Sunday, 24 December 2017

ಅಂತರ್ಜಾತಿ ವಿವಾಹಿತ ದಂಪತಿಗೆ ಪ್ರೋತ್ಸಾಹ ಧನ

🔹🔹🔹🔹🔹🔹🔹🔹🔹🔹🔹

ಅಂತರ್ಜಾತಿ ವಿವಾಹಿತ ದಂಪತಿಗೆ ಪ್ರೋತ್ಸಾಹ ಧನ

ವಿಜಯವಾಣಿ ಸುದ್ದಿಜಾಲ

ನಿರೂಪಣೆ: ಭಾಗ್ಯಚಿಕ್ಕಣ್ಣ ಬೆಂಗಳೂರು

ರಾಜ್ಯ ಸರ್ಕಾರ ಅಸ್ಪೃಯತೆ ನಿವಾರಣೆ ಮಾಡಲು ವಿವಿಧ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಅದರಲ್ಲಿ ಅಂತರ್ಜಾತಿ ವಿವಾಹಕ್ಕೆ ಪೋ›ತ್ಸಾಹಧನ ನೀಡುತ್ತಿರುವುದು ಒಂದು ಪ್ರಮುಖ ಯೋಜನೆಯಾಗಿದೆ.

*ಏನಿದು ಯೋಜನೆ?*

ಪರಿಶಿಷ್ಟ ಜಾತಿಯ ಪುರುಷ ಅನ್ಯ ಜಾತಿಯ ಹಿಂದು ಧರ್ಮದ ಯುವತಿಯನ್ನು ವಿವಾಹವಾದಲ್ಲಿ ಅಂತಹ ದಂಪತಿಗಳಿಗೆ 2,00,000 ರೂ. ಪೋ›ತ್ಸಾಹಧನ ಹಾಗೂ ಪರಿಶಿಷ್ಟ ಜಾತಿಯ ಸ್ತ್ರೀಯರು ಅನ್ಯ ಜಾತಿಯ ಹಿಂದೂ ಧರ್ಮದ ಪುರುಷನನ್ನು ವಿವಾಹವಾದಲ್ಲಿ 3,00,000 ರೂ. ಪೋ›ತ್ಸಾಹಧನ ನೀಡಲಾಗುತ್ತದೆ.

*ಕಾರ್ಯಾಚರಣೆ ಹೇಗೆ?*

ಸಹಾಯಕ ನಿರ್ದೇಶಕರು ಗ್ರೇಡ್ -1 ಅರ್ಜಿದಾರರ ಅರ್ಜಿಯನ್ನು ತನಿಖೆ ಮಾಡಿ ಪರಿಗಣಿಸಿದ ನಂತರ ಅರ್ಜಿ ಮತ್ತು ತನಿಖಾ ವರದಿಯನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಒಪ್ಪಿಗೆ ನೀಡಬೇಕು. ಕಾನೂನು ಬದ್ಧವಾಗಿ ಸ್ವೀಕರಿಸಿದ ಅರ್ಜಿಯನ್ನು ಗ್ರೇಡ್ -1 ಸಹಾಯಕ ನಿರ್ದೇಶಕರು ದಂಪತಿಯನ್ನು ನೋಡಿ ಸಹಾಯ ಧನ ನೀಡಲು ತೀರ್ವನಿಸುತ್ತಾರೆ.

*ಅರ್ಹತೆಗಳೇನು?*

# ಅಂತರ್ಜಾತಿ ವಿವಾಹವಾಗುವ ದಂಪತಿಯಲ್ಲಿ ಒಬ್ಬರು ಪರಿಶಿಷ್ಟ ಜಾತಿಯವರಾಗಿದ್ದು, ಸವರ್ಣೀಯರನ್ನು ವಿವಾಹವಾಗಿರಬೇಕು.

# ವಾರ್ಷಿಕ ಆದಾಯ 50,000 ರೂ. ಮೀರಿರಬಾರದು.

# ಈ ಯೋಜನೆಗೆ ಒಳಪಡುವ ದಂಪತಿ ಕಾನೂನು ಪ್ರಕಾರ ಸಬ್ ರಿಜಿಸ್ಟ್ರಾರ್ ಆಫೀಸ್​ನಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡ ದೃಢೀಕರಣ ಪತ್ರ ಹೊಂದಿರಬೇಕು.

# ಅವನು/ಅವಳಿಗೆ 2ನೇ ಮದುವೆಯಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

*ಕೇಂದ್ರ-ರಾಜ್ಯ ಜಂಟಿ ಯೋಜನೆ*

ಈ ಕಾರ್ಯಕ್ರಮ ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು 50:50 ಅನುಪಾತದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಪೋ›ತ್ಸಾಹಧನ ಭರಿಸಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ 50:50 ಅನುಪಾತದಲ್ಲಿ ಸಮಾನವಾದ ವೆಚ್ಚ ಭರಿಸುತ್ತಿದೆ.

*ದಾಖಲಾತಿಗಳು*

ಸಬ್ ರಿಜಿಸ್ಟ್ರಾರ್ ಆಫೀಸ್​ನಲ್ಲಿ ನೋಂದಾಯಿಸಿದ ದೃಢೀಕೃತ ವಿವಾಹ ಪ್ರಮಾಣ ಪತ್ರ.

ದಂಪತಿಯ ಪ್ರತ್ಯೇಕವಾದ ವಾರ್ಷಿಕ ಆದಾಯ ಪ್ರಮಾಣ ಪತ್ರ.

ಸಂಬಂಧಪಟ್ಟ ಪ್ರಾಧಿಕಾರದ ವತಿಯಿಂದ ಹೊರಡಿಸಲಾದ ಜಾತಿ ಪ್ರಮಾಣ ಪತ್ರ (ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ).

*ವಿವಾಹವಾದ ದಂಪತಿಗಳ ಜೋಡಿ ಫೋಟೋ.*

ಸಂಬಂಧಪಟ್ಟ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ವಾಸಸ್ಥಳದ ಪ್ರಮಾಣ ಪತ್ರ.

*ಕಾಲಾವಧಿ ಎಷ್ಟು ?*

ಅರ್ಜಿ ಸ್ವೀಕರಿಸಿದ ಒಂದು ತಿಂಗಳೊಳಗೆ

*ಮುಂದಿನ ವರ್ಷಕ್ಕೆ ಪರಿಗಣನೆ*

ಪ್ರತಿ ಬಜೆಟ್​ನಲ್ಲೂ ಈ ಯೋಜನೆಗಾಗಿ ಒಂದು ಮೊತ್ತವನ್ನು ಮೀಸಲಿಡಲಾಗುತ್ತಿದೆ. ಯೋಜನೆಯನ್ನು ಪಡೆಯ ಬಯಸುವ ಫಲಾನುಭವಿಗಳ ಸಂಖ್ಯೆ ಹೆಚ್ಚಿದ್ದರೆ ಅದನ್ನು ಮುಂದಿನ ವರ್ಷಕ್ಕೆ ಪರಿಗಣಿಸಿ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗುತ್ತದೆ.

ಒಂದು ವೇಳೆ ಅನುಷ್ಠಾನಾಧಿಕಾರಿಗಳು ವಿಳಂಬ ಮಾಡಿದರೆ ಈ ಕೆಳಕಂಡ ಮೇಲಧಿಕಾರಿಗಳನ್ನು ಸಂರ್ಪಸಬಹುದು. ಸಂಬಂಧಿಸಿದ ಜಿಲ್ಲೆಗಳ ಜಂಟಿ/ಉಪ ನಿರ್ದೇಶಕರು. ಸಂಬಂಧಿಸಿದ ಜಿಲ್ಲೆಗಳ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಆಯುಕ್ತರು, ಬೆಂಗಳೂರು.

*ಮಾಹಿತಿಗೆ*

ಸಮಾಜ ಕಲ್ಯಾಣ ಇಲಾಖೆ 5ನೇ ಮಹಡಿ, ಎಂಎಸ್ ಬಿಲ್ಡಿಂಗ್, ಅಂಬೇಡ್ಕರ್ ರಸ್ತೆ, ಬೆಂಗಳೂರು – 560001.

ಆಯುಕ್ತರು, ದೂ.ಸಂ :080-22253783, ಇಮೇಲ್: comr.sw@gmail.com

No comments:

Post a Comment