Saturday, 24 February 2018

★★ಆ ಮಾತಿಗೆ ಮನಸೋತಿದ್ದ ಹೃದಯ ಅದೇ ಮಾತಿಗೆ ಒಡೆದು ಹೋಯ್ತು!★

ಆ ಮಾತಿಗೆ ಮನಸೋತಿದ್ದ ಹೃದಯ ಅದೇ ಮಾತಿಗೆ ಒಡೆದು ಹೋಯ್ತು!

ಗೌರ್ ಗೋಪಾಲ ಪ್ರಭು


ಆ ದಿನ ಅಪ್ಪ ಮಗ ಇಬ್ಬರು ಸೋಫಾ ಕುಳಿತು ಮಾತನಾಡುತ್ತಿದ್ದರು. ಅಪ್ಪನಿಗೆ ತುಂಬಾ ವಯಸ್ಸಾಗಿದೆ. ಅವರ ಜತೆ ಸಮಯವನ್ನೇ ಕಳೆಯಲಾಗುತ್ತಿಲ್ಲ ಎಂದು ಮಗನಿಗೆ ಅನಿಸಿತ್ತು. ಅಲ್ಲದೇ ತಾನು ಅಪ್ಪನನ್ನು ಬಿಟ್ಟು ದೂರದ ಊರಿಗೆ ಹೋಗುತ್ತಿರುವ ಸುದ್ದಿಯನ್ನು ಅಪ್ಪನಿಗೆ ನಿಧಾನವಾಗಿ ತಿಳಿಸಬೇಕಿತ್ತು. ಇಬ್ಬರೂ ಮಾತನಾಡುತ್ತಿರುವಂತೆ ಕಾಗೆ ಬಂದು ಕಿಟಕಿಯ ಬಳಿ ಕೂತಿತು. ಅಪ್ಪ ಮಗನ ಮಾತಿನ ಕಡೆ ಗಮನಿಸದೇ ‘ಅದೇನು?’ ಎಂದು ಪ್ರಶ್ನಿಸಿದ. ಮಗ ಅದಕ್ಕೆ ನಗುತ್ತಾ ‘ಅದಾ ಕಾಗೆ’ ಎಂದ. ಸ್ವಲ್ಪ ಹೊತ್ತಿನ ಬಳಿಕ ‘ಅದು ಇಲ್ಲಿಗ್ಯಾಕೆ ಎಂದು ಅಪ್ಪ ಪ್ರಶ್ನಿಸಿದ. ಅದಕ್ಕೆ ಮಗ ‘ನಾವು ಇಲ್ಲಿ ಯಾಕೆ ಇದ್ದೇವೆ? ಉತ್ತರ ಇದೆಯಾ? ಹಾಗೆ ಅದು ಎಲ್ಲೋ ಹೋಗುತ್ತಿರುತ್ತದೆ ಇಲ್ಲಿ ಬಂದು ಇಳಿದಿದೆ’ ಎಂದ. ಮತ್ತೆ ಸ್ವಲ್ಪ ಸಮಯದ ನಂತರ ‘ಮಗಾ ಅದು ಏನು?’ ಎಂದು ಅಪ್ಪ ಕೇಳಿದ.

ಆಗಲೇ ಮಗನ ತಾಳ್ಮೆ ಸ್ವಲ್ಪ ಕಮ್ಮಿ ಆಗಿತ್ತು. ‘ಅದು ಕಾಗೆ ಅಪ್ಪ ಎಷ್ಟ್ ಸಲ ಕೇಳ್ತಿರಿ’ ಎಂದ. ಅಪ್ಪ ಮಗನ ಮಾತಿಗೆ ಬೇಸರಿಸಿಕೊಂಡ. ಆದರೆ ಆ ಬೇಸರ ಮೇಲೆ ಮೂಡಲಿಲ್ಲ. ಮತ್ತೆ ಸ್ವಲ್ಪ ಸಮಯ ಕಳೆದಂತೆ ಅಪ್ಪ‘ಹೌದು ಆ ಕಾಗೆ ಕಪ್ಪು ಬಣ್ಣ ಏಕೆ?’ ಎಂದು ಕೇಳಿದ. ಮಗನಿಗೆ ಕೋಪವೇ ಬಂತು. ಹೇಳಬೇಕಾದ ವಿಷಯ ಹೇಳಲು ಆಗುತ್ತಲೇ ಇರಲಿಲ್ಲ. ಅಪ್ಪ ನೋಡಿದರೆ ಕಾಗೆಯ ಹಿಂದೆ ಬಿದ್ದಿದ್ದಾರೆ ಎಂದು ಸಿಟ್ಟು ಬಂತು. ಅಪ್ಪ ಏನೂ ಮಾತನಾಡಲಿಲ್ಲ. ಮತ್ತೆ ಸ್ವಲ್ಪ ಸಮಯದ ನಂತರ ‘ಮಗಾ ಅದೇನು?’ ಎಂದು ಕೇಳಿದರು. ಅದಕ್ಕೆ ಮಗ ‘ನಾನು ಹೇಳುವ ವಿಷಯದ ಮೇಲೆ ನಿಮಗೆ ಸ್ವಲ್ಪವೂ ಇಲ್ಲ’ ಎಂದು ಎದ್ದು ರೂಮು ಸೇರಿಕೊಂಡ. ಮತ್ತೆ ಸ್ವಲ್ಪ ಸಮಯದ ನಂತರ ಅಪ್ಪ ರೂಮಿನ ಬಾಗಿಲು ಬಡಿದ. ಮಗ ಅಲ್ಲಿಂದಲೇ ‘ಅದು ಕಾಗೆ!’ ಎಂದು ಕೂಗಿದ. ಅದಕ್ಕೆ ಅಪ್ಪ ‘ನೀನು ಚಿಕ್ಕವನಿದ್ದಾಗ ಇನ್ನೂ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಿದ್ದೆ. ಆದರೆ ನಾನೆಂದೂ ನಿನ್ನ ಬಿಟ್ಟು ಹೋಗಿ ರೂಮು ಸೇರಲಿಲ್ಲ’ ಎಂದರು.

*ಹೌದು ಅಲ್ಲವೇ, ಚಿಕ್ಕವರಿದ್ದಾಗ ನಾವು ಸಾವಿರಾರು ಪ್ರಶ್ನೆ ಕೇಳಿರುತ್ತೇವೆ. ಕೇಳಿದ್ದನ್ನೇ ಮತ್ತೆ ಮತ್ತೆ ಕೇಳಿರುತ್ತೇವೆ. ಆಗೆಂದೂ ನಮ್ಮ ಪೋಷಕರು ಮೇಲೆ ರೇಗಿಲ್ಲ. ಹಾಗಾದರೆ ಅವರಿಗೆ ವಯಸ್ಸಾದ ಮೇಲೆ ನಾವ್ಯಾಕೆ ಅವರಂತೆ ಇರುವುದಿಲ್ಲ? ನೆನಪಿರಲಿ ವಯಸ್ಸಾದ ಎಲ್ಲ ಪೋಷಕರೂ ಮಕ್ಕಳಂತೆಯೇ!*

No comments:

Post a Comment