💢💢💢💢💢💢💢💢💢
ಪ್ರಶ್ನೆ: ಪ್ರಿಯ ಗುರುದೇವ, ನನ್ನ ಕಾರ್ಯಕ್ಷೇತ್ರದ ಚಟುವಟಿಕೆಗಳು ಗೊಂದಲ ಮೂಡಿಸುತ್ತಿವೆ. ನನ್ನ ಸಹೋದ್ಯೋಗಿಗಳಲ್ಲಿ ಅನೇಕರು ಮದ್ಯಪಾನ ಮಾಡುತ್ತಾರೆ, ಅನೈತಿಕ ಸಂಬಂಧಗಳಲ್ಲಿ ಮಗ್ನರಾಗಿರುತ್ತಾರೆ. ನಾನು ಅವರೊಂದಿಗೆ ಬೆರೆಯಲು ಪ್ರಯತ್ನಿಸಿದಾಗ ನನಗೆ ನಕಾರಾತ್ಮಕ ಕಂಪನಗಳು ಸಿಗುತ್ತವೆ ಮತ್ತು ನನ್ನ ಶಕ್ತಿಯು ಬರಿದಾಗುತ್ತದೆ. ನನಗೆ ಅವರಿಂದ ತಪ್ಪಿಸಿಕೊಳ್ಳಬೇಕೆಂದೆನಿಸುತ್ತದೆ. ನಾನು ಅವರನ್ನು ಸ್ವೀಕರಿಸುವುದು ಮತ್ತು ಅವರೊಂದಿಗೆ ಬೆರೆಯುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಕಠಿಣ ಪರಿಸ್ಥಿತಿಗಳು ನಿನ್ನಲ್ಲಿರುವ ಕುಶಲತೆಗಳನ್ನು ಹೊರತರುತ್ತವೆ. ಒಂದು ತಾವರೆಯ ಎಲೆಯು ನೀರಿನಲ್ಲಿರುತ್ತದೆ ಮತ್ತು ಕೆಲವೊಮ್ಮೆ ನೀರು ಎಲೆಯ ಮೇಲೆ ಚೆಲ್ಲುತ್ತದೆ, ಆದರೆ ಆಗಲೂ ಎಲೆಯು ಒಣಗಿಕೊಂಡಿರುತ್ತದೆ, ಅದು ಎಲೆಗೆ ಅಂಟಿಕೊಳ್ಳುವುದಿಲ್ಲ.
ಅದೇ ರೀತಿಯಲ್ಲಿ, ನೀರು ಮತ್ತು ತುಪ್ಪ ಎರಡೂ ದ್ರವಗಳು, ಆದರೆ ತುಪ್ಪದ ಒಂದು ಹನಿಯು ನೀರಿನ ಮೇಲೆ ತೇಲುತ್ತದೆ, ಅದು ಮುಳುಗುವುದಿಲ್ಲ. ಅದೇ ರೀತಿ, ಒಂದು ನಕಾರಾತ್ಮಕ ವಾತಾವರಣದಲ್ಲಿ, ಒಂದು ತುಪ್ಪದ ಹನಿಯಂತಿರು. ಅಲ್ಲಿ ನೀನು ನಿನ್ನ ಸಮಗ್ರತೆಯನ್ನಿಟ್ಟುಕೊಂಡು ತೇಲು. ಒಳಕ್ಕೆ ಆಳಕ್ಕೆ ಮುಳುಗುವ ಒಂದು ಕಲ್ಲಿನಂತಿರಬೇಡ.
🍁✨🍁✨🍁✨🍁✨🍁
✨✨✨✨✨✨✨✨✨
ಪ್ರಶ್ನೆ: ಗುರುದೇವ, ಯಾವುದೇ ಭಯವಿಲ್ಲದೆಯೇ; ಕಳೆದುಕೊಳ್ಳುವ ಭಯ, ಸಾವಿನ ಭಯ, ಸೋಲಿನ ಭಯ, ತಿಳಿದುದರ ಮತ್ತು ತಿಳಿಯದಿರುವುದರ ಬಗ್ಗೆಯಿರುವ ಭಯ; ಇವುಗಳಿಲ್ಲದೆಯೇ ನಾನು ಈ ಪ್ರಪಂಚದಲ್ಲಿ ಹೇಗೆ ಬದುಕಬಹುದು?
ಶ್ರೀ ಶ್ರೀ ರವಿ ಶಂಕರ್: ಭಯವೆಂದರೆ ಪ್ರೀತಿಯು ತಲೆಕೆಳಗಾಗಿ ನಿಂತಿರುವುದು.
ಪ್ರೀತಿಯಿದ್ದರೆ, ಆಗ ಅಲ್ಲಿ ಯಾವುದೇ ಭಯವಿರುವುದಿಲ್ಲ ಮತ್ತು ಭಯವಿದ್ದರೆ, ಆಗ ಅಲ್ಲಿ ಪ್ರೀತಿಯಿರುವುದಿಲ್ಲ.
ನೋಡು, ಭಯ, ಪ್ರೀತಿ ಮತ್ತು ದ್ವೇಷ ಇವುಗಳೆಲ್ಲವೂ ಒಂದೇ ಚೈತನ್ಯದಿಂದ ಮಾಡಲ್ಪಟ್ಟಿವೆ. ಒಬ್ಬ ವ್ಯಕ್ತಿಯಲ್ಲಿ ದ್ವೇಷವಿರುವಾಗ, ಅವನು ಯಾವುದಕ್ಕೂ ಭಯಪಡುವುದಿಲ್ಲ.
ಒಬ್ಬ ವ್ಯಕ್ತಿಯಲ್ಲಿ ಆಳವಾದ ಪ್ರೀತಿಯಿರುವಾಗ ಕೂಡಾ ಅಲ್ಲಿ ಯಾವುದೇ ಭಯವಿರುವುದಿಲ್ಲ. ಅದು ಒಂದು ಶಕ್ತಿಯು ಈ ಮೂರು ರೂಪಗಳಲ್ಲಿ ಪ್ರಕಟಗೊಳ್ಳುವುದಾಗಿದೆ - ಪ್ರೀತಿ, ದ್ವೇಷ ಮತ್ತು ಭಯ.
ಫೆಬ್ರುವರಿ ೨, ೨೦೧೩ ರಂದು ನಾನು ತಿಹಾರ್ ಜೈಲಿಗೆ ಭೇಟಿ ನೀಡಿದೆ ಮತ್ತು ನಾನು ಆರ್ಟ್ ಆಫ್ ಲಿವಿಂಗಿನ ಕುಶಲತೆ ತರಬೇತಿ ಕೇಂದ್ರವೊಂದನ್ನು, ಒಂದು ಕ್ಯಾಂಟೀನನ್ನು ಮತ್ತು ಒಂದು ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದೆ. ಅಲ್ಲಿ ನಡೆದಿರುವ ಸುಧಾರಣೆಯ ಪ್ರಮಾಣವು ನಿಜಕ್ಕೂ ಹೃದಯಸ್ಪರ್ಶಿಯಾದುದು. ಕಠೋರ ಅಪರಾಧಿಗಳಾಗಿದ್ದ ಈ ಜನರು ಹೇಗೆ ಬದಲಾದರು ಎಂಬುದು ನೋಡಲು ಯೋಗ್ಯವಾದುದು. ಅವರು ಸಂಗೀತವನ್ನು, ಚಿತ್ರಕಲೆಯನ್ನು ಮತ್ತು ಹೊಸ ವಿಷಯಗಳನ್ನು ಕಲಿಯುವುದನ್ನು ಆಸ್ವಾದಿಸಲು ತೊಡಗಿದ್ದಾರೆ. ನಾನವರಲ್ಲಿ ಅಂದೆ, ಹೋಟೇಲು ಮತ್ತು ಕುಶಲತೆ ತರಬೇತಿ ಕೇಂದ್ರಗಳನ್ನು ಉಪಯೋಗಿಸಿ, ಆದರೆ ಆಸ್ಪತ್ರೆಯನ್ನು ಉಪಯೋಗಿಸಬೇಡಿ ಎಂದು.
ಒಂದು ಸಮಾಜದ ಆರೋಗ್ಯವು, ಆಸ್ಪತ್ರೆಗಳಲ್ಲಿರುವ ಖಾಲಿ ಹಾಸಿಗೆಗಳಿಂದ ಮತ್ತು ಜೈಲುಗಳಲ್ಲಿರುವ ಖಾಲಿ ಕೋಣೆಗಳಿಂದ ಸೂಚಿಸಲ್ಪಡುತ್ತದೆ. ಇವತ್ತು, ಕೇವಲ ೬೦೦೦ ಸಾಮರ್ಥ್ಯವಿರುವ ಸೆರೆಮನೆಯಲ್ಲಿ ೧೨೦೦೦ ಜನರಿದ್ದಾರೆ. ಆದುದರಿಂದ ಜನರು ಸೆರೆಮನೆಗಳೊಳಕ್ಕೆ ಹೋಗುವುದಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಳ್ಳಲು ನಾವು ಅವುಗಳ ಹೊರಗಿನಿಂದ ಕೂಡಾ ಕೆಲಸ ಮಾಡಬೇಕಾಗಿದೆ. ನಾವು ಮಾನವೀಯ ಮೌಲ್ಯಗಳ ಒಂದು ಅಲೆಯನ್ನು ಮತ್ತು ಆತ್ಮೀಯತೆಯ ಒಂದು ಭಾವವನ್ನು ತಂದಾಗ ಇದಾಗಲು ಸಾಧ್ಯವಿದೆ.
ಸೆರೆಮನೆಗಳಲ್ಲಿರುವ ಈ ಜನರು ಸುಂದರ ಜನರಾಗಿರುವರು, ಆದರೆ ಅಪರಾಧವನ್ನೆಸಗಿದಾಗ ಅವರಲ್ಲಿ ಯಾವುದೇ ಭಯವಿರಲಿಲ್ಲ ಯಾಕೆಂದರೆ ದ್ವೇಷವು ಅವರನ್ನು ಸ್ವಾಧೀನಪಡಿಸಿಕೊಂಡಿತು.
ಅದಕ್ಕಾಗಿಯೇ, ಜನರು ತಮ್ಮನ್ನು ಸೇವಾ ಕಾರ್ಯಗಳನ್ನು ಮಾಡುವುದರಲ್ಲಿ ಮತ್ತು ಉಜ್ಜಾಯೀ ಪ್ರಾಣಾಯಾಮ, ಧ್ಯಾನದ ಅಭ್ಯಾಸ ಮಾಡುವುದರಲ್ಲಿ ತೊಡಗಿಸಿಕೊಂಡರೆ, ಒಬ್ಬರು ಅನುಭವಿಸುವ ಭಯ, ಆತಂಕ ಮತ್ತು ಒತ್ತಡಗಳಂತಹ ಅದೇ ಚೈತನ್ಯವು ಮಗುಚಿ, ಎಲ್ಲರ ಕಡೆಗೂ ಪ್ರೀತಿ ಮತ್ತು ಸಹಾನುಭೂತಿಯಾಗುತ್ತದೆ.
🍁🍁🍁🍁🍁🍁🍁🍁🍁
💢💢💢💢💢💢💢💢💢
ಪ್ರಶ್ನೆ: ಎಲ್ಲಾ ಸಂಕಷ್ಟ ಮತ್ತು ಅನ್ಯಾಯಗಳ ಹೊರತಾಗಿಯೂ ಆಂತರಿಕವಾಗಿ ಶಾಂತಿಯಿಂದಿರುವುದರ ಪ್ರಾಮುಖ್ಯತೆಯನ್ನು ನಾನು ಅರಿತಿದ್ದೇನೆ. ಆದರೆ ಎಲ್ಲಾ ರೀತಿಯ ದಬ್ಬಾಳಿಕೆಗಳ ವಿರುದ್ಧ ಹೋರಾಡುವ ಒಬ್ಬ ಕಾರ್ಯಕರ್ತನಾಗಿ, ಹಿಂಸಾಚಾರವನ್ನು ಹೊಂದಿದ ಒಬ್ಬ ದಬ್ಬಾಳಿಕೆಗಾರನೊಂದಿಗೆ ಒಬ್ಬನು ಹೇಗೆ ವ್ಯವಹರಿಸಬೇಕು?
ಶ್ರೀ ಶ್ರೀ ರವಿ ಶಂಕರ್: ನಾವು ತಲ್ಲಣಗೊಂಡರೆ, ನಮ್ಮ ಕಾರ್ಯವು ಫಲಿಸದು. ನಾವು ಶಾಂತರಾಗಿರುವಾಗ ನಮಗೆ ಅಂತರ್ಜ್ಞಾನದ ಚಿಂತನೆಗಳು ಬರುತ್ತವೆ ಮತ್ತು ಈ ಆಲೋಚನೆಗಳೊಂದಿಗೆ ನೀವೊಂದು ಯೋಜನೆಯನ್ನು ಹಾಕಬೇಕು ಹಾಗೂ ಅದರಂತೆ ಕ್ರಮ ತೆಗೆದುಕೊಳ್ಳಬೇಕು. ನೀವೊಬ್ಬ ದಬ್ಬಾಳಿಕೆಗಾರನನ್ನು ಒಬ್ಬಂಟಿಯಾಗಿ ಎದುರಿಸಲು ಸಾಧ್ಯವಿಲ್ಲ. ನೀವು ಅರಿವನ್ನು ಮೂಡಿಸಬೇಕು ಮತ್ತು ಒಂದು ಗುಂಪಿನಲ್ಲಿ ಇದು ಸಾಧ್ಯವಿದೆ. ಅದೇ ಸಮಯಕ್ಕೆ, ನಿಮ್ಮ ಸಂಕಲ್ಪವನ್ನು ಬಲವಾಗಿರಿಸಿ ಹಾಗೂ ನಿಮಗೆ ಮಾರ್ಗದರ್ಶನ ಮಾಡುವ ಮತ್ತು ನಿಮ್ಮನ್ನು ಆಧರಿಸುವ ಒಂದು ಶಕ್ತಿಯಿದೆಯೆಂಬುದನ್ನು ತಿಳಿಯಿರಿ.
ಕೆಲವೊಮ್ಮೆ ಮಹಾತ್ಮಾ ಗಾಂಧಿಯವರು ಒಬ್ಬಂಟಿಯಾಗಿ ನಡೆಯಬೇಕಾಗಿ ಬಂತು ಎಂಬುದನ್ನು ನೆನಪಿನಲ್ಲಿಡಿ. ಇತರ ಸಮಯದಲ್ಲಿ ಅವರು ಅರಿವಿನ ಅಷ್ಟೊಂದು ದೊಡ್ಡ ಅಲೆಯನ್ನು ಸೃಷ್ಟಿಸಿದರು ಹಾಗೂ ಇಡೀ ಭೂಖಂಡದಲ್ಲಿ ಸಂಚಲನೆಯನ್ನು ಉಂಟುಮಾಡಿದರು, ಅಲ್ಲವೇ? ಮತ್ತು ಅವರು ಯಾವಾಗಲೂ ಧ್ಯಾನ ಮಾಡುತ್ತಿದ್ದರು. ಪ್ರತಿದಿನವೂ ಅವರು ಸತ್ಸಂಗ ಮಾಡುತ್ತಿದ್ದರು, ಪ್ರತಿದಿನ ಸಾಯಂಕಾಲವೂ ಅವರು ಭಜನೆಗಳನ್ನು ಹಾಡುತ್ತಿದ್ದರು. ಬೆಳಗಿನ ಹೊತ್ತು ಅವರು ಭಗವದ್ಗೀತೆಯನ್ನು ಓದುತ್ತಿದ್ದರು. ಹೀಗೆ ಮಹಾತ್ಮಾ ಗಾಂಧಿಯವರಲ್ಲಿ ಆಧ್ಯಾತ್ಮಿಕ ಬಲವಿತ್ತು, ಇಲ್ಲದೇ ಹೋಗಿದ್ದರೆ ಅವರೇನು ಸಾಧಿಸಿರುವರೋ ಅದನ್ನು ಮಾಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.
🍁🍁🍁🍁🍁🍁🍁🍁🍁
No comments:
Post a Comment