💢ಅರಿದಡೆ ಶರಣ, ಮರೆದಡೆ ಮಾನವ💢
ಚಿಂತನ -
ಅರಿವಿಗೂ ಶರಣಾಗತಿಗೂ ಹತ್ತಿರದ ಸಂಬಂಧ. ಏಕೆಂದರೆ ತಿಳಿವಳಿಕೆ ಇಲ್ಲದವನು ತಾನು ಕಾಣುವ ಜಗತ್ತೇ ಶಾಶ್ವತವೆಂದೂ, ತನ್ನಲ್ಲಿರುವ ಹಣ, ವಸ್ತು, ವಾಹನಾದಿಗಳು ಸುಖ ಸಂತೋಷಗಳಿಗೆ ಕಾರಣವೆಂದೂ ಭ್ರಮಿಸುತ್ತಾರೆ.ಇಹಲೋಕದ ಭೋಗ ಭಾಗ್ಯಗಳೆಲ್ಲ ಕ್ಷಣಿಕವಾದುವು: ಪಾರಮಾರ್ಥಿಕವಾದ ಬಿಡುಗಡೆ ಮಾತ್ರ ಚಿರವಾದುದು ಎನ್ನುವ ಜ್ಞಾನ ಮೂಡಿದರೆ ಮಾತ್ರ ಆತ ಕರುಣಾ ಸಾಗರನಾದ ಶಿವನಿಗೆ ಪೂರ್ತಿಯಾಗಿ ಶರಣಾಗುತ್ತೇವೆ. ‘‘ನಾನು, ನನ್ನದು, ನನ್ನಿಂದ ಎಂಬುವೆಲ್ಲ ಬರಿಯ ಮಾಯೆ. ನೀನೇ ನನ್ನ ಸರ್ವಸ್ವ. ಇಹ ಜಗತ್ತಿನ ಬಂಧನದಿಂದ ಬಿಡಿಸಿ ನನಗೆ ಮೋಕ್ಷವನ್ನು ನೀಡು’’ ಎಂದು ಬೇಡಿಕೊಳ್ಳುತ್ತಾನೆ.
ಆದ್ದರಿಂದಲೇ ಬಸವೇಶ್ವರರು ‘‘ಅರಿದಡೆ ಶರಣ; ಮರೆದಡೆ ಮಾನವ’’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ತನ್ನನ್ನು ತಾನು ಚೆನ್ನಾಗಿ ತಿಳಿದುಕೊಂಡರೆ ಆಗ ಅವನು ಶರಣನ ಎಲ್ಲ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾನೆ. ತನ್ನ ತನು, ಮನ, ಧನ, ರಾಜ್ಯ, ವಿಶ್ವ, ಉತ್ಸಾಹ ಮತ್ತು ಸೇವಕ ವ್ಯಸನಗಳನ್ನು ತ್ಯಜಿಸಿ ಓಂ ನಮಃ ಶಿವಾಯ ಎಂಬ ಷಡಕ್ಷರಿ ಮಂತ್ರವನ್ನು ಜಪಿಸುತ್ತಾನೆ. ಹಂತ ಹಂತವಾಗಿ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂಬ ಸಾಧನೆಯ ಆರು ವೆುಟ್ಟಿಲುಗಳನ್ನು (ಷಟ್ಸ್ಥಲ) ಏರುತ್ತಾನೆ. ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭ್ಯತ್ಯಾಚಾರಗಳೆಂಬ ಐದು ಆಚಾರಗಳನ್ನು ಶ್ರದ್ಧೆಯಿಂದ ಅನುಸರಿಸುತ್ತಾನೆ. ನಿರಂತರವಾದ ಶಿವೋಪಾಸನೆಯ ಮೂಲಕ ಲಿಂಗಾಂಗ ಸಾಮರಸ್ಯವನ್ನು ಸಾಧಿಸುತ್ತಾನೆ. ಅಂಗ ಗುಣಗಳನ್ನು ಲಿಂಗ ಗುಣಗಳನ್ನು ಪಡೆಯುವುದೇ ಲಿಂಗಾಂಗ ಸಾಮರಸ್ಯ. ಯಾವನ ಆತ್ಮ ಇಂದ್ರಿಯಗಳು, ಕರಣಗಳು ಎಲ್ಲವೂ ಶಿವನನ್ನು ಸೇರಿ ಮನಸ್ಸೇ ಲಿಂಗಾಲಯವಾಗಿರುತ್ತದೋ ಅವನು ಲಿಂಗಾನುಭಾವಿ ಎನ್ನಿಸಿಕೊಳ್ಳುತ್ತಾನೆ. ಹೊರಗಿನಿಂದ ನೋಡಿದಾಗ ಆತನು ಇತರ ಎಲ್ಲರಂತೆ ತೋರಿದರೂ ಅಂತರಂಗದಲ್ಲಿ ಅವನು ಬೇರೆಯಾಗಿರುತ್ತಾನೆ. ಆದರೆ ಎಲ್ಲರಿಂದಲೂ ಇಂತಹ ಸಾಧನೆ ಸಾಧ್ಯವಾಗದು. ಅವರು ಯಾವುದೇ ಅರಿವನ್ನು (ಜ್ಞಾನವನ್ನು) ಹೊಂದದೆ ತಾವು ತಿಳಿಯಬೇಕಾದದ್ದೇನು, ಮಾಡಬೇಕಾದದ್ದೇನು ಎನ್ನುವುದನ್ನು ಪೂರ್ತಿಯಾಗಿ ಮರೆತು ಬರಿಯ ಐಹಿಕ ವ್ಯಕ್ತಿಗಳಾಗಿರುತ್ತಾರೆ. ಇವರೆಲ್ಲರೂ ಆಹಾರ – ನಿದ್ರೆ- ಭಯ- ಮೈಥುನಗಳಲ್ಲಿ ಮೈಮರೆಯುತ್ತಾರೆ.
ಸಂಸಾರವೆಂಬ ಕೆಸರು ಹೊಂಡದಲ್ಲಿ ಬಿದ್ದು ಮೇಲೇಳಲಾರದೆ ಚಡಪಡಿಸುವ ಸಾಮಾನ್ಯ ಮನುಷ್ಯರು ತಮ್ಮ ದೈಹಿಕ ಕಾಮನೆಗಳನ್ನಷ್ಟೇ ತೃಪ್ತಿಪಡಿಸಲು ಹವಣಿಸುತ್ತಾರೆ. ಇವರಿಗೆ ಇಂದ್ರಿಯ ಚಾಪಲ್ಯಗಳೇ ಹೆಚ್ಚು. ಪಂಚೇಂದ್ರಿಯಗಳು ಬಯಸುವ ಸಾಮಗ್ರಿ – ಸೌಕರ್ಯಗಳನ್ನು ಪಡೆಯುವುದಕ್ಕಾಗಿ ತಮ್ಮೆಲ್ಲ ಶಕ್ತಿ ಸಾಮರ್ಥ್ಯಗಳನ್ನು ವ್ಯಯಿಸುತ್ತಾರೆ. ಆತ್ಮೋದ್ಧಾರವೆನ್ನುವುದು, ಸಾಯುಜ್ಯ ಎನ್ನುವುದು ಇವರಿಗೆ ಕನಸಿನ ಮಾತಾಗುತ್ತದೆ. ತಮ್ಮನ್ನು ತಾವು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡದಿದ್ದರೆ ಇವರು ಶರಣ (ಶಿವಭಕ್ತ)ರಾಗುವುದಾದರೂ ಹೇಗೆ?
-ಅರ್ತಿಕಜೆ
🍀🍀🍀🍀🍀🍀🍀🍀🍀
ಚಿಂತನ -
ಅರಿವಿಗೂ ಶರಣಾಗತಿಗೂ ಹತ್ತಿರದ ಸಂಬಂಧ. ಏಕೆಂದರೆ ತಿಳಿವಳಿಕೆ ಇಲ್ಲದವನು ತಾನು ಕಾಣುವ ಜಗತ್ತೇ ಶಾಶ್ವತವೆಂದೂ, ತನ್ನಲ್ಲಿರುವ ಹಣ, ವಸ್ತು, ವಾಹನಾದಿಗಳು ಸುಖ ಸಂತೋಷಗಳಿಗೆ ಕಾರಣವೆಂದೂ ಭ್ರಮಿಸುತ್ತಾರೆ.ಇಹಲೋಕದ ಭೋಗ ಭಾಗ್ಯಗಳೆಲ್ಲ ಕ್ಷಣಿಕವಾದುವು: ಪಾರಮಾರ್ಥಿಕವಾದ ಬಿಡುಗಡೆ ಮಾತ್ರ ಚಿರವಾದುದು ಎನ್ನುವ ಜ್ಞಾನ ಮೂಡಿದರೆ ಮಾತ್ರ ಆತ ಕರುಣಾ ಸಾಗರನಾದ ಶಿವನಿಗೆ ಪೂರ್ತಿಯಾಗಿ ಶರಣಾಗುತ್ತೇವೆ. ‘‘ನಾನು, ನನ್ನದು, ನನ್ನಿಂದ ಎಂಬುವೆಲ್ಲ ಬರಿಯ ಮಾಯೆ. ನೀನೇ ನನ್ನ ಸರ್ವಸ್ವ. ಇಹ ಜಗತ್ತಿನ ಬಂಧನದಿಂದ ಬಿಡಿಸಿ ನನಗೆ ಮೋಕ್ಷವನ್ನು ನೀಡು’’ ಎಂದು ಬೇಡಿಕೊಳ್ಳುತ್ತಾನೆ.
ಆದ್ದರಿಂದಲೇ ಬಸವೇಶ್ವರರು ‘‘ಅರಿದಡೆ ಶರಣ; ಮರೆದಡೆ ಮಾನವ’’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ತನ್ನನ್ನು ತಾನು ಚೆನ್ನಾಗಿ ತಿಳಿದುಕೊಂಡರೆ ಆಗ ಅವನು ಶರಣನ ಎಲ್ಲ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾನೆ. ತನ್ನ ತನು, ಮನ, ಧನ, ರಾಜ್ಯ, ವಿಶ್ವ, ಉತ್ಸಾಹ ಮತ್ತು ಸೇವಕ ವ್ಯಸನಗಳನ್ನು ತ್ಯಜಿಸಿ ಓಂ ನಮಃ ಶಿವಾಯ ಎಂಬ ಷಡಕ್ಷರಿ ಮಂತ್ರವನ್ನು ಜಪಿಸುತ್ತಾನೆ. ಹಂತ ಹಂತವಾಗಿ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂಬ ಸಾಧನೆಯ ಆರು ವೆುಟ್ಟಿಲುಗಳನ್ನು (ಷಟ್ಸ್ಥಲ) ಏರುತ್ತಾನೆ. ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭ್ಯತ್ಯಾಚಾರಗಳೆಂಬ ಐದು ಆಚಾರಗಳನ್ನು ಶ್ರದ್ಧೆಯಿಂದ ಅನುಸರಿಸುತ್ತಾನೆ. ನಿರಂತರವಾದ ಶಿವೋಪಾಸನೆಯ ಮೂಲಕ ಲಿಂಗಾಂಗ ಸಾಮರಸ್ಯವನ್ನು ಸಾಧಿಸುತ್ತಾನೆ. ಅಂಗ ಗುಣಗಳನ್ನು ಲಿಂಗ ಗುಣಗಳನ್ನು ಪಡೆಯುವುದೇ ಲಿಂಗಾಂಗ ಸಾಮರಸ್ಯ. ಯಾವನ ಆತ್ಮ ಇಂದ್ರಿಯಗಳು, ಕರಣಗಳು ಎಲ್ಲವೂ ಶಿವನನ್ನು ಸೇರಿ ಮನಸ್ಸೇ ಲಿಂಗಾಲಯವಾಗಿರುತ್ತದೋ ಅವನು ಲಿಂಗಾನುಭಾವಿ ಎನ್ನಿಸಿಕೊಳ್ಳುತ್ತಾನೆ. ಹೊರಗಿನಿಂದ ನೋಡಿದಾಗ ಆತನು ಇತರ ಎಲ್ಲರಂತೆ ತೋರಿದರೂ ಅಂತರಂಗದಲ್ಲಿ ಅವನು ಬೇರೆಯಾಗಿರುತ್ತಾನೆ. ಆದರೆ ಎಲ್ಲರಿಂದಲೂ ಇಂತಹ ಸಾಧನೆ ಸಾಧ್ಯವಾಗದು. ಅವರು ಯಾವುದೇ ಅರಿವನ್ನು (ಜ್ಞಾನವನ್ನು) ಹೊಂದದೆ ತಾವು ತಿಳಿಯಬೇಕಾದದ್ದೇನು, ಮಾಡಬೇಕಾದದ್ದೇನು ಎನ್ನುವುದನ್ನು ಪೂರ್ತಿಯಾಗಿ ಮರೆತು ಬರಿಯ ಐಹಿಕ ವ್ಯಕ್ತಿಗಳಾಗಿರುತ್ತಾರೆ. ಇವರೆಲ್ಲರೂ ಆಹಾರ – ನಿದ್ರೆ- ಭಯ- ಮೈಥುನಗಳಲ್ಲಿ ಮೈಮರೆಯುತ್ತಾರೆ.
ಸಂಸಾರವೆಂಬ ಕೆಸರು ಹೊಂಡದಲ್ಲಿ ಬಿದ್ದು ಮೇಲೇಳಲಾರದೆ ಚಡಪಡಿಸುವ ಸಾಮಾನ್ಯ ಮನುಷ್ಯರು ತಮ್ಮ ದೈಹಿಕ ಕಾಮನೆಗಳನ್ನಷ್ಟೇ ತೃಪ್ತಿಪಡಿಸಲು ಹವಣಿಸುತ್ತಾರೆ. ಇವರಿಗೆ ಇಂದ್ರಿಯ ಚಾಪಲ್ಯಗಳೇ ಹೆಚ್ಚು. ಪಂಚೇಂದ್ರಿಯಗಳು ಬಯಸುವ ಸಾಮಗ್ರಿ – ಸೌಕರ್ಯಗಳನ್ನು ಪಡೆಯುವುದಕ್ಕಾಗಿ ತಮ್ಮೆಲ್ಲ ಶಕ್ತಿ ಸಾಮರ್ಥ್ಯಗಳನ್ನು ವ್ಯಯಿಸುತ್ತಾರೆ. ಆತ್ಮೋದ್ಧಾರವೆನ್ನುವುದು, ಸಾಯುಜ್ಯ ಎನ್ನುವುದು ಇವರಿಗೆ ಕನಸಿನ ಮಾತಾಗುತ್ತದೆ. ತಮ್ಮನ್ನು ತಾವು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡದಿದ್ದರೆ ಇವರು ಶರಣ (ಶಿವಭಕ್ತ)ರಾಗುವುದಾದರೂ ಹೇಗೆ?
-ಅರ್ತಿಕಜೆ
🍀🍀🍀🍀🍀🍀🍀🍀🍀
No comments:
Post a Comment