⚜
*ಸರ್ಕಾರಿ ಉದ್ಯೋಗಿ ಪಡೆಯುವ ಗೌರವಧನ*
ಲ.ರಾಘವೇಂದ್ರ
*ಶುಲ್ಕ ಮತ್ತು ಗೌರವಧನ (ನಿಯಮ 28 ಮತ್ತು 29)*
ನಿಯಮ 26 ಮತ್ತು 27ರ ಪ್ರಕಾರ ಸರ್ಕಾರವು ತನ್ನ ವಿವೇಚನೆಯ ಮೇರೆಗೆ ಅವಶ್ಯಕತೆ ಇರುವ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರಿ ಉದ್ಯೋಗಿಯ ಸೇವೆ ಬಳಸಿಕೊಳ್ಳಬಹುದು ಮತ್ತು ಆತನ ಸೇವಾ ಅವಯ ಪೂರ್ಣ ವೇಳೆಯು ಸರ್ಕಾರದ ವಶದಲ್ಲಿರುತ್ತದೆ. ಆದ್ದರಿಂದ ಸರ್ಕಾರದ ಅನುಮತಿಯಿಲ್ಲದೆ ಖಾಸಗಿ ಸಂಸ್ಥೆ / ಸ್ಥಳೀಯ ಸಂಸ್ಥೆ / ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಸಂಭಾವನೆ ಪಡೆಯಲು ಅವಕಾಶ ಇರುವುದಿಲ್ಲ. ಸರ್ಕಾರಿ ಉದ್ಯೋಗಿಯು ತನ್ನ ಸೇವಾ ಅವಧಿ ಪೂರ್ಣವೇಳೆಯನ್ನು ಸರ್ಕಾರ ವಹಿಸಿಕೊಟ್ಟ ಕರ್ತವ್ಯಗಳ ನಿರ್ವಹಣೆಗೆ ಮಾತ್ರ ವಿನಿಯೋಗಿಸುವ ಹೊಣೆ ಹೊಂದಿರುತ್ತಾನೆ.
*1) ಗೌರವಧನ*: ಕೆಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಉದ್ಯೋಗಿಗಳು ಹೊಣೆಯ ಸ್ವರೂಪದ ಕರ್ತವ್ಯಗಳನ್ನು ಕಚೇರಿ ವೇಲೆ ನಿರಂತರವಾಗಿ ಮಾಡಬೇಕಾದಾಗ ಸರ್ಕಾರವು ಅಂತಹ ಉದ್ಯೋಗಿಗಳಿಗೆ ಕರ್ತವ್ಯಗಳ ಮಹತ್ವ ಮತ್ತು ಕಾರ್ಯನಿರ್ವಹಿಸಬೇಕಾದ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಸಂಭಾವನೆಯ ದರ ನಿಗದಿಪಡಿಸಿ ಪಾವತಿಸುವಂತೆ ಮಂಜೂರಾತಿ ನೀಡುತ್ತದೆ.
*ನಿಯಮ 28ರ ಟಿಪ್ಪಣಿ 3ರ ಕಂಡಿಕೆ (ಸಿ) (1ರಿಂದ ()ರವರೆಗೆ ನಮೂದಿಸಿರುವ ಪ್ರಕರಣಗಳು:*
ಸಾರ್ವಜನಿಕ ಸ್ಪರ್ಧೆಯಲ್ಲಿ ಗಳಿಸಿದ ಪಾರಿತೋಷಕ, ನ್ಯಾಯಾಡಳಿತದಲ್ಲಿ ಸಲ್ಲಿಸಿದ ಸೇವೆಗೆ ಪ್ರತಿಫಲ ಅಥವಾ ಇನ್ಯಾವುದೇ ಕಾನೂನಿನ ಪರಿಪಾಲನೆಗಾಗಿ ದೊರೆತ ಪ್ರತಿಫಲ ಇತ್ಯಾದಿಗಳನ್ನು ಸರ್ಕಾರಿ ಉದ್ಯೋಗಿ ಪಡೆದು ವಿಶೇಷ ಅನುಮತಿ ಇಲ್ಲದೆ ತನ್ನಲ್ಲೆ ಉಳಿಸಿಕೊಳ್ಳಬಹುದು.
*2) ಶುಲ್ಕ:*
ಸರ್ಕಾರದ ಕೆಲಸ ಕಾರ್ಯಗಳಿಗೆ ಅಡಚಣೆ ಅಥವಾ ತೊಡಕು ಉಂಟಾಗದಂತೆ ಆಕಸ್ಮಿಕ ಸ್ವರೂಪದ ಖಾಸಗಿ, ಸ್ಥಳೀಯ, ಸ್ವಾಯತ್ತ ಸಂಸ್ಥೆಗಳ ಖಾಸಗಿ ವ್ಯಕ್ತಿಗಳ ಕೆಲಸ ಕಾರ್ಯಗಳ ಮೇಲ್ವಿಚಾರಣೆ, ತಾಂತ್ರಿಕ ಸಲಹೆ / ಸಹಕಾರ ನೀಡಿದ ಪ್ರಯುಕ್ತ ಅಥವಾ ಅಸಾಧಾರಣ ಸಂದರ್ಭಗಳಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದ ಪ್ರಯುಕ್ತ ಸರ್ಕಾರದ ಅಥವಾ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದು ಆ ಮೂಲಗಳಿಂದ ಸಂಭಾವನೆ ಪಡೆಯಬಹುದು. ಇದನ್ನೇ ಶುಲ್ಕ ಎನ್ನಲಾಗುತ್ತದೆ.
ಸರ್ಕಾರಿ ಉದ್ಯೋಗಿಯ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯೊಡನೆ ಖಾಸಗಿ/ ಸ್ವಾಯತ್ತ / ಸ್ಥಳೀಯ ಸಂಸ್ಥೆಗಳಿಗೆ ಸೇವೆ ಸಲ್ಲಿಸಿದ ಪ್ರಯುಕ್ತ ಪಡೆದ ಸಂಭಾವನೆಯ 1/3 ಭಾಗವನ್ನು ಸರ್ಕಾರದ ಬೊಕ್ಕಸಕ್ಕೆ ಜಮಾ ಮಾಡಬೇಕಾಗುತ್ತದೆ.
ನಿಯಮ 29(ಎ) (4)ರ ಉಪ ಕಂಡಿಕೆ (1) ರಿಂದ (7)ವರೆಗಿನ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರಿ ನೌಕರನು ಆ ಕಂಡಿಕೆಗಳಲ್ಲಿ ಷರತ್ತಿಗೊಳಪಟ್ಟು ಸಂಭಾವನೆ ಸ್ವೀಕರಿಸಿ ತನ್ನಲ್ಲಿಯೇ ಉಳಿಸಿಕೊಳ್ಳಬಹುದು. ಮೇಲಿನ ನಿಯಮದ ಟಿಪ್ಪಣಿಯಲ್ಲಿ ತಿಳಿಸಿರುವಂತೆ ತಹಸೀಲ್ದಾರ್/ಉಪ ತಹಸೀಲ್ದಾರ್ ನ್ಯಾಯಾಲಯದ ಆದೇಶದನ್ವಯ ಸ್ವೀಕೃತ(ರಿಸೀವರ್)ನಾಗಿ ಕಾರ್ಯ ನಿರ್ವಹಿಸಿ ಪಡೆದ ಸಂಭಾವನೆಯ ಪೂರ್ಣಭಾಗವನ್ನು ತಾನೇ ಉಳಿಸಿಕೊಳ್ಳಬಹುದು.
ಸರ್ಕಾರಿ ಅಧಿಕಾರಿಗಳನ್ನು ಸರ್ಕಾರೇತನ ಸಂಸ್ಥೆಗಳ ಕಾರ್ಯನಿರ್ವಹಿಸಲು ನೇಮಿಸಬಹುದು. ಇಂತಹ ಸಂದರ್ಭಗಳಲ್ಲಿ ಅಧಿಕಾರಿಯ ಕರ್ತವ್ಯಗಳು ಗಣನೀಯವಾಗಿ ಹೆಚ್ಚಾದಲ್ಲಿ ಅಂತಹ ಅಧಿಕಾರಿಗಳಿಗೆ ಹೆಚ್ಚುವರಿಯಾಗಿ ಸಂಭಾವನೆಯನ್ನು ಸಂಬಂಧಪಟ್ಟ ಸಂಸ್ಥೆಯಿಂದ ಸಂದಾಯ ಮಾಡಬಹುದು. ಸರ್ಕಾರದ ಕರ್ತವ್ಯಗಳ ನಿರ್ವಹಣಾ ವೇಳೆಯಲ್ಲಿ ಖಾಸಗಿ ಸಂಸ್ಥೆಗಳ ಕಾರ್ಯಗಳನ್ನು ನಿರ್ವಹಿಸಬೇಕಾದಾಗ ಸಂಸ್ಥೆಗಳು ಪಾವತಿಸಬೇಕಾದ ಶುಲ್ಕವನ್ನು ಸರ್ಕಾರಿ ನೌಕರನಿಗೆ ಜಮಾ ಮಾಡಬೇಕಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಸರ್ಕಾರವು ತನ್ನ ಉದ್ಯೋಗಿಗೆ ಸಂಭಾವನೆಯನ್ನು ನಿಗದಿತ ದರದಲ್ಲಿ ಪಾವತಿಸಬಹುದು.
*ಹುದ್ದೆಯ ಹಕ್ಕು:*
(ನಿಯಮ 17 ರಿಂದ 20): ಒಬ್ಬ ವ್ಯಕ್ತಿಯನ್ನು ಸರ್ಕಾರದ ವ್ಯವಹಾರಗಳ ನಿರ್ವಹಣೆಗಾಗಿ ಒಂದು ಸ್ಥಿರ (ಮೂಲ) ಹುದ್ದೆಗೆ ನೇಮಕಾತಿ ನಿಯಮಗಳ ಪ್ರಕಾರ ನೇಮಿಸಿ ವಿಧಿಸಲಾದ ಷರತ್ತುಗಳನ್ನು ಪೂರೈಸಿದ ಮೇರೆಗೆ ಆತನ ನೇಮಕಾತಿಯನ್ನು ಸ್ಥಿರ ಹುದ್ದೆಯಲ್ಲಿ ಸ್ಥಿರೀಕರಣಗೊಳಿಸಲಾಗುವುದು. ಸ್ಥಿರೀಕೃತಗೊಳಿಸಿದ ದಿನದಿಂದ ಆ ಮೂಲ (ಸ್ಥಿರ) ಹುದ್ದೆಯ ಮೇಲೆ ಉದ್ಯೋಗಿಯ ಹಕ್ಕು ಸ್ಥಾಪಿತವಾಗುತ್ತದೆ. ಆದ್ದರಿಂದ ಒಂದು ಸ್ಥಿರ (ಮೂಲ) ಹುದ್ದೆಗೆ ಒಬ್ಬ ವ್ಯಕ್ತಿಯನ್ನು ಮಾತ್ರ ಕಾಯಂ ಆಗಿ ನೇಮಿಸಬಹುದು. ಹಾಗೆಯೇ ಒಬ್ಬ ವ್ಯಕ್ತಿಯನ್ನು ಕಾಯಂ ಆಗಿ ಒಂದೇ ಸ್ಥಿರ ಹುದ್ದೆಗೆ ನೇಮಿಸಲು ಮಾತ್ರ ಅವಕಾಶವಿರುತ್ತದೆ. ಆದರೆ ಸರ್ಕಾರ ವಿಶೇಷ ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ಒಬ್ಬ ಉದ್ಯೋಗಿಯನ್ನು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಿಸಲೂಬಹುದು. (ನಿಯಮ 66)
ಒಬ್ಬ ಉದ್ಯೋಗಿಯು ‘ಹಕ್ಕು’ ಪಡೆದಿರುವ ಹುದ್ದೆಗೆ ಕಾಯಂ ಆಗಿ ಬೇರೊಬ್ಬ ಉದ್ಯೋಗಿಯನ್ನು ನೇಮಿಸಲು ಅವಕಾಶವಿಲ್ಲ. ಉದ್ಯೋಗಿಯು ಬೇರೊಂದು ಕಾಯಂ ಹುದ್ದೆಯ ಮೇಲೆ ‘ಹಕ್ಕು’ಗಳಿಸಿದ ದಿನದಿಂದ ತನ್ನ ಹಿಂದಿನ ಸ್ಥಿರ ಹುದ್ದೆಯ ಮೇಲಿನ ಹಕ್ಕು ಕಳೆದುಕೊಳ್ಳುತ್ತಾನೆ. ಅಂತಹ ಹುದ್ದೆಗೆ ಬೇರೊಬ್ಬ ವ್ಯಕ್ತಿಯನ್ನು ಕಾಯಂ ಆಗಿ ನೇಮಿಸಬಹುದು ಅಥವಾ ಪದೋನ್ನತಿ ನೀಡಿ ಸದರಿ ‘ಸ್ಥಿರ’ ಹುದ್ದೆಯನ್ನು ಕಾಯಂ ಆಗಿ ತುಂಬಬಹುದು.(ನಿಯಮ 18 ಮತ್ತು 19).
*ಸರ್ಕಾರಿ ಉದ್ಯೋಗಿ ಪಡೆಯುವ ಗೌರವಧನ*
ಲ.ರಾಘವೇಂದ್ರ
*ಶುಲ್ಕ ಮತ್ತು ಗೌರವಧನ (ನಿಯಮ 28 ಮತ್ತು 29)*
ನಿಯಮ 26 ಮತ್ತು 27ರ ಪ್ರಕಾರ ಸರ್ಕಾರವು ತನ್ನ ವಿವೇಚನೆಯ ಮೇರೆಗೆ ಅವಶ್ಯಕತೆ ಇರುವ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರಿ ಉದ್ಯೋಗಿಯ ಸೇವೆ ಬಳಸಿಕೊಳ್ಳಬಹುದು ಮತ್ತು ಆತನ ಸೇವಾ ಅವಯ ಪೂರ್ಣ ವೇಳೆಯು ಸರ್ಕಾರದ ವಶದಲ್ಲಿರುತ್ತದೆ. ಆದ್ದರಿಂದ ಸರ್ಕಾರದ ಅನುಮತಿಯಿಲ್ಲದೆ ಖಾಸಗಿ ಸಂಸ್ಥೆ / ಸ್ಥಳೀಯ ಸಂಸ್ಥೆ / ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಸಂಭಾವನೆ ಪಡೆಯಲು ಅವಕಾಶ ಇರುವುದಿಲ್ಲ. ಸರ್ಕಾರಿ ಉದ್ಯೋಗಿಯು ತನ್ನ ಸೇವಾ ಅವಧಿ ಪೂರ್ಣವೇಳೆಯನ್ನು ಸರ್ಕಾರ ವಹಿಸಿಕೊಟ್ಟ ಕರ್ತವ್ಯಗಳ ನಿರ್ವಹಣೆಗೆ ಮಾತ್ರ ವಿನಿಯೋಗಿಸುವ ಹೊಣೆ ಹೊಂದಿರುತ್ತಾನೆ.
*1) ಗೌರವಧನ*: ಕೆಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಉದ್ಯೋಗಿಗಳು ಹೊಣೆಯ ಸ್ವರೂಪದ ಕರ್ತವ್ಯಗಳನ್ನು ಕಚೇರಿ ವೇಲೆ ನಿರಂತರವಾಗಿ ಮಾಡಬೇಕಾದಾಗ ಸರ್ಕಾರವು ಅಂತಹ ಉದ್ಯೋಗಿಗಳಿಗೆ ಕರ್ತವ್ಯಗಳ ಮಹತ್ವ ಮತ್ತು ಕಾರ್ಯನಿರ್ವಹಿಸಬೇಕಾದ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಸಂಭಾವನೆಯ ದರ ನಿಗದಿಪಡಿಸಿ ಪಾವತಿಸುವಂತೆ ಮಂಜೂರಾತಿ ನೀಡುತ್ತದೆ.
*ನಿಯಮ 28ರ ಟಿಪ್ಪಣಿ 3ರ ಕಂಡಿಕೆ (ಸಿ) (1ರಿಂದ ()ರವರೆಗೆ ನಮೂದಿಸಿರುವ ಪ್ರಕರಣಗಳು:*
ಸಾರ್ವಜನಿಕ ಸ್ಪರ್ಧೆಯಲ್ಲಿ ಗಳಿಸಿದ ಪಾರಿತೋಷಕ, ನ್ಯಾಯಾಡಳಿತದಲ್ಲಿ ಸಲ್ಲಿಸಿದ ಸೇವೆಗೆ ಪ್ರತಿಫಲ ಅಥವಾ ಇನ್ಯಾವುದೇ ಕಾನೂನಿನ ಪರಿಪಾಲನೆಗಾಗಿ ದೊರೆತ ಪ್ರತಿಫಲ ಇತ್ಯಾದಿಗಳನ್ನು ಸರ್ಕಾರಿ ಉದ್ಯೋಗಿ ಪಡೆದು ವಿಶೇಷ ಅನುಮತಿ ಇಲ್ಲದೆ ತನ್ನಲ್ಲೆ ಉಳಿಸಿಕೊಳ್ಳಬಹುದು.
*2) ಶುಲ್ಕ:*
ಸರ್ಕಾರದ ಕೆಲಸ ಕಾರ್ಯಗಳಿಗೆ ಅಡಚಣೆ ಅಥವಾ ತೊಡಕು ಉಂಟಾಗದಂತೆ ಆಕಸ್ಮಿಕ ಸ್ವರೂಪದ ಖಾಸಗಿ, ಸ್ಥಳೀಯ, ಸ್ವಾಯತ್ತ ಸಂಸ್ಥೆಗಳ ಖಾಸಗಿ ವ್ಯಕ್ತಿಗಳ ಕೆಲಸ ಕಾರ್ಯಗಳ ಮೇಲ್ವಿಚಾರಣೆ, ತಾಂತ್ರಿಕ ಸಲಹೆ / ಸಹಕಾರ ನೀಡಿದ ಪ್ರಯುಕ್ತ ಅಥವಾ ಅಸಾಧಾರಣ ಸಂದರ್ಭಗಳಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದ ಪ್ರಯುಕ್ತ ಸರ್ಕಾರದ ಅಥವಾ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದು ಆ ಮೂಲಗಳಿಂದ ಸಂಭಾವನೆ ಪಡೆಯಬಹುದು. ಇದನ್ನೇ ಶುಲ್ಕ ಎನ್ನಲಾಗುತ್ತದೆ.
ಸರ್ಕಾರಿ ಉದ್ಯೋಗಿಯ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯೊಡನೆ ಖಾಸಗಿ/ ಸ್ವಾಯತ್ತ / ಸ್ಥಳೀಯ ಸಂಸ್ಥೆಗಳಿಗೆ ಸೇವೆ ಸಲ್ಲಿಸಿದ ಪ್ರಯುಕ್ತ ಪಡೆದ ಸಂಭಾವನೆಯ 1/3 ಭಾಗವನ್ನು ಸರ್ಕಾರದ ಬೊಕ್ಕಸಕ್ಕೆ ಜಮಾ ಮಾಡಬೇಕಾಗುತ್ತದೆ.
ನಿಯಮ 29(ಎ) (4)ರ ಉಪ ಕಂಡಿಕೆ (1) ರಿಂದ (7)ವರೆಗಿನ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರಿ ನೌಕರನು ಆ ಕಂಡಿಕೆಗಳಲ್ಲಿ ಷರತ್ತಿಗೊಳಪಟ್ಟು ಸಂಭಾವನೆ ಸ್ವೀಕರಿಸಿ ತನ್ನಲ್ಲಿಯೇ ಉಳಿಸಿಕೊಳ್ಳಬಹುದು. ಮೇಲಿನ ನಿಯಮದ ಟಿಪ್ಪಣಿಯಲ್ಲಿ ತಿಳಿಸಿರುವಂತೆ ತಹಸೀಲ್ದಾರ್/ಉಪ ತಹಸೀಲ್ದಾರ್ ನ್ಯಾಯಾಲಯದ ಆದೇಶದನ್ವಯ ಸ್ವೀಕೃತ(ರಿಸೀವರ್)ನಾಗಿ ಕಾರ್ಯ ನಿರ್ವಹಿಸಿ ಪಡೆದ ಸಂಭಾವನೆಯ ಪೂರ್ಣಭಾಗವನ್ನು ತಾನೇ ಉಳಿಸಿಕೊಳ್ಳಬಹುದು.
ಸರ್ಕಾರಿ ಅಧಿಕಾರಿಗಳನ್ನು ಸರ್ಕಾರೇತನ ಸಂಸ್ಥೆಗಳ ಕಾರ್ಯನಿರ್ವಹಿಸಲು ನೇಮಿಸಬಹುದು. ಇಂತಹ ಸಂದರ್ಭಗಳಲ್ಲಿ ಅಧಿಕಾರಿಯ ಕರ್ತವ್ಯಗಳು ಗಣನೀಯವಾಗಿ ಹೆಚ್ಚಾದಲ್ಲಿ ಅಂತಹ ಅಧಿಕಾರಿಗಳಿಗೆ ಹೆಚ್ಚುವರಿಯಾಗಿ ಸಂಭಾವನೆಯನ್ನು ಸಂಬಂಧಪಟ್ಟ ಸಂಸ್ಥೆಯಿಂದ ಸಂದಾಯ ಮಾಡಬಹುದು. ಸರ್ಕಾರದ ಕರ್ತವ್ಯಗಳ ನಿರ್ವಹಣಾ ವೇಳೆಯಲ್ಲಿ ಖಾಸಗಿ ಸಂಸ್ಥೆಗಳ ಕಾರ್ಯಗಳನ್ನು ನಿರ್ವಹಿಸಬೇಕಾದಾಗ ಸಂಸ್ಥೆಗಳು ಪಾವತಿಸಬೇಕಾದ ಶುಲ್ಕವನ್ನು ಸರ್ಕಾರಿ ನೌಕರನಿಗೆ ಜಮಾ ಮಾಡಬೇಕಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಸರ್ಕಾರವು ತನ್ನ ಉದ್ಯೋಗಿಗೆ ಸಂಭಾವನೆಯನ್ನು ನಿಗದಿತ ದರದಲ್ಲಿ ಪಾವತಿಸಬಹುದು.
*ಹುದ್ದೆಯ ಹಕ್ಕು:*
(ನಿಯಮ 17 ರಿಂದ 20): ಒಬ್ಬ ವ್ಯಕ್ತಿಯನ್ನು ಸರ್ಕಾರದ ವ್ಯವಹಾರಗಳ ನಿರ್ವಹಣೆಗಾಗಿ ಒಂದು ಸ್ಥಿರ (ಮೂಲ) ಹುದ್ದೆಗೆ ನೇಮಕಾತಿ ನಿಯಮಗಳ ಪ್ರಕಾರ ನೇಮಿಸಿ ವಿಧಿಸಲಾದ ಷರತ್ತುಗಳನ್ನು ಪೂರೈಸಿದ ಮೇರೆಗೆ ಆತನ ನೇಮಕಾತಿಯನ್ನು ಸ್ಥಿರ ಹುದ್ದೆಯಲ್ಲಿ ಸ್ಥಿರೀಕರಣಗೊಳಿಸಲಾಗುವುದು. ಸ್ಥಿರೀಕೃತಗೊಳಿಸಿದ ದಿನದಿಂದ ಆ ಮೂಲ (ಸ್ಥಿರ) ಹುದ್ದೆಯ ಮೇಲೆ ಉದ್ಯೋಗಿಯ ಹಕ್ಕು ಸ್ಥಾಪಿತವಾಗುತ್ತದೆ. ಆದ್ದರಿಂದ ಒಂದು ಸ್ಥಿರ (ಮೂಲ) ಹುದ್ದೆಗೆ ಒಬ್ಬ ವ್ಯಕ್ತಿಯನ್ನು ಮಾತ್ರ ಕಾಯಂ ಆಗಿ ನೇಮಿಸಬಹುದು. ಹಾಗೆಯೇ ಒಬ್ಬ ವ್ಯಕ್ತಿಯನ್ನು ಕಾಯಂ ಆಗಿ ಒಂದೇ ಸ್ಥಿರ ಹುದ್ದೆಗೆ ನೇಮಿಸಲು ಮಾತ್ರ ಅವಕಾಶವಿರುತ್ತದೆ. ಆದರೆ ಸರ್ಕಾರ ವಿಶೇಷ ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ಒಬ್ಬ ಉದ್ಯೋಗಿಯನ್ನು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಿಸಲೂಬಹುದು. (ನಿಯಮ 66)
ಒಬ್ಬ ಉದ್ಯೋಗಿಯು ‘ಹಕ್ಕು’ ಪಡೆದಿರುವ ಹುದ್ದೆಗೆ ಕಾಯಂ ಆಗಿ ಬೇರೊಬ್ಬ ಉದ್ಯೋಗಿಯನ್ನು ನೇಮಿಸಲು ಅವಕಾಶವಿಲ್ಲ. ಉದ್ಯೋಗಿಯು ಬೇರೊಂದು ಕಾಯಂ ಹುದ್ದೆಯ ಮೇಲೆ ‘ಹಕ್ಕು’ಗಳಿಸಿದ ದಿನದಿಂದ ತನ್ನ ಹಿಂದಿನ ಸ್ಥಿರ ಹುದ್ದೆಯ ಮೇಲಿನ ಹಕ್ಕು ಕಳೆದುಕೊಳ್ಳುತ್ತಾನೆ. ಅಂತಹ ಹುದ್ದೆಗೆ ಬೇರೊಬ್ಬ ವ್ಯಕ್ತಿಯನ್ನು ಕಾಯಂ ಆಗಿ ನೇಮಿಸಬಹುದು ಅಥವಾ ಪದೋನ್ನತಿ ನೀಡಿ ಸದರಿ ‘ಸ್ಥಿರ’ ಹುದ್ದೆಯನ್ನು ಕಾಯಂ ಆಗಿ ತುಂಬಬಹುದು.(ನಿಯಮ 18 ಮತ್ತು 19).
No comments:
Post a Comment