ತೆಗಳುವವರನ್ನು ನಿಮ್ಮ ಹತ್ತಿರವೇ ಇರಿಸಿಕೊಳ್ಳಿ
ಶ್ರೀಶ್ರೀರವಿಶಂಕರ್
ಆಸನಗಳು ನಿಮ್ಮಲ್ಲಿ ಇರುವ ದ್ವಂದ್ವವನ್ನು, ಎಲ್ಲಾ ಸಂಘರ್ಷಗಳನ್ನೂ ಹೊಡೆದು ಹಾಕುತ್ತದೆ. ಅವು ನಿಮ್ಮ ಸಮತೋಲನವನ್ನು ಅಲುಗಾಡಿಸುತ್ತಿದ್ದ ಹೊಗಳಿಕೆ ಅಥವಾ ತೆಗಳಿಕೆಯ ಬಾಧಿಸದಂತೆ ನೋಡಿಕೊಳ್ಳುತ್ತವೆ.
ಒಬ್ಬ ಯೋಗಿಯು ಮಾನ, ಅಪಮಾನ, ಇವೆರಡರ ಪಾಶಗಳಿಂದಲೂ ಮುಕ್ತನಾಗಿರುತ್ತಾನೆ. ಯಾರಾದರೂ ನಿಮ್ಮನ್ನು ಅಪಮಾನಿಸಿದರೆ ನೀವು ಮಾಡುವ ಸಹಜವಾದ ಪ್ರತಿಕ್ರಿಯೆ ಎಂದರೆ, ಅವರಿಂದ ದೂರ ಇರುವುದು. ಅವರೊಡನೆ ಸಂಪರ್ಕವನ್ನೆಲ್ಲಾ ಕಡಿದುಹಾಕುತ್ತೀರಿ. ಅವರನ್ನು ಒಂದು ಮೈಲಿ ದೂರವಿರಿಸಿ, ಅವರಿಂದ ಓಡಿ ಹೋಗುತ್ತೀರಿ. ಭಾರತದಲ್ಲಿ ಒಬ್ಬ ಸಂತರು, ''ನಿಮ್ಮನ್ನು ತೆಗಳುವವರನ್ನು ನಿಮ್ಮ ಹತ್ತಿರವೇ ಇರಿಸಿಕೊಳ್ಳಿ, ಏಕೆಂದರೆ, ಸಾಬೂನು ಮತ್ತು ನೀರಿಲ್ಲದೆಯೇ ಅವರು ನಿಮ್ಮ ಅಂಗಳವನ್ನು ಶುದ್ಧವಾಗಿ ಇಟ್ಟಿರುತ್ತಾರೆ'' ಎಂದು ಹಾಡಿದ್ದಾರೆ.
''ಖಂಡನೆಯಿಂದ ದೂರ ಸರಿಯಬೇಡಿ'' ಎಂದರು ಸಂತ ಕಬೀರರು. ಖಂಡನೆಯನ್ನು ನಾವು ಸ್ವೀಕರಿಸಿ, ಅದನ್ನು ದಾಟಿ ಹೋಗಬಲ್ಲವರಾದರೆ ನಾವು ಅಷ್ಟು ಬೆಳೆದಿದ್ದೇವೆ ಎಂದು ಅರ್ಥ. ಇಲ್ಲದಿದ್ದರೆ, ಒಮ್ಮೆ ಖಂಡಿಸಿದರೆ ಸಾಕು ಬಿದ್ದು ಬಿಡುತ್ತೀರಿ. ಅದು ಸರಿಯಲ್ಲ. ಆಗ, ಜನರಿಗೆ ನಿಮ್ಮ ಸಮತೋಲವನ್ನು ಹೇಗೆ ತಪ್ಪಿಸಬೇಕೆಂದು ತಿಳಿದುಹೋಗುತ್ತದೆ. ಒಂದು ಬಾರಿ ಖಂಡಿಸಿದರೆ, ನೀವು ಅಷ್ಟೇ! ಆದ್ದರಿಂದ ಯೋಗವು ನಿಮ್ಮಲ್ಲಿ ಆ ಸಮತೋಲವನ್ನು ತಂದುಕೊಡುತ್ತದೆ. ಆಸನಗಳು ಈ ರೀತಿಯಾಗಿ ದೇಹ ಮತ್ತು ಮನಸ್ಸಿನ ಮೇಲೆ ಉಭಯ ಪರಿಣಾಮವನ್ನು ಬೀರಿ, ನಿಮಗೆ ತೊಂದರೆ ಕೂಡುವ ಸಂಕಷ್ಟಗಳಿಂದ ಬಿಡುಗಡೆ ಮಾಡುತ್ತದೆ. ಸ್ಥಿರ ಮತ್ತು ಸುಖ ಭಂಗಿಯ ಬಗ್ಗೆ ನಿಮಗೆ ಈಗ ತಿಳಿಯತೆ?
ನೀವು ಬಗ್ಗಿದಾಗ, ಸ್ವಲ್ಪ ಹೆಚ್ಚು ಬಗ್ಗಿ, ಸ್ವಲ್ಪ ಪ್ರಯತ್ನ ಮಾಡಿ, ನೋವನ್ನು ಅನುಭವಿಸಿ ಮತ್ತು ಆ ನೋವಿನಲ್ಲಿ ಸುಖವನ್ನು ಕಾಣಿ. ಆಗ ನೋಡಿ, ಆ ನೋವು ಮಾಯವಾಗಿ ಸುಖವಾಗುತ್ತದೆ. ಇವೆರಡೂ ದ್ವಂದ್ವಗಳು. ಸುಖವಿದ್ದಾಗ ನೋವಿರುವುದಿಲ್ಲ ಮತ್ತು ನೋವಿದ್ದಾಗ ಸುಖವಿರುವುದಿಲ್ಲ. ಆಸನಗಳಿಂದ ಈ ಬದಲಾವಣೆಯನ್ನು ಕಾಣಬಹುದು. ಒಂದು ವೇಳೆ, ನಿಮ್ಮ ಕಾಲನ್ನು ಒಂದು ಮಿತಿಯವರೆಗೆ ಮಾತ್ರ ಎತ್ತಬಲ್ಲಿರಿ, ಅದಕ್ಕಿಂತಲೂ ಹೆಚ್ಚು ಸಾಧ್ಯವಿಲ್ಲ ಎನಿಸಬಹುದು. ಆದರೆ ಆ ಮಿತಿಗಿಂತ ಸ್ವಲ್ಪ ಹೆಚ್ಚು ಎತ್ತಿ ನೋವನ್ನು ಅನುಭವಿಸುತ್ತೀರಿ. ನಂತರ ಆ ನೋವಿನಲ್ಲೆ ನೀವು ನಲಿಯತೊಡಗಿ, ನಿಮಗೆ ಸ್ವಲ್ಪ ಹಿತ ಎನಿಸುತ್ತದೆ. ಮಾರನೆಯ ದಿನ ಆ ನೋವು ಇರುವುದಿಲ್ಲ ಮತ್ತು ನಿಮ್ಮ ಸುಖದ ವಲಯ ಹೆಚ್ಚಿರುತ್ತದೆ. ನಂತರ ಮತ್ತೆ ಸ್ವಲ್ಪ ಎತ್ತಿ ನೋವನ್ನು ಅನುಭವಿಸಿ. ನೋವು ಮತ್ತು ಎತ್ತುವುದು. ಎಲ್ಲಾ ನೋವೂ ಸುಖದ ಕಡೆ ತಿರುಗಿರುವುದನ್ನು ನೀವು ಗಮನಿಸಬಹುದು.
ನಾವು ವಿದ್ಯಾರ್ಥಿಗಳಾಗಿದ್ದಾಗ ಹೃಷಿಕೇಶಕ್ಕೆ ತಿರುಗಾಡಲು ಹೋಗಿದ್ದೇವು. ಅಲ್ಲಿನ ಊಟ ಬಹಳ ಕೆಟ್ಟದಾಗಿತ್ತು. ದಕ್ಷಿಣ ಭಾರತದಿಂದ ಬಂದವರಿಗೆಲ್ಲಾ ಆ ಊಟಕ್ಕೆ ಹೊಂದಿಕೊಳ್ಳಲು ಬಹಳ ಕಷ್ಟವಾಯಿತು. ಶಿಬಿರದಲ್ಲಿದ್ದ ಹುಡುಗರೆಲ್ಲಾ ಹೋಗಿ ಆ ಹೋಟೆಲ್ನ ಮ್ಯಾನೇಜರ್ ಬಳಿ ತಮ್ಮ ದೂರನ್ನು ಇಟ್ಟರು. ಅದಕ್ಕೆ ಆ ಮ್ಯಾನೇಜರ್, ''ನೋಡಿ, ಮೊದಲು ಎರಡು ದಿನಗಳು ನಿಮಗೆ ಕಷ್ಟವಾಗಿಯೆ ತೋರುತ್ತದೆ. ನಂತರ ಎಲ್ಲಾ ಸರಿಹೋಗುತ್ತದೆ. ಏಕೆಂದರೆ, ಇಲ್ಲಿನ ಊಟಕ್ಕೆ ನೀವು ಒಗ್ಗಿ ಹೋಗುತ್ತೀರಿ. ಊಟವೇನೂ ಬದಲಾಯಿಸುವುದಿಲ್ಲ. ಆದರೆ ಊಟದ ಬಗೆಗಿನ ನಿಮ್ಮ ಭಾವನೆಯು ಬದಲಿಸುತ್ತದೆ'' ಎಂದರು! ಆದ್ದರಿಂದ, ಸುಖವೆನ್ನುವುದು ಬದಲಾಯಿಸುವಂತದ್ದು. ನೋವು ಸುಖವಾಗಿ ಬದಲಾಗುತ್ತದೆ, ನೀವು ಇನ್ನಷ್ಟು, ಮತ್ತಷ್ಟು ಮಾರನೆಯ ದಿನ ಮತ್ತು ಅದರ ಆಚೆಯ ದಿನ ಬಗ್ಗಿದಷ್ಟೂ, ನಂತರ ಪ್ರಯತ್ನ ಶೈಥಿಲ್ಯ. ಸ್ವಲ್ಪ ಪ್ರಯತ್ನ ಮತ್ತು ಬಿಟ್ಟು ಬಿಡುವುದು. ಎಲ್ಲವನ್ನು ಬಿಟ್ಟುಬಿಡುವುದೆ ರಹಸ್ಯ. ಬಿಟ್ಟುಬಿಡುವ ಭಾವನೆಯೆಂದರೆ, ಅನಂತತೆಯನ್ನು ನಿಮ್ಮ ಚೈತನ್ಯದೊಳಗೆ ಉದಯಿಸುವಂತೆ ಮಾಡುವದು.
🌷🌷🌷🌷🌷🌷🌷🌷🌷🌷🌷🌷
No comments:
Post a Comment