Saturday, 24 February 2018

ಸಕಾರಾತ್ಮಕ ಚಿಂತನೆ

ಒಬ್ಬ ವ್ಯಕ್ತಿಯಿದ್ದ. ಆತ ಒಬ್ಬಂಟಿಯಾಗಿದ್ದ. ಜತೆಯೂ ಮಾತನಾಡುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಆಫೀಸಿಗೆ ಹೋಗುತ್ತಿದ್ದ. ಬರುತ್ತಿದ್ದ. ತರಕಾರಿ ಕೊಳ್ಳುವಾಗ, ದಿನಸಿ ಅಂಗಡಿಯಲ್ಲಿ ಎಲ್ಲಿಯೂ ಆತ ನಗುತ್ತಿದ್ದದ್ದನ್ನು ಯಾರೂ ನೋಡಿರಲಿಲ್ಲ. ನಿಗೂಢ ಎನಿಸುತ್ತಿದ್ದ. ಹೀಗೆ ವರ್ಷಗಳೇ ಕಳೆದಿದ್ದವು. ಎಂದಿನಂತೆ ಪೇಪರ್‌ನವರು ಪೇಪರ್ ಹಾಕಿ ‘ಬಿಲ್’ ಎಂದು ಕೂಗಿ, ಬೆಳ್ಳಂಬೆಳಗ್ಗೆಯೇ ಸಿಂಡರಿಸಿದ ಇವರ ಮುಖ ನೋಡಬೇಕಲ್ಲಾ ಎಂದು ಗೊಣಗಿಕೊಳ್ಳುತ್ತಿದ್ದ. ಅಷ್ಟರಲ್ಲಿ ಬಾಗಿಲು ತೆಗೆದು ಆತ ಹಸನ್ಮುಖನಾಗಿ ‘ಎಷ್ಟಾಯ್ತು?’ ಎಂದು ಕೇಳಿದ. ಪೇಪರ್ ಹಾಕುವವನಿಗೆ ಆಶ್ಚರ್ಯ. ಅವನ ಮುಖ ನಿಂತ. ‘ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ?’ ಎಂದು ಪ್ರಶ್ನಿಸಿದ. ಈಗಂತೂ ಪೇಪರ್‌ನವ ಮೂರ್ಛೆ ಬೀಳುವುದು ಬಾಕಿ!

ಆತ ಊರಿನಲ್ಲಿ ಅರ್ಧ ಜನಕ್ಕೆ ‘ಆ ವ್ಯಕ್ತಿಗೆ ಹುಷಾರಿಲ್ಲ, ಅವರು ನಗುತ್ತಿದ್ದಾರೆ’ ಎಂದು ಸಾರುತ್ತಾ ಬಂದ. ನಂತರ ತರಕಾರಿಯವನ ಬಳಿ, ದಿನಸಿಯವನ ಬಳಿಯೂ ಹೀಗೆ ಮಾತನಾಡಿದ. ಎಲ್ಲರೂ ಇವನನ್ನು ನೋಡುವವರೆ. ಆತ ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತಿದ್ದ. ಅಲ್ಲಿಯೂ ಹೀಗೆ ಇರುತ್ತಿದ್ದ. ಬದಲಾದ ಇವನ ಹಾವಭಾವ ನೋಡಿ ಪೂಜಾರಿ ಬಂದು ಮಾತನಾಡಿಸಿದ.‘ನಾನು ದಿನವೂ ನಿಮ್ಮನ್ನು ಆದರೆ ಹಿಂದೆಂದಿಗಿಂತಲೂ ವಿಭಿನ್ನವಾಗಿ ಇಂದು ಕಾಣುತ್ತಿದ್ದೀರಿ. ಏನಾಯ್ತು ನಿಮಗೆ’ ಎಂದರು. ಅದಕ್ಕೆ ಆತ ‘ ಯಾವಾಗಲೂ ನಕಾರಾತ್ಮಕವಾಗಿ ಚಿಂತಿಸುವ, ಬದುಕುವವರಿಗೆ ಮಾತ್ರ ರೋಗಗಳು ಬರುತ್ತವೆಯಂತೆ.ನಾನು ಎಲ್ಲರಂತೆ ಇದ್ದೆ. ಆದರೆ ಎಂದೂ ನಕಾರಾತ್ಮಕವಾಗಿ ಚಿಂತಿಸಿದವನಲ್ಲ.ಆದರೆ ನನಗೆ ಬದುಕುಳಿಯಲಾರದಂತ ರೋಗ ಬಂದುಬಿಟ್ಟಿತು.

ಹೇಗಿದ್ದರೂ ಸಾಯುತ್ತೇನೆ ಎಂದು ಗೊತ್ತಾಗಿತ್ತು. ಜೀವನದ ಮೇಲೆ ನನ್ನ ಸಿಟ್ಟು ಪ್ರದರ್ಶಿಸಲು ಹಾಗಿರುತ್ತಿದ್ದೆ. ನಗು ದೂರ ಮಾಡಿದ್ದೆ’ ಎಂದ. ಅದಕ್ಕೆ ಪೂಜಾರಿ ‘ಹಾಗಿದ್ದರೆ ಈಗೇಕೆ ನಗುತ್ತಾ ಎಲ್ಲರೊಂದಿಗೆ ಚೆನ್ನಾಗಿ ಎಂದ. ಅದಕ್ಕೆ ವ್ಯಕ್ತಿ ‘ ನಾನು ಈ ಕುರಿತು ಆಲೋಚಿಸುತ್ತಿದ್ದೆ. ಆಗ ನಕಾರಾತ್ಮಕವಾಗಿದ್ದ ಕಾರಣಕ್ಕೆ ನನಗೆ ಅನಾರೋಗ್ಯ ಸ್ಥಿತಿ ಬಂದೊದಗಿದೆ ಎಂದಾದರೆ, ಸಕಾರಾತ್ಮಕವಾಗಿದ್ದು, ನಗುವಿನ ಕೈಹಿಡಿದರೆ ನನ್ನ ಆರೋಗ್ಯ ವೃದ್ಧಿಸುವುದಿಲ್ಲವೆ? ಅದೇ ಕಾರಣಕ್ಕೆ ಹೀಗೆ ನಗುತ್ತಾ ಇದ್ದೇನೆ. ಸಕಾರಾತ್ಮಕಶಕ್ತಿಯನ್ನೊಮ್ಮೆ ನಂಬಿ ನೋಡುತ್ತೇನೆ ಎಂದ. ಹೌದಲ್ಲವಾ? ನಕಾರಾತ್ಮಕ ಅಂಶಗಳು ಕೈಬೀಸಿ ಕರೆಯುತ್ತವೆ, ಆಕರ್ಷಿಸುತ್ತವೆ. ಆದರೆ ಬದುಕಲು ಬೇಕಾದ್ದು ಅದಲ್ಲ. ಸಕಾರಾತ್ಮಕ ಚಿಂತನೆ ಆರಂಭವಾದರೆ ಜಗತ್ತಿನ ಅರ್ಧ ಸಮಸ್ಯೆ ಕಡಿಮೆಯಾದಂತೆ ಕಾಣುತ್ತದೆ. ಸುಲಭ ಎನಿಸುತ್ತದೆ. ಏನೇ ಬಂದರೂ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡುತ್ತದೆ.

ಗೌರ ಗೋಪಾಲ ಪ್ರಭು

No comments:

Post a Comment