🌺
*ನಿಜ ಮರ್ಮ
ನಾವೆಲ್ಲರೂ ಒಂದು ರೀತಿಯಲ್ಲಿ ಮಣ್ಣಿನ ಗೊಂಬೆಗಳೇ. ಮಾನವನ ಶರೀರ ಪಂಚಮಹಾಭೂತಗಳಿಂದ ನಿರ್ಮಿತವಾದದ್ದು ಎಂಬುದಾಗಿ ನಮ್ಮ ಶಾಸ್ತ್ರ ಹೇಳುತ್ತದೆ. ಈ ಮಣ್ಣಿನಲ್ಲೆ ಹುಟ್ಟಿ, ಈ ಮಣ್ಣಿನಲ್ಲೆ ಹೊರಳಾಡಿ, ಈ ಮಣ್ಣಿನಲ್ಲೆ ಓಡಾಡಿ ಒಂದು ದಿನ ಈ ಮಣ್ಣಿನಲ್ಲೆ ಮಣ್ಣಾಗುವ ಮನುಷ್ಯ ಮಣ್ಣಿನ ಗೊಂಬೆಯಲ್ಲವೆ? ಮಣ್ಣಿನಿಂದಲೇ ಜನನ, ಮಣ್ಣಿನಲ್ಲೆ ಮರಣ. ಮಾತ್ರವಲ್ಲ, ಮನುಷ್ಯನ ಬದುಕಿಗೂ ಆಧಾರ ಈ ಮಣ್ಣೇ. ಈ ಮಣ್ಣಿಲ್ಲದಿದ್ದರೆ ಮನುಷ್ಯನ ಜೀವನಕ್ಕೆ ಆಧಾರವಾದ ಆಹಾರ ಉತ್ಪಾದನೆ ಸಾಧ್ಯವೆ?
ಒಬ್ಬ ಬೆಳೆಗಾರ ಎದ್ದು ಒಂದು ಅಂಗಡಿಗೆ ಹೋದ. ಅಂಗಡಿ ಮಾಲೀಕ ಅಂಗಡಿಯ ಬಾಗಿಲು ಆಗತಾನೆ ತೆರೆದು ದೇವರಿಗೆ ಕೈಮುಗಿದು ಕೂತಿದ್ದ ಮಾತ್ರ. ಬಂದವ ಅಂಗಡಿಯವನ ಹತ್ತಿರ ಒಂದು ರೂಪಾಯಿ ಕೊಟ್ಟು ಅಂಗಡಿಯಲ್ಲಿದ್ದ ಎಲ್ಲ ಸಾಮಾನುಗಳನ್ನು ಕೊಡು ಎಂದು ಕೇಳಿದ. ಆದರೆ ಆ ಅಂಗಡಿಯಲ್ಲಿ ಮಾರಾಟಕ್ಕಿದ್ದ ಯಾವ ವಸ್ತುವೂ ಒಂದು ರೂಪಾಯಿಗೆ ಸಿಗುವುದಲ್ಲ. ಅಂಗಡಿ ಮಾಲೀಕ ತುಂಬಾ ಯೋಚನೆಮಾಡಿ ಒಂದು ಮುಷ್ಟಿ ಮಣ್ಣನ್ನು ಆ ಗ್ರಾಹಕನಿಗೆ ಕೊಟ್ಟು ಹೇಳಿದ: ನೋಡು, ನೀನು ಬಯಸಿದಂತೆ ಈ ಒಂದು ಹಿಡಿ ಮಣ್ಣಲ್ಲಿ ಎಲ್ಲವೂ ಇದೆ. ಯಾಕೆಂದರೆ ಈ ಅಂಗಡಿಯಲ್ಲಿರುವ ಎಲ್ಲ ಸಾಮಾನುಗಳೂ ಕೂಡ ಮಣ್ಣಿನಿಂದಲೇ ಸೃಷ್ಟಿಯಾದದ್ದು. ನಿನ್ನ ಒಂದು ರೂಪಾಯಿಗೆ ಮಣ್ಣನ್ನು ತೆಗೆದುಕೊಂಡು ಹೋಗಿ ನಿನಗೆ ಬೇಕಾದುದನ್ನು ಪಡೆದುಕೋ. ಆಗ ಗ್ರಾಹಕನಿಗೆ ಮಣ್ಣಿನ ಮಹತ್ತ್ವ ಅರ್ಥವಾಯಿತು.
ಮಣ್ಣಿನಿಂದ ಹುಟ್ಟಿದ ನಾವೆಲ್ಲರೂ ನಿಜವಾದ ಮಣ್ಣಿನ ಗೊಂಬೆಗಳೇ. ಆದರೆ ಮಣ್ಣಿನ ಗೊಂಬೆಗೆ ಜೀವತುಂಬುವು ದೆಂದರೇನು? ಜಗತ್ತಿನಲ್ಲಿ ನಡೆದಾಡುವ ವ್ಯಕ್ತಿಗಳನ್ನು ನೋಡಿದರೆ ಎಲ್ಲರೂ ಮಣ್ಣಿನ ಗೊಂಬೆಗಳಂತೆ ಕಂಡುಬರುತ್ತಾರೆ. ಯಾರಲ್ಲಿಯೂ ಜೀವಂತಿಕೆಯಿಲ್ಲ, ಲವಲವಿಕೆ ಇಲ್ಲ. ಹೆಚ್ಚಿನವರಿಗೆ ಜೀವನದ ಉದ್ದೇಶವೇ ಗೊತ್ತಿಲ್ಲ. ಜೀವನದ ದಾರಿಯೂ ಗೊತ್ತಿಲ್ಲ. ಪ್ರತಿಯೊಬ್ಬನೂ ಹೊಟ್ಟೆಪಾಡಿಗಾಗಿ ಪಡಬಾರದ ಕಷ್ಟವನ್ನು ಪಡುತ್ತಾನೆ. ಜೀವನ ಹೋರಾಟದ ಜಂಜಾಟದಲ್ಲಿ ಆತ ಸ್ಪಂದನಶಕ್ತಿಯನ್ನೆ ಕಳೆದುಕೊಂಡಿದ್ದಾನೆ. ಇಂದಿನ ಮನುಷ್ಯ ಒಬ್ಬ ವ್ಯಕ್ತಿಯಾಗಿ ಬದುಕುತ್ತಾನೆಯೇ ವಿನಾ ಸಮಷ್ಟಿಯಾಗಿ ಬದುಕುವ ಬಗ್ಗೆ ಯೋಚಿಸುವುದೇ ಇಲ್ಲ. ಹೀಗೆ ಸಮಾಜದ ಸಮಸ್ಯೆಯ ಬಗ್ಗೆ, ದೇಶದ ತೊಂದರೆಯ ಬಗ್ಗೆ ಆತ ನಿರ್ಲಿಪ್ತನಾಗುತ್ತಿದ್ದಾನೆ; ಸಮಾಜ, ದೇಶದ ಬಗ್ಗೆ ಮಣ್ಣಿನ ಗೊಂಬೆಯಂತೆ ವರ್ತಿಸುತ್ತಾನೆ.
ಇಂತಹ ಮಣ್ಣಿನ ಗೊಂಬೆಯಲ್ಲಿ ಜೀವತುಂಬುವುದೆಂದರೆ ನಮ್ಮ ನಮ್ಮ ಸ್ವಭಾವಕ್ಕನುಗುಣವಾಗಿ ನಮ್ಮ ಜೀವನದ ಉದ್ದೇಶವನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಬಾಳುವುದು. ಒಂದು ಧ್ಯೇಯಕ್ಕಾಗಿ, ಉದ್ದೇಶಕ್ಕಾಗಿ ಬದುಕಿದರೆ ನಮ್ಮ ಬಾಳು ಸಾರ್ಥಕ ಆಗುತ್ತದೆ. ನಮ್ಮ ಸಮಾಜ, ನಮ್ಮ ಪರಂಪರೆಯನ್ನು ತಿಳಿದುಕೊಂಡು ಅದರ ಉಳಿವು ಮತ್ತು ಬೆಳವಣಿಗೆಗೆ ಕಟಿಬದ್ಧರಾಗುವುದೇ ನಮ್ಮಲ್ಲಿ ಜೀವತುಂಬಿಸುವ ಕೆಲಸ. ಅಂದು ಶಾಲಿವಾಹನ ಮಾಡಿದಂತೆ ಇಂದು ಕೂಡ ಈ ದೇಶದ, ಧರ್ಮದ ಬಗ್ಗೆ ಅರಿವು ಉಂಟುಮಾಡಿ, ನಮ್ಮ ಸಂಸ್ಕೃತಿ, ಸಮಾಜದ ಬಗ್ಗೆ ಅಭಿಮಾನ ಉಂಟುಮಾಡುವ ಕೆಲಸ ಆಗಬೇಕಿದೆ. ಮನುಷ್ಯನನ್ನು ಕ್ರಿಯಾಶೀಲನನ್ನಾಗಿ, ಸಮಾಜಮುಖಿಯನ್ನಾಗಿ ಮಾಡಿ ಆತನಲ್ಲಿ ಜೀವತುಂಬಿಸುವ ಕೆಲಸ ಆಗಬೇಕಿದೆ. ರಾತ್ರಿಯೆಲ್ಲ ಕುಡಿದು ತೂರಾಡುವ ಹೊಸವರ್ಷದ ಆಚರಣೆಗಿಂತ ಉಂಡು, ಉಟ್ಟು ಸಂಭ್ರಮಿಸುವ ಯುಗಾದಿ ಹಬ್ಬದ ಆಚರಣೆ ಮನುಷ್ಯನಲ್ಲಿ ನವೋಲ್ಲಾಸವನ್ನು ತಂದುಕೊಡುತ್ತದೆ.
*ನಿಜ ಮರ್ಮ
ನಾವೆಲ್ಲರೂ ಒಂದು ರೀತಿಯಲ್ಲಿ ಮಣ್ಣಿನ ಗೊಂಬೆಗಳೇ. ಮಾನವನ ಶರೀರ ಪಂಚಮಹಾಭೂತಗಳಿಂದ ನಿರ್ಮಿತವಾದದ್ದು ಎಂಬುದಾಗಿ ನಮ್ಮ ಶಾಸ್ತ್ರ ಹೇಳುತ್ತದೆ. ಈ ಮಣ್ಣಿನಲ್ಲೆ ಹುಟ್ಟಿ, ಈ ಮಣ್ಣಿನಲ್ಲೆ ಹೊರಳಾಡಿ, ಈ ಮಣ್ಣಿನಲ್ಲೆ ಓಡಾಡಿ ಒಂದು ದಿನ ಈ ಮಣ್ಣಿನಲ್ಲೆ ಮಣ್ಣಾಗುವ ಮನುಷ್ಯ ಮಣ್ಣಿನ ಗೊಂಬೆಯಲ್ಲವೆ? ಮಣ್ಣಿನಿಂದಲೇ ಜನನ, ಮಣ್ಣಿನಲ್ಲೆ ಮರಣ. ಮಾತ್ರವಲ್ಲ, ಮನುಷ್ಯನ ಬದುಕಿಗೂ ಆಧಾರ ಈ ಮಣ್ಣೇ. ಈ ಮಣ್ಣಿಲ್ಲದಿದ್ದರೆ ಮನುಷ್ಯನ ಜೀವನಕ್ಕೆ ಆಧಾರವಾದ ಆಹಾರ ಉತ್ಪಾದನೆ ಸಾಧ್ಯವೆ?
ಒಬ್ಬ ಬೆಳೆಗಾರ ಎದ್ದು ಒಂದು ಅಂಗಡಿಗೆ ಹೋದ. ಅಂಗಡಿ ಮಾಲೀಕ ಅಂಗಡಿಯ ಬಾಗಿಲು ಆಗತಾನೆ ತೆರೆದು ದೇವರಿಗೆ ಕೈಮುಗಿದು ಕೂತಿದ್ದ ಮಾತ್ರ. ಬಂದವ ಅಂಗಡಿಯವನ ಹತ್ತಿರ ಒಂದು ರೂಪಾಯಿ ಕೊಟ್ಟು ಅಂಗಡಿಯಲ್ಲಿದ್ದ ಎಲ್ಲ ಸಾಮಾನುಗಳನ್ನು ಕೊಡು ಎಂದು ಕೇಳಿದ. ಆದರೆ ಆ ಅಂಗಡಿಯಲ್ಲಿ ಮಾರಾಟಕ್ಕಿದ್ದ ಯಾವ ವಸ್ತುವೂ ಒಂದು ರೂಪಾಯಿಗೆ ಸಿಗುವುದಲ್ಲ. ಅಂಗಡಿ ಮಾಲೀಕ ತುಂಬಾ ಯೋಚನೆಮಾಡಿ ಒಂದು ಮುಷ್ಟಿ ಮಣ್ಣನ್ನು ಆ ಗ್ರಾಹಕನಿಗೆ ಕೊಟ್ಟು ಹೇಳಿದ: ನೋಡು, ನೀನು ಬಯಸಿದಂತೆ ಈ ಒಂದು ಹಿಡಿ ಮಣ್ಣಲ್ಲಿ ಎಲ್ಲವೂ ಇದೆ. ಯಾಕೆಂದರೆ ಈ ಅಂಗಡಿಯಲ್ಲಿರುವ ಎಲ್ಲ ಸಾಮಾನುಗಳೂ ಕೂಡ ಮಣ್ಣಿನಿಂದಲೇ ಸೃಷ್ಟಿಯಾದದ್ದು. ನಿನ್ನ ಒಂದು ರೂಪಾಯಿಗೆ ಮಣ್ಣನ್ನು ತೆಗೆದುಕೊಂಡು ಹೋಗಿ ನಿನಗೆ ಬೇಕಾದುದನ್ನು ಪಡೆದುಕೋ. ಆಗ ಗ್ರಾಹಕನಿಗೆ ಮಣ್ಣಿನ ಮಹತ್ತ್ವ ಅರ್ಥವಾಯಿತು.
ಮಣ್ಣಿನಿಂದ ಹುಟ್ಟಿದ ನಾವೆಲ್ಲರೂ ನಿಜವಾದ ಮಣ್ಣಿನ ಗೊಂಬೆಗಳೇ. ಆದರೆ ಮಣ್ಣಿನ ಗೊಂಬೆಗೆ ಜೀವತುಂಬುವು ದೆಂದರೇನು? ಜಗತ್ತಿನಲ್ಲಿ ನಡೆದಾಡುವ ವ್ಯಕ್ತಿಗಳನ್ನು ನೋಡಿದರೆ ಎಲ್ಲರೂ ಮಣ್ಣಿನ ಗೊಂಬೆಗಳಂತೆ ಕಂಡುಬರುತ್ತಾರೆ. ಯಾರಲ್ಲಿಯೂ ಜೀವಂತಿಕೆಯಿಲ್ಲ, ಲವಲವಿಕೆ ಇಲ್ಲ. ಹೆಚ್ಚಿನವರಿಗೆ ಜೀವನದ ಉದ್ದೇಶವೇ ಗೊತ್ತಿಲ್ಲ. ಜೀವನದ ದಾರಿಯೂ ಗೊತ್ತಿಲ್ಲ. ಪ್ರತಿಯೊಬ್ಬನೂ ಹೊಟ್ಟೆಪಾಡಿಗಾಗಿ ಪಡಬಾರದ ಕಷ್ಟವನ್ನು ಪಡುತ್ತಾನೆ. ಜೀವನ ಹೋರಾಟದ ಜಂಜಾಟದಲ್ಲಿ ಆತ ಸ್ಪಂದನಶಕ್ತಿಯನ್ನೆ ಕಳೆದುಕೊಂಡಿದ್ದಾನೆ. ಇಂದಿನ ಮನುಷ್ಯ ಒಬ್ಬ ವ್ಯಕ್ತಿಯಾಗಿ ಬದುಕುತ್ತಾನೆಯೇ ವಿನಾ ಸಮಷ್ಟಿಯಾಗಿ ಬದುಕುವ ಬಗ್ಗೆ ಯೋಚಿಸುವುದೇ ಇಲ್ಲ. ಹೀಗೆ ಸಮಾಜದ ಸಮಸ್ಯೆಯ ಬಗ್ಗೆ, ದೇಶದ ತೊಂದರೆಯ ಬಗ್ಗೆ ಆತ ನಿರ್ಲಿಪ್ತನಾಗುತ್ತಿದ್ದಾನೆ; ಸಮಾಜ, ದೇಶದ ಬಗ್ಗೆ ಮಣ್ಣಿನ ಗೊಂಬೆಯಂತೆ ವರ್ತಿಸುತ್ತಾನೆ.
ಇಂತಹ ಮಣ್ಣಿನ ಗೊಂಬೆಯಲ್ಲಿ ಜೀವತುಂಬುವುದೆಂದರೆ ನಮ್ಮ ನಮ್ಮ ಸ್ವಭಾವಕ್ಕನುಗುಣವಾಗಿ ನಮ್ಮ ಜೀವನದ ಉದ್ದೇಶವನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಬಾಳುವುದು. ಒಂದು ಧ್ಯೇಯಕ್ಕಾಗಿ, ಉದ್ದೇಶಕ್ಕಾಗಿ ಬದುಕಿದರೆ ನಮ್ಮ ಬಾಳು ಸಾರ್ಥಕ ಆಗುತ್ತದೆ. ನಮ್ಮ ಸಮಾಜ, ನಮ್ಮ ಪರಂಪರೆಯನ್ನು ತಿಳಿದುಕೊಂಡು ಅದರ ಉಳಿವು ಮತ್ತು ಬೆಳವಣಿಗೆಗೆ ಕಟಿಬದ್ಧರಾಗುವುದೇ ನಮ್ಮಲ್ಲಿ ಜೀವತುಂಬಿಸುವ ಕೆಲಸ. ಅಂದು ಶಾಲಿವಾಹನ ಮಾಡಿದಂತೆ ಇಂದು ಕೂಡ ಈ ದೇಶದ, ಧರ್ಮದ ಬಗ್ಗೆ ಅರಿವು ಉಂಟುಮಾಡಿ, ನಮ್ಮ ಸಂಸ್ಕೃತಿ, ಸಮಾಜದ ಬಗ್ಗೆ ಅಭಿಮಾನ ಉಂಟುಮಾಡುವ ಕೆಲಸ ಆಗಬೇಕಿದೆ. ಮನುಷ್ಯನನ್ನು ಕ್ರಿಯಾಶೀಲನನ್ನಾಗಿ, ಸಮಾಜಮುಖಿಯನ್ನಾಗಿ ಮಾಡಿ ಆತನಲ್ಲಿ ಜೀವತುಂಬಿಸುವ ಕೆಲಸ ಆಗಬೇಕಿದೆ. ರಾತ್ರಿಯೆಲ್ಲ ಕುಡಿದು ತೂರಾಡುವ ಹೊಸವರ್ಷದ ಆಚರಣೆಗಿಂತ ಉಂಡು, ಉಟ್ಟು ಸಂಭ್ರಮಿಸುವ ಯುಗಾದಿ ಹಬ್ಬದ ಆಚರಣೆ ಮನುಷ್ಯನಲ್ಲಿ ನವೋಲ್ಲಾಸವನ್ನು ತಂದುಕೊಡುತ್ತದೆ.
No comments:
Post a Comment