🔹ಶ್ರೀವಾಣಿ 🔹
ಹೀಗೆ ಪರಿಸರವನ್ನು ನೋಡಿ ನಮ್ಮ ಬದುಕನ್ನು ನಾವು ಅರ್ಥಮಾಡಿಕೊಳ್ಳಬೇಕು. ಪರರ ಬಗ್ಗೆ ಯೋಚನೆ ಬೇಡ. ಏಕೆಂದರೆ ನಮ್ಮ ಬದುಕೇ ನಮಗೆ ಗೊತ್ತಿಲ್ಲ. ಅಂತಹುದರಲ್ಲಿ ಬೇರೆಯವರಿಗೆ ಹೇಳುವುದೇನಿದೆ?
ಪರರ ಚಿಂತೆ ನಮಗೇಕಯ್ಯ ನಮ್ಮ ಚಿಂತೆಯೇ
ನಮಗೆ ಹಾಸಲುಂಟು, ಹೊದಿಯಲುಂಟು,
ಕೂಡಲ ಸಂಗಮದೇವ ಒಲಿವನೋ,
ಒಲಿಯದಿರುವನೋ ಎಂಬ ಚಿಂತೆ.
ಹೀಗಿರುವಾಗ ಬೇರೆಯವರು ನೀಡುವ ಪ್ರಶಸ್ತಿಗಳು ನಮಗೇಕೆ ಬೇಕು? ಅದರಿಂದ ಏನು ಪ್ರಯೋಜನ? ಬೇರೆಯವರು ನಮಗೆ ಪ್ರಶಸ್ತಿ ನೀಡುವುದಲ್ಲ, ನಮ್ಮ ಮನಸ್ಸು ನಮಗೆ ಪ್ರಶಸ್ತಿ ನೀಡಬೇಕು. ತಮ್ಮ ಬದುಕನ್ನೇ ಅರಿಯದವರು ಇನ್ನೊಬ್ಬರ ಬದುಕನ್ನು ಹೇಗೆ ತಾನೇ ತಿಳಿದಾರು? ನಮ್ಮನ್ನು ನಾವು ಅಂತರಾವಲೋಕನ ಮಾಡಿಕೊಳ್ಳಬೇಕು. ನಮ್ಮ ಬದುಕನ್ನು ಒಮ್ಮೆ ಹರಡಿಕೊಂಡು ನೋಡಿ. ಏನೆಲ್ಲಾ ಬದುಕಿನಲ್ಲಿ ತಂದುಕೊಂಡಿದ್ದೇವೆ. ಆದರೆ ಗುಡಿಸಿಲ್ಲ, ಸ್ವಚ್ಛ ಮಾಡಿಲ್ಲ. ಏನು ಪ್ರಯೋಜನ ಹೊಲವಿದ್ದು ಸ್ವಚ್ಛ ಮಾಡುವ ಗುದ್ದಲಿ ಇಲ್ಲದಿದ್ದರೆ? ನಮ್ಮನ್ನು ನಾವು ಅರಿಯದೆ, ಇನ್ನೊಬ್ಬರಿಗೆ ಹೇಳುವದು ಸರಿಯೇ?
ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ
ಮೆಚ್ಚ ನಮ್ಮ ಕೂಡಲಸಂಗಮ ದೇವಾ||
ಇದುವರೆಗೂ ಸವೆಸಿದ ಬದುಕನ್ನು ಹರಡಿಕೊಂಡು ನೋಡಿ, 10 ವರ್ಷ ಇರಬಹುದು, 30 ವರ್ಷ ಇರಬಹುದು, 70 ವರ್ಷ ಇರಬಹುದು. ಎಷ್ಟು ಕಲ್ಲುಗಳಿವೆ, ಮುಳ್ಳುಗಳಿವೆ, ಬೇಡವಾದ ವಿಚಾರಗಳಿವೆ. ಅವುಗಳನ್ನು ಗುರುತಿಸಿ, ಸ್ವಚ್ಛ ಮಾಡಿ. ನಮ್ಮ ಬದುಕನ್ನು ಕೆಡಿಸುವ ವಿಚಾರಗಳಿದ್ದರೆ ಅವುಗಳನ್ನೇಕೆ ಮನಸ್ಸಿನಲ್ಲಿಟ್ಟುಕೊಳ್ಳಬೇಕು? ಅವುಗಳನ್ನು ಮರೆಯಬೇಕು. ಮರೆಯದಿದ್ದರೆ ನಮ್ಮ ಬದುಕು ಬಡವಾಗುತ್ತದೆ, ದುರ್ನಾತ ಬೀರುತ್ತದೆ. ಮರೆತರೆ ಬದುಕು ಶ್ರೀಮಂತವಾಗುತ್ತದೆ, ಸುಗಂದ ಬೀರುತ್ತದೆ.
ಬದುಕು ಎಂದರೆ ಮಕರಂದ
ಬದುಕು ಎಂದರೆ ಹರಿಯುವುದು
ಬದುಕು ಎಂದರೆ ಹಾಡುವುದು
ಬದುಕು ಎಂದರೆ ಸೌಂದರ್ಯ ಕಾಣುವುದು
ಬದುಕು ಎಂದರೆ ಸೌಂದರ್ಯ ಅನುಭವಿಸುವುದು
ಬದುಕು ಎಂದರೆ ಸೌಂದರ್ಯ ವ್ಯಕ್ತ ಪಡಿಸುವುದು.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು
🌴🌴🌴🌴🌴🌴🌴🌴🌴
ಹೀಗೆ ಪರಿಸರವನ್ನು ನೋಡಿ ನಮ್ಮ ಬದುಕನ್ನು ನಾವು ಅರ್ಥಮಾಡಿಕೊಳ್ಳಬೇಕು. ಪರರ ಬಗ್ಗೆ ಯೋಚನೆ ಬೇಡ. ಏಕೆಂದರೆ ನಮ್ಮ ಬದುಕೇ ನಮಗೆ ಗೊತ್ತಿಲ್ಲ. ಅಂತಹುದರಲ್ಲಿ ಬೇರೆಯವರಿಗೆ ಹೇಳುವುದೇನಿದೆ?
ಪರರ ಚಿಂತೆ ನಮಗೇಕಯ್ಯ ನಮ್ಮ ಚಿಂತೆಯೇ
ನಮಗೆ ಹಾಸಲುಂಟು, ಹೊದಿಯಲುಂಟು,
ಕೂಡಲ ಸಂಗಮದೇವ ಒಲಿವನೋ,
ಒಲಿಯದಿರುವನೋ ಎಂಬ ಚಿಂತೆ.
ಹೀಗಿರುವಾಗ ಬೇರೆಯವರು ನೀಡುವ ಪ್ರಶಸ್ತಿಗಳು ನಮಗೇಕೆ ಬೇಕು? ಅದರಿಂದ ಏನು ಪ್ರಯೋಜನ? ಬೇರೆಯವರು ನಮಗೆ ಪ್ರಶಸ್ತಿ ನೀಡುವುದಲ್ಲ, ನಮ್ಮ ಮನಸ್ಸು ನಮಗೆ ಪ್ರಶಸ್ತಿ ನೀಡಬೇಕು. ತಮ್ಮ ಬದುಕನ್ನೇ ಅರಿಯದವರು ಇನ್ನೊಬ್ಬರ ಬದುಕನ್ನು ಹೇಗೆ ತಾನೇ ತಿಳಿದಾರು? ನಮ್ಮನ್ನು ನಾವು ಅಂತರಾವಲೋಕನ ಮಾಡಿಕೊಳ್ಳಬೇಕು. ನಮ್ಮ ಬದುಕನ್ನು ಒಮ್ಮೆ ಹರಡಿಕೊಂಡು ನೋಡಿ. ಏನೆಲ್ಲಾ ಬದುಕಿನಲ್ಲಿ ತಂದುಕೊಂಡಿದ್ದೇವೆ. ಆದರೆ ಗುಡಿಸಿಲ್ಲ, ಸ್ವಚ್ಛ ಮಾಡಿಲ್ಲ. ಏನು ಪ್ರಯೋಜನ ಹೊಲವಿದ್ದು ಸ್ವಚ್ಛ ಮಾಡುವ ಗುದ್ದಲಿ ಇಲ್ಲದಿದ್ದರೆ? ನಮ್ಮನ್ನು ನಾವು ಅರಿಯದೆ, ಇನ್ನೊಬ್ಬರಿಗೆ ಹೇಳುವದು ಸರಿಯೇ?
ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ
ಮೆಚ್ಚ ನಮ್ಮ ಕೂಡಲಸಂಗಮ ದೇವಾ||
ಇದುವರೆಗೂ ಸವೆಸಿದ ಬದುಕನ್ನು ಹರಡಿಕೊಂಡು ನೋಡಿ, 10 ವರ್ಷ ಇರಬಹುದು, 30 ವರ್ಷ ಇರಬಹುದು, 70 ವರ್ಷ ಇರಬಹುದು. ಎಷ್ಟು ಕಲ್ಲುಗಳಿವೆ, ಮುಳ್ಳುಗಳಿವೆ, ಬೇಡವಾದ ವಿಚಾರಗಳಿವೆ. ಅವುಗಳನ್ನು ಗುರುತಿಸಿ, ಸ್ವಚ್ಛ ಮಾಡಿ. ನಮ್ಮ ಬದುಕನ್ನು ಕೆಡಿಸುವ ವಿಚಾರಗಳಿದ್ದರೆ ಅವುಗಳನ್ನೇಕೆ ಮನಸ್ಸಿನಲ್ಲಿಟ್ಟುಕೊಳ್ಳಬೇಕು? ಅವುಗಳನ್ನು ಮರೆಯಬೇಕು. ಮರೆಯದಿದ್ದರೆ ನಮ್ಮ ಬದುಕು ಬಡವಾಗುತ್ತದೆ, ದುರ್ನಾತ ಬೀರುತ್ತದೆ. ಮರೆತರೆ ಬದುಕು ಶ್ರೀಮಂತವಾಗುತ್ತದೆ, ಸುಗಂದ ಬೀರುತ್ತದೆ.
ಬದುಕು ಎಂದರೆ ಮಕರಂದ
ಬದುಕು ಎಂದರೆ ಹರಿಯುವುದು
ಬದುಕು ಎಂದರೆ ಹಾಡುವುದು
ಬದುಕು ಎಂದರೆ ಸೌಂದರ್ಯ ಕಾಣುವುದು
ಬದುಕು ಎಂದರೆ ಸೌಂದರ್ಯ ಅನುಭವಿಸುವುದು
ಬದುಕು ಎಂದರೆ ಸೌಂದರ್ಯ ವ್ಯಕ್ತ ಪಡಿಸುವುದು.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು
🌴🌴🌴🌴🌴🌴🌴🌴🌴
No comments:
Post a Comment