Saturday, 30 July 2016

ಶ್ರೀವಾಣಿ

⭐️ ಶ್ರೀವಾಣಿ⭐️


 ವಿಶಾಲ ಹೃದಯ


  ಎರಡನೆಯ ಮಹಾಯುದ್ಧದ ಪ್ರಸಂಗ. ಪ್ರಜೆಗಳಿಂದ ಸರಕಾರ ರಾಷ್ಟ್ರರಕ್ಷಣಾ ನಿಧಿಗೆ ಸಹಾಯವನ್ನು ಕೇಳಿತು. ಜನರು ಕೈತುಂಬಿ, ಮನದುಂಬಿ ತಮ್ಮ ಸಿರಿ-ಸಂಪದ ದೇಶಕ್ಕಾಗಿ ಧಾರೆ ಎರೆದರು. ಹೈದರಾಬಾದದ ನಿಝಾಮರಿಗೂ 'ಯಥೋಚಿತ ಸಹಾಯ ಮಾಡಬೇಕೆಂದು' ದೇಶವು ಕೇಳಿತು. ಆಗ ಮಹಾರಾಜನು ಹೇಳಿದ್ದು ಹೀಗೆ- 'ನಾನು ಅತ್ಯಂತ ಬಡವನಾಗಿದ್ದೇನೆ. ರಾಷ್ಟ್ರ ರಕ್ಷಣಾ ನಿಧಿಗೆ ಸಹಾಯ ಮಾಡುವಷ್ಟು ಸಾಮರ್ಥ್ಯ ನನ್ನಲ್ಲಿ ಇಲ್ಲ!  ಮುಂದೆ ಅದೇ ಮಹಾರಾಜನು ದೇಹ ಬಿಟ್ಟ. ನಂತರ ಅವನ ಸಂಪತ್ತನ್ನು ಅಳೆಯಲು, ಅಂದಾಜು ಮಾಡಲು ನೂರಾರು ಜನರು ವರುಷಾವಧಿ ದುಡಿಯಬೇಕಾಯಿತು! ಇರುವುದನ್ನು ಅನುಭವಿಸುವ ಆನಂದಿಸುವ ವಿಶಾಲಹೃದಯ ಇಲ್ಲದಿದ್ದರೆ ನಾವು ಎಷ್ಟು ಸಿರಿವಂತರಾಗಿದ್ದರೂ ಪ್ರಯೋಜನವಿಲ್ಲ.

ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ

⭐️⭐️⭐️⭐️⭐️⭐️⭐️⭐️⭐️

No comments:

Post a Comment