🔹ಧರ್ಮ ಮಾರ್ಗದ ಉಪದೇಶ ನೀಡುವ- ಭಗವದ್ಗೀತೆ🔸
⭐️ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಈ ಜಗತ್ತಿನಲ್ಲಿ ಎಲ್ಲವೂ ನಶ್ವರ. ಅದರಲ್ಲೂ ನಿಮ್ಮ ದೇಹಕ್ಕೆ ಒಂದು ಆಯಸ್ಸು ಇದೆ. ಆದ್ದರಿಂದ ನಿಮ್ಮ ದೇಹವನ್ನು ನಿಮ್ಮ ಗುರುತಿಗಾಗಿ ಬಳಸಿಕೊಳ್ಳುವುದು ನಿಷ್ಪ್ರಯೋಜಕ. ನಿಮ್ಮ ಆತ್ಮದ ಹೊರತಾಗಿ ನಿಮ್ಮ ಎಲ್ಲವೂ ನಶ್ವರ. ಸತ್ತ ಬಳಿಕ ಈ ಜಗತ್ತಿನಲ್ಲಿ ಗಳಿಸಿದ್ದ ಏನನ್ನೂ ನಾವು ಕೊಂಡು ಹೋಗಲು ಸಾಧ್ಯವಿಲ್ಲ. ಯಾರನ್ನೂ ಜೊತೆಗೂ ಕರೆದೊಯ್ಯಲು ಸಾಧ್ಯವಿಲ್ಲ.
ಆದ್ದರಿಂದ ಇಂದಲ್ಲ ನಾಳೆ ಗತಿಸಬಹುದಾದ ಯಾವುದೇ ವಸ್ತುವಿಗಾಗಿ ಹಂಬಲಿಸುವುದು ತರವಲ್ಲ. ಆತ್ಮಶುದ್ದಿ, ಉತ್ತಮ ಜೀವನ, ನಾಲ್ವರಿಗೆ ಉಪಯೋಗಕ್ಕೆ ಬರುವಂತೆ ಬದುಕುವುದು, ಇದ್ದಷ್ಟೂ ದಿನ ಆತ್ಮವಂಚನೆ ಮಾಡಿಕೊಳ್ಳದೇ ಸಂತೋಷವಾಗಿರುವುದು, ಜೀವನದ ಗುರಿಯನ್ನು ನಿಜವಾದ ಅರ್ಥದಲ್ಲಿ ಸಾಧಿಸುವುದೇ ಶ್ರೇಷ್ಠ ಎಂದು ಭಗವದ್ಗೀತೆ ತಿಳಿಸುತ್ತದೆ.
⭐️ಪಲಾಯನ ಮೂರ್ಖತನದ ಪರಮಾವಧಿಯಾಗಿದೆ ತನ್ನ ಜವಾಬ್ದಾರಿಗಳಿಂದ ಓಡಿ ಹೋಗುವವರನ್ನು ಹೇಡಿಗಳೆಂದು ಜರೆಯುವ ಮೂಲಕ ಜೀವನದಲ್ಲಿ ನಿಷ್ಕ್ರಿಯತೆಯನ್ನು ಖಂಡಿಸುತ್ತದೆ. ನೀವು ಮಾಡುತ್ತಿರುವ ಯಾವುದೇ ಕೆಲಸವನ್ನು ಶ್ರದ್ದೆಯಿಂದ ಮತ್ತು ಪೂರ್ಣವಾಗಿ ತೊಡಗಿಸಿಕೊಂಡು ನಿರ್ವಹಿಸುವುದನ್ನು ಭಗವದ್ಗೀತೆ ಬೋಧಿಸುತ್ತದೆ.
⭐️ಕರ್ಮದ ಬಗ್ಗೆ ಚಿಂತಿಸು ಕರ್ಮದ ಫಲ ದೇವರಿಗೆ ಬಿಡು ಇದರ ಫಲವೇನಾಗಬಹುದು ಎಂಬ ಬಗ್ಗೆ ಚಿಂತೆ ಮಾಡದೇ ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಫಲವೇ ಬರುತ್ತದೆ ಎಂದು ತಿಳಿದು ನಿಮ್ಮ ಕೆಲಸವನ್ನು ಆದಷ್ಟು ಪರಿಪೂರ್ಣವಾಗಿ ನಿರ್ವಹಿಸಿ ಎಂಬ ಪಾಠ ಮಹತ್ವದ್ದಾಗಿದೆ.
⭐️ನಿಮ್ಮ ಆಕಾಂಕ್ಷೆಗಳನ್ನು ಹತ್ತಿಕ್ಕಿ ಆಸೆಗೆ ಮಿತಿಯಿಲ್ಲ. ಜೀವನದಲ್ಲಿ ಎಷ್ಟಿದ್ದರೂ ನಮಗೆ ಸಾಲದು. ಆದರೆ ನಿಮ್ಮ ಆಕಾಂಕ್ಷೆಗಳನ್ನು ಒಂದು ಮಿತಿಯೊಳಗಿರಿಸಿಕೊಳ್ಳಲು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವಂತೆ ಭಗವದ್ಗೀತೆ ಬೋಧಿಸುತ್ತದೆ.
⭐️ ನಿಮ್ಮ ವಿವೇಕವನ್ನು ನಿಮ್ಮ ಸ್ವಾರ್ಥ ಮುಳುಗಿಸುತ್ತದೆ ಮನುಷ್ಯನ ವಿವೇಕವೇ ಒಂದು ದೊಡ್ಡ ಐಶ್ವರ್ಯವಾಗಿದೆ. ಸ್ವಾರ್ಥ ಮನೋಭಾವದ ಮನಸ್ಸು ಧೂಳು ಮಸುಕಿದ ಕನ್ನಡಿಯಂತಿದ್ದು ಅದರೊಳಗೆ ಏನೂ ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲ. ಸ್ವಾರ್ಥದ ಈ ಪದರವನ್ನು ನಿವಾರಿಸಿದಾದ ಜೀವನ ಸುಂದರವಾಗಿ ಕಾಣಿಸಿಕೊಳ್ಳುತ್ತದೆ.
⭐️ ಯಾವುದರಲ್ಲಿಯೂ ಅತಿರೇಕ ಸಲ್ಲದು ಜೀವನದಲ್ಲಿ ಸಿಗುವ ಯಾವುದೇ ವಸ್ತು ಅಥವಾ ಭೋಗವನ್ನು ಅತಿಯಾಗಿ ನೆಚ್ಚಿಕೊಳ್ಳುವ ಅತಿರೇಕ ಸಲ್ಲದು. ಯಾವುದೇ ವಿಷಯದಲ್ಲಿ ಅತಿ ಕಡಿಮೆ ಅಥವಾ ಅತಿಹೆಚ್ಚು ಬಯಕೆ ಹೊಂದದಿರಲು ಭಗವದ್ಗೀತೆ ತಿಳಿಸುತ್ತದೆ.
ಉದಾಹರಣೆಗೆ ಊಟ, ನಿದ್ರೆ, ದೈಹಿಕ ಸಂತೃಪ್ತಿ, ಸವಲತ್ತುಗಳು, ಸೌಲಭ್ಯಗಳು ಮೊದಲಾದವುಗಳನ್ನು ನಿಮಗೆ ಅಗತ್ಯವಿದ್ದಷ್ಟು ಮಾತ್ರ ಪಡೆಯಲು ತಿಳಿಸುತ್ತದೆ. ಅತಿ ಹೆಚ್ಚಿನ ಅಥವಾ ಅತಿ ಕಡಿಮೆ ಪಡೆಯುವುದರಿಂದ ಜೀವನದ ಸಮತೋಲನ ತಪ್ಪಿ ನಿಸರ್ಗದಿಂದ ವಿಮುಖರಾದಂತಾಗುತ್ತದೆ.
⭐️ ಕೋಪ ನಿಮ್ಮನ್ನು ದಾರಿತಪ್ಪಿಸಬಹುದು ಕೋಪದಲ್ಲಿದ್ದಾಗ ಕಳೆದುಕೊಂಡ ವಿವೇಕ ಸೂಕ್ತ ತೀರ್ಮಾನ ಅಥವಾ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಹೋಗುತ್ತದೆ. ಜೀವನದಲ್ಲಿ ಯಶಸ್ವಿಯಾಗಿದ್ದ ವ್ಯಕ್ತಿ ಕೋಪದ ಒಂದು ಕ್ಷಣದ ತಪ್ಪು ನಿರ್ಧಾರದಿಂದ ಸಂಪೂರ್ಣವಾಗಿ ನೆಲಕಚ್ಚಲೂ ಬಹುದು.
⭐️ ನಿಮ್ಮ ಭಗವಂತ ನಿಮ್ಮೊಳಗೇ ಇದ್ದಾನೆ ಭಗವಂತ ಎಲ್ಲೆಲ್ಲೂ ಇದ್ದಾನೆ, ಆದರೆ ನೀವು ಆರಾಧಿಸುವ ಭಗವಂತ ನಿಮ್ಮೊಳಗೇ ಇದ್ದಾನೆ. ಜಗತ್ತಿನ ಕಣಕಣಗಳಲ್ಲಿ, ಜೀವಂತ ಮತ್ತು ಜೀವವಿಲ್ಲದ ಪ್ರತಿ ವಸ್ತುವಿನಲ್ಲಿ ಭಗವಂತನಿದ್ದಾನೆ. ಜೀವನದಲ್ಲಿ ನಡೆಯುವ ಪ್ರತಿ ಕ್ರಿಯೆಯೂ ಭಗವಂತನ ಅಣತಿಯಂತೆಯೇ ನಡೆಯುತ್ತಿದೆ. ನಿಮ್ಮ ಹೃದಯದಲ್ಲಿಯೂ ಭಗವಂತನಿರುವುದರಿಂದ ನಿಮ್ಮ ಕರ್ಮ ನಿಜವಾದುದೇ ಆದರೆ ಅದರ ಫಲ ಸಿಕ್ಕೇ ಸಿಗುತ್ತದೆ. ಆದ್ದರಿಂದ ಭವಿಷ್ಯದ ಬಗ್ಗೆ ವ್ಯರ್ಥಚಿಂತನೆ ನಡೆಸಿ ಫಲವಿಲ್ಲ.
⭐️ ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಪಡಬೇಡಿ ಜಗತ್ತಿನಲ್ಲಿ ಲಕ್ಷಾಂತರ ಜನರು ಅಸುಖಿಗಳಾಗಿರಲು ಪ್ರಮುಖ ಕಾರಣ ಅವರ ಸಾಮರ್ಥ್ಯವನ್ನು ಅವರು ಅರಿಯದೇ ಇರುವುದು. ಭಗವದ್ಗೀತೆಯ ಪ್ರಕಾರ ತನ್ನ ಬಗ್ಗೆ ಅನುಮಾನವಿರುವ ವ್ಯಕ್ತಿ ಈ ಜಗತ್ತಿನಲ್ಲಿಯಾಗಲೀ ಬೇರೆ ಜಗತ್ತಿನಲ್ಲಿಯಾಗಲೀ ಸುಖವಾಗಿರಲು ಸಾಧ್ಯವಿಲ್ಲ. ಆದರೆ ಜಿಜ್ಞಾಸೆ ಅತಿ ಅಗತ್ಯವಾಗಿದ್ದು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಮೂಲವಾಗಿದೆ.
⭐️ ಭಯಪಡಬೇಡಿ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಪಾಠಗಳಲ್ಲಿ ಈ ಪಾಠ ಅತಿ ಮುಖ್ಯವಾಗಿದೆ. ಯುದ್ದದ ಸಮಯದಲ್ಲಿ ಸಾವಿಗೆ ಹೆದರದಿರಲು ಹೇಳಿದ ಕೃಷ್ಣನ ಮಾತನ್ನು ನಂಬಿ ಮುನ್ನುಗ್ಗಿದ ಅರ್ಜುನನಿಗೆ ಕಡೆಗೆ ಜಯ ಪ್ರಾಪ್ತಿಯಾಗುತ್ತದೆ.
ಸಾವು ದೇಹವನ್ನು ಕೊನೆಗೊಳಿಸಿ ಇನ್ನೊಂದು ಸ್ಥಿತಿಗೆ ತಲುಪಿಸುವ ಕ್ರಿಯೆಯೇ ಹೊರತು ಆತ್ಮಕ್ಕೆ ಸಾವಿಲ್ಲ. ಆದ್ದರಿಂದ ಸಾವಿಗೆ ಅಥವಾ ತನ್ನ ಏನನ್ನಾದರೂ ಕಳೆದುಕೊಳ್ಳುವ ಕಾರಣಕ್ಕೆ ಹೆದರದೇ ಮುನ್ನುಗ್ಗುವುದು ಜೀವನದ ಯಶಸ್ಸಿಗೆ ಮೂಲ ಎಂದು ಭಗವದ್ಗೀತೆ ತಿಳಿಸುತ್ತದೆ.
Collected
🍁🍁🍁🍁🍁🍁🍁🍁🍁
⭐️ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಈ ಜಗತ್ತಿನಲ್ಲಿ ಎಲ್ಲವೂ ನಶ್ವರ. ಅದರಲ್ಲೂ ನಿಮ್ಮ ದೇಹಕ್ಕೆ ಒಂದು ಆಯಸ್ಸು ಇದೆ. ಆದ್ದರಿಂದ ನಿಮ್ಮ ದೇಹವನ್ನು ನಿಮ್ಮ ಗುರುತಿಗಾಗಿ ಬಳಸಿಕೊಳ್ಳುವುದು ನಿಷ್ಪ್ರಯೋಜಕ. ನಿಮ್ಮ ಆತ್ಮದ ಹೊರತಾಗಿ ನಿಮ್ಮ ಎಲ್ಲವೂ ನಶ್ವರ. ಸತ್ತ ಬಳಿಕ ಈ ಜಗತ್ತಿನಲ್ಲಿ ಗಳಿಸಿದ್ದ ಏನನ್ನೂ ನಾವು ಕೊಂಡು ಹೋಗಲು ಸಾಧ್ಯವಿಲ್ಲ. ಯಾರನ್ನೂ ಜೊತೆಗೂ ಕರೆದೊಯ್ಯಲು ಸಾಧ್ಯವಿಲ್ಲ.
ಆದ್ದರಿಂದ ಇಂದಲ್ಲ ನಾಳೆ ಗತಿಸಬಹುದಾದ ಯಾವುದೇ ವಸ್ತುವಿಗಾಗಿ ಹಂಬಲಿಸುವುದು ತರವಲ್ಲ. ಆತ್ಮಶುದ್ದಿ, ಉತ್ತಮ ಜೀವನ, ನಾಲ್ವರಿಗೆ ಉಪಯೋಗಕ್ಕೆ ಬರುವಂತೆ ಬದುಕುವುದು, ಇದ್ದಷ್ಟೂ ದಿನ ಆತ್ಮವಂಚನೆ ಮಾಡಿಕೊಳ್ಳದೇ ಸಂತೋಷವಾಗಿರುವುದು, ಜೀವನದ ಗುರಿಯನ್ನು ನಿಜವಾದ ಅರ್ಥದಲ್ಲಿ ಸಾಧಿಸುವುದೇ ಶ್ರೇಷ್ಠ ಎಂದು ಭಗವದ್ಗೀತೆ ತಿಳಿಸುತ್ತದೆ.
⭐️ಪಲಾಯನ ಮೂರ್ಖತನದ ಪರಮಾವಧಿಯಾಗಿದೆ ತನ್ನ ಜವಾಬ್ದಾರಿಗಳಿಂದ ಓಡಿ ಹೋಗುವವರನ್ನು ಹೇಡಿಗಳೆಂದು ಜರೆಯುವ ಮೂಲಕ ಜೀವನದಲ್ಲಿ ನಿಷ್ಕ್ರಿಯತೆಯನ್ನು ಖಂಡಿಸುತ್ತದೆ. ನೀವು ಮಾಡುತ್ತಿರುವ ಯಾವುದೇ ಕೆಲಸವನ್ನು ಶ್ರದ್ದೆಯಿಂದ ಮತ್ತು ಪೂರ್ಣವಾಗಿ ತೊಡಗಿಸಿಕೊಂಡು ನಿರ್ವಹಿಸುವುದನ್ನು ಭಗವದ್ಗೀತೆ ಬೋಧಿಸುತ್ತದೆ.
⭐️ಕರ್ಮದ ಬಗ್ಗೆ ಚಿಂತಿಸು ಕರ್ಮದ ಫಲ ದೇವರಿಗೆ ಬಿಡು ಇದರ ಫಲವೇನಾಗಬಹುದು ಎಂಬ ಬಗ್ಗೆ ಚಿಂತೆ ಮಾಡದೇ ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಫಲವೇ ಬರುತ್ತದೆ ಎಂದು ತಿಳಿದು ನಿಮ್ಮ ಕೆಲಸವನ್ನು ಆದಷ್ಟು ಪರಿಪೂರ್ಣವಾಗಿ ನಿರ್ವಹಿಸಿ ಎಂಬ ಪಾಠ ಮಹತ್ವದ್ದಾಗಿದೆ.
⭐️ನಿಮ್ಮ ಆಕಾಂಕ್ಷೆಗಳನ್ನು ಹತ್ತಿಕ್ಕಿ ಆಸೆಗೆ ಮಿತಿಯಿಲ್ಲ. ಜೀವನದಲ್ಲಿ ಎಷ್ಟಿದ್ದರೂ ನಮಗೆ ಸಾಲದು. ಆದರೆ ನಿಮ್ಮ ಆಕಾಂಕ್ಷೆಗಳನ್ನು ಒಂದು ಮಿತಿಯೊಳಗಿರಿಸಿಕೊಳ್ಳಲು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವಂತೆ ಭಗವದ್ಗೀತೆ ಬೋಧಿಸುತ್ತದೆ.
⭐️ ನಿಮ್ಮ ವಿವೇಕವನ್ನು ನಿಮ್ಮ ಸ್ವಾರ್ಥ ಮುಳುಗಿಸುತ್ತದೆ ಮನುಷ್ಯನ ವಿವೇಕವೇ ಒಂದು ದೊಡ್ಡ ಐಶ್ವರ್ಯವಾಗಿದೆ. ಸ್ವಾರ್ಥ ಮನೋಭಾವದ ಮನಸ್ಸು ಧೂಳು ಮಸುಕಿದ ಕನ್ನಡಿಯಂತಿದ್ದು ಅದರೊಳಗೆ ಏನೂ ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲ. ಸ್ವಾರ್ಥದ ಈ ಪದರವನ್ನು ನಿವಾರಿಸಿದಾದ ಜೀವನ ಸುಂದರವಾಗಿ ಕಾಣಿಸಿಕೊಳ್ಳುತ್ತದೆ.
⭐️ ಯಾವುದರಲ್ಲಿಯೂ ಅತಿರೇಕ ಸಲ್ಲದು ಜೀವನದಲ್ಲಿ ಸಿಗುವ ಯಾವುದೇ ವಸ್ತು ಅಥವಾ ಭೋಗವನ್ನು ಅತಿಯಾಗಿ ನೆಚ್ಚಿಕೊಳ್ಳುವ ಅತಿರೇಕ ಸಲ್ಲದು. ಯಾವುದೇ ವಿಷಯದಲ್ಲಿ ಅತಿ ಕಡಿಮೆ ಅಥವಾ ಅತಿಹೆಚ್ಚು ಬಯಕೆ ಹೊಂದದಿರಲು ಭಗವದ್ಗೀತೆ ತಿಳಿಸುತ್ತದೆ.
ಉದಾಹರಣೆಗೆ ಊಟ, ನಿದ್ರೆ, ದೈಹಿಕ ಸಂತೃಪ್ತಿ, ಸವಲತ್ತುಗಳು, ಸೌಲಭ್ಯಗಳು ಮೊದಲಾದವುಗಳನ್ನು ನಿಮಗೆ ಅಗತ್ಯವಿದ್ದಷ್ಟು ಮಾತ್ರ ಪಡೆಯಲು ತಿಳಿಸುತ್ತದೆ. ಅತಿ ಹೆಚ್ಚಿನ ಅಥವಾ ಅತಿ ಕಡಿಮೆ ಪಡೆಯುವುದರಿಂದ ಜೀವನದ ಸಮತೋಲನ ತಪ್ಪಿ ನಿಸರ್ಗದಿಂದ ವಿಮುಖರಾದಂತಾಗುತ್ತದೆ.
⭐️ ಕೋಪ ನಿಮ್ಮನ್ನು ದಾರಿತಪ್ಪಿಸಬಹುದು ಕೋಪದಲ್ಲಿದ್ದಾಗ ಕಳೆದುಕೊಂಡ ವಿವೇಕ ಸೂಕ್ತ ತೀರ್ಮಾನ ಅಥವಾ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಹೋಗುತ್ತದೆ. ಜೀವನದಲ್ಲಿ ಯಶಸ್ವಿಯಾಗಿದ್ದ ವ್ಯಕ್ತಿ ಕೋಪದ ಒಂದು ಕ್ಷಣದ ತಪ್ಪು ನಿರ್ಧಾರದಿಂದ ಸಂಪೂರ್ಣವಾಗಿ ನೆಲಕಚ್ಚಲೂ ಬಹುದು.
⭐️ ನಿಮ್ಮ ಭಗವಂತ ನಿಮ್ಮೊಳಗೇ ಇದ್ದಾನೆ ಭಗವಂತ ಎಲ್ಲೆಲ್ಲೂ ಇದ್ದಾನೆ, ಆದರೆ ನೀವು ಆರಾಧಿಸುವ ಭಗವಂತ ನಿಮ್ಮೊಳಗೇ ಇದ್ದಾನೆ. ಜಗತ್ತಿನ ಕಣಕಣಗಳಲ್ಲಿ, ಜೀವಂತ ಮತ್ತು ಜೀವವಿಲ್ಲದ ಪ್ರತಿ ವಸ್ತುವಿನಲ್ಲಿ ಭಗವಂತನಿದ್ದಾನೆ. ಜೀವನದಲ್ಲಿ ನಡೆಯುವ ಪ್ರತಿ ಕ್ರಿಯೆಯೂ ಭಗವಂತನ ಅಣತಿಯಂತೆಯೇ ನಡೆಯುತ್ತಿದೆ. ನಿಮ್ಮ ಹೃದಯದಲ್ಲಿಯೂ ಭಗವಂತನಿರುವುದರಿಂದ ನಿಮ್ಮ ಕರ್ಮ ನಿಜವಾದುದೇ ಆದರೆ ಅದರ ಫಲ ಸಿಕ್ಕೇ ಸಿಗುತ್ತದೆ. ಆದ್ದರಿಂದ ಭವಿಷ್ಯದ ಬಗ್ಗೆ ವ್ಯರ್ಥಚಿಂತನೆ ನಡೆಸಿ ಫಲವಿಲ್ಲ.
⭐️ ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಪಡಬೇಡಿ ಜಗತ್ತಿನಲ್ಲಿ ಲಕ್ಷಾಂತರ ಜನರು ಅಸುಖಿಗಳಾಗಿರಲು ಪ್ರಮುಖ ಕಾರಣ ಅವರ ಸಾಮರ್ಥ್ಯವನ್ನು ಅವರು ಅರಿಯದೇ ಇರುವುದು. ಭಗವದ್ಗೀತೆಯ ಪ್ರಕಾರ ತನ್ನ ಬಗ್ಗೆ ಅನುಮಾನವಿರುವ ವ್ಯಕ್ತಿ ಈ ಜಗತ್ತಿನಲ್ಲಿಯಾಗಲೀ ಬೇರೆ ಜಗತ್ತಿನಲ್ಲಿಯಾಗಲೀ ಸುಖವಾಗಿರಲು ಸಾಧ್ಯವಿಲ್ಲ. ಆದರೆ ಜಿಜ್ಞಾಸೆ ಅತಿ ಅಗತ್ಯವಾಗಿದ್ದು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಮೂಲವಾಗಿದೆ.
⭐️ ಭಯಪಡಬೇಡಿ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಪಾಠಗಳಲ್ಲಿ ಈ ಪಾಠ ಅತಿ ಮುಖ್ಯವಾಗಿದೆ. ಯುದ್ದದ ಸಮಯದಲ್ಲಿ ಸಾವಿಗೆ ಹೆದರದಿರಲು ಹೇಳಿದ ಕೃಷ್ಣನ ಮಾತನ್ನು ನಂಬಿ ಮುನ್ನುಗ್ಗಿದ ಅರ್ಜುನನಿಗೆ ಕಡೆಗೆ ಜಯ ಪ್ರಾಪ್ತಿಯಾಗುತ್ತದೆ.
ಸಾವು ದೇಹವನ್ನು ಕೊನೆಗೊಳಿಸಿ ಇನ್ನೊಂದು ಸ್ಥಿತಿಗೆ ತಲುಪಿಸುವ ಕ್ರಿಯೆಯೇ ಹೊರತು ಆತ್ಮಕ್ಕೆ ಸಾವಿಲ್ಲ. ಆದ್ದರಿಂದ ಸಾವಿಗೆ ಅಥವಾ ತನ್ನ ಏನನ್ನಾದರೂ ಕಳೆದುಕೊಳ್ಳುವ ಕಾರಣಕ್ಕೆ ಹೆದರದೇ ಮುನ್ನುಗ್ಗುವುದು ಜೀವನದ ಯಶಸ್ಸಿಗೆ ಮೂಲ ಎಂದು ಭಗವದ್ಗೀತೆ ತಿಳಿಸುತ್ತದೆ.
Collected
🍁🍁🍁🍁🍁🍁🍁🍁🍁
No comments:
Post a Comment