💥💥💥💥💥
*ಸರ್ಕಾರಿ ನೌಕರರ ಸೇರಿಕೆ ಕಾಲ*
ಸರ್ಕಾರಿ ನೌಕರನು ತನ್ನ ಸೇವಾ ಅವಧಿಯಲ್ಲಿ ಕೆಲಸಕ್ಕೆ ಸೇರಿದ ದಿನದಿಂದ ನಿವೃತ್ತಿ ಹೊಂದುವ ತನಕ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಸಂಭವವಿರುವುದು ಹಾಗೂ ಆತನನ್ನು ಒಂದೇ ಸ್ಥಳದಲ್ಲಿ ಬಿಡುವುದು ಸಾಧುವು ಅಲ್ಲ, ಸಾರ್ವಜನಿಕ ಹಿತಾಸಕ್ತಿಯಿಂದ ಅಥವಾ ಆತನ ಇಚ್ಛೆಗನುಸಾರವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಾವಣೆ ಮಾಡುವ ಅಗತ್ಯ ಇದೆ. ಇದಲ್ಲದೆ ನೌಕರನನ್ನು ಬಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಾವಣೆ ಮಾಡುವ ಇತರ ಸಂದರ್ಭಗಳು ಉಂಟು. ಹೀಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಾವಣೆ ಮಾಡುವುದಕ್ಕೆ ‘ವರ್ಗಾವಣೆ’ ಎಂದು ಹೇಳುತ್ತೇವೆ. ಒಂದು ಕೇಂದ್ರ ಸ್ಥಳದಿಂದ ಮತ್ತೊಂದು ಕೇಂದ್ರ ಸ್ಥಳಕ್ಕೆ ವರ್ಗಾವಣೆ ಆದಾಗ ನೌಕರನು ರಾತ್ರೋರಾತ್ರಿ ಹೊಸ ಸ್ಥಳಕ್ಕೆ ಕುಟುಂಬ ಸಮೇತ ಪ್ರಯಾಣ ಮಾಡಿ, ಹೊಸ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗಬೇಕೆಂದೂ ಅಥವಾ ಹೊಸ ಸ್ಥಳಕ್ಕೆ ಹೋಗುವ ಸಿದ್ಧತೆಗಾಗಿ ಮತ್ತು ಪ್ರಯಾಣಕ್ಕಾಗಿ ಬೇಕಾಗುವ ಅವಧಿಗೆ ರಜಾ ಹಾಕಿ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕೆಂದೂ ಹೇಳುವುದು ನ್ಯಾಯಸಮ್ಮತವಲ್ಲ, ಆದುದರಿಂದ ಸರ್ಕಾರವು ತನ್ನ ನೌಕರ ವರ್ಗದವರಿಗೆ ಅವರ ಕೇಂದ್ರ ಸ್ಥಾನ ಬದಲಾವಣೆಯಾದಾಗ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಒಂದು ನಿರ್ದಿಷ್ಟ ಅವಧಿಯ ಸೌಲಭ್ಯ ಒದಗಿಸಿದ್ದಾರೆ. ಹೀಗೆ ಒದಗಿಸಿದ ಕಾಲಾವಧಿ ಸೌಲಭ್ಯವನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 76ರಿಂದ 90ರವರೆಗೆ ನೀಡಲಾಗಿದೆ.
ಸೇರಿಕೆ ಕಾಲದ ಅವಧಿ ಎಂದರೇನು ?
ಒಬ್ಬ ಸರ್ಕಾರಿ ನೌಕರನನ್ನು ಒಂದು ಕೇಂದ್ರ ಸ್ಥಳದಿಂದ ಮತ್ತೊಂದು ಕೇಂದ್ರ ಸ್ಥಳಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾಯಿಸಿದಾಗ, ಆತನು ಹೊಸ ಕೇಂದ್ರ ಸ್ಥಳಕ್ಕೆ ಹೋಗಲು ಸಿದ್ಧತೆಗಾಗಿ ಮತ್ತು ಪ್ರಯಾಣಕ್ಕಾಗಿ ಬೇಕಾಗುವ ಕಾಲಾವಧಿಗೆ ಸೇರಿಕೆ ಕಾಲ ಎಂದು ಹೇಳುತ್ತಾರೆ.
ಅಂದರೆ ಸರ್ಕಾರಿ ನೌಕರನನ್ನು ಒಂದು ಕೇಂದ್ರ ಸ್ಥಳದಿಂದ ಮತ್ತೊಂದು ಕೇಂದ್ರ ಸ್ಥಳಕ್ಕೆ ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಮಾಡಿದಾಗ ಮಾತ್ರಸೇರುವ ಕಾಲ ಸೌಲಭ್ಯ ದೊರೆಯುವುದಲ್ಲದೆ ಇತರ ಸಂದರ್ಭಗಳಲ್ಲಿ ಸೇರುವ ಕಾಲದ ಸೌಲಭ್ಯ ದೊರೆಯುವುದಿಲ್ಲ.
ಸೇರುವ ಕಾಲದ ಸೌಲಭ್ಯ ದೊರೆಯುವ ಸಂದರ್ಭಗಳು
1. ಸಾರ್ವಜನಿಕ ಹಿತದೃಷ್ಟಿಯಲ್ಲಿ ವರ್ಗವಾದಾಗ
2. ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ ಅಥವಾ ಅನ್ಯ ಸೇವೆಗೆ ನಿಯೋಜಿಸಿದಾಗ
3. ಕೇಂದ್ರ ಸರ್ಕಾರ / ಇತರ ರಾಜ್ಯ ಸರ್ಕಾರದ ಅಥವಾ ಸಂಸ್ಥೆಗಳ ನೌಕರರನ್ನು ಈ ರಾಜ್ಯ ಸರ್ಕಾರದ ಸೇವೆಗೆ ನಿಯೋಜಿಸಿದಾಗ
4. ಈಗಾಗಲೇ ಸರ್ಕಾರಿ ಸೇವೆಯಲ್ಲಿದ್ದು, ಸ್ಪರ್ಧಾತ್ಮಕ / ಸಂದರ್ಶನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬೇರೊಂದು ಹುದ್ದೆಗೆ ನೇಮಿಸಲಾದ ಹಂಗಾಮಿ ಹಾಗೂ ಕಾಯಂ ನೌಕರ ವರ್ಗದವರಿಗೆ.
5. ಸಿಬ್ಬಂದಿಯನ್ನು ಕಡಿತಗೊಳಿಸಿ, ಯಾರೇ ನೌಕರನನ್ನು ಸೇವೆಯಿಂದ ಬಿಡುಗಡೆ ಮಾಡಿ ಪುನಃ ಬೇರೊಂದು ಹೊಸ ಹುದ್ದೆಗೆ ನೇಮಿಸಿದಾಗ.
6. ತರಬೇತಿಗೆ ಅಥವಾ ಉನ್ನತ ವ್ಯಾಸಂಗಕ್ಕಾಗಿ ನಿಯೋಜಿಸಲ್ಪಟ್ಟ ಸರ್ಕಾರಿ ನೌಕರನನ್ನು ಬೇರೊಂದು ಸ್ಥಳಕ್ಕೆ ತರಬೇತಿ/ಉನ್ನತ ವ್ಯಾಸಂಗ ಮುಗಿದ ನಂತರ ಬದಲಾಯಿಸಿದಾಗ
7. ಅಮಾನತಿನಲ್ಲಿದ್ದ ನೌಕರನನ್ನು ಮರು ನೇಮಕ ಮಾಡಿ ಬೇರೊಂದು ಸ್ಥಳಕ್ಕೆ ವರ್ಗಾಯಿಸಿದಾಗ
8. ರಜೆಯ ಮೇಲಿದ್ದ ಸರ್ಕಾರಿ ನೌಕರನನ್ನು ಬೇರೊಂದು ಸ್ಥಳಕ್ಕೆ ವರ್ಗಾಯಿಸಿದಾಗ ಯಾವುದೇ ಸರ್ಕಾರಿ ನೌಕರನನ್ನು ಅವನ ಇಚ್ಛಾನುಸಾರ ಬೇರೆ ಸ್ಥಳಕ್ಕೆ ವರ್ಗಾಯಿಸಿದಾಗ ಆತನಿಗೆ ಸೇರುವ ಕಾಲ ದೊರೆಯುವುದಿಲ್ಲ. ಆದರೆ ಆತನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡಲು ಬೇಕಾಗುವ ಅವಧಿಗೆ ರಜೆ ಅರ್ಜಿ ಸಲ್ಲಿಸಿ, ರಜೆ ಮಂಜೂರು ಮಾಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರಯಾಣಕ್ಕೆ ಉಪಯೋಗಿಸಿಕೊಂಡು ಅವಧಿಯ ವಾರ್ಷಿಕ ಬಡ್ತಿ ಮತ್ತು ನಿವೃತ್ತಿ ವೇತನ ಗಣನೆಗೆ ತೆಗೆದುಕೊಳ್ಳಲಾಗುವುದು.
ಸರ್ಕಾರಿ ನೌಕರನನ್ನು ಕೇಂದ್ರ / ಇತರ ರಾಜ್ಯಗಳ ಅಥವಾ ಸಂಸ್ಥೆಗಳ ಸೇವೆಗೆ ನಿಯೋಜಿಸಿದಾಗ ಸೇರುವ ಕಾಲವನ್ನು ಈ ನಿಯಮಗಳಿಗನುಸಾರವಾಗಿ ಒದಗಿಸಬಹುದು.
ಕೇಂದ್ರ ಸ್ಥಾನ ವಾಸಸ್ಥಳ ಬದಲಾವಣೆ ಆಗದಿದ್ದಲ್ಲಿ, ಸರ್ಕಾರಿ ನೌಕರನು ಪೂರ್ವಾಹ್ನ ಬಿಡುಗಡೆ ಹೊಂದಿದಾಗ ಅಪರಾಹ್ನ ಹೊಸ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಅಪರಾಹ್ನ ಕರ್ತವ್ಯದಿಂದ ಬಿಡುಗಡೆ ಹೊಂದಿದರೆ ಮುಂದಿನ ಕೆಲಸದ ದಿನ (ರ್ವಂಗ್ ಡೇ) ಹೊಸ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು.
ಸೇರಿಕೆ ಕಾಲದ ಪ್ರಾರಂಭ
ಸರ್ಕಾರಿ ನೌಕರನು ಪೂರ್ವಾಹ್ನ ಕರ್ತವ್ಯದಿಂದ ಬಿಡುಗಡೆ ಹೊಂದಿದ್ದರೆ, ಆ ದಿನದಿಂದಲೇ ಸೇರುವ ಕಾಲ ಪ್ರಾರಂಭವಾಗುವುದು. ಅಪರಾಹ್ನ ಕರ್ತವ್ಯದಿಂದ ಬಿಡುಗಡೆಯಾದರೆ ಸೇರುವಕಾಲ ಕರ್ತವ್ಯದಿಂದ ಬಿಡುಗಡೆಯಾದ ಮಾರನೆಯ ದಿನದಿಂದಲೇ ಪ್ರಾರಂಭವಾಗಬೇಕು.
ಕರ್ತವ್ಯದಿಂದ ಬಿಡುಗಡೆ ಹೊಂದಿದ ದಿನಾಂಕದ ಮರು ದಿನ/ದಿನಗಳು ಮತ್ತು ಸೇರುವ ಕಾಲದ ಅವಯ ಮಧ್ಯದಲ್ಲಿ ಬರುವ ಸಾರ್ವತ್ರಿಕ ರಜಾದಿನಗಳನ್ನು ಸೇರುವ ಕಾಲವೆಂದೇ ಪರಿಗಣಿಸಬೇಕು. ಆದರೆ ಸೇರುವ ಕಾಲದ ಅವಧಿ ಮುಗಿದ ನಂತರ ಸಾರ್ವತ್ರಿಕ ರಜೆಯ ದಿನ/ದಿನಗಳು ಬಂದರೆ ಆ ದಿನಗಳನ್ನು ಉಪಯೋಗಿಸಿಕೊಂಡು ಸರ್ಕಾರಿ ನೌಕರನು ಮುಂದಿನ ಕೆಲಸದ ದಿನದಂದು ತನ್ನ ಹೊಸ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು.
ಕರ್ತವ್ಯದಿಂದ ಬಿಡುಗಡೆ ಹೊಂದಿದ ನಂತರ ಸರ್ಕಾರಿ ನೌಕರನು ರಜೆಯ ಮೇಲೆ ಹೋಗಲು ಸಾಧ್ಯವಿಲ್ಲ. ಆದರೆ ವೈದ್ಯಕೀಯ ಕಾರಣಗಳಿಂದ ರಜೆ ತೆಗೆದುಕೊಳ್ಳಬೇಕಾದ ಸಂದರ್ಭ ಬಂದರೆ ಅಂತಹ ಸರ್ಕಾರಿ ನೌಕರನು ವೈದ್ಯಕೀಯ ಮಂಡಳಿ ನೀಡಿದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಮತ್ತು ಈ ರಜೆಯನ್ನು ವರ್ಗ ಮಾಡುವ ಅಧಿಕಾರಿಯಿಂದ ಮಂಜೂರಾಗಬೇಕು. ಯಾವ ಸಂದರ್ಭದಲ್ಲಿಯೂ ಸಾಂರ್ದಭಿಕ ರಜೆ ಸೇರುವ ಕಾಲದೊಂದಿಗೆ ಸೇರಿಸಕೂಡದು.
ಸರ್ಕಾರಿ ನೌಕರನು ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗವಾಗಿ ಕರ್ತವ್ಯದಿಂದ ಬಿಡುಗಡೆ ಹೊಂದಿ, ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗುವುದರೊಳಗೆ ಅವನನ್ನು ಬೇರೊಂದು ಸ್ಥಳಕ್ಕೆ ವರ್ಗಾಯಿಸಿದರೆ, ಆತನು ಮರು ಆದೇಶ ಸಿಕ್ಕುವ ಮಾರನೆ ದಿನದಿಂದ ಹೊಸದಾಗಿ ಸೇರುವ ಕಾಲಕ್ಕೆ ಅರ್ಹನಾಗುತ್ತಾನೆ.
*ಸರ್ಕಾರಿ ನೌಕರರ ಸೇರಿಕೆ ಕಾಲ*
ಸರ್ಕಾರಿ ನೌಕರನು ತನ್ನ ಸೇವಾ ಅವಧಿಯಲ್ಲಿ ಕೆಲಸಕ್ಕೆ ಸೇರಿದ ದಿನದಿಂದ ನಿವೃತ್ತಿ ಹೊಂದುವ ತನಕ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಸಂಭವವಿರುವುದು ಹಾಗೂ ಆತನನ್ನು ಒಂದೇ ಸ್ಥಳದಲ್ಲಿ ಬಿಡುವುದು ಸಾಧುವು ಅಲ್ಲ, ಸಾರ್ವಜನಿಕ ಹಿತಾಸಕ್ತಿಯಿಂದ ಅಥವಾ ಆತನ ಇಚ್ಛೆಗನುಸಾರವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಾವಣೆ ಮಾಡುವ ಅಗತ್ಯ ಇದೆ. ಇದಲ್ಲದೆ ನೌಕರನನ್ನು ಬಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಾವಣೆ ಮಾಡುವ ಇತರ ಸಂದರ್ಭಗಳು ಉಂಟು. ಹೀಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಾವಣೆ ಮಾಡುವುದಕ್ಕೆ ‘ವರ್ಗಾವಣೆ’ ಎಂದು ಹೇಳುತ್ತೇವೆ. ಒಂದು ಕೇಂದ್ರ ಸ್ಥಳದಿಂದ ಮತ್ತೊಂದು ಕೇಂದ್ರ ಸ್ಥಳಕ್ಕೆ ವರ್ಗಾವಣೆ ಆದಾಗ ನೌಕರನು ರಾತ್ರೋರಾತ್ರಿ ಹೊಸ ಸ್ಥಳಕ್ಕೆ ಕುಟುಂಬ ಸಮೇತ ಪ್ರಯಾಣ ಮಾಡಿ, ಹೊಸ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗಬೇಕೆಂದೂ ಅಥವಾ ಹೊಸ ಸ್ಥಳಕ್ಕೆ ಹೋಗುವ ಸಿದ್ಧತೆಗಾಗಿ ಮತ್ತು ಪ್ರಯಾಣಕ್ಕಾಗಿ ಬೇಕಾಗುವ ಅವಧಿಗೆ ರಜಾ ಹಾಕಿ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕೆಂದೂ ಹೇಳುವುದು ನ್ಯಾಯಸಮ್ಮತವಲ್ಲ, ಆದುದರಿಂದ ಸರ್ಕಾರವು ತನ್ನ ನೌಕರ ವರ್ಗದವರಿಗೆ ಅವರ ಕೇಂದ್ರ ಸ್ಥಾನ ಬದಲಾವಣೆಯಾದಾಗ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಒಂದು ನಿರ್ದಿಷ್ಟ ಅವಧಿಯ ಸೌಲಭ್ಯ ಒದಗಿಸಿದ್ದಾರೆ. ಹೀಗೆ ಒದಗಿಸಿದ ಕಾಲಾವಧಿ ಸೌಲಭ್ಯವನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 76ರಿಂದ 90ರವರೆಗೆ ನೀಡಲಾಗಿದೆ.
ಸೇರಿಕೆ ಕಾಲದ ಅವಧಿ ಎಂದರೇನು ?
ಒಬ್ಬ ಸರ್ಕಾರಿ ನೌಕರನನ್ನು ಒಂದು ಕೇಂದ್ರ ಸ್ಥಳದಿಂದ ಮತ್ತೊಂದು ಕೇಂದ್ರ ಸ್ಥಳಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾಯಿಸಿದಾಗ, ಆತನು ಹೊಸ ಕೇಂದ್ರ ಸ್ಥಳಕ್ಕೆ ಹೋಗಲು ಸಿದ್ಧತೆಗಾಗಿ ಮತ್ತು ಪ್ರಯಾಣಕ್ಕಾಗಿ ಬೇಕಾಗುವ ಕಾಲಾವಧಿಗೆ ಸೇರಿಕೆ ಕಾಲ ಎಂದು ಹೇಳುತ್ತಾರೆ.
ಅಂದರೆ ಸರ್ಕಾರಿ ನೌಕರನನ್ನು ಒಂದು ಕೇಂದ್ರ ಸ್ಥಳದಿಂದ ಮತ್ತೊಂದು ಕೇಂದ್ರ ಸ್ಥಳಕ್ಕೆ ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಮಾಡಿದಾಗ ಮಾತ್ರಸೇರುವ ಕಾಲ ಸೌಲಭ್ಯ ದೊರೆಯುವುದಲ್ಲದೆ ಇತರ ಸಂದರ್ಭಗಳಲ್ಲಿ ಸೇರುವ ಕಾಲದ ಸೌಲಭ್ಯ ದೊರೆಯುವುದಿಲ್ಲ.
ಸೇರುವ ಕಾಲದ ಸೌಲಭ್ಯ ದೊರೆಯುವ ಸಂದರ್ಭಗಳು
1. ಸಾರ್ವಜನಿಕ ಹಿತದೃಷ್ಟಿಯಲ್ಲಿ ವರ್ಗವಾದಾಗ
2. ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ ಅಥವಾ ಅನ್ಯ ಸೇವೆಗೆ ನಿಯೋಜಿಸಿದಾಗ
3. ಕೇಂದ್ರ ಸರ್ಕಾರ / ಇತರ ರಾಜ್ಯ ಸರ್ಕಾರದ ಅಥವಾ ಸಂಸ್ಥೆಗಳ ನೌಕರರನ್ನು ಈ ರಾಜ್ಯ ಸರ್ಕಾರದ ಸೇವೆಗೆ ನಿಯೋಜಿಸಿದಾಗ
4. ಈಗಾಗಲೇ ಸರ್ಕಾರಿ ಸೇವೆಯಲ್ಲಿದ್ದು, ಸ್ಪರ್ಧಾತ್ಮಕ / ಸಂದರ್ಶನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬೇರೊಂದು ಹುದ್ದೆಗೆ ನೇಮಿಸಲಾದ ಹಂಗಾಮಿ ಹಾಗೂ ಕಾಯಂ ನೌಕರ ವರ್ಗದವರಿಗೆ.
5. ಸಿಬ್ಬಂದಿಯನ್ನು ಕಡಿತಗೊಳಿಸಿ, ಯಾರೇ ನೌಕರನನ್ನು ಸೇವೆಯಿಂದ ಬಿಡುಗಡೆ ಮಾಡಿ ಪುನಃ ಬೇರೊಂದು ಹೊಸ ಹುದ್ದೆಗೆ ನೇಮಿಸಿದಾಗ.
6. ತರಬೇತಿಗೆ ಅಥವಾ ಉನ್ನತ ವ್ಯಾಸಂಗಕ್ಕಾಗಿ ನಿಯೋಜಿಸಲ್ಪಟ್ಟ ಸರ್ಕಾರಿ ನೌಕರನನ್ನು ಬೇರೊಂದು ಸ್ಥಳಕ್ಕೆ ತರಬೇತಿ/ಉನ್ನತ ವ್ಯಾಸಂಗ ಮುಗಿದ ನಂತರ ಬದಲಾಯಿಸಿದಾಗ
7. ಅಮಾನತಿನಲ್ಲಿದ್ದ ನೌಕರನನ್ನು ಮರು ನೇಮಕ ಮಾಡಿ ಬೇರೊಂದು ಸ್ಥಳಕ್ಕೆ ವರ್ಗಾಯಿಸಿದಾಗ
8. ರಜೆಯ ಮೇಲಿದ್ದ ಸರ್ಕಾರಿ ನೌಕರನನ್ನು ಬೇರೊಂದು ಸ್ಥಳಕ್ಕೆ ವರ್ಗಾಯಿಸಿದಾಗ ಯಾವುದೇ ಸರ್ಕಾರಿ ನೌಕರನನ್ನು ಅವನ ಇಚ್ಛಾನುಸಾರ ಬೇರೆ ಸ್ಥಳಕ್ಕೆ ವರ್ಗಾಯಿಸಿದಾಗ ಆತನಿಗೆ ಸೇರುವ ಕಾಲ ದೊರೆಯುವುದಿಲ್ಲ. ಆದರೆ ಆತನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡಲು ಬೇಕಾಗುವ ಅವಧಿಗೆ ರಜೆ ಅರ್ಜಿ ಸಲ್ಲಿಸಿ, ರಜೆ ಮಂಜೂರು ಮಾಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರಯಾಣಕ್ಕೆ ಉಪಯೋಗಿಸಿಕೊಂಡು ಅವಧಿಯ ವಾರ್ಷಿಕ ಬಡ್ತಿ ಮತ್ತು ನಿವೃತ್ತಿ ವೇತನ ಗಣನೆಗೆ ತೆಗೆದುಕೊಳ್ಳಲಾಗುವುದು.
ಸರ್ಕಾರಿ ನೌಕರನನ್ನು ಕೇಂದ್ರ / ಇತರ ರಾಜ್ಯಗಳ ಅಥವಾ ಸಂಸ್ಥೆಗಳ ಸೇವೆಗೆ ನಿಯೋಜಿಸಿದಾಗ ಸೇರುವ ಕಾಲವನ್ನು ಈ ನಿಯಮಗಳಿಗನುಸಾರವಾಗಿ ಒದಗಿಸಬಹುದು.
ಕೇಂದ್ರ ಸ್ಥಾನ ವಾಸಸ್ಥಳ ಬದಲಾವಣೆ ಆಗದಿದ್ದಲ್ಲಿ, ಸರ್ಕಾರಿ ನೌಕರನು ಪೂರ್ವಾಹ್ನ ಬಿಡುಗಡೆ ಹೊಂದಿದಾಗ ಅಪರಾಹ್ನ ಹೊಸ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಅಪರಾಹ್ನ ಕರ್ತವ್ಯದಿಂದ ಬಿಡುಗಡೆ ಹೊಂದಿದರೆ ಮುಂದಿನ ಕೆಲಸದ ದಿನ (ರ್ವಂಗ್ ಡೇ) ಹೊಸ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು.
ಸೇರಿಕೆ ಕಾಲದ ಪ್ರಾರಂಭ
ಸರ್ಕಾರಿ ನೌಕರನು ಪೂರ್ವಾಹ್ನ ಕರ್ತವ್ಯದಿಂದ ಬಿಡುಗಡೆ ಹೊಂದಿದ್ದರೆ, ಆ ದಿನದಿಂದಲೇ ಸೇರುವ ಕಾಲ ಪ್ರಾರಂಭವಾಗುವುದು. ಅಪರಾಹ್ನ ಕರ್ತವ್ಯದಿಂದ ಬಿಡುಗಡೆಯಾದರೆ ಸೇರುವಕಾಲ ಕರ್ತವ್ಯದಿಂದ ಬಿಡುಗಡೆಯಾದ ಮಾರನೆಯ ದಿನದಿಂದಲೇ ಪ್ರಾರಂಭವಾಗಬೇಕು.
ಕರ್ತವ್ಯದಿಂದ ಬಿಡುಗಡೆ ಹೊಂದಿದ ದಿನಾಂಕದ ಮರು ದಿನ/ದಿನಗಳು ಮತ್ತು ಸೇರುವ ಕಾಲದ ಅವಯ ಮಧ್ಯದಲ್ಲಿ ಬರುವ ಸಾರ್ವತ್ರಿಕ ರಜಾದಿನಗಳನ್ನು ಸೇರುವ ಕಾಲವೆಂದೇ ಪರಿಗಣಿಸಬೇಕು. ಆದರೆ ಸೇರುವ ಕಾಲದ ಅವಧಿ ಮುಗಿದ ನಂತರ ಸಾರ್ವತ್ರಿಕ ರಜೆಯ ದಿನ/ದಿನಗಳು ಬಂದರೆ ಆ ದಿನಗಳನ್ನು ಉಪಯೋಗಿಸಿಕೊಂಡು ಸರ್ಕಾರಿ ನೌಕರನು ಮುಂದಿನ ಕೆಲಸದ ದಿನದಂದು ತನ್ನ ಹೊಸ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು.
ಕರ್ತವ್ಯದಿಂದ ಬಿಡುಗಡೆ ಹೊಂದಿದ ನಂತರ ಸರ್ಕಾರಿ ನೌಕರನು ರಜೆಯ ಮೇಲೆ ಹೋಗಲು ಸಾಧ್ಯವಿಲ್ಲ. ಆದರೆ ವೈದ್ಯಕೀಯ ಕಾರಣಗಳಿಂದ ರಜೆ ತೆಗೆದುಕೊಳ್ಳಬೇಕಾದ ಸಂದರ್ಭ ಬಂದರೆ ಅಂತಹ ಸರ್ಕಾರಿ ನೌಕರನು ವೈದ್ಯಕೀಯ ಮಂಡಳಿ ನೀಡಿದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಮತ್ತು ಈ ರಜೆಯನ್ನು ವರ್ಗ ಮಾಡುವ ಅಧಿಕಾರಿಯಿಂದ ಮಂಜೂರಾಗಬೇಕು. ಯಾವ ಸಂದರ್ಭದಲ್ಲಿಯೂ ಸಾಂರ್ದಭಿಕ ರಜೆ ಸೇರುವ ಕಾಲದೊಂದಿಗೆ ಸೇರಿಸಕೂಡದು.
ಸರ್ಕಾರಿ ನೌಕರನು ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗವಾಗಿ ಕರ್ತವ್ಯದಿಂದ ಬಿಡುಗಡೆ ಹೊಂದಿ, ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗುವುದರೊಳಗೆ ಅವನನ್ನು ಬೇರೊಂದು ಸ್ಥಳಕ್ಕೆ ವರ್ಗಾಯಿಸಿದರೆ, ಆತನು ಮರು ಆದೇಶ ಸಿಕ್ಕುವ ಮಾರನೆ ದಿನದಿಂದ ಹೊಸದಾಗಿ ಸೇರುವ ಕಾಲಕ್ಕೆ ಅರ್ಹನಾಗುತ್ತಾನೆ.
No comments:
Post a Comment