Saturday, 24 February 2018

ರೂಪಕ್ಕೆ ಗುಣವೇ ಭೂಷಣ

ರೂಪಕ್ಕೆ ಗುಣವೇ ಭೂಷಣ

ಮನೆಯಲ್ಲಿ ಕೊಳಕಿದ್ದರೆ ಶುದ್ಧ ಮಾಡಬಹುದು. ಹಾಗೆಯೇ ಮನಸ್ಸನ್ನು ಶುದ್ಧ ಮಾಡಲು ಸಾಧ್ಯವಿಲ್ಲ. ಯಾರಾದರೂ ನಮ್ಮನ್ನು ಬೈದರೆ ಕೋಪ ಬರುತ್ತದೆ. ಈ ಕೋಪವನ್ನು ಗೆಲ್ಲುವುದು ಹೇಗೆ? ಅವುಗಳನ್ನು ತ್ಯಜಿಸುವುದಕ್ಕಿಂತ ಮೊದಲು ಅದರ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು. ಅವು ಹೇಗೆ ಬರುತ್ತವೆ? ಅವುಗಳಿಂದ ನಮ್ಮಲ್ಲಾಗುವ ಬದಲಾವಣೆಗಳೇನು? ಇವನ್ನು ಚಿಂತಿಸಬೇಕು. ಹೀಗೆ ಮಾಡಿದಾಗ ತಾನಾಗಿಯೇ ಉತ್ತರ ಸಿಗುತ್ತದೆ.

ಸಮಗ್ರವಾಗಿ ಹೇಳುವುದಾದರೆ, ನಮ್ಮ ಮೊದಲ ತೊಂದರೆಯೆಂದರೆ ಮನಸ್ಸಿನ ಕಲ್ಮಷಗಳನ್ನು ತಿಳಿಯದೆ ಇರುವುದು. ಅವು ವ್ಯಕ್ತವಾದಾಗ ತಾತ್ಕಾಲಿಕವಾಗಿ ಅರಿತಿರುತ್ತೇವೆ. ಆದರೆ ನಮಗೆ ಅವುಗಳ ನೈಜ ರೂಪ ಗೊತ್ತಿಲ್ಲ. ಅವು ನಮ್ಮಲ್ಲಿ ಮಾಡುವ ಅಡಚಣೆಗಳನ್ನು ಗಮನಿಸದಿರುವುದು. ಅವುಗಳಿಂದುಂಟಾಗುವ ತೊಂದರೆಗಳನ್ನು ಕಲ್ಮಷವೆಂದು ಪರಿಗಣಿಸದೆ, ನಾವು ಸಾಮಾನ್ಯ ಮನುಷ್ಯರು, ಇವನ್ನು ಅನುಭವಿಸಬೇಕೆಂದು ಅಂದುಕೊಳ್ಳುವುದು. ಚಂಚಲತೆಯನ್ನೇ ಸರಿಯೆಂದು ಸುಮ್ಮನಾಗುವುದು. ಇದೇ ನಾವು ಮಾಡುವ ದೊಡ್ಡ ತಪ್ಪು. ಇಷ್ಟು ಮಾತ್ರವಲ್ಲದೆ, ಕೆಲವು ತಪ್ಪು ಅಭಿಪ್ರಾಯಗಳನ್ನು ಸತ್ಯವೆಂದು ವಾದಿಸುವುದು.

ಉದಾಹರಣೆಗೆ ‘ಈ ಜಗತ್ತಿನಲ್ಲಿ ಕೋಪ ಮಾಡಿಕೊಳ್ಳದಿದ್ದರೆ ಏನೂ ಮಾಡಲಿಕ್ಕಾಗುವುದಿಲ್ಲ, ಕೋಪ ಮಾಡಿಕೊಳ್ಳದಿದ್ದರೆ ಜನ ನನ್ನನ್ನು ಗೌರವಿಸುವುದಿಲ್ಲ, ಕೋಪ ಮಾಡಿಕೊಳ್ಳುವುದು ಸರಿ’ - ಹೀಗೆ ವಾದಿಸುತ್ತ ತಮ್ಮ ತಪ್ಪನ್ನು ಸರಿಯೆಂದು ಸಮರ್ಥಿಸಿಕೊಳ್ಳುತ್ತಾರೆ. ಜೀವನದಲ್ಲಿ ಕೋಪ ಬೇಕು, ಅದು ನಮ್ಮ ಅಧಿನದಲ್ಲಿರಬೇಕು. ಆದರೆ ನಾವು ಸಾಮಾನ್ಯವಾಗಿ ಅದರ ಅಧಿನದಲ್ಲೇ ಇರುತ್ತೇವೆ. ಅದಕ್ಕಾಗಿ ಸಾಧನೆ ಬೇಕು. ಕೆಟ್ಟ ಗುಣಗಳನ್ನು ತ್ಯಜಿಸಬೇಕು. ಸದ್ಗುಣಗಳನ್ನು ವೃದ್ಧಿಸಿಕೊಳ್ಳಬೇಕು. ‘ನರಸ್ಯ ಆಭರಣಂ ರೂಪಂ, ರೂಪಸ್ಯ ಆಭರಣಂ ಗುಣಃ’ ಮನುಷ್ಯನಿಗೆ ಆತನ ರೂಪವೇ ಆಭರಣ, ಆ ರೂಪಕ್ಕೆ ಗುಣವೇ ಭೂಷಣ.

Swami adityanand
☘☘🍁☘☘🍁☘☘🍁☘☘

No comments:

Post a Comment