*ಹದಿನೈದು ವರ್ಷಗಳ ಸ್ವಯಂಚಾಲಿತ ಮುಂಬಡ್ತಿ ನಿಯಮಗಳು 1991*
| ಲ. ರಾಘವೇಂದ್ರ
ರಾಜ್ಯವೇತನ ಶ್ರೇಣಿಯ ಮೊದಲ (15) ಹದಿನೈದು ವೇತನ ಶ್ರೇಣಿ ಹುದ್ದೆಗಳಲ್ಲಿ ಉನ್ನತ ಹುದ್ದೆಗೆ ಮುಂಬಡ್ತಿ ಪಡೆಯಲು ಅರ್ಹತೆ ಇದ್ದು ಅಥವಾ ಮುಂಬಡ್ತಿಗೆ ಅವಕಾಶವೇ ಇಲ್ಲದೆ 15 (ಹದಿನೈದು) ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ, ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಸರ್ಕಾರವು ‘ಸ್ವಯಂಚಾಲಿತ ಮುಂಬಡ್ತಿ’ ಯೋಜನೆಯನ್ನು 1991ರ ಜೂನ್ 1ರಿಂದ ಜಾರಿಗೆ ತಂದಿದೆ. ಯೋಜನೆಯ ಸೌಲಭ್ಯವು ಉದ್ಯೋಗಿಯ ಸೇವಾ ಅವಧಿಯಲ್ಲಿ ಒಂದು ಬಾರಿ ಮಾತ್ರ ದೊರೆಯುತ್ತದೆ.
‘ಸ್ವಯಂಚಾಲಿತ ಮುಂಬಡ್ತಿ’ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ವಿಧಿವಿಧಾನಗಳನ್ನು ಆದೇಶ ಸಂಖ್ಯೆ ಎಫ್ಡಿ 25 ಎಸ್ಆರ್ಪಿ 91 ದಿನಾಂಕ 29-10-1991ರಲ್ಲಿ ವಿವರಿಸಿದೆ. ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಉಂಟಾದ ಸಮಸ್ಯೆಗಳ ನಿವಾರಣೆಗೆ ರಾಜ್ಯ ಸರ್ಕಾರ ವಿವರಗಳನ್ನು ಹಾಗೂ ಸ್ಪಷ್ಟೀಕರಣಗಳನ್ನು ಕಾಲಕಾಲಕ್ಕೆ ಆದೇಶ ಸುತ್ತೋಲೆ, ಅಧಿಕೃತ ಜ್ಞಾಪನಾ ಪತ್ರಗಳಲ್ಲಿ ನೀಡಿದೆ.
ಮೊದಲ (15) ಹದಿನೈದು ವೇತನ ಶ್ರೇಣಿಗಳ ಹುದ್ದೆಗಳಲ್ಲಿ ಅಥವಾ ಆ ವೇತನ ಶ್ರೇಣಿಗಳಿಗೆ ನಿಗದಿಪಡಿಸಿರುವ ಆಯ್ಕೆ ಕಾಲಿಕ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ಉದ್ಯೋಗಿಗಳಿಗೆ ‘ಸ್ವಯಂ ಚಾಲಿತ ಮುಂಬಡ್ತಿ’ ನೀಡಿ ಕರ್ನಾಟಕ ನಾಗರಿಕ ಸೇವಾ ನಿಯಮ 42(ಬಿ) ಅನ್ವಯ ‘ಹಿರಿಯ ವೇತನ ಶ್ರೇಣಿ’ಯಲ್ಲಿ ವೇತನ ನಿಗದಿಪಡಿಸಬಹುದು. ‘ಆಯ್ಕೆ ಕಾಲಿಕ ವೇತನ ಶ್ರೇಣಿ’ಯ ಮುಂಬರುವ ವೇತನ ಶ್ರೇಣಿಯನ್ನು ಹಿರಿಯ ವೇತನ ಶ್ರೇಣಿ ಎಂದು ಪರಿಗಣಿಸಲಾಗಿದೆ.
ಒಂದು ಹುದ್ದೆಗೆ ನಿಗದಿಪಡಿಸಿರುವ ‘ಆಯ್ಕೆ ಕಾಲಿಕ ವೇತನ ಶ್ರೇಣಿ’, ವೃಂದ ಮತ್ತು ನೇಮಕಾತಿ ನಿಯಮಗಳಂತೆ ಉನ್ನತ ಹುದ್ದೆಯ ವೇತನ ಶ್ರೇಣಿಗಳು ಒಂದೇ ಆಗಿದ್ದಲ್ಲಿ, ಪದೋನ್ನತಿ ಹುದ್ದೆಯ ವೇತನ ಶ್ರೇಣಿಯನ್ನೇ ‘ಹಿರಿಯ ವೇತನ ಶ್ರೇಣಿ’ ಎಂದು ಪರಿಗಣಿಸಲ್ಪಡುವುದು. ಅಂದರೆ, ‘ಸ್ವಯಂಚಾಲಿತ ಮುಂಬಡ್ತಿ’ ಯೋಜನೆಯಡಿಯಲ್ಲಿ ವೇತನ ನಿಗದಿಯು, ಯಾವುದೇ ಕಾರಣಕ್ಕೂ ಪದೋನ್ನತಿ ಹುದ್ದೆಯ ವೇತನ ಶ್ರೇಣಿಯ ಮುಂದಿನ ವೇತನ ಶ್ರೇಣಿಯಲ್ಲಿ ಆಗಬಾರದು.
✨✨✨✨✨✨✨✨✨✨✨
| ಲ. ರಾಘವೇಂದ್ರ
ರಾಜ್ಯವೇತನ ಶ್ರೇಣಿಯ ಮೊದಲ (15) ಹದಿನೈದು ವೇತನ ಶ್ರೇಣಿ ಹುದ್ದೆಗಳಲ್ಲಿ ಉನ್ನತ ಹುದ್ದೆಗೆ ಮುಂಬಡ್ತಿ ಪಡೆಯಲು ಅರ್ಹತೆ ಇದ್ದು ಅಥವಾ ಮುಂಬಡ್ತಿಗೆ ಅವಕಾಶವೇ ಇಲ್ಲದೆ 15 (ಹದಿನೈದು) ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ, ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಸರ್ಕಾರವು ‘ಸ್ವಯಂಚಾಲಿತ ಮುಂಬಡ್ತಿ’ ಯೋಜನೆಯನ್ನು 1991ರ ಜೂನ್ 1ರಿಂದ ಜಾರಿಗೆ ತಂದಿದೆ. ಯೋಜನೆಯ ಸೌಲಭ್ಯವು ಉದ್ಯೋಗಿಯ ಸೇವಾ ಅವಧಿಯಲ್ಲಿ ಒಂದು ಬಾರಿ ಮಾತ್ರ ದೊರೆಯುತ್ತದೆ.
‘ಸ್ವಯಂಚಾಲಿತ ಮುಂಬಡ್ತಿ’ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ವಿಧಿವಿಧಾನಗಳನ್ನು ಆದೇಶ ಸಂಖ್ಯೆ ಎಫ್ಡಿ 25 ಎಸ್ಆರ್ಪಿ 91 ದಿನಾಂಕ 29-10-1991ರಲ್ಲಿ ವಿವರಿಸಿದೆ. ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಉಂಟಾದ ಸಮಸ್ಯೆಗಳ ನಿವಾರಣೆಗೆ ರಾಜ್ಯ ಸರ್ಕಾರ ವಿವರಗಳನ್ನು ಹಾಗೂ ಸ್ಪಷ್ಟೀಕರಣಗಳನ್ನು ಕಾಲಕಾಲಕ್ಕೆ ಆದೇಶ ಸುತ್ತೋಲೆ, ಅಧಿಕೃತ ಜ್ಞಾಪನಾ ಪತ್ರಗಳಲ್ಲಿ ನೀಡಿದೆ.
ಮೊದಲ (15) ಹದಿನೈದು ವೇತನ ಶ್ರೇಣಿಗಳ ಹುದ್ದೆಗಳಲ್ಲಿ ಅಥವಾ ಆ ವೇತನ ಶ್ರೇಣಿಗಳಿಗೆ ನಿಗದಿಪಡಿಸಿರುವ ಆಯ್ಕೆ ಕಾಲಿಕ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ಉದ್ಯೋಗಿಗಳಿಗೆ ‘ಸ್ವಯಂ ಚಾಲಿತ ಮುಂಬಡ್ತಿ’ ನೀಡಿ ಕರ್ನಾಟಕ ನಾಗರಿಕ ಸೇವಾ ನಿಯಮ 42(ಬಿ) ಅನ್ವಯ ‘ಹಿರಿಯ ವೇತನ ಶ್ರೇಣಿ’ಯಲ್ಲಿ ವೇತನ ನಿಗದಿಪಡಿಸಬಹುದು. ‘ಆಯ್ಕೆ ಕಾಲಿಕ ವೇತನ ಶ್ರೇಣಿ’ಯ ಮುಂಬರುವ ವೇತನ ಶ್ರೇಣಿಯನ್ನು ಹಿರಿಯ ವೇತನ ಶ್ರೇಣಿ ಎಂದು ಪರಿಗಣಿಸಲಾಗಿದೆ.
ಒಂದು ಹುದ್ದೆಗೆ ನಿಗದಿಪಡಿಸಿರುವ ‘ಆಯ್ಕೆ ಕಾಲಿಕ ವೇತನ ಶ್ರೇಣಿ’, ವೃಂದ ಮತ್ತು ನೇಮಕಾತಿ ನಿಯಮಗಳಂತೆ ಉನ್ನತ ಹುದ್ದೆಯ ವೇತನ ಶ್ರೇಣಿಗಳು ಒಂದೇ ಆಗಿದ್ದಲ್ಲಿ, ಪದೋನ್ನತಿ ಹುದ್ದೆಯ ವೇತನ ಶ್ರೇಣಿಯನ್ನೇ ‘ಹಿರಿಯ ವೇತನ ಶ್ರೇಣಿ’ ಎಂದು ಪರಿಗಣಿಸಲ್ಪಡುವುದು. ಅಂದರೆ, ‘ಸ್ವಯಂಚಾಲಿತ ಮುಂಬಡ್ತಿ’ ಯೋಜನೆಯಡಿಯಲ್ಲಿ ವೇತನ ನಿಗದಿಯು, ಯಾವುದೇ ಕಾರಣಕ್ಕೂ ಪದೋನ್ನತಿ ಹುದ್ದೆಯ ವೇತನ ಶ್ರೇಣಿಯ ಮುಂದಿನ ವೇತನ ಶ್ರೇಣಿಯಲ್ಲಿ ಆಗಬಾರದು.
✨✨✨✨✨✨✨✨✨✨✨
No comments:
Post a Comment