✨🔵✨🔵✨🔵✨🔵✨
ಪ್ರಶ್ನೆ: ಪ್ರತಿದಿನವೂ ಅದೇ ಕೆಲಸವನ್ನು ಮಾಡಲು ನನ್ನನ್ನು ನಾನು ಗಮನವಿಟ್ಟುಕೊಳ್ಳುವಂತೆ ಮಾಡುವುದು ಮತ್ತು ಪ್ರೇರೇಪಿತನಾಗಿಟ್ಟುಕೊಳ್ಳುವುದು ಹೇಗೆಂದು ನಾನು ತಿಳಿಯಲು ಬಯಸುತ್ತೇನೆ.
ಶ್ರೀ ಶ್ರೀ ರವಿ ಶಂಕರ್: ನನಗೆ ಹೇಳು, ನೀನು ಯಾಕೆ ಗಮನವಿಟ್ಟು ಮಾಡಲು ಬಯಸುವೆ?
(ಉತ್ತರ: ಇದು ನನ್ನ ನೌಕರಿ ಮತ್ತು ಜೀವನೋಪಾಯದ ಪ್ರಶ್ನೆ!)
ಅಷ್ಟೇ! ಇದೊಂದು ನಿನ್ನ ಜೀವನೋಪಾಯದ ಪ್ರಶ್ನೆಯೆಂಬ ಈ ಅರಿವೇ ಸಾಕು ನೀನು ಗಮನವಿಡುವಂತೆ ಮಾಡಲು!
ನೋಡು, ಗಮನ ಬೇಕಾಗಿರುವುದು ಅಲ್ಲಿ ಯಾವುದೇ ಪ್ರೇಮ ಮತ್ತು ಅನುರಾಗವಿಲ್ಲದಿರುವಾಗ. ನಿನಗೆ ಯಾವುದರ ಕಡೆಗಾದರೂ ಒಂದು ಅನುರಾಗವಿದ್ದರೆ, ಆಗ ನೀನು ಅದರ ಮೇಲೆ ಗಮನ ನೀಡಬೇಕಾದ ಅಗತ್ಯವಿಲ್ಲ. ಇದು ಮೊದಲನೆಯದು.
ಎರಡನೆಯದಾಗಿ, ಅದನ್ನು ಸ್ವಂತದ್ದಾಗಿಸಿಕೊಳ್ಳುವುದರಿಂದ, ’ಇದು ನನ್ನದೇ ವ್ಯವಹಾರ’ ಎಂದು ಯೋಚಿಸುವುದರಿಂದ, ಗಮನವು ತನ್ನಿಂತಾನೇ ಬರುತ್ತದೆ. ಅದು ಒಬ್ಬ ಮಾವನ ವ್ಯವಹಾರವಾಗಿದ್ದರೆ ಅಥವಾ ನಿನ್ನ ತಂದೆಯ ವ್ಯವಹಾರವಾಗಿದ್ದರೆ, ಆಗ ಗಮನವು ಕಡಿಮೆಯಾಗಿರುತ್ತದೆ! ಆದರೆ ಅದು ನಿನ್ನ ಸ್ವಂತದ್ದಾಗಿದ್ದರೆ, ಆಗ ನೀನು ಗಮನ ಕೊಡಬೇಕಾಗಿಯೇ ಇಲ್ಲ. ಗಮನವು ಅದರಷ್ಟಕ್ಕೆ ಬರುತ್ತದೆ.
🔵✨🔵✨🔵✨🔵✨🔵
🔹✨🔹✨🔹✨🔹✨🔹
ಪ್ರಶ್ನೆ: ಗುರುದೇವ, ನಾನು ಮೊದಲ ಬಾರಿಗೆ ಮತದಾರನಾಗಿದ್ದೇನೆ. ನನ್ನ ಕ್ಷೇತ್ರದ ನಾಯಕನು, ಒಬ್ಬರು ಬಯಸಬಹುದಾದಷ್ಟು ಪ್ರಬಲ ಅಭ್ಯರ್ಥಿಯಲ್ಲ. ಆದರೂ ನಾನು, ಆ ಪಕ್ಷದ ನಾಯಕರು ಚುನಾವಣೆಯಲ್ಲಿ ಗೆಲ್ಲಬೇಕೆಂದು ಬಯಸುತ್ತೇನೆ. ಹಾಗಾದರೆ ನಾನೇನು ಮಾಡುವುದು?
ಶ್ರೀ ಶ್ರೀ ರವಿ ಶಂಕರ್: ರಾಷ್ಟ್ರೀಯ ಚುನಾವಣೆಯ ವಿಷಯದಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ನೋಡಿ ಮತದಾನ ಮಾಡುವುದು ಬೇಡವೆಂದು ನಾನು ಸಲಹೆ ನೀಡುತ್ತೇನೆ. ದೇಶದ ಪ್ರಧಾನ ಮಂತ್ರಿಯನ್ನಾಗಿ ಯಾರನ್ನು ಮಾಡಬೇಕೆಂದು ನೀವು ಬುದ್ಧಿವಂತಿಕೆಯಿಂದ ಮೌಲ್ಯಮಾಪನ ಮಾಡಬೇಕು.
ಪುರಸಭೆಯ ಚುನಾವಣೆಯ ವಿಷಯ ಬಂದಾಗ, ನೀವು ಅಭ್ಯರ್ಥಿಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು.
ಆದರೆ ರಾಷ್ಟ್ರೀಯ ಮಟ್ಟದಲ್ಲಿ, ರಾಷ್ಟ್ರದ ಹಿತಾಸಕ್ತಿಗಳ ಕಡೆಗೆ ನೋಡಿ. ಯಾರು ಹೃದಯದಿಂದ ಮಾತನಾಡುವರೋ ಅವರಿಗೆ ಮತ ಹಾಕಿ. ಬೇರೆ ಯಾರಿಂದಲೋ ಸಿದ್ಧಪಡಿಸಲ್ಪಟ್ಟ ಒಂದು ಭಾಷಣವನ್ನೋದುವ ಒಬ್ಬ ಪ್ರಧಾನ ಮಂತ್ರಿಯು ನಮಗೆ ಬೇಕಾಗಿಲ್ಲ. ಒಬ್ಬ ಪ್ರಬಲನಾದ ನಾಯಕ ಮತ್ತು ತನ್ನ ಮನಸ್ಸು ಹಾಗೂ ಅಭಿಪ್ರಾಯಗಳನ್ನು ನಿರ್ಭಯವಾಗಿ ವ್ಯಕ್ತಪಡಿಸುವ ಒಬ್ಬರು ನಮಗೆ ಬೇಕು.
ನೋಡಿ, ಒಂದು ರಾಜಕೀಯ ಪಕ್ಷ ಅಥವಾ ಇನ್ನೊಂದರ ಕಡೆಗೆ ಒಲವು ತೋರುವ ಅಥವಾ ಬೆಂಬಲಿಸುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಅದು ಪರವಾಗಿಲ್ಲ. ಆದರೆ ರಾಷ್ಟ್ರ ಮತ್ತು ಅದರ ಹಿತಾಸಕ್ತಿಗಳ ವಿಷಯದಲ್ಲಿ, ನೀವು ನಿಮ್ಮೆಲ್ಲಾ ರಾಜಕೀಯ ಮತ್ತು ಪ್ರಾದೇಶಿಕ ಆದ್ಯತೆಗಳನ್ನು ಬದಿಗಿಟ್ಟು, ಮೊದಲು ದೇಶದ ಬಗ್ಗೆ ಏಕಮನಸ್ಕತೆಯಿಂದ ಯೋಚಿಸಬೇಕು.
ತಾನು ನೀಡಿದ ಭರವಸೆಗಳನ್ನು ಯಾರು ನಿಜಕ್ಕೂ ಪೂರೈಸಬಲ್ಲರೋ ಮತ್ತು ಒಳ್ಳೆಯ ಕೆಲಸವನ್ನು ಮಾಡಬಲ್ಲರೋ ಅಂತಹ ಒಬ್ಬ ಪ್ರಬಲ ಅಭ್ಯರ್ಥಿಗಾಗಿ ಹುಡುಕಿ ಮತ್ತು ನಂತರ ಅದರಂತೆ ಅವರಿಗೆ ಮತ ನೀಡಿ. ಇತರರಿಗೆ ಕೂಡಾ ಇದನ್ನು ಹೇಳಿ ಮತ್ತು ಅವರು ಅದನ್ನು ಅರ್ಥೈಸಿಕೊಳ್ಳುವಂತೆ ಮಾಡಿ. ನಾನಿದನ್ನು ಯಾಕೆ ಹೇಳುತ್ತಿರುವೆನೆಂದು ನಾನು ಹೇಳುತ್ತೇನೆ.
ಇವತ್ತು ಒಂದು ಡಾಲರ್ ೬೫ ರೂಪಾಯಿಗಳಿಗೆ ಸರಿಸಮಾನವಾಗಿದೆ. ಕೇಂದ್ರದಲ್ಲಿ ಒಬ್ಬ ಬಲಹೀನ ವ್ಯಕ್ತಿಯು ಅಧಿಕಾರಕ್ಕೆ ಬಂದರೆ, ಒಂದು ಡಾಲರ್ ಬೆಲೆ ಬಲವಾಗಿ, ೧೦೦ ರೂಪಾಯಿಗಳಿಗೆ ಸಮಾನವಾಗುತ್ತದೆ. ಹೀಗಾಗಬೇಕೆಂದು ಇತರ ರಾಷ್ಟ್ರಗಳು ಬಯಸುತ್ತವೆ ಯಾಕೆಂದರೆ, ಆಗ ಭಾರತದಿಂದ ವಸ್ತುಗಳನ್ನು ಖರೀದಿಸುವುದು ಅಗ್ಗವಾಗುತ್ತದೆ. ಆದರೆ ಇಲ್ಲಿ, ನಮಗೆ ಎಲ್ಲವೂ ಹೆಚ್ಚು ದುಬಾರಿಯಾಗುತ್ತವೆ. ದೈನಂದಿನ ಪದಾರ್ಥಗಳ ಬೆಲೆಗಳು ಗಗನಕ್ಕೇರುತ್ತವೆ. ಕೇಂದ್ರದಲ್ಲಿ ಒಬ್ಬ ಪ್ರಬಲನಾದ ವ್ಯಕ್ತಿಯು ಅಧಿಕಾರಕ್ಕೆ ಬಂದರೆ, ಆಗ ರೂಪಾಯಿಯು ಶಕ್ತಿ ಗಳಿಸಿಕೊಂಡು, ಡಾಲರ್ನ ಖರೀದಿಸುವ ಶಕ್ತಿಯು ೪೦ ರೂಪಾಯಿಗಳಿಗೆ ಇಳಿಯಬಹುದೆಂದು ಇತರ ರಾಷ್ಟ್ರಗಳು ಹೆದರುತ್ತಿವೆ.
ನಮ್ಮ ರಾಷ್ಟ್ರದ ಆರ್ಥಿಕ ಸ್ಥಿತಿಯು ಬಲವಾಗುವುದು ನಿರ್ದಿಷ್ಟವಾದ ವಿದೇಶಗಳಿಗೆ ಬೇಕಾಗಿಲ್ಲ.
ಕಳೆದ ಐದು ವರ್ಷಗಳಲ್ಲಿ ನಮ್ಮಲ್ಲಿ ಕೋಟಿಗಟ್ಟಲೆ ರೂಪಾಯಿಗಳಷ್ಟು ಮೌಲ್ಯದ ೩೦ ಹಗರಣಗಳಾಗಿವೆ. ೧.೪ ಟ್ರಿಲಿಯನ್ ಡಾಲರ್ ಮೌಲ್ಯದ ಭಾರತೀಯ ಹಣವು ಅಕ್ರಮವಾದ ಕಪ್ಪುಹಣದ ರೂಪದಲ್ಲಿ ರಹಸ್ಯವಾಗಿ ನಮ್ಮ ದೇಶದಿಂದ ಹೊರಕ್ಕೆ ಕಳ್ಳಸಾಗಾಣಿಕೆ ಮಾಡಲ್ಪಟ್ಟಿದೆ ಎಂದು ಹೇಳಲಾಗುತ್ತದೆ.
ಒಮ್ಮೆ ನಾನು ವಿದೇಶ ಪ್ರವಾಸಕ್ಕೆ ಹೋಗಿದ್ದಾಗ, ಆ ದೇಶದ ಒಬ್ಬ ಸಜ್ಜನನು ನನ್ನಲ್ಲಿ, ಎರಡು ಬಿಲಿಯನ್ ಡಾಲರ್ ಮೌಲ್ಯದ ಭಾರತೀಯ ಹಣವು ತನ್ನ ದೇಶದ ಬ್ಯಾಂಕ್ನಲ್ಲಿ ಒಬ್ಬ ಭಾರತೀಯ ರಾಜಕಾರಣಿಯಿಂದ ಇರಿಸಲ್ಪಟ್ಟದ್ದಾಗಿ ಹೇಳಿದನು.
ಅವನು ನನ್ನಲ್ಲಿ ಕುತೂಹಲದಿಂದ, "ನಿಮ್ಮ ದೇಶದಲ್ಲಿ ಅಷ್ಟೊಂದು ಭ್ರಷ್ಟಾಚಾರವಿರುವುದನ್ನು ನೀವು ಹೇಗೆ ಸಹಿಸುತ್ತಿರುವಿರಿ?" ಎಂದು ಕೇಳಿದನು.
ಈಗ ನಾನು ಅವನಿಗೆ ಏನೆಂದು ಹೇಳಲು ಸಾಧ್ಯ! ಜನರು ಈಗ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತಿದ್ದಾರೆ ಮತ್ತು ಅವರು ಅಂತಹ ಭ್ರಷ್ಟ ಜನರನ್ನು ಕಂಬಿ ಎಣಿಸುವಂತೆ ಮಾಡುತ್ತಾರೆ ಎಂದು ನಾನು ಅವನಿಗೆ ಹೇಳಿದೆ. ಬದಲಾವಣೆಯ ಸಮಯ ಬಂದಿದೆ. ನಾವೆಲ್ಲರೂ ಇದನ್ನು ಮಾಡಬೇಕು. ಆಹಾರ ಧಾನ್ಯಗಳ ಬೆಲೆಗಳು ಪ್ರಪಂಚದ ಬೇರೆ ಎಲ್ಲೆಡೆಗಳಲ್ಲೂ ನಿಜಕ್ಕೂ ಇಳಿಯುತ್ತಿರುವಾಗ, ಅದು ಭಾರತದಲ್ಲಿ ಮಾತ್ರ ಯಾಕೆ ಏರುತ್ತಿದೆಯೆಂದು ಯಾರಿಗೂ ಅರ್ಥವಾಗುತ್ತಿಲ್ಲ! ಯಾವುದೇ ಅರ್ಥಶಾಸ್ತ್ರಜ್ಞರಿಗೂ ಇದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ಭ್ರಷ್ಟಾಚಾರದಿಂದಾಗಿ.
ನಾವೊಂದು ಬೃಹತ್ತಾದ ತೈಲ ನಿಕ್ಷೇಪಗಳ ಸಂಪತ್ತಿನ ಮೇಲೆ ಕುಳಿತಿದ್ದೇವೆ ಮತ್ತು ಆದರೂ ನಾವು ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಬಹಳಷ್ಟು ಕಬ್ಬಿಣದ ಅದಿರಿದೆ, ಆದರೂ ನಾವು ಉಕ್ಕನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಮತ್ತು ಅದೇ ರೀತಿಯಲ್ಲಿ ಚಿನ್ನ ಕೂಡಾ.
ಇದು ಬಹಳ ವಿವಾದಾತ್ಮಕವಾದುದು. ಈ ದೇಶಕ್ಕೆ ಅತ್ಯಗತ್ಯವಾಗಿ ಬದಲಾವಣೆಯು ಬೇಕಾಗಿದೆ ಎಂದು ನಾನು ಹೇಳುವುದು ಇದಕ್ಕೇ.
✨🔹✨🔹✨🔹✨🔹✨
No comments:
Post a Comment