ಅಧಿಕ ರಕ್ತದೊತ್ತಡ ಮೂಲ ಕಾರಣ
|ಡಾ. ವೆಂಕಟ್ರಮಣ ಹೆಗಡೆ
ಹಿಂದೆ ಮಾಡಿದ ಪ್ರಯೋಗವೊಂದು ಇಂದು ಸಾಮಾನ್ಯವಾಗಿ ಕಾಡುವಂತಹ ಕಾಣುವಂತಹ ಸಮಸ್ಯೆ ಆಧಿಕ ರಕ್ತದೊತ್ತಡ (ಬಿ.ಪಿ). ಇದಕ್ಕೆ ಪೂರಕವಾಗಿ ಆಹಾರ ಪದಾರ್ಥವನ್ನು ಅಥವಾ ಆಂಶವನ್ನು ಕಂಡುಹಿಡಿಯಲು ಸಹಾಯ ಮಾಡಿತು.
ಸೊಲೆಮನ್ ಎನ್ನುವ ದ್ವೀಪದಲ್ಲಿ ವಾಸಿಸುವಂತಹ ಒಂದೇ ಜಾತಿಯ ಒಂದೇ ರೀತಿಯ ಆಹಾರ ಪದ್ಧತಿಯನ್ನು ಅನುಸರಿಸುವ ಜನಾಂಗದಲ್ಲಿ ಪ್ರಯೋಗವನ್ನು ಅಮೆರಿಕಾ ದೇಶದವರು ಕೈಗೊಂಡರು. ಅಲ್ಲಿ ಒಂದು ವಿಭಾಗದವರು ಸಮುದ್ರದ ದಡದ ಸಮೀಪ ವಾಸಮಾಡುತ್ತಿದ್ದರು. ಮತ್ತೊಂದು ವಿಭಾಗದವರು ಗುಡ್ಡದ ಮೇಲೆ ವಾಸಮಾಡುತ್ತಿದ್ದರು. ಸಿಹಿ ಗೆಣಸು ಅವರ ಮುಖ್ಯ ಆಹಾರ ಪದಾರ್ಥವಾಗಿದ್ದು ಅದನ್ನು ಬೇಯಿಸಿ ತಿನ್ನುವುದು ಅವರ ರೂಢಿ. ಆದರೆ ಸಮುದ್ರದ ದಡದಲ್ಲಿರುವವರು ರಕ್ತದೊತ್ತಡ ಸಮಸ್ಯೆಯಿಂದ ಬಳಲುವುದು ಹಾಗೂ ಗುಡ್ಡದ ಮೇಲೆ ವಾಸಿಸುವವರು ಈ ಸಮಸ್ಯೆಯಿಂದ ದೂರವಿರುವುದು ಕಂಡುಬಂದಿತು. ಇದಕ್ಕೆ ಮೂಲ ಕಾರಣವನ್ನು ಅನ್ವೇಷಿಸಿದಾಗ ಸಮುದ್ರದ ದಡದಲ್ಲಿ ವಾಸಿಸುವವರು ಉಪ್ಪು ನೀರನ್ನು (ಸಮುದ್ರದ ನೀರು) ಉಪಯೋಗಿಸಿ ಆಹಾರವನ್ನು ಬೇಯಿಸುತ್ತಿದ್ದರು. ಆದರೆ ಗುಡ್ಡದ ಮೇಲಿನ ಜನರು ಸಿಹಿನೀರಿನ ಬಳಕೆ ಮಾಡುತ್ತಿದ್ದರು. ಇದರಿಂದಾಗಿ ಹೆಚ್ಚು ಪ್ರಮಾಣದ ಉಪ್ಪು ಸೇವನೆಯಿಂದಾಗಿ ರಕ್ತದೊತ್ತಡ ಉಂಟಾಗುತ್ತದೆ ಎಂಬುದು ಸ್ಪಷ್ಟವಾಯಿತು.
ಹೀಗೆ ಪ್ರಯೋಗವು ಪರಿಣಾಮಕಾರಿಯಾದ ಅಂಶವನ್ನು ತೆರೆದಿಟ್ಟಿತು. ರುಚಿ ಹೆಚ್ಚಾಗಲು ಇಂದಿನ ದಿನಗಳಲ್ಲಿ ಹೆಚ್ಚು ಉಪ್ಪನ್ನು ಉಪಯೋಗಿಸುತ್ತಿದ್ದೇವೆ. ನಮ್ಮ ದೇಹಕ್ಕೆ ದಿನಕ್ಕೆ ಕೇವಲ 1 ರಿಂದ 2 ಗ್ರಾಂ ಉಪ್ಪಿನ ಅಂಶ ಸಾಕು. ಆದರೆ ಹೆಚ್ಚಿನ ಉಪ್ಪಿನ ಬಳಕೆ ಹೆಚ್ಚಾದ ಬಿಪಿ ಸಮಸ್ಯೆಗೆ ಕಾರಣವಾಗುತ್ತದೆ.
ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆಗಳು, ಕಿಡ್ನಿ ಸಮಸ್ಯೆ ಹೆಚ್ಚಾಗಲು ಇದೂ ಒಂದು ಕಾರಣ. ಹಾಗಾಗಿ ಉಪ್ಪಿನ ನಿಯಂತ್ರಣವು ಆರೋಗ್ಯಕ್ಕೆ ಅತಿ ಉತ್ತಮ. ಅಧಿಕ ರಕ್ತದೊತ್ತಡದ ಸಮಸ್ಯೆ ಹೊಂದಿರುವವರು ಉಪ್ಪು ಹಾಗೂ ಉಪ್ಪಿನಕಾಯಿಯ ಬಳಕೆಯನ್ನು ಕಡಿಮೆ ಮಾಡಲೇಬೇಕು. ಹಾಗಾಗಿ ವಿಶೇಷ ಆಹಾರ ಪದ್ಧತಿಯ ಮೂಲಕ, ಸುವ್ಯವಸ್ಥಿತ ಜೀವನಶೈಲಿಯ ಮೂಲಕ ಈ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಕಡಿಮೆಗೊಳಿಸಬಹುದು. ಅಥವಾ ನಿಯಂತ್ರಣಗೊಳಿಸಬಹುದು.
ಸಮಾಜದಲ್ಲಿ 20 ರಿಂದ 25 ಸಾವಿರ ಜನರು ಮಾತ್ರ ಊMಗಿ ಯಂತಹ ಸೂಕ್ಷ್ಮಾಣು ಜೀವಿಗಳಿಂದುಂಟಾಗುವ ಗಂಭೀರ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದು, 10 ರಿಂದ 15 ಲಕ್ಷ ಜನರು ಬಿಪಿಯಿಂದ ಬಂದಂತಹ ಸಮಸ್ಯೆಗಳಿಂದ ಮರಣ ಹೊಂದುತ್ತಿದ್ದಾರೆ. ಹಾಗಾಗಿ ಇಂದು ಅಧಿಕರಕ್ತದೊತ್ತಡದ ನಿಯಂತ್ರಣಕ್ಕೆ ಅಣಿಯಾಗುವುದು ಅನಿವಾರ್ಯ.
ಹಾಗಾದರೆ ನಮ್ಮ ಆಹಾರಪದ್ಧತಿ ಹೇಗಿರಬೇಕು ಎಂಬುದನ್ನು ಕೂಲಂಕಶವಾಗಿ ಅರಿತುಕೊಳ್ಳೋಣ. ಮುಖ್ಯವಾಗಿ ಕಡಿಮೆ ಉಪ್ಪಿನಂಶ ಹೊಂದಿರುವ ಆಹಾರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು.
ಇನ್ನು ಹಣ್ಣುಗಳು, ಹಣ್ಣುಗಳು 150 ಕ್ಕಿಂತ ಹೆಚ್ಚು ಎಂಟಿ ಆಕ್ಸಿಡಾಂಟ್ಗಳನ್ನು ಹೊಂದಿದ್ದು ರಕ್ತನಾಳಗಳನ್ನು ಶೋಧಿಸುವ ಕಾರ್ಯನಿರ್ವಹಿಸುತ್ತದೆ. ರಕ್ತನಾಳಗಳಲ್ಲಿ ಶೇಖರಣೆಗೊಂಡ ಕೆಟ್ಟ ಕೊಬ್ಬನ್ನು ಶೋಧಿಸುವ ವಿಶೇಷ ಗುಣ ಹೊಂದಿರುವುದರಿಂದ ದಿನಕ್ಕೆ 3 ರಿಂದ 4 ಬೌಲ್ ಹಣ್ಣನ್ನು ಸೇವಿಸುವುದೊಳ್ಳೆಯದು.
ಪೊಟ್ಯಾಷಿಯಂ ಅಂಶವನ್ನು ಹೆಚ್ಚು ಹೊಂದಿರುವ ಆಹಾರ ಪದಾರ್ಥವನ್ನು ತೆಗೆದುಕೊಳ್ಳುವುದು. ಅದರಲ್ಲಿಯೂ ಸೀಬೆ (ಪೇರಲೆ) ಹಣ್ಣಿನಲ್ಲಿ ಈ ಪೋಷಕಾಂಶ ಹೇರಳವಾಗಿದೆ. ಇದು ದೇಹದಲ್ಲಿ ಹೆಚ್ಚಾದ ಉಪ್ಪಿನಾಂಶ ಅಥವಾ ಸೋಡಿಯಂ ಪ್ರಮಾಣವನ್ನು ಸಮತೋಲನಗೊಳಿಸಲು ಕಾರಣವಾಗುತ್ತದೆ. ಬಾಳೆಹಣ್ಣು, ಬೆಣ್ಣೆಹಣ್ಣು, ಬೆಲ್ಲ ಇವುಗಳು ಸಹ ಹೆಚ್ಚಿನ ಪೊಟ್ಯಾಷಿಯಂ ಅಂಶವನ್ನು ಹೊಂದಿರುತ್ತದೆ.
ಬಿಪಿಯನ್ನು ಕಡಿಮೆ ಮಾಡಲು ಹೆಚ್ಚಿನ ನೈಟ್ರೇಟ್ಸ್ ಬೇಕು. ಬೀಟ್ರೂಟ್ ಈ ಗುಣವನ್ನು ಹೊಂದಿದೆ. ಬೀಟ್ರೂಟ್ನಲ್ಲಿ ಕೇವಲ 10 ಗ್ರಾಂನಷ್ಟೇ ಪ್ರಮಾಣದ ಸಕ್ಕರೆ ಅಂಶವನ್ನು ಹೊಂದಿದೆ. ಆದಕಾರಣ ಮಧುಮೇಹ ಹೊಂದಿದವರು ಸಹ ಬೀಟ್ರೂಟ್, ಕ್ಯಾರೆಟ್ ಹಾಗೂ ಸ್ವಲ್ಪ ಶುಂಠಿಯನ್ನು ಸೇರಿಸಿ ಜ್ಯೂಸ್ ಮಾಡಿ ಪ್ರತಿನಿತ್ಯ ಎರಡು ಬಾರಿ ಕುಡಿಯುವುದು ಅತ್ಯಂತ ಪರಿಣಾಮಕಾರಿ. ಮಧುಮೇಹ ಸಮಸ್ಯೆ ಇಲ್ಲದವರು ಬೆಲ್ಲವನ್ನು ಸಹ ಹಾಕಿ ಬೀಟ್ರೂಟ್ ಜ್ಯೂಸ್ ಮಾಡಿ ಕುಡಿಯಬಹುದು.
ಕೊನೇ ಹನಿ
ಅಡುಗೆ ಸೋಡಕ್ಕೆ ಸ್ವಲ್ಪ ನೀರನ್ನು ಹಾಕಿ ಕಲಸಿ, ಅದನ್ನು ಮೊಡವೆಯ ಕಲೆ ಇರುವ ಜಾಗಕ್ಕೆ ಮಾತ್ರ ಹಚ್ಚಿ 2 ನಿಮಿಷ ಬಿಟ್ಟು ತೊಳೆಯುವುದರಿಂದ ಕಲೆ ಕಡಿಮೆಯಾಗುತ್ತದೆ.
|ಡಾ. ವೆಂಕಟ್ರಮಣ ಹೆಗಡೆ
ಹಿಂದೆ ಮಾಡಿದ ಪ್ರಯೋಗವೊಂದು ಇಂದು ಸಾಮಾನ್ಯವಾಗಿ ಕಾಡುವಂತಹ ಕಾಣುವಂತಹ ಸಮಸ್ಯೆ ಆಧಿಕ ರಕ್ತದೊತ್ತಡ (ಬಿ.ಪಿ). ಇದಕ್ಕೆ ಪೂರಕವಾಗಿ ಆಹಾರ ಪದಾರ್ಥವನ್ನು ಅಥವಾ ಆಂಶವನ್ನು ಕಂಡುಹಿಡಿಯಲು ಸಹಾಯ ಮಾಡಿತು.
ಸೊಲೆಮನ್ ಎನ್ನುವ ದ್ವೀಪದಲ್ಲಿ ವಾಸಿಸುವಂತಹ ಒಂದೇ ಜಾತಿಯ ಒಂದೇ ರೀತಿಯ ಆಹಾರ ಪದ್ಧತಿಯನ್ನು ಅನುಸರಿಸುವ ಜನಾಂಗದಲ್ಲಿ ಪ್ರಯೋಗವನ್ನು ಅಮೆರಿಕಾ ದೇಶದವರು ಕೈಗೊಂಡರು. ಅಲ್ಲಿ ಒಂದು ವಿಭಾಗದವರು ಸಮುದ್ರದ ದಡದ ಸಮೀಪ ವಾಸಮಾಡುತ್ತಿದ್ದರು. ಮತ್ತೊಂದು ವಿಭಾಗದವರು ಗುಡ್ಡದ ಮೇಲೆ ವಾಸಮಾಡುತ್ತಿದ್ದರು. ಸಿಹಿ ಗೆಣಸು ಅವರ ಮುಖ್ಯ ಆಹಾರ ಪದಾರ್ಥವಾಗಿದ್ದು ಅದನ್ನು ಬೇಯಿಸಿ ತಿನ್ನುವುದು ಅವರ ರೂಢಿ. ಆದರೆ ಸಮುದ್ರದ ದಡದಲ್ಲಿರುವವರು ರಕ್ತದೊತ್ತಡ ಸಮಸ್ಯೆಯಿಂದ ಬಳಲುವುದು ಹಾಗೂ ಗುಡ್ಡದ ಮೇಲೆ ವಾಸಿಸುವವರು ಈ ಸಮಸ್ಯೆಯಿಂದ ದೂರವಿರುವುದು ಕಂಡುಬಂದಿತು. ಇದಕ್ಕೆ ಮೂಲ ಕಾರಣವನ್ನು ಅನ್ವೇಷಿಸಿದಾಗ ಸಮುದ್ರದ ದಡದಲ್ಲಿ ವಾಸಿಸುವವರು ಉಪ್ಪು ನೀರನ್ನು (ಸಮುದ್ರದ ನೀರು) ಉಪಯೋಗಿಸಿ ಆಹಾರವನ್ನು ಬೇಯಿಸುತ್ತಿದ್ದರು. ಆದರೆ ಗುಡ್ಡದ ಮೇಲಿನ ಜನರು ಸಿಹಿನೀರಿನ ಬಳಕೆ ಮಾಡುತ್ತಿದ್ದರು. ಇದರಿಂದಾಗಿ ಹೆಚ್ಚು ಪ್ರಮಾಣದ ಉಪ್ಪು ಸೇವನೆಯಿಂದಾಗಿ ರಕ್ತದೊತ್ತಡ ಉಂಟಾಗುತ್ತದೆ ಎಂಬುದು ಸ್ಪಷ್ಟವಾಯಿತು.
ಹೀಗೆ ಪ್ರಯೋಗವು ಪರಿಣಾಮಕಾರಿಯಾದ ಅಂಶವನ್ನು ತೆರೆದಿಟ್ಟಿತು. ರುಚಿ ಹೆಚ್ಚಾಗಲು ಇಂದಿನ ದಿನಗಳಲ್ಲಿ ಹೆಚ್ಚು ಉಪ್ಪನ್ನು ಉಪಯೋಗಿಸುತ್ತಿದ್ದೇವೆ. ನಮ್ಮ ದೇಹಕ್ಕೆ ದಿನಕ್ಕೆ ಕೇವಲ 1 ರಿಂದ 2 ಗ್ರಾಂ ಉಪ್ಪಿನ ಅಂಶ ಸಾಕು. ಆದರೆ ಹೆಚ್ಚಿನ ಉಪ್ಪಿನ ಬಳಕೆ ಹೆಚ್ಚಾದ ಬಿಪಿ ಸಮಸ್ಯೆಗೆ ಕಾರಣವಾಗುತ್ತದೆ.
ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆಗಳು, ಕಿಡ್ನಿ ಸಮಸ್ಯೆ ಹೆಚ್ಚಾಗಲು ಇದೂ ಒಂದು ಕಾರಣ. ಹಾಗಾಗಿ ಉಪ್ಪಿನ ನಿಯಂತ್ರಣವು ಆರೋಗ್ಯಕ್ಕೆ ಅತಿ ಉತ್ತಮ. ಅಧಿಕ ರಕ್ತದೊತ್ತಡದ ಸಮಸ್ಯೆ ಹೊಂದಿರುವವರು ಉಪ್ಪು ಹಾಗೂ ಉಪ್ಪಿನಕಾಯಿಯ ಬಳಕೆಯನ್ನು ಕಡಿಮೆ ಮಾಡಲೇಬೇಕು. ಹಾಗಾಗಿ ವಿಶೇಷ ಆಹಾರ ಪದ್ಧತಿಯ ಮೂಲಕ, ಸುವ್ಯವಸ್ಥಿತ ಜೀವನಶೈಲಿಯ ಮೂಲಕ ಈ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಕಡಿಮೆಗೊಳಿಸಬಹುದು. ಅಥವಾ ನಿಯಂತ್ರಣಗೊಳಿಸಬಹುದು.
ಸಮಾಜದಲ್ಲಿ 20 ರಿಂದ 25 ಸಾವಿರ ಜನರು ಮಾತ್ರ ಊMಗಿ ಯಂತಹ ಸೂಕ್ಷ್ಮಾಣು ಜೀವಿಗಳಿಂದುಂಟಾಗುವ ಗಂಭೀರ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದು, 10 ರಿಂದ 15 ಲಕ್ಷ ಜನರು ಬಿಪಿಯಿಂದ ಬಂದಂತಹ ಸಮಸ್ಯೆಗಳಿಂದ ಮರಣ ಹೊಂದುತ್ತಿದ್ದಾರೆ. ಹಾಗಾಗಿ ಇಂದು ಅಧಿಕರಕ್ತದೊತ್ತಡದ ನಿಯಂತ್ರಣಕ್ಕೆ ಅಣಿಯಾಗುವುದು ಅನಿವಾರ್ಯ.
ಹಾಗಾದರೆ ನಮ್ಮ ಆಹಾರಪದ್ಧತಿ ಹೇಗಿರಬೇಕು ಎಂಬುದನ್ನು ಕೂಲಂಕಶವಾಗಿ ಅರಿತುಕೊಳ್ಳೋಣ. ಮುಖ್ಯವಾಗಿ ಕಡಿಮೆ ಉಪ್ಪಿನಂಶ ಹೊಂದಿರುವ ಆಹಾರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು.
ಇನ್ನು ಹಣ್ಣುಗಳು, ಹಣ್ಣುಗಳು 150 ಕ್ಕಿಂತ ಹೆಚ್ಚು ಎಂಟಿ ಆಕ್ಸಿಡಾಂಟ್ಗಳನ್ನು ಹೊಂದಿದ್ದು ರಕ್ತನಾಳಗಳನ್ನು ಶೋಧಿಸುವ ಕಾರ್ಯನಿರ್ವಹಿಸುತ್ತದೆ. ರಕ್ತನಾಳಗಳಲ್ಲಿ ಶೇಖರಣೆಗೊಂಡ ಕೆಟ್ಟ ಕೊಬ್ಬನ್ನು ಶೋಧಿಸುವ ವಿಶೇಷ ಗುಣ ಹೊಂದಿರುವುದರಿಂದ ದಿನಕ್ಕೆ 3 ರಿಂದ 4 ಬೌಲ್ ಹಣ್ಣನ್ನು ಸೇವಿಸುವುದೊಳ್ಳೆಯದು.
ಪೊಟ್ಯಾಷಿಯಂ ಅಂಶವನ್ನು ಹೆಚ್ಚು ಹೊಂದಿರುವ ಆಹಾರ ಪದಾರ್ಥವನ್ನು ತೆಗೆದುಕೊಳ್ಳುವುದು. ಅದರಲ್ಲಿಯೂ ಸೀಬೆ (ಪೇರಲೆ) ಹಣ್ಣಿನಲ್ಲಿ ಈ ಪೋಷಕಾಂಶ ಹೇರಳವಾಗಿದೆ. ಇದು ದೇಹದಲ್ಲಿ ಹೆಚ್ಚಾದ ಉಪ್ಪಿನಾಂಶ ಅಥವಾ ಸೋಡಿಯಂ ಪ್ರಮಾಣವನ್ನು ಸಮತೋಲನಗೊಳಿಸಲು ಕಾರಣವಾಗುತ್ತದೆ. ಬಾಳೆಹಣ್ಣು, ಬೆಣ್ಣೆಹಣ್ಣು, ಬೆಲ್ಲ ಇವುಗಳು ಸಹ ಹೆಚ್ಚಿನ ಪೊಟ್ಯಾಷಿಯಂ ಅಂಶವನ್ನು ಹೊಂದಿರುತ್ತದೆ.
ಬಿಪಿಯನ್ನು ಕಡಿಮೆ ಮಾಡಲು ಹೆಚ್ಚಿನ ನೈಟ್ರೇಟ್ಸ್ ಬೇಕು. ಬೀಟ್ರೂಟ್ ಈ ಗುಣವನ್ನು ಹೊಂದಿದೆ. ಬೀಟ್ರೂಟ್ನಲ್ಲಿ ಕೇವಲ 10 ಗ್ರಾಂನಷ್ಟೇ ಪ್ರಮಾಣದ ಸಕ್ಕರೆ ಅಂಶವನ್ನು ಹೊಂದಿದೆ. ಆದಕಾರಣ ಮಧುಮೇಹ ಹೊಂದಿದವರು ಸಹ ಬೀಟ್ರೂಟ್, ಕ್ಯಾರೆಟ್ ಹಾಗೂ ಸ್ವಲ್ಪ ಶುಂಠಿಯನ್ನು ಸೇರಿಸಿ ಜ್ಯೂಸ್ ಮಾಡಿ ಪ್ರತಿನಿತ್ಯ ಎರಡು ಬಾರಿ ಕುಡಿಯುವುದು ಅತ್ಯಂತ ಪರಿಣಾಮಕಾರಿ. ಮಧುಮೇಹ ಸಮಸ್ಯೆ ಇಲ್ಲದವರು ಬೆಲ್ಲವನ್ನು ಸಹ ಹಾಕಿ ಬೀಟ್ರೂಟ್ ಜ್ಯೂಸ್ ಮಾಡಿ ಕುಡಿಯಬಹುದು.
ಕೊನೇ ಹನಿ
ಅಡುಗೆ ಸೋಡಕ್ಕೆ ಸ್ವಲ್ಪ ನೀರನ್ನು ಹಾಕಿ ಕಲಸಿ, ಅದನ್ನು ಮೊಡವೆಯ ಕಲೆ ಇರುವ ಜಾಗಕ್ಕೆ ಮಾತ್ರ ಹಚ್ಚಿ 2 ನಿಮಿಷ ಬಿಟ್ಟು ತೊಳೆಯುವುದರಿಂದ ಕಲೆ ಕಡಿಮೆಯಾಗುತ್ತದೆ.
No comments:
Post a Comment