Saturday, 30 July 2016

🔸ವಿವೇಕ ವಾಣಿ🔸

ನಿಮ್ಮ ಭವಿಷ್ಯವನ್ನು ನೀವೇ ನಿರ್ಮಿಸಿಕೊಳ್ಳಿ.  ಕಳೆದುದನ್ನು ಕುರಿತು ವ್ಯಥೆಪಡಬೇಡಿ.  ಅನಂತ ಭವಿಷ್ಯ ನಿಮ್ಮೆದುರಿಗಿದೆ.   ಪ್ರತಿಯೊಂದು ಮಾತು, ಆಲೋಚನೆ ಮತ್ತು ಕೆಲಸ ನಿಮಗಾಗಿ ಕಾದುಕೊಂಡಿದೆ.  ಕೆಟ್ಟ ಆಲೋಚನೆ, ಕೆಟ್ಟ ಕೆಲಸ ಇವು  ರಕ್ಕಸರಂತೆ ನಿಮ್ಮ ಮೇಲೆ ಬೀಳಲು ಕಾಯ್ದುಕೊಂಡಿರುವಂತೆ ಒಳ್ಳೆಯ ಆಲೋಚನೆ, ಒಳ್ಳೆಯ ಕಾರ್ಯ ಇವು ಸಾವಿರಾರು ದೇವದೂತರ ಶಕ್ತಿಯೊಂದಿಗೆ ನಿಮ್ಮನ್ನು ಎಂದೆಂದಿಗೂ ರಕ್ಷಿಸಲು ಕಾಯ್ದುಕೊಂಡಿವೆ ಎನ್ನುವುದೇ ಉತ್ತೇಜನಕಾರಿಯಾದ ಭರವಸೆ.

🔸🔸🔸🔸🔸🔸🔸🔸🔸


Reflect upon!!

ಒಂದು ಕಲ್ಲು ಕೇವಲ ಒಮ್ಮೆ ಮಂದಿರಕ್ಕೆ ಹೋಗುತ್ತದೆ. ನಂತರ ಸ್ವತಃ ದೇವರಾಗಿ ಬಿಡುತ್ತದೆ! ಅದೇ ಮಾನವರು ಪ್ರತಿದಿನ ಮಂದಿರಕ್ಕೆ ಹೋಗುತ್ತಾರೆ. ಆದರೂ ಕಲ್ಲಾಗಿಯೇ ಇರುತ್ತಾರೆ!


No comments:

Post a Comment