Sunday, 24 December 2017

ಒಬಿಸಿ ಕೆನೆಪದರದ ಆದಾಯಮಿತಿ 8 ಲಕ್ಷಕ್ಕೆ ಹೆಚ್ಚಳ

*ಒಬಿಸಿ ಕೆನೆಪದರದ ಆದಾಯಮಿತಿ 8 ಲಕ್ಷಕ್ಕೆ ಹೆಚ್ಚಳ*

Vijaya Karnataka | Updated Sep 14, 2017, 07:57 AM IST

ಹೊಸದಿಲ್ಲಿ: ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಮೀಸಲಾತಿಯಲ್ಲಿ ಕೆನೆಪದರ ಆದಾಯಮಿತಿಯನ್ನು 6 ಲಕ್ಷದಿಂದ 8 ಲಕ್ಷ ರೂ.ಗಳಿಗೆ ಏರಿಸಲಾಗಿದೆ ಎಂದು ಅಧಧಿಕೃತ ಮೂಲಗಳು ತಿಳಿಸಿವೆ.

ಸತತ ಮೂರು ವರ್ಷಗಳ ಕಾಲ 8 ಲಕ್ಷ ರೂಪಾಯಿಗಳಿಗಿಂತ ಅಧಿಧಿಕ ವಾರ್ಷಿಕ ಆದಾಯ ಹೊಂದಿದ ವ್ಯಕ್ತಿಯನ್ನು ಕೆನೆಪದರ ವ್ಯಾಪ್ತಿಗೆ ಸೇರಿಸಲಾಗುತ್ತದೆ. ಅಂಥವರಿಗೆ ಯಾವುದೇ ಮೀಸಲಾತಿ ಸೌಲಭ್ಯ ದೊರಕುವುದಿಲ್ಲ. 'ಹಿಂದುಳಿದ ವರ್ಗಗಳಲ್ಲಿ ಕೆನೆಪದರವನ್ನು ಪರಿಗಣಿಸುವ ನಿಟ್ಟಿನಲ್ಲಿ ಕನಿಷ್ಠ ಆದಾಯಮಿತಿಯನ್ನು 6 ರಿಂದ 8 ಲಕ್ಷ ರೂ.ಗೆ ಏರಿಸಲಾಗಿದೆ,' ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಬುಧವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. 1993ರಲ್ಲಿ 1 ಲಕ್ಷ ರೂ.ಗಳಿಗೆ ಇದ್ದ ಈ ಮಿತಿ, 2004ರಲ್ಲಿ 2.5 ಲಕ್ಷಕ್ಕೆ, ಬಳಿಕ 2008ರಲ್ಲಿ 4.5 ಲಕ್ಷಕ್ಕೆ ಏರಿಸಲಾಗಿತ್ತು. 2013 ರಲ್ಲಿ 6 ಲಕ್ಷ ರೂ.ಗೆ ಏರಿಸಲಾಗಿದ್ದ ಆದಾಯಮಿತಿಯನ್ನು ಈಗ 8 ಲಕ್ಷಕ್ಕೆ ಏರಿಸಲಾಗಿದೆ.

ಆ. 23ರಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಈ ವಿಚಾರವನ್ನು ಕೇಂದ್ರ ಸಂಪುಟದ ಮುಂದೆ ಪ್ರಸ್ತಾಪಿಸಿದ್ದರು. ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯವೂ ಇದಕ್ಕೆ ಸಮ್ಮತಿ ಸೂಚಿಸಿದ್ದು, 'ಇತರೆ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ,' ಎಂದಿದೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ವಿಧೇಯಕವನ್ನು ಸರಕಾರ ಪಾರ್ಲಿಮೆಂಟಿನಲ್ಲಿ ಪ್ರಸ್ತಾಪಿಸಿದೆ. ಅಲ್ಲದೆ ಸಂವಿಧಾನದ 340 ವಿಧಿಯ ಪ್ರಕಾರ ಒಬಿಸಿಗಳನ್ನು ವಿಂಗಡಿಸಿ ಅದರಲ್ಲೇ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ನೀಡುವ ಕುರಿತು ಚರ್ಚಿಸಲಾಗುತ್ತಿದೆ ಎನ್ನಲಾಗಿದೆ.

ಗಳಿಕೆ ರಜೆ

💫💫💫💫💫💫💫💫💫💫💫
*ಗಳಿಕೆ ರಜೆ*

 Wednesday, 09.08.2017, 3:00 AM    ವಿಜಯವಾಣಿ ಸುದ್ದಿಜಾಲ

4. *ಬಿಡುವಿಲ್ಲದ ಇಲಾಖಾ ನೌಕರರಿಗೆ ಗಳಿಕೆ ರಜೆ* (Earned Leave)

ಒಂದು ಕ್ಯಾಲೆಂಡರ್ ವರ್ಷದಲ್ಲಿ 30 ದಿನಗಳ ಗಳಿಕೆ ರಜೆ ಲಭ್ಯ. ಇದನ್ನು ಎರಡು ಕಂತುಗಳಲ್ಲಿ ಅಂದರೆ ಪ್ರತಿವರ್ಷ ಜನವರಿ 1 ರಂತೆ 15 ದಿನಗಳು ಮತ್ತು ಜುಲೈ 1 ರಂದು 15 ದಿನಗಳು ಮುಂಗಡವಾಗಿ ಸರ್ಕಾರಿ ನೌಕರನ ರಜೆ ಲೆಕ್ಕಕ್ಕೆ ಜಮೆ ಮಾಡಲಾಗುತ್ತದೆ. ಹೀಗೆ ಜಮೆ ಮಾಡಿದ ಗಳಿಕೆ ರಜೆಯು ಒಟ್ಟು 300 ದಿನಗಳಿಗೆ ಮೀರಕೂಡದು. ಸರ್ಕಾರಿ ನೌಕರನ ಹಕ್ಕಿನಲ್ಲಿ ಡಿಸೆಂಬರ್ ಅಥವಾ ಜೂನ್ ತಿಂಗಳ ಕೊನೆಯ ದಿನದಂದು ಗಳಿಕೆ ರಜೆಯು 300 ದಿನಗಳಿಗಿಂತ ಹೆಚ್ಚು, 15 ದಿನಗಳ ಗಳಿಕೆ ರಜೆಯನ್ನು ಪ್ರತ್ಯೇಕವಾಗಿಡಬೇಕು. ಮತ್ತು ಮೊದಲಿಗೆ ಆ ಅರ್ಧ ವರ್ಷದಲ್ಲಿ ಸರ್ಕಾರಿ ನೌಕರನು ಬಳಸಿಕೊಳ್ಳುವ ಗಳಿಕೆ ರಜೆಗೆ ಸರಿ ಹೊಂದಿಸಬೇಕು. ನಂತರ ಯಾವುದೇ ಗಳಿಕೆ ರಜೆ ಉಳಿದಿದ್ದರೆ ಅದನ್ನು ಉಳಿದಿರುವ ಸದರಿ ಗಳಿಕೆ ರಜೆ ಹಾಗೂ ಈಗಾಗಲೆ ಹಕ್ಕಿನಲ್ಲಿರುವ ಗಳಿಕೆ ರಜೆ. ಇವೆರಡು ಸೇರಿ ಗರಿಷ್ಠ 300 ದಿನಗಳಿಗೆ ಮೀರದಂತೆ ಅರ್ಧ ವರ್ಷದ ಅಂತ್ಯದಲ್ಲಿ ಗಳಿಕೆ ರಜೆಯ ಲೆಕ್ಕಕ್ಕೆ ಜಮೆ ಮಾಡಬೇಕು. ಸರ್ಕಾರಿ ನೌಕರನು ನೇಮಕಗೊಂಡ ಪ್ರತಿ ಪೂರ್ಣ ಕ್ಯಾಲೆಂಡರ್ ತಿಂಗಳಿಗೆ ಎರಡೂವರೆ ದಿನಗಳ ದರದಲ್ಲಿ ಗಳಿಕೆ ರಜೆಯನ್ನು ಜಮೆ ಮಾಡಬೇಕು. ಸರ್ಕಾರಿ ನೌಕರನು ನಿವೃತ್ತಿ ಅಥವಾ ರಾಜೀನಾಮೆ ನೀಡಿದಾಗ ಸೇವೆಯು ಪೂರ್ಣಗೊಂಡ ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಎರಡೂವರೆ ದಿನಗಳಂತೆ ಲೆಕ್ಕಹಾಕಬೇಕು. ಸರ್ಕಾರಿ ನೌಕರನನ್ನು ಸೇವೆಯಿಂದ ವಜಾ ಮಾಡಿದಾಗ ಅಥವಾ ತೆಗೆದು ಹಾಕಿದಾಗ ಅಥವಾ ಸೇವೆಯಲ್ಲಿರುವಾಗಲೇ ಮೃತನಾದಾಗ ಆ ಕ್ಯಾಲೆಂಡರ್ ತಿಂಗಳಿನ ಹಿಂದಿನ ತಿಂಗಳಿನ ಕೊನೆಯವರೆಗೆ ಪೂರ್ಣಗೊಂಡ ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಎರಡೂವರೆ ದಿನಗಳಂತೆ ಲೆಕ್ಕಹಾಕಲಾಗುತ್ತದೆ. ಅರ್ಧವರ್ಷ ಮುಗಿಯುವ ಕೊನೆಯ ದಿನ ಸರ್ಕಾರಿ ನೌಕರನು ರಜೆಯ ಮೇಲಿದ್ದರೆ ಅವನು ಕರ್ತವ್ಯಕ್ಕೆ ಹಿಂತಿರುಗುವುದನ್ನು ಖಾತ್ರಿ ಮಾಡಿಕೊಂಡ ನಂತರ ಮುಂದಿನ ಅರ್ಧವರ್ಷದ ಮೊದಲ ದಿನ 15 ದಿನಗಳ ಮುಂಗಡ ಗಳಿಕೆ ರಜೆಯನ್ನು ಜಮೆ ಮಾಡಬೇಕು.

5. *ಬಿಡುವಿರುವ ಇಲಾಖಾ ನೌಕರರಿಗೆ ಗಳಿಕೆ ರಜೆ* (EL for vacation)

ಬಿಡುವಿರುವ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಜನವರಿ ಮತ್ತು ಜುಲೈ ತಿಂಗಳ ಮೊದಲನೆ ದಿನದಂದು 5 ದಿನಗಳಂತೆ ಎರಡು ಕಂತುಗಳಲ್ಲಿ ಗಳಿಕೆ ರಜೆಗೆ ಮುಂಚಿತವಾಗಿ ಜಮೆ ಮಾಡಲಾಗುತ್ತದೆ. ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ಅರ್ಧ ವರ್ಷದಲ್ಲಿ ಯಾವುದೇ ಅಸಾಧಾರಣ ರಜೆ ಗೈರುಹಾಜರಿ ಅವಧಿ, ಅಮಾನತ್ತಿನ ಅವಧಿ, ಲೆಕ್ಕಕ್ಕಿಲ್ಲದ ಅವಧಿ ಅಥವಾ ಕರ್ತವ್ಯವಲ್ಲದ ಅವಧಿಯೆಂದು ತೀರ್ವನಿಸಿದಾಗ ಈ ಅವಧಿಯ ಮೂವತ್ತನೆಯ ಒಂದು ಭಾಗವನ್ನು, 5 ದಿನಗಳ ಗರಿಷ್ಠ ಮಿತಿಗೊಳಪಟ್ಟು ಕಡಿಮೆ ಮಾಡಬೇಕು. ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ಅರ್ಧ ವರ್ಷದಲ್ಲಿ ನೇಮಕವಾದರೆ ಅಥವಾ ಸೇವೆಯಲ್ಲಿಲ್ಲವಾದರೆ ಆ ಅರ್ಧವರ್ಷದಲ್ಲಿ ಅವನು ಸಲ್ಲಿಸಿದ ಅಥವಾ ಸಲ್ಲಿಸಬಹುದಾದ ಪ್ರತಿ ಪೂರ್ಣಗೊಂಡ ಕ್ಯಾಲೆಂಡರ್ ತಿಂಗಳಿಗೆ 5/6 ದಿನದ ದರದಲ್ಲಿ ವೇತನ ರಜೆಯನ್ನು ನೀಡಬೇಕು. ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ವರ್ಷದಲ್ಲಿ ಬಿಡುವನ್ನು ಭಾಗಶಃ ಬಳಸಿಕೊಂಡ ಪಕ್ಷದಲ್ಲಿ ಆ ವರ್ಷದ ಬಿಡುವಿನಲ್ಲಿ ಆತ ಬಳಸಿಕೊಳ್ಳದೇ ಇರುವ ಬಿಡುವಿನ ದಿವಸಗಳಷ್ಟಕ್ಕೆ ಅಂತಹ ಅನುಪಾತದಲ್ಲಿ 30 ದಿವಸಗಳ ಗಳಿಕೆ ರಜೆಯನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. ಆದರೆ ಖಾಯಂ ಸೇವೆ ಅಥವಾ ಅರೆ ಖಾಯಂ ಸೇವೆಯಲ್ಲಿಲ್ಲದ ಸರ್ಕಾರಿ ನೌಕರನಿಗೆ ಸೇವೆಯ ಮೊದಲನೆ ವರ್ಷಕ್ಕೆ ಸಂಬಂಧಿಸಿದಂತೆ ಇದು ಅನ್ವಯಿಸುವುದಿಲ್ಲ.

ಅರ್ಧವೇತನ ರಜೆಯ ನಿಯಮಗಳು

⚡⚡⚡⚡⚡⚡⚡⚡⚡⚡⚡

*ಅರ್ಧವೇತನ ರಜೆಯ ನಿಯಮಗಳು*

 Wednesday, 16.08.2017, 3:00 AM    ವಿಜಯವಾಣಿ ಸುದ್ದಿಜಾಲ 

| ಲ.ರಾಘವೇಂದ್ರ

ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ವರ್ಷದಲ್ಲಿ ಬಿಡುವನ್ನು ಭಾಗಶಃ ಬಳಸಿಕೊಂಡ ಪಕ್ಷದಲ್ಲಿ ಆ ವರ್ಷದ ಬಿಡುವಿನಲ್ಲಿ ಆತ ಬಳಸಿಕೊಳ್ಳದಿರುವ ಬಿಡುವಿನ ದಿವಸಗಳಷ್ಟಕ್ಕೆ 30 ದಿವಸಗಳ ಅಂತಹ ಅನುಪಾತದಲ್ಲಿ ಗಳಿಕೆ ರಜೆಯನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. ಆದರೆ ಕಾಯಂ ಸೇವೆ ಅಥವಾ ಅರೆ ಕಾಯಂ ಸೇವೆಯಲ್ಲಿಲ್ಲದ ಸರ್ಕಾರಿ ನೌಕರನಿಗೆ ಸೇವೆಯ ಮೊದಲನೆ ವರ್ಷಕ್ಕೆ ಸಂಬಂಧಿಸಿದಂತೆ ಇದು ಅನ್ವಯಿಸುವುದಿಲ್ಲ

ಉದಾ: ಒಂದು ವರ್ಷದಲ್ಲಿ 120 ದಿನಗಳ ಬಿಡುವಿರುವ ಇಲಾಖೆಯ ಒಬ್ಬ ಸರ್ಕಾರಿ ನೌಕರನನ್ನು ಬಿಡುವಿನ ದಿನಗಳಾದ 8.5.2005 ರಿಂದ 27.5.2005 ರವರೆಗೆ 20 ದಿನಗಳು ದಾಸ್ತಾನು ಪರಿಶೀಲನಾ ಕಾರ್ಯಕ್ಕಾಗಿ ನಿಯೋಜಿಸಿದೆ. ಈ ಅವಧಿಯಲ್ಲಿ ಅವರಿಗೆ ಲಭ್ಯವಾಗುವ ಹೆಚ್ಚುವರಿ ಗಳಿಕೆ ರಜೆಯನ್ನು ಲೆಕ್ಕಾಚಾರ ಮಾಡಿ.

ಹೆಚ್ಚುವರಿ ಗಳಿಕೆ ರಜೆ = (30(ಉಪಯೋಗಿಸದ ಬಿಡುವು) / (ವರ್ಷದ ಒಟ್ಟು ಬಿಡುವಿನ ಅವಧಿ)

= (3020) /120 = 5 ದಿನಗಳು (ಕ.ಸ.ಸೇ.ನಿ. 113(3-ಎ) ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ವರ್ಷದಲ್ಲಿ ಯಾವುದೇ ಬಿಡುವನ್ನು ಉಪಯೋಗಿಸಿಕೊಳ್ಳದೇ ಇದ್ದರೆ ಆ ವರ್ಷಕ್ಕೆ ಸಂಬಂಧಪಟ್ಟಂತೆ ಕ.ಸ.ಸೇ.ನಿ. 112 ರಂತೆ ಗಳಿಕೆ ರಜೆಯನ್ನು ಅನುಮತಿಸಲಾಗುತ್ತದೆ.

(ಕ.ಸ.ಸೇ.ನಿ. 113(3ಬಿ)) ಬಿಡುವಿರುವ ಇಲಾಖೆಯಿಂದ ಬಿಡುವಿರದ ಇಲಾಖೆಗೆ ವರ್ಗಾವಣೆಯಾದಾಗ ಸರ್ಕಾರಿ ನೌಕರನು ಅಂತಹ ವರ್ಗಾವಣೆಯ ಹಿಂದಿನ ಅರ್ಧ ಕ್ಯಾಲೆಂಡರ್ ವರ್ಷದಿಂದ ವರ್ಗಾವಣೆಯ ದಿನಾಂಕದವರೆಗೆ ಪೂರ್ಣಗೊಂಡ ಪ್ರತಿಯೊಂದು ತಿಂಗಳಿಗೆ 5/6 ದಿನದ ದರದಲ್ಲಿ ಗಳಿಕೆ ರಜೆ ಲೆಕ್ಕ ಹಾಕಲಾಗುವುದು. ವರ್ಗಾವಣೆಯಾದ ದಿನಾಂಕದಿಂದ ಅವನು ಬಿಡುವಿಲ್ಲದ ಇಲಾಖಾ ನೌಕರನಿಗೆ ಅನ್ವಯವಾಗುವ ಗಳಿಕೆ ರಜೆಯನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ.

(ಕ.ಸ.ಸೇ.ನಿ. 113(6ಎ)) ವರ್ಗಾವಣೆಯಾದ ದಿನಾಂಕದಿಂದ ಅರ್ಧ ಕ್ಯಾಲೆಂಡರ್ ವರ್ಷದ ಕೊನೆಯವರೆಗೆ ಅವನ ಸೇವೆಯು ಪೂರ್ತಿಗೊಂಡ ಪ್ರತಿಯೊಂದು ತಿಂಗಳಿಗೆ 5/6 ದಿನದ ದರದಲ್ಲಿ ಗಳಿಕೆ ರಜೆಯನ್ನು ಲೆಕ್ಕಹಾಕಲಾಗುವುದು.

(ಕ.ಸ.ಸೇ.ನಿ. 113(7ಎ)) 6. ಅರ್ಧ ವೇತನ ರಜೆ (ಏಚ್ಝ್ಛ ಕಚಢ ಔಛಿಚಡಛಿ): ಪ್ರತಿಯೊಂದು ಕ್ಯಾಲೆಂಡರ್ ವರ್ಷದ ಜನವರಿ ಮತ್ತು ಜುಲೈ ತಿಂಗಳ ಮೊದಲ ದಿನಾಂಕದಂದು ಪ್ರತಿ ಅರ್ಧವರ್ಷಕ್ಕೆ 10 ದಿನಗಳಂತೆ 2 ಕಂತುಗಳಲ್ಲಿ ಮುಂಚಿತವಾಗಿ ಜಮೆ ಮಾಡಬೇಕು. ಇದು 1.7.95 ರಿಂದ ಜಾರಿಗೆ ಬಂದಿದೆ. ಅರ್ಧ ವೇತನ ರಜೆಯು ಬಿಡುವಿರುವ ಇಲಾಖೆಯ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ.

ಸರ್ಕಾರಿ ನೌಕರನು ಯಾವುದೇ ಅರ್ಧ ವರ್ಷದಲ್ಲಿ ಯಾವುದೇ ಅಸಾಧಾರಣ ರಜೆ, ಗೈರುಹಾಜರಿ ಅವಧಿ, ಅಮಾನತ್ತಿನ ಅವಧಿ, ಲೆಕ್ಕಕ್ಕಿಲ್ಲದ ಅವಧಿ ಅಥವಾ ಕರ್ತವ್ಯವಲ್ಲದ ಅವಧಿಯೆಂದು ತೀರ್ವನಿಸಿದಾಗ ಈ ಅವಧಿಯ 1/18 ಭಾಗವನ್ನು, 10 ದಿನಗಳ ಗರಿಷ್ಠ ಮಿತಿಗೊಳಪಟ್ಟು ಕಡಿಮೆ ಮಾಡಬೇಕು.

ಸರ್ಕಾರಿ ನೌಕರನು ನೇಮಕಗೊಂಡ ಪ್ರತಿಪೂರ್ಣ ಕ್ಯಾಲೆಂಡರ್ ತಿಂಗಳಿಗೆ 5/3 ದಿನಗಳ ದರದಲ್ಲಿ ಅರ್ಧ ವೇತನ ರಜೆಯನ್ನು ಜಮೆ ಮಾಡಬೇಕು(ಕ.ಸ.ಸೇ.ನಿ. 112 (2ಎ)

ಸರ್ಕಾರಿ ನೌಕರನು ನಿವೃತ್ತಿ ಅಥವಾ ರಾಜೀನಾಮೆ ನೀಡಿದಾಗ ಸೇವೆಯು ಪೂರ್ಣಗೊಂಡ ಪ್ರತಿ ಕ್ಯಾಲೆಂಡರ್ ತಿಂಗಳಿಗೆ 5/3 ದಿನಗಳ ದರದಲ್ಲಿ ಅರ್ಧವೇತನ ರಜೆಯನ್ನು ಜಮೆ ಮಾಡಬೇಕು(ಕ.ಸ.ಸೇ.ನಿ. 114(2ಬಿ).

ಸರ್ಕಾರಿ ನೌಕರನನ್ನು ಸೇವೆಯಿಂದ ವಜಾ ಮಾಡಿದಾಗ ಅಥವಾ ತೆಗೆದು ಹಾಕಿದಾಗ ಅಥವಾ ಸೇವೆಯಲ್ಲಿರುವಾಗಲೇ ಮೃತನಾದಾಗ ಆ ಕ್ಯಾಲೆಂಡರ್ ತಿಂಗಳಿನ ಹಿಂದಿನ ಕೊನೆಯವರೆಗೆ ಪೂರ್ಣಗೊಂಡ ಪ್ರತಿ ತಿಂಗಳಿಗೆ 5/3 ದಿನಗಳ ದರದಲ್ಲಿ ಅರ್ಧ ವೇತನ ರಜೆಯನ್ನು ಜಮೆ ಮಾಡಬೇಕು.

⚡⚡⚡⚡⚡

*ಗಳಿಸದ ರಜೆ ಮತ್ತು ಅಸಾಧಾರಣ ರಜೆ


*ಗಳಿಸದ ರಜೆ ಮತ್ತು ಅಸಾಧಾರಣ ರಜೆ*

 Wednesday, 23.08.2017, 3:00 AM    ವಿಜಯವಾಣಿ ಸುದ್ದಿಜಾಲ 

| ಲ.ರಾಘವೇಂದ್ರ

*ಗಳಿಸದ ರಜೆ*
(ಔಛಿಚಡಛಿ ್ಞಠಿ ಛ್ಠಛಿ): ಕಾಯಂ ಸರ್ಕಾರಿ ನೌಕರರಿಗೆ ಈ ಕೆಳಕಂಡ ಷರತ್ತುಗೊಳಪಟ್ಟು ಮಂಜೂರಾತಿ ಪ್ರಾಧಿಕಾರ ಗಳಿಸಿದ ರಜೆಯನ್ನು ಮಂಜೂರು ಮಾಡಬಹುದು. ಸರ್ಕಾರಿ ನೌಕರನು ರಜೆ ಮುಗಿದ ನಂತರ ಕೆಲಸಕ್ಕೆ ಹಿಂತಿರುಗುತ್ತಾನೆ ಎಂಬ ಭರವಸೆ ಇರಬೇಕು. ಅವನು ಮುಂದೆ ಗಳಿಸುವ ಸಂಭವವಿರುವ ಅರ್ಧವೇತನ ರಜೆಗೆ ಪರಿಮಿತವಾಗಿರಬೇಕು.

ಅವನ ಒಟ್ಟು ಸೇವಾವಧಿಯಲ್ಲಿ 360 ದಿನಗಳ ಗಳಿಸದ ರಜೆಯನ್ನು ಮಂಜೂರು ಮಾಡಬಹುದು. ಆ ಪೈಕಿ ಒಂದು ಸಲಕ್ಕೆ 90 ದಿನಗಳಿಗೆ ಹೆಚ್ಚಾಗದಂತೆ, ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ 180 ದಿನಗಳಿಗೆ ಹೆಚ್ಚಾಗದಂತೆ ಮಂಜೂರು ಮಾಡಬಹುದು. ಒಂದು ವರ್ಷ ಕಡಿಮೆ ಇಲ್ಲದ ನಿರಂತರ ಸೇವೆ ಸಲ್ಲಿಸಿದ ತಾತ್ಕಾಲಿಕ ನೌಕರನು ಕ್ಷಯ, ಕುಷ್ಠ, ಕ್ಯಾನ್ಸರ್, ಮಾನಸಿಕ ಅಸ್ವಸ್ಥತೆಗಳಿಂದ ನರಳುತ್ತಿದ್ದಲ್ಲಿ ಆತನ ಹುದ್ದೆಯು ಅವನು ಹಿಂದಿರುಗುವವರೆಗೆ ಮುಂದುವರೆಯುವ ಸಂಭವವಿದ್ದಲ್ಲಿ 360 ದಿನಗಳಿಗೆ ಮೀರದಂತೆ ಗಳಿಸಿದ ರಜೆಯನ್ನು ಕ.ಸ.ಸೇ.ನಿ. 114 (6 ಎಬಿಸಿಡಿ)ಗಳ ಷರತ್ತುಗಳಿಗೊಳಪಟ್ಟು ಮಂಜೂರು ಮಾಡಬಹುದು. ಗಳಿಸದ ರಜೆಯ ಮೇಲಿರುವ ಸರ್ಕಾರಿ ನೌಕರನು ಕೆಲಸಕ್ಕೆ ಹಿಂತಿರುಗಿ ರಜೆಯನ್ನು ಗಳಿಸುವುದಕ್ಕೆ ಮುಂಚೆಯೇ ರಾಜೀನಾಮೆ ಕೊಟ್ಟರೆ ಅಥವಾ ಸ್ವಯಂ ನಿವೃತ್ತಿ ಪಡೆದರೆ ಗಳಿಸದಿರುವ ರಜೆಯಲ್ಲಷ್ಟರ ಮಟ್ಟಿಗೆ ರಜಾ ವೇತನವನ್ನು ಹಿಂದಿರುಗಿಸಲು ಬದ್ಧನಾಗಿರಬೇಕು. ಆದರೆ ಅನಾರೋಗ್ಯದ ನಿಮಿತ್ತ ನಿವೃತ್ತನಾದರೆ ಅಥವಾ 285ರ ಮೇರೆಗೆ ಕಡ್ಡಾಯ ನಿವೃತ್ತಿಗೊಳಿಸಿದರೆ ಅಥವಾ ಮೃತನಾದರೆ ರಜಾ ವೇತನವನ್ನು ವಸೂಲು ಮಾಡುವಂತಿಲ್ಲ.

(ಕ.ಸ.ಸೇ.ನಿ. 114 (7ಬಿ)

8. *ಅಸಾಧಾರಣ ರಜೆ* (ಉಠ್ಟಿಚ ಣ್ಟಛಜ್ಞಿಚ್ಟಢ ್ಝಚಡಛಿ): ಕಾಯಂ ಸರ್ಕಾರಿ ನೌಕರರಿಗೆ ವಿಶೇಷ ಸಂದರ್ಭದಲ್ಲಿ ಅವರ ಹಕ್ಕಿನಲ್ಲಿ ಯಾವುದೇರಜೆಯು ಲಭ್ಯವಿಲ್ಲದಿದ್ದಾಗ ಅಥವಾ ಸದರಿ ನೌಕರನು ಲಿಖಿತ ಮನವಿ ಮಾಡಿಕೊಂಡಾಗ ಅಸಾಧಾರಣ ರಜೆ ಮಾಡುವಂತಿಲ್ಲ.

1. ವೈದ್ಯಕೀಯ ಪ್ರಮಾಣ ಪತ್ರವಿಲ್ಲದೇ 4 ತಿಂಗಳು.

2. ಒಂದು ವರ್ಷಕ್ಕಿಂತ ಕಡಿಮೆ ಇರದ ನಿರಂತರ ಸೇವೆಯನ್ನು ಪೂರ್ಣಗೊಳಿಸಿದ್ದಾಗ ಅಗತ್ಯಪಡಿಸಿದ ವೈದ್ಯಕೀಯ ಪ್ರಮಾಣಪತ್ರದಿಂದ ಸಮರ್ಥಿಸಿದ ಸಾಮಾನ್ಯ ಕಾಯಿಲೆಗಾಗಿ 6 ತಿಂಗಳು.

3. ಕ್ಯಾನ್ಸರ್, ಮಾನಸಿಕ ಅಸ್ವಸ್ಥತೆ, ಕ್ಷಯ, ಕುಷ್ಠ ಮುಂತಾದ ರೋಗಗಳಿಗೆ ಸರ್ಕಾರ ಚಿಕಿತ್ಸೆ ಪಡೆಯಲು ಜಿಲ್ಲಾ ಸರ್ಜನ್ ದರ್ಜೆಯ ವೈದ್ಯರು ನೀಡಿರುವ ವೈದ್ಯಕೀಯ ಪ್ರಮಾಣಪತ್ರದ ಸಮರ್ಥನೆಯ ಆಧಾರದ ಮೇಲೆ 18 ತಿಂಗಳು ಅಸಾಧಾರಣ ರಜೆ ಮಂಜೂರು ಮಾಡಬಹುದು.

(ಕ.ಸ.ಸೇ.ನಿ. 1174 (ಬಿ. 1, 2, 3).

ಸರ್ಕಾರದ ಪೂರ್ವ ಅನುಮೋದನೆಯ ಮೇರೆಗೆ ಮೂರು ವರ್ಷದ ನಿರಂತರ ಸೇವೆ ಸಲ್ಲಿಸಿದ ಸರ್ಕಾರಿ ನೌಕರನಿಗೆ ಆತನ ಕರ್ತವ್ಯಕ್ಕೆ ಪೂರಕವಾಗುವಂತೆ ಉನ್ನತ ಶಿಕ್ಷಣಕ್ಕೆ ಸ್ನಾತಕ ಪೂರ್ವ, ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಿಗೆ 2 ವರ್ಷ ಮತ್ತು ಸಂಶೋಧನಾ ಪದವಿಗಳಿಗೆ 3 ವರ್ಷಗಳವರೆಗೆ ಅಸಾಧಾರಣ ರಜೆಯನ್ನು ಮಂಜೂರು ಮಾಡಬಹುದು. ಘಕ.ಸ.ಸೇ.ನಿ. 117 (ಬಿ-4).

ಅಸಾಧಾರಣ ರಜೆಯ ಅವಧಿ ಮುಗಿದ ನಂತರ ನೌಕರನು ಕರ್ತವ್ಯಕ್ಕೆ ಹಿಂತಿರುಗದಿದ್ದಲ್ಲಿ ಸರ್ಕಾರವು ಅಸಾಧಾರಣ ಸನ್ನಿವೇಶಗಳನ್ನು ಗಮನಿಸಿ ಅನ್ಯತಾ ನಿರ್ಧರಿಸದಿದ್ದರೆ ಕ.ಸ.ಸೇ.ನಿ. (ಸಿ.ಸಿ.ಎ.) ನಿಯಮಾವಳಿ 1957 ರಂತೆ ಕ್ರಮ ಕೈಗೊಳ್ಳಬಹುದು. ರಜಾ ಮಂಜೂರಾತಿ ಮಾಡುವ ಅಧಿಕಾರಿಯು ರಜೆರಹಿತ ಗೈರುಹಾಜರಿ ಅವಧಿಯನ್ನು ಪೂರ್ವಾನ್ವಯವಾಗಿ ಅಸಾಧಾರಣ ರಜೆಯನ್ನಾಗಿ ಪರಿವರ್ತಿಸಬಹುದು.

ಅಧ್ಯಯನಕ್ಕಾಗಿ ಹಾಗೂ ವೈದ್ಯಕೀಯ ಕಾರಣಗಳಿಗಾಗಿ ಬಳಸಿಕೊಂಡ ಅಸಾಧಾರಣ ರಜೆಯ ಅವಧಿಯನ್ನು ವೇತನ ಬಡ್ತಿಗೆ ಪರಿವರ್ತಿಸಲಾಗುವುದು. ನೌಕರನ ಒಟ್ಟು ಸೇವಾವಧಿಯಲ್ಲಿ 3 ವರ್ಷಗಳ ಅಸಾಧಾರಣ ರಜೆಯ ಅವಧಿಯನ್ನು ನಿವೃತ್ತಿ ವೇತನ ಸೌಲಭ್ಯಗಳಿಗೆ ಅರ್ಹ ಸೇವೆಯೆಂದು ಪರಿಗಣಿಸಲಾಗುವುದು.

ಪರೀಕ್ಷಾ ರಜೆ, ಪ್ರಸೂತಿ ರಜೆ

*ಪರೀಕ್ಷಾ ರಜೆ ಪ್ರಸೂತಿ ರಜೆ*

 Wednesday, 30.08.2017, 3:00 AM    ವಿಜಯವಾಣಿ ಸುದ್ದಿಜಾಲ 

| ಲ. ರಾಘವೇಂದ್ರ

*ಪರೀಕ್ಷಾ ರಜೆ (Examination Leave):* ನಿಗದಿಪಡಿಸಿದ ಇಲಾಖಾ ಪರೀಕ್ಷೆಯ ಸಂಬಂಧದಲ್ಲಿ ಪರೀಕ್ಷೆಗೆ ಹಾಜರಾಗಲು ಆತನ ಸೇವಾವಧಿಯಲ್ಲಿ 2 ಬಾರಿ ಮಾತ್ರ ಅನುಮತಿ ನೀಡಲಾಗುವುದು ಆದರೆ ರಾಜ್ಯ ಲೆಕ್ಕಪತ್ರ ಇಲಾಖೆಯ ಎಸ್​ಎಎಸ್ ಹಾಗೂ ಖಜಾನೆ ಇಲಾಖೆಯ ಟ್ರೆಝುರಿ ಹೆಡ್ ಅಕೌಂಟಂಟ್ ಪರೀಕ್ಷೆಗೆ ಹಾಜರಾಗಲು 3 ಬಾರಿ ಅನುಮತಿ ನೀಡಲಾಗುವುದು. ಈ ಸಂದರ್ಭಗಳಲ್ಲಿ ಪರೀಕ್ಷೆ ದಿನ ಮತ್ತು ಪ್ರಯಾಣದ ದಿನಗಳಿಗೆ ರಜೆ ನೀಡಲಾಗುವುದು.

*ಪ್ರಸೂತಿ ರಜೆ (Maternity Leave)*: ಎರಡು ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ ಪ್ರಸೂತಿ ರಜೆಯನ್ನು ಅದರ ಆರಂಭದ ದಿನಾಂಕದಿಂದ 180 ದಿನಗಳು ನೀಡಬಹುದು. ಈ ಅವಧಿಯಲ್ಲಿ ಅವಳು ರಜೆಯ ಮೇಲೆ ಹೋಗುವ ನಿಕಟಪೂರ್ವದಲ್ಲಿ ಆಕೆ ಪಡೆಯುತ್ತಿದ್ದ ವೇತನಕ್ಕೆ ಸಮನಾದ ರಜಾವೇತನವನ್ನು ನೀಡಲಾಗುವುಗು. (ಕ.ಸ.ಸೇ.ನಿ. 135(1).

ಇದನ್ನು ವೊಕೆಷನ್ ರಜೆ ಅಥವಾ ಇನ್ನಾವುದೇ ರೀತಿಯ ರಜೆಯೊಂದಿಗೆ ಸೇರಿಸಬಹುದು. ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಇದ್ದರೂ 60 ದಿನಗಳಿಗೆ ಮೀರದಂತೆ ರಜೆಯನ್ನು ಮಂಜೂರು ಮಾಡಬಹುದು (ಕ.ಸ.ಸೇ.ವಿ. 135 (4ಎ) ಪ್ರಸೂತಿ ರಜೆಯನ್ನು ಯಾವುದೇ ರಜೆಯ ಲೆಕ್ಕದಿಂದ ಕಳೆಯತಕ್ಕದ್ದಲ್ಲ. (ಕ.ಸ.ಸೇ.ವಿ. 135 (4ಬಿ).

*ಗರ್ಭಸ್ರಾವ ಅಥವಾ ಗರ್ಭಪಾತ ರಜೆ (Medical Termination Leave):* ವೈದ್ಯಕೀಯ ಪರ್ಯವಸಾನ ಅಧಿನಿಯಮ 71ರ ಮೇರೆಗೆ ಪ್ರೇರಣೆಯಿಂದ ಮಾಡಿಸಿಕೊಂಡ ಗರ್ಭಪಾತವು ಸೇರಿದಂತೆ ಗರ್ಭಸ್ರಾವ ಅಥವಾ ಗರ್ಭಪಾತವಾದಾಗ ವೈದ್ಯಕೀಯ ಪ್ರಮಾಣ ಪತ್ರದ ಆಧಾರದಿಂದ 2 ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ 6 ವಾರಗಳಿಗೆ ಮೀರದಂತೆ ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135 (2ಎ, ಬಿ, 3)

*ಮಗುವನ್ನು ದತ್ತು ತೆಗೆದುಕೊಂಡಾಗ ಮಹಿಳಾ ಸರ್ಕಾರಿ ನೌಕರಳಿಗೆ ರಜೆ Leave to female Govt. Servant on adoption of child):* ಎರಡು ಜೀವಂತ ಮಕ್ಕಳನ್ನು ಹೊಂದಿರದ ಮಹಿಳಾ ಸರ್ಕಾರಿ ನೌಕರಳು ಮಗುವೊಂದನ್ನು ದತ್ತು ತೆಗೆದುಕೊಂಡಾಗ ಒಂದು ವರ್ಷದ ಅಥವಾ ದತ್ತಕ ಮಗುವಿಗೆ ಒಂದು ವರ್ಷ ವಯಸ್ಸಾಗುವವರೆಗೆ ಇವುಗಳಲ್ಲಿ ಯಾವುದು ಕಡಿಮೆಯೊ ಆವರೆಗೆ ದೊರೆಯಬಹುದಾದ ಮತ್ತು ಅನುಮತಿಸಬಹುದಾದ ರಜೆಯನ್ನು (60 ದಿನಗಳನ್ನು ಮೀರದಂತೆ, ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಪರಿವರ್ತಿತ ರಜೆ ಮತ್ತು ಗಳಿಸದ ರಜೆ ಸೇರಿದಂತೆ) ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135ಎ)

*ಪಿತೃತ್ವ ರಜೆ (Paternity Leave):* ಎರಡು ಅಥವಾ ಹೆಚ್ಚಿಗೆ ಜೀವಂತ ಮಕ್ಕಳಿಲ್ಲದ ಸರ್ಕಾರಿ ನೌಕರನ ಪತ್ನಿಯ ಹೆರಿಗೆ ಸಂದರ್ಭದಲ್ಲಿ ಹೆರಿಗೆ ದಿನಾಂಕದಿಂದ ಪ್ರಾರಂಭವಾಗುವಂತೆ 15 ದಿನಗಳ ಮೆಟರ್ನಿಟಿ ರಜೆಯನ್ನು ಮಂಜೂರು ಮಾಡಬಹುದು. ಇದನ್ನು ಯಾವುದೇ ರಜಾ ಲೆಕ್ಕದಿಂದ ಕಳೆಯತಕ್ಕದ್ದಲ್ಲ ಹಾಗೂ ಸಾಂರ್ದಭಿಕ ರಜೆ ಹೊರತು ಉಳಿದ ಯಾವುದೇ ರಜೆಯೊಂದಿಗೆ ಸಂಯೋಜಿಸಿಕೊಳ್ಳಬಹುದು. ಈ ರಜೆ ಅವಧಿಯಲ್ಲಿ ರಜೆಗೆ ಹೋಗುವ ನಿಕಟ ಪೂರ್ವದಲ್ಲಿದ್ದಂತೆ ವೇತನವು ಪ್ರಾಪ್ತವಾಗುತ್ತದೆ. ಈ ರಜೆಯನ್ನು ನಗದೀಕರಿಸಿಕೊಳ್ಳಲು ಅಥವಾ ಗಳಿಕೆ ರಜೆಯೊಂದಿಗೆ ಸೇರಿಸಿಕೊಳ್ಳಲು ಆಗುವುದಿಲ್ಲ. ಸಾಮಾನ್ಯವಾಗಿ ಈ ರಜೆಯನ್ನು ನಿರಾಕರಿಸುವಂತಿಲ್ಲ (ಕ.ಸ.ಸೇ.ವಿ. 135 (ಬಿ)

ಸೇವಾ ದಾಖಲೆ ನಿರ್ವಹಣೆ ನಿಯಮಗಳು

★ಸೇವಾ ದಾಖಲೆ ನಿರ್ವಹಣೆ ನಿಯಮಗಳು★

 Wednesday, 13.09.2017, 3:00 AM    ವಿಜಯವಾಣಿ ಸುದ್ದಿಜಾಲ

| ಲ. ರಾಘವೇಂದ್ರ

ಗೆಜೆಟೆಡ್ ಮತ್ತು ನಾನ್ ಗೆಜೆಟೆಡ್ ನೌಕರರ ಸೇವಾ ದಾಖಲು ಮಾಡುವುದರಿಂದ ನಿವೃತ್ತಿ ವೇತನದ ದಾಖಲೆ ತಯಾರಿಸಲು ಮತ್ತು ನಿವೃತ್ತಿ ವೇತನ ಲೆಕ್ಕ ಮಾಡಲು ಸಹಾಯವಾಗುತ್ತದೆ. ಗೆಜೆಟೆಡ್ ಅಧಿಕಾರಿಯ ಸೇವಾ ಪುಸ್ತಕವನ್ನು ಮಹಾಲೇಖಪಾಲರೂ, ನಾನ್ ಗೆಜೆಟೆಡ್ ನೌಕರರ ಸೇವಾ ಪುಸ್ತಕವನ್ನು ಕಚೇರಿ ಮುಖ್ಯಸ್ಥರು ತಯಾರಿಸಬೇಕು.

ಪ್ರತಿ ಸರ್ಕಾರಿ ನೌಕರನು ಕೆಲಸಕ್ಕೆ ಸೇರುವ ಮೊದಲು ಸರ್ಕಾರಿ ಖರ್ಚಿನಲ್ಲಿ ನಮೂನೆ 1ರಿಂದ ಸೇವಾ ಪುಸ್ತಕದಲ್ಲಿ ಕೆಳಕಂಡ ಅಂಶಗಳನ್ನು ಎಚ್ಚರಿಕೆಯಿಂದ ಬರೆಯಬೇಕಿದೆ.

1. ಸರ್ಕಾರಿ ನೌಕರನು ಮೊದಲು ಕೆಲಸಕ್ಕೆ ಹಾಜರಾದ ದಿನಾಂಕವನ್ನು ಬೆಳಗ್ಗೆ, ಮಧ್ಯಾಹ್ನವೇ ಸಮಸಹಿತ ಸೇವಾ ಪುಸ್ತಕದಲ್ಲಿ ಬರೆಯಬೇಕು.

2. ಸೇವಾ ಪುಸ್ತಕ ಕಚೇರಿ ಮುಖ್ಯಸ್ಥನ ಸುಪರ್ದಿನಲ್ಲಿರತಕ್ಕದ್ದು ಮತ್ತು ವರ್ಗವಾದಾಗ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಪೂರ್ತಿ ವಿವರಗಳೊಡನೆ ಕಳುಹಿಸುವುದು.

3. ಎಲ್ಲಾ ತರಹದ ಕಾರ್ಯನಿರ್ವಹಣೆ, ಬಡ್ತಿ ಮತ್ತು ಹಂಗಾಮಿ ಬಡ್ತಿಗಳನ್ನು ನಮೂದಿಸಬೇಕು.

4. ಪರೀಕ್ಷಾರ್ಥವಾಗಿ ನಿಗದಿಪಡಿಸಿದ ಸಮಯವನ್ನು ತೃಪ್ತಿಕರವಾಗಿ ಮಾಡಿದ್ದಾನೆಂಬುದನ್ನು ನಮೂದಿಸಬೇಕು.

5. ಸಂಬಳ ಬಡ್ತಿ ವರ್ಗಾವಣೆ ಮತ್ತು ರಜೆ ಬರೆಯಬೇಕು.

6. ಸೇವಾ ಪುಸ್ತಕದಲ್ಲಿ ದಾಖಲಿಸಿದ ಬರಹವನ್ನು ಕಚೇರಿ ಮುಖ್ಯಸ್ಥ ತನ್ನ ಸಹಿಯ ಮೂಲಕ ದೃಢಪಡಿಸಬೇಕು. ಸರ್ಕಾರಿ ನೌಕರನೇ ಮುಖ್ಯಸ್ಥನಾದಲ್ಲಿ ಆತನ ಮೇಲಧಿಕಾರಿಯು ದೃಢೀಕರಿಸಬೇಕು.

7. ಪ್ರತಿಯೊಂದು ದಾಖಲೆಯನ್ನು ಇಲಾಖಾ ಆದೇಶ ಪೇ ಬಿಲ್ ಮತ್ತು ರಜೆ ಪಟ್ಟಿಗಳಿಂದ ಪರೀಕ್ಷಿಸತಕ್ಕದ್ದು.

8. ಕಚೇರಿಯ ಗೆಜೆಟೆಡ್ ಸಹಾಯಕರಿಗೆ ಈ ದೃಡೀಕರಿಸುವುದನ್ನು ವಹಿಸಬಹುದು.

9. ತಿದ್ದುಪಡಿ ಮತ್ತು ಮೇಲ್ಬರವಣಿಗೆಗಳನ್ನು ಬರೆದುದನ್ನು ಸಹಿ ಮೂಲಕ ದೃಢೀಕರಿಸತಕ್ಕದ್ದು.

10. ಇಲಾಖಾ ಪರೀಕ್ಷೆಗಳಲ್ಲಿ ಸರ್ಕಾರಿ ನೌಕರನು ತೇರ್ಗಡೆಯಾಗಿದ್ದರೆ ಸೇವಾ ಪುಸ್ತಕದಲ್ಲೂ ನಮೂದಿಸಬೇಕು. ತೇರ್ಗಡೆಯಾದವರ ರಿ.ನಂಬರ್ ಪ್ರಕಟಿಸಿದ ಗೆಜೆಟ್​ನ ದಿನಾಂಕ ಬರೆಯಬೇಕು.

11. ತಾತ್ಕಾಲಿಕ, ಕಾಯಂ ಸೇವೆಗಳನ್ನು ನಿವೃತ್ತಿ ಸೇವೆಗೆ ತೆಗೆದá-ಕೊಳ್ಳಲು ನಿರ್ಧರಿಸಲು ಆಡಿಟ್ ಕಚೇರಿಯವರಿಗೆ ಸಹಾಯವಾಗá-ವಂಥ ವಿವರಗಳನ್ನು ಕಚೇರಿ ಮುಖ್ಯಸ್ಥ ಒದಗಿಸಬೇಕು.

12. ಸರ್ಕಾರಿ ನೌಕರನನ್ನು ಕೆಳದರ್ಜೆಗೆ ಇಳಿಸಿದಾಗ, ವಜಾ ಮಾಡಿದಾಗ ಇನ್ನಿತರ ಶಿಕ್ಷೆ ವಿಧಿಸಿದಾಗ ಸೂಕ್ಷ್ಮವಿವರ ನಮೂದಿಸಬೇಕು. ಇವುಗಳ ಆದೇಶಗಳನ್ನು ಸೇವಾ ಪುಸ್ತಕದಲ್ಲಿ ಲಗತ್ತಿಸಲಾಗá-ವುದು.

13. ಕಡ್ಡಾಯ ನಿವೃತ್ತಿ ತೆಗೆದು ಹಾಕá-ವುದು ಅಥವಾ ವಜಾ ಮಾಡá-ವಂತೆ ನಿವೃತ್ತಿಯ ಗಣನೆಗೆ ಬರುವ ವಿಷಯಗಳು ಹಿಂದಿನ ಸೇವಾ ಅವಧಿಯಲ್ಲಿದ್ದವೇ ಅಥವಾ ಇಲ್ಲವೆ ಎಂಬá-ದನ್ನು ಸ್ಪಷ್ಟವಾಗಿ ಸೇವಾ ಪುಸ್ತಕದಲ್ಲಿ ತಿಳಿಸತಕ್ಕದ್ದು.

14. ರಜೆಯ ಲೆಕ್ಕಗಳನ್ನು ಕಚೇರಿಯ ಮುಖ್ಯಸ್ಥ ಸಹಿಯೊಂದಿಗೆ ದೃಢೀಕರಿಸಬೇಕು.

15. ಹೊಸ ಪೇಸ್ಕೇಲ್, ರಜೆ ನಿಯಮ, ನಿವೃತ್ತಿ ನಿಯಮ ಅಥವಾ ಇನ್ನಿತರೆ ಷರತ್ತುಗಳ ಒಪ್ಪಿಗೆಗಳನ್ನು ಲಗತ್ತಿಸತಕ್ಕದ್ದು.

16. ಹುಟ್ಟಿದ ದಿನಾಂಕಕ್ಕೆ ಸಂಬಂಧಿಸಿದ ಪತ್ರಗಳಿಂದ ಪರಿಶೀಲಿಸಿದ ದೃಢೀಕರಣ ಪತ್ರ ಪಡೆಯಬೇಕು.

17. ಗುರುತಿಗೋಸ್ಕರ ಬೆರಳಚ್ಚು ಮತ್ತು ವ್ಯಕ್ತಿಯ ಚಿಹ್ನೆ – ವಿವರ ನಮೂದಿಸಬೇಕು.

18. ವರ್ಷಕ್ಕೆ ಒಂದು ಸಲ ಕಚೇರಿ ಮುಖ್ಯಸ್ಥ ನೌಕರನಿಗೆ ಸೇವಾ ಪುಸ್ತಕ, ವಿವರಗಳನ್ನು ಪರಿಶೀಲಿಸಲು ನೀಡಬೇಕು.

19. ಸರ್ಕಾರಿ ನೌಕರನ ನಿವೃತ್ತಿ, ರಾಜೀನಾಮೆ ಅಥವಾ ಸೇವೆಯಿಂದ ಕೊನೆಗೊಳಿಸಿದಾಗ ಸೇವಾ ಪುಸ್ತಕವನ್ನು ವಾಪಸ್ಸು ಕೊಡಲಾಗದು.

20. ಸರ್ಕಾರಿ ನೌಕರರನ್ನು ಸೇವೆಯಿಂದ ತೆಗೆದಾಗ ಅಥವಾ ವಜಾ ಮಾಡಿದಾಗ 5 ವರ್ಷದವರೆಗೆ ಸೇವಾ ಪುಸ್ತಕ ಇಟ್ಟಿರಬೇಕು.

21. ಸೇವಾ ಪುಸ್ತಕವನ್ನು ಕಚೇರಿ ಮುಖ್ಯಸ್ಥ ಅಥವಾ ಇತರೆ ಅಧಿಕೃತ ಅಧಿಕಾರಿಯು ವರ್ಷದ ಪರಿಶೀಲಿಸಬೇಕು.

22. ಸರ್ಕಾರಿ ನೌಕರನ 25ವರ್ಷ ಪೂರ್ಣ ಸೇವೆಗೊಳಿಸಿದ ನಂತರ ಮಹಾಲೇಖಪಾಲ (ಎ.ಜಿ.)ರಿಂದ ಪುಸ್ತಕ ಪರಿಶೀಲಿಸಬೇಕು.

23. ಕಚೇರಿ ಮುಖ್ಯಸ್ಥನು ಸೇವಾ ಪುಸ್ತಕದ ಎರಡನೇ ಪ್ರತಿ ತಯಾರಿಸಿ ಎಲ್ಲಾ ವಿವರ ದೃಢೀಕರಿಸಿ ನೌಕರನೇ ಎರಡನೇ ಪ್ರತಿ ತಯಾರಿಸಲು ಬರುವ ತೊಂದರೆ ತಪ್ಪಿಸಬಹುದು.

24. ಸರ್ಕಾರಿ ನೌಕರನು ಸೇವೆಗೆ ಸೇರಿ ಒಂದು ತಿಂಗಳಿಗೆ ಕಚೇರಿ ಮುಖ್ಯಸ್ಥನಿಗೆ ತನ್ನ ಕುಟುಂಬ ಸದಸ್ಯರ ವಿವರಗಳನ್ನು ಕ.ಸ.ಸೇ. (ಕು.ನಿ.) ನಿಯಮ 7ರಲ್ಲಿ ಸೂಚಿಸಿರುವಂತೆ ಒದಗಿಸಬೇಕು.

ವೈವಿಧ್ಯಪೂರ್ಣ ರಜೆ ಸೌಲಭ್ಯಗಳು

💥💥💥💥💥💥💥💥💥💥💥

*ವೈವಿಧ್ಯಪೂರ್ಣ ರಜೆ ಸೌಲಭ್ಯಗಳು*

 Wednesday, 26.07.2017, 3:00 AM    ವಿಜಯವಾಣಿ ಸುದ್ದಿಜಾಲ


| ಲ. ರಾಘವೇಂದ್ರ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ‘ಬಿ’ಯಲ್ಲಿ ಸಾಂರ್ದಭಿಕ ಮತ್ತು ವಿಶೇಷ ಸಾಂರ್ದಭಿಕ ರಜೆಗಳು ಈ ಕೆಳಗಿನಂತೆ ಸರ್ಕಾರಿ ನೌಕರರಿಗೆ ಲಭ್ಯವಾಗುತ್ತದೆ.

1. *ಸಾಂರ್ದಭಿಕ ರಜೆ*

ಕಾಯಂ ಅಥವಾ ಹಂಗಾಮಿ ಸರ್ಕಾರಿ ನೌಕರರಿಗೆ ಜನವರಿ ಮೊದಲ ದಿನಾಂಕದಿಂದ ಡಿಸೆಂಬರ್ 31ನೇ ದಿನಾಂಕದವರೆಗೆ 15 ದಿನಗಳ ಸಾಂರ್ದಭಿಕ ರಜೆ ದೊರೆಯುತ್ತದೆ. ಬಿಡುವಿನ ವೇಳೆ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿಗೂ ಸಾಂರ್ದಭಿಕ ರಜೆ ಲಭ್ಯ. ಒಂದು ಸಲಕ್ಕೆ 7 ದಿನಗಳಿಗಿಂತ ಇದನ್ನು ಮಂಜೂರು ಮಾಡಲಾಗುವುದಿಲ್ಲ.

ಮೊದಲನೇ ವರ್ಷದ ಸೇವಾ ಅವಧಿಯಲ್ಲಿ ಸರ್ಕಾರಿ ನೌಕರರಿಗೆ ಒಂದು ತಿಂಗಳಿನ ಸೇವೆಗಾಗಿ ಒಂದು ದಿನದಂತೆ ಸಾಂರ್ದಭಿಕ ರಜೆ ಕೊಡಬೇಕು. ಅರ್ಧ ದಿನದ ಸಾಂರ್ದಭಿಕ ರಜೆಯನ್ನೂ ಕೊಡಬಹುದು. ಮಧ್ಯಾಹ್ನ 2 ಗಂಟೆವರೆಗೆ ಮತ್ತು ನಂತರದ ಅವಧಿಯನ್ನು, ಅರ್ಧ ದಿನಕ್ಕಾಗಿ ಲೆಕ್ಕ ಹಾಕಬೇಕು.

ಸಾಂರ್ದಭಿಕ ರಜೆಯನ್ನು ಹಕ್ಕೆಂದು ಕೇಳಲು ಬರುವುದಿಲ್ಲ. ಅಧಿಕಾರಿಗಳಿಗೆ ಮಂಜೂರು ಮಾಡಿದ ರಜೆಯನ್ನು ರದ್ದು ಪಡಿಸುವುದಕ್ಕೂ ಹಕ್ಕಿದೆ. ರಜೆಯನ್ನು ಮೊದಲು ಮಂಜೂರು ಮಾಡಿಸಿಕೊಂಡು ನಂತರ ಅದನ್ನು ಬಳಸಬೇಕು. ಆದರೆ ಕಾಯಿಲೆಯಾಗಿ ಅಥವಾ ಇನ್ನಾವುದೇ ಆಕಸ್ಮಿಕಗಳಿಂದಾಗಿ ಕಚೇರಿಗೆ ಬಂದು ರಜೆಯನ್ನು ಮುಂಗಡವಾಗಿ ಮಂಜೂರು ಮಾಡಿಸಲು ಸಾಧ್ಯವಾಗದಿರುವ ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಿಸಿ ಮರುದಿನ ರಜೆ ಮಂಜೂರು ಮಾಡಿಸಿಕೊಳ್ಳಬಹುದು.

ಸಾಂರ್ದಭಿಕ ರಜೆಯನ್ನು ಪರಿವರ್ತಿತ ರಜೆಗಳೊಡನೆ ಸೇರಿಸಬಹುದು. ಆದರೆ ಒಟ್ಟು ಅನುಪಸ್ಥಿತಿ 10 ದಿನಗಳಿಗೆ ಮೀರಕೂಡದು. ಆಕಸ್ಮಿಕ ರಜೆಯನ್ನು ಸೇವಾ ಅವಧಿಯೆಂದೇ ಭಾವಿಸಲಾಗುವುದು.

2. *ವಿಶೇಷ ಸಾಂರ್ದಭಿಕ ರಜೆ*

ವಿಶೇಷ ಸಂದರ್ಭಗಳಲ್ಲಿ ಈ ರಜೆ ಪಡೆಯಬಹುದು

1. ನಾಯಿ ಅಥವಾ ಇನ್ನಾವುದೇ ವಿಷಪೂರಿತ ಪ್ರಾಣಿ/ಹುಳು ಕಡಿದರೆ ಅಂತಹವರಿಗೆ ಚಿಕಿತ್ಸೆಗಾಗಿ – 14ದಿನಗಳ ವಿಶೇಷ ಸಾಂರ್ದಭಿಕರಜೆ ಹಾಗೂ ಹೋಗಿಬರುವ ಪ್ರಯಾಣದ ದಿನಗಳು

2. ಸ್ವಯಂ ಸೇವಕರಾಗಿರುವ ಸರ್ಕಾರಿ ನೌಕರರು ಬಂದೂಕು ತರಬೇತಿಗೆ ಹಾಜರಾದಾಗ – ಅಗತ್ಯವಿರುವಷ್ಟು ಅವಧಿಗೆ ನೀಡಬಹುದು.

3. ಸರ್ಕಾರಿ ನೌಕರರ ಕೇಂದ್ರ ಮತ್ತು ಜಿಲ್ಲಾ ಮಟ್ಟದ ಸಂಘದ ಪದಾಧಿಕಾರಿಗಳಿಗೆ – ಪ್ರತಿ ವರ್ಷಕ್ಕೆ 15 ದಿನಗಳು ಮೀರದಂತೆ

4. ರಾಜ್ಯ ಸರ್ಕಾರಿ ‘ಡಿ’ ವರ್ಗದ ನೌಕರರ ಸಂಘದ ಪದಾಧಿಕಾರಿಗಳಿಗೆ – ಪ್ರತಿ ವರ್ಷಕ್ಕೆ 15 ದಿನಗಳು ಮೀರದಂತೆ

5. ದೆಹಲಿಯ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ಉದ್ಯೋಗಿಗಳಿಗೆ ಪ್ರತಿ ವರ್ಷಕ್ಕೆ 6 ದಿನಗಳು ಮೀರದಂತೆ ವಿಶೇಷ ಸಾಂರ್ದಭಿಕ ರಜೆ ಲಭ್ಯ .

6. ಶೈಕ್ಷಣಿಕವಾಗಿ ವಾಣಿಜ್ಯ ಪರೀಕ್ಷಾ ಮಂಡಳಿಯು ನಡೆಸುವ ಪರೀಕ್ಷೆಗಾಗಿ ಪರೀಕ್ಷಾ ಅವಧಿ ಮತ್ತು ವಾಸ್ತವ ಪ್ರಯಾಣದ ಅವಧಿಯ ದಿನಗಳ ಮಟ್ಟಿಗೆ ವಿಶೇಷ ಸಾಂರ್ದಭಿಕ ರಜೆ ಲಭ್ಯ .

7. ಅಖಿಲ ಭಾರತ ಮಾಧ್ಯಮಿಕ ಶಿಕ್ಷಕರ ಫೆಡರೇಷನ್ನಿನ ಪದಾಧಿಕಾರಿಗಳು ವಿವಿಧ ಸಭೆ ವಿಚಾರ ಸಂಕಿರಣ ಗೋಷ್ಠಿಗಳು ನಡೆಯುವ ದಿನಗಳ ಮಟ್ಟಿಗೆ ಈ ವಿಶೇಷ ಸಾಂರ್ದಭಿಕ ರಜೆ ಲಭ್ಯ.

8. ವಿಶ್ವವಿದ್ಯಾಲಯಗಳ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ ಆಯ್ಕೆಗೊಂಡ ಸರ್ಕಾರಿ ನೌಕರರಿಗೆ 30 ದಿನಗಳಿಗೆ ಮೀರದಂತೆ ವಿಶೇಷ ಸಾಂರ್ದಭಿಕ ರಜೆ ಲಭ್ಯ.

9. ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯವರು ನಡೆಸುವ ಸಮ್ಮೇಳನಗಳಲ್ಲಿ 15 ದಿನ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು. (ಪ್ರಯಾಣ ಭತ್ಯೆ ರಹಿತ)

10. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಏರ್ಪಾಟಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವರ್ಷಕ್ಕೆ 15 ದಿನ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು

11. ಯುವ ಜನ ಇಲಾಖೆಯವರು ಏರ್ಪಡಿಸುವ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವರ್ಷಕ್ಕೆ 15 ದಿನ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು.

12. ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ಸಂದರ್ಭಗಳಲ್ಲಿ 7 ದಿನಗಳಿಗೆ ಮೀರದಂತೆ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು.

13. ಸಂತಾನ ಹರಣ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿಲ್ಲವೆಂದು ವೈದ್ಯಾಧಿಕಾರಿಗಳು ಪ್ರಮಾಣ ಪತ್ರ ಕೊಟ್ಟರೆ 6 ದಿನಗಳ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು.

14. ಶೀಘ್ರಲಿಪಿ ಪರೀಕ್ಷೆಗಳ ಮೇಲ್ವಿಚಾರಕರಾಗಿ ಹೋಗುವ ಶೀಘ್ರಲಿಪಿಗಾರರಿಗೆ ಪರೀಕ್ಷೆಯ ಅವಧಿಗಾಗಿ ಮತ್ತು ಪ್ರಯಾಣದ ಅವಧಿಗಾಗಿ ವಿಶೇಷ ಸಾಂರ್ದಭಿಕ ರಜೆ ಲಭ್ಯ.

15. ಬಾಣಂತಿತನವಿಲ್ಲದ ಸಂತಾನ ಹರಣ ಶಸ್ತ್ರ ಚಿಕಿತ್ಸೆಗಾಗಿ ಮಹಿಳಾ ಉದ್ಯೋಗಿಗಳಿಗೆ ಇಲಾಖಾ ಮುಖ್ಯಸ್ಥರು 14 ದಿನಗಳ ವಿಶೇಷ ಸಾಂರ್ದಭಿಕ ರಜೆ ಮಂಜೂರು ಮಾಡಬಹುದು.

16. ಐ.ಯು.ಸಿ.ಡಿ.ಯನ್ನು ಅಳವಡಿಸಿಕೊಳ್ಳುವ ಸಲುವಾಗಿ 1 ದಿನ ರಜೆ ಕೊಡಬಹುದು.

17. ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡೋತ್ಸವಗಳಲ್ಲಿ ಭಾಗವಹಿಸಿದಾಗ 1 ವರ್ಷಕ್ಕೆ 30 ದಿನಗಳ ವಿಶೇಷ ರಜೆ ಲಭ್ಯ.

18. ಅಖಿಲ ಭಾರತ ಫುಟ್ಬಾಲ್, ಹಾಕಿ, ಕ್ರಿಕೆಟ್, ಟೆನ್ನಿಸ್ ಮೊದಲಾದ ಕ್ರೀಡಾ ಸಂಸ್ಥೆಗಳು ಸರ್ಕಾರಿ ನೌಕರರನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಚುನಾಯಿಸಿದಾಗ ಕೊಡಬಹುದು. ಇದಕ್ಕೂ ಹೆಚ್ಚಿಗೆ ಬೇಕಾದಲ್ಲಿ, ಗಳಿಕೆ ರಜೆ, ಅಥವಾ ಅರ್ಧ ವೇತನ ರಜೆಯನ್ನು ತೆಗೆದುಕೊಳ್ಳಬೇಕು. ಈ ವಿಶೇಷ ಸಾಂರ್ದಭಿಕ ರಜೆಯನ್ನು ಸಾಮಾನ್ಯ ಸಾಂರ್ದಭಿಕ ರಜೆ ಎನ್ನುವರು.

19. ಕ್ರೀಡಾ ಸಂಸ್ಥೆಗಳಲ್ಲಿ ತರಬೇತಿದಾರರೆಂದು ನೇಮಕ ಮಾಡಿದಾಗ ರಜೆಯೊಡನೆ ಸೇರಿಸಕೂಡದು.

20. ರಕ್ತದಾನ ಮಾಡಿದ ಸಂದರ್ಭದಲ್ಲಿ (ಬ್ಲಡ್ ಬ್ಯಾಂಕ್ / ಆಸ್ಪತ್ರೆ / ರೆಡ್ ಕ್ರಾಸ್ ಸಂಸ್ಥೆಗಳಿಂದ ಪೂರಕ ದಾಖಲೆಗಳನ್ನು ಒದಗಿಸಬೇಕು.) ಕೆಸಿಎಸ್​ಆರ್ ನಿಯಮಾವಳಿ ಪ್ಯಾರಾ 11ಜಿ ಅನುಬಂಧ-ಬಿ, ಪ್ರಕಾರ ಒಂದು ದಿನ ವಿಶೇಷ ಸಾಂರ್ದಭಿಕ ರಜೆ ಮಂಜೂರು ಮಾಡಬಹುದು.

3. ನಿರ್ಬಂಧಿತ ರಜೆ (ಛಿಠಠ್ಟಿಜ್ಚಿಠಿಛಿಛ ಜಟ್ಝಜಿಛಚಢ):

ಪ್ರತಿವರ್ಷ ಘೊಷಿತ ದಿನಾಂಕಗಳ ಅಧಿಕೃತ ಹಬ್ಬಗಳ ಆಚರಣೆಯ ಸಂಬಂಧ 2 ದಿನ ನಿರ್ಬಂಂಧಿತ ರಜೆ ಪ್ರತಿಯೊಬ್ಬ ಸರ್ಕಾರಿ ನೌಕರನಿಗೆ ದೊರೆಯುತ್ತದೆ. ಈ ರಜೆಯನ್ನು ಸಾಂರ್ದಭಿಕ ರಜೆ ಅಥವಾ ಇತರ ರಜೆಯ ಮೊದಲು ಅಥವಾ ಅನಂತರ ಸಂಯೋಜಿಸಿ ಮಂಜೂರು ಮಾಡಬಹುದು. ಈ ನಿರ್ಬಂಧಿತ ರಜೆಗಳ ಪಟ್ಟಿಯನ್ನು ರಾಜ್ಯ ಸರ್ಕಾರವು ಮುಂದಿನ ಕ್ಯಾಲೆಂಡರ್ ವರ್ಷಕ್ಕೆ ಅನ್ವಯವಾಗುವಂತೆ ಅಧಿಸೂಚನೆಯನ್ನು ಹೊರಡಿಸುತ್ತದೆ. ಈ ರಜೆಯನ್ನು ಆಯಾ ಧರ್ವಿುಯರು ಮಾತ್ರ ಬಳಸಬಹುದು. (ಸರ್ಕಾರಿ ಆದೇಶದ ಸಂಖ್ಯೆ: ಊಈ 7 ಖ್ಕಖ 87 ಛಚಠಿಛಿ : 20.3.1987)

💥💥💥💥💥💥💥💥💥💥💥

ಸ್ವಚಾ ಮುಂಬಡ್ತಿ ಯೋಜನೆ ಷರತ್ತುಗಳು

💫💫💫💫💫💫💫💫💫💫💫


*ಸ್ವಚಾ ಮುಂಬಡ್ತಿ ಯೋಜನೆ ಷರತ್ತುಗಳು*

 Wednesday, 07.06.2017, 3:00 AM    ವಿಜಯವಾಣಿ ಸುದ್ದಿಜಾಲ 

| ಲ. ರಾಘವೇಂದ್ರ

ಕೆಳಕಂಡ ಷರತ್ತುಗಳನ್ನು ಪೂರೈಸಿದ ಉದ್ಯೋಗಿಗೆ ‘ಸ್ವಯಂಚಾಲಿತ ಮುಂಬಡ್ತಿ’ ಯೋಜನೆ ಸೌಲಭ್ಯವನ್ನು ವಿಸ್ತರಿಸಲಾಗುವುದು.

1. ಉದ್ಯೋಗಿಯು ಒಂದೇ ಹುದ್ದೆಯಲ್ಲಿ 15 ವರ್ಷಗಳ ನಿರಂತರ ಸೇವೆಯನ್ನು ತೃಪ್ತಿಕರವಾಗಿ ಸಲ್ಲಿಸಿರಬೇಕು.

2. ವೃಂದ ಮತ್ತು ನೇಮಕಾತಿ ನಿಯಮಗಳಂತೆ ಉನ್ನತ ಹುದ್ದೆಗೆ ಪದೋನ್ನತಿ ನೀಡಲು ನಿಗದಿಪಡಿಸಿರುವ ವಿದ್ಯಾರ್ಹತೆ ಇದ್ದು ಕಡ್ಡಾಯ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು.

3. ಪದೋನ್ನತಿಯ ಸಲುವಾಗಿ ಜ್ಯೇಷ್ಠತೆಗೆ ಪರಿಗಣಿಸುವ ಸೇವೆಯನ್ನು ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸಲು ಪರಿಗಣಿಸತಕ್ಕದ್ದು. ಆದರೆ ಸರ್ಕಾರದ ಸುತ್ತೋಲೆ ಸಂಖ್ಯೆ ಎಲ್​ಸಿಎ 1:21:1997 ದಿನಾಂಕ 9-1-97ರಲ್ಲಿ ಇಲಾಖೆಯ ವಿವಿಧ ಘಟಕಗಳಲ್ಲಿ ಸಲ್ಲಿಸಿದ ಸೇವೆಯ ಅವಧಿಯನ್ನು ಸಂಕಲಿಸಿ 15 ವರ್ಷಗಳು ಪೂರ್ಣಗೊಂಡಾಗ ಈ ಸೌಲಭ್ಯವನ್ನು ಮಂಜೂರು ಮಾಡಬಹುದು.

4. ‘ಡಿ’ ದರ್ಜೆ ಉದ್ಯೋಗಿಗಳಿಗೆ ಪದೋನ್ನತಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಮತ್ತು ಇಲಾಖಾ ಪರೀಕ್ಷೆಗಳು ಇದ್ದಲ್ಲಿ ಅವುಗಳ ತೇರ್ಗಡೆ ಕಡ್ಡಾಯವಲ್ಲ.

5. ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ದೈಹಿಕ ಶಿಕ್ಷಣ ಅಧ್ಯಾಪಕರುಗಳಿಗೆ ಪದೋನ್ನತಿ ಅರ್ಹತೆಗೆ ನಿಗದಿಪಡಿಸಿರುವ ಶೈಕ್ಷಣಿಕ ಮತ್ತು ವೃತ್ತಿಪರ ಪರೀಕ್ಷೆಗಳ ತೇರ್ಗಡೆ ಕಡ್ಡಾಯವಲ್ಲ.

6. ಆದರೆ, ಉದ್ಯೋಗಿಯು ತಾನು ಧಾರಣ ಮಾಡಿದ ಹುದ್ದೆಯಲ್ಲಿ ವೇತನ ಬಡ್ತಿ ಗಳಿಸಲು ನಿಗದಿಪಡಿಸಿರುವ ಕಡ್ಡಾಯ ಇಲಾಖಾ ಪರೀಕ್ಷೆಗಳ ತೇರ್ಗಡೆ ಅಗತ್ಯ.

ಉದ್ಯೋಗಿಯು 15 ವರ್ಷಗಳ ಅರ್ಹ ಸೇವೆ ಪೂರ್ಣಗೊಳಿಸುವ ಮುಂಚೆ ಉನ್ನತ ಹುದ್ದೆಗೆ ಪದೋನ್ನತಿ ಹೊಂದಿದಲ್ಲಿ ಸದರಿ ಉದ್ಯೋಗಿಯು 15 ವರ್ಷಗಳ ಸೇವೆಯನ್ನು ಪೂರ್ಣಗೊಳಿಸುವವರೆಗೆ ಕೆಳದರ್ಜೆ ಹುದ್ದೆಯ ವೇತನ ಶ್ರೇಣಿಯಲ್ಲಿಯೇ ಮುಂದುವರಿಯುವುದಾಗಿ ಲಿಖಿತ ಅಭಿಮತ ವ್ಯಕ್ತಪಡಿಸಲು ಅವಕಾಶವಿದೆ. ಇಂತಹ ಪ್ರಸಂಗಗಳಲ್ಲಿ ಉದ್ಯೋಗಿಗೆ ‘ಹಿರಿಯ ವೇತನ ಶ್ರೇಣಿ’ಯಲ್ಲಿ ವೇತನ ನಿಗದಿಪಡಿಸಿ ನಂತರ ಆ ವೇತನದ ಆಧಾರದ ಮೇಲೆ ಉನ್ನತ ಹುದ್ದೆಯ ವೇತನ ಶ್ರೇಣಿಗಳಲ್ಲಿ ನಿಯಮ 42-ಬಿ ಪ್ರಕಾರ ವೇತನ ನಿಗದಿಪಡಿಸಲಾಗುವುದು. (ಅ.ಜ್ಞಾ. ಸಂಖ್ಯೆ ಎಫ್ 25 ಎಸ್​ಆರ್​ಪಿ 91 ದಿನಾಂಕ 1-2-1993)

ಉದ್ಯೋಗಿಗೆ ಸ್ಥಗಿತ ವೇತನ ಬಡ್ತಿ ಪ್ರಾಪ್ತವಾಗುವ ದಿನಾಂಕಕ್ಕಿಂತ ಮುಂಚೆಯೇ ಸ್ವಯಂಚಾಲಿತ ಮುಂಬಡ್ತಿ ಮಂಜೂರಾದಲ್ಲಿ ಲಿಖಿತ ಅಭಿಮತ ವ್ಯಕ್ತಪಡಿಸಿ ಸ್ಥಗಿತ ವೇತನ ಬಡ್ತಿ ಪಡೆದು ನಂತರ ಹಿರಿಯ ವೇತನ ಶ್ರೇಣಿಯಲ್ಲಿ ನಿ 42-ಬಿ ಪ್ರಕಾರ ವೇತನ ನಿಗದಿಪಡಿಸಿಕೊಳ್ಳಲು ಅವಕಾಶವಿದೆ. (ಸ.ಅ.ಸಂ.ಎಫ್​ಡಿ 1 ಎಸ್​ಆರ್​ಪಿ 96 ದಿ 8-5-97)

ಸ್ಥಳೀಯ ಅಭ್ಯರ್ಥಿಯಾಗಿ ಹಾಗೂ ಕಾರ್ಯಪ್ರವೃತ್ತ (ವರ್ಕ್​ಚಾರ್ಜ್ಡ್) ಸಿಬ್ಬಂದಿಯಾಗಿ, ಸ್ಟೈಫಂಡರಿಯಾಗಿ ಅಥವಾ ದಿನಗೂಲಿ ನೌಕರನಾಗಿ ಸಲ್ಲಿಸಿದ ಸೇವೆಯನ್ನು ಸ್ವಯಂ ಚಾಲಿತ ಯೋಜನೆಯ ಸೌಲಭ್ಯಗಳಿಗೆ ಪರಿಗಣಿಸಲಾಗುವುದಿಲ್ಲ.

✨✨✨✨✨✨✨✨✨✨✨

ಹದಿನೈದು ವರ್ಷಗಳ ಸ್ವಯಂಚಾಲಿತ ಮುಂಬಡ್ತಿ ನಿಯಮಗಳು 1991

*ಹದಿನೈದು ವರ್ಷಗಳ ಸ್ವಯಂಚಾಲಿತ ಮುಂಬಡ್ತಿ ನಿಯಮಗಳು 1991*

 

| ಲ. ರಾಘವೇಂದ್ರ

ರಾಜ್ಯವೇತನ ಶ್ರೇಣಿಯ ಮೊದಲ (15) ಹದಿನೈದು ವೇತನ ಶ್ರೇಣಿ ಹುದ್ದೆಗಳಲ್ಲಿ ಉನ್ನತ ಹುದ್ದೆಗೆ ಮುಂಬಡ್ತಿ ಪಡೆಯಲು ಅರ್ಹತೆ ಇದ್ದು ಅಥವಾ ಮುಂಬಡ್ತಿಗೆ ಅವಕಾಶವೇ ಇಲ್ಲದೆ 15 (ಹದಿನೈದು) ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ, ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಸರ್ಕಾರವು ‘ಸ್ವಯಂಚಾಲಿತ ಮುಂಬಡ್ತಿ’ ಯೋಜನೆಯನ್ನು 1991ರ ಜೂನ್ 1ರಿಂದ ಜಾರಿಗೆ ತಂದಿದೆ. ಯೋಜನೆಯ ಸೌಲಭ್ಯವು ಉದ್ಯೋಗಿಯ ಸೇವಾ ಅವಧಿಯಲ್ಲಿ ಒಂದು ಬಾರಿ ಮಾತ್ರ ದೊರೆಯುತ್ತದೆ.

‘ಸ್ವಯಂಚಾಲಿತ ಮುಂಬಡ್ತಿ’ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ವಿಧಿವಿಧಾನಗಳನ್ನು ಆದೇಶ ಸಂಖ್ಯೆ ಎಫ್​ಡಿ 25 ಎಸ್​ಆರ್​ಪಿ 91 ದಿನಾಂಕ 29-10-1991ರಲ್ಲಿ ವಿವರಿಸಿದೆ. ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಉಂಟಾದ ಸಮಸ್ಯೆಗಳ ನಿವಾರಣೆಗೆ ರಾಜ್ಯ ಸರ್ಕಾರ ವಿವರಗಳನ್ನು ಹಾಗೂ ಸ್ಪಷ್ಟೀಕರಣಗಳನ್ನು ಕಾಲಕಾಲಕ್ಕೆ ಆದೇಶ ಸುತ್ತೋಲೆ, ಅಧಿಕೃತ ಜ್ಞಾಪನಾ ಪತ್ರಗಳಲ್ಲಿ ನೀಡಿದೆ.

ಮೊದಲ (15) ಹದಿನೈದು ವೇತನ ಶ್ರೇಣಿಗಳ ಹುದ್ದೆಗಳಲ್ಲಿ ಅಥವಾ ಆ ವೇತನ ಶ್ರೇಣಿಗಳಿಗೆ ನಿಗದಿಪಡಿಸಿರುವ ಆಯ್ಕೆ ಕಾಲಿಕ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ಉದ್ಯೋಗಿಗಳಿಗೆ ‘ಸ್ವಯಂ ಚಾಲಿತ ಮುಂಬಡ್ತಿ’ ನೀಡಿ ಕರ್ನಾಟಕ ನಾಗರಿಕ ಸೇವಾ ನಿಯಮ 42(ಬಿ) ಅನ್ವಯ ‘ಹಿರಿಯ ವೇತನ ಶ್ರೇಣಿ’ಯಲ್ಲಿ ವೇತನ ನಿಗದಿಪಡಿಸಬಹುದು. ‘ಆಯ್ಕೆ ಕಾಲಿಕ ವೇತನ ಶ್ರೇಣಿ’ಯ ಮುಂಬರುವ ವೇತನ ಶ್ರೇಣಿಯನ್ನು ಹಿರಿಯ ವೇತನ ಶ್ರೇಣಿ ಎಂದು ಪರಿಗಣಿಸಲಾಗಿದೆ.

ಒಂದು ಹುದ್ದೆಗೆ ನಿಗದಿಪಡಿಸಿರುವ ‘ಆಯ್ಕೆ ಕಾಲಿಕ ವೇತನ ಶ್ರೇಣಿ’, ವೃಂದ ಮತ್ತು ನೇಮಕಾತಿ ನಿಯಮಗಳಂತೆ ಉನ್ನತ ಹುದ್ದೆಯ ವೇತನ ಶ್ರೇಣಿಗಳು ಒಂದೇ ಆಗಿದ್ದಲ್ಲಿ, ಪದೋನ್ನತಿ ಹುದ್ದೆಯ ವೇತನ ಶ್ರೇಣಿಯನ್ನೇ ‘ಹಿರಿಯ ವೇತನ ಶ್ರೇಣಿ’ ಎಂದು ಪರಿಗಣಿಸಲ್ಪಡುವುದು. ಅಂದರೆ, ‘ಸ್ವಯಂಚಾಲಿತ ಮುಂಬಡ್ತಿ’ ಯೋಜನೆಯಡಿಯಲ್ಲಿ ವೇತನ ನಿಗದಿಯು, ಯಾವುದೇ ಕಾರಣಕ್ಕೂ ಪದೋನ್ನತಿ ಹುದ್ದೆಯ ವೇತನ ಶ್ರೇಣಿಯ ಮುಂದಿನ ವೇತನ ಶ್ರೇಣಿಯಲ್ಲಿ ಆಗಬಾರದು.

✨✨✨✨✨✨✨✨✨✨✨

ನೌಕರರಿಗೆ ಪ್ರಭಾರ ಭತ್ಯೆಯ ನಿಯಮಗಳು

*ನೌಕರರಿಗೆ ಪ್ರಭಾರ ಭತ್ಯೆಯ ನಿಯಮಗಳು*


(ಕಾರ್ಯಾಬಾರ ಭತ್ಯೆ) (Charge allowance)

| ಲ. ರಾಘವೇಂದ್ರ

ಸರ್ಕಾರಿ ನೌಕರರ ಖಾಲಿ ಇರುವ ಹುದ್ದೆಗೆ ನೇಮಕಾತಿ ಮಾಡುವ ಬದಲು ಅಥವಾ ಇನ್ನೊಂದು ಹುದ್ದೆಯಲ್ಲಿ ಅಧಿಕ ಕಾರ್ಯಭಾರ ನಿರ್ವಹಿಸುವಂತೆ ಆದೇಶ ಮಾಡಿದಾಗ ಅವರಿಗೆ ನಿಯಮ 32 ಮತ್ತು 68ರಂತೆ ಅಧಿಕ ಭತ್ಯೆ ನೀಡಬೇಕಾಗುತ್ತದೆ. ಇದನ್ನು ಸ್ವತಂತ್ರ ಪ್ರಭಾರದ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ವೇತನದ ಶೇಕಡ ಏಳೂವರೆಯಷ್ಟು ನೀಡುವ ವೇತನ ಅಥವಾ ಭತ್ಯೆಯೇ ‘ಪ್ರಭಾರ ಭತ್ಯೆ’ಯಾಗಿರುತ್ತದೆ. ಉದಾಹರಣೆಗೆ ದ್ವಿತೀಯ ದರ್ಜೆ ಸಹಾಯಕನು ರೂ. 11,500-21000 ವೇತನ ಶ್ರೇಣಿಯಲ್ಲಿದ್ದು ಅವನನ್ನು ಅದೇ ಕಚೇರಿ ಅಥವಾ ಶಾಖೆಯಲ್ಲಿ ಅದೇ ಬಗೆಯ ಹುದ್ದೆಗೆ ಅಧಿಕ ಪ್ರಭಾರದಲ್ಲಿರಿಸಿದರೆ ಈ ಹುದ್ದೆಯ ಕನಿಷ್ಠ ವೇತನ ರೂ. 11600ರಲ್ಲಿ ಶೇಕಡ ಏಳೂವರೆಯಷ್ಟು ಅಂದರೆ ರೂ. 870.00 ರೂ ಲಭ್ಯವಾಗುತ್ತದೆ. ಆದರೆ ಇದೇ ಎರಡನೇ ದರ್ಜೆ ಸಹಾಯಕನನ್ನು ಖಾಲಿ ಇರುವ ಪ್ರಥಮ ದರ್ಜೆ ಸಹಾಯಕನ ಹುದ್ದೆಗೆ ಸ್ವತಂತ್ರ ಪ್ರಭಾರದಲ್ಲಿರಿಸಿದರೆ ಈ ಹುದ್ದೆಯ ವೇತನ ಶ್ರೇಣಿ ರೂ. 14550-26200ರಲ್ಲಿನ ಕನಿಷ್ಠ ವೇತನ ರೂ. 14550ರ ಶೇಕಡ ಏಳೂವರೆಯಷ್ಟು ಲಭ್ಯವಾಗುತ್ತದೆ. ಅಂದರೆ ರೂ. 1091.25 ‘ಪ್ರಭಾರ ಭತ್ಯೆ’ ಆ ಸರ್ಕಾರಿ ನೌಕರನಿಗೆ ಲಭ್ಯತ್ತದೆ.

ಪ್ರಭಾರ ಭತ್ಯೆ ಪಡೆಯಲು ಕೆಲ ಷರತ್ತುಗಳಿವೆ

1. ವೃಂದ ಮತ್ತು ನೇಮಕಾತಿ ನಿಯಮಾವಳಿಯ ರೀತ್ಯಾ ಅರ್ಹರಾದ ಮತ್ತು ಸೇವಾ ಜ್ಯೇಷ್ಠತೆಯನ್ನು ಹೊಂದಿದ ನೌಕರರನ್ನು ಮಾತ್ರ ಸ್ವತಂತ್ರ ಪ್ರಭಾರದಲ್ಲಿಡಬೇಕು.

2. ಸರ್ಕಾರಿ ನೌಕರನಿಗೆ ಆತನ ಕೆಲಸದೊಡನೆ ಹೆಚ್ಚಿನದಾದ ಕಾರ್ಯ ಮತ್ತು ಜವಾಬ್ದಾರಿಯಾಗಿದ್ದಿರಬೇಕು.

3. ಸರ್ಕಾರಿ ನೌಕರನನ್ನು ಅದೇ ಬಗೆಯ ಅಥವಾ ಅದಕ್ಕಿಂತ ಹೆಚ್ಚಿನ ವೇತನ ಶ್ರೇಣಿಯ ಹುದ್ದೆಯಲ್ಲಿ ಪ್ರಭಾರದಲ್ಲಿರಿಸಬೇಕೇ ಹೊರತು ಕೆಳಗಿನ ಹುದ್ದೆಯಲ್ಲಿರಸಬಾರದು. (ನಿಯಮ 69ರಡಿಯಲ್ಲಿನ ಟಿಪ್ಪಣಿ)

4. ಸಕ್ಷಮ ಅಧಿಕಾರಿಯ ಆದೇಶದ ಮೇರೆಗೆ ಪ್ರಭಾರದ ವಾಸ್ತವ ವರ್ಗಾವಣೆಯಾಗಿರಬೇಕು.

5. ಎರಡು ಅಥವಾ ಅದಕ್ಕಿಂತ ಅಧಿಕ ಪ್ರಭಾರದಲ್ಲಿದ್ದರೆ ಒಂದು ಹುದ್ದೆಯ ಕರ್ತವ್ಯಗಳ ಬಗ್ಗೆ ಪ್ರಭಾರ ಭತ್ಯೆ ಲಭ್ಯವಾಗುವುದು.

6. ಈ ಪ್ರಭಾರದ ಅವಧಿಯಲ್ಲಿ ಸಾಂರ್ದಭಿಕ ರಜೆ ಅಥವಾ ರಾಜ್ಯದ ಹೊರಗೆ ಅಥವಾ ಒಳಗೆ ನಡೆಯುವ ಸಮ್ಮೇಳನ, ತಜ್ಞರ ಸಮಿತಿಯ ಸಭೆ ಅಥವಾ ತರಬೇತಿಗೆ ನಿಯೋಜಿಸಬಹುದು.

7. ಪ್ರಭಾರ ಭತ್ಯೆಯನ್ನು ಮಂಜೂರು ಮಾಡಲು ಕನಿಷ್ಠ ಒಂದು ತಿಂಗಳು ಪ್ರಭಾರದಲ್ಲಿರಿಸಬೇಕು. ಈ ಪ್ರಭಾರವು ಗರಿಷ್ಠ ಆರು ತಿಂಗಳನ್ನು ಮೀರಬಾರದು. ಇದಕ್ಕಿಂತ ಹೆಚ್ಚು ಕಾಲ ಅಂದರೆ ಒಂದು ವರ್ಷದವರೆಗೆ ಪ್ರಭಾರದಲ್ಲಿರಿಸಲು ಸರ್ಕಾರದ ಮಂಜೂರಾತಿ ಅವಶ್ಯ.

ಆದರೆ ಖಜಾನೆ ಇಲಾಖೆಯ ನೌಕರನಿಗೆ ಒಂದು ತಿಂಗಳಿಗಿಂತ ಕಡಿಮೆ ಅವಧಿಗೂ ನೀಡುವುದಕ್ಕೆ ಅವಕಾಶ ಉಂಟು. ಖಜಾನೆ ನಿರ್ದೇಶಕರು ಕನಿಷ್ಠ 14 ದಿನಗಳಿಗೆ ಮತ್ತು ಗರಿಷ್ಠ 12 ತಿಂಗಳವರೆಗೆ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಲು ಅಧಿಕಾರ ಹೊಂದಿರುತ್ತಾರೆ.

ಪ್ರಭಾರ ಭತ್ಯೆಯು ತುಟ್ಟಿಭತ್ಯೆ, ಮನೆಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ನಿವೃತ್ತಿ ವೇತನ ಹಾಗೂ ಉಪದಾನಗಳಿಗೆ ಪರಿಗಣಿತವಾಗುವುದಿಲ್ಲ. ಅಲ್ಲದೆ, ದಲಾಯತ್, ದಫೇದಾರ್ ಮತ್ತು ಕಾವಲುಗಾರರಿಗೆ ಅಧಿಕ ಪ್ರಭಾರದಲ್ಲಿಟ್ಟರೆ ಪ್ರಭಾರ ಭತ್ಯೆ ಲಭ್ಯವಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.

ಸರ್ಕಾರಿ ನೌಕರರ ಸೇರಿಕೆ ಕಾಲ

💥💥💥💥💥

*ಸರ್ಕಾರಿ ನೌಕರರ ಸೇರಿಕೆ ಕಾಲ*


ಸರ್ಕಾರಿ ನೌಕರನು ತನ್ನ ಸೇವಾ ಅವಧಿಯಲ್ಲಿ ಕೆಲಸಕ್ಕೆ ಸೇರಿದ ದಿನದಿಂದ ನಿವೃತ್ತಿ ಹೊಂದುವ ತನಕ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಸಂಭವವಿರುವುದು ಹಾಗೂ ಆತನನ್ನು ಒಂದೇ ಸ್ಥಳದಲ್ಲಿ ಬಿಡುವುದು ಸಾಧುವು ಅಲ್ಲ, ಸಾರ್ವಜನಿಕ ಹಿತಾಸಕ್ತಿಯಿಂದ ಅಥವಾ ಆತನ ಇಚ್ಛೆಗನುಸಾರವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಾವಣೆ ಮಾಡುವ ಅಗತ್ಯ ಇದೆ. ಇದಲ್ಲದೆ ನೌಕರನನ್ನು ಬಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಾವಣೆ ಮಾಡುವ ಇತರ ಸಂದರ್ಭಗಳು ಉಂಟು. ಹೀಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಾವಣೆ ಮಾಡುವುದಕ್ಕೆ ‘ವರ್ಗಾವಣೆ’ ಎಂದು ಹೇಳುತ್ತೇವೆ. ಒಂದು ಕೇಂದ್ರ ಸ್ಥಳದಿಂದ ಮತ್ತೊಂದು ಕೇಂದ್ರ ಸ್ಥಳಕ್ಕೆ ವರ್ಗಾವಣೆ ಆದಾಗ ನೌಕರನು ರಾತ್ರೋರಾತ್ರಿ ಹೊಸ ಸ್ಥಳಕ್ಕೆ ಕುಟುಂಬ ಸಮೇತ ಪ್ರಯಾಣ ಮಾಡಿ, ಹೊಸ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗಬೇಕೆಂದೂ ಅಥವಾ ಹೊಸ ಸ್ಥಳಕ್ಕೆ ಹೋಗುವ ಸಿದ್ಧತೆಗಾಗಿ ಮತ್ತು ಪ್ರಯಾಣಕ್ಕಾಗಿ ಬೇಕಾಗುವ ಅವಧಿಗೆ ರಜಾ ಹಾಕಿ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕೆಂದೂ ಹೇಳುವುದು ನ್ಯಾಯಸಮ್ಮತವಲ್ಲ, ಆದುದರಿಂದ ಸರ್ಕಾರವು ತನ್ನ ನೌಕರ ವರ್ಗದವರಿಗೆ ಅವರ ಕೇಂದ್ರ ಸ್ಥಾನ ಬದಲಾವಣೆಯಾದಾಗ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಒಂದು ನಿರ್ದಿಷ್ಟ ಅವಧಿಯ ಸೌಲಭ್ಯ ಒದಗಿಸಿದ್ದಾರೆ. ಹೀಗೆ ಒದಗಿಸಿದ ಕಾಲಾವಧಿ ಸೌಲಭ್ಯವನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 76ರಿಂದ 90ರವರೆಗೆ ನೀಡಲಾಗಿದೆ.

ಸೇರಿಕೆ ಕಾಲದ ಅವಧಿ ಎಂದರೇನು ?

ಒಬ್ಬ ಸರ್ಕಾರಿ ನೌಕರನನ್ನು ಒಂದು ಕೇಂದ್ರ ಸ್ಥಳದಿಂದ ಮತ್ತೊಂದು ಕೇಂದ್ರ ಸ್ಥಳಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾಯಿಸಿದಾಗ, ಆತನು ಹೊಸ ಕೇಂದ್ರ ಸ್ಥಳಕ್ಕೆ ಹೋಗಲು ಸಿದ್ಧತೆಗಾಗಿ ಮತ್ತು ಪ್ರಯಾಣಕ್ಕಾಗಿ ಬೇಕಾಗುವ ಕಾಲಾವಧಿಗೆ ಸೇರಿಕೆ ಕಾಲ ಎಂದು ಹೇಳುತ್ತಾರೆ.

ಅಂದರೆ ಸರ್ಕಾರಿ ನೌಕರನನ್ನು ಒಂದು ಕೇಂದ್ರ ಸ್ಥಳದಿಂದ ಮತ್ತೊಂದು ಕೇಂದ್ರ ಸ್ಥಳಕ್ಕೆ ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಮಾಡಿದಾಗ ಮಾತ್ರಸೇರುವ ಕಾಲ ಸೌಲಭ್ಯ ದೊರೆಯುವುದಲ್ಲದೆ ಇತರ ಸಂದರ್ಭಗಳಲ್ಲಿ ಸೇರುವ ಕಾಲದ ಸೌಲಭ್ಯ ದೊರೆಯುವುದಿಲ್ಲ.

ಸೇರುವ ಕಾಲದ ಸೌಲಭ್ಯ ದೊರೆಯುವ ಸಂದರ್ಭಗಳು

1. ಸಾರ್ವಜನಿಕ ಹಿತದೃಷ್ಟಿಯಲ್ಲಿ ವರ್ಗವಾದಾಗ

2. ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ ಅಥವಾ ಅನ್ಯ ಸೇವೆಗೆ ನಿಯೋಜಿಸಿದಾಗ

3. ಕೇಂದ್ರ ಸರ್ಕಾರ / ಇತರ ರಾಜ್ಯ ಸರ್ಕಾರದ ಅಥವಾ ಸಂಸ್ಥೆಗಳ ನೌಕರರನ್ನು ಈ ರಾಜ್ಯ ಸರ್ಕಾರದ ಸೇವೆಗೆ ನಿಯೋಜಿಸಿದಾಗ

4. ಈಗಾಗಲೇ ಸರ್ಕಾರಿ ಸೇವೆಯಲ್ಲಿದ್ದು, ಸ್ಪರ್ಧಾತ್ಮಕ / ಸಂದರ್ಶನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬೇರೊಂದು ಹುದ್ದೆಗೆ ನೇಮಿಸಲಾದ ಹಂಗಾಮಿ ಹಾಗೂ ಕಾಯಂ ನೌಕರ ವರ್ಗದವರಿಗೆ.

5. ಸಿಬ್ಬಂದಿಯನ್ನು ಕಡಿತಗೊಳಿಸಿ, ಯಾರೇ ನೌಕರನನ್ನು ಸೇವೆಯಿಂದ ಬಿಡುಗಡೆ ಮಾಡಿ ಪುನಃ ಬೇರೊಂದು ಹೊಸ ಹುದ್ದೆಗೆ ನೇಮಿಸಿದಾಗ.

6. ತರಬೇತಿಗೆ ಅಥವಾ ಉನ್ನತ ವ್ಯಾಸಂಗಕ್ಕಾಗಿ ನಿಯೋಜಿಸಲ್ಪಟ್ಟ ಸರ್ಕಾರಿ ನೌಕರನನ್ನು ಬೇರೊಂದು ಸ್ಥಳಕ್ಕೆ ತರಬೇತಿ/ಉನ್ನತ ವ್ಯಾಸಂಗ ಮುಗಿದ ನಂತರ ಬದಲಾಯಿಸಿದಾಗ

7. ಅಮಾನತಿನಲ್ಲಿದ್ದ ನೌಕರನನ್ನು ಮರು ನೇಮಕ ಮಾಡಿ ಬೇರೊಂದು ಸ್ಥಳಕ್ಕೆ ವರ್ಗಾಯಿಸಿದಾಗ

8. ರಜೆಯ ಮೇಲಿದ್ದ ಸರ್ಕಾರಿ ನೌಕರನನ್ನು ಬೇರೊಂದು ಸ್ಥಳಕ್ಕೆ ವರ್ಗಾಯಿಸಿದಾಗ ಯಾವುದೇ ಸರ್ಕಾರಿ ನೌಕರನನ್ನು ಅವನ ಇಚ್ಛಾನುಸಾರ ಬೇರೆ ಸ್ಥಳಕ್ಕೆ ವರ್ಗಾಯಿಸಿದಾಗ ಆತನಿಗೆ ಸೇರುವ ಕಾಲ ದೊರೆಯುವುದಿಲ್ಲ. ಆದರೆ ಆತನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡಲು ಬೇಕಾಗುವ ಅವಧಿಗೆ ರಜೆ ಅರ್ಜಿ ಸಲ್ಲಿಸಿ, ರಜೆ ಮಂಜೂರು ಮಾಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರಯಾಣಕ್ಕೆ ಉಪಯೋಗಿಸಿಕೊಂಡು ಅವಧಿಯ ವಾರ್ಷಿಕ ಬಡ್ತಿ ಮತ್ತು ನಿವೃತ್ತಿ ವೇತನ ಗಣನೆಗೆ ತೆಗೆದುಕೊಳ್ಳಲಾಗುವುದು.

ಸರ್ಕಾರಿ ನೌಕರನನ್ನು ಕೇಂದ್ರ / ಇತರ ರಾಜ್ಯಗಳ ಅಥವಾ ಸಂಸ್ಥೆಗಳ ಸೇವೆಗೆ ನಿಯೋಜಿಸಿದಾಗ ಸೇರುವ ಕಾಲವನ್ನು ಈ ನಿಯಮಗಳಿಗನುಸಾರವಾಗಿ ಒದಗಿಸಬಹುದು.

ಕೇಂದ್ರ ಸ್ಥಾನ ವಾಸಸ್ಥಳ ಬದಲಾವಣೆ ಆಗದಿದ್ದಲ್ಲಿ, ಸರ್ಕಾರಿ ನೌಕರನು ಪೂರ್ವಾಹ್ನ ಬಿಡುಗಡೆ ಹೊಂದಿದಾಗ ಅಪರಾಹ್ನ ಹೊಸ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಅಪರಾಹ್ನ ಕರ್ತವ್ಯದಿಂದ ಬಿಡುಗಡೆ ಹೊಂದಿದರೆ ಮುಂದಿನ ಕೆಲಸದ ದಿನ (ರ್ವಂಗ್ ಡೇ) ಹೊಸ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು.

ಸೇರಿಕೆ ಕಾಲದ ಪ್ರಾರಂಭ

ಸರ್ಕಾರಿ ನೌಕರನು ಪೂರ್ವಾಹ್ನ ಕರ್ತವ್ಯದಿಂದ ಬಿಡುಗಡೆ ಹೊಂದಿದ್ದರೆ, ಆ ದಿನದಿಂದಲೇ ಸೇರುವ ಕಾಲ ಪ್ರಾರಂಭವಾಗುವುದು. ಅಪರಾಹ್ನ ಕರ್ತವ್ಯದಿಂದ ಬಿಡುಗಡೆಯಾದರೆ ಸೇರುವಕಾಲ ಕರ್ತವ್ಯದಿಂದ ಬಿಡುಗಡೆಯಾದ ಮಾರನೆಯ ದಿನದಿಂದಲೇ ಪ್ರಾರಂಭವಾಗಬೇಕು.

ಕರ್ತವ್ಯದಿಂದ ಬಿಡುಗಡೆ ಹೊಂದಿದ ದಿನಾಂಕದ ಮರು ದಿನ/ದಿನಗಳು ಮತ್ತು ಸೇರುವ ಕಾಲದ ಅವಯ ಮಧ್ಯದಲ್ಲಿ ಬರುವ ಸಾರ್ವತ್ರಿಕ ರಜಾದಿನಗಳನ್ನು ಸೇರುವ ಕಾಲವೆಂದೇ ಪರಿಗಣಿಸಬೇಕು. ಆದರೆ ಸೇರುವ ಕಾಲದ ಅವಧಿ ಮುಗಿದ ನಂತರ ಸಾರ್ವತ್ರಿಕ ರಜೆಯ ದಿನ/ದಿನಗಳು ಬಂದರೆ ಆ ದಿನಗಳನ್ನು ಉಪಯೋಗಿಸಿಕೊಂಡು ಸರ್ಕಾರಿ ನೌಕರನು ಮುಂದಿನ ಕೆಲಸದ ದಿನದಂದು ತನ್ನ ಹೊಸ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು.

ಕರ್ತವ್ಯದಿಂದ ಬಿಡುಗಡೆ ಹೊಂದಿದ ನಂತರ ಸರ್ಕಾರಿ ನೌಕರನು ರಜೆಯ ಮೇಲೆ ಹೋಗಲು ಸಾಧ್ಯವಿಲ್ಲ. ಆದರೆ ವೈದ್ಯಕೀಯ ಕಾರಣಗಳಿಂದ ರಜೆ ತೆಗೆದುಕೊಳ್ಳಬೇಕಾದ ಸಂದರ್ಭ ಬಂದರೆ ಅಂತಹ ಸರ್ಕಾರಿ ನೌಕರನು ವೈದ್ಯಕೀಯ ಮಂಡಳಿ ನೀಡಿದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಮತ್ತು ಈ ರಜೆಯನ್ನು ವರ್ಗ ಮಾಡುವ ಅಧಿಕಾರಿಯಿಂದ ಮಂಜೂರಾಗಬೇಕು. ಯಾವ ಸಂದರ್ಭದಲ್ಲಿಯೂ ಸಾಂರ್ದಭಿಕ ರಜೆ ಸೇರುವ ಕಾಲದೊಂದಿಗೆ ಸೇರಿಸಕೂಡದು.

ಸರ್ಕಾರಿ ನೌಕರನು ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗವಾಗಿ ಕರ್ತವ್ಯದಿಂದ ಬಿಡುಗಡೆ ಹೊಂದಿ, ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗುವುದರೊಳಗೆ ಅವನನ್ನು ಬೇರೊಂದು ಸ್ಥಳಕ್ಕೆ ವರ್ಗಾಯಿಸಿದರೆ, ಆತನು ಮರು ಆದೇಶ ಸಿಕ್ಕುವ ಮಾರನೆ ದಿನದಿಂದ ಹೊಸದಾಗಿ ಸೇರುವ ಕಾಲಕ್ಕೆ ಅರ್ಹನಾಗುತ್ತಾನೆ.

ಸೇರಿಕೆ ಕಾಲದ ಅವಧಿ ಲೆಕ್ಕ ಹಾಕುವ ವಿಧಾನ

💥💥💥💥💥

*ಸೇರಿಕೆ ಕಾಲದ ಅವಧಿ ಲೆಕ್ಕ ಹಾಕುವ ವಿಧಾನ*


|ಲ. ರಾಘವೇಂದ್ರ

ಸರ್ಕಾರಿ ನೌಕರರು ವರ್ಗಾವಣೆಯಾದಾಗ ಸೇರುವ ಕಾಲದ ಅವಧಿಯನ್ನು ಹಳೆಯ ಕೇಂದ್ರದ ಸ್ಥಳದಿಂದ ಹೊಸ ಕೇಂದ್ರ ಸ್ಥಳಕ್ಕೆ ಇರುವ ದೂರದ ಆಧಾರದ ಮೇಲೆ ಲೆಕ್ಕ ಹಾಕಬೇಕು.

★ವಿಮಾನದಲ್ಲಿ ಪ್ರಯಾಣಿಸಿದ ಸಂದರ್ಭದಲ್ಲಿ ಹನ್ನೆರಡು ದಿನಗಳ ಸೇರುವ ಕಾಲದ ಅವಧಿ ದೊರೆಯುವುದು.

★ಸರ್ಕಾರಿ ನೌಕರನು ವಿದೇಶದಲ್ಲಿ ಉನ್ನತ ವ್ಯಾಸಂಗ/ತರಬೇತಿ ಮುಗಿಸಿ ವಾಪಸ್ಸು ಬರುವಾಗ, ಎಷ್ಟೇ ದೂರದ ಸ್ಥಳಕ್ಕೆ ನೇಮಿಸಿದರೂ ಏಳು ದಿನದವರೆಗೆ ಸೇರುವ ಕಾಲ ಬಳಸಿಕೊಳ್ಳಬಹುದು.

★ಈ ಮೇಲೆ ತಿಳಿಸಿದ ಸೇರುವ ಕಾಲದ ಅವಧಿ ಜತೆಗೆ ನಿಯಮ 85ರಲ್ಲಿ ಸೂಚಿಸಿರುವ ಇಲಾಖೆಯ ಕೆಲವು ಸಿಬ್ಬಂದಿ ವರ್ಗದವರು ಆ ನಿಯಮದಲ್ಲಿ ಕೊಟ್ಟಿರುವ ಹೆಚ್ಚಿನ ಸೇರುವ ಕಾಲದ ಅವಧಿ ಯನ್ನು ಉಗ್ರಾಣದ ತಪಾಸಣೆಗಾಗಿ ಅಥವಾ ಕಾಮಗಾರಿ ಕೆಲಸಗಳ ತಪಾಸಣೆಗೆ ಬಳಸಿಕೊಳ್ಳುವ ಅವಕಾಶವುಂಟು.

★ವರ್ಗ ಮಾಡುವ ಪ್ರಕಾರ ಸೇರುವ ಕಾಲದ ಅವಧಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕಡಿತಗೊಳಿಸಬಹುದು.

★ನೌಕರನು ನಿಗದಿತ ಸೇರುವ ಕಾಲದ ಅವಧಿ ಒಳಗೆ ಆತನ ಕೈ ಮೀರಿದ ಕಾರಣಗಳಿಂದ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಲು ತಡೆಯುಂಟಾದಾಗ 15 ದಿನಗಳವರೆಗೆ ಇಲಾಖಾ ಮುಖ್ಯಸ್ಥರು/ಹದಿನೈದು ದಿನಗಳನ್ನು ಮೀರಿದಾಗ ಸರ್ಕಾರವು ಪರಿಸ್ಥಿತಿ ಪರಿಗಣಿಸಿ ಸೇರುವ ಕಾಲದ ಅವಧಿ ವಿಸ್ತರಿಸಬಹುದು.

★ಸರ್ಕಾರಿ ನೌಕರನು ತನಗೆ ದೊರೆಯುವ ಸೇರುವ ಕಾಲದ ಅವಧಿಯನ್ನು ಪೂರ್ಣ ಬಳಸಿಕೊಳ್ಳದೆ, ಮುಂಚಿತವಾಗಿಯೇ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾದಲ್ಲಿ ಆ ಉಪಯೋಗಿಸಿಕೊಳ್ಳದ ಅವಧಿಯನ್ನು ಆತನ ಗಳಿಕೆ ರಜೆಯ ಲೆಕ್ಕಕ್ಕೆ ಜಮಾ ಮಾಡಬೇಕು.

*ವರ್ಗಾವಣೆ ಆದಲ್ಲಿ ಸೇರಿಕೆ ಕಾಲದ ಅವಧಿ (ನಿಯಮ 78)*

★ಸರ್ಕಾರಿ ನೌಕರನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾದಾಗ ಸ್ಥಳ ಬದಲಾವಣೆಯಾದರೆ ಹಳೇ ಕೇಂದ್ರಸ್ಥಾನ ಮತ್ತು ಹೊಸ ಕೇಂದ್ರಸ್ಥಾನಕ್ಕೆ ಇರುವ ನಡುವಣ ದೂರ 1000 ಕಿಲೋಮೀಟರ್ ಮತ್ತು ಅದಕ್ಕಿಂತ ಕಡಿಮೆಯಾದರೆ 10 ದಿನ, 1000 ಕಿಲೋಮೀಟರ್​ಗಿಂತಲೂ ಹೆಚ್ಚಾದರೆ 12 ದಿನ, 2000 ಕಿಲೋಮೀಟರ್​ಗಿಂತಲೂ ಹೆಚ್ಚು 15 ದಿನ(ವಿಮಾನದಲ್ಲಿ ಪ್ರಯಾಣಿಸಿದರೆ 12 ದಿನ) ಸೇರಿಕೆ ಕಾಲದ ರಜೆ ಪಡೆಯಬಹುದು.

★ಪೂರ್ವಾಹ್ನ ಕಚೇರಿಯಿಂದ ಬಿಡುಗಡೆಗೊಂಡಿದ್ದರೆ ಬಿಡುಗಡೆಗೊಂಡ ದಿನದಿಂದ ಸೇರುವಿಕೆ ಕಾಲವನ್ನು ಲೆಕ್ಕ ಹಾಕತಕ್ಕದ್ದು. (12 ಗಂಟೆಯನ್ನು ಪೂರ್ವಾಹ್ನ ಎಂದು ಪರಿಗಣಿಸತಕ್ಕದ್ದು) ಮಧ್ಯಾಹ್ನ ಬಿಡುಗಡೆಗೊಂಡಿದ್ದರೆ ಸೇರುವಿಕೆ ಸಮಯವು ಮರು ದಿನದಿಂದ ಪ್ರಾರಂಭವಾಗುವುದು.

★ಸರ್ಕಾರಿ ನೌಕರನು ಪ್ರವಾಸದಲ್ಲಿದ್ದಾಗ ವರ್ಗಾವಣೆಯಾಗಿ ಕಚೇರಿಯಿಂದ ಬಿಡುಗಡೆಗೊಂಡಿದ್ದರೆ ಅವನು ತನ್ನ ಹಳೆಯ ಕೇಂದ್ರ ಸ್ಥಾನದಿಂದಲೇ ಸೇರುವಿಕೆ ಕಾಲವನ್ನು ಲೆಕ್ಕಹಾಕಬೇಕು.

★40050 ರೂ. ಅಥವಾ ಅದಕ್ಕಿಂತಲೂ ಹೆಚ್ಚು ವೇತನ ಪಡೆಯುವ ನೌಕರನು ವರ್ಗಾವಣೆಯಾದಾಗ ವಿಮಾನಯಾನ ಮಾಡಬಹುದು.

*ವೇತನ ಮತ್ತು ಇತರ ಭತ್ಯೆಗಳ ವಿವರ*

ಕರ್ತವ್ಯದಲ್ಲಿದ್ದ ನೌಕರನು ವರ್ಗವಾದ ಪ್ರಯುಕ್ತ ಬಿಡುಗಡೆ ಹೊಂದಿದಾಗ ಆತನು ತನ್ನ ಹಳೆಯ ಹುದ್ದೆಯಲ್ಲಿ ಬಿಡುಗಡೆಯ ನಿಕಟ ಪೂರ್ವದಲ್ಲಿ ಪಡೆಯುತ್ತಿದ್ದ ವೇತನ ಮತ್ತು ಆ ಸ್ಥಳದಲ್ಲಿ, ಆ ವೇತನಕ್ಕೆ ಅನ್ವಯಿಸುವ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಗಳಿಗೆ ಅರ್ಹನಾಗುತ್ತಾನೆ.

★ರಜೆ/ಅಮಾನತಿನಲ್ಲಿದ್ದ ಸರ್ಕಾರಿ ನೌಕರನು ಸೇರುವ ಕಾಲದ ಅವಧಿಗೆ ರಜೆಯ/ಅಮಾನತಿನಲ್ಲಿದ್ದ ದಿನಾಂಕದ ನಿಕಟ ಪೂರ್ವದಲ್ಲಿ ಪಡೆಯುತ್ತಿದ್ದ ವೇತನ ಮತ್ತು ಅದಕ್ಕೆ ಅನ್ವಯಿಸುವ ತುಟ್ಟಿಭತ್ಯೆ, ಮನೆ ಬಾಡಿಗೆ ಮತ್ತು ನಗರ ಪರಿಹಾರ ಭತ್ಯೆಗಳಿಗೆ ಅರ್ಹನಾಗುತ್ತಾನೆ.

★ಉನ್ನತ ವ್ಯಾಸಂಗ/ತರಬೇತಿಗೆ ನಿಯೋಜಿಸಿದ ಸರ್ಕಾರಿ ನೌಕರನು, ಆ ನಿಯೋಜನಾ ಅವಧಿಯಲ್ಲಿ ಪಡೆಯುತ್ತಿದ್ದ ವೇತನ ಮತ್ತು ಅದಕ್ಕೆ ಅನ್ವಯಿಸುವ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಗಳಿಗೆ ಅರ್ಹನಾಗುತ್ತಾನೆ.

★ಸೇರುವ ಕಾಲದ ಅವಧಿಗೆ ವಾಹನ ಭತ್ಯೆ, ನಿಗದಿತ ಪ್ರಯಾಣ ಭತ್ಯೆ ಮತ್ತು ಯೋಜನಾ ಭತ್ಯೆಗಳು ದೊರೆಯುವುದಿಲ್ಲ.
💥✨💥✨💥✨💥✨💥✨💥
*ತೆರಿಗೆ ಪಾವತಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ*

   25-09-2017 5:15AM IST   

ಆನ್ ಲೈನ್ ನಲ್ಲಿ ತೆರಿಗೆ ಪಾವತಿ ಹಾಗೂ ಇತರ ಚಟುವಟಿಕೆ ನಡೆಸುವ ತೆರಿಗೆ ಪಾವತಿದಾರರು ತಮ್ಮ ಪ್ರೊಪೈಲ್ ಅಪ್ಡೇಟ್ ಮಾಡಬೇಕು. ಅಧಿಕೃತ ಇ-ಫೈಲಿಂಗ್ ವೆಬ್ ಸೈಟ್ ನಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ಇಲಾಖೆ ಹಾಗೂ ತೆರಿಗೆದಾರರ ನಡುವಣ ಪರಿಣಾಮಕಾರಿ ಸಂವಹನಕ್ಕೆ ಇದು ಅತ್ಯಗತ್ಯ ಅಂತಾ ಐಟಿ ಇಲಾಖೆ ಹೇಳಿದೆ. ವೈಯಕ್ತಿಕ ವಿವರ, ಸೆಕೆಂಡರಿ ಇಮೇಲ್ ಅಡ್ರೆಸ್, ಮೊಬೈಲ್ ನಂಬರ್, ವಿಳಾಸ ಹಾಗೂ ಬ್ಯಾಂಕ್ ಅಕೌಂಟ್ ವಿವರಗಳನ್ನು ತೆರಿಗೆದಾರರು ಭರ್ತಿ ಮಾಡಬೇಕಿದೆ.

ಈ ವಿವರಗಳನ್ನು ಅಪ್ ಡೇಟ್ ಮಾಡಿದ ಬಳಿಕ ಇಮೇಲ್ ಅಥವಾ ಎಸ್ ಎಂ ಎಸ್ ಮೂಲಕ ಬರುವ ಓಟಿಪಿ ನಮೂದಿಸಿ ಅದನ್ನು ವೆರಿಫೈ ಮಾಡಿಕೊಳ್ಳಿ. ಇದಕ್ಕಾಗಿ ಹೊಸ ರಿಜಿಸ್ಟ್ರೇಶನ್ ಪ್ರಕ್ರಿಯೆಯನ್ನು ಅಳವಡಿಸಲಾಗಿದೆ. https://incometaxindiaefiling.gov.in ಗೆ ವಿಸಿಟ್ ಮಾಡಿ, ನಿಮ್ಮ ವಿವರಗಳನ್ನು ಅಪ್ಡೇಡ್ ಮಾಡಿಕೊಳ್ಳಿ.

ನೌಕರರ ನಿವೃತ್ತಿ ವೇತನದ ನಿಯಮಗಳು

*ನೌಕರರ ನಿವೃತ್ತಿ ವೇತನದ ನಿಯಮಗಳು*


ಲ. ರಾಘವೇಂದ್ರ

ಸರ್ಕಾರಿ ನೌಕರರು 1958ರ ಏಪ್ರಿಲ್ 1ರಿಂದ 2006ರ ಮಾರ್ಚ್ 31ರವರೆಗೆ ಸರ್ಕಾರಿ ಸೇವೆಗೆ ಸೇರಿದ್ದರೆ ಅಂತಹವರಿಗೆ ಹಳೆಯ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ. ಆದರೆ 2006ರ ಏಪ್ರಿಲ್ 1ರಿಂದ ಸರ್ಕಾರಿ ಸೇವೆಗೆ ಸೇರಿದ ಸರ್ಕಾರಿ ನೌಕರನಿಗೆ ನೂತನ ಪಿಂಚಣಿ ಸೌಲಭ್ಯಗಳನ್ನು ನೀಡಲಾಗುವುದು. ಈ ಕೆಳಗೆ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಸೌಲಭ್ಯಗಳ ಬಗ್ಗೆ ವಿವರ ನೀಡಲಾಗಿದೆ.

★★★★★
ನಿವೃತ್ತಿ ವೇತನದ ಬಗ್ಗೆ ಗಮನಿಸ ಬೇಕಾದ ಅಂಶಗಳು:

★ನಿವೃತ್ತಿ ವೇತನ ಸೌಲಭ್ಯಗಳುಳ್ಳ ಸಿಬ್ಬಂದಿ ವರ್ಗದ ಸೇವೆಯನ್ನು ಮಾತ್ರ ನಿವೃತ್ತಿ ವೇತನ ಸೌಲಭ್ಯಗಳಿಗೆ ಪರಿಗಣಿಸಲಾಗುವುದು.

★ಪೂರ್ಣ ಪ್ರಮಾಣದ ಪಿಂಚಣಿ ಸೌಲಭ್ಯಗಳನ್ನು ಪಡೆಯಲು ಉದ್ಯೋಗಿಯ ಸೇವೆ ಸಂಪೂರ್ಣವಾಗಿ ತೃಪ್ತಿಕರವಾಗಿರಬೇಕು.

★ನಿವೃತ್ತಿಯ ನಂತರವೂ ಉದ್ಯೋಗಿ ಸನ್ನಡತೆಯವನಾಗಿ ಇರಬೇಕೆಂಬುದು ನಿವೃತ್ತಿ ವೇತನ ನಿಯಮಗಳ ಸೂಚ್ಯ ಷರತ್ತು.

★ದುರ್ನಡತೆ, ಅಧಕ್ಷತೆ ಹಾಗೂ ದಿವಾಳಿತನದ ಕಾರಣಕ್ಕಾಗಿ ಸೇವೆಯಿಂದ ವಜಾ ಮಾಡಿದ ಉದ್ಯೋಗಿಗೂ, ವಿಶೇಷ ಸಂದರ್ಭಗಳಲ್ಲಿ ‘ಅನುಕಂಪಭತ್ಯೆ’ಯನ್ನು ಸರ್ಕಾರ ಮಂಜೂರು ಮಾಡಬಹುದು.

★ನಿವೃತ್ತಿ ವೇತನ ತಡೆಹಿಡಿಯುವುದು, ಹಿಂಪಡೆಯುವುದು ಹಾಗೂ ಕಡಿತಗೊಳಿಸುವುದು ಸರ್ಕಾರದ ಅಧಿಕಾರಕ್ಕೆ ಒಳಪಟ್ಟಿದೆ.

★ಇಲಾಖಾ/ನ್ಯಾಯಾಂಗ ವಿಚಾರಣೆಗೆ ಒಳಪಟ್ಟ ಉದ್ಯೋಗಿ 60 ವರ್ಷ ತಲುಪಿ ನಿವೃತ್ತಿ ಹೊಂದಿದ ಪ್ರಕರಣದಲ್ಲಿ ‘ತಾತ್ಕಾಲಿಕ ಪಿಂಚಣಿ’ ಮಂಜೂರು ಮಾಡಲಾಗುವುದು.

★ನಿವೃತ್ತಿ ವೇತನ ಸೌಲಭ್ಯಗಳ ಇತ್ಯರ್ಥ ವಿಳಂಬವಾಗುವುದು ಕಂಡುಬಂದಲ್ಲಿ ನಿರೀಕ್ಷಣಾ ನಿವೃತ್ತಿ ಮತ್ತು ನಿರೀಕ್ಷಣಾ ಉಪದಾನವನ್ನು ಸಂದಾಯ ಮಾಡಬಹುದು.

★ಉದ್ಯೋಗಿ ನಿವೃತ್ತನಾದ ನಂತರವೂ ನಾಲ್ಕು ವರ್ಷಗಳೊಳಗೆ ಸಂಭವಿಸಿದ ಘಟನೆಗಳ ಬಗ್ಗೆ ಸರ್ಕಾರದ ಪೂರ್ವಾನುಮತಿ ಪಡೆದು ಇಲಾಖಾ ವಿಚಾರಣೆಗೆ ಹೂಡಬಹುದು.

★ಸರ್ಕಾರಕ್ಕೆ ಅಥವಾ ಸರ್ಕಾರೇತರ ಸಂಸ್ಥೆಗಳಿಗೆ ಬರಬೇಕಾದ ಬಾಕಿಗಳನ್ನು ನಿವೃತ್ತಿ ವೇತನ ಪರಿವರ್ತಿತ ನಿವೃತ್ತಿ ವೇತನದ ಮೊಬಲಗುಗಳಿಂದ ಹಾಗೂ ಕುಟುಂಬ ನಿವೃತ್ತಿಯಿಂದ ವಸೂಲಿಗೆ ಅವಕಾಶವಿಲ್ಲ.

★ನಿವೃತ್ತಿ/ಮರಣ ಉಪದಾನ ಮತ್ತು ಗಳಿಕೆ ರಜೆ ನಗದೀಕರಣದ ವೇತನದಿಂದ, ಸರ್ಕಾರಕ್ಕೆ ಬರಬೇಕಾದ ಬಾಕಿಗಳನ್ನು ಉದ್ಯೋಗಿಯ/ಕುಟುಂಬದ ಒಪ್ಪಿಗೆಯಿಲ್ಲದೆಯೂ ವಸೂಲಿ ಮಾಡಬಹುದು.

★ಸಾಲದ ವಸೂಲಾತಿಗಾಗಿ ನಿವೃತ್ತಿ ವೇತನ, ಪರಿವರ್ತಿತ ನಿವೃತ್ತಿ ವೇತನದ ಮೊಬಲಗು, ಉಪದಾನಗಳನ್ನು ಜಪ್ತಿ ಮಾಡಲು ಅವಕಾಶವಿಲ್ಲ.

★ನಿವೃತ್ತಿ/ಮರಣ ಉಪದಾನ, ನಿವೃತ್ತಿ ವೇತನದ ಪರಿವರ್ತಿತಾ ಮೊಬಲಗು ನಿವೃತ್ತಿ ಅಥವಾ ಮರಣದ ವೇಳೆಯಲ್ಲಿ ಗಳಿಕೆ ರಜೆ ನಗದೀಕರಿಸಿದ ರಜಾ ವೇತನ – ಇವುಗಳು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ.

★ಮಾನಸಿಕ ಅಸ್ವಸ್ಥತೆ ಅಥವಾ ದೈಹಿಕ ಅಸಮರ್ಥತೆಯ ಮಕ್ಕಳಿಗೆ ಜೀವನ ಪರ್ಯಂತ ಕುಟುಂಬ ಪಿಂಚಣಿ ಸಂದಾಯ ಮಾಡಲಾಗುವುದು.

★ವಿಚ್ಛೇದನ ಪಡೆದ ಪತಿ/ಪತ್ನಿ ಹಾಗೂ ಮರು ಮದುವೆಯಾದ ವಿಧುರ/ವಿಧವೆಯರು ಕುಟುಂಬ ಪಿಂಚಣಿಗೆ ಅರ್ಹರಲ್ಲ.

★ಕಾನೂನಿನ್ವಯ ಬೇರೊಬ್ಬ ಪತ್ನಿ ಹೊಂದಿರುವ ಪುರುಷ ಕುಟುಂಬ ಪಿಂಚಣಿಗೆ ಅರ್ಹನಲ್ಲ.

★ನಿವೃತ್ತಿಯ ನಂತರ ಮದುವೆಯಾದ ಪಿಂಚಣಿದಾರನ ಪತ್ನಿ ಕುಟುಂಬ ಪಿಂಚಣಿಗೆ ಅರ್ಹಳು.

★ಉದ್ಯೋಗಿಯ ಕೊಲೆಗೆ ಕಾರಣರಾದ ಅಥವಾ ದುಷ್ಪೇರಣೆ ನೀಡಿದ ಕುಟುಂಬದ ಸದಸ್ಯರಿಗೆ ಕುಟುಂಬ ಪಿಂಚಣಿ ಮತ್ತು ಉಪದಾನದ ಸಂದಾಯಕ್ಕೆ ಅವಕಾಶವಿಲ್ಲ.

★ಕಾಣೆಯಾದ ಸರ್ಕಾರಿ ಉದ್ಯೋಗಿಯ ಕುಟುಂಬಕ್ಕೆ ಕುಟುಂಬ ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಮಂಜೂರು ಮಾಡಬಹುದು.

★ನಿವೃತ್ತಿಯನ್ನು 1/3ನೇ ಭಾಗದವರೆಗೆ ಪರಿವರ್ತಿಸಿ ಇಡುಗಂಟಿನಲ್ಲಿ ಪಡೆಯಬಹುದು. 15 ವರ್ಷ ಪೂರ್ಣಗೊಂಡ ನಂತರ ಮೂಲ ನಿವೃತ್ತಿ ಸಂದಾಯ ಮಾಡಲಾಗುವುದು.

★ನಿವೃತ್ತಿ ವೇತನ ಸೌಲಭ್ಯಗಳ ಇತ್ಯರ್ಥದ ವಿಳಂಬಕ್ಕೆ ಶೇ.12 ಬಡ್ಡಿ ಪಾವತಿಸಬೇಕು.

★ಉದ್ಯೋಗಿಯಿಂದ ಸರ್ಕಾರಕ್ಕೆ ಬರಬೇಕಾದ ಬಾಕಿಯನ್ನು ಕಾಲ ಮಿತಿಯಲ್ಲಿ ನಿರ್ಧರಿಸದೆ ಸರ್ಕಾರಕ್ಕೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರರು.

★ಕಚೇರಿ ಮುಖ್ಯಸ್ಥರು ಪತ್ರಾಂಕಿತರಲ್ಲದ ಅಧಿಕಾರಿಗಳ ಪಿಂಚಣಿ ದಾಖಲೆಗಳನ್ನು ಮಹಾಲೇಖಪಾಲರಿಗೆ ರವಾನಿಸಬೇಕು. ಪತ್ರಾಂಕಿತ ಅಧಿಕಾರಿಗಳು ನೇರವಾಗಿ ಮಹಾಲೇಖಪಾಲರಿಗೆ ರವಾನಿಸಬಹುದು. ಅನ್ಯಸೇವೆಯಲ್ಲಿನ ಎಲ್ಲ ಸರ್ಕಾರಿ ಅಧಿಕಾರಿಗಳ ಪಿಂಚಣಿ ದಾಖಲೆಗಳನ್ನು ಇಲಾಖಾ ಮುಖ್ಯಸ್ಥರ ಮೂಲಕ ರವಾನಿಸಬೇಕು.

★ಪತ್ರಾಂಕಿತರಲ್ಲದ ಉದ್ಯೋಗಿಗಳ ಪಿಂಚಣಿ ದಾಖಲೆಗಳನ್ನು ಮುಷ್ಕರದ ಅವಧಿಯನ್ನು ಸರ್ಕಾರ ರಜೆಯೆಂದು ಪರಿಗಣಿಸದಿದ್ದಲ್ಲಿ ಉದ್ಯೋಗಿಯ ಹಿಂದಿನ ಸೇವೆಯನ್ನು ನಿವೃತ್ತಿ ವೇತನ ಸೌಲಭ್ಯಗಳಿಗೆ ಅರ್ಹ ಸೇವೆಗಾಗಿ ಪರಿಗಣಿಸುವಂತಿಲ್ಲ.

ಸಿಡಿಲಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ...?

ಒಂದು ನಿಮಿಷ ಸಮಯ ಕೊಟ್ಟು ಓದಿ   
                                  ಸಿಡಿಲಾಘಾತದಿಂದ      ತಪ್ಪಿಸಿಕೊಳ್ಳುವುದು ಹೇಗೆ...?
 
    ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಸಿಡಿಲನ್ನು ತಪ್ಪಿಸಲಾಗದು. ಆದರೆ. ಅದರಿಂದಾಗುವ ಸಾವು ನೋವು ಗಳನ್ನು ತಪ್ಪಿಸಬಹುದು.

ರಕ್ಷಣೆ ಹೇಗೆ......?

- ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಬಯಲಿನಲ್ಲಿದ್ದರೆ. ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ.ನಿಲ್ಲ ಬೇಡಿ

-ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ. ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ, ಇದು ಮಿಂಚಿನಿಂದ ಮೆದುಳಿಗೂ,ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ.

-
ಮರಗಳಿದ್ದ ಪ್ರದೇಶದಲ್ಲಿ ನೀವು ಇದ್ದರೆ, ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು.(ಯಾಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ.)

- ಎತ್ತರದ ಗುಡ್ಡದ ಮೇಲಿದ್ದರೆ ತಗ್ಗಿಗೆ   ಇಳಿರಿ

- ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ, ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ, ( ಯಾಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷನನ್ನೇ ಆರಿಸಿಕೊಳ್ಳುತ್ತದೆ.)

-ಕೆರೆಯಲ್ಲಿ ಈಜುವುದು,ಸ್ನಾನ ಮಾಡುವುದು ಬೇಡ, ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ .

- ವಿದ್ಯುತ್ ಕಂಬ, ಎಲಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬೇಡಿ.

-ತಂತಿಬೇಲಿ,ಭಟ್ಟ ಒಣಹಾಕುವ ತಂತಿ, ಇವುಗಳಿಂದ ದೊರವಿರಿ

- ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸನ್ನು ಸ್ವಚ್ಛ ಮಾಡುವ ಸಾಹಸ ಬೇಡ.

- ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ.

- ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್ ಮಾಡಬೇಡಿ. ಅದನ್ನು ಚಾರ್ಜ್ ಮಾಡುವ ಸಹಸವೂ ಬೇಡ.

- ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು.

- ಕಂಪ್ಯೂಟರ್ ಗಳಿಂದ ದೂರ ಇರಿ

- ಮನೆಯ ಕಾoಕ್ರೇಟ್ ಗೋಡೆಗಳನ್ನು ಸ್ಪೆರ್ಶಿಸದೆ.ಕೋಣೆಯ  ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ.
             ಈ ಸಂದೇಶವನ್ನು plz share with all your near & dear ones
         "ಧನ್ಯವಾದಗಳೊಂದಿಗೆ"
ಪ್ರಕಟಣೆ.
ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
ಕಂದಾಯ ಇಲಾಖೆ
ಕರ್ನಾಟಕ ಸರ್ಕಾರ

ಸರ್ಕಾರಿ ಉದ್ಯೋಗಿ ಪಡೆಯುವ ಗೌರವಧನ

*ಸರ್ಕಾರಿ ಉದ್ಯೋಗಿ ಪಡೆಯುವ ಗೌರವಧನ*



ಶುಲ್ಕ ಮತ್ತು ಗೌರವಧನ (ನಿಯಮ 28 ಮತ್ತು 29)

ನಿಯಮ 26 ಮತ್ತು 27ರ ಪ್ರಕಾರ ಸರ್ಕಾರವು ತನ್ನ ವಿವೇಚನೆಯ ಮೇರೆಗೆ ಅವಶ್ಯಕತೆ ಇರುವ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರಿ ಉದ್ಯೋಗಿಯ ಸೇವೆ ಬಳಸಿಕೊಳ್ಳಬಹುದು ಮತ್ತು ಆತನ ಸೇವಾ ಅವಯ ಪೂರ್ಣ ವೇಳೆಯು ಸರ್ಕಾರದ ವಶದಲ್ಲಿರುತ್ತದೆ. ಆದ್ದರಿಂದ ಸರ್ಕಾರದ ಅನುಮತಿಯಿಲ್ಲದೆ ಖಾಸಗಿ ಸಂಸ್ಥೆ / ಸ್ಥಳೀಯ ಸಂಸ್ಥೆ / ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಸಂಭಾವನೆ ಪಡೆಯಲು ಅವಕಾಶ ಇರುವುದಿಲ್ಲ. ಸರ್ಕಾರಿ ಉದ್ಯೋಗಿಯು ತನ್ನ ಸೇವಾ ಅವಧಿ ಪೂರ್ಣವೇಳೆಯನ್ನು ಸರ್ಕಾರ ವಹಿಸಿಕೊಟ್ಟ ಕರ್ತವ್ಯಗಳ ನಿರ್ವಹಣೆಗೆ ಮಾತ್ರ ವಿನಿಯೋಗಿಸುವ ಹೊಣೆ ಹೊಂದಿರುತ್ತಾನೆ.

1) *ಗೌರವಧನ:* ಕೆಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಉದ್ಯೋಗಿಗಳು ಹೊಣೆಯ ಸ್ವರೂಪದ ಕರ್ತವ್ಯಗಳನ್ನು ಕಚೇರಿ ವೇಲೆ ನಿರಂತರವಾಗಿ ಮಾಡಬೇಕಾದಾಗ ಸರ್ಕಾರವು ಅಂತಹ ಉದ್ಯೋಗಿಗಳಿಗೆ ಕರ್ತವ್ಯಗಳ ಮಹತ್ವ ಮತ್ತು ಕಾರ್ಯನಿರ್ವಹಿಸಬೇಕಾದ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಸಂಭಾವನೆಯ ದರ ನಿಗದಿಪಡಿಸಿ ಪಾವತಿಸುವಂತೆ ಮಂಜೂರಾತಿ ನೀಡುತ್ತದೆ.

ನಿಯಮ 28ರ ಟಿಪ್ಪಣಿ 3ರ ಕಂಡಿಕೆ (ಸಿ) (1ರಿಂದ ()ರವರೆಗೆ ನಮೂದಿಸಿರುವ ಪ್ರಕರಣಗಳು: ಸಾರ್ವಜನಿಕ ಸ್ಪರ್ಧೆಯಲ್ಲಿ ಗಳಿಸಿದ ಪಾರಿತೋಷಕ, ನ್ಯಾಯಾಡಳಿತದಲ್ಲಿ ಸಲ್ಲಿಸಿದ ಸೇವೆಗೆ ಪ್ರತಿಫಲ ಅಥವಾ ಇನ್ಯಾವುದೇ ಕಾನೂನಿನ ಪರಿಪಾಲನೆಗಾಗಿ ದೊರೆತ ಪ್ರತಿಫಲ ಇತ್ಯಾದಿಗಳನ್ನು ಸರ್ಕಾರಿ ಉದ್ಯೋಗಿ ಪಡೆದು ವಿಶೇಷ ಅನುಮತಿ ಇಲ್ಲದೆ ತನ್ನಲ್ಲೆ ಉಳಿಸಿಕೊಳ್ಳಬಹುದು.

2) *ಶುಲ್ಕ:* ಸರ್ಕಾರದ ಕೆಲಸ ಕಾರ್ಯಗಳಿಗೆ ಅಡಚಣೆ ಅಥವಾ ತೊಡಕು ಉಂಟಾಗದಂತೆ ಆಕಸ್ಮಿಕ ಸ್ವರೂಪದ ಖಾಸಗಿ, ಸ್ಥಳೀಯ, ಸ್ವಾಯತ್ತ ಸಂಸ್ಥೆಗಳ ಖಾಸಗಿ ವ್ಯಕ್ತಿಗಳ ಕೆಲಸ ಕಾರ್ಯಗಳ ಮೇಲ್ವಿಚಾರಣೆ, ತಾಂತ್ರಿಕ ಸಲಹೆ / ಸಹಕಾರ ನೀಡಿದ ಪ್ರಯುಕ್ತ ಅಥವಾ ಅಸಾಧಾರಣ ಸಂದರ್ಭಗಳಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದ ಪ್ರಯುಕ್ತ ಸರ್ಕಾರದ ಅಥವಾ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದು ಆ ಮೂಲಗಳಿಂದ ಸಂಭಾವನೆ ಪಡೆಯಬಹುದು. ಇದನ್ನೇ ಶುಲ್ಕ ಎನ್ನಲಾಗುತ್ತದೆ.

ಸರ್ಕಾರಿ ಉದ್ಯೋಗಿಯ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯೊಡನೆ ಖಾಸಗಿ/ ಸ್ವಾಯತ್ತ / ಸ್ಥಳೀಯ ಸಂಸ್ಥೆಗಳಿಗೆ ಸೇವೆ ಸಲ್ಲಿಸಿದ ಪ್ರಯುಕ್ತ ಪಡೆದ ಸಂಭಾವನೆಯ 1/3 ಭಾಗವನ್ನು ಸರ್ಕಾರದ ಬೊಕ್ಕಸಕ್ಕೆ ಜಮಾ ಮಾಡಬೇಕಾಗುತ್ತದೆ.

ನಿಯಮ 29(ಎ) (4)ರ ಉಪ ಕಂಡಿಕೆ (1) ರಿಂದ (7)ವರೆಗಿನ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರಿ ನೌಕರನು ಆ ಕಂಡಿಕೆಗಳಲ್ಲಿ ಷರತ್ತಿಗೊಳಪಟ್ಟು ಸಂಭಾವನೆ ಸ್ವೀಕರಿಸಿ ತನ್ನಲ್ಲಿಯೇ ಉಳಿಸಿಕೊಳ್ಳಬಹುದು. ಮೇಲಿನ ನಿಯಮದ ಟಿಪ್ಪಣಿಯಲ್ಲಿ ತಿಳಿಸಿರುವಂತೆ ತಹಸೀಲ್ದಾರ್/ಉಪ ತಹಸೀಲ್ದಾರ್ ನ್ಯಾಯಾಲಯದ ಆದೇಶದನ್ವಯ ಸ್ವೀಕೃತ(ರಿಸೀವರ್)ನಾಗಿ ಕಾರ್ಯ ನಿರ್ವಹಿಸಿ ಪಡೆದ ಸಂಭಾವನೆಯ ಪೂರ್ಣಭಾಗವನ್ನು ತಾನೇ ಉಳಿಸಿಕೊಳ್ಳಬಹುದು.

ಸರ್ಕಾರಿ ಅಧಿಕಾರಿಗಳನ್ನು ಸರ್ಕಾರೇತನ ಸಂಸ್ಥೆಗಳ ಕಾರ್ಯನಿರ್ವಹಿಸಲು ನೇಮಿಸಬಹುದು. ಇಂತಹ ಸಂದರ್ಭಗಳಲ್ಲಿ ಅಧಿಕಾರಿಯ ಕರ್ತವ್ಯಗಳು ಗಣನೀಯವಾಗಿ ಹೆಚ್ಚಾದಲ್ಲಿ ಅಂತಹ ಅಧಿಕಾರಿಗಳಿಗೆ ಹೆಚ್ಚುವರಿಯಾಗಿ ಸಂಭಾವನೆಯನ್ನು ಸಂಬಂಧಪಟ್ಟ ಸಂಸ್ಥೆಯಿಂದ ಸಂದಾಯ ಮಾಡಬಹುದು. ಸರ್ಕಾರದ ಕರ್ತವ್ಯಗಳ ನಿರ್ವಹಣಾ ವೇಳೆಯಲ್ಲಿ ಖಾಸಗಿ ಸಂಸ್ಥೆಗಳ ಕಾರ್ಯಗಳನ್ನು ನಿರ್ವಹಿಸಬೇಕಾದಾಗ ಸಂಸ್ಥೆಗಳು ಪಾವತಿಸಬೇಕಾದ ಶುಲ್ಕವನ್ನು ಸರ್ಕಾರಿ ನೌಕರನಿಗೆ ಜಮಾ ಮಾಡಬೇಕಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಸರ್ಕಾರವು ತನ್ನ ಉದ್ಯೋಗಿಗೆ ಸಂಭಾವನೆಯನ್ನು ನಿಗದಿತ ದರದಲ್ಲಿ ಪಾವತಿಸಬಹುದು.

*ಹುದ್ದೆಯ ಹಕ್ಕು:* (ನಿಯಮ 17 ರಿಂದ 20): ಒಬ್ಬ ವ್ಯಕ್ತಿಯನ್ನು ಸರ್ಕಾರದ ವ್ಯವಹಾರಗಳ ನಿರ್ವಹಣೆಗಾಗಿ ಒಂದು ಸ್ಥಿರ (ಮೂಲ) ಹುದ್ದೆಗೆ ನೇಮಕಾತಿ ನಿಯಮಗಳ ಪ್ರಕಾರ ನೇಮಿಸಿ ವಿಧಿಸಲಾದ ಷರತ್ತುಗಳನ್ನು ಪೂರೈಸಿದ ಮೇರೆಗೆ ಆತನ ನೇಮಕಾತಿಯನ್ನು ಸ್ಥಿರ ಹುದ್ದೆಯಲ್ಲಿ ಸ್ಥಿರೀಕರಣಗೊಳಿಸಲಾಗುವುದು. ಸ್ಥಿರೀಕೃತಗೊಳಿಸಿದ ದಿನದಿಂದ ಆ ಮೂಲ (ಸ್ಥಿರ) ಹುದ್ದೆಯ ಮೇಲೆ ಉದ್ಯೋಗಿಯ ಹಕ್ಕು ಸ್ಥಾಪಿತವಾಗುತ್ತದೆ. ಆದ್ದರಿಂದ ಒಂದು ಸ್ಥಿರ (ಮೂಲ) ಹುದ್ದೆಗೆ ಒಬ್ಬ ವ್ಯಕ್ತಿಯನ್ನು ಮಾತ್ರ ಕಾಯಂ ಆಗಿ ನೇಮಿಸಬಹುದು. ಹಾಗೆಯೇ ಒಬ್ಬ ವ್ಯಕ್ತಿಯನ್ನು ಕಾಯಂ ಆಗಿ ಒಂದೇ ಸ್ಥಿರ ಹುದ್ದೆಗೆ ನೇಮಿಸಲು ಮಾತ್ರ ಅವಕಾಶವಿರುತ್ತದೆ. ಆದರೆ ಸರ್ಕಾರ ವಿಶೇಷ ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ಒಬ್ಬ ಉದ್ಯೋಗಿಯನ್ನು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಿಸಲೂಬಹುದು. (ನಿಯಮ 66)

ಒಬ್ಬ ಉದ್ಯೋಗಿಯು ‘ಹಕ್ಕು’ ಪಡೆದಿರುವ ಹುದ್ದೆಗೆ ಕಾಯಂ ಆಗಿ ಬೇರೊಬ್ಬ ಉದ್ಯೋಗಿಯನ್ನು ನೇಮಿಸಲು ಅವಕಾಶವಿಲ್ಲ. ಉದ್ಯೋಗಿಯು ಬೇರೊಂದು ಕಾಯಂ ಹುದ್ದೆಯ ಮೇಲೆ ‘ಹಕ್ಕು’ಗಳಿಸಿದ ದಿನದಿಂದ ತನ್ನ ಹಿಂದಿನ ಸ್ಥಿರ ಹುದ್ದೆಯ ಮೇಲಿನ ಹಕ್ಕು ಕಳೆದುಕೊಳ್ಳುತ್ತಾನೆ. ಅಂತಹ ಹುದ್ದೆಗೆ ಬೇರೊಬ್ಬ ವ್ಯಕ್ತಿಯನ್ನು ಕಾಯಂ ಆಗಿ ನೇಮಿಸಬಹುದು ಅಥವಾ ಪದೋನ್ನತಿ ನೀಡಿ ಸದರಿ ‘ಸ್ಥಿರ’ ಹುದ್ದೆಯನ್ನು ಕಾಯಂ ಆಗಿ ತುಂಬಬಹುದು.(ನಿಯಮ 18 ಮತ್ತು 19).

💥💥💥💥💥
〰〰〰〰〰〰〰〰〰〰〰

ಒಂದು ಪಟ್ಟಣದಲ್ಲಿ ಅಪ್ಪ ಮಗಳು ಪುಟ್ಟ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಮಗಳಿಗೋ ಜೀವನದ ಆಸಕ್ತಿಯೇ ಕುಂದಿ ಹೋಗಿತ್ತು. ಒಂದು ದಿನ ಅಪ್ಪನ ಬಳಿ ಬಂದು ‘ ನನಗೆ ಜೀವನ ಸಾಕಾಗಿದೆ, ನಾನೆಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ, ಇನ್ನು ನನ್ನಿಂದ ಆಗದು’ ಎಂದು ಸೋತಳು.  ಅವಳ ತಂದೆ ಹೊಟೆಲ್ ಒಂದರಲ್ಲಿ ಅಡುಗೆ ಮಾಡುತ್ತಿದ್ದ. ಮಗಳನ್ನು ಸೀದಾ ಅಡುಗೆ ಮನೆಗೆ ಕರೆದೊಯ್ದು ಮೂರು ಪಾತ್ರೆಗಳಿಗೆ ನೀರು ತುಂಬಿಸಿ ಕುದಿಯಲು ಇಟ್ಟನು. ಒಂದಕ್ಕೆ ಆಲೂಗಡ್ಡೆ, ಇನ್ನೊಂದಕ್ಕೆ ಮೊಟ್ಟೆ, ಮತ್ತೊಂದಕ್ಕೆ ಕಾಫಿ ಬೀಜಗಳನ್ನು ಹಾಕಿದ. ಮಗಳಿಗೋ ಅಪ್ಪ ಏನು ಮಾಡುತ್ತಿದ್ದಾನೆ ಎಂಬುದೇ ಅರ್ಥವಾಗುತ್ತಿರಲಿಲ್ಲ. ತಾಳ್ಮೆ ಇಲ್ಲದಿದ್ದರೂ ಅಪ್ಪನನ್ನು ನೋಡುತ್ತಾ, ಪದೇ ಪದೇ ಏನು ಮಾಡುತ್ತಿದ್ದೀರಿ ಎಂದು ಕೇಳುತ್ತಲೇ ಇದ್ದಳು. ಸ್ವಲ್ಪ ಸಮಯದಲ್ಲಿ ಮೂರು ಪಾತ್ರೆಗಳಲ್ಲಿದ್ದ ಪದಾರ್ಥಗಳು ಬೇಯಲಾರಂಭಿಸಿದವು. ಇಪ್ಪತ್ತು ನಿಮಿಷದ ನಂತರ ಮೂರೂ ಪಾತ್ರೆಯನ್ನು ತಂದೆ ಕೆಳಗಿಳಿಸಿದ. ಈಗಾಗಲೇ ತುಂಬಾ ಹೊತ್ತಿನಿಂದ ಉತ್ತರಕ್ಕಾಗಿ ಕಾದು ಕುಳಿತಿದ್ದ ಮಗಳಿಗೆ ಪಿತ್ತ ನೆತ್ತಿಗೇರಿತ್ತು. ‘ ಅಪ್ಪ, ನನ್ನ ಪ್ರಶ್ನೆಗೆ ಉತ್ತರ ನೀಡಿ ಎಂದರೆ, ಆಲೂಗಡ್ಡೆ ಬೇಯಿಸುತ್ತಾ ಇದ್ದಿರಾ?’ ಎಂದು ಕಿರುಚಿದಳು.

‘ಮಗಳೇ ನಿನಗಿಲ್ಲಿ ಏನು ಕಾಣುತ್ತಿದೆ?’ ಎಂದು ಸಮಾಧಾನವಾಗಿ ಕೇಳಿದ. ‘ಇನ್ನೇನಿದೆ ಆಲೂಗಡ್ಡೆ, ಮೊಟ್ಟೆ ಮತ್ತು ಕಾಫಿ ಬೀಜ’ ಎಂದು ಸಿಟ್ಟಿನಿಂದ ಮಗಳು ಉತ್ತರಿಸಿದಳು. ‘ಇನ್ನೂ ಸೂಕ್ಷ್ಮವಾಗಿ ಗಮನಿಸು’ ಎಂದರು ತಂದೆ. ಆಗ ಮಗಳು ಆಲೂಗಡ್ಡೆಯನ್ನು ಕೈಯಿಂದ ಮುಟ್ಟಿ ‘ಆಲೂ ಬೆಂದಿರುವುದರಿಂದ ಮೆತ್ತಗಿದೆ’ ಎಂದಳು. ನಂತರ ತಂದೆ ಮೊಟ್ಟೆಯ ಸಿಪ್ಪೆಯನ್ನು ಬಿಡಿಸಲು ಹೇಳಿದ. ಮಗಳು ಅದನ್ನೂ ಮಾಡಿದಳು. ನಂತರ ಕಾಫಿಯನ್ನು ಹೀರುವಂತೆ ತಂದೆ ಹೇಳಿದರೂ ಮಗಳು ಅದನ್ನೂ ಮಾಡಿದಳು. ಇಷ್ಟಾದ ಮೇಲೂ ಏಕೆ ತಂದೆ ಹೀಗೆಲ್ಲಾ ಮಾಡಿಸುತ್ತಿದ್ದಾರೆ ಎಂಬುದೇ ಅವಳಿಗೆ ಅರ್ಥವಾಗಲಿಲ್ಲ.  ಇನ್ನೂ ಅವಳನ್ನು ಕಾಯಿಸದೇ ತಂದೆ ಮಾತನಾಡಿದರು, ‘ ಈ ಎಲ್ಲ ಪದಾರ್ಥಗಳಿಗೂ ಒಂದೇ ನೀರು ಹಾಕಿದ್ದೇನೆ, ಒಂದೇ ಉರಿಯಲ್ಲಿ ಬೇಯಿಸಿದ್ದೇನೆ ಆದರೆ ಒಂದರಂತೆ ಒಂದಿಲ್ಲ. ಪ್ರತಿಯೊಂದು ಭಿನ್ನವಾಗಿ ತನ್ನ ಗುಣ ತೋರಿಸಿದೆ’ ಎಂದರು. ಗಟ್ಟಿಯಾದ ಆಲೂ ನೀರಿನಲ್ಲಿ ಬೇಯಿಸಿದಾಗ ಮೆತ್ತಗಾಗುತ್ತದೆ. ಮೊಟ್ಟೆಯ ಹೊರ ಭಾಗ ಬಿಟ್ಟು ಒಳಗಿನದ್ದು ದ್ರವ ರೂಪದಲ್ಲಿ ಇರುತ್ತದೆ. ಆದರೆ ಬೇಯಿಸಿದಾಗ ಗಟ್ಟಿಯಾಗುತ್ತದೆ. ಇನ್ನು ಕಾಫಿ ಬೀಜಗಳು ನೀರಿಗೆ ಬೀಳುವ ಮುನ್ನ ಅದರ ನಿಜ ಗುಣವೇ ತಿಳಿದಿರುವುದಿಲ್ಲ.

*ನಮ್ಮ ಜೀವನವೂ ಹಾಗೆ ಕಷ್ಟಗಳು ಎಲ್ಲರಿಗೂ ಬಂದೇ ಬರುತ್ತವೆ. ಬದಲಾವಣೆಗಳು ಮನುಷ್ಯನ ಸಹಜಗುಣ, ಮೆತ್ತಗಿದ್ದವರು ಜೋರಾಗಲೇಬೇಕು, ಜೋರಿರುವವರು ಒಮ್ಮೆ ಮೆತ್ತಗಾಗಲೇ ಬೇಕು. ಒಟ್ಟಿನಲ್ಲಿ ಕಷ್ಟಗಳಿಂದ ನಾವು ಕುಗ್ಗುವುದಿಲ್ಲ, ಅವು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಿ ನಾವು ಏನು ಎಂಬುದನ್ನು ತಿಳಿಸುತ್ತವೆ. ನಮ್ಮ ಸಾಮರ್ಥ್ಯ ಏನೆಂಬುದು ನಮಗೆ ಅರಿವಾಗುವುದೇ ಕಷ್ಟಗಳು ಬಂದಾಗ. ಆ ಸಮಯದಲ್ಲಿ ಆಲೂಗಡ್ಡೆಯಾಗುತ್ತೀವೋ? ಬೇಯಿಸಿದ ಮೊಟ್ಟೆಯಾಗುತ್ತೀವೋ ಎಲ್ಲವೂ ನಮ್ಮ ಕೈಯಲ್ಲೇ ಇದೆ.*

ಗೌರ್ ಗೋಪಾಲ ಪ್ರಭು
〰〰〰〰〰〰〰〰〰〰〰

ಸರ್ಕಾರಿ ಸೇವೆಗೆ ಸೇರಲು ಷರತ್ತುಗಳು

*ಸರ್ಕಾರಿ ಸೇವೆಗೆ ಸೇರಲು ಷರತ್ತುಗಳು*

ಲ.ರಾಘವೇಂದ್ರ

ರಾಜ್ಯ ಸರ್ಕಾರಿ ಸೇವಾ ನಿಯಮಾವಳಿಗಳ ಚೌಕಟ್ಟಿನಲ್ಲಿ ಇರುವ ಸಾಮಾನ್ಯ ಸೇವಾ ಷರತ್ತುಗಳನ್ನು ಈ ಕೆಳಗೆ ವಿವೇಚಿಸಲಾಗಿದೆ.

*ವೈದ್ಯಕೀಯ ಪ್ರಮಾಣ ಪತ್ರ:*
 ಸರ್ಕಾರಿ ಸೇವೆಗೆ ಯೋಗ್ಯತೆಯ ಜೊತೆಗೆ ಮಾನಸಿಕ ಮತ್ತು ದೈಹಿಕವಾಗಿ ಸ್ವಸ್ಥವಿರುವ ವ್ಯಕ್ತಿಗಳನ್ನು ನೇಮಿಸುವುದು ಅಗತ್ಯ. ಆದ್ದರಿಂದ ಮೊದಲಿಗೆ ಸರ್ಕಾರಿ ಸೇವೆಗೆ ನೇಮಕಗೊಂಡ ಉದ್ಯೋಗಿಗಳು ಕಚೇರಿ ಮುಖ್ಯಸ್ಥರಿಗೆ ಈ ಬಗ್ಗೆ ವೈದ್ಯಕೀಯ ದೃಢೀಕರಣ ಪ್ರಮಾಣ ಪತ್ರ ಒದಗಿಸುವುದು ಕಡ್ಡಾಯ. ಪತ್ರಾಂಕಿತ ಅಧಿಕಾರಿಗಳು ತಮ್ಮ ಮೊದಲ ವೇತನ ಬಿಲ್ಲಿಗೆ ವೈದ್ಯಕೀಯ ಪ್ರಮಾಣ ಪತ್ರವನ್ನು ಲಗತ್ತಿಸಿ ಪಾವತಿಗಾಗಿ ಖಜಾನೆಗೆ ಸಲ್ಲಿಸಬೇಕಾಗುತ್ತದೆ. ಪತ್ರಾಂಕಿತರಲ್ಲದ ಇತರ ಉದ್ಯೋಗಿಗಳು ಒದಗಿಸಿದ ವೈದ್ಯಕೀಯ ಪ್ರಮಾಣಪತ್ರವನ್ನು ಕಚೇರಿಯ ಮುಖ್ಯಸ್ಥರು ಸಹಿ ಮಾಡಿ ಉದ್ಯೋಗಿಯು ಇತರ ಸೇವಾ ದಾಖಲೆಗಳೊಡನೆ ತಮ್ಮ ರಕ್ಷಣೆಯಲ್ಲಿಟ್ಟುಕೊಳ್ಳಬೇಕು. ಅಲ್ಲದೆ ಉದ್ಯೋಗಿಯ ಸೇವಾ ಪುಸ್ತಕದಲ್ಲಿ ಈ ಬಗ್ಗೆ ದಾಖಲಿಸಿ ಕಚೇರಿ ಮುಖ್ಯಸ್ಥರು ಸಹಿ ಮಾಡುವುದು ಅಗತ್ಯ ಹಾಗೂ ಉದ್ಯೋಗಿಯ ಮೊದಲನೇ ತಿಂಗಳ ಸಂಬಳದ ಬಿಲ್ಲಿನಲ್ಲಿ ಈ ಬಗ್ಗೆ ಕಚೇರಿ ಮುಖ್ಯಸ್ಥರು ದೃಢೀಕರಿಸಬೇಕು.

*ಕೇಂದ್ರ ಸ್ಥಳ ಮತ್ತು ಕಾರ್ಯಕ್ಷೇತ್ರ ವ್ಯಾಪ್ತಿ (Headquarters & Jurisdction):* ಸಾರ್ವಜನಿಕ ಸೇವೆ ಮತ್ತು ಸಂಪರ್ಕಕ್ಕೆ ಅನುವು ಮಾಡಿಕೊಡಲು ಕಚೇರಿಯ ಕೇಂದ್ರ ಸ್ಥಳವನ್ನು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ಸಂಬಂಧದಲ್ಲಿ ಕಾರ್ಯಕ್ಷೇತ್ರವ್ಯಾಪ್ತಿಯನ್ನು ಸರ್ಕಾರ ನಿರ್ದಿಷ್ಟಪಡಿಸುತ್ತದೆ.

ಉದ್ಯೋಗಿಯು ವೇತನ ಮತ್ತು ತುಟ್ಟಿಭತ್ಯೆಯ ಜತೆಗೆ ಇನ್ನಿತರೆ ಪರಿಹಾರ ಭತ್ಯೆಗಳಿಗೆ ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಅರ್ಹನಾಗುತ್ತಾನೆ. ವರ್ಗಾವಣೆ ಸಂದರ್ಭದಲ್ಲಿ ಹುದ್ದೆಯ ಕಾರ್ಯಭಾರ ವಹಿಸಿಕೊಳ್ಳಲು ಮತ್ತು ವಹಿಸಿಕೊಂಡು ನಿರ್ದಿಷ್ಟ ಸ್ಥಳ ನಿಗದಿಪಡಿಸುವುದು ಅಗತ್ಯ. ಆದ್ದರಿಂದ ಸರ್ಕಾರ ಅಥವಾ ಸಕ್ಷಮ ಪ್ರಾಕಾರ ಒಂದು ಸ್ಥಳವನ್ನು ಕೇಂದ್ರ ಸ್ಥಳವೆಂದು ನಿರ್ದಿಷ್ಟಪಡಿಸುತ್ತದೆ. ಆ ಸ್ಥಳದಲ್ಲಿಯೇ ಉದ್ಯೋಗಿ ವಾಸಿಸಬೇಕಾಗಿರುತ್ತದೆ ಹಾಗೂ ತನಗೆ ವಹಿಸಿದ ಕಾರ್ಯ ನಿರ್ವಹಿಸಬೇಕಾಗಿರುತ್ತದೆ.

ಕಾರ್ಯನಿರ್ವಾಹಕ ಅಧಿಕಾರಿಗಳು ಸಾರ್ವಜನಿಕ ಸಂಪರ್ಕ ಬೆಳೆಸುವುದರ ಜತೆಗೆ ತಮ್ಮ ಅಧೀನಾಧಿಕಾರಿಗಳ ಕಾರ್ಯದ ಮೇಲ್ವಿಚಾರಣೆಗಾಗಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸ ಮಾಡಬೇಕಾಗುವುದು. ಆದ್ದರಿಂದ ಸರ್ಕಾರ ಇಂತಹ ಅಧಿಕಾರಿಗಳ ಕಾರ್ಯಕ್ಷೇತ್ರ ವ್ಯಾಪ್ತಿ ನಿರ್ದಿಷ್ಟಪಡಿಸುತ್ತದೆ. (ಕ.ಸ.ಸೇ.ನಿ.ನಿಯಮ 12 ಮತ್ತು 13). ಸರ್ಕಾರಿ ಉದ್ಯೋಗಿಯು ಸರ್ಕಾರದ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ತನ್ನ ಕೇಂದ್ರ ಸ್ಥಾನ ಮತ್ತು ಕಾರ್ಯವ್ಯಾಪ್ತಿ ಹೊರಗೆ ಕಳೆದವರು ವೇತನ ಭತ್ಯೆಗಳ ಅರ್ಹತೆ ಕಳೆದುಕೊಳ್ಳುವುದಲ್ಲದೆ ಉಲ್ಲಂಘನೆಗಾಗಿ ಶಿಸ್ತುಕ್ರಮಕ್ಕೆ ಗುರಿಯಾಗುತ್ತಾರೆ. ಆದರೆ ಪೊಲೀಸ್ ಅಧಿಕಾರಿಗಳು ಕಾರ್ಯನಿರ್ವಹಿಸಲು ತಮ್ಮ ಕ್ಷೇತ್ರ ವ್ಯಾಪ್ತಿಯ ಹೊರಗೆ ಪ್ರಯಾಣ ಮಾಡಬಹುದು. ಇಲಾಖೆ ಮುಖ್ಯಸ್ಥರು, ಪೊಲೀಸ್ ಅಧೀಕ್ಷಕರು, ಜಿಲ್ಲಾ ಖಜಾನಾಧಿಕಾರಿಗಳು, ಜಿಲ್ಲಾ ನ್ಯಾಯಾಧೀಶರು ಅಧಿನಾಧಿಕಾರಿಗಳಿಗೆ ತಮ್ಮ ಕೇಂದ್ರ ಸ್ಥಳ ಕಾರ್ಯಕ್ಷೇತ್ರದಿಂದ ಹೊರಗೆ ಆದರೆ ರಾಜ್ಯದೊಳಗೆ ಪ್ರಯಾಣ ಮಾಡಲು ಮತ್ತು ಕಾರ್ಯನಿರ್ವಹಿಸಲು ಅನುಮತಿ ನೀಡಬಹುದು. ಸರ್ಕಾರದ ಅನುಮತಿ ಇಲ್ಲದೆ ರಾಜ್ಯದ ಹೊರಗೆ ಪ್ರಯಾಣ ಮಾಡಲು ಸರ್ಕಾರಿ ಉದ್ಯೋಗಿಗೆ ಅವಕಾಶವಿಲ್ಲ. ಆದರೆ ಸರ್ಕಾರವು ಕೆಳಗೆ ನಮೂದಿಸಿರುವ ಇಲಾಖೆಯ ಅಧಿಕಾರಿಗಳಿಗೆ ಕೆಲವು ಷರತ್ತಿಗೊಳಪಟ್ಟು ರಾಜ್ಯದ ಹೊರಗೆ ಕಾರ್ಯನಿರ್ವಹಿಸಲು ಸ್ಥಾಯಿ ಆದೇಶ ನೀಡಿದೆ.

*ವೇತನ ಭತ್ಯೆ ಸಂದಾಯದ ಪ್ರಾರಂಭ*: ಸಾಮಾನ್ಯವಾಗಿ ಉದ್ಯೋಗಿಯು ಒಂದು ಹುದ್ದೆ ವಹಿಸಿಕೊಂಡ ದಿನಾಂಕದಿಂದ ಆ ಹುದ್ದೆಯಲ್ಲಿ ವೇತನ ಮತ್ತು ಭತ್ಯೆಗಳನ್ನು ಪಡೆಯಲು ಪ್ರಾರಂಭಿಸುತ್ತಾನೆ. ಅಂದರೆ ಕಾರ್ಯಭಾರವನ್ನು ಪೂರ್ವಾಹ್ನ ವಹಿಸಿಕೊಂಡಲ್ಲಿ ಆ ದಿನದಿಂದಲೇ ವಹಿಸಿಕೊಂಡಲ್ಲಿ ಮರುದಿನದಿಂದ ವೇತನ ಮತ್ತು ಭತ್ಯೆಗಳಿಗೆ ಅರ್ಹನಾಗುತ್ತಾನೆ. ಉನ್ನತ ಹುದ್ದೆಗೆ ಪದೋನ್ನತಿ ಪಡೆದಲ್ಲಿ ಉನ್ನತ ಹುದ್ದೆ ವಹಿಸಿಕೊಂಡ ದಿನಾಂಕದಿಂದ ವೇತನ ಮತ್ತು ಭತ್ಯೆಗಳನ್ನು ಸಂದಾಯ ಮಾಡಲಾಗುವುದು.ಆದರೆ ಸ್ಥಾನಾಪನ್ನ ನೇಮಕಾತಿ ಪ್ರಯುಕ್ತ ಕಾರ್ಯನಿರ್ವಹಿಸುವ ಉದ್ಯೋಗಿಗೆ ಅದೇ ವೇಳೆಯಲ್ಲಿ ಕಾಯಂ ನೇಮಕಾತಿ ಆದಲ್ಲಿ ಖಾಯಂ ನೇಮಕಾತಿ ಹುದ್ದೆ ವಹಿಸಿಕೊಳ್ಳದಿದ್ದರೂ ಆ ಹುದ್ದೆಯು ಖಾಲಿಯಾದ ದಿನದಿಂದಲೇ ವೇತನ ಮತ್ತು ಭತ್ಯೆಗಳ ಸಂದಾಯಕ್ಕೆ ಅರ್ಹನಾಗುತ್ತಾನೆ.

*ಹೆಚ್ಚುವರಿ ವೇತನ ಭತ್ಯೆಗಳು:*
 ಸರ್ಕಾರಿ ಉದ್ಯೋಗಿಯ ನೇಮಕಾತಿಯು ಪೂರ್ಣಕಾಲಿಕವಾಗಿದ್ದಲ್ಲಿ, ಆತನ ಸೇವೆಯ ವಿನಿಯೋಗ ಸರ್ಕಾರಕ್ಕೆ ಸೇರಿದ್ದು, ಆತನ ಸಂಪೂರ್ಣ ಸೇವೆಯನ್ನು ಎಲ್ಲಿ, ಯಾವಾಗ ಮತ್ತು ಹೇಗೆ ಬಳಸಿಕೊಳ್ಳಬೇಕೆಂಬುದು ಸರ್ಕಾರಕ್ಕೆ ಬಿಟ್ಟಿದ್ದು. ಆದ್ದರಿಂದ ಆತನ ಸೇವೆಯನ್ನು ಅಗತ್ಯಕ್ಕೆ ತಕ್ಕಂತೆ ಸರ್ಕಾರ ಅಥವಾ ಅಧಿಕಾರ ಪಡೆದ ಯಾವುದೇ ಪ್ರಾಧಿಕಾರವು ಹೆಚ್ಚುವರಿ ಸಂಭಾವನೆ ಸಂದಾಯ ಇಲ್ಲದಂತೆ ಉದ್ಯೋಗಿಯ ಸೇವೆ ಬಳಸಿಕೊಳ್ಳಬಹುದು. (ಕ.ಸ.ಸೇ.ನಿ. ನಿಯಮ 26 ಮತ್ತು 27)

ಸರ್ಕಾರಿ ಉದ್ಯೋಗಿ ಪಡೆಯುವ ಗೌರವಧನ


*ಸರ್ಕಾರಿ ಉದ್ಯೋಗಿ ಪಡೆಯುವ ಗೌರವಧನ*


ಲ.ರಾಘವೇಂದ್ರ

*ಶುಲ್ಕ ಮತ್ತು ಗೌರವಧನ (ನಿಯಮ 28 ಮತ್ತು 29)*

ನಿಯಮ 26 ಮತ್ತು 27ರ ಪ್ರಕಾರ ಸರ್ಕಾರವು ತನ್ನ ವಿವೇಚನೆಯ ಮೇರೆಗೆ ಅವಶ್ಯಕತೆ ಇರುವ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರಿ ಉದ್ಯೋಗಿಯ ಸೇವೆ ಬಳಸಿಕೊಳ್ಳಬಹುದು ಮತ್ತು ಆತನ ಸೇವಾ ಅವಯ ಪೂರ್ಣ ವೇಳೆಯು ಸರ್ಕಾರದ ವಶದಲ್ಲಿರುತ್ತದೆ. ಆದ್ದರಿಂದ ಸರ್ಕಾರದ ಅನುಮತಿಯಿಲ್ಲದೆ ಖಾಸಗಿ ಸಂಸ್ಥೆ / ಸ್ಥಳೀಯ ಸಂಸ್ಥೆ / ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಸಂಭಾವನೆ ಪಡೆಯಲು ಅವಕಾಶ ಇರುವುದಿಲ್ಲ. ಸರ್ಕಾರಿ ಉದ್ಯೋಗಿಯು ತನ್ನ ಸೇವಾ ಅವಧಿ ಪೂರ್ಣವೇಳೆಯನ್ನು ಸರ್ಕಾರ ವಹಿಸಿಕೊಟ್ಟ ಕರ್ತವ್ಯಗಳ ನಿರ್ವಹಣೆಗೆ ಮಾತ್ರ ವಿನಿಯೋಗಿಸುವ ಹೊಣೆ ಹೊಂದಿರುತ್ತಾನೆ.

*1) ಗೌರವಧನ*: ಕೆಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಉದ್ಯೋಗಿಗಳು ಹೊಣೆಯ ಸ್ವರೂಪದ ಕರ್ತವ್ಯಗಳನ್ನು ಕಚೇರಿ ವೇಲೆ ನಿರಂತರವಾಗಿ ಮಾಡಬೇಕಾದಾಗ ಸರ್ಕಾರವು ಅಂತಹ ಉದ್ಯೋಗಿಗಳಿಗೆ ಕರ್ತವ್ಯಗಳ ಮಹತ್ವ ಮತ್ತು ಕಾರ್ಯನಿರ್ವಹಿಸಬೇಕಾದ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಸಂಭಾವನೆಯ ದರ ನಿಗದಿಪಡಿಸಿ ಪಾವತಿಸುವಂತೆ ಮಂಜೂರಾತಿ ನೀಡುತ್ತದೆ.

*ನಿಯಮ 28ರ ಟಿಪ್ಪಣಿ 3ರ ಕಂಡಿಕೆ (ಸಿ) (1ರಿಂದ ()ರವರೆಗೆ ನಮೂದಿಸಿರುವ ಪ್ರಕರಣಗಳು:*
 ಸಾರ್ವಜನಿಕ ಸ್ಪರ್ಧೆಯಲ್ಲಿ ಗಳಿಸಿದ ಪಾರಿತೋಷಕ, ನ್ಯಾಯಾಡಳಿತದಲ್ಲಿ ಸಲ್ಲಿಸಿದ ಸೇವೆಗೆ ಪ್ರತಿಫಲ ಅಥವಾ ಇನ್ಯಾವುದೇ ಕಾನೂನಿನ ಪರಿಪಾಲನೆಗಾಗಿ ದೊರೆತ ಪ್ರತಿಫಲ ಇತ್ಯಾದಿಗಳನ್ನು ಸರ್ಕಾರಿ ಉದ್ಯೋಗಿ ಪಡೆದು ವಿಶೇಷ ಅನುಮತಿ ಇಲ್ಲದೆ ತನ್ನಲ್ಲೆ ಉಳಿಸಿಕೊಳ್ಳಬಹುದು.

*2) ಶುಲ್ಕ:*
 ಸರ್ಕಾರದ ಕೆಲಸ ಕಾರ್ಯಗಳಿಗೆ ಅಡಚಣೆ ಅಥವಾ ತೊಡಕು ಉಂಟಾಗದಂತೆ ಆಕಸ್ಮಿಕ ಸ್ವರೂಪದ ಖಾಸಗಿ, ಸ್ಥಳೀಯ, ಸ್ವಾಯತ್ತ ಸಂಸ್ಥೆಗಳ ಖಾಸಗಿ ವ್ಯಕ್ತಿಗಳ ಕೆಲಸ ಕಾರ್ಯಗಳ ಮೇಲ್ವಿಚಾರಣೆ, ತಾಂತ್ರಿಕ ಸಲಹೆ / ಸಹಕಾರ ನೀಡಿದ ಪ್ರಯುಕ್ತ ಅಥವಾ ಅಸಾಧಾರಣ ಸಂದರ್ಭಗಳಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದ ಪ್ರಯುಕ್ತ ಸರ್ಕಾರದ ಅಥವಾ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದು ಆ ಮೂಲಗಳಿಂದ ಸಂಭಾವನೆ ಪಡೆಯಬಹುದು. ಇದನ್ನೇ ಶುಲ್ಕ ಎನ್ನಲಾಗುತ್ತದೆ.

ಸರ್ಕಾರಿ ಉದ್ಯೋಗಿಯ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯೊಡನೆ ಖಾಸಗಿ/ ಸ್ವಾಯತ್ತ / ಸ್ಥಳೀಯ ಸಂಸ್ಥೆಗಳಿಗೆ ಸೇವೆ ಸಲ್ಲಿಸಿದ ಪ್ರಯುಕ್ತ ಪಡೆದ ಸಂಭಾವನೆಯ 1/3 ಭಾಗವನ್ನು ಸರ್ಕಾರದ ಬೊಕ್ಕಸಕ್ಕೆ ಜಮಾ ಮಾಡಬೇಕಾಗುತ್ತದೆ.

ನಿಯಮ 29(ಎ) (4)ರ ಉಪ ಕಂಡಿಕೆ (1) ರಿಂದ (7)ವರೆಗಿನ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರಿ ನೌಕರನು ಆ ಕಂಡಿಕೆಗಳಲ್ಲಿ ಷರತ್ತಿಗೊಳಪಟ್ಟು ಸಂಭಾವನೆ ಸ್ವೀಕರಿಸಿ ತನ್ನಲ್ಲಿಯೇ ಉಳಿಸಿಕೊಳ್ಳಬಹುದು. ಮೇಲಿನ ನಿಯಮದ ಟಿಪ್ಪಣಿಯಲ್ಲಿ ತಿಳಿಸಿರುವಂತೆ ತಹಸೀಲ್ದಾರ್/ಉಪ ತಹಸೀಲ್ದಾರ್ ನ್ಯಾಯಾಲಯದ ಆದೇಶದನ್ವಯ ಸ್ವೀಕೃತ(ರಿಸೀವರ್)ನಾಗಿ ಕಾರ್ಯ ನಿರ್ವಹಿಸಿ ಪಡೆದ ಸಂಭಾವನೆಯ ಪೂರ್ಣಭಾಗವನ್ನು ತಾನೇ ಉಳಿಸಿಕೊಳ್ಳಬಹುದು.

ಸರ್ಕಾರಿ ಅಧಿಕಾರಿಗಳನ್ನು ಸರ್ಕಾರೇತನ ಸಂಸ್ಥೆಗಳ ಕಾರ್ಯನಿರ್ವಹಿಸಲು ನೇಮಿಸಬಹುದು. ಇಂತಹ ಸಂದರ್ಭಗಳಲ್ಲಿ ಅಧಿಕಾರಿಯ ಕರ್ತವ್ಯಗಳು ಗಣನೀಯವಾಗಿ ಹೆಚ್ಚಾದಲ್ಲಿ ಅಂತಹ ಅಧಿಕಾರಿಗಳಿಗೆ ಹೆಚ್ಚುವರಿಯಾಗಿ ಸಂಭಾವನೆಯನ್ನು ಸಂಬಂಧಪಟ್ಟ ಸಂಸ್ಥೆಯಿಂದ ಸಂದಾಯ ಮಾಡಬಹುದು. ಸರ್ಕಾರದ ಕರ್ತವ್ಯಗಳ ನಿರ್ವಹಣಾ ವೇಳೆಯಲ್ಲಿ ಖಾಸಗಿ ಸಂಸ್ಥೆಗಳ ಕಾರ್ಯಗಳನ್ನು ನಿರ್ವಹಿಸಬೇಕಾದಾಗ ಸಂಸ್ಥೆಗಳು ಪಾವತಿಸಬೇಕಾದ ಶುಲ್ಕವನ್ನು ಸರ್ಕಾರಿ ನೌಕರನಿಗೆ ಜಮಾ ಮಾಡಬೇಕಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಸರ್ಕಾರವು ತನ್ನ ಉದ್ಯೋಗಿಗೆ ಸಂಭಾವನೆಯನ್ನು ನಿಗದಿತ ದರದಲ್ಲಿ ಪಾವತಿಸಬಹುದು.

*ಹುದ್ದೆಯ ಹಕ್ಕು:*
 (ನಿಯಮ 17 ರಿಂದ 20): ಒಬ್ಬ ವ್ಯಕ್ತಿಯನ್ನು ಸರ್ಕಾರದ ವ್ಯವಹಾರಗಳ ನಿರ್ವಹಣೆಗಾಗಿ ಒಂದು ಸ್ಥಿರ (ಮೂಲ) ಹುದ್ದೆಗೆ ನೇಮಕಾತಿ ನಿಯಮಗಳ ಪ್ರಕಾರ ನೇಮಿಸಿ ವಿಧಿಸಲಾದ ಷರತ್ತುಗಳನ್ನು ಪೂರೈಸಿದ ಮೇರೆಗೆ ಆತನ ನೇಮಕಾತಿಯನ್ನು ಸ್ಥಿರ ಹುದ್ದೆಯಲ್ಲಿ ಸ್ಥಿರೀಕರಣಗೊಳಿಸಲಾಗುವುದು. ಸ್ಥಿರೀಕೃತಗೊಳಿಸಿದ ದಿನದಿಂದ ಆ ಮೂಲ (ಸ್ಥಿರ) ಹುದ್ದೆಯ ಮೇಲೆ ಉದ್ಯೋಗಿಯ ಹಕ್ಕು ಸ್ಥಾಪಿತವಾಗುತ್ತದೆ. ಆದ್ದರಿಂದ ಒಂದು ಸ್ಥಿರ (ಮೂಲ) ಹುದ್ದೆಗೆ ಒಬ್ಬ ವ್ಯಕ್ತಿಯನ್ನು ಮಾತ್ರ ಕಾಯಂ ಆಗಿ ನೇಮಿಸಬಹುದು. ಹಾಗೆಯೇ ಒಬ್ಬ ವ್ಯಕ್ತಿಯನ್ನು ಕಾಯಂ ಆಗಿ ಒಂದೇ ಸ್ಥಿರ ಹುದ್ದೆಗೆ ನೇಮಿಸಲು ಮಾತ್ರ ಅವಕಾಶವಿರುತ್ತದೆ. ಆದರೆ ಸರ್ಕಾರ ವಿಶೇಷ ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ಒಬ್ಬ ಉದ್ಯೋಗಿಯನ್ನು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಿಸಲೂಬಹುದು. (ನಿಯಮ 66)

ಒಬ್ಬ ಉದ್ಯೋಗಿಯು ‘ಹಕ್ಕು’ ಪಡೆದಿರುವ ಹುದ್ದೆಗೆ ಕಾಯಂ ಆಗಿ ಬೇರೊಬ್ಬ ಉದ್ಯೋಗಿಯನ್ನು ನೇಮಿಸಲು ಅವಕಾಶವಿಲ್ಲ. ಉದ್ಯೋಗಿಯು ಬೇರೊಂದು ಕಾಯಂ ಹುದ್ದೆಯ ಮೇಲೆ ‘ಹಕ್ಕು’ಗಳಿಸಿದ ದಿನದಿಂದ ತನ್ನ ಹಿಂದಿನ ಸ್ಥಿರ ಹುದ್ದೆಯ ಮೇಲಿನ ಹಕ್ಕು ಕಳೆದುಕೊಳ್ಳುತ್ತಾನೆ. ಅಂತಹ ಹುದ್ದೆಗೆ ಬೇರೊಬ್ಬ ವ್ಯಕ್ತಿಯನ್ನು ಕಾಯಂ ಆಗಿ ನೇಮಿಸಬಹುದು ಅಥವಾ ಪದೋನ್ನತಿ ನೀಡಿ ಸದರಿ ‘ಸ್ಥಿರ’ ಹುದ್ದೆಯನ್ನು ಕಾಯಂ ಆಗಿ ತುಂಬಬಹುದು.(ನಿಯಮ 18 ಮತ್ತು 19).

ನೌಕರರಿಗೆ ಪ್ರಭಾರ ಭತ್ಯೆಯ ನಿಯಮಗಳು

🔱

*ನೌಕರರಿಗೆ ಪ್ರಭಾರ ಭತ್ಯೆಯ ನಿಯಮಗಳು*


*(ಕಾರ್ಯಾಬಾರ ಭತ್ಯೆ)* (Charge allowance)

| ಲ. ರಾಘವೇಂದ್ರ

ಸರ್ಕಾರಿ ನೌಕರರ ಖಾಲಿ ಇರುವ ಹುದ್ದೆಗೆ ನೇಮಕಾತಿ ಮಾಡುವ ಬದಲು ಅಥವಾ ಇನ್ನೊಂದು ಹುದ್ದೆಯಲ್ಲಿ ಅಧಿಕ ಕಾರ್ಯಭಾರ ನಿರ್ವಹಿಸುವಂತೆ ಆದೇಶ ಮಾಡಿದಾಗ ಅವರಿಗೆ ನಿಯಮ 32 ಮತ್ತು 68ರಂತೆ ಅಧಿಕ ಭತ್ಯೆ ನೀಡಬೇಕಾಗುತ್ತದೆ. ಇದನ್ನು ಸ್ವತಂತ್ರ ಪ್ರಭಾರದ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ವೇತನದ ಶೇಕಡ ಏಳೂವರೆಯಷ್ಟು ನೀಡುವ ವೇತನ ಅಥವಾ ಭತ್ಯೆಯೇ ‘ಪ್ರಭಾರ ಭತ್ಯೆ’ಯಾಗಿರುತ್ತದೆ. ಉದಾಹರಣೆಗೆ ದ್ವಿತೀಯ ದರ್ಜೆ ಸಹಾಯಕನು ರೂ. 11,500-21000 ವೇತನ ಶ್ರೇಣಿಯಲ್ಲಿದ್ದು ಅವನನ್ನು ಅದೇ ಕಚೇರಿ ಅಥವಾ ಶಾಖೆಯಲ್ಲಿ ಅದೇ ಬಗೆಯ ಹುದ್ದೆಗೆ ಅಧಿಕ ಪ್ರಭಾರದಲ್ಲಿರಿಸಿದರೆ ಈ ಹುದ್ದೆಯ ಕನಿಷ್ಠ ವೇತನ ರೂ. 11600ರಲ್ಲಿ ಶೇಕಡ ಏಳೂವರೆಯಷ್ಟು ಅಂದರೆ ರೂ. 870.00 ರೂ ಲಭ್ಯವಾಗುತ್ತದೆ. ಆದರೆ ಇದೇ ಎರಡನೇ ದರ್ಜೆ ಸಹಾಯಕನನ್ನು ಖಾಲಿ ಇರುವ ಪ್ರಥಮ ದರ್ಜೆ ಸಹಾಯಕನ ಹುದ್ದೆಗೆ ಸ್ವತಂತ್ರ ಪ್ರಭಾರದಲ್ಲಿರಿಸಿದರೆ ಈ ಹುದ್ದೆಯ ವೇತನ ಶ್ರೇಣಿ ರೂ. 14550-26200ರಲ್ಲಿನ ಕನಿಷ್ಠ ವೇತನ ರೂ. 14550ರ ಶೇಕಡ ಏಳೂವರೆಯಷ್ಟು ಲಭ್ಯವಾಗುತ್ತದೆ. ಅಂದರೆ ರೂ. 1091.25 ‘ಪ್ರಭಾರ ಭತ್ಯೆ’ ಆ ಸರ್ಕಾರಿ ನೌಕರನಿಗೆ ಲಭ್ಯತ್ತದೆ.

*ಪ್ರಭಾರ ಭತ್ಯೆ ಪಡೆಯಲು ಕೆಲ ಷರತ್ತುಗಳಿವೆ*

1. ವೃಂದ ಮತ್ತು ನೇಮಕಾತಿ ನಿಯಮಾವಳಿಯ ರೀತ್ಯಾ ಅರ್ಹರಾದ ಮತ್ತು ಸೇವಾ ಜ್ಯೇಷ್ಠತೆಯನ್ನು ಹೊಂದಿದ ನೌಕರರನ್ನು ಮಾತ್ರ ಸ್ವತಂತ್ರ ಪ್ರಭಾರದಲ್ಲಿಡಬೇಕು.

2. ಸರ್ಕಾರಿ ನೌಕರನಿಗೆ ಆತನ ಕೆಲಸದೊಡನೆ ಹೆಚ್ಚಿನದಾದ ಕಾರ್ಯ ಮತ್ತು ಜವಾಬ್ದಾರಿಯಾಗಿದ್ದಿರಬೇಕು.

3. ಸರ್ಕಾರಿ ನೌಕರನನ್ನು ಅದೇ ಬಗೆಯ ಅಥವಾ ಅದಕ್ಕಿಂತ ಹೆಚ್ಚಿನ ವೇತನ ಶ್ರೇಣಿಯ ಹುದ್ದೆಯಲ್ಲಿ ಪ್ರಭಾರದಲ್ಲಿರಿಸಬೇಕೇ ಹೊರತು ಕೆಳಗಿನ ಹುದ್ದೆಯಲ್ಲಿರಸಬಾರದು. (ನಿಯಮ 69ರಡಿಯಲ್ಲಿನ ಟಿಪ್ಪಣಿ)

4. ಸಕ್ಷಮ ಅಧಿಕಾರಿಯ ಆದೇಶದ ಮೇರೆಗೆ ಪ್ರಭಾರದ ವಾಸ್ತವ ವರ್ಗಾವಣೆಯಾಗಿರಬೇಕು.

5. ಎರಡು ಅಥವಾ ಅದಕ್ಕಿಂತ ಅಧಿಕ ಪ್ರಭಾರದಲ್ಲಿದ್ದರೆ ಒಂದು ಹುದ್ದೆಯ ಕರ್ತವ್ಯಗಳ ಬಗ್ಗೆ ಪ್ರಭಾರ ಭತ್ಯೆ ಲಭ್ಯವಾಗುವುದು.

6. ಈ ಪ್ರಭಾರದ ಅವಧಿಯಲ್ಲಿ ಸಾಂರ್ದಭಿಕ ರಜೆ ಅಥವಾ ರಾಜ್ಯದ ಹೊರಗೆ ಅಥವಾ ಒಳಗೆ ನಡೆಯುವ ಸಮ್ಮೇಳನ, ತಜ್ಞರ ಸಮಿತಿಯ ಸಭೆ ಅಥವಾ ತರಬೇತಿಗೆ ನಿಯೋಜಿಸಬಹುದು.

7. ಪ್ರಭಾರ ಭತ್ಯೆಯನ್ನು ಮಂಜೂರು ಮಾಡಲು ಕನಿಷ್ಠ ಒಂದು ತಿಂಗಳು ಪ್ರಭಾರದಲ್ಲಿರಿಸಬೇಕು. ಈ ಪ್ರಭಾರವು ಗರಿಷ್ಠ ಆರು ತಿಂಗಳನ್ನು ಮೀರಬಾರದು. ಇದಕ್ಕಿಂತ ಹೆಚ್ಚು ಕಾಲ ಅಂದರೆ ಒಂದು ವರ್ಷದವರೆಗೆ ಪ್ರಭಾರದಲ್ಲಿರಿಸಲು ಸರ್ಕಾರದ ಮಂಜೂರಾತಿ ಅವಶ್ಯ.

ಆದರೆ ಖಜಾನೆ ಇಲಾಖೆಯ ನೌಕರನಿಗೆ ಒಂದು ತಿಂಗಳಿಗಿಂತ ಕಡಿಮೆ ಅವಧಿಗೂ ನೀಡುವುದಕ್ಕೆ ಅವಕಾಶ ಉಂಟು. ಖಜಾನೆ ನಿರ್ದೇಶಕರು ಕನಿಷ್ಠ 14 ದಿನಗಳಿಗೆ ಮತ್ತು ಗರಿಷ್ಠ 12 ತಿಂಗಳವರೆಗೆ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಲು ಅಧಿಕಾರ ಹೊಂದಿರುತ್ತಾರೆ.

ಪ್ರಭಾರ ಭತ್ಯೆಯು ತುಟ್ಟಿಭತ್ಯೆ, ಮನೆಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ನಿವೃತ್ತಿ ವೇತನ ಹಾಗೂ ಉಪದಾನಗಳಿಗೆ ಪರಿಗಣಿತವಾಗುವುದಿಲ್ಲ. ಅಲ್ಲದೆ, ದಲಾಯತ್, ದಫೇದಾರ್ ಮತ್ತು ಕಾವಲುಗಾರರಿಗೆ ಅಧಿಕ ಪ್ರಭಾರದಲ್ಲಿಟ್ಟರೆ ಪ್ರಭಾರ ಭತ್ಯೆ ಲಭ್ಯವಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.

➖➖➖➖➖➖➖➖➖➖➖

ನಿವೃತ್ತಿವೇತನದ ನಿಯಮಗಳು

➖➖➖➖➖➖➖➖➖➖➖

*ನಿವೃತ್ತಿವೇತನದ ನಿಯಮಗಳು*


ಲ. ರಾಘವೇಂದ್ರ

ನಿವೃತ್ತ ನೌಕರರಿಗೆ ಜೀವಿತ ಅವಧಿವರೆಗೂ ಆವರ್ಥಕವಾಗಿ ವೇತನ ಬಟವಾಡೆಯಾಗಿರುತ್ತದೆ. ಉಪದಾನವು ನಿವೃತ್ತ ನೌಕರರಿಗೆ ಹಾಗೂ ಮೃತ ನೌಕರ/ಳ ಕುಟುಂಬವರ್ಗದವರಿಗೆ ನೀಡುವಂತಹ ಹಣ. ಕ.ಸ.ಸೇ.ನಿ. ನಿಯಮ 208ರ ರೀತ್ಯ ನಿವೃತ್ತಿವೇತನ ಉಪದಾನದಲ್ಲಿ ಸೇರುತ್ತದೆ. ಆದ್ದರಿಂದ ನಿವೃತ್ತಿವೇತನ ಮತ್ತು ಉಪದಾನವನ್ನು ಜತೆಗೆ ನೌಕರರು ಸಲ್ಲಿಸಿರುವ ಅರ್ಹಸೇವೆ ಹಾಗೂ ಉಪಲಬ್ಧಗಳ ಆಧಾರದ ಮೇಲೆ ಲೆಕ್ಕಾಚಾರ ಮಾಡಬಹುದು.

ನಿವೃತ್ತಿವೇತನ ವಿಧಗಳು: ನಿವೃತ್ತಿ ವೇತನಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ಪರಿಹಾರ(ನಿಯಮ 259), ಅಶಕ್ತತಾ (ನಿಯಮ 273), ವಯೋ ನಿವೃತ್ತಿ ವೇತನ(ನಿಯಮ 283), ವಿಶ್ರಾಂತಿ(ನಿಯಮ 285)

*ನಿವೃತ್ತಿ ವೇತನ ಮತ್ತು ಉಪದಾನ ಪಡೆಯಲು ಅರ್ಹ ವ್ಯಕ್ತಿಗಳು:* ಕ.ಸ.ಸೇ.ನಿ. ನಿಯಮ 302ರ ರೀತ್ಯ ಹಾಗೂ ಕೆ.ಜಿ.ಎಸ್.(ಎಸ್.ಪಿ.)ನಿಯಮ 2002ರ ನಿಯಮ 7 ಪರಿಶಿಷ್ಟರ ರೀತ್ಯ ಪಿಂಚಣಿ ಮತ್ತು ಉಪದಾನ ಸೌಲಭ್ಯ ಪಡೆಯಲು ಈ ಕೆಳಕಂಡ ವ್ಯಕ್ತಿಗಳು ಅರ್ಹರು. ಕುಟುಂಬ ನಿವೃತ್ತಿಗಾಗಿ ಹೆಂಡತಿ, ಗಂಡ, ಅಪ್ರಾಪ್ತ ಮಕ್ಕಳು, ಅಪ್ರಾಪ್ತ ಅವಿವಾಹಿತ ಮಗಳು. ಉಪದಾನಕ್ಕಾಗಿ ಹೆಂಡತಿ, ಗಂಡ, ಮಕ್ಕಳು(ದತ್ತು ಮಕ್ಕಳು ಸೇರುತ್ತಾರೆ), ಅವಿವಾಹಿತ/ವಿಧವಾ/ವಿಚ್ಛೇದನ ಹೊಂದಿದ ಮಗಳು, ತಮ್ಮಂದಿರು 18 ವರ್ಷ ಒಳಗಿರುವವರು ಅವಿವಾಹಿತ/ವಿಧವಾ/ವಿಚ್ಛೇದಿತ ತಂಗಿಯರು, ತಂದೆ, ತಾಯಿ, ವಿವಾಹಿತ ಮಗಳು, ಮೃತನ ಮಗನ ಮಕ್ಕಳು.

*ನಿವೃತ್ತಿ ವೇತನ ಪತ್ರಗಳನ್ನು ಯಾರಿಗೆ ಸಲ್ಲಿಸಬೇಕು?*

ನಿವೃತ್ತ ಸರ್ಕಾರಿ ನೌಕರರಿಗೆ ಮತ್ತು ಸ್ಥಳೀಯ ಸಂಸ್ಥೆಯ ನೌಕರರಿಗೆ ನಿವೃತ್ತಿ ವೇತನ ಸೌಲಭ್ಯಗಳನ್ನು ಪ್ರಾಧೀಕರಿಸುವ ಸಲುವಾಗಿ ಭರ್ತಿ ಮಾಡಿದ ನಿವೃತ್ತಿ ವೇತನ ಪತ್ರಗಳನ್ನು ಬಟವಾಡೆ ಅಧಿಕಾರಿಗಳು/ಮಂಜೂರಾತಿ ಅಧಿಕಾರಿಗಳು ದೃಢೀಕರಿಸಿ ಸರ್ಕಾರಿ ಸುತ್ತೋಲೆ ಸಂಖ್ಯೆ ಎಫ್​ಡಿ(ವಿಶೇಷ)2 ಸಿಪಿಸಿ 2002 ಬೆಂಗಳೂರು ದಿನಾಂಕ 19-1-2002ರ ರೀತ್ಯ ಆರು ತಿಂಗಳು ಮುಂಚಿತವಾಗಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಕಳುಹಿಸಬೇಕು. ಅಂತೆಯೇ ಪೂರ್ಣಪ್ರಮಾಣದ ನಿವೃತ್ತಿ ಕಡತಗಳನ್ನು ಪರಿಶೀಲಿಸಿ ನಿವೃತ್ತಿ ಪ್ರಾಧಿಕಾರವು ನಿವೃತ್ತ/ನಿಧನರಾದ ನೌಕರರ ಸಂಬಂಧ ನಿವೃತ್ತಿ ಪಾವತಿ ಆದೇಶ ಪತ್ರವನ್ನು 15 ದಿನ ಮುಂಚಿತವಾಗಿ ನೀಡಬೇಕು.

ಒಂದು ವೇಳೆ ನಿವೃತ್ತಿ ವೇತನ ಪತ್ರಗಳನ್ನು ತಡವಾಗಿ ಸಲ್ಲಿಸಿದಲ್ಲಿ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ(ವಿಶೇಷ) 199 ಪಿಇಎಸ್ 93ಬೆಂಗಳೂರು ದಿನಾಂಕ 13-9-94ರ ರೀತ್ಯ ತಡವಾಗಿ ಪಾವತಿಸಬಹುದಾದ ನಿವೃತ್ತಿ ವೇತನ, ಉಪದಾನ ಹಾಗೂ ಗಳಿಕೆ ರಜೆ ಮೊತ್ತಕ್ಕೆ ಶೇ.8ರಷ್ಟು ಬಡ್ಡಿ ನೀಡಬೇಕಾಗುತ್ತದೆ.

*ಅರ್ಹದಾಯಕ ಸೇವೆಯ ಲೆಕ್ಕಾಚಾರಗಳು*

ದಿನಾಂಕ 30-9-2003ರ ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಎಫ್​ಡಿ 6 ಸನಿತಿ 2003ರಲ್ಲಿ ನಿವೃತ್ತಿ ವೇತನ ಪಡೆಯಲು ನಿಯಮ 222ರ ಉಪಬಂಧಗಳನ್ನು ಮಾರ್ಪಡಿಸಿ ಕನಿಷ್ಠ 10 ವರ್ಷ ಅರ್ಹತೆ ಸೇವೆ ಸಲ್ಲಿಸಬೇಕೆಂದು ಆದೇಶಿಸಿದೆ. ಈ ಆದೇಶವು ದಿನಾಂಕ 1-9-2003 ರಿಂದ ಜಾರಿಗೆ ಬಂದಿದೆ.

*ಸರಳ ನಿಯಮ*

# ಮೂರು ತಿಂಗಳು ಅವಧಿ ಸೇವೆಯ ಕಡಿಮೆ ಬೀಳುವ ಭಿನ್ನಾಂಕವನ್ನು ಕಡೆಗಣಿಸಬೇಕು.

# ಮೂರು ತಿಂಗಳು ಮೇಲ್ಪಟ್ಟು 9 ತಿಂಗಳು ಅವಧಿಯ ಸೇವೆಯನ್ನು ಒಂದು ಅರ್ಧವರ್ಷ ಎಂದು ಪರಿಗಣಿಸಬೇಕು.

# 9 ತಿಂಗಳು ಮತ್ತು ಅದಕ್ಕೂ ಮೇಲ್ಪಟ್ಟ ಅವಧಿಯ ಸೇವೆಯನ್ನು ಎರಡು ಅರ್ಧ ವರ್ಷ ಎಂದು ಪರಿಗಣಿಸಬೇಕು.

ಉದಾಹರಣೆಗಳು: # ಒಟ್ಟು ಅರ್ಹ ಸೇವೆಯು 31 ವರ್ಷ 1ತಿಂಗಳು 25 ದಿನಗಳಾಗಿದ್ದಲ್ಲಿ ಇದನ್ನು 31 ವರ್ಷ ಅಥವಾ 62 ಅರ್ಧ ವರ್ಷಗಳೆಂದು ಲೆಕ್ಕ ಹಾಕಬೇಕು.

# ಒಟ್ಟು ಅರ್ಹ ಸೇವೆಯು 31 ವರ್ಷ 7 ತಿಂಗಳು 20 ದಿನಗಳಾಗಿದ್ದಲ್ಲಿ ಇದನ್ನು 31 1/2 ವರ್ಷ ಅಥವಾ 63 ಅರ್ಧ ವರ್ಷ ಎಂದು ಲೆಕ್ಕ ಹಾಕಬೇಕು.

# ಒಟ್ಟು ಸೇವೆಯು 30 ವರ್ಷ 9 ತಿಂಗಳು 12 ದಿನಗಳಾಗಿದ್ದಲ್ಲಿ ಇದನ್ನು 31 ವರ್ಷ ಅಥವಾ 62 ಅರ್ಧ ವರ್ಷಗಳೆಂದು ಲೆಕ್ಕ ಹಾಕಬೇಕು.

# ಅರ್ಹ ಸೇವೆಯು 35 ವರ್ಷ 6 ತಿಂಗಳು 18 ದಿನಗಳಾಗಿದ್ದಲ್ಲಿ ಇದನ್ನು ಗರಿಷ್ಠ 33 ವರ್ಷ ಅಥವಾ 66 ಅರ್ಧ ವರ್ಷಗಳಿಗೆ ಸೀಮಿತಗೊಳಿಸಿ ಲೆಕ್ಕ ಹಾಕಬೇಕು.

*ಉಪಲಬ್ಧಗಳು (ನಿಯಮ 296 ಬಿ. ರೀತ್ಯಾ)*

ಉಪಲಬ್ಧಗಳು ನಿವೃತ್ತಿ ವೇತನ, ಉಪದಾನ, ಕುಟುಂಬ ನಿವೃತ್ತಿ ವೇತನ, ಅಸಾಧಾರಣ ನಿವೃತ್ತಿವೇತನ ಸೌಲಭ್ಯಗಳ ಲೆಕ್ಕಾಚಾರ ಮಾಡಲು ಒಳಗೊಂಡಿರುತ್ತದೆ.

# ನಿವೃತ್ತಿ/ನಿಧನ ದಿನಾಂಕದಂದು ಪಡೆಯುತ್ತಿರುವ ಮೂಲ ವೇತನ 10 ತಿಂಗಳ ಸರಾಸರಿ ವೇತನ

#  *ಸ್ಥಗಿತ ವೇತನ ಬಡ್ತಿ:* ಗರಿಷ್ಠ ವೇತನ ಶ್ರೇಣಿಗೂ ಮೀರಿದ ವೇತನ

# *ವೈಯುಕ್ತಿಕ ವೇತನ:* ಕ.ಸ.ಸೇ.ನಿ.ಪರಿಷ್ಕೃತ ವೇತನ ನಿಯಮಾವಳಿ 1999ರ ನಿಯಮ 7ರ ಉಪನಿಯಮ (3)ರ ಅಡಿಯಲ್ಲಿ

# *ವಿಶೇಷ ಭತ್ಯೆ:* ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಹಾಗೂ ಲಿಫ್ಟ್ ಆಪರೇಟರ್ ಇವರ ಹುದ್ದೆಗೆ ಹೊಂದಿರುವ ವಿಶೇಷ ವೇತನ.

# *ಹೆಚ್ಚುವರಿ ವೇತನ*: ಹೆಚ್ಚುವರಿ ವಾರ್ಷಿಕ ವೇತನ ಬಡ್ತಿಯು ಗರಿಷ್ಠ ವೇತನ ಶ್ರೇಣಿ ತಲುಪಿದ ನಂತರ ನೀಡಿರುವಂತಹದ್ದು, ಇದು 1974ರ ಕನ್ನಡ ಭಾಷಾ ಪರೀಕ್ಷೆ ನಿಯಮ 6 ರೀತ್ಯಾ ನೀಡಿರುವಂತದ್ದಾಗಿರಬೇಕು.

#ನಿವೃತ್ತಿ ವೇತನ, ಉಪದಾನ, ಕುಟುಂಬ

# ನಿವೃತ್ತಿ ವೇತನ ಲೆಕ್ಕಾಚಾರಕ್ಕಾಗಿ ಉಪಲಬ್ಧಿಯನ್ನು ಸೀಮಿತಗೊಳಿಸಿರುವುದಿಲ್ಲ.

*ನಿವೃತ್ತಿ ವೇತನ ಮೊತ್ತವನ್ನು ಹತ್ತಿರದ ರೂಪಾಯಿಗೆ ಲೆಕ್ಕಹಾಕುವುದು*

ನಿವೃತ್ತಿ ವೇಳೆ ನಿವೃತ್ತಿವೇತನವನ್ನು ಸೌಲಭ್ಯ ಮಂಜೂರಿಗೆ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ ಮೊತ್ತ ರೂಪಾಯಿಗಿಂತ ಭಿನ್ನಾಂಕವಾಗಿದ್ದರೂ ಅಧಿಕೃತ ಜ್ಞಾಪನ ಸಂಖ್ಯೆ ಎಫ್​ಡಿ ವಿಶೇಷ: ಪಿಇಟಿ 84 ಬೆಂಗಳೂರು, ದಿನಾಂಕ 7-1-84ರ ರೀತ್ಯ ಹತ್ತಿರದ ರೂಪಾಯಿಗೆ ಲೆಕ್ಕಹಾಕಬೇಕು.

*ನಿವೃತ್ತಿ ವೇತನ ಮತ್ತು ಉಪದಾನ ಪಡೆಯಲು ಅರ್ಹವಲ್ಲದ ಸೇವೆಗಳು:*

# ನಿಗದಿತ ಅವಧಿಗಾಗಿ/ನಿರ್ದಿಷ್ಟ ಕರ್ತವ್ಯಕ್ಕಾಗಿ ನೇಮಕಗೊಂಡ ನೌಕರನ ಸೇವೆ ನಿಯಮ 216(ಎ) ರೀತ್ಯ.

# ವ್ಯಕ್ತಿಯನ್ನು ತಾತ್ಕಾಲಿಕವಾಗಿ ಮಾಹೆಯಾನ ಸಂಬಳಕ್ಕಾಗಿ ಯಾವುದೇ ನಿರ್ದಿಷ್ಚ ಕಾಲಾವಧಿ/ಕರ್ತವ್ಯಕ್ಕಾಗಿ ನೇಮಿಸಿದ ಸೇವೆ ನಿಯಮ 216(ಬಿ) ರೀತ್ಯ.

# 18ವರ್ಷ ಒಳಪಟ್ಟ ಬಾಲ್ಯ ಸೇವೆ/ಅಪ್ರಾಪ್ತ ಸೇವೆ,(ನಿಯಮ 220ರ ರೀತ್ಯ)

#ಲೆಕ್ಕಕ್ಕಿಲ್ಲದ ರಜೆ

# ಅಭ್ಯಾಸಾವಧಿ

# ನೌಕರನ ಸೇವೆಯ ಒಪ್ಪಂದದ ಮೇರೆಗೆ ನಿವೃತ್ತಿವೇತನ ರಹಿತ ಸೇವೆಯೆಂದು ಷರತ್ತು ಹಾಕಿರುವ ಹುದ್ದೆ.

FULL FORMS

*Full forms*
1. *PAN* - permanent account number.
2. *PDF* - portable document format.
3. *SIM* - Subscriber Identity Module.
4. *ATM* - Automated Teller machine.
5. *IFSC* - Indian Financial System Code.
6. *FSSAI(Fssai)* - Food Safety & Standards Authority of India.
7. *Wi-Fi* - Wireless fidelity.
8. *GOOGLE* - Global Organization Of Oriented Group Language Of Earth.
9. *YAHOO* - Yet Another Hierarchical Officious Oracle.
10. *WINDOW* - Wide Interactive Network Development for Office work Solution.
11. *COMPUTER* - Common Oriented Machine. Particularly United and used under Technical and Educational Research.
12. *VIRUS* - Vital Information Resources Under Siege.
13. *UMTS* - Universal Mobile Telecommunicati ons System.
14. *AMOLED* - Active-matrix organic light-emitting diode.
15. *OLED* - Organic light-emitting diode.
16. *IMEI* - International Mobile Equipment Identity.
17. *ESN* - Electronic Serial Number.
18. *UPS* - Uninterruptible power supply.
19. *HDMI* - High-Definition Multimedia Interface.
20. *VPN* - Virtual private network.
21. *APN* - Access Point Name.
22. *LED* - Light emitting diode.
23. *DLNA* - Digital Living Network Alliance.
24. *RAM* - Random access memory.
25. *ROM* - Read only memory.
26. *VGA* - Video Graphics Array.
27. *QVGA* - Quarter Video Graphics Array.
28. *WVGA* - Wide video graphics array.
29. *WXGA* - Widescreen Extended Graphics Array.
30. *USB* - Universal serial Bus.
31. *WLAN* - Wireless Local Area Network.
32. *PPI* - Pixels Per Inch.
33. *LCD* - Liquid Crystal Display.
34. *HSDPA* - High speed down-link packet access.
35. *HSUPA* - High-Speed Uplink Packet Access.
36. *HSPA* - High Speed Packet Access.
37. *GPRS* - General Packet Radio Service.
38. *EDGE* - Enhanced Data Rates for Globa Evolution.
39. *NFC* - Near field communication.
40. *OTG* - On-the-go.
41. *S-LCD* - Super Liquid Crystal Display.
42. *O.S* - Operating system.
43. *SNS* - Social network service.
44. *H.S* - HOTSPOT.
45. *P.O.I* - Point of interest.
46. *GPS* - Global Positioning System.
47. *DVD* - Digital Video Disk.
48. *DTP* - Desk top publishing.
49. *DNSE* - Digital natural sound engine.
50. *OVI* - Ohio Video Intranet.
51. *CDMA* - Code Division Multiple Access.
52. *WCDMA* - Wide-band Code Division Multiple Access.
53. *GSM* - Global System for Mobile Communications.
54. *DIVX* - Digital internet video access.
55. *APK* - Authenticated public key.
56. *J2ME* - Java 2 micro edition.
57. *SIS* - Installation source.
58. *DELL* - Digital electronic link library.
59. *ACER* - Acquisition Collaboration Experimentation Reflection.
60. *RSS* - Really simple syndication.
61. *TFT* - Thin film transistor.
62. *AMR*- Adaptive Multi-Rate.
63. *MPEG* - moving pictures experts group.
64. *IVRS* - Interactive Voice Response System.
65. *HP* - Hewlett Packard.
*Do we know actual full form of some words???*
66. *News paper =*
_North East West South past and present events report._
67. *Chess =*
_Chariot, Horse, Elephant, Soldiers._
68. *Cold =*
_Chronic Obstructive Lung Disease._
69. *Joke =*
_Joy of Kids Entertainment._
70. *Aim =*
_Ambition in Mind._
71. *Date =*
_Day and Time Evolution._
72. *Eat =*
_Energy and Taste._
73. *Tea =*
_Taste and Energy Admitted._
74. *Pen =*
_Power Enriched in Nib._
75. *Smile =*
_Sweet Memories in Lips Expression._
76. *etc. =*
_End of Thinking Capacity_
77. *OK =*
_Objection Killed_
78. *Or =*
_Orl Korec (Greek Word)_
79. *Bye =*
_Be with you Everytime._

ಪುಟ್ಟ ಸಹಾಯದಲ್ಲಿ ದೊಡ್ಡ ಸಂತೋಷವಿದೆ!

🌿🌷🌿🌷🌿🌷🌿🌷🌿🌷🌿

*ಪುಟ್ಟ ಸಹಾಯದಲ್ಲಿ ದೊಡ್ಡ ಸಂತೋಷವಿದೆ!*


ಆ ದಿನ ಬೆಳಗ್ಗೆ ಮಗಳಿಗೆ ‘ನೀನು ಇಂದಿನಿಂದ ದೊಡ್ಡ ಶಾಲೆಗೆ ಹೋಗ್ತೀಯಾ’ ಎಂದು ಬೇಗ ಎಬ್ಬಿಸಿದಳು. ಅವರ ಹಳ್ಳಿಯಿಂದ ಪೇಟೆಗೆ ತಲುಪಲು ಸಾಕಷ್ಟು ಸಮಯ ಬೇಕಿತ್ತು. ಪುಟ್ಟಿಗೆ ನಾನು ದೊಡ್ಡ ಶಾಲೆಗೆ ಹೋಗುತ್ತೇನೆ ಎನ್ನುವುದೇ ಸಡಗರ. ನಗುತ್ತಲೇ ಶಾಲೆಗೆ ಹೊರಡಲು ತಯಾರಿ ನಡೆಸಿದಳು. ಅಂತೆಯೇ ಬಸ್ ಹತ್ತಿ ಕೂತಳು. ಕಿಟಕಿಯನ್ನೇ ನೋಡುತ್ತಾ ಶಾಲೆ ಯಾವಾಗ ಬರುತ್ತದೋ, ಹೊಸ ಸ್ನೇಹಿತರನ್ನು ಯಾವಾಗ ನೋಡುತ್ತೇನೋ ಎಂಬ ಉತ್ಸಾಹದಲ್ಲಿದ್ದಳು. ಅಂತು ಶಾಲೆಗೆ ತಲುಪಿದ್ದಾಯಿತು. ತನ್ನ ತರಗತಿಗೆ ಬಂದು ಕುಳಿತದ್ದು ಆಯಿತು. ಆದರೆ ಯಾರೊಬ್ಬರೂ ಅವಳನ್ನು ಮಾತನಾಡಿಸಲೇ ಇಲ್ಲ. ಎಲ್ಲರೂ ಮುಸಿ ಮುಸಿ ನಗುವವರೇ. ಇವರೆಲ್ಲ ಏಕೆ ಹೀಗೆ ಮಾಡುತ್ತಿದ್ದಾರೆ, ಮಾತನಾಡಿದರೂ ಮಾತನಾಡಿಸುತ್ತಿಲ್ಲ ಎಂದು ಅರ್ಥವೇ ಆಗಲಿಲ್ಲ.

ಬಡ ಕುಟುಂಬದಿಂದ ಬಂದ ಪುಟ್ಟಿ ಸಾಧಾರಣವಾದ ಬಟ್ಟೆಯನ್ನು ಧರಿಸಿದ್ದಳು. ಇದಕ್ಕಾಗಿ ಮಕ್ಕಳು ಅವಳನ್ನು ಹಾಸ್ಯ ಮಾಡಲು ಆರಂಭಿಸಿದ್ದರು. ಆಕೆಯ ಬಣ್ಣ ಮಾಸಿದ ಬ್ಯಾಗ್, ಅರ್ಧ ತುಂಡಾದ ಪೆನ್ಸಿಲ್ ಇವೆಲ್ಲವನ್ನೂ ನೋಡಿ ಉಳಿದ ಮಕ್ಕಳು ನಗುತ್ತಿದ್ದರು. ಅಷ್ಟರೊಳಗೆ ಶಿಕ್ಷಕಿ ಬಂದು ಪುಟ್ಟಿಯನ್ನು ಎಲ್ಲರಿಗೂ ಪರಿಚಯಿಸಿದರು. ಸ್ವಲ್ಪ ಸಮಯದ ನಂತರವೇ ಸರ್‌ಪ್ರೈಜ್ ಟೆಸ್ಟ್‌ ಒಂದನ್ನು ನೀಡಿದರು. ಅದು ನಿನ್ನೆ ಮಾಡಿದ ಪಾಠದ ಕುರಿತಾಗಿತ್ತು. ಪುಟ್ಟಿಗೆ ಇದಾವುದೂ ತಿಳಿದಿರಲಿಲ್ಲ.

ಜಗತ್ತಿನ ಏಳು ಅದ್ಭುತಗಳನ್ನು ಹೆಸರಿಸಿ ಎಂಬುದು ಪ್ರಶ್ನೆಯಾಗಿತ್ತು. ಎಲ್ಲರಂತೆ ಪುಟ್ಟಿಯೂ ಉತ್ತರ ಬರೆಯತೊಡಗಿದಳು. ಅವಳ ಹಳೇ ಶಾಲೆಯಲ್ಲಿ ಇದನ್ನೆಲ್ಲಾ ಹೇಳಿಕೊಟ್ಟಿದ್ದಾರೆ ಎಂದು ಶಿಕ್ಷಕಿ ಅಂದುಕೊಂಡರು. ಎಲ್ಲ ಮಕ್ಕಳೂ ತಮ್ಮ ಉತ್ತರ ಪತ್ರಿಕೆಯನ್ನು ವಾಪಾಸ್ ನೀಡಿದರು. ಅದರಲ್ಲಿ ಗ್ರೇಟ್ ಪಿರಮಿಡ್ ಆಫ್ ಗಿಝಾ, ಲೀನಿಂಗ್ ಟವರ್ ಆಫ್ ಫಿಸಾ, ತಾಜ್‌ಮಹಲ್ ಇತ್ಯಾದಿ ಉತ್ತರಗಳಿತ್ತು. ನಾನು ಮಾಡಿದ ಪಾಠವನ್ನು ಮಕ್ಕಳು ನೆನಪಿನಲ್ಲಿಟ್ಟುಕೊಂಡಿದ್ದಾರೆ ಎಂದು ಶಿಕ್ಷಕಿ ಖುಷಿ ಪಟ್ಟಳು. ಪುಟ್ಟಿಯ ಉತ್ತರ ಪತ್ರಿಕೆಯನ್ನು ನೋಡುವುದು ಬಾಕಿ ಇತ್ತು. ಅದರಲ್ಲಿ ಕಂಡ ಉತ್ತರಗಳನ್ನು ನೋಡಿ ಶಿಕ್ಷಕಿಗೆ ಮಾತೇ ಹೊರಡಲಿಲ್ಲ.

ಉತ್ತರ ಪತ್ರಿಕೆಯಲ್ಲಿ ‘ಎಲ್ಲವನ್ನೂ ನೋಡುವುದು, ಎಲ್ಲವನ್ನೂ ಕೇಳುವುದು, ಎಲ್ಲವನ್ನೂ ಅನುಭವಿಸುವುದು, ನಗುವುದು, ಯೋಚಿಸುವುದು, ಕರುಣೆ ತೋರುವುದು, ಪ್ರೀತಿಸುವುದು. ಇವೇ ಜಗತ್ತಿನ ಏಳು ಅದ್ಭುತಗಳು’ ಎಂದಿತ್ತು. ಜಗತ್ತಿನ ಅತ್ಯಂತ ಮೌಲ್ಯಯುತ ವಸ್ತುಗಳೆಂದರೆ ಹೊರ ಪ್ರಪಂಚದ ಯಾವುದೋ ತಾಣಗಳಲ್ಲ. ನಮ್ಮ ಒಳಗಿರುವ ಸುಂದರವಾದ ಪ್ರಪಂಚ, ಅದನ್ನು ಸವಿಯುವ ಗುಣ ಅಲ್ಲವೇ? ಮಕ್ಕಳಿಗೆ ಅರ್ಥವಾಗುವ ಸಣ್ಣ ಸತ್ಯ ನಮಗೆ ಅರ್ಥವಾಗುವುದಿಲ್ಲ. ನಮ್ಮೊಳಗಿರುವ ಅದ್ಭುತ ಪ್ರಪಂಚವನ್ನು ಪ್ರೀತಿಸದೇ ಎಲ್ಲೋ ಹೊರಗೆ ಹುಡುಕುತ್ತಿದ್ದೇವೆ ಎಂದನಿಸುವುದಿಲ್ಲವೇ?

ಗೌರ್‌ ಗೋಪಾಲ್‌ ಪ್ರಭು
☘🌹☘🌹☘🌹☘🌹☘🌹☘

ವಿದ್ಯಾರ್ಥಿ ವೇತನಗಳ ಮಾಹಿತಿ

*ವಿದ್ಯಾರ್ಥಿ ವೇತನಗಳ ಮಾಹಿತಿ*


★ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ       ವಿದ್ಯಾರ್ಥಿ ವೇತನ
http://www.karepass.cgg.gov.in/

★         
 * ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ   ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ
http://www.sw.kar.nic.in/


★ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ

http://www.gokdom.kar.nic.in/

★ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ
http://www.vidyaposhak.org/

★ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ
http://www.kar.nic.in/pue/

http://www.kar.nic.in/pue/PUE/PDF_files/scholarship/krc.pdf

★ ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ
http://www.kar.nic.in/pue

http://www.kar.nic.in/pue/PUE/support_html/scholarship/sch_dheru.htm#youranchor



★ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ
http://www.kar.nic.in/pue

http://www.kar.nic.in/pue/PUE/support_html/scholarship/sch_ambed.htm#youranchor

★ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ  ವೀಪ್ರೊ ಅವರ  ಅಜೀಮ್ ಪ್ರೇಮಜೀ ಫೌಂಡೇಷನ್

http://www.azimpremjifoundation.org/

★ವಿದ್ಯಸಿರಿ* *ಮತ್ತು ಶುಲ್ಕ* *ವಿನಾಯಿತಿ*
http://backwardclasses.kar.nic.in/BCWD/Website/backwardclassesMain.html

★ *ಜಿಂದಾಲ್ scholarship*

http://www.sitaramjindalfoundation.org/scholarships.php

★ *ಕೇಂದ್ರ ಸರ್ಕಾರದ ಧನಸಹಾಯಗಳು*
http://mhrd.gov.in/

ವೈವಿಧ್ಯಪೂರ್ಣ ರಜೆ ಸೌಲಭ್ಯಗಳು

*ವೈವಿಧ್ಯಪೂರ್ಣ ರಜೆ ಸೌಲಭ್ಯಗಳು*

Wednesday, 26.07.2017.
| ಲ. ರಾಘವೇಂದ್ರ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ‘ಬಿ’ಯಲ್ಲಿ ಸಾಂರ್ದಭಿಕ ಮತ್ತು ವಿಶೇಷ ಸಾಂರ್ದಭಿಕ ರಜೆಗಳು ಈ ಕೆಳಗಿನಂತೆ ಸರ್ಕಾರಿ ನೌಕರರಿಗೆ ಲಭ್ಯವಾಗುತ್ತದೆ.

1. ಸಾಂರ್ದಭಿಕ ರಜೆ

ಕಾಯಂ ಅಥವಾ ಹಂಗಾಮಿ ಸರ್ಕಾರಿ ನೌಕರರಿಗೆ ಜನವರಿ ಮೊದಲ ದಿನಾಂಕದಿಂದ ಡಿಸೆಂಬರ್ 31ನೇ ದಿನಾಂಕದವರೆಗೆ 15 ದಿನಗಳ ಸಾಂರ್ದಭಿಕ ರಜೆ ದೊರೆಯುತ್ತದೆ. ಬಿಡುವಿನ ವೇಳೆ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿಗೂ ಸಾಂರ್ದಭಿಕ ರಜೆ ಲಭ್ಯ. ಒಂದು ಸಲಕ್ಕೆ 7 ದಿನಗಳಿಗಿಂತ ಇದನ್ನು ಮಂಜೂರು ಮಾಡಲಾಗುವುದಿಲ್ಲ.

ಮೊದಲನೇ ವರ್ಷದ ಸೇವಾ ಅವಧಿಯಲ್ಲಿ ಸರ್ಕಾರಿ ನೌಕರರಿಗೆ ಒಂದು ತಿಂಗಳಿನ ಸೇವೆಗಾಗಿ ಒಂದು ದಿನದಂತೆ ಸಾಂರ್ದಭಿಕ ರಜೆ ಕೊಡಬೇಕು. ಅರ್ಧ ದಿನದ ಸಾಂರ್ದಭಿಕ ರಜೆಯನ್ನೂ ಕೊಡಬಹುದು. ಮಧ್ಯಾಹ್ನ 2 ಗಂಟೆವರೆಗೆ ಮತ್ತು ನಂತರದ ಅವಧಿಯನ್ನು, ಅರ್ಧ ದಿನಕ್ಕಾಗಿ ಲೆಕ್ಕ ಹಾಕಬೇಕು.

ಸಾಂರ್ದಭಿಕ ರಜೆಯನ್ನು ಹಕ್ಕೆಂದು ಕೇಳಲು ಬರುವುದಿಲ್ಲ. ಅಧಿಕಾರಿಗಳಿಗೆ ಮಂಜೂರು ಮಾಡಿದ ರಜೆಯನ್ನು ರದ್ದು ಪಡಿಸುವುದಕ್ಕೂ ಹಕ್ಕಿದೆ. ರಜೆಯನ್ನು ಮೊದಲು ಮಂಜೂರು ಮಾಡಿಸಿಕೊಂಡು ನಂತರ ಅದನ್ನು ಬಳಸಬೇಕು. ಆದರೆ ಕಾಯಿಲೆಯಾಗಿ ಅಥವಾ ಇನ್ನಾವುದೇ ಆಕಸ್ಮಿಕಗಳಿಂದಾಗಿ ಕಚೇರಿಗೆ ಬಂದು ರಜೆಯನ್ನು ಮುಂಗಡವಾಗಿ ಮಂಜೂರು ಮಾಡಿಸಲು ಸಾಧ್ಯವಾಗದಿರುವ ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಿಸಿ ಮರುದಿನ ರಜೆ ಮಂಜೂರು ಮಾಡಿಸಿಕೊಳ್ಳಬಹುದು.

ಸಾಂರ್ದಭಿಕ ರಜೆಯನ್ನು ಪರಿವರ್ತಿತ ರಜೆಗಳೊಡನೆ ಸೇರಿಸಬಹುದು. ಆದರೆ ಒಟ್ಟು ಅನುಪಸ್ಥಿತಿ 10 ದಿನಗಳಿಗೆ ಮೀರಕೂಡದು. ಆಕಸ್ಮಿಕ ರಜೆಯನ್ನು ಸೇವಾ ಅವಧಿಯೆಂದೇ ಭಾವಿಸಲಾಗುವುದು.

2. ವಿಶೇಷ ಸಾಂರ್ದಭಿಕ ರಜೆ

ವಿಶೇಷ ಸಂದರ್ಭಗಳಲ್ಲಿ ಈ ರಜೆ ಪಡೆಯಬಹುದು

1. ನಾಯಿ ಅಥವಾ ಇನ್ನಾವುದೇ ವಿಷಪೂರಿತ ಪ್ರಾಣಿ/ಹುಳು ಕಡಿದರೆ ಅಂತಹವರಿಗೆ ಚಿಕಿತ್ಸೆಗಾಗಿ – 14ದಿನಗಳ ವಿಶೇಷ ಸಾಂರ್ದಭಿಕರಜೆ ಹಾಗೂ ಹೋಗಿಬರುವ ಪ್ರಯಾಣದ ದಿನಗಳು

2. ಸ್ವಯಂ ಸೇವಕರಾಗಿರುವ ಸರ್ಕಾರಿ ನೌಕರರು ಬಂದೂಕು ತರಬೇತಿಗೆ ಹಾಜರಾದಾಗ – ಅಗತ್ಯವಿರುವಷ್ಟು ಅವಧಿಗೆ ನೀಡಬಹುದು.

3. ಸರ್ಕಾರಿ ನೌಕರರ ಕೇಂದ್ರ ಮತ್ತು ಜಿಲ್ಲಾ ಮಟ್ಟದ ಸಂಘದ ಪದಾಧಿಕಾರಿಗಳಿಗೆ – ಪ್ರತಿ ವರ್ಷಕ್ಕೆ 15 ದಿನಗಳು ಮೀರದಂತೆ

4. ರಾಜ್ಯ ಸರ್ಕಾರಿ ‘ಡಿ’ ವರ್ಗದ ನೌಕರರ ಸಂಘದ ಪದಾಧಿಕಾರಿಗಳಿಗೆ – ಪ್ರತಿ ವರ್ಷಕ್ಕೆ 15 ದಿನಗಳು ಮೀರದಂತೆ.

5. ದೆಹಲಿಯ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ಉದ್ಯೋಗಿಗಳಿಗೆ ಪ್ರತಿ ವರ್ಷಕ್ಕೆ 6 ದಿನಗಳು ಮೀರದಂತೆ ವಿಶೇಷ ಸಾಂರ್ದಭಿಕ ರಜೆ ಲಭ್ಯ .

6. ಶೈಕ್ಷಣಿಕವಾಗಿ ವಾಣಿಜ್ಯ ಪರೀಕ್ಷಾ ಮಂಡಳಿಯು ನಡೆಸುವ ಪರೀಕ್ಷೆಗಾಗಿ ಪರೀಕ್ಷಾ ಅವಧಿ ಮತ್ತು ವಾಸ್ತವ ಪ್ರಯಾಣದ ಅವಧಿಯ ದಿನಗಳ ಮಟ್ಟಿಗೆ ವಿಶೇಷ ಸಾಂರ್ದಭಿಕ ರಜೆ ಲಭ್ಯ .

7. ಅಖಿಲ ಭಾರತ ಮಾಧ್ಯಮಿಕ ಶಿಕ್ಷಕರ ಫೆಡರೇಷನ್ನಿನ ಪದಾಧಿಕಾರಿಗಳು ವಿವಿಧ ಸಭೆ ವಿಚಾರ ಸಂಕಿರಣ ಗೋಷ್ಠಿಗಳು ನಡೆಯುವ ದಿನಗಳ ಮಟ್ಟಿಗೆ ಈ ವಿಶೇಷ ಸಾಂರ್ದಭಿಕ ರಜೆ ಲಭ್ಯ.

8. ವಿಶ್ವವಿದ್ಯಾಲಯಗಳ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ ಆಯ್ಕೆಗೊಂಡ ಸರ್ಕಾರಿ ನೌಕರರಿಗೆ 30 ದಿನಗಳಿಗೆ ಮೀರದಂತೆ ವಿಶೇಷ ಸಾಂರ್ದಭಿಕ ರಜೆ ಲಭ್ಯ.

9. ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯವರು ನಡೆಸುವ ಸಮ್ಮೇಳನಗಳಲ್ಲಿ 15 ದಿನ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು. (ಪ್ರಯಾಣ ಭತ್ಯೆ ರಹಿತ)

10. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಏರ್ಪಾಟಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವರ್ಷಕ್ಕೆ 15 ದಿನ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು

11. ಯುವ ಜನ ಇಲಾಖೆಯವರು ಏರ್ಪಡಿಸುವ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವರ್ಷಕ್ಕೆ 15 ದಿನ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು.

12. ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ಸಂದರ್ಭಗಳಲ್ಲಿ 7 ದಿನಗಳಿಗೆ ಮೀರದಂತೆ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು.

13. ಸಂತಾನ ಹರಣ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿಲ್ಲವೆಂದು ವೈದ್ಯಾಧಿಕಾರಿಗಳು ಪ್ರಮಾಣ ಪತ್ರ ಕೊಟ್ಟರೆ 6 ದಿನಗಳ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು.

14. ಶೀಘ್ರಲಿಪಿ ಪರೀಕ್ಷೆಗಳ ಮೇಲ್ವಿಚಾರಕರಾಗಿ ಹೋಗುವ ಶೀಘ್ರಲಿಪಿಗಾರರಿಗೆ ಪರೀಕ್ಷೆಯ ಅವಧಿಗಾಗಿ ಮತ್ತು ಪ್ರಯಾಣದ ಅವಧಿಗಾಗಿ ವಿಶೇಷ ಸಾಂರ್ದಭಿಕ ರಜೆ ಲಭ್ಯ.

15. ಬಾಣಂತಿತನವಿಲ್ಲದ ಸಂತಾನ ಹರಣ ಶಸ್ತ್ರ ಚಿಕಿತ್ಸೆಗಾಗಿ ಮಹಿಳಾ ಉದ್ಯೋಗಿಗಳಿಗೆ ಇಲಾಖಾ ಮುಖ್ಯಸ್ಥರು 14 ದಿನಗಳ ವಿಶೇಷ ಸಾಂರ್ದಭಿಕ ರಜೆ ಮಂಜೂರು ಮಾಡಬಹುದು.

16. ಐ.ಯು.ಸಿ.ಡಿ.ಯನ್ನು ಅಳವಡಿಸಿಕೊಳ್ಳುವ ಸಲುವಾಗಿ 1 ದಿನ ರಜೆ ಕೊಡಬಹುದು.

17. ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡೋತ್ಸವಗಳಲ್ಲಿ ಭಾಗವಹಿಸಿದಾಗ 1 ವರ್ಷಕ್ಕೆ 30 ದಿನಗಳ ವಿಶೇಷ ರಜೆ ಲಭ್ಯ.

18. ಅಖಿಲ ಭಾರತ ಫುಟ್ಬಾಲ್, ಹಾಕಿ, ಕ್ರಿಕೆಟ್, ಟೆನ್ನಿಸ್ ಮೊದಲಾದ ಕ್ರೀಡಾ ಸಂಸ್ಥೆಗಳು ಸರ್ಕಾರಿ ನೌಕರರನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಚುನಾಯಿಸಿದಾಗ ಕೊಡಬಹುದು. ಇದಕ್ಕೂ ಹೆಚ್ಚಿಗೆ ಬೇಕಾದಲ್ಲಿ, ಗಳಿಕೆ ರಜೆ, ಅಥವಾ ಅರ್ಧ ವೇತನ ರಜೆಯನ್ನು ತೆಗೆದುಕೊಳ್ಳಬೇಕು. ಈ ವಿಶೇಷ ಸಾಂರ್ದಭಿಕ ರಜೆಯನ್ನು ಸಾಮಾನ್ಯ ಸಾಂರ್ದಭಿಕ ರಜೆ ಎನ್ನುವರು.

19. ಕ್ರೀಡಾ ಸಂಸ್ಥೆಗಳಲ್ಲಿ ತರಬೇತಿದಾರರೆಂದು ನೇಮಕ ಮಾಡಿದಾಗ ರಜೆಯೊಡನೆ ಸೇರಿಸಕೂಡದು.

20. ರಕ್ತದಾನ ಮಾಡಿದ ಸಂದರ್ಭದಲ್ಲಿ (ಬ್ಲಡ್ ಬ್ಯಾಂಕ್ / ಆಸ್ಪತ್ರೆ / ರೆಡ್ ಕ್ರಾಸ್ ಸಂಸ್ಥೆಗಳಿಂದ ಪೂರಕ ದಾಖಲೆಗಳನ್ನು ಒದಗಿಸಬೇಕು.) ಕೆಸಿಎಸ್​ಆರ್ ನಿಯಮಾವಳಿ ಪ್ಯಾರಾ 11ಜಿ ಅನುಬಂಧ-ಬಿ, ಪ್ರಕಾರ ಒಂದು ದಿನ ವಿಶೇಷ ಸಾಂರ್ದಭಿಕ ರಜೆ ಮಂಜೂರು ಮಾಡಬಹುದು.

3. ನಿರ್ಬಂಧಿತ ರಜೆ (ಛಿಠಠ್ಟಿಜ್ಚಿಠಿಛಿಛ ಜಟ್ಝಜಿಛಚಢ):

ಪ್ರತಿವರ್ಷ ಘೊಷಿತ ದಿನಾಂಕಗಳ ಅಧಿಕೃತ ಹಬ್ಬಗಳ ಆಚರಣೆಯ ಸಂಬಂಧ 2 ದಿನ ನಿರ್ಬಂಂಧಿತ ರಜೆ ಪ್ರತಿಯೊಬ್ಬ ಸರ್ಕಾರಿ ನೌಕರನಿಗೆ ದೊರೆಯುತ್ತದೆ. ಈ ರಜೆಯನ್ನು ಸಾಂರ್ದಭಿಕ ರಜೆ ಅಥವಾ ಇತರ ರಜೆಯ ಮೊದಲು ಅಥವಾ ಅನಂತರ ಸಂಯೋಜಿಸಿ ಮಂಜೂರು ಮಾಡಬಹುದು. ಈ ನಿರ್ಬಂಧಿತ ರಜೆಗಳ ಪಟ್ಟಿಯನ್ನು ರಾಜ್ಯ ಸರ್ಕಾರವು ಮುಂದಿನ ಕ್ಯಾಲೆಂಡರ್ ವರ್ಷಕ್ಕೆ ಅನ್ವಯವಾಗುವಂತೆ ಅಧಿಸೂಚನೆಯನ್ನು ಹೊರಡಿಸುತ್ತದೆ. ಈ ರಜೆಯನ್ನು ಆಯಾ ಧರ್ವಿುಯರು ಮಾತ್ರ ಬಳಸಬಹುದು. (ಸರ್ಕಾರಿ ಆದೇಶದ ಸಂಖ್ಯೆ: ಊಈ 7 ಖ್ಕಖ 87 ಛಚಠಿಛಿ : 20.3.1987)

ಸ್ಥಗಿತ ವೇತನ ಬಡ್ತಿ ನಿಯಮಗಳು

*ಸ್ಥಗಿತ ವೇತನ ಬಡ್ತಿ ನಿಯಮಗಳು*

(Stagnation Increment)

| ಲ. ರಾಘವೇಂದ್ರ

ಸರ್ಕಾರಿ ನೌಕರನು ತನ್ನ ಹುದ್ದೆಗೆ ಸಂಬಂಧಿಸಿದ ವೇತನ ಶ್ರೇಣಿಯಲ್ಲಿ ಗರಿಷ್ಠ ಮಿತಿಯನ್ನು ದಾಟಿದಾಗ ಆ ನೌಕರನು ಈ ಮಿತಿಯ ಪೂರ್ವದಲ್ಲಿ ಪಡೆಯುತ್ತಿದ್ದ ವೇತನ ಬಡ್ತಿಯ ಪ್ರಮಾಣದಲ್ಲೇ ನಿರ್ದಿಷ್ಟಾವಧಿ ನಂತರ ಮಂಜೂರು ಮಾಡುವ ವೇತನ ಬಡ್ತಿಯನ್ನೇ ಸ್ಥಗಿತ ವೇತನ ಬಡ್ತಿ ಎನ್ನಬಹುದು.

ದಿನಾಂಕ 31-10-79ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 52 ಎಸ್.ಆರ್.ಪಿ. 79ರ ಮೇರೆಗೆ ಸರ್ಕಾರಿ ನೌಕರನು ವೇತನ ಶ್ರೇಣಿಯ ಗರಿಷ್ಠ ಮಿತಿ ದಾಟಿ ವೇತನ ಬಡ್ತಿಯನ್ನು ಎರಡು ವರ್ಷಗಳವರೆಗೆ ಪಡೆಯದಿದ್ದರೆ, ಅವನಿಗೆ ಮೊದಲ ಸ್ಥಗಿತ ವೇತನ ಬಡ್ತಿಯನ್ನು ಮಂಜೂರು ಮಾಡಬಹುದೆಂದು ತಿಳಿಸಲಾಗಿದೆ. ಅಲ್ಲದೆ, ಎರಡನೇ ಸ್ಥಗಿತ ವೇತನಬಡ್ತಿಯನ್ನು ಮತ್ತೊಂದು ವರ್ಷದ ನಂತರ ನೀಡಬೇಕೆಂದು ಸೂಚಿಸಲಾಗಿತ್ತು. ಈ ನಿಯಮಾವಳಿ ಪ್ರಕಾರ ಸರ್ಕಾರಿ ನೌಕರನು ವಾರ್ಷಿಕ ವೇತನ ಬಡ್ತಿ ಹೊಂದಿದ ಕಾಲಿಕ ವೇತನ ಶ್ರೇಣಿಯಲ್ಲಿ ಗರಿಷ್ಠ ಹಂತವನ್ನು ದಾಟಿದ್ದರೆ ಅಂತಹ ನೌಕರನಿಗೆ ಅವನು ಪಡೆದಿದ್ದ ವಾರ್ಷಿಕ ವೇತನ ಬಡ್ತಿಯ ದರದ ಪ್ರಮಾಣದಲ್ಲಿ ದಿನಾಂಕ 1-4-2012ನೇ ಸಾಲಿನ ಎಂಟು ವಾರ್ಷಿಕ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡಬೇಕು. ಇದನ್ನು ಎಲ್ಲ ಉದ್ದೇಶಗಳಿಗಾಗಿ ‘ವೇತನ’ ಎಂದು ಪರಿಗಣಿಸಲು ತಿಳಿಸಲಾಗಿದೆ.

ಸ್ಥಗಿತ ವೇತನ ಬಡ್ತಿ ಮಂಜೂರಾತಿಗೆ ನಿಬಂಧನೆಗಳು

ಅ) ಸರ್ಕಾರಿ ನೌಕರನು ತೃಪ್ತಿದಾಯಕ ಸೇವಾ ದಾಖಲೆ ಹೊಂದಿರಬೇಕು. ಅಲ್ಲದೆ ವೇತನ ಶ್ರೇಣಿಯ ಗರಿಷ್ಠ ಹಂತವನ್ನು ತಲುಪದಿದ್ದರೆ, ಅವನಿಗೆ ಅನ್ವಯವಾಗುವ ಕಾಲಿಕ ವೇತನ ಶ್ರೇಣಿಯಲ್ಲಿ ಸಾಮಾನ್ಯ ವೇತನ ಬಡ್ತಿಯನ್ನು ಪಡೆಯಲು ಅರ್ಹನಿರಬೇಕು.

ಆ) ಸ್ಥಗಿತ ವೇತನ ಬಡ್ತಿಯನ್ನು ಮಂಜೂರು ಮಾಡುವ ಉದ್ದೇಶಕ್ಕೆ ತೃಪ್ತಿಕರ ಸೇವೆಯ ಸ್ವರೂಪವನ್ನು ಪದೋನ್ನತಿಗೆ ಅರ್ಹತೆಯನ್ನು ಪರಿಗಣಿಸುವ ರೀತಿಯಲ್ಲೇ ನಿರ್ಧರಿಸಬೇಕು.

ಇ) ತೃಪ್ತಿಕರ ಸೇವೆ ಪರಿಗಣಿಸುವಾಗ ಸರ್ಕಾರಿ ನೌಕರನು ಪದೋನ್ನತಿಗೆ ಯಾವುದೇ ಇಲಾಖಾ ಪರೀಕ್ಷೆಗಳನ್ನು ನಿಗದಿಪಡಿಸಿದಲ್ಲಿ, ಅವುಗಳಲ್ಲಿ ತೇರ್ಗಡೆಯಾಗಿದ್ದಾನೆಯೇ ಅಥವಾ ಇಲ್ಲವೇ ಎಂಬಂಶವನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯ ಇರುವುದಿಲ್ಲ.

ಈ) ಸ್ವಇಚ್ಛೆಯಿಂದ ಪದೋನ್ನತಿ ಬಿಟ್ಟುಕೊಡುವ ಅಥವಾ ಪದೋನ್ನತಿ ನಂತರ ಸ್ವಂತ ಇಚ್ಛೆ ಮೇರೆಗೆ ಹಿಂಬಡ್ತಿಯನ್ನು ಬಯಸುವ ಸರ್ಕಾರಿ ನೌಕರನಿಗೆ ಈ ಸ್ಥಗಿತ ವೇತನ ಬಡ್ತಿಯನ್ನು ನೀಡಬಾರದು.

ನಿವೃತ್ತಿವೇತನದ ಅರ್ಥ ವಿವರಣೆ

*ನಿವೃತ್ತಿವೇತನದ ಅರ್ಥ ವಿವರಣೆ*


| ಲ. ರಾಘವೇಂದ್ರ

ನಿವೃತ್ತ ನೌಕರರಿಗೆ ಜೀವಿತ ಅವಧಿವರೆಗೂ ಅವರ್ಥಕವಾಗಿ ವೇತನ ಬಟವಡೆಯಾಗಿರುತ್ತದೆ. ಉಪದಾನವು ನಿವೃತ್ತ ನೌಕರರಿಗೆ ಹಾಗೂ ಮೃತ ನೌಕರ/ಳ ಕುಟುಂಬವರ್ಗದವರಿಗೆ ನೀಡುವಂತಹ ಹಣ. ಕ.ಸ.ಸೇ.ನಿ. ನಿಯಮ 208ರ ರೀತ್ಯ ನಿವೃತ್ತಿವೇತನ ಉಪದಾನದಲ್ಲಿ ಸೇರುತ್ತದೆ. ಆದ್ದರಿಂದ ನಿವೃತ್ತಿವೇತನ ಮತ್ತು ಉಪದಾನವನ್ನು ಜತೆಗೆ ನೌಕರರು ಸಲ್ಲಿಸಿರುವ ಅರ್ಹಸೇವೆ ಹಾಗೂ ಉಪಲಬ್ಧಗಳ ಆಧಾರದ ಮೇಲೆ ಲೆಕ್ಕಾಚಾರ ಮಾಡಬಹುದು.

*ನಿವೃತ್ತಿವೇತನ ವಿಧಗಳು:* ನಿವೃತ್ತಿ ವೇತನಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ.

ಪರಿಹಾರ(ನಿಯಮ 259),

ಅಶಕ್ತತಾ (ನಿಯಮ 273),

ವಯೋ ನಿವೃತ್ತಿ ವೇತನ(ನಿಯಮ 283),

ವಿಶ್ರಾಂತಿ(ನಿಯಮ 285)

ನಿವೃತ್ತಿ ವೇತನ ಮತ್ತು ಉಪದಾನ ಪಡೆಯಲು ಅರ್ಹ ವ್ಯಕ್ತಿಗಳು: ಕ.ಸ.ಸೇ.ನಿ. ನಿಯಮ 302ರ ರೀತ್ಯ ಹಾಗೂ ಕೆ.ಜಿ.ಎಸ್.(ಎಸ್.ಪಿ.) ನಿಯಮ 2002ರ ನಿಯಮ 7 ಪರಿಶಿಷ್ಟರ ರೀತ್ಯ ಪಿಂಚಣಿ ಮತ್ತು ಉಪದಾನ ಸೌಲಭ್ಯ ಪಡೆಯಲು ಈ ಕೆಳಕಂಡ ವ್ಯಕ್ತಿಗಳು ಅರ್ಹರು.

ಕುಟುಂಬ ನಿವೃತ್ತಿಗಾಗಿ ಹೆಂಡತಿ, ಗಂಡ, ಅಪ್ರಾಪ್ತ ಮಕ್ಕಳು, ಅಪ್ರಾಪ್ತ ಅವಿವಾಹಿತ ಮಗಳು. ಉಪದಾನಕ್ಕಾಗಿ ಹೆಂಡತಿ, ಗಂಡ, ಮಕ್ಕಳು(ದತ್ತು ಮಕ್ಕಳು ಸೇರುತ್ತಾರೆ), ಅವಿವಾಹಿತ/ವಿಧವಾ/ವಿಚ್ಛೇದಿತ ಮಗಳು, ತಮ್ಮಂದಿರು 18 ವರ್ಷ ಒಳಗಿರುವವರು ಅವಿವಾಹಿತ/ವಿಧವಾ/ವಿಚ್ಛೇದಿತ ತಂಗಿಯರು, ತಂದೆ, ತಾಯಿ, ವಿವಾಹಿತ ಮಗಳು, ಮೃತ ಮಗನ ಮಕ್ಕಳು.

ನಿವೃತ್ತಿ ವೇತನ ಪತ್ರಗಳನ್ನು ಯಾರಿಗೆ ಸಲ್ಲಿಸಬೇಕು?: ನಿವೃತ್ತ ಸರ್ಕಾರಿ ನೌಕರರಿಗೆ ಮತ್ತು ಸ್ಥಳೀಯ ಸಂಸ್ಥೆಯ ನೌಕರರಿಗೆ ನಿವೃತ್ತಿ ವೇತನ ಸೌಲಭ್ಯಗಳನ್ನು ಪ್ರಾಧೀಕರಿಸುವ ಸಲುವಾಗಿ ಭರ್ತಿ ಮಾಡಿದ ನಿವೃತ್ತಿ ವೇತನ ಪತ್ರಗಳನ್ನು ಬಟವಾಡೆ ಅಧಿಕಾರಿಗಳು/ಮಂಜೂರಾತಿ ಅಧಿಕಾರಿಗಳು ದೃಢೀಕರಿಸಿ ಸರ್ಕಾರಿ ಸುತ್ತೋಲೆ ಸಂಖ್ಯೆ ಎಫ್​ಡಿ (ವಿಶೇಷ)2 ಸಿಪಿಸಿ 2002 ಬೆಂಗಳೂರು ದಿನಾಂಕ 19-1-2002ರ ರೀತ್ಯ ಆರು ತಿಂಗಳು ಮುಂಚಿತವಾಗಿ ಸಂಬಂಧಪಟ್ಟ ಪ್ರಾಧೀಕರಣ ಪ್ರಾಧಿಕಾರಕ್ಕೆ ಕಳುಹಿಸಬೇಕು. ಅಂತೆಯೇ ಪೂರ್ಣಪ್ರಮಾಣದ ನಿವೃತ್ತಿ ಕಡತಗಳನ್ನು ಪರಿಶೀಲಿಸಿ ನಿವೃತ್ತಿ ಪ್ರಾಧೀಕರಣ ಪ್ರಾಧೀಕಾರವು ನಿವೃತ್ತ/ನಿಧನರಾದ ನೌಕರರ ಸಂಬಂಧ ನಿವೃತ್ತಿ ಪಾವತಿ ಆದೇಶ ಪತ್ರವನ್ನು 15 ದಿನ ಮುಂಚಿತವಾಗಿ ನೀಡಬೇಕು.

ಒಂದು ವೇಳೆ ನಿವೃತ್ತಿ ವೇತನ ಪತ್ರಗಳನ್ನು ತಡವಾಗಿ ಸಲ್ಲಿಸಿದಲ್ಲಿ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ(ವಿಶೇಷ) 199 ಪಿಇಎಸ್ 93 ಬೆಂಗಳೂರು ದಿನಾಂಕ 13-9-94ರ ರೀತ್ಯ ತಡವಾಗಿ ಪಾವತಿಸಬಹುದಾದ ನಿವೃತ್ತಿ ವೇತನ, ಉಪದಾನ ಹಾಗೂ ಗಳಿಕೆ ರಜೆ ಮೊತ್ತಕ್ಕೆ ಶೇ.8ರಷ್ಟು ಬಡ್ಡಿ ನೀಡಬೇಕಾಗುತ್ತದೆ.

*ಸರಳ ನಿಯಮ:*

# ಮೂರು ತಿಂಗಳು ಅವಧಿ ಸೇವೆಯ ಕಡಿಮೆ ಬೀಳುವ ಭಿನ್ನಾಂಕವನ್ನು ಕಡೆಗಣಿಸಬೇಕು.

# 3 ತಿಂಗಳು ಮೇಲ್ಪಟ್ಟು 9 ತಿಂಗಳು ಅವಧಿಯ ಸೇವೆಯನ್ನು ಒಂದು ಅರ್ಧವರ್ಷ ಎಂದು ಪರಿಗಣಿಸಬೇಕು.

# 9 ತಿಂಗಳು ಮತ್ತು ಅದಕ್ಕೂ ಮೇಲ್ಪಟ್ಟ ಅವಧಿಯ ಸೇವೆಯನ್ನು 2 ಅರ್ಧ ವರ್ಷ ಎಂದು ಪರಿಗಣಿಸಬೇಕು.

*ಉದಾಹರಣೆಗಳು:*

# ಒಟ್ಟು ಅರ್ಹ ಸೇವೆಯು 31 ವರ್ಷ 1ತಿಂಗಳು 25 ದಿನಗಳಾಗಿದ್ದಲ್ಲಿ ಇದನ್ನು 31 ವರ್ಷ ಅಥವಾ 62 ಅರ್ಧ ವರ್ಷಗಳೆಂದು ಲೆಕ್ಕ ಹಾಕಬೇಕು.

# ಒಟ್ಟು ಅರ್ಹ ಸೇವೆಯು 31 ವರ್ಷ 7 ತಿಂಗಳು 20 ದಿನಗಳಾಗಿದ್ದಲ್ಲಿ ಇದನ್ನು 31 1/2 ವರ್ಷ ಅಥವಾ 63 ಅರ್ಧ ವರ್ಷ ಎಂದು ಲೆಕ್ಕ ಹಾಕಬೇಕು.

# ಒಟ್ಟು ಸೇವೆಯು 30 ವರ್ಷ 9 ತಿಂಗಳು 12 ದಿನಗಳಾಗಿದ್ದಲ್ಲಿ ಇದನ್ನು 31 ವರ್ಷ ಅಥವಾ 62 ಅರ್ಧ ವರ್ಷಗಳೆಂದು ಲೆಕ್ಕ ಹಾಕಬೇಕು.

# ಅರ್ಹ ಸೇವೆಯು 35 ವರ್ಷ 6 ತಿಂಗಳು 18 ದಿನಗಳಾಗಿದ್ದಲ್ಲಿ ಇದನ್ನು ಗರಿಷ್ಠ 33 ವರ್ಷ ಅಥವಾ 66 ಅರ್ಧ ವರ್ಷಗಳಿಗೆ ಸೀಮಿತಗೊಳಿಸಿ ಲೆಕ್ಕ ಹಾಕಬೇಕು.

# ಮೊತ್ತವನ್ನು ರೂಪಾಯಿಗೆ ಲೆಕ್ಕಹಾಕುವುದು

# ನಿವೃತ್ತಿ ವೇಳೆ ನಿವೃತ್ತಿವೇತನವನ್ನು ಸೌಲಭ್ಯ ಮಂಜೂರಿಗೆ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ ಮೊತ್ತ ರೂಪಾಯಿಗಿಂತ ಬಿನ್ನಾಂಕವಾಗಿದ್ದರೂ ಅಧಿಕೃತ ಜ್ಞಾಪನ ಸಂಖ್ಯೆ ಎಫ್​ಡಿ ವಿಶೇಷ: ಪಿಇಟಿ 84 ಬೆಂಗಳೂರು, ದಿನಾಂಕ 7-1-84ರ ರೀತ್ಯ ಹತ್ತಿರದ ರೂಪಾಯಿಗೆ ಲೆಕ್ಕಹಾಕಬೇಕು.

*ಅರ್ಹದಾಯಕ ಸೇವೆಯ ಲೆಕ್ಕಾಚಾರ*

ದಿನಾಂಕ 30-9-2003ರ ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಎಫ್​ಡಿ 6 ಸನಿತಿ 2003ರಲ್ಲಿ ನಿವೃತ್ತಿ ವೇತನ ಪಡೆಯಲು ನಿಯಮ 222ರ ಉಪಬಂಧಗಳನ್ನು ಮಾರ್ಪಡಿಸಿ ಕನಿಷ್ಠ 10 ವರ್ಷ ಅರ್ಹತೆ ಸೇವೆ ಸಲ್ಲಿಸಬೇಕೆಂದು ಆದೇಶಿಸಿದೆ. ಈ ಆದೇಶವು ದಿನಾಂಕ 1-9-2003 ರಿಂದ ಜಾರಿಗೆ ಬಂದಿದೆ.

ನಿವೃತ್ತಿ ವೇತನ ಮತ್ತು ಉಪದಾನ ಪಡೆಯಲು ಅರ್ಹವಲ್ಲದ ಸೇವೆಗಳು

# ನಿಗದಿತ ಅವಧಿಗಾಗಿ/ನಿರ್ದಿಷ್ಟ ಕರ್ತವ್ಯಕ್ಕಾಗಿ ನೇಮಕಗೊಂಡ ನೌಕರನ ಸೇವೆ ನಿಯಮ 216(ಎ) ರೀತ್ಯ.

# ವ್ಯಕ್ತಿಯನ್ನು ತಾತ್ಕಾಲಿಕವಾಗಿ ಮಾಹೆಯಾನ ಸಂಬಳಕ್ಕಾಗಿ ಯಾವುದೇ ನಿರ್ದಿಷ್ಚ ಕಾಲಾವಧಿ/ಕರ್ತವ್ಯಕ್ಕಾಗಿ ನೇಮಿಸಿದ ಸೇವೆ ನಿಯಮ 216(ಬಿ) ರೀತ್ಯ.

# 18ವರ್ಷ ಒಳಪಟ್ಟ ಬಾಲ್ಯ ಸೇವೆ/ಅಪ್ರಾಪ್ತ ಸೇವೆ, (ನಿಯಮ 220ರ ರೀತ್ಯ)

# ಲೆಕ್ಕಕ್ಕಿಲ್ಲದ ರಜೆ

# ಅಭ್ಯಾಸಾವಧಿ

# ನೌಕರನ ಸೇವೆಯ ಒಪ್ಪಂದದ ಮೇರೆಗೆ ನಿವೃತ್ತಿವೇತನ ರಹಿತ ಸೇವೆಯೆಂದು ಷರತ್ತು ಹಾಕಿರುವ ಹುದ್ದೆ.

*ಉಪಲಬ್ಧಗಳು*

ಉಪಲಬ್ಧಗಳು ನಿವೃತ್ತಿ ವೇತನ, ಉಪದಾನ, ಕುಟುಂಬ ನಿವೃತ್ತಿ ವೇತನ, ಅಸಾಧಾರಣ ನಿವೃತ್ತಿವೇತನ ಸೌಲಭ್ಯಗಳ ಲೆಕ್ಕಾಚಾರ ಮಾಡಲು ಒಳಗೊಂಡಿರುತ್ತದೆ.

# ನಿವೃತ್ತಿ/ನಿಧನ ದಿನಾಂಕದಂದು ಪಡೆಯುತ್ತಿರುವ ಮೂಲ ವೇತನ 10 ತಿಂಗಳ ಸರಾಸರಿ ವೇತನ

 # *ಸ್ಥಗಿತ ವೇತನ ಬಡ್ತಿ*  ಗರಿಷ್ಠ ವೇತನ ಶ್ರೇಣಿಗೂ ಮೀರಿದ ವೇತನ

#  *ವೈಯುಕ್ತಿಕ ವೇತನ:* ಕ.ಸ.ಸೇ.ನಿ.ಪರಿಷ್ಕೃತ ವೇತನ ನಿಯಮಾವಳಿ 1999ರ ನಿಯಮ 7ರ ಉಪನಿಯಮ (3)ರ ಅಡಿಯಲ್ಲಿ

# *ವಿಶೇಷ ಭತ್ಯೆ:* ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಹಾಗೂ ಲಿಫ್ಟ್ ಆಪರೇಟರ್ ಇವರ ಹುದ್ದೆಗೆ ಹೊಂದಿರುವ ವಿಶೇಷ ವೇತನ.

# *ಹೆಚ್ಚುವರಿ ವೇತನ:* ಹೆಚ್ಚುವರಿ ವಾರ್ಷಿಕ ವೇತನ ಬಡ್ತಿಯು ಗರಿಷ್ಠ ವೇತನ ಶ್ರೇಣಿ ತಲುಪಿದ ನಂತರ ನೀಡಿರುವಂತಹದ್ದು, ಇದು 1974ರ ಕನ್ನಡ ಭಾಷಾ ಪರೀಕ್ಷೆ ನಿಯಮ 6 ರೀತ್ಯಾ ನೀಡಿರುವಂತದ್ದಾಗಿರಬೇಕು. ್ಝ ನಿವೃತ್ತಿ ವೇತನ, ಉಪದಾನ, ಕುಟುಂಬ ನಿವೃತ್ತಿ ವೇತನ ಲೆಕ್ಕಾಚಾರಕ್ಕಾಗಿ ಉಪಲಬ್ಧಿಯನ್ನು ಸೀಮಿತಗೊಳಿಸಿರುವುದಿಲ್ಲ.

ಕರ್ನಾಟಕ ನಾಡಗೀತೆ* - ಒಂದು ಸರಳ ಅರ್ಥವಿವರಣೆ

🎼🎼🎼🎼🎼🎼🎼🎼🎼🎼🎼
*ಕರ್ನಾಟಕ ನಾಡಗೀತೆ*
- ಒಂದು ಸರಳ ಅರ್ಥವಿವರಣೆ

ಈ ವಿಶಿಷ್ಟ ಕವಿತೆಯಲ್ಲಿ  ಕುವೆಂಪು ಭಾರತವನ್ನು ತಾಯಿಯಂತೆ ಮತ್ತು ಕರ್ನಾಟಕವನ್ನು ಮಗಳಂತೆ ಕಲ್ಪಿಸಿಕೊಂಡಿದ್ದಾರೆ.  ಇದನ್ನು ಅವರು ರಚಿಸಿದ್ದು ತಮ್ಮ ಹದಿಹರೆಯದಲ್ಲಿ. ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ ಎಂದು ನಾಡಗೀತೆ ಪ್ರಾರಂಭವಾಗುತ್ತದೆ. ಇಡೀ ಗೀತೆಯ ಉದ್ದಕ್ಕೂ ಅತ್ತ ಭಾರತಮಾತೆಯ ಹಿರಿಮೆ, ಇತ್ತ ಕರ್ನಾಟಕಮಾತೆಯ ಹಿರಿಮೆ ಇವುಗಳನ್ನು ಒಟ್ಟಿಗೆ ಕೊಂಡಾಡುವ ವಿಶಿಷ್ಟ ಪ್ರಯೋಗವನ್ನು ಕುವೆಂಪು ಮಾಡಿದ್ದಾರೆ. ರಾಷ್ಟ್ರವನ್ನೂ ಮತ್ತು ರಾಜ್ಯವನ್ನೂ ಏಕಕಾಲದಲ್ಲಿ ಸ್ತುತಿಸುವ ನಾಡಗೀತೆಯನ್ನು ಮತ್ತೊಮ್ಮೆ ಕೇಳಿ.


*ಜೈ ಭಾರತ ಜನನಿಯ ತನುಜಾತೆ*
*ಜಯಹೇ ಕರ್ನಾಟಕ ಮಾತೆ!*


ಇಲ್ಲಿ ಕುವೆಂಪು ಭಾರತವನ್ನು ತಾಯಿಯಂತೆ ಮತ್ತು ಕರ್ನಾಟಕವನ್ನು ಮಗಳಂತೆ ಕಲ್ಪಿಸಿಕೊಂಡಿದ್ದಾರೆ. ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ ಎಂದು ನಾಡಗೀತೆ ಪ್ರಾರಂಭವಾಗುತ್ತದೆ. ಇಡೀ ಗೀತೆಯ ಉದ್ದಕ್ಕೂ ಅತ್ತ ಭಾರತಮಾತೆಯ ಹಿರಿಮೆ, ಇತ್ತ ಕರ್ನಾಟಕಮಾತೆಯ ಹಿರಿಮೆ ಇವುಗಳನ್ನು ಒಟ್ಟಿಗೆ ಕೊಂಡಾಡುವ ವಿಶಿಷ್ಟ ಪ್ರಯೋಗವನ್ನು ಕುವೆಂಪು ಮಾಡಿದ್ದಾರೆ. ರಾಷ್ಟ್ರವನ್ನೂ ಮತ್ತು ರಾಜ್ಯವನ್ನೂ ಏಕಕಾಲದಲ್ಲಿ ಸ್ತುತಿಸುವ ನಾಡಗೀತೆಯನ್ನು ಮತ್ತೊಮ್ಮೆ ಕೇಳಿ.


*ಜಯ ಸುಂದರ ನದಿ ವನಗಳ ನಾಡೇ,*
*ಜಯ ಹೇ ರಸಋಷಿಗಳ ಬೀಡೆ!*

*ಜಯ ಭಾರತ ಜನನಿಯ ತನುಜಾತೆ,*
*ಜಯ ಹೇ ಕರ್ನಾಟಕ ಮಾತೆ!*


ಕರ್ನಾಟಕದಲ್ಲಿ ಅದೆಷ್ಟು ಸುಂದರ ನದಿ-ವನಗಳಿವೆ! ಅದೆಷ್ಟು ಜನ ಕಲಾವಿದರಿಗೆ (ರಸಋಷಿಗಳಿಗೆ) ಕರ್ನಾಟಕಮಾತೆ ಜನ್ಮ ನೀಡಿದ್ದಾಳೆ! ಅಂಥ ಕರ್ನಾಟಕಮಾತೆಗೆ ಜಯವಾಗಲಿ!


*ಭೂದೇವಿಯ ಮಕುಟದ ನವಮಣಿಯೆ,*
*ಗಂಧದ ಚಂದದ ಹೊನ್ನಿನ ಗಣಿಯೆ;*
*ರಾಘವ ಮಧುಸೂಧನರವತರಿಸಿದ*
*ಭಾರತ ಜನನಿಯ ತನುಜಾತೆ !*
*ಜಯ ಭಾರತ ಜನನಿಯ ತನುಜಾತೆ,*
*ಜಯ ಹೇ ಕರ್ನಾಟಕ ಮಾತೆ!*


ಭಾರತವು ಭೂದೇವಿಯ ಕಿರೀಟದಲ್ಲಿನ ಒಂದು ಪ್ರಜ್ವಲಿಸುವ ಹೊಸ ಮಣಿಯಂತೆ. ಕರ್ನಾಟಕವೋ ಗಂಧದ ಗಣಿ, ಹೊನ್ನಿನ ಗಣಿ, ಚಂದದ ಗಣಿ!  ಶ್ರೀಗಂಧಕ್ಕೆ ಕರ್ನಾಟಕವು ಎಂದೆಂದೂ ಪ್ರಸಿದ್ಧ. ಒಮ್ಮೆ ಕೋಲಾರದಲ್ಲಿ ಚಿನ್ನದ ಗಣಿಗಳಿದ್ದವು. ಪ್ರಕೃತಿ ಸೌಂದರ್ಯಕ್ಕೆ ಕರ್ನಾಟಕವು ಎಂದೆಂದೂ ಹೆಸರುವಾಸಿಯಾಗಿದೆ.  ಶ್ರೀರಾಮ ಮತ್ತು ಶ್ರೀಕೃಷ್ಣರಂಥವರು ಜನಿಸಿದ ನಾಡು ಭಾರತ. ಅಂಥ ಭಾರತಮಾತೆಯ ಮಗಳಾದ ಕರ್ನಾಟಕ ಮಾತೆಗೆ ಜಯವಾಗಲಿ!


*ಜನನಿಯ ಜೋಗುಳ ವೇದದ ಘೋಷ,*
*ಜನನಿಗೆ ಜೀವವು ನಿನ್ನಾವೇಶ,*
*ಹಸುರಿನ ಗಿರಿಗಳ ಸಾಲೇ,*
*ನಿನ್ನಯ ಕೊರಳಿನ ಮಾಲೆ,*
*ಕಪಿಲ ಪತಂಜಲ ಗೌತಮ ಜಿನನುತ,*

*ಭಾರತ ಜನನಿಯ ತನುಜಾತೆ !*


ಭಾರತಮಾತೆಯು ತನ್ನ ಮಗಳಿಗಾಗಿ ಹಾಡಿದ ಜೋಗುಳ ಬೇರಾವುದೂ ಅಲ್ಲ, ವೇಧಘೋಷ! ಈ ಜೋಗುಳ ಕೇಳುತ್ತಾ ಮಗು ತನ್ನ ಶಿಶುಶಹಜ ಆವೇಶದಿಂದ ಕೆನೆದಾಗ ತಾಯಿಗೆ ಜೀವಸ್ಪರ್ಶವಾಗುತ್ತದೆ. (ಮಗಳಾದ) ಕರ್ನಾಟಕ ಮಾತೆಯ ಕೊರಳಿನಲ್ಲಿ ಹೊಳೆಯುತ್ತಿರುವ ಹಾರ ಬೇರೇನಲ್ಲ, ಹಸುರು ಹೊದ್ದ ಬೆಟ್ಟಗಳ ಸಾಲು!  ಕಪಿಲ-ಪತಂಜಲಿ-ಗೌತಮ ಬುದ್ಧ-ಜಿನ ಇವರೆಲ್ಲರಿಂದ ಪ್ರಶಂಸೆಗೆ ಪಾತ್ರಳಾದವಳು ಭಾರತಮಾತೆ. ಅಂಥ ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ!


*ಶಂಕರ ರಾಮಾನುಜ ವಿದ್ಯಾರಣ್ಯ,*
*ಬಸವೇಶ್ವರ ಮಧ್ವರ ದಿವ್ಯಾರಣ್ಯ*
*ರನ್ನ ಷಡಕ್ಷರಿ ಪೊನ್ನ,*
*ಪಂಪ ಲಕುಮಿಪತಿ ಜನ್ನ*
*ಕುಮಾರವ್ಯಾಸರ ಮಂಗಳ ಧಾಮ,*
*ಕವಿ ಕೋಗಿಲೆಗಳ ಪುಣ್ಯಾರಾಮ*
*ನಾನಕ ರಾಮಾ ನಂದ ಕಬೀರರ*
*ಜಯ ಹೇ ಕರ್ನಾಟಕ ಮಾತೆ!*


ಶಂಕರಾಚಾರ್ಯ, ರಾಮಾನುಜಾಚಾರ್ಯ, ವಿದ್ಯಾರಣ್ಯ ಇಂಥ ಪುಣ್ಯಪುರುಷರನ್ನು ಪಡೆದದ್ದು ಭಾರತಮಾತೆಯ ಭಾಗ್ಯ. ಕರ್ನಾಟಕಮಾತೆಯೂ ಬಸವೇಶ್ವರ, ಮಧ್ಯಾಚಾರ್ಯರಂಥ ಪುಣ್ಯಪುರುಷರಿಗೆ ಜನ್ಮ ನೀಡಿದ್ದಾಳೆ. ಅದೆಷ್ಟು ಮಂದಿ ಕವಿಗಳು ಕರ್ನಾಟಕದಲ್ಲಿ ಹುಟ್ಟಿದ್ದಾರೆ - ರನ್ನ, ಷಡಕ್ಷರಿ, ಪೊನ್ನ, ಪಂಪ, ಲಕ್ಷ್ಮೀಶ, ಜನ್ನ, ಕುಮಾರವ್ಯಾಸ! ಈ ಕವಿಗಳು ಆಡಿದ ಮಂಗಳ ಧಾಮ (ಮನೆ) ಕರ್ನಾಟಕವನ್ನು ಕುವೆಂಪು ಕವಿ-ಕೋಗಿಲೆಗಳ ಗೂಡಿಗೆ ಹೋಲಿಸುತ್ತಾರೆ. ಅತ್ತ ಭಾರತಮಾತೆಯ ಹೊಟ್ಟೆಯಲ್ಲಿ ಗುರು ನಾನಕ್, ರಾಮಾನಂದ, ಕಬೀರರಂತಹ ಸಂತಕವಿಗಳು ಜನಿಸಿದ್ದಾರೆ. ಇಂಥ ಭಾರತಮಾತೆಯ ಪುತ್ರಿಯಾದ ಕರ್ನಾಟಕಮಾತೆಗೆ ಜಯವಾಗಲಿ!


*ತೈಲಪ ಹೊಯ್ಸಳರಾಳಿದ ನಾಡೇ,*
*ಡಂಕಣ ಜಕಣರ ನೆಚ್ಚಿನ ಬೀಡೆ*
*ಕೃಷ್ಣ ಶರಾವತಿ ತುಂಗಾ,*
*ಕಾವೇರಿಯ ವರ ರಂಗಾ*
*ಚೈತನ್ಯ ಪರಮಹಂಸ ವಿವೇಕರ,*

*ಭಾರತ ಜನನಿಯ ತನುಜಾತೆ !*



ಕರ್ನಾಟಕದ ಇತಿಹಾಸದಲ್ಲಿ ತೈಲಪರು, ಹೊಯ್ಸಳರ ಮೊದಲಾಗಿ ಅದೆಷ್ಟು ರಾಜವಂಶಗಳು ಆಳಿವೆ!   ಡಂಕಣಾಚಾರ್ಯ-ಜಕಣಾಚಾರ್ಯರಂತಹ ಅಮರಶಿಲ್ಪಿಗಳಿಗೆ ಕರ್ನಾಟಕ ನೆಲೆಯಾಗಿತ್ತು. ಕೃಷ್ಣಾ, ಶರಾವತಿ, ತುಂಗಾ, ಕಾವೇರಿಯಂಥ ಪುಣ್ಯನದಿಗಳಿಗೆ ಕರ್ನಾಟಕ ಬೀಡಾಗಿದೆ. ಶ್ರೀರಂಗಪಟ್ಟಣದಲ್ಲಿ ಕಾವೇರಿಯ ಮಡಿಲಲ್ಲಿ ಶ್ರೀರಂಗನಾಥನೂ ಇದಾನೆ.  ಭಾರತಮಾತೆಯ ಬಸಿರಿನಲ್ಲಿ ಚೈತನ್ಯ, ಪರಮಹಂಸ, ವಿವೇಕಾನಂಧರಂಥ ದಾರ್ಶನಿಕರು ಜನಿಸಿದರು. ಇಂಥ ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ!


*ಸರ್ವ ಜನಾಂಗದ ಶಾಂತಿಯ ತೋಟ,*
*ರಸಿಕರ ಕಂಗಳ ಸೆಳೆಯುವ ನೋಟ*
*ಹಿಂದೂ ಕ್ರೈಸ್ತ ಮುಸಲ್ಮಾನ,*
*ಪಾರಸಿಕ ಜೈನರುದ್ಯಾನ*
*ಜನಕನ ಹೋಲುವ ದೊರೆಗಳ ಧಾಮ,*
*ಗಾಯಕ ವೈಣಿಕರಾರಾಮ*


ಭಾರತವು  ಒಂದು ಶಾಂತಿವನ - ಅಲ್ಲಿ ಅನೇಕ ಧರ್ಮಗಳ ಹೂಗಳು ಅರಳಿ ರಸಿಕರ ಕಣ್ಮನಗಳನ್ನು ಸೆಳೆಯುತ್ತಿವೆ - ಹಿಂದೂ ಧರ್ಮ, ಕ್ರೈಸ್ತ ಧರ್ಮ, ಮುಸಲ್ಮಾನ ಧರ್ಮ, ಪಾರಸೀ ಧರ್ಮ, ಜೈನಧರ್ಮ - ಈ ಎಲ್ಲಾ ಧರ್ಮಗಳ ಉದ್ಯಾನವನ ಭಾರತ! ಭಾರತದಲ್ಲಿ ಜನಕರಾಜನಂಥ ಜನಾನುರಾಗಿ ದೊರೆಗಳಿದ್ದಾರೆ.  ಭಾರತಮಾತೆಯ ಮಕ್ಕಳು ರಸಿಕರು -  ಗಾಯಕರಿಗೆ, ವೈಣಿಕರಿಗೆ, ಕಲೆಯ ಆರಾಧಕರಿಗೆ ಭಾರತ ಒಂದು ಸುಖದ ಬೀಡಾಗಿದೆ.


*ಕನ್ನಡ ನುಡಿ ಕುಣಿದಾಡುವ ಗೇಹ,*
*ಕನ್ನಡ ತಾಯಿಯ ಮಕ್ಕಳ ದೇಹ*
*ಭಾರತ ಜನನಿಯ ತನುಜಾತೆ,*
*ಜಯ ಹೇ ಕರ್ನಾಟಕ ಮಾತೆ*
*ಜಯ ಸುಂದರ ನದಿ ವನಗಳ ನಾಡೇ,*
*ಜಯ ಹೇ ರಸಋಷಿಗಳ ಬೀಡೆ!*


ಇಂಥ ಭಾರತಮಾತೆಯ ಮಗಳಾದ ಕರ್ನಾಟಕಮಾತೆ ಕನ್ನಡನುಡಿ ಕುಣಿದಾಡುವ ಗೃಹವಾಗಿದ್ದಾಳೆ.  ಕನ್ನಡ ಮಾತಾಡುವ ತನ್ನ ಮಕ್ಕಳಿಗೆ ತನ್ನ ಸರ್ವಸ್ವವನ್ನೂ ನೀಡಿದ್ದಾಳೆ. ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ!  ಭಾರತವು ತಾಯಿಯಾಗಿ ಕರ್ನಾಟಕವು ಮಗಳಾದಾಗ ಅಲ್ಲಿ ವೈಮನಸ್ಯಕ್ಕೆ ಕಾರಣವಿಲ್ಲ. ಭಾರತವು ಎಷ್ಟೇ ಹಿರಿಮೆಯುಳ್ಳ ದೇಶವಾಗಲಿ, ಅಲ್ಲಿ ಕರ್ನಾಟಕಕ್ಕೆ ತನ್ನದೇ ಆದ ಸ್ಥಾನವಿದೆ, ಎಲ್ಲಾ ವಿಷಯಗಳಲ್ಲೂ ಕರ್ನಾಟಕವು ಭಾರತಮಾತೆಯ ಪ್ರತಿಬಿಂಬದಂತೆ ಅಷ್ಟೇ ಹಿರಿಮೆಯಿಂದ ಕಂಗೊಳಿಸುತ್ತಿದ್ದಾಳೆ ಎಂಬುದು ಕವಿತೆಯ ಧ್ವನಿ.




🔆🔆🔆🔆🔆🔆🔆🔆🔆🔆🔆

ಕರ್ನಾಟಕದ ಬಗ್ಗೆ ಸಂಕ್ಷಿಪ್ತ ಮಾಹಿತಿ

🌿🌷🌿🌷🌿🌷🌿🌷🌿🌷🌿


*ಕರ್ನಾಟಕದ  ಬಗ್ಗೆ ಸಂಕ್ಷಿಪ್ತ  ಮಾಹಿತಿ* :

*ಕರ್ನಾಟಕದ ರಾಜಧಾನಿ? ?
*ಬೆಂಗಳೂರು*

#ಬೆಂಗಳೂರಿನ ಹಳೆಯ ಹೆಸರು?
*ಬೆಂದಕಾಳೂರು*

ಕರ್ನಾಟಕದ ಒಟ್ಟು ವಿಸ್ತೀರ್ಣ?
*1,91,791* ಚ.ಕಿ.ಮೀ

#ಕರ್ನಾಟಕದ ಒಟ್ಟು ಜನಸಂಖ್ಯೆ?
*6,11,30,704*
(2011 ಜನಗಣತಿ )

#ಕರ್ನಾಟಕದ ಒಟ್ಟು ಜಿಲ್ಲೆಗಳು?
*30*

#ಕರ್ನಾಟಕದ ಒಟ್ಟು ವಿಧಾನಸಭಾ ಸ್ಥಾನಗಳು ?
*224* + 1ಆಂಗ್ಲೊ ಇಂಡಿಯನ್

#ಕರ್ನಾಟಕದ ಒಟ್ಟು ವಿಧಾನಪರಿಷತ್ತು ಸ್ಥಾನಗಳು- *75*

#ಕರ್ನಾಟಕದ ಲೋಕಸಭಾಸ್ಥಾನಗಳು -
*28*

#ರಾಜ್ಯಸಭಾ ಸ್ಥಾನಗಳು
12🌹🌹🌹

ಹೆಚ್ಚು ವಿಸ್ತೀರ್ಣ ಹೊಂದಿದ ಜಿಲ್ಲೆ?
*ಬೆಳಗಾವಿ*

(ಹೆಚ್ಚು ವಿಸ್ತೀರ್ಣ ಹೊಂದಿದ ಭಾರತದ ರಾಜ್ಯ ಮಹಾರಾಷ್ಟ್ರ)

#ಕರ್ನಾಟಕದ ಕಡಿಮೆ ವಿಸ್ತೀರ್ಣ ಜಿಲ್ಲೆ?
*ಬೆಂಗಳೂರು ನಗರ*

#ಕರ್ನಾಟಕದ ಜನಸಾಂದ್ರತೆ
*319*
(ಭಾರತ 382)

*ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದದ್ದು ಯಾವಾಗ? ?
*1956 November 1*

#ಏಕೀಕೃತ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ?
*ಎಸ್.ನಿಜಲಿಂಗಪ್ಪ.

#ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದು ಯಾವಾಗ ಮತ್ತು ಆಗ ಇದ್ದ ಮುಖ್ಯಮಂತ್ರಿ?
*1973 November 1 ಡಿ.ದೇವರಾಜು ಅರಸು*

₹# ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ : *ಸಿದ್ದರಾಮಯ್ಯ*
@📚📚📚☘🌹

#ಕರ್ನಾಟಕದ ಉತ್ತರದ ತುದಿ?
*ಬೀದರ್*

#ಕರ್ನಾಟಕದ ದಕ್ಷಿಣ ತುದಿ?
*ಚಾಮರಾಜನಗರ*

#ಪಶ್ಚಿಮದ ತುದಿ? ?
*ಕಾರವಾರ (ಉ.ಕ*)

🌹🌹
# ಕರ್ನಾಟಕದ ಪೂರ್ವದ ತುದಿ?
*ಕೋಲಾರ ಮುಳಬಾಗಿಲು*

#ಕರ್ನಾಟಕವು
ಉತ್ತರಕ್ಕೆ - ಮಹಾರಾಷ್ಟ್ರ
ಪೂರ್ವಕ್ಕೆ- ಆಂಧ್ರಪ್ರದೇಶ
ನೈರುತ್ಯಕ್ಜೆ- ಕೇರಳ
ವಾಯುಕ್ಜ್ - ಗೋವಾ
ದಕ್ಷಿಣ&ಆಗ್ನೇಯಕ್ಕೆ - ತ.ನಾಡಿನೊಂದಿಗೆ ಗಡಿ ರೇಖೆ ಹಂಚಿಕೊಂಡಿದೆ.

#ಅತಿ ಹೆಚ್ಚು ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆ?
*ಬೆಂಗಳೂರ ನಗರ*
(ರಾಜ್ಯ ಬಿಹಾರ)

#ಅತಿ ಕಡಿಮೆ ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆಯ?
*ಕೊಡಗು*
(ಭಾರತ ರಾಜ್ಯ- ಅರುಣಾಚಲಪ್ರದೇಶ).

#ರಾಜ್ಯದ ಅತಿ ಹೆಚ್ಚು ಸಾಕ್ಷರತೆ ಜಿಲ್ಲೆ?
*ದ.ಕನ್ನಡ* ✏✏📚📚

#ಕರ್ನಾಟಕದ ಮೊದಲ ಪತ್ರಿಕೆ?
*ಮಂಗಳೂರು ಸಮಾಚಾರ*

#ಕರ್ನಾಟಕದಲ್ಲಿ ಕರಾವಳಿಯನ್ನು - ಕೆನರಾ ಎಂದು ಕರೆಯುತ್ತಾರೆ

#ಕರ್ನಾಟಕದ ಅತಿ ದೊಡ್ಡ ಬಂದರು?
*ನವಮಂಗಳೂರ ಬಂದರು*
ನವಮಂಗಳೂರ ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನುವರು
✏✏✏✏
#ಕರ್ನಾಟಕದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.

#ಚಿಕ್ಕ ಮಗಳೂರನ್ನು ಕಾಫಿಯನಾಡು ಎಂದು ಕರೆಯುತ್ತಾರೆ.

💚
#ಕೊಡಗನ್ನು ಕಿತ್ತಳೆ ನಾಡು ಎಂದು ಕರೆಯುತ್ತಾರೆ.

#ತುಮಕೂರು ಜಿಲ್ಲೆ ಮಧುಗಿರಿ ಬೆಟ್ಟ ಏಷ್ಯಾ ಖಂಡದಲ್ಲೇ ಅತಿ ಎತ್ತರವಾದ ಏಕಶಿಲಾ ಬೆಟ್ಟವಾಗಿದೆ.

# ಕರ್ನಾಟಕದ ಗೋಕಾಕ  ಜಲಪಾತವನ್ನು ಭಾರತದ ನಯಾಗರ ಎಂದು ಕರೆಯುತ್ತಾರೆ.

# ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ?
*ಹುಲಿಕಲ್ಲು*
ಮೊದಲು ಆಗುಂಬೆ ಇತ್ತು
(ದಕ್ಷಿಣದ ಚಿರಾಪುಂಜಿ ಎನ್ನುತ್ತಿದ್ದರು)
🌺🌷🌹☘

#ಅತಿ ಕಡಿಮೆ ಮಳೆ ಪಡೆಯುವ ಕರ್ನಾಟಕದ ಪ್ರದೇಶ?
*ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ*

#ಕರ್ನಾಟಕದ ಕಾಶ್ಮೀರ ಎಂದು ಕೊಡಗು ಜಿಲ್ಲೆ ಕರೆಯುತ್ತಾರೆ.

# ಕರ್ನಾಟಕದ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ?
*ಉತ್ತರ ಕನ್ನಡ*

* ಕಡಿಮೆ ಅರಣ್ಯ ಪ್ರದೇಶ ಹೊಂದಿದ ಕರ್ನಾಟಕದ ಜಿಲ್ಲೆ - *ವಿಜಯಪುರ*

# ಬೆಂಗಳೂರು ಸಮೀಪ ರಾಮೋಹಳ್ಳಿಯಲ್ಲಿ ಅತಿದೊಡ್ಡ ಆಲದ ಮರವಿದೆ.

#ಅತಿದೊಡ್ಡ ಬೇವಿನ ಮರ - ಶಿಡ್ಲಘಟ್ಟದ ಟಿ.ವೆಂಕಟಾಪುರದ ಬಳಿ ಇದೆ.

#ಸವಣೂರನಲ್ಲಿ ಅತಿ ದೊಡ್ಡ ಹುಣಸೆ ಮರವಿದೆ.

#ಕೃಷ್ಣನದಿಯು ಕರ್ನಾಟಕದಲ್ಲಿ ಹರಿಯುವ ಅತಿ ಉದ್ದವಾದ ನದಿಯಾಗಿದೆ.

#ಕರ್ನಾಟಕದ ಮೊಟ್ಟ-ಮೊದಲ ಜಲಾಶಯ - ವಾಣಿವಿಲಾಸ ಸಾಗರ.

#ಕಾವೇರಿ ನದಿಯ ಉಗಮಸ್ಥಾನ - ತಲಕಾವೇರಿ/ ತಲಕಾಡು.

#ಭಾರತದ ಎತ್ತರವಾದ ಜಲಪಾತ - ಕರ್ನಾಟಕದ ಜೋಗ ಜಲಪಾತ

#ಕರ್ನಾಟಕದಲ್ಲಿ ಅತಿ ಹೆಚ್ಚು ನೀರಾವರಿ ಹೊಂದಿರುವ ಜಿಲ್ಲೆ?
ಬೆಳಗಾವಿ.

#ಕರ್ನಾಟಕದಲ್ಲಿ ಕಡಿಮೆ ನೀರಾವರಿ ಹೊಂದಿರುವ ಜಿಲ್ಲೆ?
ಕೊಡಗು.

ಕರ್ನಾಟಕದಲ್ಲಿ

🏟🏟
ಅತಿ ಹೆಚ್ಚು ಕಾಲುವೆ ನೀರಾವರಿ ಹೊಂದಿರುವ ಜಿಲ್ಲೆ?
ಶಿವಮೊಗ್ಗ.

* ಅತಿ ಹೆಚ್ಚು ಬಾವಿ ನೀರಾವರಿ ಹೊಂದಿರುವ ಜಿಲ್ಲೆ?
ಬೆಳಗಾವಿ.

#ಕರ್ನಾಟಕದಲ್ಲಿ ಅತಿ ಹೆಚ್ಚು ಸಾಗುವಳಿ ಭೂಮಿಯನ್ನು ಹೊಂದಿದ ಜಿಲ್ಲೆ ಕಲಬುರ್ಗಿ, ಕಲಬುರ್ಗಿನ್ನು - ತೊಗರಿಯ ಕಣಜ ಎಂದು ಕರೆಯುವರು.

*********

* ಸಕ್ಕರೆ ಜಿಲ್ಲೆ ಎಂದು ಬೆಳಗಾವಿಯನ್ನು ಕರೆಯುತ್ತಾರೆ.

* ಸಕ್ಕರೆ ನಗರವೆಂದು ಮಂಡ್ಯವನ್ನು ಕರೆಯುತ್ತಾರೆ.

#ಕರ್ನಾಟಕದ ಮ್ಯಾಂಚೆಸ್ಟರ್ ಎಂದು ದಾವಣಗೆರೆಗೆ ಕರೆಯುತ್ತಾರೆ.

* ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬಿಣದ ನಿಕ್ಷೇಪ ಹೊಂದಿರುವ ಜಿಲ್ಲೆ?
ಬಳ್ಳಾರಿ ಮತ್ತು ಚಿಕ್ಕಮಗಳೂರು.

* ಅತ್ಯಂತ ಆಳವಾದ ಚಿನ್ನದ ಗಣಿ - ಕರ್ನಾಟಕದ ಚಾಂಪಿಯನ್ ರಿಫೆ.

* ಪ್ರಸ್ತುತ ಭಾರತದ ಅತಿದೊಡ್ಡ ಚಿನ್ನದ ಗಣಿ -🏟 ಹಟ್ಟಿ (ಲಿಂಗಸೂಗೂರು ತಾಲ್ಲೂಕು)
( ರಾಯಚೂರು ಜಿಲ್ಲೆ).

* ರಾಷ್ಟ್ರೀಯ ಹೆದ್ದಾರಿ ಹೊಂದದ ಕರ್ನಾಟಕದ ಜಿಲ್ಲೆಗಳು
ರಾಯಚೂರು ಮತ್ತು ಕೊಡಗು.

@₹#ಕರ್ನಾಟಕದಲ್ಲಿ ಹಾಯ್ದು ಹೋಗುವ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ?
🚎🚌
*NH-13*
ಇದು ಮಂಗಳೂರು ಇಂದ ಮೂಡಬಿದರಿ, ಕೊಪ್ಪಳ ,ಶಿವಮೊಗ್ಗ,  ಚಿತ್ರದುರ್ಗ, ಹೊಸಪೇಟೆ, ಇಳಕಲ್,ಬಿಜಾಪುರ ಮಾರ್ಗವಾಗಿ ಸೋಲ್ಲಾಪುರ ಕ್ಕೆ ಸೇರುತ್ತದೆ.

🚊🚉
* ಕರ್ನಾಟಕದಲ್ಲಿ ಮೊದಲು ರೈಲು ಆರಂಭ :
1864

* ಕೊಡಗು ಕರ್ನಾಟಕದ ರೈಲು ಮಾರ್ಗ ಇಲ್ಲದ ಜಿಲ್ಲೆ 🚊🚉

amasiddatakali✏
# ನಮ್ಮ ಮೆಟ್ರೊ ಕಾರ್ಯರಂಭ ಮಾಡಿದ್ದು?
*2011 Oct 20* ಬೈಯಪ್ಪನಹಳ್ಳಿ - ಎಮ್.ಜಿ.ರೊಡ್.

#ಕಾರವಾರ ಬಂದರನ್ನು ಅತಿ ಸುಂದರ ಬಂದರು ಎಂದು ಕರೆಯುತ್ತಾರೆ.

#ಅರಮನೆಗಳ ನಗರ ಎಂದು ಮೈಸೂರುನ್ನು ಕರೆಯುತ್ತಾರೆ.

* ಕರ್ನಾಟಕ ರಾಷ್ಟ್ರೀಯ ಉದ್ಯಾನವನಗಳು :-

1) ರಾಜೀವಗಾಂಧಿ ರಾ.ಉ- ಕೊಡಗು.
2) ಬಂಡಿಪುರ ರಾ.ಉ--- ಚಾಮರಾಜನಗರ.
3) ಬನ್ನೇರುಘಟ್ಟ ರಾ.ಉ- ಬೆಂಗಳೂರು.
4) ಕುದುರೆಮುಖ ರಾ.ಉ-- ಚಿಕ್ಕಮಗಳೂರು.
5) ಅಂಶಿ/ಅಣಸಿ ರಾ.ಉ-- ಉತ್ತರ ಕನ್ನಡ.

✏ ಭಾರತದ ಸಿಲಿಕಾನ್ ಸಿಟಿ- ಬೆಂಗಳೂರು.

Age calculater

http://www.mathcats.com/explore/agecalculator.html

ಜ್ಯೋತಿ ಸಂಜೀವಿನಿ ಯೋಜನೆ

*ಜ್ಯೋತಿ ಸಂಜೀವಿನಿ ಯೋಜನೆ*-
Cashless Medical Treatment"*

HRMS ನಲ್ಲಿ ,
(೧) ಸರ್ಕಾರಿ ನೌಕರರ ಆಧಾರ್ ನಂ. & ಆತನ ಕುಟುಂಬ ಸದಸ್ಯರ ಆಧಾರ್ ನಂ. Register ಮಾಡಿಸಿ.
-

(೨) ಜ್ಯೋತಿ ಸಂಜೀವಿನಿ ಯೋಜನೆಯು ಕೇವಲ 7 ಮಾರಣಾಂತಿಕ ಖಾಯಿಲೆಗಳ ಚಿಕಿತ್ಸೆಗೆ ಮಾತ್ರ ಸಂಬಂಧಿಸಿದೆ
1. ಹೃದ್ರೋಗ
2. ಕ್ಯಾನ್ಸರ್
3. ನರ ರೋಗ
4. ಯುರಿನರಿ (ಕಿಡ್ನಿ)
5. ಸುಟ್ಟ ಗಾಯ
6. ಅಪಘಾತ
7. ಶಿಶುಗಳ ಶಸ್ತ್ರಚಿಕಿತ್ಸೆ.

(೩) ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡುವ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು.

*ಆಸ್ಪತ್ರೆಗೆ ದಾಖಲಾದ ನಂತರ ಏನು ಮಾಡಬೇಕು..?*
ಆ ಆಸ್ಪತ್ರೆಯ ADMIN ರವರನ್ನು ಭೇಟಿ ಮಾಡಿ,

(೧) ಆ ಆಸ್ಪತ್ರೆಯು 'ಜ್ಯೋತಿ ಸಂಜೀವಿನಿ ಯೋಜನೆ' ಗೆ ಒಳಪಡುತ್ತದೆಯೇ ಖಾತ್ರಿ ಪಡಿಸಿಕೊಳ್ಳಿ
(ಜ್ಯೋತಿ ಸಂಜೀವಿನಿ ಯೋಜನೆಯ ಆಸ್ಪತ್ರೆಗಳ ಪಟ್ಟಿ ಆಗಾಗ್ಗೆ ಬದಲಾಗುತ್ತಿರುತ್ತದೆ)

(೨) ನಿಮ್ಮ ಖಾಯಿಲೆಯು ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ ಬರುತ್ತದೆಯೇ, ಇಲ್ಲವೇ ಎಂದು ADMIN/ ವೈದ್ಯರಿಂದ ಖಚಿತಪಡಿಸಿಕೊಳ್ಳಿ

(೩) ADMIN ರಲ್ಲಿ ನೀವು ಸರ್ಕಾರಿ ನೌಕರರೆಂದು ಪರಿಚಯಿಸಿಕೊಂಡು, ನಿಮ್ಮ ಮೊದಲ KGID ನಂ. ನೀಡಿ

(೪) ಆ ಆಸ್ಪತ್ರೆಯ E-MAIL ID ಪಡೆದು, ನಿಮ್ಮ HRMS SALARY CERTIFICATE & HRMS DETAILS ಆ ಆಸ್ಪತ್ರೆಯ E-MAIL ID ಗೆ ಇ-ಮೇಲ್ ಮಾಡಲು ನಿಮ್ಮ CLERK/ CASE WORKER ರಲ್ಲಿ ವಿನಂತಿಸಿಕೊಳ್ಳಿ.
(ಅಥವಾ ನಿಮ್ಮ HRMS SALARY SLIP & HRMS DETAILS print out ನಿಮ್ಮ ಬಳಿ ಇದ್ದಲ್ಲಿ ಆಸ್ಪತ್ರೆಗೆ ನೀಡಿ)

(೫) ರೋಗಿಯ VOTER ID ಅಥವಾ AADHAAR CARD ಅಥವಾ DL Zerox Copy ಆಸ್ಪತ್ರೆಗೆ ನೀಡಿ.

"ಪಾನ್ ಕಾರ್ಡ್ ಎಂದರೇನು? ಹೇಗೆ ಪಡೆಯಬೇಕು? ಏತಕ್ಕೆ ಬೇಕು...??"

**ಪಾನ್ ಕಾರ್ಡ್**

"ಪಾನ್ ಕಾರ್ಡ್ ಎಂದರೇನು? ಹೇಗೆ ಪಡೆಯಬೇಕು? ಏತಕ್ಕೆ ಬೇಕು...??"

ಭಾರತದ ನಾಗರಿಕರಾಗಿರಲಿ ಅಥವಾ ಎನ್ ಆರ್ ಐಗೇ ಆಗಿರಲಿ ಆದಾಯ ತೆರಿಗೆ ಪಾವತಿ ಮಾಡಲು ಅಥವಾ ಹಣಕಾಸು ವ್ಯವಹಾರವನ್ನು ಸಮಗ್ರವಾಗಿ ನಿರ್ವಹಿಸಲು ಪಾನ್ ಕಾರ್ಡ್ ಅತ್ಯಗತ್ಯ.
ಇಂದು ಅನೇಕ ಸಂದರ್ಭಗಳಲ್ಲಿ ಪಾನ್ ಕಾರ್ಡ್ ಅಗತ್ಯ ಬೀಳುತ್ತದೆ. ಕೇವಲ ಆದಾಯ ತೆರಿಗೆ ಪಾವತಿ ಒಂದೇ ಅಲ್ಲದೇ ಅನೇಕ ಉಪಯೋಗಗಳನ್ನು ಇದು ಹೊಂದಿದೆ. ಪಾನ್ ಕಾರ್ಡ್ ನ ಮೂಲಭೂತ ಅಂಶಗಳನ್ನು ಅರಿತುಕೊಳ್ಳಬೇಕಾದದ್ದು ಅಗತ್ಯ.

* ಪಾನ್ ಕಾರ್ಡ್ ಎಂದರೇನು?

ಭಾರತದ ಆದಾಯ ತೆರಿಗೆ ಇಲಾಖೆ ಕೊಡಮಾಡುವ 10 ಅಂಕೆಗಳ ಕಾರ್ಡ್ ಇದಾಗಿದ್ದು ಶಾಶ್ವತ ಖಾತೆ ನಂಬರ್ ಎಂದು ಕರೆಸಿಕೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆ ಅಂಕೆಗಳನ್ನು ನೀಡಲಾಗಿರುತ್ತದೆ.
ಇದೊಂದು ಶಾಶ್ವತ ನಂಬರ್ ಆಗಿದ್ದು ನಿಮ್ಮ ವಿಳಾಸ ಬದಲಾವಣೆ ಯಾವ ಪರಿಣಾಮ ಉಂಟುಮಾಡುವುದಿಲ್ಲ. ಅಲ್ಲದೇ ಇದನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಯುನಿವರ್ಸ್ ಲ್ ಗುರುತಿನ ಚೀಟಿ ತರಹದಲ್ಲಿ ಕೆಲಸ ಮಾಡುತ್ತದೆ. ಆದಾಯ ತೆರಿಗೆ, ಹಣಕಾಸು ವ್ಯವಹಾರಗಳು ಈ ಖಾತೆ ಆಧಾರದಲ್ಲಿಯೇ ನಡೆಯುತ್ತದೆ. ಸಾಲ, ಬಂಡವಾಳ ಹೂಡಿಕೆ, ಆಸ್ತಿ ಖರೀದಿ ಮತ್ತು ಮಾರಾಟ ಎಲ್ಲದಕ್ಕೂ ಪಾನ್ ಕಾರ್ಡ್ ಮುಖ್ಯ ಆಧಾರವಾಗಿರುತ್ತದೆ.

* ಸುಳ್ಳು ನಂಬಿಕೆಗಳು :

ಪಾನ್ ಕಾರ್ಡ್ ನ್ನು ಕೇವಲ ತೆರಿಗೆ ತುಂಬಲು ಬಳಸಲಾಗುತ್ತದೆ ಎಂದು ಹಲವರು ನಂಬಿಕೊಂಡಿದ್ದಾರೆ. ಇದನ್ನು ಹೊರತಾಗಿಯೂ ಪಾನ್ ಕಾರ್ಡ್ ನ್ನು ಹಲವು ಕಡೆ ಬಳಕೆ ಮಾಡಬಹುದು. ಬ್ಯಾಂಕ್ ಖಾತೆ ತೆರೆಯಲು, ಆಸ್ತಿ ಮತ್ತು ವಾಹನ ಮಾರಾಟ ಮತ್ತು ಖರೀದಿ ವೇಳೆ, ಷೇರು ಮತ್ತು ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವ ವೇಳೆ ಗುರುತಿನ ಪತ್ರವಾಗಿ ಬಳಕೆ ಮಾಡಬಹುದು.

* ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಯಾರೂ ಬೇಕಾದರೂ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಇಲ್ಲಿ ವಯಸ್ಸು ಮತ್ತು ರಾಷ್ಟ್ರೀಯತೆಯ ಪ್ರಶ್ನೆ ಎದುರಾಗುವುದಿಲ್ಲ. ಮೈನರ್ ಅಥವಾ ಮಗುವಿನ ಹೆಸರಲ್ಲಿ ಪಾನ್ ಕಾರ್ಡ್ ಮಾಡಿಸುವುದಾದರೆ ಪಾಲಕರ ರುಜು ಕಡ್ಡಾಯ.
ಆದಾಯ ತೆರಿಗೆ ಇಲಾಖೆ ತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಕೆಳಗಿನ ತಾಣಗಳು ಸಹ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ನೆರವಾಗುತ್ತವೆ.

o UTI PAN Card Application
o NSDL Application for PAN

ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾದರೆ ಕನಿಷ್ಠ ಎರಡು ಗುರುತಿನ ಚೀಟಿ ಮತ್ತು ವಿಳಾಸ ದೃಢಿಕರಣ ವನ್ನು ನೀಡಬೇಕಾಗುತ್ತದೆ.

* ಯಾವ ಗುರುತಿನ ದಾಖಲೆ ನೀಡಬಹುದು?

- ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ
- ನೋಂದಾಯಿತ ಶಿಕ್ಷಣ ಸಂಸ್ಥೆಯಿಂದ ಪದವಿ ಪ್ರಮಾಣ ಪತ್ರ
- ಕ್ರೆಡಿಟ್ ಕಾರ್ಡ್
- ಬ್ಯಾಂಕ್ ಸ್ಟೇಟ್ ಮೆಂಟ್
- ರೇಶನ್ ಕಾರ್ಡ್
- ಚಾಲನಾ ಪರವಾನಗಿ
- ಮತದಾನ ಗುರುತಿನ ಚೀಟಿ
- ಪಾಸ್ ಪೋರ್ಟ್

* ಪಾನ್ ಕಾರ್ಡ್ ರಿಪ್ರಿಂಟ್ :

ನಿಮಗೆ ಪಾನ್ ಕಾರ್ಡ್ ಸಂಖ್ಯೆ ನೀಡಲಾಗಿದ್ದರೆ ಮಾತ್ರ ಈ ಸೌಲಭ್ಯ ಬಳಸಿಕೊಳ್ಳಲು ಸಾಧ್ಯವಿದೆ. ಎನ್ ಎಸ್ ಡಿಎಲ್ ವೆಬ್ ಸೈಟ್ ಮೂಲಕ ಇದನ್ನು ಪರಿಶೀಲಿಸಬಹುದು.

* ಪಾನ್ ಕಾರ್ಡ್ ನ ಗುಣಲಕ್ಷಣಗಳೇನು?

ಪೊನೆಟಿಕ್ಸ್ ಸೌಂಡ್ ಆಧಾರದಲ್ಲಿ ಹೊಸ ಪಾನ್ ಕಾರ್ಡ್ ಗಳಮನ್ನು ನೀಡಲಾಗುತ್ತಿದೆ ಮತ್ತು ಅನೇಕ ಅಂಶಗಳ ದಾಖಲೆ ಇರುತ್ತದೆ.
ಪೂರ್ಣ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ತಂದೆಯ ಹೆಸರನ್ನು ಒಳಗೊಂಡಿರುತ್ತದೆ. ಕಾರ್ಡ್ ನ ಬಲಬದಿಯಲ್ಲಿ ಪಾನ್ ಕಾರ್ಡ್ ನೀಡಿರುವ ದಿನಾಂಕವನ್ನು ತಿಳಿಸಲಾಗಿರುತ್ತದೆ.

10 ಇಂಗ್ಲಿಷ್ ಅಕ್ಷರಗಳು ಏನನ್ನು ಸೂಚಿಸುತ್ತವೆ?

1. ಮೊದಲ ಇಂಗ್ಲಿಷ್ 5 ಅಕ್ಷರಗಳನ್ನು ಕೋರ್ ಗುಂಪು ಎಂದು ಕರೆಯಬಹುದು.
2. ಕಾರ್ಡ್ ನ ಮೊದಲ ಮೂರು ಅಕ್ಷರಗಳು A ದಿಂದ Z ವರೆಗಿನ ಅಕ್ಷರಗಳಲ್ಲಿ ಯಾವುದು ಇರಬಹುದು.
3. ಕಾರ್ಡ್ ನ ನಾಲ್ಕನೇ ಅಕ್ಷರ ವಿವಿಧ ಸಂಗತಿಯನ್ನು ಸೂಚನೆ ಮಾಡುತ್ತದೆ.
C - ಕಂಪನಿ
P - ವ್ಯಕ್ತಿ
H - ಹಿಂದು ಅವಿಭಕ್ತ ಕುಟುಂಬ
F - ವಿಭಾಗ
A - ವ್ಯಕ್ತಿಗಳ ಗುಂಪು
T - ಟ್ರಸ್ಟ್
B - ವ್ಯಕ್ತಿಯ ಗುರುತು
L - ಸ್ಥಳೀಯ ಸಂಸ್ಥೆ
J - ಕಾನೂನು ಪ್ರಕಾರ ವ್ಯಕ್ತಿ ಎಂದು ಪರಿಗಣಿಸ್ಪಡುವುದು.
G - ಸರ್ಕಾರ
AAACA- ಕಂಪನಿ, AAAHA-ಹಿಂದು ಅವಿಭಕ್ತ ಕುಟುಂಬ
4. ಐದನೇ ಅಕ್ಷರವು ಒಂದನೇ ಅಕ್ಷರದ ತದ್ರೂಪಾಗಿರುತ್ತದೆ.

* ಕೊನೆ ಮಾತು:

ಆಧುನಿಕ ಸಮಾಜದ ರೀತಿ ನೀತಿಗಳಿಗೆ ಅನುಸಾರವಾಗಿ ನಡೆದುಕೊಳ್ಳಬೇಕಾದರೆ ಪಾನ್ ಕಾರ್ಡ್ ಅತ್ಯಗತ್ಯ. ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲದಿದ್ದರೆ ಕೂಡಲೆ ಅರ್ಜಿ ಹಾಕುವುದು ಉತ್ತಮ. ಸ್ವಲ್ಪ ಸಮಯವನ್ನು ಮೀಸಲಿಟ್ಟು ಕಾರ್ಡ್ ಮಾಡಿಕೊಂಡರೆ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ.

ಕೆಲವೊಂದು ಐ.ಪಿ.ಸಿ ಸೆಕ್ಷನ್ ಗಳ ಬಗ್ಗೆ ತಿಳಿಯಿರಿ!!!!!

ಕೆಲವೊಂದು ಐ.ಪಿ.ಸಿ ಸೆಕ್ಷನ್ ಗಳ ಬಗ್ಗೆ ತಿಳಿಯಿರಿ!!!!!

​IPC ಯಲ್ಲಿ ಸ್ಟ್ರೀಮ್ನ ಅರ್ಥವನ್ನು ತಿಳಿಯಿರಿ …..

ವಿಭಾಗ 307 = ಕೊಲೆಯ ಪ್ರಯತ್ನ

ಸೆಕ್ಷನ್ 302 = ಕೊಲೆಗೆ ಪೆನಾಲ್ಟಿ

ವಿಭಾಗ 376 = ಅತ್ಯಾಚಾರ

ವಿಭಾಗ 395 = ದರೋಡೆ

ವಿಭಾಗ 377 = ಅಸ್ವಾಭಾವಿಕ ಕ್ರಿಯೆ

ದರೋಡೆ ಸಂದರ್ಭದಲ್ಲಿ ವಿಭಾಗ 396 = ಹತ್ಯೆ

ವಿಭಾಗ 120 = ಪಿತೂರಿ ಸಂಯೋಜನೆ

ವಿಭಾಗ 365 = ಅಪಹರಣ

ವಿಭಾಗ 201 = ಪುರಾವೆಗಳ ನಿರ್ಮೂಲನೆ

ವಿಭಾಗ 34 = ವಸ್ತು ಉದ್ದೇಶಗಳು

ವಿಭಾಗ 412 = ದಾಲ್ಚಿನ್ನಿ

ವಿಭಾಗ 378 = ಕಳ್ಳತನ

ವಿಭಾಗ 141 = ಕಾನೂನು ವಿರುದ್ಧ ಹೊಂದಿಸುವುದು

ವಿಭಾಗ 191 = ದಾರಿತಪ್ಪಿಸುವ

ವಿಭಾಗ 300 = ಕೊಲ್ಲುವುದು

ವಿಭಾಗ 309 = ಆತ್ಮಹತ್ಯಾ ಪ್ರಯತ್ನ

ವಿಭಾಗ 310 = ಮೋಸಗೊಳಿಸಲು

ವಿಭಾಗ 312 = ಗರ್ಭಪಾತ

ವಿಭಾಗ 351 = ಆಕ್ರಮಣ

ವಿಭಾಗ 354 = ಸ್ತ್ರೀ ಕಿರಿಕಿರಿ

ವಿಭಾಗ 362 = ಅಪಹರಣ

ವಿಭಾಗ 415 = ಚೀಟಿಂಗ್

ವಿಭಾಗ 445 = ಘರಾಧನ್

ವಿಭಾಗ 494 = ಸಂಗಾತಿಯ ಜೀವನದಲ್ಲಿ ಮರುಮದುವೆ 0

ವಿಭಾಗ 499 = ಮಾನನಷ್ಟ

ಸೆಕ್ಷನ್ 511 = ಜೀವಾವಧಿ ಶಿಕ್ಷೆಗೆ ಗುರಿಯಾಗುವ ಅಪರಾಧಗಳನ್ನು ಮಾಡಲು ಪ್ರಯತ್ನಿಸುವ ದಂಡ.

 ನಮ್ಮ ದೇಶದಲ್ಲಿ ನಮಗೆ ಯಾವುದೇ ಮಾಹಿತಿ ಇಲ್ಲದಿರುವ ಕೆಲವು ಕಾನೂನುಬದ್ಧತೆಗಳಿವೆ, ನಮ್ಮ ಹಕ್ಕುಗಳಿಂದ ಹೊರಗುಳಿದಿದೆ.
ಹಾಗಾಗಿ ನಿಮಗೆ 5  ಆಸಕ್ತಿದಾಯಕ ಸಂಗತಿಗಳನ್ನು ನೀಡಬಹುದು  ಇದು ಯಾವುದೇ ಸಮಯದಲ್ಲಿ ಜೀವನದಲ್ಲಿ ಉಪಯುಕ್ತವಾಗಿದೆ.

1. ಸಂಜೆ ಮಹಿಳೆಯನ್ನು ಬಂಧಿಸಲು ಸಾಧ್ಯವಿಲ್ಲ :-ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 46 ಅಡಿಯಲ್ಲಿ 6 ಗಂಟೆ ನಂತರ ಮತ್ತು ಬೆಳಗ್ಗೆ ಭಾರತೀಯ ಪೊಲೀಸರು ಯಾವುದೇ ಮಹಿಳೆ 6 ಮೊದಲು, ಅಪರಾಧ ಆದರೂ ಯಾವುದೇ ಬಂಧನಕ್ಕೆ ಸಾಧ್ಯವಿಲ್ಲ ಹೇಗೆ ಗಂಭೀರ, ಏಕೆ. ಪೊಲೀಸರು ಇದನ್ನು ಮಾಡುತ್ತಿದ್ದರೆ, ಬಂಧಿತರಾಗಿರುವ ಪೊಲೀಸ್ ಅಧಿಕಾರಿಯ ವಿರುದ್ಧ ದೂರನ್ನು ದಾಖಲಿಸಬಹುದು. ಆ ಪೊಲೀಸ್ ಅಧಿಕಾರಿಯ ಕೆಲಸವನ್ನು ಇದು ಹಾಳುಮಾಡುತ್ತದೆ.

 2. ಸಿಲಿಂಡರ್ ಸ್ಫೋಟದಿಂದ, ನೀವು ಜೀವ ಮತ್ತು ಆಸ್ತಿಯ ನಷ್ಟಕ್ಕೆ 40 ಲಕ್ಷ ರೂ:- 

ಸಾರ್ವಜನಿಕ ಹೊಣೆಗಾರಿಕೆ ಪಾಲಿಸಿಯಡಿ ಮತ್ತು ಕೆಲವು ಕಾರಣಕ್ಕಾಗಿ ನಿಮ್ಮ ಮನೆಯಲ್ಲಿ ಸ್ಫೋಟಕ ಸಿಲಿಂಡರ್ ನೀವು ಅನಿಲ ಕಂಪನಿಯಿಂದ ತಕ್ಷಣ ವ್ಯಾಪ್ತಿಗೆ ಸಮರ್ಥನೆಗಳ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಯಬಹುದು ವೇಳೆ. ಅನಿಲ ಕಂಪೆನಿಯಿಂದ 40 ಲಕ್ಷ ರೂ. ವರೆಗೆ ವಿಮಾ ಕಂಪೆನಿ ಪಡೆಯಲು ಸಾಧ್ಯವಿದೆ ಎಂದು ನಾನು ನಿಮಗೆ ಹೇಳುತ್ತೇನೆ. ಕಂಪನಿಯು ನಿಮ್ಮ ಹಕ್ಕು ನಿರಾಕರಿಸಿದರೆ ಅಥವಾ ಘರ್ಷಣೆ ಮಾಡಿದಲ್ಲಿ ದೂರುಗಳನ್ನು ಮಾಡಬಹುದು. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅನಿಲ ಕಂಪನಿಯ ಪರವಾನಗಿಯನ್ನು ರದ್ದುಗೊಳಿಸಬಹುದು.

3. ಯಾವುದೇ ಹೋಟೆಲ್, ಯಾವುದೇ 5 ಸ್ಟಾರ್ಗಳಿಲ್ಲ. ನೀರನ್ನು ಮುಕ್ತವಾಗಿ ಕುಡಿಯಬಹುದು ಮತ್ತು ವಾಷ್ ರೂಮ್ ಅನ್ನು ಬಳಸಿ :-

ಭಾರತೀಯ ಸರಣಿ ಕಾಯಿದೆ, 1887 ಪ್ರಕಾರ, ದೇಶದ ಹೋಟೆಲ್ ಕೇಳುವ ಮೂಲಕ ನೀರು ಕುಡಿದು ಹೋಟೆಲ್ನ ಕೋಣೆಯಲ್ಲಿ ತೊಳೆಯುವುದು ಸಹ ಬಳಸಬಹುದು ಮಾಡಬಹುದು. ಹೋಟೆಲ್ ಸಣ್ಣ ಅಥವಾ 5 ನಕ್ಷತ್ರಗಳು, ಅವರು ನಿಲ್ಲುವಂತಿಲ್ಲ. ಹೋಟೆಲ್ ಮಾಲೀಕರು ಅಥವಾ ನೌಕರರು ನಿಮ್ಮನ್ನು ಕುಡಿಯುವ ನೀರಿನಿಂದ ಅಥವಾ ವಾಶ್ ಕೊಠಡಿಯನ್ನು ತಡೆಗಟ್ಟುತ್ತಿದ್ದರೆ, ನೀವು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ನಿಮ್ಮ ದೂರು ಆ ಹೋಟೆಲ್ನ ಪರವಾನಗಿಯನ್ನು ರದ್ದುಗೊಳಿಸಬಹುದು.

 4. ಉದ್ಯೋಗದಿಂದ ಗರ್ಭಿಣಿ ಮಹಿಳೆಯರನ್ನು ತೆಗೆದುಹಾಕಲಾಗುವುದಿಲ್ಲ :-

ಮಾತೃತ್ವ ಲಾಭ ಕಾಯಿದೆ 1961 ರ ಪ್ರಕಾರ ಗರ್ಭಿಣಿ ಮಹಿಳೆಯರನ್ನು ತಕ್ಷಣವೇ ಕೆಲಸದಿಂದ ತೆಗೆಯಲಾಗುವುದಿಲ್ಲ. ಮಾಲೀಕರು ಮೊದಲ ತಿಂಗಳುಗಳ ಸೂಚನೆ ನೀಡಬೇಕು ಮತ್ತು ಗರ್ಭಾವಸ್ಥೆಯಲ್ಲಿ ಖರ್ಚು ಮಾಡುವ ಕೆಲವು ಭಾಗವನ್ನು ನೀಡಬೇಕು. ಅವರು ಹಾಗೆ ಮಾಡದಿದ್ದರೆ, ಅವರು ಸರ್ಕಾರಿ ನೌಕರರ ವಿರುದ್ಧ ದೂರು ನೀಡಬಹುದು. ಕಂಪೆನಿಯು ದೂರನ್ನು ಮುಚ್ಚಬಹುದು ಅಥವಾ ಕಂಪನಿಯು ದಂಡವನ್ನು ಪಾವತಿಸಬೇಕಾಗುತ್ತದೆ.

 5 ಪೊಲೀಸ್ ದೂರು ನಿಮ್ಮ ದೂರುಗಳನ್ನು ಬರೆಯಲು ನಿರಾಕರಿಸುವುದಿಲ್ಲ :-

ಐಪಿಸಿ ಸೆಕ್ಷನ್ 166 ಎ ಪ್ರಕಾರ, ಯಾವುದೇ ಪೋಲೀಸ್ ಅಧಿಕಾರಿ ನಿಮ್ಮ ಯಾವುದೇ ದೂರುಗಳನ್ನು ದಾಖಲಿಸಲು ನಿರಾಕರಿಸಬಹುದು. ಅವರು ಇದನ್ನು ಮಾಡಿದರೆ ಹಿರಿಯ ಪೊಲೀಸ್ ಕಚೇರಿಯಲ್ಲಿ ಆತನ ವಿರುದ್ಧ ದೂರು ಸಲ್ಲಿಸಬಹುದು. ಆ ಪೊಲೀಸ್ ಅಧಿಕಾರಿ ದೋಷಿ ಅದು ಅವರಿಗೆ ಕಡಿಮೆ 1 ವರ್ಷ 6 ತಿಂಗಳ ಜೈಲು ಕಡಿಮೆ ಅಥವಾ ಅವರು ಅವರ ಕೆಲಸ Gwani ವಿಧಾನವಾಗಿದೆ.

ಇವುಗಳು ನಮ್ಮ ದೇಶದ ಕಾನೂನಿನಡಿಯಲ್ಲಿ ಬರುವ ಕುತೂಹಲಕಾರಿ ಸಂಗತಿಗಳು, ಆದರೆ ನಾವು ಅವರಿಗೆ ತಿಳಿದಿಲ್ಲ. ನಿಮ್ಮ ಜೀವನದಲ್ಲಿ ಪ್ರಯೋಜನಕಾರಿಯಾಗಬಲ್ಲ ಬಹಳಷ್ಟು ಆಸಕ್ತಿದಾಯಕ ವಿಷಯಗಳನ್ನು ನಿಮ್ಮ ಮುಂದೆ ಇಡಲು ನಾವು ಪ್ರಯತ್ನಿಸುತ್ತೇವೆ.
 ಈ ಹಕ್ಕುಗಳನ್ನು ಯಾವ ಸಮಯದಲ್ಲಾದರೂ ಈ ಸಂದೇಶವನ್ನು ಕಳುಹಿಸಲು ಮತ್ತು ಅದನ್ನು ನಿಮಗೆ ಉಳಿಸಲು ಬಳಸಬಹುದು.

ಕೇಂದ್ರ ನೌಕರರಿಗೆ 25 ಲಕ್ಷ ರೂ. ಗೃಹ ಸಾಲ

*ಕೇಂದ್ರ ನೌಕರರಿಗೆ 25 ಲಕ್ಷ ರೂ. ಗೃಹ ಸಾಲ*

 Saturday, 11.11.2017, 3:00 AM     ವಿಜಯವಾಣಿ ಸುದ್ದಿಜಾಲ 

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಗೃಹ ಸಾಲ ಭಾಗ್ಯ ಕರುಣಿಸಿರುವ ಮೋದಿ ಸರ್ಕಾರ, ಗೃಹ ನಿರ್ಮಾಣ ಮುಂಗಡ ಹಣದ (ಎಚ್​ಬಿಐ) ಗರಿಷ್ಠ ಮೊತ್ತವನ್ನು ಈಗಿರುವ 7.5 ಲಕ್ಷ ರೂ.ನಿಂದ 25 ಲಕ್ಷ ರೂ.ಗೆ ಏರಿಕೆ ಮಾಡಿದೆ. ಏಳನೇ ವೇತನ ಆಯೋಗದ ಶಿಫಾರಸುಗಳನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸೌಲಭ್ಯ ಸುಮಾರು 50 ಲಕ್ಷ ಕೇಂದ್ರ ನೌಕರರಿಗೆ ಅನುಕೂಲ ಮಾಡಿಕೊಡುವ ಜತೆಗೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಹೊಸ ಚೈತನ್ಯ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೇಂದ್ರ ನೌಕರರು ತಮ್ಮ ಮೂಲ ವೇತನದ 34 ತಿಂಗಳ ಒಟ್ಟು ಮೊತ್ತ ಅಥವಾ ಗರಿಷ್ಠ 25 ಲಕ್ಷ ರೂ.ವರೆಗೆ ಎಚ್​ಬಿಎ ಪಡೆಯಬಹುದಾಗಿದೆ.

*ಹೊಸ ನಿಯಮಗಳು ಏನೇನು?*

#ಸಾಲಕ್ಕೆ ಶೇ.8.5 ಬಡ್ಡಿ

#15 ವರ್ಷ 180 ಮಾಸಿಕ ಕಂತುಗಳಲ್ಲಿ ಅಸಲು ಹಣ ಪಾವತಿಸಬೇಕು

# ಉಳಿದ ಐದು ವರ್ಷಗಳಲ್ಲಿ 60 ಇಎಮ್ ಮೂಲ ಬಡ್ಡಿ ಹಣ ಸಂದಾಯ

# ಮನೆ ವಿಸ್ತರಣೆ ಮಿತಿ 1.8 ಲಕ್ಷದಿಂದ 10 ಲಕ್ಷ ರೂ.ಗೆ ಏರಿಕೆ

 ಕೇಂದ್ರ ನೌಕರರಿಗೆ ಹೊಸ ಕೊಡುಗೆ ಮನೆ ಖರೀದಿಯ ಎಚ್​ಬಿಎ ಮಿತಿ 25 ಲಕ್ಷ ರೂ.ಗೆ ಏರಿಕೆ

ನವದೆಹಲಿ: ಗೃಹ ನಿರ್ಮಾಣ ಅಥವಾ ಫ್ಲಾ್ಯಟ್ ಖರೀದಿಸಲು ಚಿಂತನೆ ನಡೆಸುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ನೌಕರರಿಗೆ ನೀಡಲಾಗುತ್ತಿದ್ದ ಗೃಹ ನಿರ್ಮಾಣ ಮುಂಗಡ ಹಣವನ್ನು (ಎಚ್​ಬಿಎ) ಗರಿಷ್ಠ -ಠಿ;7.5 ಲಕ್ಷದಿಂದ -ಠಿ;25 ಲಕ್ಷಕ್ಕೆ ಏರಿಸುವ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಏಳನೇ ವೇತನ ಆಯೋಗದ ಶಿಫಾರಸು ಅನ್ವಯ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದರಿಂದ ದೇಶದ ಸುಮಾರು 50 ಲಕ್ಷ ನೌಕರರಿಗೆ ಅನುಕೂಲವಾಗ ಲಿದ್ದು, ನಿಸ್ತೇಜಗೊಂಡಿರುವ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹೊಸ ಚೈತನ್ಯ ಬರಲಿದೆ ಎಂದು ಸರ್ಕಾರ ವ್ಯಾಖ್ಯಾನಿಸಿದೆ. ಕೇಂದ್ರ ನೌಕರರು ಮೂಲ ವೇತನದ 34 ತಿಂಗಳ ಒಟ್ಟು ಮೊತ್ತ ಅಥವಾ ಗರಿಷ್ಠ -ಠಿ;25 ಲಕ್ಷ ಎಚ್​ಬಿಎ ಪಡೆಯಬಹುದಾಗಿದೆ.

ಮನೆ ವಿಸ್ತರಣೆ ಮಿತಿ -ರೂ;10 ಲಕ್ಷ ಏರಿಕೆ: ಈಗಾಗಲೇ ಮನೆ ನಿರ್ವಿುಸಿದ್ದು, ಅದನ್ನು ವಿಸ್ತರಣೆ ಮಾಡಲು ಚಿಂತನೆ ನಡೆಸುತ್ತಿ ರುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಹಿಂದೆ ಇದ್ದ ಗರಿಷ್ಠ -ಠಿ;1.8 ಲಕ್ಷ ಮಿತಿಯನ್ನು -ಠಿ;10 ಲಕ್ಷ ಏರಿಸಲಾಗಿದೆ. ಪತಿ ಮತ್ತು ಪತ್ನಿ ಇಬ್ಬರೂ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ ಇಬ್ಬರೂ ಎಚ್​ಬಿಎ ಪಡೆಯಬಹುದಾಗಿದೆ. ಹಿಂದೆ ಒಬ್ಬರು ಮಾತ್ರ ಎಚ್​ಬಿಎ ಪಡೆಯಲು ಅವಕಾಶವಿತ್ತು.

*ಶೇ.8.5 ಬಡ್ಡಿ*

ಹಿಂದೆ -ಠಿ;7.5 ಲಕ್ಷಕ್ಕೆ ಶೇ.6-ಶೇ.9.5 ರ ಮಿತಿಯಲ್ಲಿ ವಿಧಿಸಲಾಗುತ್ತಿದ್ದ ನಾಲ್ಕು ಸ್ಲ್ಯಾಬ್ ಬಡ್ಡಿಯನ್ನು ತೆಗೆದು ಹಾಕಲಾಗಿದ್ದು, ಹೊಸ ನಿಯಮದ ಪ್ರಕಾರ ಶೇ. 8.5 ಬಡ್ಡಿ ವಿಧಿಸಲಾ ಗುತ್ತದೆ. ಇದನ್ನು ಮೂರು ವರ್ಷಕ್ಕೊಮ್ಮೆ ಪರಾಮರ್ಶೆ ನಡೆಸಲಾಗುತ್ತದೆ. ಸಾಲದ ಹಣವನ್ನು ಮರಳಿ ಪಡೆಯುವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 15 ವರ್ಷಗಳ 180 ಮಾಸಿಕ ಕಂತುಗಳಲ್ಲಿ ಪ್ರಿನ್ಸಿಪಲ್ ಹಣ ಪಾವತಿಸಬೇಕಿದ್ದು, ಉಳಿದ ಐದು ವರ್ಷಗಳ 60 ಮಾಸಿಕ ಕಂತುಗಳಲ್ಲಿ ಬಡ್ಡಿಯ ಹಣ ಸಂದಾಯ ಮಾಡಿಕೊಳ್ಳಲಾಗುತ್ತದೆ.