟಿದ ಈ ಗಂಡು ಮಕ್ಕಳು ಸಾಲು ಅಕ್ಕಂದಿರ ಆರೈಕೆಯಲ್ಲಿ ಬೆಳೆದವು. ಭರಮ ಕಡಿ ಹುಟ್ಟು ಕಟ್ಟಾಣಿ ಆದ್ದರಿಂದ ಎಲ್ಲರೂ ಎತ್ತಿ ಆಡಿಸುವರೇ. ಅಳಲಿಕ್ಕೂ ಪುರುಸೊತ್ತಿಲ್ಲದಂತೆ ಬೆಳೆದ. ಭರಮ ಶಾಲೆಗೆ ಹೋದರೂ ಒಂಭತ್ತು ಪಾಸಾಗಿ ಹತ್ತು ಫೇಲಾದ. ಅವನ ಅಣ್ಣ ಗುರುನಾಥನಿಗೂ ವಿದ್ಯೆ ಹತ್ತಲಿಲ್ಲ. ಇಬ್ಬರೂ ಹೊಲ ಮನಿ ಕೆಲಸಕ್ಕೆ ಹತ್ತಿದರು. ಹೊಲದಿಂದ ಬರುವ ಆದಾಯ ಕಡಿಮೆ ಆಗುತ್ತಿದ್ದಂತೆ ಅಣ್ಣತಮ್ಮಂದಿರಿಬ್ಬರು ಅವರಿವರ ಹೊಲಮನಿ ಕೆಲಸಕ್ಕೆ ಹೊರಟರು. ಅಣ್ಣ ಊರವರ ಹೊಲದಲ್ಲಿ ದುಡಿಯಲು, ತಮ್ಮ ಊರ ಮಂದಿ ದನ ಕಾಯವ ಕೆಲಸಕ್ಕೂ ಹತ್ತಿದ. ಯಾಕೊ ಕ್ರಮೇಣ ಭರಮನ ಬುದ್ಧಿ ಮಂದವಾಗಹತ್ತಿತು. ಇದು ಮದುವಿ ಹುಚ್ಚು ಇದ್ದರೂ ಇದ್ದೀತು ಎಂದುಕೊಂಡು ಮದುವಿ ಮಾಡಿದರು. ಅವನ ನಸೀಬು ಎಂಥಾದ್ದಿತ್ತೋ ಏನೋ? ಮದುವಿ ಆಗಿ ಬಂದ ಮಾದೇವಿ ಹೊಟ್ಟಿಲಿ ಕೂಸು ಇಟ್ಟುಕೊಂಡೆ ಬಂದಿದ್ದಳು. ಬಸರು ಬಾಣಂತನ ಎಂದು ತವರಿಗೆ ಹೋದವಳು ಹಾಗೆ ಯಾರೊಂದಿಗೊ ಓಡಿ ಹೋಗಿಬಿಟ್ಟಳು. ಗೋವಾದಲ್ಲಿ ನೋಡಿದೆ ಎಂದು ಕೆಲವರು, ಮಂಗಳೂರಿನಲ್ಲಿ ನೋಡಿದೆ ಎಂದು ಕೆಲವರು ಹೇಳಿದರು. ಯಾರ ಮಾತು ನಿಜ ಅಂತ ನೋಡುವ ಗೋಜಿಗೆ ಭರಮ ಹೋಗಲಿಲ್ಲ. ಆದರೆ ಈ ಘಟನೆಯಿಂದ ಭರಮ ಇನ್ನಷ್ಟು ಕುಗ್ಗಿ ಹೋದ. ತನ್ನಷ್ಟಕ್ಕೆ ತಾನೆ ಮಾತಾಡಿಕೊಳ್ಳುವುದು, ಗಾಳಿಯಲ್ಲಿ ಕೈ ಆಡಿಸುವುದು ಯಾರೊಂದಿಗೂ ಬೆರೆಯದೇ ದನ ಮೇಯಿಸಿಕೊಂಡು ಬರುವುದನ್ನಷ್ಟೆ ಮಾಡಹತ್ತಿದ.

                ಹಳ್ಳಿ ಊರು.ಚಾಷ್ಟಿ ಮಾಡುವ ಜನರೇ ಹೆಚ್ಚು. ತುಂಟ ಹುಡುಗರು ಭರಮನಿಗೆ  ‘ ಯಾಕೊ ಮಾವಾ, ಅಕ್ಕನ್ನ ಎಲ್ಲಿಗಿ ಕಳಿಸಿದೆಪಾ? ’ ಎಂದು ಕೇಳಿದರೆ ‘ ತೌರಿಗೆ ಹೊಗ್ಯಾಳ ನಾಳೆ ಬರ್ತಾಳ ’ ಎನ್ನುತ್ತಿದ್ದ. ಹಿಂದಿನಿಂದ ‘ ಗೋವಾಕ್ಕ ಹೋಗೊ ಮಾವಾ ಸಿಕ್ತಾಳ ’ ಎಂದು ಓಡಿ ಹೋಗುತ್ತಿದ್ದರು. ಹೊಲದ ಕೆಲಸ ಮುಗಿಸಿ ಸಂಜಿಕ ಗುಂಪಾಗಿ ಹರಟೆ ಹೊಡೆಯುತ್ತಾ ಮನೆಗೆ ಹಿಂದಿರುಗುತ್ತಿದ್ದ ಹೆಂಗಸರು “ ಭರಮಣ್ಣಾ ಅಕ್ಕನ್ನ ಎಲ್ಲಿ ಬಿಟ್ಟೆಪಾ?” ಎಂದರೆ “ ಊರಿಗೆ ಹೊಗ್ಯಾಳಬೇ ನಾಳೆ ಬರ್ತಾಳ “ ಎನ್ನುತ್ತಿದ್ದ. ಹಿಂದಿನಿಂದ ಕಿಸಕ್ ಅಂತ ನಕ್ಕು, ‘ ಇವನ ಕೈಲಿ ಆಕಿನ್ನ ಇಟುಗೊಳ್ಳುದ ಆಗಲಿಲ್ಲ ’ ಎನ್ನುವ ಅರ್ಥದ ಮಾತಾಡುತ್ತಿದ್ದರು. ಒಮ್ಮೆ ಇವನಿಗೂ ಇವನ  ಅಣ್ಣನ ಹೆಂಡತಿ ಮಾದೇವಿಗೂ ಯಾವುದೋ ಕಾರಣಕ್ಕೆ ಜಗಳ ಹತ್ತಿತು. ಅವಳು ಸಿಟ್ಟಿನಿಂದ ‘ ಹೆಂಡತಿ ಇಟಗೊಳ್ಳಲಾಕ ಆಗಲಾರದ ಗಂಡಸು, ನೀ ಏನ್ ನನಗ ಹೇಳ್ತಿ ಹೋಗೊ ’ ಎಂದು ಬಿಟ್ಟಳು. ಸಿಟ್ಟಿಗೆದ್ದ ಭರಮ ಜಗಳದ ಭರದಲ್ಲಿ ಅವಳ ಸೀರಿಗೆ ಕೈ ಹಾಕಿದ. ಇದನ್ನೆ ಕಾಯುತ್ತಿದ್ದವಳಂತೆ ಆಕೆ ಊರು ಒಂದು ಮಾಡುವಂತೆ ಚೀರಿಕೊಂಡುಬಿಟ್ಟಳು. ಜನ ಸೇರಿ ಜಗಳ ಬಿಡಿಸಿದರು. ಅಣ್ಣ ತಮ್ಮ ಒಂದಾಗಿ ಇರುವುದು ಸಾಧ್ಯವೇ ಇಲ್ಲವೆಂದು ಗುರುನಾಥನ ಹೆಂಡತಿ ಮಾದೇವಿ ಸೇರಿದ ಪಂಚಾಯತಿಗೆ ಹೇಳಿದಳು. ಪಂಚಾಯತಿ ಜನ ಅನಿವಾರ್ಯವಾಗಿ ಪಾಲು ಮಾಡಿಕೊಟ್ಟರು. ತಲಾ ಮೂರು ಎಕರೆ ಹೊಲದ ಪಾಲು ಬಂದಿತಾದರೂ ಬರಡು ಹೊಲದಲ್ಲಿ ಹೊಟ್ಟೆ ಹೇಗೆ ತುಂಬೀತು? ಭರಮ ಊರವರ ದನ ಕಾಯುವ ಕೆಲಸಕ್ಕೂ ಅವರಣ್ಣ ಊರವರ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಾ ತನ್ನ ಹೊಲದಲ್ಲೂ ಅಲ್ಪ ಸ್ವಲ್ಪ ಆದಾಯ ಗಳಿಸುತ್ತಿದ್ದ. ಇಷ್ಟೆಲ್ಲ ಆದರೂ ಗುರುನಾಥನಿಗೆ ತಮ್ಮ ಭರಮನ ಮೇಲೆ ಪ್ರೀತಿ ಕಡಿಮೆ ಆಗಲಿಲ್ಲ. ಬರುಬರುತ್ತಾ ಮಂದ ಬುದ್ಧಿಯವನಾಗುತ್ತಿದ್ದ ತಮ್ಮನನ್ನು ರಾತ್ರಿ ಊಟಕ್ಕೆ ತನ್ನ ಬಳಿಯೆ ಕೂಡ್ರಿಸಿಕೊಂಡು ಹೊಟ್ಟೆ ತುಂಬ ಊಟ ಹಾಕಿಸುತ್ತಿದ್ದ. ಯುಗಾದಿ ಬಂದಿತೆಂದರೆ ಒಂದು ಜೊತೆ ವಲ್ಲಿ ತಂದು ಅದನ್ನು ಎರಡು ಮಾಡಿ ತನಗೊಂದು ಇಟಗೊಂಡು ತಮ್ಮನಿಗೊಂದು ಕೊಡುತ್ತಿದ್ದ. ಹೊಸಾ ವಲ್ಲಿ ಉಟಗೊಂಡು ಇಬ್ಬರೂ ಜೋಡಾಗಿ ಊರ ಹನುಮಪ್ಪಗ ಹೋಗಿ ಕಾಯಿ ಒಡೆಸಿಕೊಂಡು ಬರುತ್ತಿದ್ದರು. ಭರಮನೂ  ಬೇರೆಯವರ ದನ ಕಾಯ್ದಿದ್ದಕ್ಕೆ ಬಂದ ಹಣವನ್ನೆಲ್ಲಾ ಅಣ್ಣನಿಗೆ ಕೊಟ್ಟುಬಿಡುತ್ತಿದ್ದ.

                  ಇಂಜಿನಿಯರ ಹನುಮರೆಡ್ಡಿ ಸದಾ ಹಸಿರು ಹುಲ್ಲು ಮೇಯುವ  ಅಭ್ಯಾಸ ಇದ್ದವ. ಈ ಬಾರಿ ಎಲ್ಲಿ ಏನು ತಪ್ಪಾಗಿತ್ತೋ ಏನೋ ಅವನನ್ನು ನೀರು ಸಹಾ ಸಿಗದೂರಿಗೆ ಹಾಕಿದ್ದರು. ಆದರೂ ಛಲ ಬಿಡದ ಹನುಮರೆಡ್ಡಿ ತಾಲೂಕಿಗೆ ಅಡ್ಡಾಡಿ ಎಮ್ಮೆಲ್ಲೆ ಭೇಟಿಯಾಗಿ ಸರ್ವೆ ಮಾಡ್ತಿನಿ, ಕೆರಿ ಕಟ್ಟ್ತಿನಿ ಎಂದು ಹೇಳಿ ಒಂದಿಷ್ಟು ಕೊಟ್ಟು ಬರದೂರಿಗೆ ಒಂದು ಕೆರಿ ಮಂಜೂರು ಮಾಡಿಸಿಕೊಂಡು ಬಂದಿದ್ದ. ಜನರು ‘ಅಲ್ರಿ ಸಾಹೇಬ್ರ, ಮಳಿ ಇಲ್ಲದ ಊರಾಗ ಕೆರಿ ಕಟ್ಟಿ ಏನ ಮಾಡವ್ರು?’ ಎಂದರೆ “ಏ ಬುದ್ದಿಗೇಡಿಗೋಳಾ ಎಲ್ಲಿಟ್ಟಿರಿ ಬುದ್ದಿನಾ? ಬೂದಿ ಬಸಪ್ಪನ ಗುಡ್ಡದಿಂದ ಗಂಗಮ್ಮ ತಾಯಿ ಇಳಿದು ಮುಂದಕ ಹರಿದು ಹೋಗಿ ತುಂಗಭದ್ರಾ ಡ್ಯಾಮ್ ತುಂಬತಾಳ, ನಿಮ್ಮೂರಿಗೆ ಕುಡಿಯಾಕ ನೀರು ಸಿಗಂಗಿಲ್ಲ. ಅಲ್ಲಿ ನಿಮ್ಮ ಊರು ನೀರು ಬಳಸಿ ಕಬ್ಬು, ಭತ್ತ ಬೆಳಿತಾರ” ಎಂದು ಏನೇನೋ ಸಮಜಾಯಿಸಿ ಕೊಟ್ಟು  ಊರ ಮುಂದಿನ ಹೊಟೇಲ್ಲಿನಲ್ಲಿ ಎಲ್ಲರಿಗೂ ಚಾ ಕುಡಿಸಿ ಕೆರಿ ಕಟ್ಟಲು ಒಪ್ಪಿಗೆ ಪಡೆದುಕೊಂಡುಬಿಟ್ಟ.

                     ಕೆರಿ ಕಟ್ಟಲುಬೇಕಾದ ಜಮೀನು ಎಂದು ಭರಮನ ಪಾಲಿನ ಮೂರು ಎಕರೆ ಜಮೀನು ಸ್ವಾಧೀನಕ್ಕೆ ಸರ್ಕಾರ ಆದೇಶ ಹೊರಡಿಸಿತು. ಸರ್ಕಾರದಿಂದ  ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಹಣವೂ ಮಂಜೂರಾಯಿತು. ಆದರೆ ಅದು ಭರಮನ ಕೈಗೆ ತಲುಪಲಿಲ್ಲ. ಈ ಹಣಕ್ಕಾಗಿ ನಿತ್ಯ ತಾಲೂಕಾಫೀಸಿಗೆ ಅಡ್ಡಾಡುವುದೇ ಭರಮನ ಕೆಲಸವಾಗಿ ಹೋಯಿತು. ಊರಲ್ಲಿ ದನ ಮೇಯಿಸುತ್ತ  ದನದೊಟ್ಟಿಗೆ ಅಡ್ಡಾಡಿದವನು ಈಗ ಶಹರದ ಮಂದಿ ಸಂಪರ್ಕಕ್ಕೆ ಬಂದನು. ಶಹರದ ಮಂದಿ ಎಷ್ಟು ನಯವಾಗಿ ಮಾತಾಡುತ್ತಾರಲ್ಲ ಎಂದು ಬೆರಗಾಗುತ್ತಿದ್ದನು.  ಕ್ರಮೇಣ  ಅವನಿಗೆ ಇದು ಅರ್ಥವಾಗಹತ್ತಿತು. ತಾನು ಮೇಯಿಸುತ್ತಿದ್ದ ಎಮ್ಮೆಗಳು ಮರ ಕಂಡ ಕೂಡಲೇ ಮೈ ತಿಕ್ಕುವ ರೋಗ ಇರುವಂತೆ ಈ ಜನರಿಗೆ ಮನುಷ್ಯರನ್ನ ಕಂಡ ಕೂಡಲೇ ಬಣ್ಣದ ಮಾತಾಡುವ ರೋಗವಿರಬಹುದೆಂದು ಅನಿಸತೊಡಗಿತು. ಊರಲ್ಲಿ ಕೆರಿ ರೊಕ್ಕ ಬಂದ ಕೂಡಲೇ ಕೊಡತೀನಿ ಎಂದು ಅವರಿವರ ಕಡೆ ಸಾಲ ಮಾಡಿದ. ಒಂದಡೆ ಸಾಲ ಬಡ್ಡಿಯೊಂದಿಗೆ  ಏರುತ್ತಿದ್ದರೆ ಇವನ ಕೆರೆ ಪರಿಹಾರದ ದುಡ್ಡು ಮಾಯಾ ಜಿಂಕೆಯಂತೆ ದೂರ ಓಡುತ್ತಿತ್ತು. ಕೊನೆಗೊಮ್ಮೆ ಖಡಕ್ಕಾಗಿ ಕೇಳಿದಾಗ ಗ್ರಾಮ ಸೇವಕ ಉಪತಹಸಿಲ್ದಾರರ ಕಡೆಗೆ ಕೈ ತೋರಿಸಿದ. ಉಪತಹಸಿಲ್ದಾರ ಇವನನ್ನು ಕೂಡ್ರಸಿಕೊಂಡು ‘ನಿಮ್ಮ ಊರ ಜಮೀನು ಇನ್ನೂ ಪೋಡಿಯಾಗಿಲ್ಲ, ಪೋಡಿಯಾದ ಮೇಲೆ ಸರ್ವೆ ಆಗಬೇಕು ಬೇರೆ ಬೇರೆ ಉತಾರ ಆಗಬೇಕು ಅದರಾಗ ನಿನ್ನ ಹೆಸರ ಕೂಡ್ರಸಬೇಕು. ಆಮ್ಯಾಲ ನಿನಗ ರೊಕ್ಕ ಬರತಾವ. ಈಗ ಸರ್ವೆ ಮಾಡಸು ಸರ್ವೆ ಮಾಡಿಸಿ ನಕ್ಷಾ ತೆಗೆದುಕೊಂಡು ಬಾ ಹೋಗು’ ಎಂದು  ಹೇಳಿ ಓಡಿಸಿಬಿಟ್ಟರು. ಈ ಸರ್ವೆ ಅಂದರೇನು? ಅದನ್ನು ಮಾಡವರು ಯಾರು? ನನ್ನ ಹೆಸರಿಗೆ ಜಮೀನು ಇಲ್ಲ ಅಂತಾದರೆ ನನ್ನ ಪಾಲಿನ ಜಮೀನು ಯಾರ ಹೆಸರಲ್ಲಿದೆ? ಅವರು ಗುಪ್ತವಾಗಿ ಹೇಳಿದ್ದು ಇವನಿಗೆ ತಿಳಿಯಲಿಲ್ಲ. ಬಿಚ್ಚಿಹೇಳಲು ಅವರು ಸಿದ್ಧರಿಲ್ಲ. ಇವರು ನನಗೆ ತಿಳಿಯುವಂತೆ ಯಾಕ ಮಾತಾಡುವದಿಲ್ಲ? ಎಂದು ವಿಚಾರ ಮಾಡಿ ಕೆಲ ದಿನ ಅಲ್ಲಿಗೆ ಹೋಗುವದನ್ನೆ ಬಿಟ್ಟುಬಿಟ್ಟ.

                           ಕೊನೆಗೆ ಒಂದು ದಿನ ಅವರಣ್ಣ  ಒತ್ತಾಯ ಮಾಡಿದ ಮೇಲೆ ಹೊರಟು ನಿಂತ. ಬಸ್ಸು ಹತ್ತಿದ. ಮಗ್ಗಲು ಕುಳಿತ ಊರ ಹಿರಿಯ ‘ ಅಲೆಲೆ ಭರಮಾ! ಹೊಸಾ ಧೋತರಾ ಉಟಗೊಂಡು ಹೊಸಾ ಅಂಗಿ ಹಾಕ್ಕೊಂಡು ಎಲ್ಲಿಗೆ ಹೊಂಟಿಯಪಾ? ಹೆಂಡತಿ ಕರಿಯಾಕ ಮಾವನ ಮನಿಗೆ ಹೊಂಟಿಯೇನ್ ಮತ್ತ?’ ಎಂದು ಕೇಳಿದ. ‘ ಇಲ್ಲೊ ಕಾಕಾ ನನ್ನ ಕೆರಿ ರೊಕ್ಕ ಬರುದಿತ್ತು ಕೇಳಾಕ ಹೊಂಟೀನಿ ’ ಎಂದು ಹೇಳಿದ. ಬಸ್ಸು ಮುಂದೆ ಸಾಗುತ್ತಲೇ ನಿದ್ದೆಗೆ ಜಾರಿದ. ಭರಮನಿಗೆ ಕನಸಿನಲ್ಲಿ ತನ್ನ ಕೆರಿ ಹಣದ ಫೈಲು ಬಂದಂತೆ ಆಯಿತು. ಫೈಲಿನ ಬರೆದ ಅಕ್ಷರಗಳನ್ನು ಜ್ಞಾಪಿಸಿಕೊಂಡ ಕಂದಾಯ/ಭೂ.ಸ್ವಾ./ಬರದೂರ/ಸ.ನಂ.718 ಎಂದೇನೋ ಇದ್ದಿತು. ಆ ಬೂದು ಬಣ್ಣದ ಫೈಲಿನ ಮೇಲೆ ತಾನು ಕೈ ಆಡಿಸಿದಂತೆಯೂ ಸಾಹೇಬರು ಖುದ್ದಾಗಿ ತನ್ನನ್ನು ಕರೆದು ಕಟ್ಟು ಕಟ್ಟು ಹಣ ನೀಡಿದಂತೆ ಆಯಿತು. ಅದೇ ವೇಳೆಗೆ ಧಡ್! ಎಂದು ಡ್ರೈವ್ಹರ್ ಬ್ರೇಕ್ ಹಾಕಿ ಅಡ್ಡ ಬಂದ ಎಮ್ಮಿಗೆ ಬಸ್ ಡಿಕ್ಕಿ ಆಗುವದನ್ನು ತಪ್ಪಿಸಿದ. ಭರಮನ ಹಣಿ ಮುಂದಿನ ಕಂಬಿಗೆ ಬಡಿದು ದೊಡ್ಡ ಗುಮಟಿ ಆಯಿತು, ಗುಮಟಿ ನೋಯಿಸ ತೊಡಗಿತು. ಇದಕ್ಕೆಲ್ಲಾ ಆ ಭೂ ಸ್ವಾಧೀನ ಕಚೇರಿಯೆ ಕಾರಣವೆಂದು ಶಪಿಸಿದ. ತನ್ನ ಹೊಲಾ ನುಂಗಿ ಕಟ್ಟು ಕಟ್ಟು ಹಣ ತರುವ ಆ ಬೂದು ಬಣ್ಣದ ಫೈಲಿನ ಮೇಲೆ ಆ ವೇಳೆ ಅವನಿಗೆ ಅಪಾರ ಪ್ರೀತಿ ವಿಪರೀತ ಸಿಟ್ಟು ಒಟ್ಟಿಗೆ ಉಂಟಾಯಿತು. ಇವತ್ತು ಎರಡರಲ್ಲಿ ಒಂದಾಗಲೇಬೇಕು ಎಂದುಕೊಂಡು  ಜೋರಾಗಿ ಹೆಜ್ಜೆ ಹಾಕಿಕೊಂಡು ಆಫೀಸಿಗೆ ಹೋದ.

                      ಆಗಿನ್ನು ಹತ್ತು ಗಂಟೆ. ಅಲ್ಲೊಬ್ಬರು ಇಲ್ಲೊಬ್ಬರು ಬಂದಿದ್ದರು. ಭರಮ ತನ್ನ ಕೆಲಸವಿದ್ದ ಟೇಬಲ್ ಹತ್ತಿರ ಹೋದ, ಗುಮಾಸ್ತನಿನ್ನೂ ಬಂದಿರಲಿಲ್ಲ. ಎದುರಿಗಿದ್ದ ಕುರ್ಚಿ  ಮೇಲೆ ಕುಳಿತು ತನ್ನ ಭೂಸ್ವಾಧೀನ ಫೈಲು ಕಾಣುವುದೋ ಎಂದು ಕೈಯಾಡಿಸಿ ನೋಡತೊಡಗಿದ. ಅಲ್ಲಿ ಅದೇ ಬೂದು ಬಣ್ಣದ ಹತ್ತಾರು ಫೈಲು ಕಂಡವು. ಅವು ವೃದ್ಧ್ಯಾಪ್ಯ ವೇತನ, ಅಂಗವಿಕಲರ ವೇತನ, ತಾಳಿ ಭಾಗ್ಯ, ಮಡಿಲು ಭಾಗ್ಯ ಇವಕ್ಕೆ ಸಂಬಂಧಿಸಿದ ಫೈಲುಗಳಿದ್ದವು. ತನ್ನ ಫೈಲು ಇದರೊಳಗೆ ಇರಬೇಕು ಎಂದು ಭಾವಿಸಿ ಏಕಾಏಕಿ ಹೆಗಲ ಮೇಲಿನ ಟವಲು ತೆಗೆದು ಎಲ್ಲಾ ಫೈಲು ಕಟ್ಟ ತೊಡಗಿದ. ದೊಡ್ಡ ಗಂಟು ಮಾಡಿ ಹೆಗಲ ಮೇಲೆ ಹೊತ್ತು ಓಡತೊಡಗಿದ. ದೂರದಿಂದ ನೋಡಿದ ಪಿವನ್ ಹುಣಸಿಕಟ್ಟಿ ಏ ಹಿಡಿರಿ ಅವನ್ನ!  ಎನ್ನುತ್ತಾ ಅವನ ಹಿಂದೆ ಬೆನ್ನು ಹತ್ತಿದ. ಇದನ್ನು ನೋಡಿದ ಭರಮ ಹತ್ತಿರದಲ್ಲಿ ಇದ್ದ ಮೊಬೈಲ್ ಟವರ್ ಏರತೊಡಗಿದ. ಇದನ್ನು ಕಂಡ ಹುಣಸಿಕಟ್ಟಿ ಚೀರಾಡತೊಡಗಿದ, ಜನ ಸೇರಿದರು. ಪೋಲಿಸರಿಗೆ ಅಗ್ನಿಶಾಮಕದವರಿಗೆ ಫೋನು ಮಾಡಿ ಕರೆಸಲಾಯಿತು. ಭರಮ ಮೇಲಿರುತ್ತಲೇ ಇದ್ದ. ಸುದ್ದಿ ತಿಳಿದ ಮಾಧ್ಯಮದವರೂ ಬಂದರು.  ತಹಸಿಲ್ದಾರರು ಖುದ್ದಾಗಿ ಮೈಕ್ ಹಿಡಿದು “ ಭರಮಣ್ಣನವರೇ, ದಯವಿಟ್ಟು ಕೆಳಗೆ ಬನ್ನಿ! ನಿಮ್ಮ ಸಮಸ್ಯೆ ಏನಿದ್ದರೂ ಬಗೆಹರಿಸೋಣ! ನೀವು ಕೆಳಗೆ ಬನ್ನಿ ಎಂದು ಮಾಧ್ಯಮದವರನ್ನು ಮುಂದೆ ಮಾಡಿಕೊಂಡು ಅಂಗಲಾಚಿದರು. ಆ ಪೈಕಿ ಒಬ್ಬ ವರದಿಗಾರ “ ಸಾಹೇಬ್ರ ಭರಮ ಮೊಬೈಲ್ ಟವರ್ ಮ್ಯಾಲ ಅದಾನ, ಟಿವಿ ಕ್ಯಾಮರಾ ಮುಂದ ಇಲ್ಲಾ ” ಎಂದು ಚೇಷ್ಟೆ ಮಾಡಿದ. ಭರಮ ಮೇಲೆರುತ್ತಲೇ “ ನಿವ್ ಯಾರಾದರೂ ಮೇಲೆ ಬಂದರೆ ನಾನು ಇಲ್ಲಿಂದ ಹಾರಿ ಬಿಡ್ತಿನಿ” ಎಂದು ಉತ್ತರಿಸಿದ. ಬರದೂರಿಗೂ ಸುದ್ದಿ ಕಳಿಸಿ ಅವರಣ್ಣನಿಗೆ ಬರ ಹೇಳಿದರು. ಬಿಸಿಲು ಏರ ತೊಡಗಿತು. ನೆರೆದ ಮಾಧ್ಯಮದವರು        ‘ ಭರಮಣ್ಣನವರೇ! ನಿಮ್ಮ ಸಮಸ್ಯೆ ಏನು ಹೇಳಿ?’ ಎಂದು ಪೀಡಿಸತೊಡಗಿದವು. ಸ್ಥಳೀಯರ ಸಂದರ್ಶನ ಮಾಡಿ ಪ್ರಸಾರ ಮಾಡತೊಡಗಿದವು. ಅಗ್ನಿಶಾಮಕದವರು ಮೇಲೆರುವ ಪ್ರಯತ್ನದಲ್ಲಿತೊಡಗಿದರು. ಇದನ್ನು ಕಂಡ ಭರಮ ‘ ಮ್ಯಾಲ ಬರಬ್ಯಾಡ್ರಿ ’ ಎಂದು ಚೀರಿದವನೇ ಟವರಿನಿಂದ ಜಿಗಿದುಬಿಟ್ಟ. ಅವನು ಬಿದ್ದಿದ್ದು ವಿದ್ಯುತ್ ತಂತಿಯ ಮೇಲೆ! ಕ್ಷಣಾರ್ಧದಲ್ಲಿ ಸುಟ್ಟ ದೇಹ ಧೊಪ್ಪಂದು ಕೆಳಕ್ಕೆ ಬಿತ್ತು. ಸುಟ್ಟು ಬೂದಿಯಾದ ಫೈಲ ಹಾಳೆಗಳು ಗಾಳಿಗೆ ಹಾರಾಡತೊಡಗಿದವು. ಮಾಧ್ಯಮದವರು ಈ ದ್ರಶ್ಯವನ್ನು ನೇರವಾಗಿ ಪ್ರಸಾರ ಮಾಡಿ ವೀರಾವೇಶ ಮೆರೆದವು. ಅದೇ ಸಮಯಕ್ಕೆ ಊರಿನಿಂದ ಬಂದ ಅವರಣ್ಣ ಗುರುನಾಥ ತಮ್ಮನ ದೇಹದ ಬೂದಿ ಹಿಡಿದು ನೋಡಿದ. ಹೊಸ ಧೋತರದ ಬೂದಿ ಇನ್ನೂ ಗರಿಗರಿಯಾಗಿತ್ತು. ಗುರುನಾಥನ ಕಣ್ಣಿಂದ ಒಂದು ಹನಿ ನೀರು ಭೂಮಿಗೆ ಬೀಳುವುದನ್ನೆ ಕಾಯುತ್ತಿದ್ದ ಭೂಮಿ ತಟ್ಟನೇ ಅದನ್ನು ನುಂಗಿ ತನ್ನ ಒಡಲೊಳಗೆ ಸೇರಿಸಿಕೊಂಡುಬಿಟ್ಟಿತು. ಕನ್ನಡ ನಾಡ ಗೌಡತಿ ಭಾಗೀರಥಿ ಸ್ವರ್ಗದ ಬಾಗಿಲಲ್ಲಿ ಬಂದು ಭರಮನನ್ನು ಬಿಗಿದಪ್ಪಿಕೊಂಡಳು.

15 Great thoughts By Chanakya…

🔱15 Great thoughts By Chanakya…🔱



1) “Learn from the mistakes of others… you can’t live long enough to make them all yourselves!!”


2)”A person should not be too honest. Straight trees are cut first and Honest people are screwed first.”


3)”Even if a snake is not poisonous, itshould pretend to be venomous.”


4)”There is some self-interest behind every friendship. There is no friendship without self-interests. This is a bitter truth.”


5)” Before you start some work, always ask yourself three questions -Why am I doing it, What the results might be and Will I be successful. Only when you think deeply and find satisfactory answers to these questions, go ahead.”


8)”Once you start a working on something, don’t be afraid of failure and don’t abandon it. People who work sincerely are the happiest.”


9)”The fragrance of flowers spreads only in the direction of the wind. But the goodness of a person spreads in all direction.”


10)”God is not present in idols. Your feelings are your god. The soul is your temple.


11) “A man is great by deeds, not by birth.”


12) “Never make friends with peoplewho are above or below you in status. Such”


13) “Treat your kid like a darling for the first five years. For the next five years, scold them. By the time they turn sixteen, treat them like a friend.Your grown up children are your best friends.friendships will never give you any happiness.”


14) “Treat your kid like a darling for the first five years. For the next five years, scold them. By the time they turn sixteen, treat them like a friend.Your grown up children are your best friends.”


15) “Education is the best friend. An educated person is respected everywhere. Education beats the beauty and the youth. ~ Chankya

💎💎💎💎💎💎💎💎💎

ಬೆನ್ನು ನೋವು

ಬೆನ್ನು ನೋವು



 ಡಾ. ವೆಂಕಟ್ರಮಣ ಹೆಗಡೆ

ಇಂದಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಬೆನ್ನು ನೋವು, ಸೊಂಟ ನೋವು ಕಂಡುಬರುತ್ತದೆ. ಹೆಚ್ಚು ಹೊತ್ತು ಒಂದೇ ತೆರನಾಗಿ ಕುಳಿತುಕೊಳ್ಳುವುದು, ಒಂದೇ ರೀತಿಯಾದಂತಹ ಕೆಲಸಮಾಡುತ್ತಿರುವುದು ಇದಕ್ಕೆ ಸಾಮಾನ್ಯ ಕಾರಣ. ಬೆನ್ನಿನ ಮಾಂಸಖಂಡಗಳಿಗೆ ಸರಿಯಾಗಿ ಎಲ್ಲ ರೀತಿಯಲ್ಲಿ ಕೆಲಸವಿಲ್ಲದೇ ಒಂದೇ ಕಡೆ ಹೆಚ್ಚು ಒತ್ತಡಯುತವಾಗಿರುವದು. ಮುಂದೆ ಮಾತ್ರ ಬಗ್ಗಿ ಕಾರ್ಯ ನಿರ್ವಹಿಸುವುದು, ಒಂದು ಪಕ್ಕಕ್ಕೆ ಮಾತ್ರ ತಿರುಗಿ ಕೆಲಸ ಮಾಡುವುದು, ಇಂತಹವುಗಳಿಂದ ಬೆನ್ನು ನೋವು ಬರುವಂತಹ ಪ್ರಮೇಯಗಳು ಅಧಿಕ.

ಅದಕ್ಕಾಗಿ ಮಾಂಸಖಂಡಗಳನ್ನು ಸ್ವಸ್ಥವಾಗಿಸಿಕೊಳ್ಳುವುದು ಅಗತ್ಯ. ಇದಕ್ಕೆ ವ್ಯಾಯಾಮ ಅತ್ಯಂತ ಪರಿಣಾಮಕಾರಿ ಪರಿಹಾರ. ತಜ್ಞ ಯೋಗ ವೈದ್ಯರ ಸಲಹೆ ಪಡೆದು ಬೆನ್ನುನೋವಿಗಾಗಿ ಸೂಕ್ತ ವ್ಯಾಯಾಮ ಹಾಗೂ ಯೋಗವನ್ನು ಪ್ರತಿನಿತ್ಯ ಮಾಡುತ್ತ ಬಂದಲ್ಲಿ ಬೆನ್ನಿನ ಮಾಂಸಖಂಡಗಳಿಗೆ ರಕ್ತಸಂಚಾರ ಸರಿಯಾಗಿ ನೋವು ಕಡಿಮೆಯಾಗಲು ಸಹಾಯಕವಾಗುತ್ತದೆ.

ಜೊತೆಯಲ್ಲಿ ಪ್ರಕೃತಿ ಚಿಕಿತ್ಸೆಗಳು ಬೆನ್ನುನೋವನ್ನು ಕಡಿಮೆ ಮಾಡಲು ಸಹಕಾರಿ. ನಿಸರ್ಗ ಚಿಕಿತ್ಸೆಗಳಾದ ಅಕ್ಯುಪ್ರೆಷರ್, ಕಟಿಸ್ನಾನ, ಬೆನ್ನು ಹುರಿಸ್ನಾನ, ಸ್ಪೈನಲ್ ಸ್ನಾನ, ಉಗಿ ಸ್ನಾನ, ಅಂಡರ್ ವಾಟರ್ ಮಸಾಜ್, ಹೈಡ್ರೋ ಥೆರಪಿ, ಆಯಸ್ಕಾಂತ ಚಿಕತ್ಸೆ, ಫಿಸಿಯೊಥೆರಪಿ ಇಲೆಕ್ಟ್ರೋಥೆರಪಿ, ಬೆಳಕಿನ ಚಿಕಿತ್ಸೆ, ಸೂಜಿ ಚಿಕಿತ್ಸೆ, ಮುಂತಾದ ಚಿಕಿತ್ಸೆಗಳು ಬೆನ್ನುನೋವು ಕಡಿಮೆಯಾಗಲು ಸಹಾಯಕವಾಗುವುದು.

ಕ್ಯಾಲ್ಸಿಯಂಯುಕ್ತ ಆಹಾರ ಸೇವನೆ ಅತ್ಯಗತ್ಯ. ಹಾಲು, ಹಸಿರುಸೊಪ್ಪುಗಳು, ತರಕಾರಿಗಳು, ನಟ್ಸ್ ಗಳು, ಹಣ್ಣುಗಳನ್ನು ಹೆಚ್ಚು ಸೇವಿಸಬೇಕು. ಜೀವಸತ್ವ ವಿಟಮಿನ್ ಡಿ ಸಾಕಷ್ಟು ಸಿಗಲು ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ 30 ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ಮೈ ಒಡ್ಡುವುದೊಳಿತು. ಇದರಿಂದಾಗಿ ವಿಟಮಿನ್ ಡಿ ಸಹಾಯದಿಂದ ದೇಹದಲ್ಲೆಲ್ಲ ಕ್ಯಾಲ್ಸಿಯಂ ಅಂಶ ಸರಿಯಾಗಿ ಸಂಚಾರವಾಗಿ ಮಾಂಸಖಂಡಗಳು ಸದೃಢವಾಗಿ ನೋವು ನಿವಾರಣೆಯಾಗುತ್ತದೆ. ನೋವಿರುವ ಸ್ಥಳಕ್ಕೆ, ಎಣ್ಣೆ ಹಾಕಿ ಮಾಲಿಶ್ ಮಾಡಿದಾಗ ಕೆಲವೊಮ್ಮೆ ನೋವು ಹೆಚ್ಚಾಗಬಹುದು. ಬದಲಿಗೆ ನೋವು ನಿವಾರಣೆಯ ಯಾವುದೇ ತೈಲವನ್ನು ಹಚ್ಚಿ ಬಿಸಿನೀರಿನ ಬ್ಯಾಗ್​ನ್ನು ಅದರ ಮೇಲಿಡುವುದು.

ಆದ್ದರಿಂದ ವ್ಯಾಯಾಮ, ಚಿಕಿತ್ಸೆ, ಆಹಾರ ಈ ಮೂರರ ಮಿಳಿತದಿಂದಾಗಿ ನೋವಿರುವ ಭಾಗಕ್ಕೆ ರಕ್ತಸಂಚಾರ ಸರಿಯಾಗಿ ಆಗಿ ನೋವು ಕಡಿಮೆಯಾಗಲು ಸಹಾಯಕವಾಗುವುದು. ಜೊತೆಯಲ್ಲಿ ಪ್ರಕೃತಿದತ್ತವಾದ ಈ ವ್ಯವಸ್ಥೆಯಿಂದಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಸುಲಭವಾಗಿ ನೋವನ್ನು ಕಡಿಮೆಮಾಡಿಕೊಳ್ಳಬಹುದು.

ಕೊನೇ ಹನಿ

ಒಂದು ಲೋಟ ಜೀರಿಗೆ ಕಷಾಯಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಪಿತ್ತದೋಷ ನಿವಾರಣೆಯಾಗುತ್ತದೆ.

💥ತಮೋಹಾರಿ ಗುರುತತ್ವ💥

💥ತಮೋಹಾರಿ ಗುರುತತ್ವ💥


ವರ್ತಮಾನದ ಕ್ಷಣವು ಒಂದು ಉದ್ದನೆಯ ರೇಖೆಯಲ್ಲ. ಅದು ಗೋಳಾಕಾರವಾದದ್ದು. ಅದು ಅಗಲವಾಗಿಯೂ ಇದೆ ಮತ್ತು ಆಳವಗಿಯೂ ಇದೆ. ವರ್ತಮಾನದ ಕ್ಷ ಣಕ್ಕೆ ಅನಂತವಾದ ಆಯಾಮಗಳಿವೆ. ಧ್ಯಾನದೊಳಗೆ ಆಳವಾಗಿ ಹೊಕ್ಕಾಗ, ಅದನ್ನು ಅನುಭವಿಸಿದಾಗ, ಎಲ್ಲವೂ ಈ ಕ್ಷ ಣದಲ್ಲೇ ಇದೆಯೆಂದು ತಿಳಿದುಕೊಳ್ಳುತ್ತೀರಿ. ಮೌನದ ಆಳ, ದೃಷ್ಟಿಕೋನದ ಆಳ, ಕನಸುಗಳು, ಇತ್ಯಾದಿಯೆಲ್ಲವೂ ಇಲ್ಲಿವೆ ಮತ್ತು ಈಗಿವೆ, ವರ್ತಮಾನದ ಕ್ಷ ಣದಲ್ಲಿವೆ. ನಮ್ಮ ಚೈತನ್ಯವು ಅಷ್ಟು ಆಳವಾಗಿದೆ, ವಿಶಾಲವಾಗಿದೆ. ''ಅಂತರಾತ್ಮನೆ ಗುರುವೆ'' ಎಂಬ ಹಾಡೊಂದನ್ನು ಭಕ್ತರೊಬ್ಬರು ರಚಿಸಿದ್ದಾರೆ. ಇದರ ಅರ್ಥ, ಗುರುತತ್ವ ನಮ್ಮ ಅಂತರಾಳದಲ್ಲಿದೆಯೆಂದು. ನಂತರ, 'ಆತ್ಮತಮೋಹಾರಿ', ಎಂದರೆ ಆತ್ಮದ ಮೇಲಿರುವ ಅಜ್ಞಾನದ, ಪರದೆಯನ್ನು ತೆಗೆಯುವ ತತ್ವ, 'ಓ ಗುರುವೆ, ವರ್ತಮಾನದ ಕ್ಷ ಣದಲ್ಲಿ, ನನ್ನ ಆತ್ಮದಲ್ಲಿರುವೆ' ಎಂದು ಅರಿಯುವುದು. ಗುರುತತ್ವ ಏನು ಮಾಡುತ್ತದೆ ? ಆತ್ಮದ ಕತ್ತಲೆಯನ್ನು ಗುರುತತ್ವವು ನೀಗಿಸುತ್ತದೆ. ''ನನ್ನಲಿ ಅನೇಕ ಭಾವನೆಗಳೂ ಏಳುತ್ತಿವೆ. ಭಾವನೆಗಳೆಂಬ ಕಾಡು ನನ್ನಲ್ಲಿದೆ. ಇದು ಬಹಳ ಕ್ಲಿಷ್ಟವಾಗಿದೆ, ಕಷ್ಟಕರವಗಿದೆ. ಈ ಕ್ಲಿಷ್ಟಕರವಾದ ಭಾವನೆಗಳೆಂಬ ಕಾಡಿನ ನಡುವೆ ನನ್ನನ್ನು ಹೇಗೆ ಮುಂದಕ್ಕೆ ನಡೆಸುತ್ತಿರುವೆ,''ಎಂದು ಓರ್ವ ಕವಿ ಬರೆದಿದ್ದಾರೆ. ಆ ಕವಿ ಇದನ್ನು ಬರೆದಾಗ, ಒಂದು ಆಳವಾದ ಅನುಭವ ಅವರಿಗೆ ಆಗಿರಬೇಕು. ಅದರಲ್ಲೂ ಶಿಕ್ಷಿತರಾದ, ತಾರ್ಕಿಕವಾದ ಒಂದು ವ್ಯಕ್ತಿಗೆ ಇದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇನೂ ಸುಲಭದ ವಿಷಯವಲ್ಲ. ಇಂತಹವರ ಮನಸ್ಸು ಮಾತ್ರವಲ್ಲದೆ, ಅವರ ಹೃದಯವೂ ಹಾಗೆಯೇ ಇರುತ್ತದೆ. ಭಾವನೆಗಳು ಬಹಳ ಗೊಂದಲಮಯವಾಗಿರುತ್ತವೆ, ಕೋಲಾಹಲವನ್ನು ಸೃಷ್ಟಿಸುತ್ತವೆ. ಆದರೆ ಕವಿಗಳು, 'ಓ ಗುರುವೆ ! ಈ ಕ್ಲಿಷ್ಟವಾದ ಕಾಡಿನೊಳಗೆ ನನ್ನನ್ನು ನಡೆಸುತ್ತಿರುವೆ. ಮನಸ್ಸಿನಲ್ಲಿರುವ ಭಾವನೆಗಳೆಂಬ ಗಾಢವಾದ, ಕತ್ತಲಾದ ಕಾಡಿನೊಳಗೆ ನೀನು ಬೆಳಕಿನ ಆಶಾಕಿರಣವಾಗಿರುವೆ' ಎಂದು ಸುಂದರವಾದ ಪದ್ಯವನ್ನು ಬರೆದಿದ್ದಾರೆ. ಮುಂದಿನ ಸಾಲಿನಲ್ಲಿ ಕವಿಗಳು, ''ಅನೇಕ ಲಕ್ಷ ಜನ್ಮಗಳು ಕಳೆದು ಹೋದವು ಮತ್ತು ಅನೇಕ, ಅನಂತ ಸಂಸ್ಕಾರಗಳು ತುಂಬಿ ಹೋಗಿವೆ, ಆದರೆ ನಿನ್ನ ಅಚ್ಚು ಮಾತ್ರ ಬಹಳ ಘನವಾದದ್ದು ಮತ್ತು ಆಳವಾದದ್ದು ಗುರುವೆ ! ನಿನ್ನ ಸಂಸ್ಕಾರವೇ ನನ್ನ ಆತ್ಮದ ಮೇಲೆ ಅತೀ ಗಹನವಾದ ಸಂಸ್ಕಾರವಾಗಿದೆ, ಏಕೆಂದರೆ ಈ ಸಂಸ್ಕಾರದಿಂದಾಗಿ ಇತರ ಎಲ್ಲಾ ಸಂಸ್ಕಾರಗಳೂ ಕರಗಿ ಹೋಗುತ್ತಿವೆ. ಆದ್ದರಿಂದ ನಿನ್ನ ಸಂಸ್ಕಾರವೇ ಪರಮಚರಮ. ಅದು ಎಲ್ಲದ್ದಕ್ಕಿಂತಲೂ ಉನ್ನತವಾದದು ಮತ್ತು ಅಂತಿಮವಾದದ್ದೂ,''ಎನ್ನುತ್ತಾರೆ. ಅದು ಎಲ್ಲದ್ದಕ್ಕಿಂತಲೂ ಅಂತಿಮವಾದ ಸಂಸ್ಕಾರ. ಅನೇಕ ಪಾದಗಳ ಕುರುಹು ಇರಬಹುದಾದರೂ ಒಂದು ಆನೆ ನಡೆದಾಗ, ಅದರ ಪಾದಗಳ ಕುರುಹು ಇತರ ಎಲ್ಲಾ ಪ್ರಾಣಿಗಳ ಕುರುಹನ್ನೂ ಅಳಿಸಿಬಿಡುತ್ತದೆ. 'ಸರ್ವೆ ಪದಾಃ ಹಸ್ತಿ ಪದೇಃ ನಿಮಗ್ನ' ಅದು ಹುಲಿಯ, ಸಿಂಹದ ಕುರುಹೇ ಆಗಿರಬಹುದು. ಇತರ ಎಲ್ಲಾ ಪಾದಗಳ ಕುರುಹೂ ಅಳಿಸಿ ಹೋಗುತ್ತವೆ. ಆನೆಯ ಪಾದದ ಕುರುಹು ಗುಂಡಾಗಿರುತ್ತದೆ ಮತ್ತು ದೊಡ್ಡ ಗಾತ್ರವನ್ನು ಹೊಂದಿರುತ್ತದೆ. ಇತರ ಯಾವುದೇ ಪ್ರಾಣಿಗೆ ಅಷ್ಟು ದೊಡ್ಡ ಪಾದದ ಕುರುಹು ಇಲ್ಲ. ಗುರುಗಳ ಸಂಸ್ಕಾರವೂ ಹಾಗೆಯೆ. ಮನಸ್ಸಿನ ಮೇಲೆ ಗುರುಗಳ ಸಂಸ್ಕಾರ ಬಂದಾಗ ಇತರ ಎಲ್ಲಾ ಸಂಸ್ಕಾರಗಳೂ ಹೊರಟು ಹೋಗುತ್ತವೆ. ಕವಿಗಳು ಹಾಗೆಯೇ ಮುಂದುವರಿಸುತ್ತಾ, 'ಜೀವನವು ಪೂರ್ಣವಾಗಿ ಸಕಾರಾತ್ಮಕವಾದ ಮತ್ತು ನಕಾರಾತ್ಮಕವಾದ ಅಂಶಗಳಿಂದ ತುಂಬಿದೆ, ಪಾಪ ಪುಣ್ಯಗಳಿಂದ ತುಂಬಿದೆ. ಎಲ್ಲವೂ ದೈವದ ಲೀಲೆ' ಎನ್ನುತ್ತಾರೆ.

 * ಶ್ರೀ ಶ್ರೀ ರವಿಶಂಕರ್‌ ಗುರೂಜಿ

🔹✨🔹✨🔹✨🔹✨🔹

Lay man's Thinking

*Lay man's Thinking*

An engineer in a car manufacturing company designs a world class car.
The owner is impressed with the outcome and praised him a lot.
While trying to bring out the car from the manufacturing area to the office they realised that the car is few inches taller than the entrance.
The engineer felt bad that he didn't noticed this one before creating the car.
The owner was amazed on how to take it outside of the manufacturing area.
The painter said that they can bring out the car and there will be few scratches on top of the car that he will do the tinkering later on.
The engineer said that they can break the entrance and after taking the car out, they can cement it.
The owner was not convinced with any ideas and felt like it is a bad sign to break or scratch.

*The watchman* was watching all these drama and slowly approached the owner.
He wanted to give an idea if they have no problem.
They thought what this guy would tell them that the experts could not give.

Watchman said that *The car is only few inches taller than the entrance so if they release the AIR in the tyre, the height of the car will be adjusted and can be easily taken out.*

Everyone clapped their hands for him.

*LESSON :*
```Don't encounter problems from the expert point of view.
There is always a``` *LAYMAN point* ```that will attract the masses...``.

```So please be a layman ...!!!```

🔹✨🔹✨🔹✨🔹✨🔹

ಆಯ್ಕೆ ರಹಿತತೆಯೇ ಪರಮಾನಂದ [OSHO]

✨✨✨✨✨✨✨✨✨

ಆಯ್ಕೆ ರಹಿತತೆಯೇ ಪರಮಾನಂದ [OSHO]



ನೀವು ಯಾವುದಕ್ಕಾದರೂ ಅಂಟಿ ಕೊಳ್ಳುವುದರ ಅರ್ಥ ಅದರಲ್ಲಿ ನೀನು ಜೀವ ಇಟ್ಟಿದ್ದೀಯ ಎಂದು . ನಿನ್ನ ಅಂಟಿ ಕೊಳ್ಳುವಿಕೆ ಅಸ್ತಿತ್ವದ ಚಕ್ರ ಸುತ್ತುವುದನ್ನು ನಿಲ್ಲಿಸಲಾರದು . ಅದು ಸುತ್ತುತ್ತಲೇ ಇರುತ್ತದೆ . ಆಗ ನೀನು ವಿರುದ್ಧದಲ್ಲಿ ಬೀಳಲೇ ಬೇಕಾಗುತ್ತದೆ . ಆದ್ದರಿಂದ ಅಲ್ಲಿ ದುಃಖ ಮತ್ತು ವೇದನೆ ಇರುತ್ತದೆ ಅಸ್ತಿತ್ವವು ತಿಳಿದೂ ತಿಳಿದೂ ನಿಮ್ಮ ಪ್ರೇಮ ಆನಂದ , ಸಂತೋಷದ ಅನುಭೂತಿಗಳನ್ನು ನಾಶ ಮಾಡಿತೇನೋ ಎಂಬಂತೆ .




     ಅಸ್ತಿತ್ವ ಏನೂ ಮಾಡಿಲ್ಲ . ನಿಮ್ಮ ಜೀವನದಲ್ಲಿ ಏನೇ ಆಗುತ್ತಿದ್ದರೂ ಅದಕ್ಕೆ ಕೇವಲ ನೀವೇ ಹೊಣೆ ಗಾರರು . ನೀವು ಅಂಟಿ ಕೊಳ್ಳದೇ ಇದ್ದಿದ್ದರೆ ವರ್ತುಲವು ಸುತ್ತುತ್ತಿತ್ತು . ಅಂಟಿಕೊಳ್ಳದೆ ನೀವು ಆನಂದಿಸಬಹುದಿತ್ತು . ಅದು ಹೊರಟು ಹೋದಾಗಲೂ ನೀವು ಅನಂದಿಸುತ್ತಲೇ ಇರುತ್ತಿದ್ದಿರಿ


     ಇದು ಸ್ವಲ್ಪ ಸೂಕ್ಷ್ಮವಾದುದು ನೀವು ಸಂತಸದ ಕ್ಷಣವನ್ನು ಆನಂದಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ ಅದು ಎಷ್ಟೇ ಆನಂದಕರವಾಗಿದ್ದರೂ ಸ್ವಲ್ಪ ಸಮಯದ ನಂತರ ಅದು ದಣಿಸುವುದು . ಇಪ್ಪತ್ನಾಲ್ಕು ಘಂಟೆಗಳೂ ನೀವು ಆನಂದಿತರಾಗಿರಲು ಸಾಧ್ಯವಿಲ್ಲ ನೀವು ಬಳಲಿ ಸುಸ್ತಾಗುವಿರಿ . ಪ್ರೇಮಕ್ಕೂ  ಅದರದ್ದೇ ಆದ ಮಿತಿ ಇದೆ .


     ಕ್ಷಣ ಮಾತ್ರಕ್ಕೆ ಏನೋ ಒಂದು ಮಹತ್ವದ್ದಾಗಬಹುದು . ನೀವು  ಚುಂಬಿಸುವಿರಿ . ಅದೇ ನೀವು ಒಂದು ಘಂಟೆ ಎರಡು ಘಂಟೆ ಮೂರು ಘಂಟೆ ಕಾಲ ಆ ವ್ಯಕ್ತಿಯನ್ನು   ನಿರಂತರವಾಗಿ ಚುಂಬಿಸುತ್ತಲೇ ಇದ್ದಲ್ಲಿ , ಸಮಯ  ಹೆಚ್ಚಾದಂತೆ ನಿಮ್ಮ ಚುಂಬನದ ಆನಂದ ಹೆಚ್ಚುತ್ತಾ ಹೋಗುವುದೇನು ? ಇಲ್ಲಾ ಅದು ಕ್ಷೀಣಿಸುತ್ತಾ ಹೋಗುತ್ತದೆ . ಸಮಯ ಹೆಚ್ಚಾದಂತೆ ಸಂತೋಷ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ಒಂದು ಹಂತದಲ್ಲಿ ಅದ ಅಸಹ್ಯಕರ ಆಗುತ್ತದೆ .


     ಆನಂದವನ್ನು ನೀವು ಅದು ಯಾವಾಗಲೂ ಇರಬೇಕು ಎಂದು ಆಲೋಚಿಸದೆ ಆನಂದಿಸಿದಲ್ಲಿ , ಆಗ ಯಾವ ಸಮಸ್ಯೆಯೂ ಇರುವುದಿಲ್ಲ ಸಂತೋಷ ಬಂದಾಗ ಆನಂದಿಸಿ ಅದು ಹೋದಾಗ ಹೋಯಿತೆಂದು ಆನಂದಿಸಿ ಏಕೆಂದರೆ ಅದು ಶಾಶ್ವತವಾಗಿ ಇದ್ದುಬಿಟ್ಟರೆ ಅದು ಆನಂದವಾಗಿರುವುದಿಲ್ಲ ಅದು ಯಾತನೆ ಯಾಗಿಬಿಡುತ್ತದೆ .


     ಅಸ್ತಿತ್ವ ನಿಮಗಿಂತಲೂ ಹೆಚ್ಚು ವಿವೇಕಿ .  ಮಹತ್ವ ವನ್ನು ಕಳೆದುಕೊಳ್ಳುವುದಕ್ಕೂ ಮುಂಚೆಯೇ ಅಸ್ತಿತ್ವ ಅವನ್ನು ನಿಮ್ಮಿಂದ ದೂರ ಮಾಡಿಬಿಡುತ್ತದೆ . ಸುಂದರ  ಆಗಬೇಕು ಎನ್ನುವುದು ಒಳ್ಳೆಯದೇ ಆದರೆ ಅವುಗಳ ನಡುವೆ ಅಂತರ ಇರಬೇಕು. ವಿರಾಮ  ಇರಬೇಕು  . ನಿಮಗೆ ಪ್ರೆಮದಿಂದಲೂ ವಿಶ್ರಾಂತಿ ಇರಬೇಕು ಆನಂದದಿಂದಲೂ ವಿಶ್ರಾಂತಿ ಬೇಕಾಗುತ್ತದೆ . ಎಲ್ಲದರಿಂದಲೂ ವಿಶ್ರಾಂತಿ ಬೇಕಾಗುತ್ತದೆ ಆ ವಿಶ್ರಾಂತಿ ನಿಮ್ಮ ಸಂತೋಷಕ್ಕೆ ವಿರುದ್ಧವಾದುದು ಎಂದು ಪರಿಗಣಿಸಬೇಡಿ . ನಿಜವಾಗಿ ಅವು ನಿಮ್ಮ ಪರವಾದುದೇ  ಅದು ಮತ್ತೆ  ಪುನಃ ಅದನ್ನು ಹೊಂದುವ  ಸಂಭವ್ಯತೆಗೆ ಭೂಮಿಕೆಯನ್ನು ಸೃಷ್ಟಿಸುತ್ತದೆ .


     ಏನೇ ಬರಲಿ ಅದನ್ನು ಆನಂದಿಸಿ . ಅದು ಹೋಗುತ್ತದೆ . ಮತ್ತೇನೋ ಬರುತ್ತದೆ ಅದನ್ನೂ ಆನಂದಿಸಿ . ಹಗಲು ಸುಂದರ ಮತ್ತು ರಾತ್ರಿಗೂ  ಸುಂದರತೆ ಇದೆ ಎರಡನ್ನೂ ಆನಂದಿಸಬಾರದೇಕೆ ? ಆ ಎರಡನ್ನೂ ನೀವು ಆನಂದಿಸಲು ಆಗುವುದು ಕೇವಲ ನೀವು ಒಂದಕ್ಕೆ ಅಂಟಿ ಕೊಳ್ಳದಿದ್ದಾಗ   ಮಾತ್ರ . ಆದ್ದರಿಂದ ಆಯ್ಕೆ ರಹಿತ ವ್ಯಕ್ತಿ ಮಾತ್ರ ಜೀವನದ ಸಂಪೂರ್ಣ ಸಾರವನ್ನು ಹಿಂದಿ ಪಡೆದುಕೊಳ್ಳುವನು . ಇದುವೇ ಜೀವಿಸುವ ಕಲೆಯಾಗಿದೆ . ಆನಂದಿಸುವ ಮಾರ್ಗವನ್ನು ಕಂಡುಕೊಳ್ಳುವುದು  . ಆದರೆ ಮೂಲ ಭೂತ ಷರತ್ತನ್ನು ನೆನಪಿಟ್ಟುಕೊಳ್ಳಬೇಕು ಆಯ್ಕೆ ರಹಿತರಾಗಿರುವುದು . ಅದು ನಿಮಗೆ ಸಾಧ್ಯವಾಗುವುದು ನೀವು ಜಾಗೃತಿ ಅರಿವು ಎಚ್ಚರ ವಾಗಿದ್ದಾಗ  ಮಾತ್ರ . ಇಲ್ಲವಾದಲ್ಲಿ ನೇವು ಆಯ್ಕೆಯೊಳಗೆ ಬೀಳುವಿರಿ .


     ಜೀವನ ನಿಶ್ಚಿತವಾಗಿ  ಒಂದು ಕಲೆ  , ಎಲ್ಲಕ್ಕಿಂತ ಮಿಗಿಲಾದ ಕಲೆ . ಅತಿ ಚಿಕ್ಕ ಸೂತ್ರ ಎಂದರೆ ಆಯ್ಕೆ ರಹಿತ ಅರಿವು . ಇದು ಎಲ್ಲ ಪರಿಸ್ಥಿತಿಗಳಿಗೂ ಎಲ್ಲ ಸಮಸ್ಯೆಗಳಿಗೂ ಅನ್ವಯಿಸುತ್ತದೆ .  

✨✨✨✨✨✨✨✨✨