〰〰〰〰〰〰〰〰〰〰〰
ಒಂದು ಪಟ್ಟಣದಲ್ಲಿ ಅಪ್ಪ ಮಗಳು ಪುಟ್ಟ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಮಗಳಿಗೋ ಜೀವನದ ಆಸಕ್ತಿಯೇ ಕುಂದಿ ಹೋಗಿತ್ತು. ಒಂದು ದಿನ ಅಪ್ಪನ ಬಳಿ ಬಂದು ‘ ನನಗೆ ಜೀವನ ಸಾಕಾಗಿದೆ, ನಾನೆಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ, ಇನ್ನು ನನ್ನಿಂದ ಆಗದು’ ಎಂದು ಸೋತಳು. ಅವಳ ತಂದೆ ಹೊಟೆಲ್ ಒಂದರಲ್ಲಿ ಅಡುಗೆ ಮಾಡುತ್ತಿದ್ದ. ಮಗಳನ್ನು ಸೀದಾ ಅಡುಗೆ ಮನೆಗೆ ಕರೆದೊಯ್ದು ಮೂರು ಪಾತ್ರೆಗಳಿಗೆ ನೀರು ತುಂಬಿಸಿ ಕುದಿಯಲು ಇಟ್ಟನು. ಒಂದಕ್ಕೆ ಆಲೂಗಡ್ಡೆ, ಇನ್ನೊಂದಕ್ಕೆ ಮೊಟ್ಟೆ, ಮತ್ತೊಂದಕ್ಕೆ ಕಾಫಿ ಬೀಜಗಳನ್ನು ಹಾಕಿದ. ಮಗಳಿಗೋ ಅಪ್ಪ ಏನು ಮಾಡುತ್ತಿದ್ದಾನೆ ಎಂಬುದೇ ಅರ್ಥವಾಗುತ್ತಿರಲಿಲ್ಲ. ತಾಳ್ಮೆ ಇಲ್ಲದಿದ್ದರೂ ಅಪ್ಪನನ್ನು ನೋಡುತ್ತಾ, ಪದೇ ಪದೇ ಏನು ಮಾಡುತ್ತಿದ್ದೀರಿ ಎಂದು ಕೇಳುತ್ತಲೇ ಇದ್ದಳು. ಸ್ವಲ್ಪ ಸಮಯದಲ್ಲಿ ಮೂರು ಪಾತ್ರೆಗಳಲ್ಲಿದ್ದ ಪದಾರ್ಥಗಳು ಬೇಯಲಾರಂಭಿಸಿದವು. ಇಪ್ಪತ್ತು ನಿಮಿಷದ ನಂತರ ಮೂರೂ ಪಾತ್ರೆಯನ್ನು ತಂದೆ ಕೆಳಗಿಳಿಸಿದ. ಈಗಾಗಲೇ ತುಂಬಾ ಹೊತ್ತಿನಿಂದ ಉತ್ತರಕ್ಕಾಗಿ ಕಾದು ಕುಳಿತಿದ್ದ ಮಗಳಿಗೆ ಪಿತ್ತ ನೆತ್ತಿಗೇರಿತ್ತು. ‘ ಅಪ್ಪ, ನನ್ನ ಪ್ರಶ್ನೆಗೆ ಉತ್ತರ ನೀಡಿ ಎಂದರೆ, ಆಲೂಗಡ್ಡೆ ಬೇಯಿಸುತ್ತಾ ಇದ್ದಿರಾ?’ ಎಂದು ಕಿರುಚಿದಳು.
‘ಮಗಳೇ ನಿನಗಿಲ್ಲಿ ಏನು ಕಾಣುತ್ತಿದೆ?’ ಎಂದು ಸಮಾಧಾನವಾಗಿ ಕೇಳಿದ. ‘ಇನ್ನೇನಿದೆ ಆಲೂಗಡ್ಡೆ, ಮೊಟ್ಟೆ ಮತ್ತು ಕಾಫಿ ಬೀಜ’ ಎಂದು ಸಿಟ್ಟಿನಿಂದ ಮಗಳು ಉತ್ತರಿಸಿದಳು. ‘ಇನ್ನೂ ಸೂಕ್ಷ್ಮವಾಗಿ ಗಮನಿಸು’ ಎಂದರು ತಂದೆ. ಆಗ ಮಗಳು ಆಲೂಗಡ್ಡೆಯನ್ನು ಕೈಯಿಂದ ಮುಟ್ಟಿ ‘ಆಲೂ ಬೆಂದಿರುವುದರಿಂದ ಮೆತ್ತಗಿದೆ’ ಎಂದಳು. ನಂತರ ತಂದೆ ಮೊಟ್ಟೆಯ ಸಿಪ್ಪೆಯನ್ನು ಬಿಡಿಸಲು ಹೇಳಿದ. ಮಗಳು ಅದನ್ನೂ ಮಾಡಿದಳು. ನಂತರ ಕಾಫಿಯನ್ನು ಹೀರುವಂತೆ ತಂದೆ ಹೇಳಿದರೂ ಮಗಳು ಅದನ್ನೂ ಮಾಡಿದಳು. ಇಷ್ಟಾದ ಮೇಲೂ ಏಕೆ ತಂದೆ ಹೀಗೆಲ್ಲಾ ಮಾಡಿಸುತ್ತಿದ್ದಾರೆ ಎಂಬುದೇ ಅವಳಿಗೆ ಅರ್ಥವಾಗಲಿಲ್ಲ. ಇನ್ನೂ ಅವಳನ್ನು ಕಾಯಿಸದೇ ತಂದೆ ಮಾತನಾಡಿದರು, ‘ ಈ ಎಲ್ಲ ಪದಾರ್ಥಗಳಿಗೂ ಒಂದೇ ನೀರು ಹಾಕಿದ್ದೇನೆ, ಒಂದೇ ಉರಿಯಲ್ಲಿ ಬೇಯಿಸಿದ್ದೇನೆ ಆದರೆ ಒಂದರಂತೆ ಒಂದಿಲ್ಲ. ಪ್ರತಿಯೊಂದು ಭಿನ್ನವಾಗಿ ತನ್ನ ಗುಣ ತೋರಿಸಿದೆ’ ಎಂದರು. ಗಟ್ಟಿಯಾದ ಆಲೂ ನೀರಿನಲ್ಲಿ ಬೇಯಿಸಿದಾಗ ಮೆತ್ತಗಾಗುತ್ತದೆ. ಮೊಟ್ಟೆಯ ಹೊರ ಭಾಗ ಬಿಟ್ಟು ಒಳಗಿನದ್ದು ದ್ರವ ರೂಪದಲ್ಲಿ ಇರುತ್ತದೆ. ಆದರೆ ಬೇಯಿಸಿದಾಗ ಗಟ್ಟಿಯಾಗುತ್ತದೆ. ಇನ್ನು ಕಾಫಿ ಬೀಜಗಳು ನೀರಿಗೆ ಬೀಳುವ ಮುನ್ನ ಅದರ ನಿಜ ಗುಣವೇ ತಿಳಿದಿರುವುದಿಲ್ಲ.
*ನಮ್ಮ ಜೀವನವೂ ಹಾಗೆ ಕಷ್ಟಗಳು ಎಲ್ಲರಿಗೂ ಬಂದೇ ಬರುತ್ತವೆ. ಬದಲಾವಣೆಗಳು ಮನುಷ್ಯನ ಸಹಜಗುಣ, ಮೆತ್ತಗಿದ್ದವರು ಜೋರಾಗಲೇಬೇಕು, ಜೋರಿರುವವರು ಒಮ್ಮೆ ಮೆತ್ತಗಾಗಲೇ ಬೇಕು. ಒಟ್ಟಿನಲ್ಲಿ ಕಷ್ಟಗಳಿಂದ ನಾವು ಕುಗ್ಗುವುದಿಲ್ಲ, ಅವು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಿ ನಾವು ಏನು ಎಂಬುದನ್ನು ತಿಳಿಸುತ್ತವೆ. ನಮ್ಮ ಸಾಮರ್ಥ್ಯ ಏನೆಂಬುದು ನಮಗೆ ಅರಿವಾಗುವುದೇ ಕಷ್ಟಗಳು ಬಂದಾಗ. ಆ ಸಮಯದಲ್ಲಿ ಆಲೂಗಡ್ಡೆಯಾಗುತ್ತೀವೋ? ಬೇಯಿಸಿದ ಮೊಟ್ಟೆಯಾಗುತ್ತೀವೋ ಎಲ್ಲವೂ ನಮ್ಮ ಕೈಯಲ್ಲೇ ಇದೆ.*
ಗೌರ್ ಗೋಪಾಲ ಪ್ರಭು
〰〰〰〰〰〰〰〰〰〰〰
ಒಂದು ಪಟ್ಟಣದಲ್ಲಿ ಅಪ್ಪ ಮಗಳು ಪುಟ್ಟ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಮಗಳಿಗೋ ಜೀವನದ ಆಸಕ್ತಿಯೇ ಕುಂದಿ ಹೋಗಿತ್ತು. ಒಂದು ದಿನ ಅಪ್ಪನ ಬಳಿ ಬಂದು ‘ ನನಗೆ ಜೀವನ ಸಾಕಾಗಿದೆ, ನಾನೆಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ, ಇನ್ನು ನನ್ನಿಂದ ಆಗದು’ ಎಂದು ಸೋತಳು. ಅವಳ ತಂದೆ ಹೊಟೆಲ್ ಒಂದರಲ್ಲಿ ಅಡುಗೆ ಮಾಡುತ್ತಿದ್ದ. ಮಗಳನ್ನು ಸೀದಾ ಅಡುಗೆ ಮನೆಗೆ ಕರೆದೊಯ್ದು ಮೂರು ಪಾತ್ರೆಗಳಿಗೆ ನೀರು ತುಂಬಿಸಿ ಕುದಿಯಲು ಇಟ್ಟನು. ಒಂದಕ್ಕೆ ಆಲೂಗಡ್ಡೆ, ಇನ್ನೊಂದಕ್ಕೆ ಮೊಟ್ಟೆ, ಮತ್ತೊಂದಕ್ಕೆ ಕಾಫಿ ಬೀಜಗಳನ್ನು ಹಾಕಿದ. ಮಗಳಿಗೋ ಅಪ್ಪ ಏನು ಮಾಡುತ್ತಿದ್ದಾನೆ ಎಂಬುದೇ ಅರ್ಥವಾಗುತ್ತಿರಲಿಲ್ಲ. ತಾಳ್ಮೆ ಇಲ್ಲದಿದ್ದರೂ ಅಪ್ಪನನ್ನು ನೋಡುತ್ತಾ, ಪದೇ ಪದೇ ಏನು ಮಾಡುತ್ತಿದ್ದೀರಿ ಎಂದು ಕೇಳುತ್ತಲೇ ಇದ್ದಳು. ಸ್ವಲ್ಪ ಸಮಯದಲ್ಲಿ ಮೂರು ಪಾತ್ರೆಗಳಲ್ಲಿದ್ದ ಪದಾರ್ಥಗಳು ಬೇಯಲಾರಂಭಿಸಿದವು. ಇಪ್ಪತ್ತು ನಿಮಿಷದ ನಂತರ ಮೂರೂ ಪಾತ್ರೆಯನ್ನು ತಂದೆ ಕೆಳಗಿಳಿಸಿದ. ಈಗಾಗಲೇ ತುಂಬಾ ಹೊತ್ತಿನಿಂದ ಉತ್ತರಕ್ಕಾಗಿ ಕಾದು ಕುಳಿತಿದ್ದ ಮಗಳಿಗೆ ಪಿತ್ತ ನೆತ್ತಿಗೇರಿತ್ತು. ‘ ಅಪ್ಪ, ನನ್ನ ಪ್ರಶ್ನೆಗೆ ಉತ್ತರ ನೀಡಿ ಎಂದರೆ, ಆಲೂಗಡ್ಡೆ ಬೇಯಿಸುತ್ತಾ ಇದ್ದಿರಾ?’ ಎಂದು ಕಿರುಚಿದಳು.
‘ಮಗಳೇ ನಿನಗಿಲ್ಲಿ ಏನು ಕಾಣುತ್ತಿದೆ?’ ಎಂದು ಸಮಾಧಾನವಾಗಿ ಕೇಳಿದ. ‘ಇನ್ನೇನಿದೆ ಆಲೂಗಡ್ಡೆ, ಮೊಟ್ಟೆ ಮತ್ತು ಕಾಫಿ ಬೀಜ’ ಎಂದು ಸಿಟ್ಟಿನಿಂದ ಮಗಳು ಉತ್ತರಿಸಿದಳು. ‘ಇನ್ನೂ ಸೂಕ್ಷ್ಮವಾಗಿ ಗಮನಿಸು’ ಎಂದರು ತಂದೆ. ಆಗ ಮಗಳು ಆಲೂಗಡ್ಡೆಯನ್ನು ಕೈಯಿಂದ ಮುಟ್ಟಿ ‘ಆಲೂ ಬೆಂದಿರುವುದರಿಂದ ಮೆತ್ತಗಿದೆ’ ಎಂದಳು. ನಂತರ ತಂದೆ ಮೊಟ್ಟೆಯ ಸಿಪ್ಪೆಯನ್ನು ಬಿಡಿಸಲು ಹೇಳಿದ. ಮಗಳು ಅದನ್ನೂ ಮಾಡಿದಳು. ನಂತರ ಕಾಫಿಯನ್ನು ಹೀರುವಂತೆ ತಂದೆ ಹೇಳಿದರೂ ಮಗಳು ಅದನ್ನೂ ಮಾಡಿದಳು. ಇಷ್ಟಾದ ಮೇಲೂ ಏಕೆ ತಂದೆ ಹೀಗೆಲ್ಲಾ ಮಾಡಿಸುತ್ತಿದ್ದಾರೆ ಎಂಬುದೇ ಅವಳಿಗೆ ಅರ್ಥವಾಗಲಿಲ್ಲ. ಇನ್ನೂ ಅವಳನ್ನು ಕಾಯಿಸದೇ ತಂದೆ ಮಾತನಾಡಿದರು, ‘ ಈ ಎಲ್ಲ ಪದಾರ್ಥಗಳಿಗೂ ಒಂದೇ ನೀರು ಹಾಕಿದ್ದೇನೆ, ಒಂದೇ ಉರಿಯಲ್ಲಿ ಬೇಯಿಸಿದ್ದೇನೆ ಆದರೆ ಒಂದರಂತೆ ಒಂದಿಲ್ಲ. ಪ್ರತಿಯೊಂದು ಭಿನ್ನವಾಗಿ ತನ್ನ ಗುಣ ತೋರಿಸಿದೆ’ ಎಂದರು. ಗಟ್ಟಿಯಾದ ಆಲೂ ನೀರಿನಲ್ಲಿ ಬೇಯಿಸಿದಾಗ ಮೆತ್ತಗಾಗುತ್ತದೆ. ಮೊಟ್ಟೆಯ ಹೊರ ಭಾಗ ಬಿಟ್ಟು ಒಳಗಿನದ್ದು ದ್ರವ ರೂಪದಲ್ಲಿ ಇರುತ್ತದೆ. ಆದರೆ ಬೇಯಿಸಿದಾಗ ಗಟ್ಟಿಯಾಗುತ್ತದೆ. ಇನ್ನು ಕಾಫಿ ಬೀಜಗಳು ನೀರಿಗೆ ಬೀಳುವ ಮುನ್ನ ಅದರ ನಿಜ ಗುಣವೇ ತಿಳಿದಿರುವುದಿಲ್ಲ.
*ನಮ್ಮ ಜೀವನವೂ ಹಾಗೆ ಕಷ್ಟಗಳು ಎಲ್ಲರಿಗೂ ಬಂದೇ ಬರುತ್ತವೆ. ಬದಲಾವಣೆಗಳು ಮನುಷ್ಯನ ಸಹಜಗುಣ, ಮೆತ್ತಗಿದ್ದವರು ಜೋರಾಗಲೇಬೇಕು, ಜೋರಿರುವವರು ಒಮ್ಮೆ ಮೆತ್ತಗಾಗಲೇ ಬೇಕು. ಒಟ್ಟಿನಲ್ಲಿ ಕಷ್ಟಗಳಿಂದ ನಾವು ಕುಗ್ಗುವುದಿಲ್ಲ, ಅವು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಿ ನಾವು ಏನು ಎಂಬುದನ್ನು ತಿಳಿಸುತ್ತವೆ. ನಮ್ಮ ಸಾಮರ್ಥ್ಯ ಏನೆಂಬುದು ನಮಗೆ ಅರಿವಾಗುವುದೇ ಕಷ್ಟಗಳು ಬಂದಾಗ. ಆ ಸಮಯದಲ್ಲಿ ಆಲೂಗಡ್ಡೆಯಾಗುತ್ತೀವೋ? ಬೇಯಿಸಿದ ಮೊಟ್ಟೆಯಾಗುತ್ತೀವೋ ಎಲ್ಲವೂ ನಮ್ಮ ಕೈಯಲ್ಲೇ ಇದೆ.*
ಗೌರ್ ಗೋಪಾಲ ಪ್ರಭು
〰〰〰〰〰〰〰〰〰〰〰
No comments:
Post a Comment