Saturday, 24 February 2018

ಮೂಗುತಿ ಧರಿಸುವುದರಿಂದಾಗುವ ಲಾಭಗಳು

ಮೂಗುತಿ ಧರಿಸುವುದರಿಂದಾಗುವ ಲಾಭಗಳು 

೧. ‘ಮೂಗುತಿಯನ್ನು ಧರಿಸುವುದರಿಂದ ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ‘ಬಿಂದುಒತ್ತಡದ (ಆಕ್ಯುಪ್ರೆಶರ್)’ ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ.

  ೨. ಕೆಟ್ಟ ಶಕ್ತಿಗಳಿಂದ ಉಸಿರಾಟದ ಮಾರ್ಗದಿಂದ ಹಲ್ಲೆಯಾಗದಂತೆ ಮೂಗುತಿಯು ಮೂಗು ಮತ್ತು ಶ್ವಾಸಮಾರ್ಗವನ್ನು ರಕ್ಷಿಸುತ್ತದೆ.’

 ೩. ‘ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಸುತ್ತಲೂ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ ಮತ್ತು ಮೂಗಿನ ಸುತ್ತಲಿನ ವಾಯುಮಂಡಲವು ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹವನ್ನು ಪ್ರವೇಶಿಸಬಲ್ಲದು.’

 *ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರವಿದೆ.

 ಸ್ತ್ರೀಯರ ಮನಸ್ಸು ಚಂಚಲವಾಗಿರುತ್ತದೆ. ಮೂಗುತಿಯನ್ನು ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಸ್ತ್ರೀಯರು ಯಾವುದೇ ಕಾರ್ಯವನ್ನು ಮಾಡುವಾಗ ಯೋಗ್ಯ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗುತ್ತದೆ.  ಇದರಿಂದಲೇ ಹಿಂದೂ ಧರ್ಮದ ಮಹಾನತೆಯು ಗಮನಕ್ಕೆ ಬರುತ್ತದೆ! ಹಿಂದೂ ಧರ್ಮವು ಪ್ರತಿಯೊಂದು ವಿಷಯದಿಂದ ಅಂದರೆ ಆಚಾರಧರ್ಮದಿಂದ ಮಾನವನಿಗೆ ಆಧ್ಯಾತ್ಮಿಕ, ಶಾರೀರಿಕ ಮತ್ತು ಮಾನಸಿಕವಾಗಿ ಯೋಗ್ಯವಾದ ಕೃತಿಯನ್ನೇ ಮಾಡಲು ಕಲಿಸುತ್ತದೆ. ಮನುಷ್ಯನಿಗೆ ಅದರ ಶಾಸ್ತ್ರ ತಿಳಿಯದಿದ್ದರೂ, ಶ್ರದ್ಧೆಯಿಂದ ಅದೇ ರೀತಿ ಪಾಲನೆ ಮಾಡಿದರೆ ಅವನ ಐಹಿಕ ಮತ್ತು ಪಾರಮಾರ್ಥಿಕ ಜೀವನವು ಆನಂದದಲ್ಲಿರುವುದು. ಇದಕ್ಕೆ ಸಂದೇಹವೇ ಇಲ್ಲ. 
🔹🔹🔹🔹🔹🔹🔹🔹🔹🔹🔹

Once we started seeing the beauty of life,

ugliness starts disappearing.

If we start looking at life with joy,

sadness starts disappearing.

We cannot have heaven and hell together,
We can have only one.It is our choice…

osho
🔸🔸🔸🔸🔸🔸🔸🔸🔸🔸🔸

ಹುಲ್ಲುಕಡ್ಡಿ ಶಕ್ತಿ


ಶ್ರೀವಾಣಿ

ಹುಲ್ಲುಕಡ್ಡಿ ಶಕ್ತಿ

ಶ್ರೀ ಸಿದ್ಧೇಶ್ವರ ಸ್ವಾಮೀಜಿ

ಸ್ವಯಂಭು ಎಂದರೆ ಸತ್ಯವು ಸ್ವತಃ ಸಿದ್ಧವಾಗಿದೆ. ಅದನ್ನು ಯಾರೂ ನಿರ್ಮಿಸಿಲ್ಲ. ನಿರ್ಮಾಣವಾದುದು ನಿರ್ನಾಮವಾಗುತ್ತದೆ, ನಾಶ ಹೊಂದುತ್ತದೆ. ಗಡಿಗೆ ಒಡೆಯುತ್ತದೆ ವಿನಾ ಮಣ್ಣು ಒಡೆಯುವುದಿಲ್ಲ. ಗಡಿಗೆಯಂತಿರುವ ಸುಳ್ಳಿನ ಜಗತ್ತು ನಾಶವಾಗುತ್ತದೆ ವಿನಾ ಸತ್ಯ ಸಾಯುವುದಿಲ್ಲ! ನಾಶವಾಗುವುದಿಲ್ಲ. ಓರ್ವ ಮುದುಕಿ ಒಂದು ದೇವರ ಮೂರ್ತಿಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಿದ್ದಳು. ಅರ್ಧ ಆಯುಷ್ಯವನ್ನು ಆ ಮೂರ್ತಿಯ ಆರಾಧನೆಯಲ್ಲಿ ಕಳೆದಿದ್ದಳು. ಒಂದು ದಿನ ಆಕೆಯ ಮೊಮ್ಮಗನು ಬಂದು ''ನಿನ್ನ ಆಯುಷ್ಯವೆಲ್ಲ ವ್ಯರ್ಥವಾಯಿತು,'' ಎಂದು ಹೇಳಿದ. ''ಏಕೆ?'' ಎಂದು ಮುದುಕಿ ಕೇಳಿದಳು. ''ದೇವರಿಲ್ಲವೆಂದು ಇಂದು ವಿದ್ವಾಂಸರು ಸಿದ್ಧ ಮಾಡಿದ್ದಾರೆ,'' ''ದೇವರೇಕೆ ಇಲ್ಲ?.'' ಎಂದಳು ಮುದುಕಿ ''ದೇವರು ಕಾಣುವುದಿಲ್ಲ ಆದ್ದರಿಂದ ಅವನು ಇಲ್ಲ!,'' ಎಂದ ಮೊಮ್ಮಗ. ಮುದುಕಿ ಹೇಳಿದಳು-''ಕಣ್ಣಿಲ್ಲದವರಿಗೆ ದೇವರು ಹೇಗೆ ಕಾಣುತ್ತಾನೆ?,'' ಮೊಮ್ಮಗ ಹೇಳಿದ- ''ವಿದ್ವಾಂಸರಿಗೆ ನೀನು ಕಣ್ಣಿಲ್ಲವೆಂದು ಹೇಗೆ ಹೇಳುತ್ತೀ?,'' ಮುದುಕಿ ಹೇಳಿದಳು-''ಅವರಿಗೆ ಹೊರಗಿನ ಕಣ್ಣಿರಬಹುದು ಆದರೆ ಒಳಗಿನ ಕಣ್ಣು ಅರಿವಿನ ಕಣ್ಣಿಲ್ಲ. ಅರಿವಿನ ಅನುಭಾವದ ಕಣ್ಣಿಗೆ ಮಾತ್ರ ದೇವನು ಕಾಣುತ್ತಾನೆ!,'' ಮುದುಕಿಯ ಈ ಮಾತನ್ನು ಕೇಳಿದಾಗ ನಿರ್ಗುಣ, ನಿರಾಕಾರ, ನಿರಂಜನನಾದ ಆ ಮಹದೇವನ ಅರಿವಿನ ಬೆಳಕು ಮೊಮ್ಮಗನ ಮನದಲ್ಲಿ ಚೆಲ್ಲವರಿದಿತ್ತು.

ಕೆಲವು ನಾಸ್ತಿಕರು ನಮ್ಮ ಪ್ರಸಿದ್ಧ ದೇವಾಲಯಗಳ ಮೂರ್ತಿಯನ್ನು ಒಡೆದು ಹಾಕಿದರು. ಭಾರತೀಯರ ದೇವರ ಕಥೆ ಮುಗಿಯಿತೆಂದು ಕುಣಿದಾಡಿದರು. ಆದರೆ ಅವರು ಒಡೆದುದು ದೇವರ ಮೂರ್ತಿಯನ್ನೇ ವಿನಾ ದೇವರನ್ನಲ್ಲ ಎಂಬ ಸರಳ ಸತ್ಯ ಅವರಿಗೆ ತಿಳಿಯಲಾರದುದೇ ಪರಮಾಶ್ಚರ್ಯ. ಹಲಗೆಯ ಮೇಲೆ ಬರೆದ ಅಕ್ಷ ರಗಳನ್ನು ಅಳಿಸಿದರೆ ಮೂಲ ಅಕ್ಷ ರಗಳೆಂದಾದರೂ ನಾಶವಾಗುತ್ತವೆಯೇ? ಪರಮಾತ್ಮನನ್ನು ನಾಶಮಾಡುವ ಶಕ್ತಿ ಈ ಜಗತ್ತಿನಲ್ಲಿ ಇನ್ನೊಂದಿಲ್ಲ.

ಒಂದುದಿನ ಅಗ್ನಿ ದೇವತೆ, ಜಲದೇವತೆ, ವಾಯುದೇವತೆ ಮೂವರಲ್ಲಿ ನಾ ಶ್ರೇಷ್ಠ, ನೀ ಶ್ರೇಷ್ಠ ಎಂಬ ವಾದ ಎದ್ದಿತು. ಅಲ್ಲೆ ಇದ್ದ ಒಂದು ಹುಲ್ಲು ಕಡ್ಡಿ ಹೇಳಿತು- ''ನಾನು ಹೇಳುತ್ತೇನೆ ನಿಮ್ಮಲ್ಲಿ ಯಾರು ಶ್ರೇಷ್ಠರೆಂದು. ಆಗಿಯೇ ಹೋಗಲಿ, ನಿಮ್ಮ ಶಕ್ತಿಯ ಪ್ರಯೋಗ ನನ್ನ ಮೇಲೆ!,'' ವಾಯು ದೇವತೆ ಬಿರುಗಾಳಿ ಬೀಸಿದರೆ ಹೆಮ್ಮರಗಳೇ ಉರುಳಿದವು. ಹುಲ್ಲುಕಡ್ಡಿ ಸ್ವಲ್ಪ ಹೊತ್ತು ಬಾಗಿ ಮತ್ತೆ ಮೊದಲಿನಂತೆ ನಿಂತಿತು. ಜಲದೇವತೆ ಜಲಪ್ರಳಯವನ್ನು ಮಾಡಿದ. ಆಗಲೂ ಹುಲ್ಲು ಸ್ವಲ್ಪ ಹೊತ್ತು ಬಾಗಿ ಮತ್ತೆ ಹಾಗೇ ನಿಂತಿತು. ಕೊನೆಗೆ ಅಗ್ನಿ ದೇವತೆ ಬೆಂಕಿಯ ಮಳೆಗರೆದರೆ ಆ ಕರಕಿ ಹುಲ್ಲಿನ ಮೇಲಿನ ಎರಡೆಲೆ ಕರಕಾಗಿದ್ದವು. ಮತ್ತೆ ಸ್ವಲ್ಪ ಸಮಯದ ನಂತರ ನೆಲದೊಳಗಿಂದ ಮೊಳಕೆಯೊಡೆದು ಮೇಲೆ ಬಂದಿತ್ತು ಅಷ್ಟೊತ್ತಿಗೆ ತ್ರಿಮೂರ್ತಿಗಳು ಬೆವತು ಸೋತು ಹೋಗಿದ್ದರು! ಆಗ ಆ ಹುಲ್ಲು ಕಡ್ಡಿ ಹೇಳಿತು-''ತ್ರಿಮೂರ್ತಿಗಳೇ ನಿಮ್ಮನ್ನು ಸೋಲಿಸಿದವ ನಾನಲ್ಲ ನನ್ನೊಳಗಿರುವ ಆ ಪರಮಾತ್ಮ ಶಕ್ತಿ. ಅದೇ ಶಕ್ತಿ ನಿಮ್ಮಲ್ಲಿಯೂ ಇದೆ. ಆದರೆ ನೀವು ಅಹಂಕರಿಸಿದ್ದರಿಂದ ನಿಮಗೆ ಸೋಲಾಗಿದೆ. ನಿರಹಂಕಾರಿಗಳು ವಿನಯಶೀಲರೂ ಆಗಿ ನೀವು ನಡೆದುಕೊಂಡರೆ ಆ ಮಹಾದೇವನ ಕರುಣೆಯಿಂದ ನೀವು ಮತ್ತೆ ವಿಜಯಶಾಲಿಗಳಾಗಿ ಮೆರೆಯುತ್ತೀರಿ!.'' ಆ ಹುಲ್ಲುಕಡ್ಡಿಯ ಉಪದೇಶದಿಂದ ತ್ರಿಮೂರ್ತಿಗಳ ಅಹಂಕಾರ ಅಳಿದಿತ್ತು. ಅರಿವಿನ ಕಣ್ಣು ತೆರೆದಿತ್ತು. ಪ್ರಪಂಚಕ್ಕೆಲ್ಲ ಸರ್ವಶಕ್ತನು ಸ್ವಯಂಸಿದ್ಧನು ಆಗಿರುವ ಆ ಪರಮಸತ್ಯ ಪರಮಾತ್ಮನೇ ಸ್ವಯಂಭು.

ಆಧಾರ : ಈಶ ಪ್ರಸಾದ

🔸🔸🔸🔸🔸🔸🔸🔸🔸🔸🔸

ಮನಸ್ಸಿನ ಆಂತರ್ಯದ ಆಕಾಶ

ಮನಸ್ಸಿನ ಆಂತರ್ಯದ ಆಕಾಶ

ಶ್ರೀ ಶ್ರೀ ರವಿಶಂಕರ್‌

ಲೀಟರ್‌ಗಳನ್ನು ಹೇಗೆ ಲೆಕ್ಕ ಮಾಡುತ್ತೀರಿ? ಪಾತ್ರೆಯ ಸಾಮರ್ಥ್ಯ‌ ಒಂದು ಲೀಟರ್‌, ಎರಡು ಲೀಟರ್‌ ಅಥವಾ ಅರ್ಧ ಲೀಟರ್‌ ಎಂದು ಲೆಕ್ಕ ಮಾಡುತ್ತೇವೆ. ಕಾರಣ ಎಂದರೆ ಎಲ್ಲಾ ಕಾರಣಗಳ ಕಾರಣ. ಅದು ಯಾವುದರ ಪ್ರಭಾವವೂ ಅಲ್ಲ. ಪ್ರಭಾವ ಎಂದರೆ ಅದರ ಹಿಂದೆ ಏನೋ ಒಂದು ಕಾರಣ ಇರುತ್ತದೆ. ಕಾರಣ ಎಂದರೆ ಅಂತಿಮವಾದ ಕಾರಣ. ಅದರ ಹಿಂದೆ ಬೇರೆ ಯಾವ ಕಾರಣವೂ ಇರುವುದಿಲ್ಲ.

ವಿವಿಧ ಜಾತಕಗಳನ್ನು ನೋಡಿ ಜನರು ವಿವಿಧ ರೀತಿಯ ಚಿತ್ತಾಕಾಶವನ್ನು ತಿಳಿಯುತ್ತಾರೆ. ಕುಂಡಲಿಯಿಂದ ಕೆಲವು ಗುಣಗಳನ್ನು ಕಂಡುಹಿಡಿಯಬಹುದು. ಇದು ಚಿತ್ತಾಕಾಶವನ್ನು ಸೂಚಿಸುತ್ತದೆ. ಒಂದು ವ್ಯಕ್ತಿಯಲ್ಲಿರುವ ಆಲೋಚನೆಗಳ, ಭಾವನೆಗಳ ರೀತಿ. ಕಾಲವೂ ಮುಖ್ಯ. ಆದರೆ ಜಾತಕದ ಭವಿಷ್ಯ ಧೂಮಕೇತುವಿನ ಭವಿಷ್ಯದಂತೆ. ಅವು ಸದಾ ಸರಿಯಾಗಿರುತ್ತವೆಂದಲ್ಲ. ಧೂಮಕೇತುವಿನ ಭವಿಷ್ಯ ಸದಾಕಾಲ ಕೆಲಸ ಮಾಡುವುದಿಲ್ಲ. ಗುಡುಗು ಮಿಂಚು ಇರುತ್ತದೆನ್ನುತ್ತಾರೆ, ಆದರೆ ಸೂರ್ಯನು ಹೊಳೆಯುತ್ತಾನೆ! ಆದ್ದರಿಂದ ಜ್ಯೋತಿಷ್ಯವು ಒಂದು ಸಾಧ್ಯತೆಯಷ್ಟೆ.

ಭಾವನೆಗಳೂ ಚಂದ್ರಮನ ಮೇಲೆ ಅವಲಂಬಿತವಾಗಿವೆ. ಚಂದ್ರಮನು ಒಂದು ಸ್ಥಳದಲ್ಲಿ ಎರಡು ಕಾಲ ದಿವಸಗಳಿಗಿಂತಲೂ ಹೆಚ್ಚಾಗಿ ಇರುವುದಿಲ್ಲ. ಆ ಸ್ಥಳದಿಂದ ಚಂದ್ರಮನು ಜರುಗಿದಾಗ ನಿಮ್ಮ ಭಾವನೆಯೂ ಬದಲಿಸುತ್ತದೆ. ಚಂದ್ರಮ ಮತ್ತು ಶನಿಯು ಒಂದಾದಾಗ ಜನರು ಖಿನ್ನರಾಗುತ್ತಾರೆ. ಈ ಭಾವನೆಗಳು ಬರುತ್ತವೆ, ಹೋಗುತ್ತವೆ. ಯಾವುದೂ ಶಾಶ್ವತವಲ್ಲ. ಯಾವ ಗ್ರಹವೂ ಸ್ಥಿರವಾಗಿ ಒಂದೇ ಕಡೆ ನಿಲ್ಲುವುದಿಲ್ಲ. ಎಲ್ಲವೂ ಚಲಿಸುತ್ತವೆ. ಆದರೆ ಈ ಯಾವುದೇ ಭಾವನೆಗಳೊಡನೆ ನೀವು ಗುರುತಿಸಿಕೊಂಡಾಗ ನೀವು ಸಿಲುಕಿಕೊಳ್ಳುತ್ತೀರಿ. ಆಗ ನೀವು ಮುಂದಕ್ಕೆ ಹೋಗುವುದಿಲ್ಲ. ಆಗ ಅದು ನಿಮ್ಮ ದೇಹದೊಳಗೆ ಹೊಕ್ಕುತ್ತದೆ, ಖಾಯಿಲೆ ಬೀಳುತ್ತೀರಿ. ಎಲ್ಲವೂ ಅದ್ಭುತವಲ್ಲವೆ? ಆದ್ದರಿಂದ ದಾರಿಯೇನು? ಇಲ್ಲಿಂದ ಮುಂದಕ್ಕೆ ಹೇಗೆ ಹೋಗುವುದು?

ಮೋಡವಿರುವ ದಿನದಂದು ವಿಮಾನವು ಹೇಗೆ ಹಾರುತ್ತದೆ? ಮೋಡಗಳ ಮೇಲಕ್ಕೆ ಹಾರುತ್ತದೆ ಮತ್ತು ಸೂರ್ಯನು ಹೊಳೆಯುತ್ತಾನೆ. ಆಧ್ಯಾತ್ಮಿಕ ಅಭ್ಯಾಸಗಳು ಇರುವುದೇ ಅದಕ್ಕಾಗಿ. ಆಧ್ಯಾತ್ಮಿಕ ಅಭ್ಯಾಸಗಳು ನಮ್ಮನ್ನು ಚಿತ್ತಾಕಾಶದಿಂದ ಚಿದಾಕಾಶಕ್ಕೆ ಕೊಂಡೊಯ್ಯುತ್ತದೆ. ಎಲ್ಲಾ ಭಾವನೆಗಳನ್ನೂ ದಾಟಿ ಹೊರಬರುತ್ತೇವೆ.

ಬಹಳ ಹಿಂದೆಯೆ ಋುಷಿಗಳು ಒಂಭತ್ತು ಗ್ರಹಗಳು ಹನ್ನೆರಡು ರಾಶಿಗಳಲ್ಲಿ ಚಲಿಸಿ 108 ಬದಲಾವಣೆಗಳು ಆಗುತ್ತವೆ. ಇದರಿಂದ ಒಳ್ಳೆಯ ಪ್ರಭಾವಗಳು ಹೆಚ್ಚುತ್ತದೆ ಮತ್ತು ಕೆಟ್ಟ ಪ್ರಭಾವವು ಕುಗ್ಗುತ್ತಾ ಹೋಗುತ್ತದೆ. ಓಂ ನಮಃ ಶಿವಾಯ 108 ಸಲ ಉಚ್ಚರಿಸಿದರೆ ನಿಮ್ಮ ಆತ್ಮವನ್ನು ಉತ್ಥಾಪಿಸಿ, ಅದರಿಂದ ಹೊರಗೆ ಕರೆದೊಯ್ದು ಚಿದಾಕಾಶದೊಡನೆ ಸಂಬಂಧ ಕಲ್ಪಿಸುತ್ತದೆ.

ತಮಿಳುನಾಡಿನಲ್ಲಿ ''ಚಿತ್ತಂಬಲಂ ಶಿವ'' ಎನ್ನುತ್ತಾರೆ. ಇದು ಚಿದಾಕಾಶವನ್ನು ಸೂಚಿಸುತ್ತದೆ. ''ನಾನು ಶಿವ ಎಂದೊಡನೆಯೇ ಚಿದಾಕಾಶದೊಳಗೆ ಹೊಕ್ಕುತ್ತೇನೆ, ಚೈತನ್ಯದ ಆಕಾಶದೊಳಗೆ ಹೊಕ್ಕುತ್ತೇನೆ'' ಎಂಬುದು ಇದರ ಅರ್ಥ. ಶಿವ ಚಿತ್ತಂಬಲಂ ಎಂದರೆ ಗುರು ತತ್ತ್ವ ಅಥವಾ ಶಿವತತ್ತ್ವ ಅಥವಾ ನಮ್ಮದೇ ಆತ್ಮ. ಎಲ್ಲವೂ ಅದೇ ಮತ್ತು ಅದೇ ಧ್ಯಾನ. ಉನ್ನತ ಸ್ಥಿತಿಗೇರಿದಾಗ ಆಗುವ ಅನುಭವವಿದು. ಎಲ್ಲಾ ಆಲೋಚನೆಗಳೂ ಹೊರಟು ಹೋಗುತ್ತವೆ. ಭಾವನೆಗಳು ನೆಲೆನಿಲ್ಲುತ್ತವೆ ಅತಿ ಪ್ರಶಾಂತವಾದ, ಅತಿ ಮಂಗಳವಾದ, ಅತ್ಯಂತ ಆಂತರ್ಯದ ಆಕಾಶವನ್ನು ಅನುಭವಿಸುತ್ತೇವೆ. ಸುದರ್ಶನ ಕ್ರಿಯೆಯಿಂದ ಆಗುವುದೇ ಇದು. ನಿಮ್ಮನ್ನು ಸುತ್ತಲೂ ಕೊಂಡೊಯ್ದು ಕೊಂಡೊಯ್ದು ನಂತರ ನಿಮ್ಮನ್ನು ಈ ವಲಯದಿಂದ ಹೊರಕ್ಕೆ ಕೊಂಡೊಯ್ಯುತ್ತದೆ. ಆಗ ಚಿದಾಕಾಶದೊಳಗೆ ಹೊಕ್ಕುತ್ತೀರಿ. ಶಿವ ತಿರು ಚಿತ್ತಂಬಲಂ!

🔸🔸🔸🔸🔸🔸🔸🔸🔸🔸🔸

ಮಲಗುವಾಗ ಉತ್ತರಕ್ಕೆ ಏಕೆ ತಲೆ ಹಾಕುವುದಿಲ್ಲ???

ಮಲಗುವಾಗ ಉತ್ತರಕ್ಕೆ ಏಕೆ ತಲೆ ಹಾಕುವುದಿಲ್ಲ???

ಈ ಸಂಪೂರ್ಣ ಸೂರ್ಯ ಮಂಡಲವೇ ಒಂದು ಅಗಾಧವಾದ ವಿದ್ಯುತ್ ಕಾಂತೀಯ ಪ್ರಭಾವಕ್ಕೆ ಒಳಗಾಗಿದೆ. ನಿಮಗೆ ತಿಳಿದಿರುವಂತೆ ಈ ಭೂಮಿಯೆ ಒಂದು ಭೃುಹತ್ ಅಯಸ್ಕಾಂತವಾಗಿದೆ, ನಾವು ಉತ್ತರಕ್ಕೆ ತಲೆ ಹಾಕಿ ಮಲಗಿದಾಗ ನಮ್ಮ ದೇಹದ ಕಾಂತೀಯ ದಿಕ್ಕು ಹಾಗೂ ಭೂಮಿಯ ಕಾಂತೀಯ ದಿಕ್ಕು, ಎರಡರ ನಡುವೆಯು ಅಸಮಾನವಾದ ಸಂಬಂಧ ಏರ್ಪಟ್ಟು ದೇಹದ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತದೆ.

ಅವುಗಳಲ್ಲಿ ಮುಖ್ಯವಾಗಿ ಹೃದಯದ ಕೆಲಸಕ್ಕೆ ತೊಂದರೆಗಳನ್ನು ಉಂಟುಮಾಡುತ್ತದೆ, ಅದಲ್ಲದೆ ದೇಹದಲ್ಲಿರುವ ಕಬ್ಬಿಣದ ಅಂಶ ಕೂಡ ಭೂಮಿಯ ವಿದ್ಯುತ್ ಕಾಂತೀಯತೆಗೆ ಸ್ಪಂದಿಸುವದರಿಂದ ಈ ದಿಕ್ಕಿನಲ್ಲಿ ಮಲಗುವುದರಿಂದ ತಲೆ ಭಾಗದ ಕಡೆ ರಕ್ತದ ಕಬ್ಬಿಣದ ಅಂಶದ ಚಲನೆ ಕೇಂದ್ರೀಕೃತ ಆಗುವುದರಿಂದ ಅಲ್ಜೈಮರ್, ಪಾರ್ಕಿನ್ಸನ್ ಮುಂತಾದ ಕಾಯಿಲೆಗಳಿಗೆ ಹಾಗೂ ರಕ್ತದೋತ್ತಡ ಕೂಡ ಜಾಸ್ತಿಯಾಗುತ್ತದೆ, ಹಾಗಾಗಿ ಇಂತಹ ಆಚರಣೆ ನಮ್ಮ ಸಂಸ್ಕೃತಿಯ ಮೌಢ್ಯವಲ್ಲ, ವೈಜ್ಞಾನಿಕ ಸಂಶೋಧನೆ.

ಮಂಗಳಸೂತ್ರದ ಮಹತ್ವವೇನು?


ಮಂಗಳಸೂತ್ರದ ಮಹತ್ವವೇನು?


*ಮಂಗಳಸೂತ್ರ*
ಎಂಬುದು ಒಂದು ಆಭರಣ ಎಂದು ಪರಿಗಣಿಸಿದರೆ ಅದು ತಪ್ಪಾಗುತ್ತದೆ. ಮಂಗಳಸೂತ್ರವನ್ನು ತೊಡುವುದರಿಂದ ಆಕೆಯ ಸೌಂದರ್ಯ ಹೆಚ್ಚುವುದಲ್ಲದೇ ಆಕೆಗೆ ಅದು ಸೌಭಾಗ್ಯದ ಸಂಕೇತ ಕೂಡ.

ಶ್ರೀಆದಿಶಂಕರರು ತಮ್ಮ ಸೌಂದರ್ಯಲಹರಿಯಲ್ಲಿ ಅದರ ಪ್ರಾಮುಖ್ಯತೆಗೆ ಒತ್ತುಕೊಟ್ಟಿದ್ದಾರೆ.

*ಹಿಂದೂ ಸಂಸ್ಕೃತಿಯಲ್ಲಿ ಮಂಗಳಸೂತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ.*

ಅದನ್ನು ತೊಡುವುದು ಗಂಡ-ಹೆಂಡತಿಯ ಸಂಬಂಧವನ್ನು ವೈಭವೀಕರಿಸಲಾಗಿದೆ. ಅದು ಗಂಡನ ಆಯಸ್ಸು ಹೆಚ್ಚಲಿ ಎಂಬ ಆಶಯದ ಸಂಕೇತ. ಮದುವೆಯಲ್ಲಿ ವರ ಅದನ್ನು ಕನ್ಯೆಯ ಕೊರಳಿಗೆ ಕಟ್ಟುತ್ತಾನೆ. ಹಾಗೆ ಕಟ್ಟುವಾಗ ಹೀಗೆಂದು ಪ್ರಮಾಣ ಮಾಡುತ್ತಾನೆ “ನಾನು ಈ ಮಗಳಸೂತ್ರವನ್ನು ಕಟ್ಟುತ್ತಿರುವುದರ ಮೂಲ ಉದ್ಧೇಶ ನೀನು ಧೀರ್ಘಕಾಲ ಸುಮಂಗಲಿಯಾಗಿ ಬಾಳು.”

ಮದುವೆಯಾದ ಮಹಿಳೆಯರು ಮಂಗಳಸೂತ್ರವನ್ನು ತಮ್ಮ ಜೀವನಪೂರ್ತಿ ತೊಡುತ್ತಾರೆ.

ಹೀಗೆ ತೊಡುವುದರ ಹಿಂದಿನ ಉದ್ಧೇಶ ತಮ್ಮ ಪತಿ ಮತ್ತು ಕುಟುಂಬದ ಸದಸ್ಯರು ಚೆನ್ನಾಗಿ ಬಾಳಲಿ ಮತ್ತು ದುಷ್ಟ ಜನರ ಕೆಟ್ಟ ದೃಷ್ಟಿ ಅವರ ಮೇಲೆ ಬೀಳದಿರಲಿ ಎಂದು.

ಮಂಗಳಸೂತ್ರದಲ್ಲಿ ಮೂರು ಗಂಟುಗಳಿರುತ್ತವೆ. ಆ ಮೂರು ಗಂಟುಗಳು ಹೆಣ್ಣಿನ ಮೂರು ಸ್ಥಿತಿಗಳನ್ನು ಸೂಚಿಸುತ್ತವೆ. ಅವುಗಳ ಅರ್ಥ ಹೀಗಿದೆ.—-

೧) ಮೊದಲ ಗಂಟು ಅವಳು ತನ್ನ ಗಂಡನಿಗೆ ವಿಧೇಯಳಾಗಿರುವುದರ ಸಂಕೇತ,

೨) ಎರಡನೆಯ ಗಂಟು ಕುಟುಂಬದ ಸದಸ್ಯರಿಗೆ ಸೇರಿದವಳಾಗಿರುವುದರ ಸಂಕೇತ,ಇನ್ನು

೩) ಮೂರನೆಯ ಗಂಟು ತಾನು ದೇವರಿಗೆ ಅರ್ಪಿತಳು ಎಂಬುದರ ಸಂಕೇತ.

ಅರಿಷಿನಕುಂಕುಮ ಹಚ್ಚಿಕೊಳ್ಳುವಾಗ ಮೊದಲು ಅದಕ್ಕೆ ಹಚ್ಚಿ ನಂತರ ಹಣೆಗೆ ಇಟ್ಟುಕೊಳ್ಳುವುದರಿಂದ ಮಹಿಳೆ ಅದರ ಪಾವಿತ್ರತೆಯನ್ನು ಹೆಚ್ಚು ಎಂದು ತೋರಿಸುವುದಲ್ಲದೇ ತಾನೂ ಮುತ್ತೈದೆಯಾಗಿ ಸಮಾಜದಲ್ಲಿ ಗೌರವಾನ್ವಿತಳು ಎಂಬುದನ್ನು ಸೂಚಿಸುತ್ತದೆ.

ಕೆಲವ ಮಹಿಳೆಯರು ರಾತ್ರಿ ಮಲಗುವಾಗ ಚಿನ್ನದ ಮಂಗಳಸೂತ್ರವನ್ನು ಗೂಟಕ್ಕೆ ಹಾಕಿ ಮಲಗುವುದುಂಟು. ಅದು ಧಾರ್ಮಿಕವಾಗಿ ತಪ್ಪು.
ಆದರೆಅವರ ಸಮಜಾಯಿಷಿ ಏನೆಂದರೆ ಮಲಗಿದಾಗ ಹೊರಳಾಡುವುದರಿಂದ ಚಿನ್ನದ ಸೂತ್ರ ಕೆಡಬಹುದು ಎಂಬುದಾಗಿದೆ.
ಇದು ತಪ್ಪಾದರೂ ಅವರವರ ವಿವೇಚನೆಗೆ ಬಿಟ್ಟಿದ್ದು !!

ಪದಗಳಿಗೆ ಕಟ್ಟುಬಿದ್ದಾಗ

ಪದಗಳಿಗೆ ಕಟ್ಟುಬಿದ್ದಾಗ


ಜಿಡ್ಡು ಕೃಷ್ಣಮೂರ್ತಿ

ನಾವು ಮಾತುಗಳನ್ನು ಕಲಿತಿದ್ದೇವೆ; ಆದರೆ ಪದಗಳಿಗೆ ದಾಸರಾಗಿದ್ದೇವೆ. ನಾವು ಪದಗಳ ಆಚೆಗೆ ಸರಿಯಲು ಉತ್ಸುಕರಾಗಿದ್ದೇವೆ. ಪದಗಳನ್ನು ಬುಡಮೇಲು ಮಾಡಿ, ಚಿಂದಿ ಚಿಂದಿ ಮಾಡಿ, ಪದಗಳಿಂದ ಬಿಡುಗಡೆ ಹೊಂದುವುದಿದೆಯಲ್ಲ ಅದು ಅಸಾಧಾರಣ ಪರಿಭಾವನೆ ಮತ್ತು ಶಕ್ತಿಯನ್ನು ತುಂಬುತ್ತದೆ.

ಇದು ಸುಲಭವಾಗಿ ಕಳಚಿಕೊಳ್ಳುವ ಸಂಗತಿಯಲ್ಲ; ಏಕೆಂದರೆ ಪದ- ಸಂಕೇತ- ವಿಚಾರಕ್ಕೆ ಮನಸ್ಸಿನ ಮೇಲೆ ಅಪಾರ ಹಿಡಿತವಿದೆ. ನಾವು ಮನಸ್ಸಿನಲ್ಲೊಂದು ಪರಿವರ್ತನೆ ಉಂಟುಮಾಡುವ ಬಗ್ಗೆ ಮಾತನಾಡುತ್ತಿದ್ದೇವೆ. ಹಾಗೆ ಮಾಡಲು ಶಬ್ದ ಸ್ಥಗಿತಗೊಳ್ಳಬೇಕು. ಸಮಾಪ್ತಿಯಾಗಬೇಕು. ಶಬ್ದವನ್ನು ತೆಗೆದುಬಿಟ್ಟರೆ, ಉಳಿದಿದ್ದೇನು? ಪದವು ಗತವನ್ನು ಪ್ರತಿನಿಧಿಸುತ್ತದೆ, ಅಲ್ಲವೆ? ಅಸಂಖ್ಯ ಚಿತ್ರಗಳು, ಬಿಂಬಗಳು, ಅನುಭವಗಳ ಪದರಗಳು ಇವೆಲ್ಲ ಶಬ್ದ, ವಿಚಾರ, ಸ್ಮ ೃತಿಯನ್ನು ಆಧರಿಸಿವೆ. ದೇವರು ಎಂಬ ಪದವನ್ನು ತೆಗೆದುಕೊಳ್ಳಿ. ದೇವರು ಎಂಬ ಪದ ದೇವರಲ್ಲ; ಶಬ್ದ, ಸಂಕೇತ ಅದಲ್ಲದಿರುವಾಗ, ನಂಬಿಕೆ, ವಿಚಾರ ಇಲ್ಲದಿರುವಾಗ ವ್ಯಕ್ತಿಗೆ ದೇವರು ಎಂಬ ಆ ಅಗಾಧತೆ, ಅಪ್ರಮೇಯ ಗುಣ ಅಥವಾ ಅದು ಏನೇ ಆಗಲಿ ಅದರ ಅರಿವು ಮೂಡುತ್ತವೆ.

ನೋಡಿ, 'ಯಾತನಾಮಯ' ಎಂಬ ಶಬ್ದವನ್ನು ನಾವು ಉಪಯೋಗಿಸುತ್ತೇವೆ. ಆದರೆ ಆ ಶಬ್ದವೇ ಸಮಸ್ಯೆಯನ್ನು ಪರಿಶೀಲಿಸದಂತೆ ನಿರ್ಬಂಧ ಒಡ್ಡುತ್ತದೆ. ಸ್ವಿಸ್‌ ಎಂಬ ಪದ ಕೇಳಿದೊಡನೆಯೆ ಸ್ವಿಸ್‌ ವ್ಯಕ್ತಿ ಪುಳಕಗೊಳ್ಳುತ್ತಾನೆ. ಅಂತೆಯೇ ಕ್ರಿಸ್ತ ಎಂಬ ಪದ ಕೇಳಿದ ಕೂಡಲೆ ಕ್ರಿಶ್ಚಿಯನ್‌ ರೋಮಾಂಚಿತನಾಗುತ್ತಾನೆ. ಇಂಗ್ಲೆಂಡ್‌ ಎಂಬ ಪದ ಕೇಳಿದಾಗ ಇಂಗ್ಲಿಷನಿಗೆ ಖುಷಿಯಾಗುತ್ತದೆ. ನಾವು ಶಬ್ದಗಳಿಗೆ, ಸಂಕೇತಗಳಿಗೆ ಮತ್ತು ವಿಚಾರಗಳಿಗೆ ಗುಲಾಮರು.

ಯಾವುದೇ ಅನುಭವವನ್ನು, ಮನಸ್ಸಿನ ಯಾವುದೇ ಸ್ಥಿತಿಯನ್ನು ಏನಿದೆಯೋ ವಸ್ತು ಸ್ಥಿತಿಯನ್ನು, ಯಥಾರ್ಥವನ್ನು ಗ್ರಹಿಸಲು ಪದಗಳಿಗೆ ದಾಸರಾಗಬಾರದು. ನಾಮಕರಣ, ಶಬ್ದ ಹಲಬಗೆಯ ನೆನಪುಗಳನ್ನು ಬಡಿದೆಬ್ಬಿಸುತ್ತದೆ. ಈ ನೆನಪುಗಳು ವಸ್ತುಸ್ಥಿತಿ, ನಿಯಂತ್ರಣ, ರೂಪವನ್ನು ಆಕ್ರಮಿಸಿಕೊಂಡು ವಸ್ತುಸ್ಥಿತಿಗೆ ಏನಿದೆಯೋ ಅದಕ್ಕೆ ಮಾರ್ಗದರ್ಶನ ಮಾಡುತ್ತವೆ.

ಪ್ರತಿಯೊಂದು ಶಬ್ದ, ಯೋಚನೆ ಮನಸ್ಸನ್ನು ರೂಪಿಸುತ್ತದೆ. ಯೋಚನೆಯನ್ನು ಅರಿಯದೆ ಮನಸ್ಸು ಶಬ್ದಗಳಿಗೆ ದಾಸನಾಗುತ್ತದೆ. ಹೀಗಾದಾಗ ದುಃಖ ಹೊಮ್ಮುತ್ತದೆ.

ಧ್ಯಾನ ಅರಳಬೇಕಾದರೆ ಎಲ್ಲ ಬಗೆಯ ಬಿಂಬ, ಶಬ್ದ, ಸಂಕೇತ ಕೊನೆಗೊಳ್ಳಬೇಕು. ಆದರೆ ಶಬ್ದದ ಅಭ್ಯಾಸ, ಶಬ್ದ ಭಾವಕೋಶ, ಹುದುಗಿರುವ ಅರ್ಥಗಳು ಶಬ್ದದಿಂದ ಬಿಡುಗಡೆ ಹೊಂದುವುದನ್ನು ತಡೆಯುತ್ತವೆ. ಈ ಬಿಡುಗಡೆಯಿಲ್ಲದಿದ್ದರೆ ನೀವು ಶಬ್ದಗಳಿಗೆ, ತೀರ್ಮಾನಗಳಿಗೆ ವಿಚಾರಗಳಿಗೆ ದಾಸರಾಗುತ್ತೀರಿ. ಶಬ್ದವು ಮಧ್ಯಪ್ರವೇಶಿಸದೆ ನೀವು ಆಲಿಸಲು ಸಾಧ್ಯವೆ? ನಾನು ನಿಮ್ಮನ್ನು ಪ್ರಿತಿಸುತ್ತೇನೆ ಎಂದು ನೀವು ನನಗೆ ಹೇಳುತ್ತಿರಿ. ಆಗ ಏನಾಗುತ್ತದೆ? ಶಬ್ದಗಳು ಯಾವ ಅರ್ಥವನ್ನೂ ಹೊರಹೊಮ್ಮಿಸುವುದಿಲ್ಲ. ಸಂಬಂಧದ ಭಾವವನ್ನು ಯೋಚನೆಯೇ ಶಬ್ದವಾಗಿ ಮಧ್ಯಪ್ರವೇಶಿಸುತ್ತದೆ. ಮುಕ್ತವಾಗಿ ಆಲಿಸುತ್ತದೆ ಮತ್ತು ನಾನು ನಿನ್ನನ್ನು ಪ್ರಿತಿಸುತ್ತೇನೆ ಎಂದಾಗ ಯಾವುದೇ ಪೂರ್ವಾಗ್ರಹ ಹೊಂದಿರುವುದಿಲ್ಲ ಎಂಬ ಎಚ್ಚರವನ್ನೂ ಮನಸ್ಸು ಹೊಂದಿರುತ್ತದೆ.

ಪದಗಳು ಸಂವಹನ ಸಾಧನಗಳು. ಆದರೆ ಕೆಲವು ನಿರ್ದಿಷ್ಟ ಪದಗಳು ನಮ್ಮಲ್ಲಿ ನರ ಸಂಬಂಧಿ ಅಥವಾ ಮಾನಸಿಕ ಸ್ಪಂದನವನ್ನುಂಟು ಮಾಡಿದಾಗ ಸಂವಹನ ನಡೆಸುವುದು ಕಷ್ಟವಾಗುತ್ತದೆ. ಅದಕ್ಕಾಗಿಯೇ ಪದಗಳಿಂದ ಆಚೆಗೆ ಜಿಗಿಯಬೇಕು ಎಂದು ನಾನು ಹೇಳುವುದು.

🔹🔹🔹🔹🔹🔹🔹🔹🔹🔹🔹

ನಿಜ ಮರ್ಮ

🌺
*ನಿಜ ಮರ್ಮ
ನಾವೆಲ್ಲರೂ ಒಂದು ರೀತಿಯಲ್ಲಿ ಮಣ್ಣಿನ ಗೊಂಬೆಗಳೇ. ಮಾನವನ ಶರೀರ ಪಂಚಮಹಾಭೂತಗಳಿಂದ ನಿರ್ಮಿತವಾದದ್ದು ಎಂಬುದಾಗಿ ನಮ್ಮ ಶಾಸ್ತ್ರ ಹೇಳುತ್ತದೆ. ಈ ಮಣ್ಣಿನಲ್ಲೆ ಹುಟ್ಟಿ, ಈ ಮಣ್ಣಿನಲ್ಲೆ ಹೊರಳಾಡಿ, ಈ ಮಣ್ಣಿನಲ್ಲೆ ಓಡಾಡಿ ಒಂದು ದಿನ ಈ ಮಣ್ಣಿನಲ್ಲೆ ಮಣ್ಣಾಗುವ ಮನುಷ್ಯ ಮಣ್ಣಿನ ಗೊಂಬೆಯಲ್ಲವೆ? ಮಣ್ಣಿನಿಂದಲೇ ಜನನ, ಮಣ್ಣಿನಲ್ಲೆ ಮರಣ. ಮಾತ್ರವಲ್ಲ, ಮನುಷ್ಯನ ಬದುಕಿಗೂ ಆಧಾರ ಈ ಮಣ್ಣೇ. ಈ ಮಣ್ಣಿಲ್ಲದಿದ್ದರೆ ಮನುಷ್ಯನ ಜೀವನಕ್ಕೆ ಆಧಾರವಾದ ಆಹಾರ ಉತ್ಪಾದನೆ ಸಾಧ್ಯವೆ?
ಒಬ್ಬ ಬೆಳೆಗಾರ ಎದ್ದು ಒಂದು ಅಂಗಡಿಗೆ ಹೋದ. ಅಂಗಡಿ ಮಾಲೀಕ ಅಂಗಡಿಯ ಬಾಗಿಲು ಆಗತಾನೆ ತೆರೆದು ದೇವರಿಗೆ ಕೈಮುಗಿದು ಕೂತಿದ್ದ ಮಾತ್ರ. ಬಂದವ ಅಂಗಡಿಯವನ ಹತ್ತಿರ ಒಂದು ರೂಪಾಯಿ ಕೊಟ್ಟು ಅಂಗಡಿಯಲ್ಲಿದ್ದ ಎಲ್ಲ ಸಾಮಾನುಗಳನ್ನು ಕೊಡು ಎಂದು ಕೇಳಿದ. ಆದರೆ ಆ ಅಂಗಡಿಯಲ್ಲಿ ಮಾರಾಟಕ್ಕಿದ್ದ ಯಾವ ವಸ್ತುವೂ ಒಂದು ರೂಪಾಯಿಗೆ ಸಿಗುವುದಲ್ಲ. ಅಂಗಡಿ ಮಾಲೀಕ ತುಂಬಾ ಯೋಚನೆಮಾಡಿ ಒಂದು ಮುಷ್ಟಿ ಮಣ್ಣನ್ನು ಆ ಗ್ರಾಹಕನಿಗೆ ಕೊಟ್ಟು ಹೇಳಿದ: ನೋಡು, ನೀನು ಬಯಸಿದಂತೆ ಈ ಒಂದು ಹಿಡಿ ಮಣ್ಣಲ್ಲಿ ಎಲ್ಲವೂ ಇದೆ. ಯಾಕೆಂದರೆ ಈ ಅಂಗಡಿಯಲ್ಲಿರುವ ಎಲ್ಲ ಸಾಮಾನುಗಳೂ ಕೂಡ ಮಣ್ಣಿನಿಂದಲೇ ಸೃಷ್ಟಿಯಾದದ್ದು. ನಿನ್ನ ಒಂದು ರೂಪಾಯಿಗೆ ಮಣ್ಣನ್ನು ತೆಗೆದುಕೊಂಡು ಹೋಗಿ ನಿನಗೆ ಬೇಕಾದುದನ್ನು ಪಡೆದುಕೋ. ಆಗ ಗ್ರಾಹಕನಿಗೆ ಮಣ್ಣಿನ ಮಹತ್ತ್ವ ಅರ್ಥವಾಯಿತು.


ಮಣ್ಣಿನಿಂದ ಹುಟ್ಟಿದ ನಾವೆಲ್ಲರೂ ನಿಜವಾದ ಮಣ್ಣಿನ ಗೊಂಬೆಗಳೇ. ಆದರೆ ಮಣ್ಣಿನ ಗೊಂಬೆಗೆ ಜೀವತುಂಬುವು ದೆಂದರೇನು? ಜಗತ್ತಿನಲ್ಲಿ ನಡೆದಾಡುವ ವ್ಯಕ್ತಿಗಳನ್ನು ನೋಡಿದರೆ ಎಲ್ಲರೂ ಮಣ್ಣಿನ ಗೊಂಬೆಗಳಂತೆ ಕಂಡುಬರುತ್ತಾರೆ. ಯಾರಲ್ಲಿಯೂ ಜೀವಂತಿಕೆಯಿಲ್ಲ, ಲವಲವಿಕೆ ಇಲ್ಲ. ಹೆಚ್ಚಿನವರಿಗೆ ಜೀವನದ ಉದ್ದೇಶವೇ ಗೊತ್ತಿಲ್ಲ. ಜೀವನದ ದಾರಿಯೂ ಗೊತ್ತಿಲ್ಲ. ಪ್ರತಿಯೊಬ್ಬನೂ ಹೊಟ್ಟೆಪಾಡಿಗಾಗಿ ಪಡಬಾರದ ಕಷ್ಟವನ್ನು ಪಡುತ್ತಾನೆ. ಜೀವನ ಹೋರಾಟದ ಜಂಜಾಟದಲ್ಲಿ ಆತ ಸ್ಪಂದನಶಕ್ತಿಯನ್ನೆ ಕಳೆದುಕೊಂಡಿದ್ದಾನೆ. ಇಂದಿನ ಮನುಷ್ಯ ಒಬ್ಬ ವ್ಯಕ್ತಿಯಾಗಿ ಬದುಕುತ್ತಾನೆಯೇ ವಿನಾ ಸಮಷ್ಟಿಯಾಗಿ ಬದುಕುವ ಬಗ್ಗೆ ಯೋಚಿಸುವುದೇ ಇಲ್ಲ. ಹೀಗೆ ಸಮಾಜದ ಸಮಸ್ಯೆಯ ಬಗ್ಗೆ, ದೇಶದ ತೊಂದರೆಯ ಬಗ್ಗೆ ಆತ ನಿರ್ಲಿಪ್ತನಾಗುತ್ತಿದ್ದಾನೆ; ಸಮಾಜ, ದೇಶದ ಬಗ್ಗೆ ಮಣ್ಣಿನ ಗೊಂಬೆಯಂತೆ ವರ್ತಿಸುತ್ತಾನೆ.
ಇಂತಹ ಮಣ್ಣಿನ ಗೊಂಬೆಯಲ್ಲಿ ಜೀವತುಂಬುವುದೆಂದರೆ ನಮ್ಮ ನಮ್ಮ ಸ್ವಭಾವಕ್ಕನುಗುಣವಾಗಿ ನಮ್ಮ ಜೀವನದ ಉದ್ದೇಶವನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಬಾಳುವುದು. ಒಂದು ಧ್ಯೇಯಕ್ಕಾಗಿ, ಉದ್ದೇಶಕ್ಕಾಗಿ ಬದುಕಿದರೆ ನಮ್ಮ ಬಾಳು ಸಾರ್ಥಕ ಆಗುತ್ತದೆ. ನಮ್ಮ ಸಮಾಜ, ನಮ್ಮ ಪರಂಪರೆಯನ್ನು ತಿಳಿದುಕೊಂಡು ಅದರ ಉಳಿವು ಮತ್ತು ಬೆಳವಣಿಗೆಗೆ ಕಟಿಬದ್ಧರಾಗುವುದೇ ನಮ್ಮಲ್ಲಿ ಜೀವತುಂಬಿಸುವ ಕೆಲಸ. ಅಂದು ಶಾಲಿವಾಹನ ಮಾಡಿದಂತೆ ಇಂದು ಕೂಡ ಈ ದೇಶದ, ಧರ್ಮದ ಬಗ್ಗೆ ಅರಿವು ಉಂಟುಮಾಡಿ, ನಮ್ಮ ಸಂಸ್ಕೃತಿ, ಸಮಾಜದ ಬಗ್ಗೆ ಅಭಿಮಾನ ಉಂಟುಮಾಡುವ ಕೆಲಸ ಆಗಬೇಕಿದೆ. ಮನುಷ್ಯನನ್ನು ಕ್ರಿಯಾಶೀಲನನ್ನಾಗಿ, ಸಮಾಜಮುಖಿಯನ್ನಾಗಿ ಮಾಡಿ ಆತನಲ್ಲಿ ಜೀವತುಂಬಿಸುವ ಕೆಲಸ ಆಗಬೇಕಿದೆ. ರಾತ್ರಿಯೆಲ್ಲ ಕುಡಿದು ತೂರಾಡುವ ಹೊಸವರ್ಷದ ಆಚರಣೆಗಿಂತ ಉಂಡು, ಉಟ್ಟು ಸಂಭ್ರಮಿಸುವ ಯುಗಾದಿ ಹಬ್ಬದ ಆಚರಣೆ ಮನುಷ್ಯನಲ್ಲಿ ನವೋಲ್ಲಾಸವನ್ನು ತಂದುಕೊಡುತ್ತದೆ.
★★
ಒಬ್ಬ ಹುಡುಗನಿದ್ದ. ಸಾಮಾನ್ಯ ಹುಡುಗ. ಅವನು ಒಂದು ವಿಷಯದಲ್ಲೂ ಪಾಸಾಗುತ್ತಿರಲಿಲ್ಲ. ಕ್ರೀಡೆಗೆ ನಿಂತರೆ ಅವನ ಕಳಪೆ ಪ್ರದರ್ಶನದಿಂದಲೇ ತಂಡ ಸೋತುಹೋಗುತ್ತಿತ್ತು. ತಂಡವಾಗಿ ಹೋದರೂ ಅವನು ಉತ್ತಮ ಎನಿಸಿಕೊಳ್ಳಲಿಲ್ಲ. ವೈಯಕ್ತಿಕವಾಗಿ ಕೂಡ ಅಷ್ಟಕ್ಕಷ್ಟೆ. ಇನ್ನು ಶಾಲೆಯಲ್ಲಂತೂ ಶಿಕ್ಷಕರೂ ಅವನನ್ನು ಅಷ್ಟಾಗಿ ಗಮನಿಸುತ್ತಿರಲಿಲ್ಲ. ಈ ಹುಡುಗನ ಬುದ್ಧಿಯೇ ಇಷ್ಟು. ಇವನನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದರು. ಸ್ನೇಹಿತರೂ ಅವನನ್ನು ಹತ್ತಿರ ಸೇರಿಸುತ್ತಿರಲಿಲ್ಲ. ಯಾರಾದರೂ ಅವನನ್ನು ಮಾತನಾಡಿಸಿಬಿಟ್ಟರೆ ಅವನಿಗೇ ಆಶ್ಚರ್ಯವಾಗಿ ಬಿಡುತ್ತಿತ್ತು. ತಾನು ಯಾವತ್ತಿದ್ದರೂ ಹೀಗೆಯೇ, ತಾನೊಬ್ಬ ಕೈಲಾಗದವ. ತನ್ನ ಯಾರೂ ಇಷ್ಟಪಡುವುದಿಲ್ಲ. ಇರಲಿ, ನಾನಿರುವುದೇ ಹೀಗೆ ಅಂದುಕೊಂಡು ಆತ ಕಾಲೇಜು ತಲುಪಿದ. ಅಲ್ಲಿಯೂ ಯಾವ ಹುಡುಗಿಯರೂ ಅವನನ್ನು ಇಷ್ಟಪಡಲಿಲ್ಲ. ಅವನೂ ಪ್ರಯತ್ನಿಸಲಿಲ್ಲ. ಅಲ್ಲಿಯೂ ಫೇಲ್ ಆಗುತ್ತಿದ್ದ. ಒಂದೇ ಒಂದು ಹುಡುಗಿಯ ಹತ್ತಿರವೂ ನಗುತ್ತಿರಲಿಲ್ಲ. ಯಾವಾಗಲೂ ತನ್ನ ಲೋಕದಲ್ಲಿ ತಾನಿದ್ದು ಬಿಡುತ್ತಿದ್ದ. ಯಾರನ್ನೂ ಇಂಪ್ರೆಸ್ ಮಾಡಲೂ ಹೋಗುತ್ತಿರಲಿಲ್ಲ. ತನ್ನ ಬಗ್ಗೆಯೂ ಬೇಸರಪಟ್ಟುಕೊಳ್ಳುತ್ತಿರಲಿಲ್ಲ. ನಾನಿರುವುದೇ ಹೀಗೆ ಎಂದು ಒಪ್ಪಿಕೊಂಡಿದ್ದು ಬಿಟ್ಟ.

ಆ ಹುಡುಗನ ಒಂದೇ ಒಂದು ಪ್ರತಿಭೆ ಏನೆಂದರೆ ಆತನಿಗೆ ತುಂಬ ಸುಂದರವಾಗಿ ಚಿತ್ರ ಬಿಡಿಸಲು ಬರುತ್ತಿತ್ತು. ಒಂದಿಷ್ಟು ಕಾರ್ಟೂನ್ ಬಿಡಿಸಿ ಶಾಲೆಯ ಮ್ಯಾಗಜಿನ್‌ಗೆ ಕೊಟ್ಟ. ದುರಾದೃಷ್ಟವೆಂದರೆ ಅಲ್ಲಿಯೂ ಕಾರ್ಟೂನ್‌ಗಳನ್ನು ನಿರಾಕರಿಸಲಾಯಿತು. ಆದರೆ ಈ ಬಾರಿ ಅವನು ಬಿಡಲಿಲ್ಲ. ತಾನು ಉಳಿದೆಲ್ಲಕ್ಕಿಂತ ಚೆನ್ನಾಗಿ ಚಿತ್ರ ಬಿಡಿಸಬಲ್ಲೆ ಎಂಬುದು ಗೊತ್ತಿತ್ತು. ವಾಲ್ಟ್ ಡಿಸ್ನಿ ಸ್ಟುಡಿಯೋಗೆ ಕಳಿಸಿದ. ಅವನಿಗೆ ಈ ಬಾರಿ ಬಹಳ ನಿರೀಕ್ಷೆಯಿತ್ತು. ಆದರೆ ಈ ಸಲವೂ ಅವರಿಂದ ತಿರಸ್ಕೃತನಾದ ! ಅಲ್ಲಿಗೆ ಅವನೊಬ್ಬ ಕೈಲಾಗದವ ಎಂಬುದು ಸ್ಪಷ್ಟವಾಯಿತು. ಹುಡುಗ ಈಗ ತೀರ್ಮಾನಿಸಿದ. ಆಯಿತು. ಇನ್ನೂ ಏನಾಗುವುದಿದೆ? ಸೋತಾಯಿತಲ್ಲ. ಇನ್ನು ಪ್ರಯತ್ನ ಮಾಡುತ್ತಲೇ ಇರುತ್ತೇನೆ. ಈ ಸಲ ನನ್ನ ಕಥೆಯನ್ನೇ ಹೇಳುತ್ತೇನೆ. ನನ್ನ ಸೋಲಿನ ಕಥೆ ಹೇಳುತ್ತೇನೆ ಅಂದುಕೊಂಡು ತನ್ನದೇ ಬಿಡಿಸಿ, ತನ್ನದೇ ತಳಮಳಗಳನ್ನು ಕಾಮಿಕ್‌ಸ್ ಮಾಡಿದ. ಜನರು ಆತನ ಸೋಲಿನ ಜತೆಗೆ ತಮ್ಮನ್ನು ಹೋಲಿಸಿ ನೋಡಿಕೊಳ್ಳತೊಡಗಿದರು. ನೋಡನೋಡುತ್ತಿದ್ದಂತೆ ಆತ ಜನಪ್ರಿಯತೆ ಗಳಿಸತೊಡಗಿದ. ಆತನೇ ಅಮೆರಿಕದ ಪ್ರಸಿದ್ಧ ಕಾರ್ಟೂನಿಸ್‌ಟ್ ಚಾರ್ಲಸ್ ಸ್ಕಲ್‌ಸ್. ಅವನ ಪೀನಟ್ ಪುಸ್ತಕವನ್ನು ನಾವು ನೀವೆಲ್ಲ ನೋಡಿರುತ್ತೇವೆ.

ಜೀವನ ಎಲ್ಲರಿಗೂ ಒಂದೇ ಕಾಲಕ್ಕೆ ಒಳ್ಳೆಯ ಸಮಯವನ್ನು ಕೊಡುವುದಿಲ್ಲ. ಎಲ್ಲರಂತೆ ಯಶಸ್ಸು ಸಿಗಲಿಲ್ಲ ಎಂದರೆ ನಾವು ಯಾವಾಗಲೂ ಸೋಲುಣ್ಣುವವರು ಎಂದಲ್ಲ. ನಮ್ಮ ಸಮಯ ಬರುವವರೆಗೂ ಪ್ರಯತ್ನಿಸುತ್ತಲೇ ಇರಬೇಕು. ಪ್ರಯತ್ನಕ್ಕೆ ಕೊಡದೆ ಜೀವನ ಯಾರನ್ನೂ ಕಳುಹಿಸದು. ಸೋಲುಂಡರೂ ಪ್ರಯತ್ನಿಸುತ್ತಲೇ ಇರುವುದನ್ನು ಮರೆಯಬಾರದು. ಒಂದಲ್ಲ ಒಂದು ದಿನ ಫಲ ಸಿಕ್ಕೇ ಸಿಗುತ್ತದೆ. ಕಷ್ಟ, ಹತಾಶೆಗಳು ಎಲ್ಲರಿಗೂ ಕಟ್ಟಿಟ್ಟಿದ್ದೇ, ಆದರೆ ನಾವದನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಆಯ್ಕೆ ಸದಾ ನಮಗಿರುತ್ತದೆ. ಕಷ್ಟ ಬಂದಾಗ, ಸೋಲುತ್ತಿದ್ದಾಗ ಅತ್ತು, ಕರೆದು ರಂಪ ಮಾಡಿ, ಅಸಹಾಯಕರಾಗಿ ಕೂರದೆ ಸಹನೆಯಿಂದಿದ್ದು ನಾವು ಮಾಡುವುದನ್ನು ಮಾಡುತ್ತ ಹೋದರೆ ನಮ್ಮ ಪಾಲಿನದು ನಮಗೆ ಸಿಕ್ಕೇ ಸಿಗುತ್ತದೆ. ಭಗವಂತ ಕೊಟ್ಟ ಪ್ರತಿಭೆಯನ್ನು ಬೆಳೆಸಿಕೊಳ್ಳಲು ತೆಗೆದುಕೊಂಡಷ್ಟೂ ನಮ್ಮ ಯಶಸ್ಸಿನ ದಿನಗಳು ದೂರವಾಗುತ್ತ ಹೋಗುತ್ತವೆ.*

ಗೌರ ಗೋಪಾಲ ಪ್ರಭು
☘☘☘☘☘☘☘☘☘☘☘

ದುಷ್ಕರ್ಮ ಕತ್ತಲೆ ಲೋಕಕ್ಕೆ ದಾರಿ


ಶ್ರೀವಾಣಿ

ದುಷ್ಕರ್ಮ ಕತ್ತಲೆ ಲೋಕಕ್ಕೆ ದಾರಿ

ಸಿದ್ದೇಶ್ವರ ಶ್ರೀ ಸಂದೇಶ

ಈ ಪ್ರಪಂಚದಲ್ಲಿ ಎರಡು ಬಗೆಯ ಜನರು 1.ವಿದ್ಯೆಯ ಉಪಾಸಕರು 2.ಅವಿದ್ಯೆಯ ಉಪಾಸಕರು. ವಿದ್ಯೆ ಎಂದರೆ ಜ್ಞಾನ. ಅವಿದ್ಯೆ ಅಥವಾ ನ ವಿದ್ಯೆ ಎಂದರೆ ವಿದ್ಯೆ ಇಲ್ಲದವರು, ವಿದ್ಯೆ ಅಲ್ಲದ್ದು ಎಂದು ಅಥೈರ್‍ಸಬಹುದು. ಅದನ್ನೇ ಕರ್ಮ ಮಾರ್ಗ ಎಂದು ಕರೆಯುತ್ತಾರೆ. ಆದುದರಿಂದ ವಿದ್ಯೆಯ ಉಪಾಸಕರು ಎಂದರೆ ಜ್ಞಾನೋಪಾಸಕರು. ಅವಿದ್ಯೆಯ ಉಪಾಸಕರು ಎಂದರೆ ಕರ್ಮೋಪಾಸಕರು. ನಮ್ಮ ಬದುಕಿಗೆ ವಿದ್ಯೆ ಮತ್ತು ಕರ್ಮ ಎರಡೂ ಅಷ್ಟೇ ಅವಶ್ಯ. ಬಹಿರಂಗದಲ್ಲಿ ಇರುವುದು ಕರ್ಮ ಮಾರ್ಗವಾದರೆ ನಮ್ಮ ಅಂತರಂಗದಲ್ಲಿ ಇರುವುದು ಜ್ಞಾನಮಾರ್ಗ. ಎಣ್ಣೆ, ಬತ್ತಿ ಎರಡೂ ಒಂದಾಗಿ ದೀಪವು ಬೆಳಗಿದಂತೆ. ಜ್ಞಾನ ಮಾರ್ಗ ಮತ್ತು ಕರ್ಮ ಮಾರ್ಗ ಎರಡೂ ಒಂದಾಗಿ ನಮ್ಮ ಜೀವನ ಜ್ಯೋತಿಯು ಸುಂದರವಾಗಿ ಬೆಳಗಬೇಕು. ಗುರು-ಹಿರಿಯರ ಉಪದೇಶವನ್ನು ಕೇಳುವ, ಹೇಳುವ, ಓದುವ, ಬರೆಯುವ ಮೊದಲಾದ ಕರ್ಮಗಳನ್ನು ಮಾಡುವುದರಿಂದ ಜ್ಞಾನೋದಯವಾಗುತ್ತದೆ. ಎಂಥ ಕರ್ಮಗಳನ್ನು ಎಲ್ಲಿ, ಹೇಗೆ, ಯಾವಾಗ, ಏಕೆ ಮಾಡಬೇಕೆಂಬುವುದು ಜ್ಞಾನೋದಯವಾದ ನಂತರ ತಿಳಿಯುತ್ತದೆ. ಹೀಗೆ ಜ್ಞಾನಮಾರ್ಗ, ಕರ್ಮಮಾರ್ಗ ಎರಡೂ ಪರಸ್ಪರ ಅವಲಂಬಿತವಾಗಿವೆ. ಒಂದು ಸುಂದರವಾದ ಹೂವಿನ ಮರವನ್ನು ಬೆಳೆಸುವುದು ಕರ್ಮ ಮಾರ್ಗವಾದರೆ, ಆ ಹೂವಿನ ಗುಣಧರ್ಮಗಳನ್ನು ತಿಳಿದುಕೊಳ್ಳುವುದು ಜ್ಞಾನಮಾರ್ಗವಾಗಿದೆ. ಕರ್ಮ ಮಾರ್ಗ ಮತ್ತು ಜ್ಞಾನ ಮಾರ್ಗ ಎಂಬ ಎರಡು ಭದ್ರವಾದ ದಡಗಳ ನಡುವೆ ನಮ್ಮ ಜೀವನದಿಯು ನಿರಂತರ ಹರಿಯುತ್ತಿದ್ದರೆ ಮಾತ್ರ ದೇವಸಾಗರವನ್ನು ಸೇರಿ, ಅದು ಚಿರಶಾಂತಿ ಪಡೆಯುತ್ತದೆ.

ಜಪ-ತಪ, ಪೂಜೆ-ಭಜನೆ ಮೊದಲಾದ ಧಾರ್ಮಿಕ ವೃತಾಚರಣೆಗಳು ಕರ್ಮಮಾರ್ಗದಲ್ಲಿ ಬರುತ್ತವೆ. ಕರ್ಮಗಳಲ್ಲಿ ಎರಡು ಪ್ರಕಾರ 1. ಬಂಧನಕಾರಿ, 2.ಮುಕ್ತಿದಾಯಕ. ನಾವು ಮಾಡುವ ಕರ್ಮಗಳ ಹಿಂದಿನ ಉದ್ದೇಶ ಚೆನ್ನಾಗಿದ್ದರೆ, ಜ್ಞಾನಸಹಿತವಾಗಿದ್ದರೆ ಅಂಥ ಕರ್ಮಗಳು ಮುಕ್ತಿದಾಯಕ ಕರ್ಮಗಳೆನಿಸುತ್ತವೆ. ಕರ್ಮದ ಹಿಂದಿನ ಉದ್ದೇಶ ಚೆನ್ನಾಗಿರದೇ ಇದ್ದರೆ, ಜ್ಞಾನರಹಿತವಾಗಿದ್ದರೆ ಅದು ಬಂಧನಕಾರಿ ಕರ್ಮವಾಗುತ್ತದೆ. ಒಂದು ಬೆಂಕಿ ಕಡ್ಡಿಯನ್ನು ಕೊರೆಯುವುದು ಕರ್ಮ. ಅದರಿಂದ ದೀಪ ಬೆಳಗಿಸಿದರೆ ಅದು ಸತ್ಕರ್ಮ. ಅದೇ ಕಡ್ಡಿಯಿಂದ ಬೀಡಿ ಹೊತ್ತಿಸಿದರೆ ಅದು ದುಷ್ಕರ್ಮ.

ಮಾತನಾಡಲು ಬರುತ್ತದೆಂದು ಆಡಬಾರದ ಮಾತನ್ನು ಆಡಿದರೆ, ಆಗಬಾರದ್ದು ಆಗುತ್ತದೆ. ಅದಕ್ಕೆಂದೇ ಹಿರಿಯರು 'ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು' ಎಂದು ಎಚ್ಚರಿಸಿದರು. ಅನ್ಯರ ಜೀವನದ ಹಾಲಿನಲ್ಲಿ ನಾವು ಹುಳಿ ಹಿಂಡುವ ಕೆಲಸವನ್ನು ಎಂದೂ ಮಾಡಬಾರದು. ಮಾಡಿದರೆ ಅದು ದುಷ್ಕರ್ಮದ ಪರಮಾವಧಿಯಾಗುತ್ತದೆ. ಅದೇರೀತಿ ಕರ್ಮದ ಉದ್ದೇಶ ಚೆನ್ನಾಗಿರದಿದ್ದರೆ ಅದು ದುಷ್ಕರ್ಮವೇ ಆಗಿದೆ. ಒರ್ವ ಸಿರಿವಂತನು ವಕೀಲರನ್ನು ಮನೆಗೆ ಕರೆಯಿಸಿ ಹೊಟ್ಟೆತುಂಬ ಊಟ ಮಾಡಿಸಿದ. ವಕೀಲರಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. ವಕೀಲರ ಊಟವಾದ ನಂತರ ಸಿರಿವಂತ ಹೇಳಿದ- 'ನಮ್ಮ ಅಣ್ಣನ ಆಸ್ತಿಯೂ ನನಗೇ ಆಗಬೇಕೆಂದು ಒಂದು ಬಲಿಷ್ಠವಾದ ಕಾರಣವನ್ನು ಕೊಟ್ಟು ದಾವೆ ಹೂಡಿದ್ದೇನೆ. ಅದನ್ನಷ್ಟು ನೀವು ಏನಾದರೂ ಮಾಡಿ ಗೆಲ್ಲಿಸಿ ಕೊಡಿ!' ಸಿರಿವಂತನ ಈ ಮೋಸದ ಮಾತನ್ನು ಕೇಳಿದ ವಕೀಲರಿಗೆ ಏತಕ್ಕಾದರೂ ಈ ಸಿರಿವಂತನ ಮನೆಗೆ ಬಂದೆ ಎಂದು ಬೇಸರವೆನಿಸಿತು. ಆದರೆ ಕಾಲ ಮಿಂಚಿತ್ತು. ಊಟ ಮಾಡಿಸುವುದು ಒಳ್ಳೆಯ ಕಾರ್ಯವೇ, ಆದರೆ ಅದರ ಹಿಂದಿನ ಉದ್ದೇಶ ಒಳ್ಳೆಯದಾಗಿರಲಿಲ್ಲ. ಇದರಿಂದಾಗಿ ಅನ್ನದಾನದಂಥ ಪವಿತ್ರ ಕಾರ್ಯವೂ ಈ ಸಂದರ್ಭದಲ್ಲಿ ದುಷ್ಕರ್ಮವಾಗಿ ತೋರುತ್ತದೆ. ಇಂಥ ದುಷ್ಕರ್ಮಗಳನ್ನು ಮಾಡುವವರು ಚಿಂತೆ, ಭ್ರಾಂತಿ, ಭಯದಿಂದ ಕೂಡಿದ ಕತ್ತಲೆಯ ಲೋಕವನ್ನು ಪ್ರವೇಶಿಸುತ್ತಾರೆ.

ಆಧಾರ : ಈಶ ಪ್ರಸಾದ

🔸🔸🔸🔸🔸🔸🔸🔸🔸🔸🔸

Like your own company


Like your own company ….

ULTIMATELY I’ve Learned

~  I came alone and i’ve to go alone

~ People r with u only when they need u,

not otherwise

~ Extra care of anyone by you will ultimately

bring a blame for you, not appreciation

~ A simple LIE of ur close one can break you

more than anything

~ Its very hard to weep alone when there is no

shoulder to support U

ULTIMATELY I’ve Learned:

~ Help people but not up to the point beyond

ur dignity!

By R.jain
🔸🔸🔸🔸🔸🔸🔸🔸🔸🔸🔸

ಮಾನವೀಯತೆ ಆಸ್ತಿ ಅಂತಸ್ತಿನಲ್ಲಿಲ್ಲ. . ಮನಸ್ಸಿನಲ್ಲಿದೆ

ಒಂದು ಕುಟುಂಬವಿತ್ತು. ಅದರಲ್ಲಿ ಹದಿನೆಂಟಕ್ಕಿಂತ ಹೆಚ್ಚು ಮಂದಿ ಇದ್ದರು. ಊರಿನಿಂದ ಹೊರ ಬಂದ ಅವರು ರಸ್ತೆ ಬದಿಯಲ್ಲೇ ಇರುತ್ತಿದ್ದರು. ಅಲ್ಲೇ ಇದ್ದ ಪುಟ್ಟ ಟೆಂಟ್‌ಗಳಲ್ಲಿ ವಾಸವಿದ್ದರು. ದಿನ ಬರುತ್ತಿದ್ದಂತೆ ಒಂದು ಕುಟುಂಬ ಇದ್ದದ್ದು ಮೂರು ನಾಲ್ಕು ಕುಟುಂಬ ಆಗಿತ್ತು. ಅವರ ಮನೆ ಶ್ರೀಮಂತರೊಬ್ಬರು ಅವರ ಜೀವನ ಶೈಲಿ ದಿನವೂ ನೋಡುತ್ತಿದ್ದರು. ಆ ದಿನ ದುಡಿದರೆ, ಆ ದಿನ ತಿನ್ನಲು ಅನ್ನ ಸಿಗುತ್ತಿತ್ತು. ಒಂದು ದಿನ ಅವರಿಗೆ ಯಾವ ಕೆಲಸವೂ ಸಿಗದೆ ಖಾಲಿ ಕೈಲಿ ವಾಪಾಸಾದರು. ಮನೆ ಹೊರಗೆ ದಿನವೂ ಅಡುಗೆ ಮಾಡುತ್ತಿದ್ದವರು ಒಂದು ದಿನ ಸುಮ್ಮನಿದ್ದರೆ ಕಂಡೇ ಕಾಣುತ್ತದೆ.

ಅವರ ಸ್ಥಿತಿ ನೋಡಲಾರದೆ, ಇವರೇ ಅಡುಗೆ ಮಾಡಿಕೊಂಡು ಹೋಗಿ ಕೊಟ್ಟು ಬರಲು ನಿರ್ಧರಿಸಿದರು. ಅಂತೆಯೇ ಅಡುಗೆ ಮಾಡಿ ಹದಿನೆಂಟಕ್ಕಿಂತ ಹೆಚ್ಚು ಮಂದಿ ಮನೆಗೆ ನೀಡಿದರು. ಹತ್ತಿರದಿಂದ ಅವರನ್ನು ನೋಡಿದಾಗ ಅವರ ಕಣ್ಣಲ್ಲಿದ್ದ ಹೊಳಪು ಕಂಡಿತು. ಹಸಿವಿನಿಂದ ಅವರ ಮುಖ ಸುಸ್ತಾದಂತೆ ಕಾಣುತ್ತಿತ್ತೇ ಹೊರತು ಬೇರಾವುದಕ್ಕೂ ಕೊರತೆ ಇದ್ದಂತೆ ಕಾಣುತ್ತಿರಲಿಲ್ಲ. ಮನೆಯ ಹೆಣ್ಣು ಮಗಳೊಬ್ಬಳು ಎಲ್ಲರಿಗೂ ಊಟ ಬಡಿಸಿ, ಅರ್ಧ ಆಹಾರ ಮಿಕ್ಕಿಸಿ ಅದನ್ನು ಹೊರಗೆ ತೆಗೆದುಕೊಂಡು ಹೋದಳು. ಇದನ್ನು ಗಮನಿಸಿದ ಶ್ರೀಮಂತರು. ಇವರು ವಿಧಿ ವಿಧಾನಗಳನ್ನು ಮಾಡುತ್ತಾರೆ ಎನಿಸುತ್ತದೆ.

ಎಡೆಯ ಹೆಸರಿನಲ್ಲೋ, ಬೇರೆ ಯಾವುದೋ ರೀತಿ ನೀತಿ ಹೆಸರಿನಲ್ಲಿ ಊಟ ಚೆಲ್ಲಬಹುದು ಇವರ ಆಲೋಚನೆ. ಅಂತೆಯೇ ಆಕೆ ಬರುವಾಗ ಪಾತ್ರೆ ಖಾಲಿಯಾಗಿತ್ತು. ಶ್ರೀಮಂತರಿಗೆ ಕೋಪ ಬಂತು. ‘ ಕೊಟ್ಟದ್ದನ್ನು ಹೀಗೆ ವೇಸ್‌ಟ್ ಮಾಡುತ್ತೀರಲ್ಲಾ, ಅದೇ ಇದ್ದಿದ್ದರೆ ನಾಳೆಗೆ ಬರುತ್ತಿರಲಿಲ್ಲವಾ? ಅಥವಾ ಹೊಟ್ಟೆ ತುಂಬ ಎಲ್ಲರೂ ತಿನ್ನುತ್ತಿರಲಿಲ್ಲವಾ? ಎಂದರು. ಅದಕ್ಕೆ ಆಕೆ‘ ನಾನು ಆಹಾರ ಚೆಲ್ಲಲಿಲ್ಲ. ಅದರ ಬಗ್ಗೆ ಆಲೋಚಿಸುವುದು ಮಹಾಪಾಪ. ಅರ್ಧ ಆಹಾರವನ್ನು ಪಕ್ಕದ ಮನೆಯವರಿಗೆ ನೀಡಿ ಬಂದೆ. ಅವರೂ ನಮ್ಮಂತೆ ಏನೂ ತಿಂದಿರಲಿಲ್ಲ’ ಎಂದರು. ಮಾನವೀಯತೆ ಆಸ್ತಿ ಅಂತಸ್ತಿನಲ್ಲಿಲ್ಲ. ಮನಸ್ಸಿನಲ್ಲಿದೆ. ಆಹಾರದ ಬೆಲೆ ಹೆಚ್ಚಾಗಿ ಕಾಣುತ್ತದೆ ಅಲ್ಲವೆ?

Gour Gopal prabhu
➖➖➖➖➖➖➖➖➖➖➖

ಜ್ಞಾನ ಸಂಚಯಕ್ಕಿಂತ, ಬಳಕೆ ಮುಖ್ಯ

ಜ್ಞಾನ ಸಂಚಯಕ್ಕಿಂತ, ಬಳಕೆ ಮುಖ್ಯ

ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ

ಈ ಪ್ರಪಂಚದಲ್ಲಿ ಜನರಿಗೆ ಅನೇಕ ಕಡೆಗಳಿಂದ ಜ್ಞಾನದ ಕೊಡುಗೆ ದೊರೆಯುತ್ತದೆ. ಬಹಳ ಮಂದಿ ಸಲಹೆ, ಉಪದೇಶ, ಪ್ರವಚನಗಳನ್ನು ನೀಡುತ್ತಾರೆ. ಅನೇಕ ಗ್ರಂಥಗಳು ಮತ್ತು ಪತ್ರಿಕೆಗಳಲ್ಲಿ ಅನೇಕ ಅಮೂಲ್ಯ ತತ್ವ ಸಿದ್ಧಾಂತ ವಿಚಾರಗಳು ದೊರೆಯುತ್ತವೆ. ಇಂತಹ ಜ್ಞಾನದ ರಾಶಿಯನ್ನು ಸಂಗ್ರಹಿಸಿದರೆ ಸಾಲದು. ಅವುಗಳನ್ನು ಅರಗಿಸಿಕೊಂಡು ಸೂಕ್ತ ಕಾಲದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವಂತಹ ಚಾತುರ್ಯ ಕೂಡ ಇರುವುದು ಅತ್ಯವಶ್ಯಕ ಎಂಬುದನ್ನು ನಿರೂಪಿಸುವಂತಹ ಒಂದು ಪ್ರಸಂಗ ಇಲ್ಲಿದೆ.

ರಾಜಸ್ಥಾನದ ಜೈಪುರದಲ್ಲಿ ಭಾನು ಪ್ರತಾಪನೆಂಬ ಒಬ್ಬ ರಾಜನಿದ್ದನು. ಒಮ್ಮೆ ಆತನು ಅರಮನೆ ಬಳಿಯ ಉದ್ಯಾನದಲ್ಲಿ ಅಡ್ಡಾಡುತ್ತಿದ್ದನು. ಅಲ್ಲೊಂದು ಹಕ್ಕಿಯು ಬಳ್ಳಿಯ ಬಳಿಗೆ ಬಂದು ಸಿಹಿ-ಸಿಹಿ ದ್ರಾಕ್ಷಿಗಳನ್ನು ಆರಿಸಿ ತಿನ್ನುವುದನ್ನು, ಹುಳಿ ದ್ರಾಕ್ಷಿಗಳನ್ನು ಉದುರಿಸುವುದನ್ನೂ ಕಂಡರು. ಅಲ್ಲಿದ್ದ ತೋಟಗಾರನು

ಹಕ್ಕಿಯನ್ನು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಗ ಆತ ರಾಜನಿಗೇ ವರದಿ ನೀಡಿದ. ಆಗ ರಾಜನು ತಾನೇ ಆಸಕ್ತಿಯಿಂದ ಅದನ್ನು ಹಿಡಿದು ಪಾಠ ಕಲಿಸಲು ನಿಶ್ಚಯಿಸಿದ.

ಮರು ದಿನ ರಾಜನು ತೋಟದಲ್ಲಿ ಆ ಬಳ್ಳಿಯ ಮರೆಯಲ್ಲಿ ಅಡಗಿ ಕುಳಿತನು ಮತ್ತು ಆ ಹಕ್ಕಿ ದ್ರಾಕ್ಷಿಯ ಬಳಿಗೆ ಬಂದಾಗ ಅದರ ಕುತ್ತಿಗೆಯನ್ನು ಬಲವಾಗಿ ಹಿಡಿದುಕೊಂಡನು. ಅದರ ಕುತ್ತಿಗೆ ಹಿಚುಕುವ ಮೊದಲೇ ಆ ಹಕ್ಕಿಯು ಹೇಳಿತು- ''ಹೇ ರಾಜನ್‌, ನಾನು ನಿಮಗೆ ಜ್ಞಾನದ ನಾಲ್ಕು ಮುಖ್ಯ ವಿಷಯಗಳನ್ನು ಹೇಳುತ್ತೇನೆ. ನನ್ನನ್ನು ಕೊಲ್ಲಬೇಡಿ,'' ರಾಜ ನುಡಿದನು- ''ಆಗಲಿ ಬೇಗ ಹೇಳು,''. ಹಕ್ಕಿ ಹೇಳಿತು- ''ಮೊದಲನೆಯದಾಗಿ ಕೈಗೆ ಬಂದ ಶತ್ರುವನ್ನು ಎಂದೂ ಬಿಡಬೇಡ,'' ರಾಜ ಕೇಳಿದ- ''ಸರಿ, ಎರಡನೇ ಸಂಗತಿ?,'' ಹಕ್ಕಿ ನುಡಿಯಿತು- 'ಅಸಂಭವ ವಿಷಯವನ್ನು ನಂಬಬೇಡ,ಮೂರನೇ ಸಂಗತಿಯೆಂದರೆ ಕಳೆದ ವಿಷಯಗಳ ಬಗ್ಗೆ ಪಶ್ಚಾತ್ತಾಪ ಬೇಡ,'' ಆಗ ರಾಜ ಪ್ರಶ್ನಿಸಿದ- ''ಸರಿ ನಾಲ್ಕನೇ ವಿಷಯವೇನು?,'' ಆಗ ಹಕ್ಕಿ ಹೇಳಿತು- ''ಇದು ಬಹಳ ಗೂಢವೂ, ರಹಸ್ಯಪೂರ್ಣವೂ ಆಗಿದೆ. ನನಗೆ ಉಸಿರು ಗಟ್ಟಿದಂತಾಗಿದೆ. ನನ್ನ ಕುತ್ತಿಗೆ ಸ್ವಲ್ಪ ಸಡಿಲ ಮಾಡಿರಿ,''

ರಾಜನು ಹಕ್ಕಿಯ ಮಾತು ನಂಬಿ ಕೈ ಸಡಿಲ ಮಾಡಿದ. ಆಗ ಹಕ್ಕಿ 'ಬದುಕಿದೆಯಾ ಬಡ ಜೀವಾ' ಎಂದು ಹಾರಿ ಒಂದು ಕೊಂಬೆಯ ಮೇಲೆ ಕುಳಿತಿತು. ರಾಜನು ಅಚ್ಚರಿಯಿಂದ ನೋಡಿದ ಆಗ ಹಕ್ಕಿ ನುಡಿಯಿತು- ''ಹೇ ರಾಜನ್‌, ನಾಲ್ಕನೆ ಸಂಗತಿಯೇನೆಂದರೆ, ಜ್ಞಾನದ ಮಾತು ಕೇಳಿ, ಓದಿದರೆ ಏನೇನೋ ಫಲವಿಲ್ಲ. ಆಚರಣೆಗೆ ತರುವುದು ಮುಖ್ಯ. ನಾನು ನಿಮ್ಮ ಬಳಿ ಬಂದಾಗ ನನ್ನನ್ನು ಹಿಡಿದಿರಿ. ನನ್ನ ಸವಿಸವಿ ಮಾತುಗಳನ್ನು ನಂಬಿ ನನ್ನನ್ನು ಬಿಟ್ಟು ಬಿಟ್ಟಿರಿ. ಪಡೆದ ಜ್ಞಾನವನ್ನು ಬಳಸಿಕೊಳ್ಳಲಿಲ್ಲ,'' ಎಂದು ನುಡಿದ ಹಕ್ಕಿ ಹಾರಿ ಹೋಯಿತು. ನಾಚಿಕೊಂಡ ರಾಜನು ಸುಸ್ತಾಗಿ ಬಿಟ್ಟ.

ಇಡೀ ವಿಶ್ವಕ್ಕೇ ಇಲ್ಲೊಂದು ಅಮೂಲ್ಯ ಸಂದೇಶವಿದೆ-'ಜ್ಞಾನವನ್ನು ಸಂಗ್ರಹಿಸಲು ಪರಿಶ್ರಮ ವಹಿಸಿದರೆ ಸಾಲದು. ಸಂಗ್ರಹಿಸಿದ ಜ್ಞಾನವನ್ನು ಸೂಕ್ತ ಕಾಲದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವಂತಹ ಚಾತುರ್ಯವೂ ನಮ್ಮಲ್ಲಿರಬೇಕು. ನಮ್ಮ ಪಾಲಾಗಬೇಕು. ವಿಶ್ವವಿದ್ಯಾಲಯಗಳಲ್ಲಿ ಜ್ಞಾನ ವಿತರಣೆ ಮಾಡುವಾಗ, ಇಂತಹ ಬಳಕೆಯ ಪ್ರಾಯೋಗಿಕ ಅನುಭವ ಮುಖ್ಯವಾಗಿದೆ.


➖➖➖➖➖➖➖➖➖➖➖

ಪ್ರೇಮವೆಂದರೆ ಅಹಿಂಸೆಯಲ್ಲ


ಪ್ರೇಮವೆಂದರೆ ಅಹಿಂಸೆಯಲ್ಲ


ಓಶೋ

ಪ್ರೇಮಿಸುವುದೆಂದರೆ ಇನ್ನೊಬ್ಬರನ್ನು ಹಿಂಸೆ ಮಾಡದಿರುವುದಷ್ಟೇ ಅಲ್ಲ. ಪ್ರೇಮ ಮತ್ತು ಅಹಿಂಸೆ ಎರಡೂ ಒಂದೇ ಅಲ್ಲ. ಪ್ರೇಮ ಒಂದು ಜೀವಂತ ಘಟನೆ. ಅಹಿಂಸೆ ಒಂದು ವ್ಯಾಖ್ಯೆ. ಪ್ರೇಮ ಮತ್ತು ಅಹಿಂಸೆಯ ನಡುವೆ ಆಕಾಶ ಭೂಮಿಯ ಅಂತರವಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

ಪ್ರೇಮ ಸಕಾರಾತ್ಮಕವಾದುದು. ಪ್ರೇಮ ಒಂದು ರಚನಾತ್ಮಕ ಸಂಬಂಧ. ಅಹಿಂಸೆ ನಕಾರಾತ್ಮಕವಾದುದು. ಪ್ರೇಮಕ್ಕೊಂದು ಅರ್ಥವಿದೆ- ನಾನು ಬೇರೆಯವರು ಚೆನ್ನಾಗಿರುವುದನ್ನು ಬಯಸುತ್ತೇನೆ. ಅವರಿಗೆ ಮಂಗಳವಾಗುವುದನ್ನು ಬಯಸುತ್ತೇನೆ. ಅವರ ಕಲ್ಯಾಣವನ್ನು ಬಯಸುತ್ತೇನೆ. ಮತ್ತೊಬ್ಬರ ಬದುಕಿನಲ್ಲಿ ಆನಂದವನ್ನು ಬಯಸುತ್ತೇನೆ. ಮತ್ತೊಬ್ಬರ ಮಾರ್ಗದಲ್ಲಿ ಹೂವು ಹರಡುತ್ತೇನೆ- ಇದು ಪ್ರೇಮ.

ಅಹಿಂಸೆಯ ಅರ್ಥವೇ ಬೇರೆ. ಬೇರೆಯವರಿಗೆ ದುಃಖ ನೀಡುವುದಿಲ್ಲ ಎಂಬುದರೊಂದಿಗೆ ಅಹಿಂಸೆ ಪೂರ್ಣವಾಗುತ್ತದೆ. ಆದರೆ ಪ್ರೇಮ ಪೂರ್ಣವಾಗುವುದಿಲ್ಲ. ಪ್ರೇಮ ಎಲ್ಲಿಯವರೆಗೆ ಬೇರೆಯವರಿಗೆ ಸುಖ ನೀಡುವುದಿಲ್ಲವೋ ಅಲ್ಲಿಯವರೆಗೂ ಅದು ಸುಮ್ಮನೇ ಕೂರಲಾಗುವುದಿಲ್ಲ. ಪ್ರೇಮ ಬೇರೆಯವರ ರಸ್ತೆಯಲ್ಲಿ ಹೂವು ಹರಡುತ್ತದೆ. ಅಹಿಂಸೆ ಬೇರೆಯವರ ರಸ್ತೆಯಲ್ಲಿ ಮುಳ್ಳು ಹರಡದಂತಿರಲು ಪ್ರಯತ್ನಿಸುತ್ತದೆ. ಅದು ಅಷ್ಟೇ ಆಗಿರುತ್ತದೆ. ಬೇರೆಯವರ ರಸ್ತೆಯಲ್ಲಿ ಈಗಾಗಲೇ ಮುಳ್ಳುಗಳಿದ್ದರೆ ಅಹಿಂಸೆ ಅದನ್ನು ತೆಗೆಯಲು ಹೋಗುವುದಿಲ್ಲ. ಅಹಿಂಸೆಗೂ ಅದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ.

ಒಂದು ವೇಳೆ ಬೇರೆಯವರ ರಸ್ತೆ ಖಾಲಿ ಇದ್ದು ನಿಮ್ಮ ಕೈಯಲ್ಲಿ ಹೂವು ಇದ್ದರೆ ಅಹಿಂಸೆಗೂ ಅದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಅವರ ರಸ್ತೆಯಲ್ಲಿ ಹೂವು ಹರಡಬೇಕೇ ಬೇಡವೇ ಎಂಬುದನ್ನು ಅಹಿಂಸೆ ಹೇಳುವುದಿಲ್ಲ. ಅಹಿಂಸೆ ನಕಾರಾತ್ಮಕವಾದುದು. ನಾನು ದುಃಖವನ್ನು ನೀಡಬಾರದು ಎಂಬುದುರಲ್ಲೇ ಅದು ಮುಕ್ತಾಯವಾಗುತ್ತದೆ. ಇದರ ಆಚೆಗೆ ಅಹಿಂಸೆ ಯಾವುದೇ ಪ್ರೇರಣೆ ನೀಡುವುದಿಲ್ಲ. ಆದರೆ ಪ್ರೇಮದ ಪ್ರೇರಣೆ ಅನಂತವಾದುದು. ಬೇರೆಯವರ ಹಾದಿಯಲ್ಲಿ ಮುಳ್ಳು ಹರಡಬಾರದು ಎಂಬುದಂತೂ ಇದ್ದೇ ಇರುತ್ತದೆ. ಅದರೊಡನೆ ಅವರ ಹಾದಿಯಲ್ಲಿ ಈಗಾಗಲೇ ಮುಳ್ಳುಗಳಿದ್ದರೆ ಅದನ್ನು ತೆಗೆಯಲು ಪ್ರೇರಣೆ ನೀಡುತ್ತದೆ. ಅಲ್ಲಿಗೂ ನಿಲ್ಲದೇ ಸಾಧ್ಯವಾದರೆ ಅವರ ಹಾದಿಯಲ್ಲಿ ಹೂಗಳನ್ನು ಹರಡಲು ಪ್ರೇಮ ಪ್ರೇರಣೆ ನೀಡುತ್ತದೆ.

ಪ್ರೇಮದಲ್ಲಿ ಅಹಿಂಸೆ ಅಂತರ್ಗತವಾಗಿರುತ್ತದೆ. ಪ್ರೇಮದ ಹಂತ ಅಹಿಂಸೆಯಾಗಿರುತ್ತದೆ. ಬೇರೆಯವರ ರಸ್ತೆಯಲ್ಲಿ ಮುಳ್ಳು ಹಾಕಬಾರದು, ಬೇರೆಯವರಿಗೆ ದುಃಖ ನೀಡಬಾರದು. ಈ ಮಾತುಗಳು ಆರಂಭಿಕವಾಗಿರುತ್ತವೆ ಪ್ರೇಮದಲ್ಲಿ. ಅದರಲ್ಲಿ ಅಹಿಂಸೆ ಇದ್ದೇ ಇರುತ್ತದೆ. ಆದರೆ ಅಹಿಂಸೆಯ ವಿಸ್ತಾರ ತುಂಬಾ ಸಂಕುಚಿತವಾದುದು. ಅದರಲ್ಲಿ ಪೂರ್ಣ ಪ್ರೇಮದ ವಾಸ್ತವ್ಯ ಇರುವುದಿಲ್ಲ.

ಪ್ರೇಮ, ಬದುಕನ್ನು ಬದಲಾಯಿಸುವಲ್ಲಿ ಅತ್ಯಂತ ದೊಡ್ಡ ರಸವಿದ್ಯೆ. ಪ್ರೇಮ, ಜೀವನದ ಅತಿ ದೊಡ್ಡ ಪಥ. ಪ್ರೇಮ, ಜೀವನದ ಅತಿ ದೊಡ್ಡ ಉತ್ತೇಜನ. ಆದರೆ ಅಹಿಂಸೆ ಪಥವಲ್ಲ. ಅಹಿಂಸೆ ಉತ್ತೇಜನ ನೀಡುವಂತಹುದಲ್ಲ. ಅದಕ್ಕಾಗಿ ನಿಮ್ಮ ಬದುಕನ್ನು ಬದಲಿಸಿಕೊಳ್ಳಬೇಕಾದ ತುರ್ತು ಅವಶ್ಯಕತೆಯೇನೂ ಇರುವುದಿಲ್ಲ. ನೀವು ಒಂದು ನಕಾರಾತ್ಮಕ ಭಾವದೃಷ್ಟಿಯನ್ನು ಹೊಂದಿದರೆ ಸಾಕು. ನೀವು ಒಂದು ರಸ್ತೆಯಲ್ಲಿ ಹೋಗುತ್ತಿರುವಾಗ ಆ ರಸ್ತೆಯಲ್ಲಿ ಒಬ್ಬ ವ್ಯಕ್ತಿ ಬಿದ್ದಿದ್ದರೆ, ನೀವು ಒಂದು ವೇಳೆ ಪ್ರೇಮಿಯಾಗಿದ್ದರೆ ಆಗ ನೀವು ಆ ವ್ಯಕ್ತಿಯನ್ನು ಎತ್ತಿಕೊಂಡು ಸೂಕ್ತ ಶುಶ್ರೂಷೆಗೆ ವ್ಯವಸ್ಥೆ ಮಾಡಬೇಕು. ಆದರೆ ನೀವು ಕೇವಲ ಅಹಿಂಸಕರಾಗಿದ್ದರೆ ನಿಮಗೂ ಅದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಯಾವುದೇ ಪ್ರಯೋಜನವೂ ಇರುವುದಿಲ್ಲ.

➖➖➖➖➖➖➖➖➖➖➖

Here are 5 of Swami Vivekananda’s most inspiring quotes, that stand true even today.

Here are 5 of Swami Vivekananda’s most inspiring quotes, that stand true even today.

*“Who is helping you, don’t forget them. Who is loving you, don’t hate them. Who is believing you, don’t cheat them.”

*“Anything that makes you weak physically, intellectually and spiritually, reject as poison.”*

*“Relationships are more important than life, but it is important for those relationships to have life in them.”

*“Like me or hate me, both are in my favor. If you like me I am in your heart, if you hate me I am in your mind.”

*“Fill the brain with high thoughts, highest ideals, place them day and night before you, and out of that will come great work.”

ಮೊಬೈಲ್ ಸಿಗ್ನಲ್ ಸುತ್ತಮುತ್ತ

ಮೊಬೈಲ್ ಸಿಗ್ನಲ್ ಸುತ್ತಮುತ್ತ

ಟಿ.ಜಿ. ಶ್ರೀನಿಧಿ

ಮೊಬೈಲ್ ಫೋನ್ ಯಾರಿಗೆ ತಾನೆ ಗೊತ್ತಿಲ್ಲ? ಹಿರಿಯ-ಕಿರಿಯ, ಬಡವ-ಶ್ರೀಮಂತರೆಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಯಾವಾಗಲೂ ಬಳಸುವ ಸಾಧನ ಅದು. ಇಂತಹ ಸರ್ವಾಂತರ್ಯಾಮಿ ಮೊಬೈಲನ್ನು ಹಲವಾರು ಮಂದಿ ಸೆಲ್ ಫೋನ್ ಎಂದು ಕರೆಯುತ್ತಾರೆ. ಕೆಲವರಂತೂ ಈ ಹೆಸರನ್ನು ಇನ್ನೂ ಹೃಸ್ವಗೊಳಿಸಿ ‘ಸೆಲ್’ ಎಂದಷ್ಟೇ ಕರೆಯುವುದೂ ಉಂಟು.

ಈ ಅಭ್ಯಾಸಕ್ಕೆ ಕಾರಣ ಮೊಬೈಲ್ ಜಾಲಗಳ (ನೆಟ್​ವರ್ಕ್) ವಿನ್ಯಾಸ. ಊರಿನ ತುಂಬ ಹರಡಿರುವ ಮೊಬೈಲ್ ಟವರ್​ಗಳು ತಮ್ಮ ಸುತ್ತಲಿನ ಒಂದು ಸೀಮಿತ ಪ್ರದೇಶಕ್ಕೆ ಮೊಬೈಲ್ ಸೇವೆ ಒದಗಿಸುತ್ತವೆ. ಈ ಪ್ರದೇಶ ಬಹುತೇಕ ಆರು ಮೂಲೆಯ (ಹೆಕ್ಸಾಗನ್) ಆಕೃತಿಯಲ್ಲಿರುತ್ತದೆ; ಅಂದರೆ, ಮೊಬೈಲ್ ಜಾಲದ ಚಿತ್ರವನ್ನೇನಾದರೂ ಬರೆದರೆ ಅದು ಜೇನುಗೂಡಿನ ಒಂದು ಹಲ್ಲೆಯಂತೆ ಕಾಣುತ್ತದೆ! ಮೊಬೈಲ್ ಜಾಲವೆಂಬ ಈ ಜೇನುಗೂಡು ಟವರ್ ಸುತ್ತಲಿನ ‘ಕೋಶ’, ಅಂದರೆ ’ಸೆಲ್’ಗಳ ಜೋಡಣೆಯಿಂದ ರೂಪುಗೊಂಡಿರುತ್ತದಲ್ಲ, ಆ ಕೋಶಗಳೇ ಇದಕ್ಕೆ ‘ಸೆಲ್’ ಫೋನ್ ಎಂದು ಹೆಸರು ಬರಲು ಕಾರಣ.

ತಮ್ಮ ಸುತ್ತಲಿನ ‘ಸೆಲ್’ನಲ್ಲಿರುವ ಗ್ರಾಹಕರಿಗೆ ಕರೆಮಾಡುವ, ಕರೆ ಸ್ವೀಕರಿಸುವ, ಅಂತರ್ಜಾಲ ಬಳಸುವ ಸೌಲಭ್ಯಗಳನ್ನೆಲ್ಲ ಒದಗಿಸುವುದು ನಿರ್ದಿಷ್ಟ ಮೊಬೈಲ್ ಟವರ್​ನ ಜವಾಬ್ದಾರಿ. ನಾವು ಮಾತನಾಡುತ್ತಿರುವಾಗ ಒಂದು ‘ಸೆಲ್’ನಿಂದ ಇನ್ನೊಂದಕ್ಕೆ ಹೋದರೆ ನಮ್ಮ ಕರೆಯೂ ಮೊದಲ ಟವರ್​ನಿಂದ ಇನ್ನೊಂದಕ್ಕೆ ವರ್ಗಾವಣೆಯಾಗುತ್ತದೆ. ಒಂದಕ್ಕಿಂತ ಹೆಚ್ಚು ಸೆಲ್​ಗಳು ಸಮೀಪದಲ್ಲಿದ್ದರೆ ಎಲ್ಲಿ ಹೆಚ್ಚು ಶಕ್ತಿಶಾಲಿ ಮೊಬೈಲ್ ಸಂಕೇತ ಲಭ್ಯವಿದೆಯೋ ಅಲ್ಲಿಗೆ ನಮ್ಮ ಕರೆಯನ್ನು ವರ್ಗಾಯಿಸುವ ಸೌಲಭ್ಯ ಕೂಡ ಇರುತ್ತದೆ. ಮೊಬೈಲ್ ಪರದೆಯ ಬಲಭಾಗದ ಮೇಲ್ತುದಿಯಲ್ಲಿ ಕಾಣಿಸುವ ಸಣ್ಣ ಗೆರೆಗಳು ಮೊಬೈಲ್ ಸಂಕೇತದ ಶಕ್ತಿ ಎಷ್ಟಿದೆಯೆಂದು ತಿಳಿಸುತ್ತವೆ ಎನ್ನುವುದು ನಮಗೆ ಗೊತ್ತಿದೆಯಲ್ಲ, ಅಲ್ಲಿ ಹೆಚ್ಚು ಗೆರೆಗಳಿದ್ದರೆ ನಮ್ಮ ಮೊಬೈಲಿಗೆ ಸಿಗುತ್ತಿರುವ ಸಂಕೇತದ ಶಕ್ತಿ (ಸಿಗ್ನಲ್ ಸ್ಟ್ರೆಂಥ್) ತೃಪ್ತಿಕರವಾಗಿದೆ ಎಂದು ಅರ್ಥ. ಹಾಗಿದ್ದಾಗ ಮೊಬೈಲ್ ಕರೆ ಮಾಡುವುದು, ಇಂಟರ್​ನೆಟ್ ಬಳಸುವುದೆಲ್ಲ ಸರಾಗ. ಕಾಣಿಸುವ ಗೆರೆಗಳ ಸಂಖ್ಯೆ ಕಡಿಮೆಯಾದಷ್ಟೂ ಸಂಕೇತದ ಶಕ್ತಿ ಕಡಿಮೆಯಾಗಿದೆ ಎಂದು ತಿಳಿದುಕೊಳ್ಳಬಹುದು.

ಮೊಬೈಲ್ ಸಂಕೇತದ ಶಕ್ತಿಯನ್ನು ಡಿಬಿಎಂ ಎಂಬ ಏಕಮಾನದಲ್ಲಿ ಅಳೆಯಲಾಗುತ್ತದೆ. ಡಿಬಿಎಂ ಎನ್ನುವುದು ಡೆಸಿಬಲ್-ಮಿಲಿವ್ಯಾಟ್ಸ್ ಎಂಬ ಹೆಸರಿನ ಹ್ರಸ್ವರೂಪ. ಈ ಸಂಖ್ಯೆ ಸಾಮಾನ್ಯವಾಗಿ ಋಣಾತ್ಮಕವಾಗಿರುತ್ತದೆ (ನೆಗೆಟಿವ್). ಇದು ಸೊನ್ನೆಗೆ ಸಮೀಪವಿದ್ದಷ್ಟೂ (-60, -80, -90 ಹೀಗೆ) ಮೊಬೈಲ್ ಸಂಕೇತ ಸಾಕಷ್ಟು ಶಕ್ತಿಶಾಲಿಯಾಗಿದೆ ಎಂದರ್ಥ. -100 ಅಥವಾ ಅದಕ್ಕೂ ಕಡಿಮೆಯಾದಾಗ (-110, -120 ಹೀಗೆ) ಮೊಬೈಲಿನಲ್ಲಿ ಸಿಗ್ನಲ್ ಇಲ್ಲವೆಂದು ದೂರುವ ಪರಿಸ್ಥಿತಿ ಬರುತ್ತದೆ!

ಹಾಗೆಂದು ನಮ್ಮ ಮೊಬೈಲ್ ಬಳಕೆಯ ಅನುಭವದ ಮೇಲೆ ಪ್ರಭಾವ ಬೀರುವುದು ಇದೊಂದೇ ಅಂಶ ಎಂದೇನೂ ಹೇಳುವಂತಿಲ್ಲ. ಏಕೆಂದರೆ ಮೊಬೈಲ್ ಜಾಲಗಳ ಪ್ರಸಾರ ವ್ಯಾಪ್ತಿ (ಕವರೇಜ್) ಮತ್ತು ಧಾರಣಶಕ್ತಿ (ಕೆಪ್ಯಾಸಿಟಿ) ಕೂಡ ಮೊಬೈಲ್ ಸೇವೆಯ ಗುಣಮಟ್ಟವನ್ನು ಪ್ರಭಾವಿಸಬಲ್ಲವು. ಮೊಬೈಲ್ ಜಾಲದ ಸಂಕೇತಗಳು (ಸಿಗ್ನಲ್) ಯಾವೆಲ್ಲ ಪ್ರದೇಶಗಳನ್ನು ತಲುಪಬಲ್ಲವು ಎನ್ನುವುದನ್ನು ಅದರ ಪ್ರಸಾರ ವ್ಯಾಪ್ತಿ ಸೂಚಿಸುತ್ತದೆ. ಪಕ್ಕದೂರಿನಲ್ಲಿರುವ ಮೊಬೈಲ್ ಟವರಿನ ಕವರೇಜ್ ನಮ್ಮ ಹಳ್ಳಿಯವರೆಗೆ ಮಾತ್ರ ಇದೆ ಎನ್ನುವುದಾದರೆ ನಮ್ಮೂರ ಪಕ್ಕದ ಇನ್ನೊಂದು ಹಳ್ಳಿಯಲ್ಲಿ ಮೊಬೈಲ್ ಬಳಸುವುದು ಸಾಧ್ಯವಾಗುವುದಿಲ್ಲ. ಯಾವುದೇ ಮೊಬೈಲ್ ಜಾಲ ನಿರ್ದಿಷ್ಟ ಸಮಯದಲ್ಲಿ ಎಷ್ಟು ಕರೆಗಳನ್ನು, ಎಷ್ಟು ಪ್ರಮಾಣದ ದತ್ತಾಂಶ (ಡೇಟಾ) ವಿನಿಮಯ ನಿಭಾಯಿಸಬಲ್ಲದು ಎಂಬುದನ್ನು ಸೂಚಿಸುವುದು ಅದರ ಧಾರಣಶಕ್ತಿ. ಇದು ಆ ಸ್ಥಳದಲ್ಲಿ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿ ಹೇಗಿದೆ ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ.

ನಾವಿರುವ ಪ್ರದೇಶ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿಯ ಅಂಚಿನಲ್ಲೋ, ಹೊರಗೋ ಇದ್ದರೆ ಕರೆಮಾಡಲು –

ಅಂತರ್ಜಾಲ ಸಂಪರ್ಕ ಬಳಸಲು ಕಷ್ಟವಾಗುತ್ತದೆ. ನಮ್ಮಲ್ಲಿ ಕವರೇಜ್ ಚೆನ್ನಾಗಿದ್ದರೂ ಮೊಬೈಲ್ ಬಳಸುತ್ತಿರುವವರ ಸಂಖ್ಯೆ ವಿಪರೀತ ಜಾಸ್ತಿಯಿದ್ದರೆ (ಕೆಪಾಸಿಟಿ ಪೂರ್ಣವಾಗಿ ಬಳಕೆಯಾಗುತ್ತಿದ್ದರೆ) ಆಗಲೂ ಕರೆಮಾಡಲು – ಅಂತರ್ಜಾಲ ಸಂಪರ್ಕ ಬಳಸಲು ಪರದಾಡುವ ಪರಿಸ್ಥಿತಿ ಬರುವ ಸಾಧ್ಯತೆಯಿದೆ.

*ವಿಕಿಪೀಡಿಯಕ್ಕೆ ಹ್ಯಾಪಿ ಬರ್ತ್​ಡೇ*

ಯಾವ ವಿಷಯದ ಕುರಿತು ಗೂಗಲ್ ಸರ್ಚ್ ಮಾಡಲು ಹೊರಟರೂ ಅದರ ಫಲಿತಾಂಶಗಳಲ್ಲಿ ವಿಕಿಪೀಡಿಯ ತಾಣದ ಕೊಂಡಿಗಳು ಕಾಣಸಿಗುವುದು ಸಾಮಾನ್ಯ ಸಂಗತಿ. ಯಾರು ಬೇಕಾದರೂ ಮಾಹಿತಿ ಸೇರಿಸಬಹುದಾದ, ಇರುವ ಮಾಹಿತಿಯನ್ನು ಉತ್ತಮಪಡಿಸಬಹುದಾದ, ತಪ್ಪುಗಳನ್ನು ತಿದ್ದಬಹುದಾದ ವಿಶಿಷ್ಟ ವಿಶ್ವಕೋಶವೇ ಈ ವಿಕಿಪೀಡಿಯ. ಕನ್ನಡ, ತುಳು ಸೇರಿ ಪ್ರಪಂಚದ ನೂರಾರು ಭಾಷೆಗಳಲ್ಲಿ ಲಭ್ಯವಿರುವುದು ಈ ವಿಶ್ವಕೋಶದ ಹೆಗ್ಗಳಿಕೆ. ಜಗತ್ತಿನ ಅತ್ಯಂತ ಜನಪ್ರಿಯ ಜಾಲತಾಣಗಳ ಪೈಕಿ ಇದಕ್ಕೂ ಸ್ಥಾನವಿದೆ. ವಿಕಿಮೀಡಿಯ ಫೌಂಡೇಶನ್ ಆಶ್ರಯದಲ್ಲಿ ನಡೆಯುವ ಈ ತಾಣವನ್ನು ರೂಪಿಸಿದ ಕೀರ್ತಿ ಜಿಮ್ಮಿ ವೇಲ್ಸ್ ಹಾಗೂ ಲ್ಯಾರಿ ಸ್ಯಾಂಗರ್ ಅವರದ್ದು. ಅವರು ಈ ತಾಣ ರೂಪಿಸಿ ಇದೇ ಜನವರಿ 15ಕ್ಕೆ ಹದಿನೇಳು ವರ್ಷಗಳು ಪೂರ್ತಿಯಾಗುತ್ತವೆ. ನಿಮ್ಮ ಆಸಕ್ತಿಯ ವಿಷಯದ ಕುರಿತು ನಿಮ್ಮದೇ ಭಾಷೆಯ ವಿಕಿಪೀಡಿಯಕ್ಕೆ ಮಾಹಿತಿ ಸೇರಿಸುವ ಮೂಲಕ ನೀವೂ ಅದಕ್ಕೆ ಹುಟ್ಟುಹಬ್ಬದ ಶುಭಾಶಯ ಕೋರಬಹುದು. ಮಾಹಿತಿ ಸೇರಿಸುವುದು ಹೇಗೆಂದು ತಿಳಿಯಲು tinyurl.com/wikihelpkn ತಾಣವನ್ನು ನೋಡಿ.

Vijayavani
➖➖➖➖➖➖➖➖➖➖➖

ಶ್ರದ್ಧೆ ಸ್ಪರ್ಧೆ

ಶ್ರದ್ಧೆ ಸ್ಪರ್ಧೆ

 ನಮ್ಮ ಬದುಕನ್ನು ಪ್ರಚೋದಿಸುವ
ಶಕ್ತಿಗಳಲ್ಲಿ ಮುಖ್ಯವಾದವುಗಳು
ಎರಡು: ಒಂದು ಶ್ರದ್ಧೆ, ಮತ್ತೊಂದು
ಸ್ಪರ್ಧೆ. ಇವುಗಳಲ್ಲಿ
ಮೊದಲನೆಯದು ಗುರುತಿಸಿದಲ್ಲದೆ
ಕಾಣದ ರೀತಿಯಲ್ಲಿ
ಕಾರ್ಯೋನ್ಮಖವಾಗುತ್ತದೆ;
ಎರಡನೆಯದು ಎಲ್ಲರಿಗೂ ಕಾಣುವಂತೆ
ವಿಜೃಂಭಿಸುತ್ತಾ
ಕ್ರಿಯಾಭಿಮುಖವಾಗುತ್ತದೆ.
ಶ್ರದ್ಧೆಯ ಹೆಜ್ಜೆ
ನಿಶ್ಯಬ್ದವಾದದ್ದು; ಸ್ಪರ್ಧೆಯ
ನಡಿಗೆ ಸಶಬ್ದವಾದದ್ದು.
ಸೂರ್ಯೋದಯ
ಚಂದ್ರೋದಯಗಳಷ್ಟೆ ಸದ್ದಿಲ್ಲದೆ
ಬೆಳಕಾಗುತ್ತದೆ ಶ್ರದ್ಧೆ; ಡೋಲು
ಬಜಾವಣೆ ಜಾಹೀರಾತುಗಳಿಲ್ಲದೆ
ಹೆಜ್ಜೆಯಿಡಲಾರದು ಸ್ಪರ್ಧೆ.
ಶ್ರದ್ಧೆ ಅರಳುವ ಹೂವಿನಂತೆ
ಮೌನವಾದದ್ದು; ಸ್ಪರ್ಧೆ
ಮೊರೆಯುವ ಗಾಳಿಯಂತೆ
ಧಾವಿಸತಕ್ಕದ್ದು, ಅದಕ್ಕೆ
ಮೌನವೆಂದರೆ ಭಯ; ಶಬ್ದವೆಂದರೆ
ಪ್ರಿಯ.
ಮುಗ್ಧವಾದದ್ದು ಶ್ರದ್ಧೆ;
ಕುಟಿಲವಾದದ್ದು ಸ್ಪರ್ಧೆ.
ಸ್ಪರ್ಧೆಗೆ ಸಂಖ್ಯೆಗಳ ಮೇಲೆ,
ಗಾತ್ರಗಳ ಮೇಲೆ ಗಮನ. ಶ್ರದ್ಧೆಗೆ
ಗುಣದ ಮೇಲೆ ಗಟ್ಟಿಯಾದದ್ದರ
ಮೇಲೆ ಗಮನ. ಶ್ರದ್ಧೆಗೆ
ನಿರಾಡಂಬರವೆ ಇಷ್ಟವಾದರೆ,
ಸ್ಪರ್ಧೆಗೆ ಆಡಂಬರ, ಅಟ್ಟಹಾಸಗಳೆ
ಇಷ್ಟ.
ಶ್ರದ್ಧೆಗೆ ಅಶಿವದ ಭೀತಿಯಿಲ್ಲ;
ಆದರೆ ಸ್ಪರ್ಧೆಗೆ ಸದಾ ಅಮಂಗಳದ
ಶಂಕೆ. ಶ್ರದ್ಧೆ ಯಾವುದರಲ್ಲೂ
ನಂಬಿಕೆಯನ್ನು
ಕಳೆದುಕೊಳ್ಳುವುದಿಲ್ಲ.
ಸ್ಪರ್ಧೆಗೆ ತಾನು
ಗೆಲ್ಲುವುದರಲ್ಲಿ ಹೊರತು
ಇನ್ನಾವುದರಲ್ಲೂ ಆಸಕ್ತಿ ಇಲ್ಲ.
ಅದರ ಜೊತೆಗೆ ಪ್ರತಿಯೊಂದೂ
ಪ್ರತಿಯೊಬ್ಬರೂ ತನಗೆ
ಪ್ರತಿಸ್ಪರ್ಧಿಯಾಗಿದ್ದಾರೆಂಬ
ಭ್ರಮೆಯೇ ಅದಕ್ಕೆ ಪ್ರಚೋದಕ.
ಎಲ್ಲರನ್ನೂ ಹಿಂದೆ ಹಾಕುವುದು
ಹೇಗೆ, ತಾನು ಮಾತ್ರ
ಮುಂದುವರಿಯುವುದು ಹೇಗೆ
ಎನ್ನುವುದೇ ಅದರ ಧ್ಯಾಸ. ಆದರೆ
ಶ್ರದ್ಧೆಯ ನಿಲುವೇ ಬೇರೆ. ಅದರ
ಪಾಲಿಗೆ ಜಗತ್ತೆಲ್ಲಾ ಒಂದು
ರಣರಂಗವೆಂಬ ಭ್ರಮೆಯಿಲ್ಲ;
ಜಗತ್ತೆಲ್ಲಾ ಸ್ನೇಹರಂಗವೆಂಬ
ವಿಶ್ವಾಸವಿದೆ. ಇತರರ
ಪ್ರತಿಸ್ಪರ್ಧೆಯಿಂದ ತನಗೇನೂ
ತೊಂದರೆಯಿಲ್ಲ ಎಂಬ
ಧೈರ್ಯವಿದೆ. ಎಲ್ಲರ ಜೊತೆಗೆ,
ಎಲ್ಲರೊಂದಿಗೆ
ಸಹಯಾತ್ರಿಯಾಗುವುದರಲ್ಲೇ
ಅದಕ್ಕೆ ಆಸಕ್ತಿ; ಯಾರನ್ನಾದರೂ
ಹಿಂದೆ ಹಾಕುವುದರ ಮೂಲಕವೇ ತಾನು
ಮುಂದುವರಿಯಬಲ್ಲೆನೆಂಬ
ಭಾವನೆಯೇ ಅದಕ್ಕೆ ಸಮ್ಮತವಿಲ್ಲ.
ಹಾಗೆಂದರೆ ಶ್ರದ್ಧೆ ಎಂಬುದು
ಜಡವೆಂದಾಗಲೀ,
ನಿರೋಧಪ್ರಿಯವೆಂದಾಗಲಿ,
ತಟಸ್ಥವೆಂದಾಗಲಿ ಅರ್ಥವಲ್ಲ.
ಅದಕ್ಕೆ ಗೆಲ್ಲಲೇಬೇಕೆಂಬ
ಹಠವಿಲ್ಲ. ಆದರೆ ನಿಲ್ಲಬಾರದೆಂಬ
ವಿವೇಕವಿದೆ. ಓಡುವುದೇ ಪ್ರಗತಿಯ
ಲಕ್ಷಣವೆಂಬ ತಪ್ಪು ತಿಳವಳಿಕೆ
ಇಲ್ಲ. ನಿಲ್ಲದೆ, ನಿಂತ ನೀರಾಗಿ
ಕೊಳೆಯದೆ, ನಿರಂತರವಾಗಿ,
ನಿರಾತಂಕವಾಗಿ ಪ್ರವಹಿಸುವುದೆ
ಪ್ರಗತಿಯ ಲಕ್ಷಣವೆಂಬ ಅರಿವಿದೆ.
ಸ್ವಾರ್ಥಮೂಲವಾದುದು ಸ್ಪರ್ಧೆ;
ಪರಾರ್ಥ ಪ್ರಿಯವಾದದ್ದು
ಶ್ರದ್ಧೆ. ಸಿಕ್ಕ ಅವಕಾಶದಲ್ಲಿ
ಹೇಗಾದರೂ ಮಾಡಿ ಬೇರೂರಿ
ಬೆಳೆದು ಆಕ್ರಮಿಸುವ ಸ್ವಭಾವದ್ದು
ಸ್ಪರ್ಧೆ; ತನ್ನ ಜತೆಗೆ
ಬೇರೆಯವರನ್ನೂ ಬೆಳೆಯಗೊಡುವ
ಔದಾರ್ಯದ್ದು ಶ್ರದ್ಧೆ. ಸ್ಪರ್ಧೆ
ತಾತ್ಕಾಲಿಕವಾದದ್ದನ್ನು
ಮುಖ್ಯವೆಂದು ಭಾವಿಸುತ್ತದೆ;
ಶ್ರದ್ಧೆಗೆ ಅನಂತಕಾಲದ
ಕಲ್ಪನೆಯಲ್ಲಿ ವಿಶ್ವಾಸವಿದೆ.
ಯಾವುದು ತಾತ್ಕಾಲಿಕ, ಯಾವುದು
ಚಿರಕಾಲಿಕ ಎಂಬ ಮೌಲ್ಯ ವಿವೇಚನೆ
ಇದೆ. ಶ್ರದ್ಧೆಗೆ ಮುಖ್ಯವಾದದ್ದು
ನಿಷ್ಠೆ; ಸ್ಪರ್ಧೆಗೆ
ಮುಖ್ಯವಾದದ್ದು ಪ್ರತಿಷ್ಠೆ.
ಇದ್ದುದನ್ನು ಕೆಡಹುವುದರಲ್ಲಿ
ಸ್ಪರ್ಧೆಗೆ ಆಸಕ್ತಿ;
ಬಿದ್ದುದನ್ನು
ನಿಲ್ಲಿಸುವುದರಲ್ಲಿ ಶ್ರದ್ಧೆಗೆ
ಆಸಕ್ತಿ. ಸದ್ಯಃ ಪ್ರಯೋಜನವೆ
ಸ್ಪರ್ಧೆಯ ಗುರಿ; ಅಂದಂದಿನದು
ಅಂದಂದೇ ಫಲ
ಕೊಡುವಂತಾಗಬೇಕೆಂಬುದು ಅದರ
ದೃಷ್ಟಿ. ಶ್ರದ್ಧೆಗೆ ಮಾಡುವ
ಕೆಲಸವನ್ನು ಸರಿಯಾಗಿ
ಮಾಡಬೇಕೆಂಬ ಕಡೆ ಗಮನವೇ ಹೊರತು,
ಅದು ತಕ್ಷಣದಲ್ಲಿ ಫಲವಾಗಿ
ದಕ್ಕಬೇಕೆಂಬ ಕಡೆಗೆ
ಆಸಕ್ತಿಯಿಲ್ಲ.
ಮಹಾತ್ವಾಕಾಂಕ್ಷಿಗಳ ಅಹಂಕಾರ
ವಿಲಾಸಗಳಲ್ಲಿ ಸ್ಪರ್ಧೆ
ವಿಜೃಂಭಿಸುತ್ತದೆ; ಸದ್ದಿರದ
ಸಮಸ್ತ ಸಾಧನೆಗಳಲ್ಲಿ ಶ್ರದ್ಧೆ
ಪ್ರತಿಬಿಂಬಿತವಾಗುತ್ತದೆ.
ಸ್ಪರ್ಧೆ ಮೇಲುನೋಟಕ್ಕೆ
ಗೆಲ್ಲುವಂತೆ ಅಥವಾ ಗೆದ್ದಂತೆ
ತೋರುತ್ತದೆ; ಶ್ರದ್ಧೆ
ಮೇಲುನೋಟಕ್ಕೆ ಸೋತಂತೆ ಅಥವಾ
ಸೋಲುವಂತೆ ತೋರುತ್ತದೆ. ಆದರೆ
ಕಡೆಗೂ ಗೆಲ್ಲುವುದು ಶ್ರದ್ಧೆ.
ಯಾಕೆಂದರೆ ಅದಕ್ಕೆ ಅಪಾರವಾದ
ಆತ್ಮವಿಶ್ವಾಸವಿದೆ. ಕಾಯುವ
ತಾಳ್ಮೆ ಇದೆ; ಶ್ರೇಯಸ್ಸಿನಲ್ಲಿ
ನಂಬಿಕೆ ಇದೆ.

Posted from WordPress for Android

➖➖➖➖➖➖➖➖➖➖➖

ರಾತ್ರಿ ಅಥವಾ ನಸುಕಿನಲ್ಲಿಯೇ ಹೃದಯಾಘಾತ ಸಂಭವಿಸಲು ಕಾರಣವೇನು ಗೊತ್ತಾ?

ರಾತ್ರಿ ಅಥವಾ ನಸುಕಿನಲ್ಲಿಯೇ ಹೃದಯಾಘಾತ ಸಂಭವಿಸಲು ಕಾರಣವೇನು ಗೊತ್ತಾ?

ನಾವು ಪೇಪರನಲ್ಲಿ ಮತ್ತು ನ್ಯೂಸ್ ಚಾನೆಲ್ ನಲ್ಲಿ ಎಷ್ಟೋ ಸಲ ಕೇಳ್ತೇವೆ ಚಿಕ್ಕ ವಯಸ್ಸಿನ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಅಷ್ಟೇ ಏಕೆ ನಮ್ಮ ಸುತ್ತಮುತ್ತಲೂ ಅನೇಕ ಸಂಗತಿಗಳನ್ನು ಕೇಳುತ್ತೇವೆ. ಜೊತೆಗೆ ಕೆಲವರಂತೂ ತಪ್ಪದೆ ಜಿಮ್ ಗೆ ಹೋಗುವವರು ಮರಣ ಸಹಿತ ಇದರಿಂದ ಆಗಿದನ್ನು ಕೇಳಿರಬಹುದು.ಹಾಗಾದರೆ ಇದರಿಂದ ಬಚಾವಾಗಲು ಬರೀ ಮೂರರಿಂದ ನಾಲ್ಕು ನಿಮಿಷ ಅಷ್ಟೇ ಸಾಕು.ಡಾಕ್ಟರಗಳ ಪ್ರಕಾರ ಯಾರು ನಸುಕಿನಲ್ಲಿ ಮತ್ತು ನಿದ್ರೆಯಿಂದ ಎದ್ದು ಮೂತ್ರವಿಸರ್ಜನೆಗೆ ಹೋಗುತ್ತಾರೆ ಅವರ ಸಲುವಾಗಿ ಅತೀ ಮುಖ್ಯವಾದ ಸೂಚನೆ ಇದೆ.ರಾತ್ರಿಯಲ್ಲಿ ನಿದ್ರೆಯಿಂದ ಮೂತ್ರ ವಿಸರ್ಜನೆ ಅಥವಾ ಯಾವುದೇ ಕಾರಣಕ್ಕೆ ಆಕಸ್ಮಿಕವಾಗಿ ಎದ್ದಾಗ ಆ ವೇಳೆಯಲ್ಲಿ ನಾವು 3 ರಿಂದ 4 ನಿಮಿಷ ಜಾಗ್ರತೆ ವಹಿಸಿದರೆ ಆಕಸ್ಮಿಕ ಮೃತ್ಯುವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಶಾರೀರಿಕ ದೃಷ್ಟಿಯಿಂದ ಸದೃಢವಾದ ವ್ಯಕ್ತಿಯೇ ರಾತ್ರಿ ಸಮಯದಲ್ಲಿ ಮರಣ ಹೊಂದಿದ್ದಾನೆ.ಇಂತಹ ವ್ಯಕ್ತಿಗಳ ಬಗ್ಗೆ ನಾವು ಎಷ್ಟೋ ಸಲ ಮಾತಾಡುತ್ತೇವೆ ಅಯ್ಯೋ ಈತನಿಗೆ ನಾನು ನಿನ್ನೆ ಮಾತಾಡಿಸಿದ್ದೇ ನಿನ್ನೆನೆ ಚೆನ್ನಾಗಿದ್ದ ಒಮ್ಮೆಲೇ ಏನಾಯ್ತು? ಇದು ಸಾಧ್ಯವೇ ಇಲ್ಲ. ಅಂತೆಲ್ಲ ಮಾತಾಡ್ತೇವೆ. ಇದಕ್ಕೆಲ್ಲ ಮುಖ್ಯ ಕಾರಣ ರಾತ್ರಿ ನಿದ್ರೆಯಿಂದ ಮೂತ್ರವಿಸರ್ಜನೆಗೆ ಲಗುಬಗೆಯಿಂದ ಎದ್ದು ಓಡುವದು.ಗಾಢ ನಿದ್ರೆಯಿಂದ ಒಮ್ಮೆಲೇ ಏಳುವದರಿಂದ ಮೆದುಳಿಗೆ ರಕ್ತ ಸಂಚಲನ ಸರಿಯಾಗಿ ಆಗುವುದಿಲ್ಲ. ಈಗ ಮೇಲೆ ಹೇಳಿದ ಪ್ರಕಾರ ಈ ಸಮಯದಲ್ಲಿ ನಾಲ್ಕು ನಿಮಿಷ ಬಹಳ ಪ್ರಾಮುಖ್ಯವಾದದು. ಗಾಢ ನಿದ್ರೆಯಿಂದ ತ್ವರಿತವಾಗಿ ಹಾಸಿಗೆಯಿಂದ ಏಳುವದರಿಂದ ಶರೀರದ ಇಸಿಜಿಯ ಪ್ಯಾಟರ್ನ್ ಒಮ್ಮೆಲೇ ಚೇಂಜ್ ಆಗುವದು. ಇದರಿಂದ ಮೆದುಳಿಗೆ ರಕ್ತ ಸಂಚಾರ ಒಮ್ಮೆಲೇ ಹರಿಯುವದಿಲ್ಲ. ಇದರಿಂದ ಹೃದಯಕ್ಕೆ ಆಘಾತವಾಗುವದು. ಆದ್ದರಿಂದ ಬಚಾವಾಗಲು ನಾಲ್ಕು ನಿಮಿಷದ ಒಳ್ಳೆಯ ಉಪಾಯ ಮತ್ತು ರೂಢಿ ಅನುಸರಿಸಿದರೆ ತುಂಬಾ ಒಳ್ಳೆಯದು.

1) *ನಿದ್ರೆಯಿಂದ ಎಚ್ಚರವಾದಾಗ ಹಾಗೆ ಒಂದು ನಿಮಿಷ ಹಾಸಿಗೆಯಲ್ಲಿಯೇ ಮಲಗಿರಿ* .

2) *ಮುಂದಿನ ಅರ್ಧ ನಿಮಿಷ ಅಥವಾ ಒಂದು ನಿಮಿಷ ಹಾಸಿಗೆಯಲ್ಲಿ ಕುಳಿತುಕೊಳ್ಳಿ* .

3) *ಆನಂತರ ಮುಂದಿನ ಎರಡು ನಿಮಿಷ ಪಲ್ಲಂಗದ ಮೇಲಿನಿಂದ ಕಾಲುಗಳನ್ನು ಕೆಳಗೆ ಬಿಟ್ಟು ಕುಳಿತುಕೊಳ್ಳಿಇಷ್ಟೂ* *ಸಮಯವನ್ನು ದಿನವೂ ರೂಢಿಸಿಕೊಂಡರೆ  ಆಕಸ್ಮಿಕ* *ಮೃತ್ಯುವಿನ ಸಂಖ್ಯೆ ಕಡಿಮೆ ಆಗುವದು*.
*ಇದನ್ನು ಆದಷ್ಟು ಶೇರ್ ಮಾಡಿದರೆ ಒಂದು ಒಳ್ಳೆಯ ಮೆಸೇಜ್ ಎಲ್ಲರಿಗೂ ಸಿಕ್ಕ ಹಾಗಾಗುತ್ತದೆ*......
▪▪▪▪▪▪▪▪▪▪▪

ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನು ಜನರ ಬಗ್ಗೆ ಯಾವಾಗಲೂ ಕಾಳಜಿ ವಹಿಸುತ್ತಿದ್ದ. ತನ್ನ ಜನರಿಗೆ ರಾಜ್ಯದ ಬಗ್ಗೆ, ನನ್ನ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ತಿಳಿದುಕೊಳ್ಳಬೇಕು ಎಂದೆನಿಸಿತು. ಅದಕ್ಕಾಗಿ ಊರಿನ ರಸ್ತೆ ಮಧ್ಯದಲ್ಲಿ ದೊಡ್ಡ ಕಲ್ಲೊಂದನ್ನು ಇರಿಸಿದ. ಅದನ್ನು ಯಾರಾದರೂ ತೆಗೆದು ಪಕ್ಕಕ್ಕಿಡುತ್ತಾರೋ ಅಥವಾ ಹಾಗೆ ಓಡಾಡುತ್ತಾರೋ ಎಂದು ಅವನು ನೋಡಬೇಕಿತ್ತು. ದಾರಿಯ ಮಧ್ಯೆ ಇಟ್ಟು ಪಕ್ಕದಲ್ಲೇ ಅವಿತು ಕುಳಿತ. ಪಂಡಿತರೊಬ್ಬರು ಬಂದರು. ಇವರು ಖಂಡಿತಾ ಕಲ್ಲನ್ನು ಸರಿಸಿ ಮುಂದೆ ಹೋಗುತ್ತಾರೆ ಎಂದುಕೊಂಡ ರಾಜ. ಆದರೆ ಅವರು ಕಲ್ಲನ್ನು ದಾಟುತ್ತಾ, ‘ಮೂರ್ಖ ರಾಜ ಸರಿಯಾಗಿ ರಾಜ್ಯವನ್ನು ನೋಡಿಕೊಳ್ಳಲು ಬರುವುದಿಲ್ಲ’ ಎಂದು ಬೈಯುತ್ತಾ ಹೋದ. ನಂತರ ಹೆಂಗಸೊಬ್ಬಳು ಮೊಸರು ಮಾರುತ್ತಾ ಬಂದಳು.


ತಲೆಯ ಮೇಲೆ ಗಡಿಗೆ ಇದ್ದ ಕಾರಣ ಅದನ್ನು ಇಳಿಸಿ ಕಲ್ಲು ಸರಿಸಿ ಹೋಗುವ ಕಷ್ಟ ತೆಗೆದುಕೊಳ್ಳಲಿಲ್ಲ. ರಾಜನಿಗೆ ನಿರಾಸೆಯಾಯಿತು. ಯಾರಿಗೂ ಬೇರೊಬ್ಬರ ಬಗ್ಗೆ ಇಲ್ಲ. ಎಲ್ಲ ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ ಎಂದು ಬೇಸರಿಸಿಕೊಂಡ. ಸ್ವಲ್ಪ ಹೊತ್ತಿನಲ್ಲೇ ಸೈನಿಕನೊಬ್ಬ ಬಂದ. ಆತ ಕಲ್ಲನ್ನು ನೋಡಿ ‘ ಇದ್ಯಾರು ರಸ್ತೆ ಬದಿ ಹೀಗೆ ಕಲ್ಲನ್ನು ಇಟ್ಟವರು, ಹೆಂಗಸರು ಮಕ್ಕಳು ಓಡಾಡುತ್ತಾರೆ ಎಂಬ ಪರಿಜ್ಞಾನವೇ ಇಲ್ಲ’ಎಂದು ಬೈಯುತ್ತಾ ಕಲ್ಲನ್ನು ಎತ್ತಿ ಪಕ್ಕಕ್ಕಿಡಲು ಪ್ರಯತ್ನಿಸಿದ. ಕಲ್ಲನ್ನು ಎತ್ತಿದಾಗ ಅವನಿಗೆ ಆಶ್ಚರ್ಯ. ಒಂದು ಚಿನ್ನದ ನಾಣ್ಯವಿರುವ ಚೀಲ, ಒಂದು ಚೀಟಿ ಇತ್ತು. ಚೀಟಿಯಲ್ಲಿ ‘ಕಲ್ಲನ್ನು ಎತ್ತಿ ಪಕ್ಕಕ್ಕಿಟ್ಟವರಿಗೆ ಈ ನಾಣ್ಯಗಳು’ ಎಂದು ಬರೆದಿತ್ತು.

*ದಾರಿಗೆ ಅಡ್ಡ ಬಂದ ಕಲ್ಲುಗಳು, ಜೀವನದಲ್ಲಿ ಅಡ್ಡ ಬಂದ ಸಮಸ್ಯೆಗಳು ಯಾವಾಗಲೂ ನಿಮ್ಮನ್ನು ಪರೀಕ್ಷಿಸುತ್ತವೆ. ಅದರಿಂದ ತಪ್ಪಿಸಿಕೊಳ್ಳುವುದು, ಓಡಿ ಹೋಗುವುದು ಸುಲಭ. ಆದರೆ ಹಾಗೆ ಮಾಡಿದರೆ, ಕಷ್ಟದ ನಂತರ ಸಿಗುವ ಸುಖದಿಂದ ವಂಚಿತರಾಗುತ್ತೀರಿ.*

▪▪▪▪▪▪▪▪▪▪▪
Never feel sad on losing anything in your life, because when a tree loses a leaf, a new leaf is ready to take its place.


➖➖➖➖➖➖➖➖➖➖➖
No one in this world is pure and perfect. If you avoid people for their mistakes, you will be alone in this world .So judge less and love more.

〰〰〰〰〰〰〰〰〰〰〰

ಆತ್ಮಜ್ಞಾನದಿಂದ ಅಮೃತತ್ವ

 ಶ್ರೀವಾಣಿ

ಆತ್ಮಜ್ಞಾನದಿಂದ ಅಮೃತತ್ವ


ಶ್ರೀ ಸಿದ್ಧೇಶ್ವರ ಸ್ವಾಮೀಜಿ

ನಾವು ತೊಡುವ ಬಟ್ಟೆ ಸ್ವಚ್ಛವಾಗಿದ್ದರೆ, ಸುಂದರವಾಗಿದ್ದರೆ ನಮ್ಮ ಜೀವನವೂ ಅಷ್ಟೇ ಸುಂದರವಾಗಿರುತ್ತದೆ, ಸ್ವಚ್ಛವಾಗಿರುತ್ತದೆ. ಬಟ್ಟೆ ಎಂದಮೇಲೆ ಹಾಸು-ಹೊಕ್ಕು ಎರಡೂ ಇರಲೇಬೇಕು. ವಿದ್ಯೆ, ಅವಿದ್ಯೆ ಅಥವಾ ಜ್ಞಾನ ಮತ್ತು ಕರ್ಮ ಇವೆರಡೂ ನಮ್ಮ ಬಾಳ-ಬಟ್ಟೆಯ ಹಾಸು-ಹೊಕ್ಕು. ಅವೆರಡರಲ್ಲಿ ಒಂದಿಲ್ಲದಿದ್ದರೂ ನಮ್ಮ ಬಾಳಬಟ್ಟೆಯು ಸಿದ್ಧವಾಗಲಾರದು. ವಿದ್ಯೆ ಎಂದರೆ ಜ್ಞಾನ ಮಾಡಿಕೊಳ್ಳುವುದು, ಅವಿದ್ಯೆ ಎಂದರೆ ಕರ್ಮ ಅಥವಾ ದುಡಿಯುವುದು ಎಂದರ್ಥ. ಲಕ್ಷಾಂತರ ವರುಷದ ಜೀವವಿಕಾಸದ ಕಥೆಯನ್ನು ನೋಡಿದರೂ ಜ್ಞಾನ ಮತ್ತು ಕರ್ಮ ಇವೆರಡೇ ಮಾನವನ ಎಲ್ಲ ಪ್ರಗತಿಗೆ ಕಾರಣವಾಗಿವೆ.

ವಿದ್ಯಾಂಚಾವಿದ್ಯಾಂಚ ಯಸ್ತದ್ವೇದೋಭಯಂ ಸಹ |

ಅವಿದ್ಯಯಾ ಮೃತ್ಯುಂ ತೀತ್ರ್ವಾ ವಿದ್ಯಯಾಮೃತತ್ವಮಶ್ನುತೇ ||

(ಈ.ಉ.11)

ಆತ್ಮವಿದ್ಯೆ ಹಾಗೂ ನಿಷ್ಕಾಮಕರ್ಮಗಳೆರಡೂ ಭಿನ್ನವಲ್ಲ. ಅವೆರಡನ್ನು ಕೂಡಿಯೇ ಅರಿಯಬೇಕು; ಅಳವಡಿಸಿಕೊಳ್ಳಬೇಕು. ಸಾಧಕನು ನಿಷ್ಕಾಮ ಕರ್ಮದಿಂದ ಮೃತ್ಯುವನ್ನು ದಾಟುತ್ತಾನೆ. ಆತ್ಮಜ್ಞಾನದಿಂದ ಅಮೃತತ್ವವನ್ನು ಹೊಂದುತ್ತಾನೆ.

ನಾವು ಮಾಡುವ ಕರ್ಮಗಳ ಉದ್ದೇಶ ಸರಿಯಾಗಿಲ್ಲದಿದ್ದರೆ ಆತ್ಮಜ್ಞಾನ ಅಥವಾ ಅತ್ಮಾನಂದವು ದೊರೆಯಲಾರದು. ಪರಮಸತ್ಯ ಪರಮಾತ್ಮನ ಅರಿವಿಲ್ಲದೆ ಮಾಡಿದ ಕರ್ಮವು ಬಂಧನಕ್ಕೆ ಕಾರಣವಾಗುತ್ತದೆ. ಬರೀ ಪ್ರಾಪಂಚಿಕ ಆಶೆ-ಆಕಾಂಕ್ಷೆಗಳ ಪೂರೈಸುವುದೇ ಕರ್ಮಗಳ ಉದ್ದೇಶವಲ್ಲ. ಅದಕ್ಕಿಂತಲೂ ಶ್ರೇಷ್ಠವಾದ ಉದ್ದೇಶವು ನಾವು ಮಾಡುವ ಕರ್ಮಕ್ಕೆ ಇದೆ. ಜೀವನದಲ್ಲಿ ಪರಮಶಾಂತಿ, ಪರಮಾನಂದವನ್ನು ಪಡೆಯುವುದೇ ನಾವು ಮಾಡುವ ಎಲ್ಲ ಕರ್ಮಗಳ ಪರಮೋದ್ದೇಶವಾಗಿದೆ.

ಓರ್ವ ಕಲಾವಿದನ ಕೈಯಲ್ಲಿ ಒಂದು ಕುಂಚ ಸಿಕ್ಕರೆ ಸಾಕು ಒಂದು ಸುಂದರವಾದ ಕಲಾಕುಸುಮವು ಅರಳಿಬಿಡುತ್ತದೆ. ಬೇರೆಯವರ ಕೈಯಲ್ಲಿ ಸಿಕ್ಕರೆ ಸುಂದರವಾದ ಕಲೆಯೂ ಕೆಟ್ಟು ಹೋಗುತ್ತದೆ. ನೂರು ವಸಂತಗಳ ನಮ್ಮ ಆಯುಷ್ಯವೇ ಚಿತ್ರ ಬರೆಯುವ ಪರದೆ. ಸುಂದರವಾದ ಕರ್ಮಗಳೆಂಬ ಕುಂಚನ್ನು ಹಿಡಿದು, ಭಾವದ ಬಣ್ಣನ್ನು ಬಳಸಿ, ಜ್ಞಾನದ ಬೆಳಕಿನಲ್ಲಿ ನಾವು ನಮ್ಮ ಜೀವನದ ಅಪ್ರತಿಮವಾದ ಚಿತ್ರವನ್ನು ಬರೆಯಬಹುದಾಗಿದೆ. ಹೀಗೆ ಸುಜ್ಞಾನ, ಸತ್ಕರ್ಮಗಳಿಂದ ನಾವು ಈ ಜಗತ್ತಿನಲ್ಲಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕು. ಪರಮಶಾಂತಿ, ಪರಮಾನಂದವನ್ನು ಅನುಭವಿಸಬೇಕು, ಇಲ್ಲದಿದ್ದರೆ ನಮ್ಮ ಜೀವನವು

ನಿರರ್ಥಕವಾದಂತೆಯೇ!

ಪ್ರಜಾಪ್ರೇಮಿಯಾದ ಮಹಾರಾಜ. ಅಂದು ಅವನ ಹುಟ್ಟುಹಬ್ಬ. ತನ್ನಿಮಿತ್ಯ ರಾಜನು ತನ್ನ ಪ್ರಜೆಗಳಿಗೆಲ್ಲ ಸಂತೋಷಕೂಟವನ್ನು ಏರ್ಪಡಿಸಿದ್ದ. ಇಷ್ಟೇ ಅಲ್ಲ ತನ್ನ ಹುಟ್ಟುಹಬ್ಬದ ದಿವಸ ಯಾರಾದರೂ ಅರಮನೆಗೆ ಬಂದು ತನ್ನನ್ನು ಭೇಟಿಯಾಗಬಹುದು ಎಂದು ಡಂಗುರ ಸಾರಿಸಿದ. ರಾಜನ ದರ್ಶನ ಹಾಗೂ ಸಂತೋಷಕೂಟ ಎರಡೂ ದೊರೆಯುತ್ತವೆ ಎಂದಮೇಲೆ ಕೇಳುವುದೇನಿದೆ? ಊರಿಗೆ ಊರೇ ಅರಮನೆಯತ್ತ ಮುಖ ಮಾಡಿತು. ರಾಜನ ದರ್ಶನಕ್ಕಾಗಿ ಅರಮನೆಗೆ ಬರುವವರಿಗೆಲ್ಲ ದಾರಿಯುದ್ದಕ್ಕೂ ಬಗೆ ಬಗೆಯಾದ ತಿಂಡಿ-ತಿನುಸುಗಳು, ಬಟ್ಟೆ-ಬರೆ, ಉಡಿಗೆ-ತೊಡಿಗೆಗಳನ್ನು, ಸಂಗೀತ-ನೃತ್ಯವನ್ನೂ ಉಚಿತವಾಗಿ ಕೊಡುವ ಏರ್ಪಾಡು ಮಾಡಿದ್ದರು. ಬಂದವರೆಲ್ಲರೂ ಉಚಿತವಾಗಿದ್ದ ತಿಂಡಿ-ತಿನುಸು, ಉಡಿಗೆ-ತೊಡಿಗೆ, ಸಂಗೀತ-ನೃತ್ಯಗಳಲ್ಲಿಯೇ ಮಗ್ನರಾಗಿ ಬಿಟ್ಟರು. ಅರಮನೆಯ ಹೂದೋಟದಲ್ಲಿದ್ದ ರಾಜನತ್ತ ಯಾರೊಬ್ಬರೂ ಹೋಗಲಿಲ್ಲ. ಸಂಜೆಯ ಸಮಯಕ್ಕೆ ಒಬ್ಬ ಹಿರಿಯ ಅನುಭವಿಕ ರೈತನು ಅರಮನೆಗೆ ಬಂದ. ತಕ್ಷ ಣ ರಸ್ತೆಯ ಬದಿಯಲ್ಲಿದ್ದ ಅಂಗಡಿಯವರು ಬನ್ನಿ ಬನ್ನಿ ಎಂದು ಕರೆದು 'ಇದರಲ್ಲಿ ನಿಮಗೇನು ಬೇಕು ತೆಗೆದುಕೊಳ್ಳಿ, ಎಲ್ಲವೂ ಉಚಿತ' ಎಂದು ಹೇಳಿದರು. ರೈತ ಹೇಳಿದ 'ನನಗೇನೂ ಬೇಡ, ಮಹಾರಾಜನಿಗೆ ಭೆಟ್ಟಿಯಾಗಬೇಕು ಅಷ್ಟೇ!' ಇಷ್ಟು ಹೇಳಿ ರೈತನು ನೇರವಾಗಿ ಹೂದೋಟದಲ್ಲಿದ್ದ ರಾಜನಿಗೆ ಭೇಟಿಯಾದ. 'ಬೆಳಗಿನಿಂದ ಸಂಜೆಯವರೆಗೆ ದಾರಿ ಕಾಯ್ದರೂ ಯಾರೂ ಬಂದಿರಲಿಲ್ಲ, ಈಗ ನೀನೊಬ್ಬನಾದರೂ ಬಂದೆಯಲ್ಲಾ' ಎಂದು ರಾಜನು ವಾತ್ಸಲ್ಯದಿಂದ ರೈತನನ್ನು ಆಲಂಗಿಸಿದಾಗ ಈರ್ವರ ಕಣ್ಣುಗಳಲ್ಲಿ ಆನಂದ ಭಾಷ್ಪ ಧಾರೆಯಿಟ್ಟಿತ್ತು!!

ನಾವಿರುವ ಈ ಪ್ರಪಂಚವೇ ಪರಮಾತ್ಮನ ಹೂದೋಟ. ನಾವೆಲ್ಲರೂ ಪ್ರಜೆಗಳು. ಭಕ್ತ ವತ್ಸಲನಾದ ಪರಮಾತ್ಮನು ನಮಗೆ ದರ್ಶನವನ್ನಿತ್ತು ನಮ್ಮನ್ನು ಉದ್ಧರಿಸಬೇಕೆಂದು ನಮಗಾಗಿ ನಿತ್ಯ ದಾರಿ ಕಾಯುತ್ತಾನೆ. ಪ್ರಪಂಚದ ವಿಷಯ ವ್ಯಾಮೋಹಗಳಲ್ಲಿ ಆಕಂಠಪೂರ್ತಿ ಮುಳುಗಿದ ನಮಗೆ ಆ ಮಹಾದೇವನತ್ತ ಹೋಗಲು ಸಮಯವೆಲ್ಲಿದೆ? ಬುದ್ಧ, ಬಸವ, ಮಹಾವೀರ, ಜ್ಞಾನೇಶ್ವರ ಮೊದಲಾದ ಬೆರಳಣಿಕೆಯ ಮಹಾತ್ಮರು ಮಾತ್ರ ಪ್ರಪಂಚದ ಎಲ್ಲ ಬಂಧನಗಳನ್ನು ಹರಿದೊಗೆದು ಆ ಪರಮಾತ್ಮನ ದಿವ್ಯ ದರ್ಶನ ಪಡೆದು ಧನ್ಯರಾದರು.

ಆಧಾರ : ಈಶ ಪ್ರಸಾದ

〰〰〰〰〰〰〰〰〰〰〰

ಸಕಾರಾತ್ಮಕ ಚಿಂತನೆ

ಒಬ್ಬ ವ್ಯಕ್ತಿಯಿದ್ದ. ಆತ ಒಬ್ಬಂಟಿಯಾಗಿದ್ದ. ಜತೆಯೂ ಮಾತನಾಡುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಆಫೀಸಿಗೆ ಹೋಗುತ್ತಿದ್ದ. ಬರುತ್ತಿದ್ದ. ತರಕಾರಿ ಕೊಳ್ಳುವಾಗ, ದಿನಸಿ ಅಂಗಡಿಯಲ್ಲಿ ಎಲ್ಲಿಯೂ ಆತ ನಗುತ್ತಿದ್ದದ್ದನ್ನು ಯಾರೂ ನೋಡಿರಲಿಲ್ಲ. ನಿಗೂಢ ಎನಿಸುತ್ತಿದ್ದ. ಹೀಗೆ ವರ್ಷಗಳೇ ಕಳೆದಿದ್ದವು. ಎಂದಿನಂತೆ ಪೇಪರ್‌ನವರು ಪೇಪರ್ ಹಾಕಿ ‘ಬಿಲ್’ ಎಂದು ಕೂಗಿ, ಬೆಳ್ಳಂಬೆಳಗ್ಗೆಯೇ ಸಿಂಡರಿಸಿದ ಇವರ ಮುಖ ನೋಡಬೇಕಲ್ಲಾ ಎಂದು ಗೊಣಗಿಕೊಳ್ಳುತ್ತಿದ್ದ. ಅಷ್ಟರಲ್ಲಿ ಬಾಗಿಲು ತೆಗೆದು ಆತ ಹಸನ್ಮುಖನಾಗಿ ‘ಎಷ್ಟಾಯ್ತು?’ ಎಂದು ಕೇಳಿದ. ಪೇಪರ್ ಹಾಕುವವನಿಗೆ ಆಶ್ಚರ್ಯ. ಅವನ ಮುಖ ನಿಂತ. ‘ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ?’ ಎಂದು ಪ್ರಶ್ನಿಸಿದ. ಈಗಂತೂ ಪೇಪರ್‌ನವ ಮೂರ್ಛೆ ಬೀಳುವುದು ಬಾಕಿ!

ಆತ ಊರಿನಲ್ಲಿ ಅರ್ಧ ಜನಕ್ಕೆ ‘ಆ ವ್ಯಕ್ತಿಗೆ ಹುಷಾರಿಲ್ಲ, ಅವರು ನಗುತ್ತಿದ್ದಾರೆ’ ಎಂದು ಸಾರುತ್ತಾ ಬಂದ. ನಂತರ ತರಕಾರಿಯವನ ಬಳಿ, ದಿನಸಿಯವನ ಬಳಿಯೂ ಹೀಗೆ ಮಾತನಾಡಿದ. ಎಲ್ಲರೂ ಇವನನ್ನು ನೋಡುವವರೆ. ಆತ ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತಿದ್ದ. ಅಲ್ಲಿಯೂ ಹೀಗೆ ಇರುತ್ತಿದ್ದ. ಬದಲಾದ ಇವನ ಹಾವಭಾವ ನೋಡಿ ಪೂಜಾರಿ ಬಂದು ಮಾತನಾಡಿಸಿದ.‘ನಾನು ದಿನವೂ ನಿಮ್ಮನ್ನು ಆದರೆ ಹಿಂದೆಂದಿಗಿಂತಲೂ ವಿಭಿನ್ನವಾಗಿ ಇಂದು ಕಾಣುತ್ತಿದ್ದೀರಿ. ಏನಾಯ್ತು ನಿಮಗೆ’ ಎಂದರು. ಅದಕ್ಕೆ ಆತ ‘ ಯಾವಾಗಲೂ ನಕಾರಾತ್ಮಕವಾಗಿ ಚಿಂತಿಸುವ, ಬದುಕುವವರಿಗೆ ಮಾತ್ರ ರೋಗಗಳು ಬರುತ್ತವೆಯಂತೆ.ನಾನು ಎಲ್ಲರಂತೆ ಇದ್ದೆ. ಆದರೆ ಎಂದೂ ನಕಾರಾತ್ಮಕವಾಗಿ ಚಿಂತಿಸಿದವನಲ್ಲ.ಆದರೆ ನನಗೆ ಬದುಕುಳಿಯಲಾರದಂತ ರೋಗ ಬಂದುಬಿಟ್ಟಿತು.

ಹೇಗಿದ್ದರೂ ಸಾಯುತ್ತೇನೆ ಎಂದು ಗೊತ್ತಾಗಿತ್ತು. ಜೀವನದ ಮೇಲೆ ನನ್ನ ಸಿಟ್ಟು ಪ್ರದರ್ಶಿಸಲು ಹಾಗಿರುತ್ತಿದ್ದೆ. ನಗು ದೂರ ಮಾಡಿದ್ದೆ’ ಎಂದ. ಅದಕ್ಕೆ ಪೂಜಾರಿ ‘ಹಾಗಿದ್ದರೆ ಈಗೇಕೆ ನಗುತ್ತಾ ಎಲ್ಲರೊಂದಿಗೆ ಚೆನ್ನಾಗಿ ಎಂದ. ಅದಕ್ಕೆ ವ್ಯಕ್ತಿ ‘ ನಾನು ಈ ಕುರಿತು ಆಲೋಚಿಸುತ್ತಿದ್ದೆ. ಆಗ ನಕಾರಾತ್ಮಕವಾಗಿದ್ದ ಕಾರಣಕ್ಕೆ ನನಗೆ ಅನಾರೋಗ್ಯ ಸ್ಥಿತಿ ಬಂದೊದಗಿದೆ ಎಂದಾದರೆ, ಸಕಾರಾತ್ಮಕವಾಗಿದ್ದು, ನಗುವಿನ ಕೈಹಿಡಿದರೆ ನನ್ನ ಆರೋಗ್ಯ ವೃದ್ಧಿಸುವುದಿಲ್ಲವೆ? ಅದೇ ಕಾರಣಕ್ಕೆ ಹೀಗೆ ನಗುತ್ತಾ ಇದ್ದೇನೆ. ಸಕಾರಾತ್ಮಕಶಕ್ತಿಯನ್ನೊಮ್ಮೆ ನಂಬಿ ನೋಡುತ್ತೇನೆ ಎಂದ. ಹೌದಲ್ಲವಾ? ನಕಾರಾತ್ಮಕ ಅಂಶಗಳು ಕೈಬೀಸಿ ಕರೆಯುತ್ತವೆ, ಆಕರ್ಷಿಸುತ್ತವೆ. ಆದರೆ ಬದುಕಲು ಬೇಕಾದ್ದು ಅದಲ್ಲ. ಸಕಾರಾತ್ಮಕ ಚಿಂತನೆ ಆರಂಭವಾದರೆ ಜಗತ್ತಿನ ಅರ್ಧ ಸಮಸ್ಯೆ ಕಡಿಮೆಯಾದಂತೆ ಕಾಣುತ್ತದೆ. ಸುಲಭ ಎನಿಸುತ್ತದೆ. ಏನೇ ಬಂದರೂ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡುತ್ತದೆ.

ಗೌರ ಗೋಪಾಲ ಪ್ರಭು

ಸಹಜ ಅಭಿವ್ಯಕ್ತಿಯ ಸೌಂದರ್ಯ

ಸಹಜ ಅಭಿವ್ಯಕ್ತಿಯ ಸೌಂದರ್ಯ


ಶ್ರೀನಿವಾಸ ಅರ್ಕ

ನಿಮ್ಮ ಅಂತರಂಗದ ತೃಪ್ತಿಗಾಗಿ ನೀವು ಹಾಡಿದಾಗ, ನಿಮ್ಮ ಕಂಠ ಸುಶ್ರಾವ್ಯವಾಗಿರುತ್ತದೆ. ಬೇರೆಯವರಿಗಾಗಿ ಹಾಡಲು ನೀವು ಪ್ರಯತ್ನಿಸಿದಾಗ, ಈ ಸಹಜವಾದ, ಅಂತರಂಗದ ರಾಗ ಕಳೆದುಹೋಗಬಹುದು. ನೀವು ಆತ್ಮ ತೃಪ್ತಿಗೆ, ಸಾಕ್ಷಾತ್ಕಾರಕ್ಕೆಂದು ನೃತ್ಯ ಮಾಡಬೇಕೆಂದಾಗ, ಯಾವುದೇ ಪೂರ್ವ ಸಿದ್ಧತೆ ಇಲ್ಲದೆ, ನೀವು ಸಹಜವಾಗಿ ನರ್ತಿಸಬಲ್ಲಿರಿ. ಆ ಸಂದರ್ಭದಲ್ಲಿ ಹಾಡು ಮತ್ತು ನೃತ್ಯ ನಿಮ್ಮ ಹೃದಯದ ಅಭಿವ್ಯಕ್ತಿಗಳಾಗಿರುತ್ತವೆ. ಮನಸ್ಸು ಕೇವಲ ದರ್ಶಕನಾಗಿರುತ್ತದೆ. ಹೃದಯ, ಯಾವುದೇ ತಾಳವಾದ್ಯಗಳ, ಪ್ರೇಕ್ಷಕರ ಅಗತ್ಯ ಬೀಳದ ಮಾರ್ಗದರ್ಶಿಯಾಗುತ್ತದೆ.

ನೃತ್ಯ ನಿಮ್ಮ ನಿಜವಾದ ಅಭಿವ್ಯಕ್ತಿ. ಈ ನೃತ್ಯವನ್ನು ನೀವು ವ್ಯವಸಾಯದ ದೃಷ್ಟಿಯಿಂದ ಮಾಡುತ್ತಿಲ್ಲ. ಯಾವುದೇ ಬಹುಮಾನ ಪಡೆಯಲು ನರ್ತಿಸುತ್ತಿಲ್ಲ ಅಥವಾ ಪ್ರೇಕ್ಷಕರ ಕೈ ಚಪ್ಪಾಳೆಯ ಸದ್ದನ್ನು ಕೇಳಲೂ ನೀವು ನರ್ತಿಸುತ್ತಿಲ್ಲ. ಯಾವುದೇ ಕೀಳು ಕಾರಣಗಳಿಲ್ಲದೆ ನೃತ್ಯ ಮಾಡುವುದು, ಆತ್ಮತೃಪ್ತಿ ತರುವ ಅನುಭವ. ಈ ನೃತ್ಯಕ್ಕೆ ತರಬೇತಿ ಬೇಕಿಲ್ಲ. ತಾಲೀಮು ನಡೆಸಬೇಕಿಲ್ಲ. ನಿಮ್ಮಲ್ಲಿರುವ ಎಲ್ಲ ಅಂಗಗಳು ಇದರ ಭಾಗವಾಗುತ್ತವೆ. ನೃತ್ಯ ಮಾಡುವಾಗ ಅವು ಅದರಲ್ಲಿ ಭಾಗವಹಿಸುತ್ತವೆ. ನೆಲ ಡೊಂಕಾಗಿದೆಯೇ, ಮಟ್ಟಸವಾಗಿದೆಯೇ, ಮೋಡಕವಿದ ವಾತಾವರಣವೇ, ಗಾಳಿ ಜೋರಾಗಿ ಬೀಸುತ್ತಿದೆಯೇ, ಪ್ರೇಕ್ಷಕರು ಇದ್ದಾರೆಯೇ, ಇಲ್ಲವೇ ಎಂಬುದರ ಕಡೆ ನಿಮ್ಮ ಜ್ಞಾನ ಆಗ ಹೋಗುವುದಿಲ್ಲ. ನಿಮಗೆ ನೃತ್ಯ ಮಾಡಬೇಕೆನ್ನಿಸುತ್ತದೆ, ಹಾಗಾಗಿ ನರ್ತಿಸುತ್ತೀರಿ. ಹಾಡುವುದು, ಇಂತಹದೇ ಪ್ರಕ್ರಿಯೆ. ಹಕ್ಕಿಗಳು ನಿಶಾಂತವಾಗಿ ಹಾಡುತ್ತಿರುತ್ತವೆ. ಕಾರಣ ಅದು ಅವುಗಳ ಸಹಜ ಅಭಿವ್ಯಕ್ತಿ.

ಅಹಂಕಾರದಲ್ಲಿ ಜೀವಿಸುವವರು ಹಾಡಲಾರರು, ನರ್ತಿಸಲಾರರು. ಅವರ ನೃತ್ಯದಲ್ಲಿ ಕಪಟವಿರುತ್ತದೆ. ಅವರು ಒಂದೊಂದು ಹೆಜ್ಜೆಯನ್ನು ಲೆಕ್ಕಾಚಾರ ಮಾಡಿ ಇಡುತ್ತಾರೆ. ಅವರಿಗೆ ನೃತ್ಯ ಮಾಡುವಾಗ ಇನ್ನೊಬ್ಬರ ಮೇಲೆ ಪ್ರಭಾವ ಬೀರಬೇಕಾಗಿರುತ್ತದೆ. ಇನ್ನೊಬ್ಬರನ್ನು ಸಂತೋಷಗೊಳಿಸಬೇಕೆಂಬ ಇರಾದೆ ಇರುತ್ತದೆ. ಅನೇಕ ಬಾರಿ ಅಭಿಮಾನ ಮತ್ತು ಅಹಂಕಾರ ಈ ಪದಗಳನ್ನು ಸಮನಾರ್ಥದಲ್ಲಿ ಉಪಯೋಗಿಸಲಾಗುತ್ತದೆ. ಆದರೆ ಅವುಗಳ ಅರ್ಥದಲ್ಲಿ ತುಂಬಾ ವ್ಯತ್ಯಾಸವಿದೆ. ಅಭಿಮಾನ ಎಂಬುದು ಆನಂದಾಭಿವ್ಯಕ್ತಿಯ ಮೊದಲ ಹೆಜ್ಜೆ. ನಿಮಗೆ ನಿಮ್ಮ ಕೆಲಸದಲ್ಲಿ ಅಭಿಮಾನವಿದೆ. ಅಂದರೆ ನೀವು ಈ ಕೆಲಸ ಮಾಡುವಾಗ ಆನಂದಿಸುತ್ತೀರಿ ಎಂದರ್ಥ. ಇದು ನಿಮ್ಮ ಪ್ರವೃತ್ತಿಗೆ, ಅಭಿರುಚಿಗೆ ತಕ್ಕದಾಗಿದೆ. ನಿಮ್ಮ ಕೆಲಸದಲ್ಲಿ ನಿಮಗೆ ಅಭಿಮಾನವಿಲ್ಲ ಎಂದರೆ ನೀವು ತಪ್ಪು ಕೆಲಸದಲ್ಲಿದ್ದೀರಿ ಎಂದರ್ಥ. ನೀವು ಅಥವಾ ನಿಮ್ಮ ಪ್ರೀತಿ ಪಾತ್ರರಾದವರು ಏನನ್ನಾದರೂ ಹಿರಿಯದನ್ನು ಗಳಿಸಿದಾಗನಿಮಗೆ ಅಭಿಮಾನವೆನಿಸುತ್ತದೆ. ನಿಮ್ಮ ಕಾರ್ಯ ಕುಶಲತೆಯಲ್ಲಿ, ಕಾರ್ಯಕ್ಷಮತೆಯಲ್ಲಿ ಆತ್ಮ ವಿಶ್ವಾಸ ಮೂಡಿದಾಗ ನಿಮಗೆ ಅಭಿಮಾನವೆನಿಸುತ್ತದೆ. ಅಭಿಮಾನ ಎಂಬುದು ನಿಮ್ಮ ಬಗ್ಗೆ ಉನ್ನತ ಮಟ್ಟದ ಚಿತ್ರವನ್ನು ನೀಡುತ್ತದೆ. ಅದು ನಿಮ್ಮ ವ್ಯಕ್ತಿತ್ವವನ್ನೇ ಆವರಿಸಿಕೊಂಡರೆ, ಅದು ದುರಭಿಮಾನವೆನಿಸುತ್ತದೆ. ವಿನಯದಿಂದ ಕೂಡಿದ ಅಭಿಮಾನ ಆರೋಗ್ಯಕರವಾದದ್ದು. ದುರಭಿಮಾನ ವಿನಾಶಕಾರಿ. ಆದರೂ ಆತ್ಮಪ್ರಜ್ಞೆಯ ಅವಕೋಕನಕ್ಕೆ ಸ್ವಲ್ಪ ಮಟ್ಟಿನ ಅಭಿಮಾನ ಇರಬೇಕು. ಸ್ವಾರ್ಥದಿಂದ ಪ್ರೇರಿತವಾದ ಅಭಿಮಾನನಿಮ್ಮನ್ನು ನಿಮ್ಮದೇಜಾಲದಲ್ಲಿ ಸಿಕ್ಕಿಸುತ್ತಾ ಹೋಗುತ್ತದೆ. ಜೇಡ ತನ್ನ ಜಾಲದಿಂದ ಹೊರಗೆ ಬರಬಲ್ಲುದು. ಆದರೆ ದುರಭಿಮಾನದ ಜಾಲ ಅದೃಶ್ಯವಾದದ್ದು, ಹಾಗೂ ಅನೇಕ ಬಾರಿ ಕ್ಲಿಷ್ಟವಾದದ್ದು. ಅಹಂಕಾರ ಎಂಬುದು ಅಭಿಮಾನದ ತುರೀಯಾವಸ್ಥೆ. ಇದು ಸುಳ್ಳು ಅಭಿಮಾನದ ರೂಪ. ಆಹಂಕಾರ ಎಂಬುದು ಬೇರೆಯವರು ನಿಮ್ಮ ಬಗ್ಗೆ ಏನು ಆಲೋಚಿಸುತ್ತಾರೆ ಎಂಬುದರ ಮೇಲೆ ನಿರ್ಧಾರಿತವಾಗುತ್ತದೆ. ಇದು ಚಂಚಲ ಎಂಬುದು ಬಿಡಿಸಿ ಹೇಳಬೇಕಾಗಿಲ್ಲ. ಏಕೆಂದರೆ ಬೇರೆಯವರ ಅಭಿಪ್ರಾಯ ಒಂದೇ ರೀತಿ ಇರುವುದಿಲ್ಲ ಅಲ್ಲವೇ?

▪▪▪▪▪▪▪▪▪▪▪

ನಿಮ್ಮನ್ನು ನೋಡಿಕೊಳ್ಳುವವರಿರುತ್ತಾರೆ

ನಿಮ್ಮನ್ನು ನೋಡಿಕೊಳ್ಳುವವರಿರುತ್ತಾರೆ

ಶ್ರೀಶ್ರೀ ರವಿಶಂಕರ್‌

ಹಿರಿಯರಾದವರು, ತಾವು ಮತ್ತೊಬ್ಬರ ಮೇಲೆ ಅವಲಂಬಿತರಾಗಿದ್ದೇವೆæ, ಸ್ವತಂತ್ರರಾಗಿಬಿಡಬೇಕು ಎಂದು ದುಃಖಿಸುತ್ತಿರುತ್ತಾರೆ. ನೋಡಿ, ಇದುವರೆಗೂ ಯಾವ ಮಗುವೂ ಸ್ವತಂತ್ರವಾಗಿಲ್ಲ. ನೀವು ಮಗುವಾಗಿದ್ದಾಗ ನಿಮ್ಮನ್ನು ಹೆತ್ತವರು ನಿಮ್ಮನ್ನು ನೋಡಿಕೊಂಡರು. ನಿಮ್ಮ ಮುದಿತನದಲ್ಲಿ ನಿಮ್ಮ ಮಕ್ಕಳು ಅಥವಾ ಬೇರೆ ಯಾರೋ ನಿಮ್ಮನ್ನು ನೊಡಿಕೊಳ್ಳುತ್ತಾರೆ. ಆದ್ದರಿಂದ ಆರಂಭದಿಂದ ಕೊನೆಯವರೆಗೂ ಜೀವನವು ಅವಲಂಬಿಯಾಗಿದೆ. ಇದರ ನಡುವೆ ನಾವು ಸ್ವತಂತ್ರರು ಎಂದುಕೊಂಡರೂ, ಅನೇಕ ವಿಷಯಗಳ ಮೇಲೆ ಅವಲಂಬಿಗಳಾಗಿದ್ದೇವೆ. ನಿಮ್ಮ ಗಮನವೆಲ್ಲಾ ದೈವದ ಮೇಲಿದ್ದರೆ ನಿಮಗೆ ಅವಲಂಬನೆಯ ಹೊರೆಯನ್ನು ಅನುಭವಿಸುವುದಿಲ್ಲ ಅಥವಾ ಸ್ವತಂತ್ರರಾಗಬೇಕೆಂಬ ಆಶಾಭಂಗ, ಚಡಪಡಿಕೆಯೂ ಇರುವುದಿಲ್ಲ. ಎರಡೂ ಮಾಯವಾಗುತ್ತವೆ.

ಸ್ವತಂತ್ರರಾಗಬೇಕೆಂಬ ಭಾವನೆಯುಳ್ಳವರುಆಶಾಭಂಗಕ್ಕೊಳಗಾಗುತ್ತಾರೆ. ಏಕೆಂದರೆ ಸ್ವಾತಂತ್ರ್ಯಕ್ಕಾಗಿ ಕಾಯುವುದೇ ಆಶಾಭಂಗತನ. ಎಚ್ಚೆತ್ತು ನೋಡಿ. ನೀವು ಮಗುವಾಗಿದ್ದಾಗ ಅವಲಂಬಿಗಳಾಗಿರಲಿಲ್ಲವೆ? ''ನನ್ನ ಹೆತ್ತವರ ಮೇಲೆ ಅವಲಂಬಿಗಳಾಗಿರುವುದರಿಂದ ನಾನೆಲ್ಲಿಂದ ಬಂದೆನೊ ಅಲ್ಲಿಗೇ ಮರಳಿ ಹೋಗಿಬಿಡುತ್ತೇನೆ'' ಎನ್ನುವುದಿಲ್ಲ ಒಂದು ಮಗು! ಹೆತ್ತವರ ರೂಪದಲ್ಲಿ, ಮಕ್ಕಳ ರೂಪದಲ್ಲಿ ಅಥವಾ ಸ್ನೇಹಿತರ ರೂಪದಲ್ಲಿ, ಎಲ್ಲಿಂದಲೇ ಸಹಾಯ ಬರಲಿ, ಅದೆಲ್ಲವೂ ಒಂದೇ ಮೂಲದಿಂದ ಎಂದರೆ ದೈವತ್ವದಿಂದ ಬರುತ್ತಿದೆ. ಭಗವಂತನೇ ನಿಮ್ಮ ಹೆತ್ತವರಾಗಿ ನಿಮ್ಮನ್ನು ಪೋಷಿಸಿದ.

ನಮ್ಮಲ್ಲಿ ಬೆಳೆಸಿಕೊಂಡಿರುವ ಅಸುರಕ್ಷ ತೆಯ ಭಾವವನ್ನು ಹೊರಕ್ಕೆಸೆದು ಸುಟ್ಟುಬಿಡಿ. ನಿಮ್ಮ ಮಕ್ಕಳೇ ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದುಕೊಳ್ಳಬೇಡಿ. ನಿಮ್ಮ ಕೊನೆಯ ಉಸಿರನ್ನು ಬಿಡುತ್ತಿರುವಾಗ ನಿಮ್ಮ ಕೆಲಸದವರೊ ಅಥವಾ ಪಕ್ಕದ ಮನೆಯವರೊ ಬಂದು ಸಹಾಯಮಾಡಬಹುದು. ಯಾರಿಗೆ ಗೊತ್ತು? ಯಾರೇ ನಿಮಗೆ ಸಹಾಯ ಮಾಡಿದರೂ ಭಗವಂತನೇ ಬಂದು ನಿಮಗೆ ಆ ರೂಪದಲ್ಲಿ ಸಹಾಯ ಮಾಡುತ್ತಿದ್ದಾನೆ. ನಿಮಗೆ ಸಹಾಯ ಮಾಡುವ ಹೊಣೆಯನ್ನು ಆ ದೈವೀ ಶಕ್ತಿಗೆ ಕೊಟ್ಟುಬಿಡಿ. ನಿಮಗೆ ಯಾವಾಗ ಅವಶ್ಯಕವೋ ಆಗ, ಯಾವುದೇ ರೂಪದಲ್ಲಿ ಬಂದು ನಿಮಗೆ ಸಹಾಯ ಮಾಡಲಿ. ಯಾರ ಸಹಾಯದಿಂದಲೂ ನೀವು ಮುಜುಗರ ಪಡಬೇಕಿಲ್ಲ ಅಥವಾ ಹೊರೆಯನ್ನು ಅನುಭವಿಸಬೇಕಿಲ್ಲ. ತಿಳಿಯಿತೆ?

''ನಾನು ಯೋಗ್ಯವಾದ ವ್ಯಕ್ತಿ ನನಗೆಲ್ಲವೂ ಬರಬೇಕು'' ಎಂದುಕೊಂಡರೆ ಸಮಸ್ಯೆಗಳು ಬರುತ್ತವೆ, ದೂರುಗಳು ಬರುತ್ತವೆ. ಆಗ ನಿಮ್ಮ ಯೋಗ್ಯತೆಯೂ ಕಡಿಮೆಯಾಗುತ್ತದೆ. ದೂರುಗಳು ಕೊನೆಗೊಂಡಾಗ ಸರಳತೆ, ಸುಲಭತೆ, ವಿನಮ್ರತೆ ಮೂಡುತ್ತದೆ. ನಮಗೇನು ಬರಬೇಕೊ ಅದಕ್ಕಿಂತಲೂ ಹೆಚ್ಚಾಗಿ ಆಶೀರ್ವದಿಸಲ್ಪಟ್ಟೆವೆಂದು ಭಾವಿಸಿದಾಗ ಕೃತಜ್ಞತೆಯು ಉಕ್ಕುತ್ತದೆ. ಆಗ ಎಲ್ಲವೂ ನಿಮ್ಮ ಬಳಿಗೆ ತಾನಾಗಿಯೇ ಬರಲಾರಂಭಿಸುತ್ತದೆ. ನಿಮಗೆಲ್ಲಾ ಬರಬೇಕೆಂದು ತಗಾದೆ ಮಾಡಲಾರಂಭಿಸಿದರೆ, ನಿಮ್ಮೊಳಗಿರುವ ಏನೋ ಒಂದು ಸಣ್ಣದಾಗುತ್ತದೆ. ನಾವು ಮಾಡಿರುವ ಪರಿಶ್ರಮಕ್ಕೆ ಪುರಸ್ಕರಿಸಬೇಕು, ತಮಗೆ ಸಂಬಳ ಕೊಡಬೇಕು ಎಂದು, ಓರ್ವ ನೌಕರರ ಸ್ಥಾನದಲ್ಲಿ ನಿಂತು ತಗಾದೆ ಮಾಡಿದಂತಿರುತ್ತದೆ. ತಗಾದೆ ಮಾಡದೆ ಭಗವಂತ ಆಶೀರ್ವದಿಸಿದ್ದಾನೆ ಎಂದು ಭಾವಿಸಿದರೆ, ನಿಮ್ಮನ್ನು ಬಹಳ ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ.

ಕನ್ನಡ ವಚನವೊಂದು, ''ಶರಣು ಹೋಗು ಜೀವನ, ರಹಸ್ಯದಲಿ ಸತ್ಯದಲಿ'' ಎನ್ನುತ್ತದೆ. ಜೀವನ ಬಗ್ಗೆ ಹೆಚ್ಚಾಗಿ ತಿಳಿದಷ್ಟೂ, ತಿಳಿಯದೆ ಇರುವುದು ಇನ್ನಷ್ಟು ಹೆಚ್ಚುತ್ತದೆ. ಒಂದು ಪುಟ್ಟ ಮಗುವಿನ ಜಗತ್ತು ಅದರ ಆಟಿಕೆಗಳು ಸ್ನೇಹಿತರು ಮತ್ತು ಕುಟುಂಬವಷ್ಟೆ. ಮಗು ಬೆಳೆದಾಗ ಹೊರಗಿನ ವಿಶಾಲವಾದ ಜಗತ್ತನ್ನು ತಿಳಿಯುತ್ತದೆ ಮತ್ತು ಅರಿಯಬೇಕಾದದ್ದು ಇನ್ನಷ್ಟಿರುತ್ತದೆ. ನಮ್ಮ ತಾರ್ಕಿಕ ಬುದ್ಧಿಯನ್ನು ಬಿಟ್ಟು ಸೃಷ್ಟಿಯ ಸೃಷ್ಟಿಕರ್ತನೆ ನಮ್ಮೊಳಗಿದ್ದಾನೆ ಎಂದು ಮೌನವಾದ ಧ್ಯಾನದಲ್ಲಿ ಅರಿತಾಗ ಅಪಾರ ಶಾಂತಿ ಮತ್ತು ತೃಪ್ತಿ ನಮ್ಮ ಆಂತರ್ಯದಲ್ಲಿ ಉಕ್ಕುತ್ತದೆ. ಭಗವಂತನೇ ನಿಮ್ಮೊಳಗಿರುವಾಗ ನಿಮ್ಮನ್ನು ನೋಡಿಕೊಳ್ಳುವವರು ಯಾರು ಎಂಬ ಪ್ರಶ್ನೆಯೇಕೆ? ಶರಣಾಗಿ, ಪ್ರಶಾಂತವಾಗಿ, ಸಂತೋಷದಿಂದಿರಿ.

ಸೋಲನ್ನು ಗೆಲುವನ್ನಾಗಿಸುವ ಬಗೆ


ಸೋಲನ್ನು ಗೆಲುವನ್ನಾಗಿಸುವ ಬಗೆ


ಅಮೆರಿಕದ ರಾಷ್ಟ್ರಾಧ್ಯಕ್ಷರಲ್ಲಿ ಜಾರ್ಜ್‌ ವಾಷಿಂಗ್‍ಟನ್ ಹಾಗೂ ಅಬ್ರಹಾಂ ಲಿಂಕನ್‌ ಅವರಷ್ಟು ಅತ್ಯಂತ ವಿಭಿನ್ನ ಗುಣದ ವ್ಯಕ್ತಿಗಳನ್ನು ಕಾಣುವುದು ಕಷ್ಟ.  ಇಬ್ಬರ ವ್ಯಕ್ತಿತ್ವಗಳಲ್ಲಿ ಯಾವ ಸಾಮ್ಯತೆಯೂ ಕಾಣುವುದಿಲ್ಲ. ಜಾರ್ಜ್‌ ವಾಷಿಂ-ಗ್‍ಟನ್ ಅತ್ಯಂತ ಶ್ರೀಮಂತ ಮನೆತನದಿಂದ ಬಂದವರು.


ಆತ ಸದಾ ಏಕಾಂಗಿಯಾಗಿದ್ದು, ಸಂಪ್ರದಾಯವನ್ನು ಪಾಲಿಸುವ ಹಾಗೂ ಹತ್ತಿರ ಹೋಗಲು ಯಾರಿಗಾದರೂ ಭಯ ತರಿಸುವಂತಹ ವ್ಯಕ್ತಿತ್ವ ಅವರದು. ಆದರೆ, ಅಬ್ರಹಾಂ ಲಿಂಕನ್ ಇದಕ್ಕೆ ವ್ಯತಿರಿಕ್ತವೆಂಬಂತೆ ತೀರ ಬಡತನದಿಂದ ಬಂದವರು. ಯಾವುದೇ ಜನರ ಗುಂಪಿನಲ್ಲಿ ಸೇರಿ ಹೋಗುವಂತಹ ಗುಣ ಅವರದು. ಯಾರು ಏನೇ ಟೀಕೆ ಮಾಡಿದರೂ ಅದನ್ನು ಸಹಿಸಿಕೊಂಡು ತಮ್ಮ ಮೇಲೆಯೇ ನಗೆ ಚಟಾಕಿ ಹಾರಿಸುವ ಸುಲಭದ ಗುಣ ಲಿಂಕನ್ನರದು. ಆದರೆ, ಇವರಿಬ್ಬರ ನಡುವೆ ಅತ್ಯಂತ ಸಮಾನವಾದದ್ದೆಂದರೆ ಇಬ್ಬರೂ ಅನುಭವಿಸಿದ ಸೋಲಿನ ಸರಪಳಿಗಳು.


ಅಬ್ರಹಾಂ ಲಿಂಕನ್‌ ಜೀವನ ಸೋಲಿಗೆ ಪ್ರಸಿದ್ಧವಾದದ್ದು. ಸಂಕ್ಷಿಪ್ತವಾಗಿ ಅದನ್ನು ಹೇಳಬಹುದಾದದ್ದು ಹೀಗೆ. ಅವರೊಬ್ಬ ಉದ್ಯಮಿಯೊಂದಿಗೆ ಕೆಲಸ ಮಾಡಲು ಹೋಗಿ ಸೋತರು. ನಂತರ ರಾಜ್ಯದ ಚುನಾವಣೆಯಲ್ಲಿ ಸೋಲು. ಮತ್ತೊಮ್ಮೆ ತಾವೇ ವ್ಯಾಪಾರ ಮಾಡಲು ಹೋಗಿ ಅಪಾರ ಸೋಲು ಕಂಡರು. ಮುಂದೆ ಎಷ್ಟೋ ವರ್ಷಗಳ ಕಾಲ ಸಾಲದ ಹಣವನ್ನು ಕಟ್ಟುವುದರಲ್ಲೇ ಅವರ ಗಳಿಕೆ ಕರಗಿತು.  ಮುಂದೊಮ್ಮೆ ರಾಜ್ಯದ ಚುನಾವಣೆಯಲ್ಲಿ ಗೆಲುವು, ಆದರೆ ಆಗ ಅವರ ಹೆಂಡತಿ ತೀರಿಹೋದಳು.
ಆಗ ಅವರು ತುಂಬ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು, ಖಿನ್ನತೆ ಬಹುಕಾಲ ಕಾಡಿತು. ರಾಜ್ಯದ ಶಾಸನಸಭೆಯ ಅಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸಿ ಸೋತರು. ಮುಂದೆ ಕಾಂಗ್ರೆಸ್‌ನ ಸ್ಥಾನಕ್ಕೆ ಚುನಾವಣೆಯಲ್ಲಿ ಸೋಲು.  ಅಮೆರಿಕದ ಸೆನೆಟ್‌ಗೆ ಆರಿಸಿ ಬರಲು ಪ್ರಯತ್ನಿಸಿ ಸೋತರು. ಮುಂದೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಅವರಿಗೆ ನೂರು ವೋಟು ಕೂಡ ಬರಲಿಲ್ಲ. ಕೊನೆಗೊಮ್ಮೆ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದಾಗ ಯಶ ದೊರಕಿತು. ಅದು ಅವರನ್ನು ಅಮೆರಿಕದ ಅತ್ಯಂತ ಯಶಸ್ವಿ ರಾಷ್ಟ್ರಪತಿಯನ್ನಾಗಿ ಮಾಡಿತು.


ಜಾರ್ಜ್‌ ವಾಷಿಂಗ್‍ಟನ್ ಕಮಾಂಡರ್ ಆಗಿ ತಮ್ಮ ಜೀವನದುದ್ದಕ್ಕೂ ಗೆದ್ದದ್ದು ಎರಡೇ ಯುದ್ಧಗಳನ್ನು. ಉಳಿದವುಗಳಲ್ಲಿ ಬರೀ ಸೋಲು. ಕೊನೆಯ ಯುದ್ಧದಲ್ಲಂತೂ ಬ್ರಿಟಿಷ್ ಸೈನ್ಯ ಇವರನ್ನು ಲಾಂಗ್ ಐಲಾಂಡ್‌ನಿಂದ, ಬ್ರೂಕ್ಲಿನ್ ಸೇತುವೆಯಿಂದ, ಮ್ಯಾನ್‌ಹಟನ್ ದ್ವೀಪದವರೆಗೆ ಹಿಂದೆ ಓಡಿಸಿತು. ಎಲ್ಲ ಸೋಲುಗಳನ್ನು ತಾಳ್ಮೆಯಿಂದ ತಡೆದುಕೊಂಡ ವಾಷಿಂಗ್‍ಟನ್ ಕೊನೆಯ ಹಂತದಲ್ಲಿ ಯುದ್ಧವನ್ನು ಗೆದ್ದೇ ಬಿಟ್ಟರು.


ಬ್ರಿಟಿಷ್‌ ಜನರಲ್ ಕಾರ್ನವಾಲೀಸ್ ಶರಣಾಗತಿ  ಸೂಚಿಸುವಂತೆ ತನ್ನ ಖಡ್ಗವನ್ನು ನೀಡುತ್ತ ಹೇಳಿದ, ‘ಜನರಲ್, ನಿಮಗೆ ನನ್ನ ಸಲಾಮ್. ನಿಮ್ಮಂತಹ ನಾಯಕರನ್ನು ನಾನು ಇದುವರೆಗೂ ನೋಡಿಲ್ಲ. ಪ್ರತಿ ಕ್ಷಣದಲ್ಲೂ ಸೋಲನ್ನೇ ಕಾಣುತ್ತಲಿದ್ದರೂ ಗೆಲುವಿನ ಆಸೆಯನ್ನು ಬಿಡದೇ ಹೋರಾಡಿದ ನಿಮಗೆ ನನ್ನ ಅಭಿನಂದನೆಗಳು. ನಿಮ್ಮ ಯಶಸ್ಸಿನ ಸೂತ್ರ ನನಗೆ ಈಗ ತಿಳಿಯಿತು’. ಲಿಂಕನ್ ಹಾಗೂ ವಾಷಿಂಗ್ಟನ್‌ ಅವರ ಬದುಕು ನಮಗೆ ಕಲಿಸುವ ಪಾಠವೆಂದರೆ ಸೋಲು ಪರಿಶ್ರಮದೊಂದಿಗೆ ಸೇರಿದರೆ ಯಶಸ್ಸು ದೊರೆಯುತ್ತದೆ.
ಸೋಲು ಒಂದು ಘಟನೆ ಮಾತ್ರ, ಅದು ಜೀವನವಲ್ಲ. ‘ಬದುಕಿನಲ್ಲಿ ಲಕ್ಷಾಂತರ ಘಟನೆಗಳು ಜರುಗುತ್ತವೆ. ಅದರಲ್ಲಿ ಕೆಲವು ಮಾತ್ರ ವೈಫಲ್ಯವನ್ನು ಕಾಣಬಹುದು. ಒಂದು ವಿಫಲತೆ ಒಬ್ಬ ಮನುಷ್ಯನ  ಪರಿಶ್ರಮದ ವಿಫಲತೆಯಲ್ಲ.  ಅದು ಆ ಕ್ಷಣದಲ್ಲಿ ಪ್ರಯತ್ನ ಸಾಕಾಗಲಿಲ್ಲವೆಂಬುದನ್ನು ಹೇಳುತ್ತದೆ. ಮುಂದಿನ ಕ್ಷಣದಲ್ಲಿ ಪ್ರಯತ್ನವನ್ನು ಹೆಚ್ಚು ಮಾಡಿದರೆ ಸಾಕು ವಿಫಲತೆ ಓಡಿ ಹೋಗುತ್ತದೆ. ಇದನ್ನೇ ತಾನೇ ಈ ಇಬ್ಬರೂ ಮಹಾನುಭಾವರು ತಮ್ಮ ಬದುಕಿನ ಮೂಲಕ ಕಲಿಸಿದ್ದು? ನಾವು ಪಾಠ ಕಲಿತರೆ ನಮಗೇ ಒಳ್ಳೆಯದು.

🔹🔹🔹🔹🔹🔹🔹🔹🔹🔹🔹

ಕುಗ್ಗಿದ ಆತ್ಮವಿಶ್ವಾಸ

🔸🔸🔸🔸🔸🔸🔸🔸🔸🔸🔸

ಕುಗ್ಗಿದ ಆತ್ಮವಿಶ್ವಾಸ

ಅ ವನೊಬ್ಬ ಹುಟ್ಟು ಕುರುಡ. ಅವನಿಗೆ ಈ ಜಗತ್ತು ಅಭ್ಯಾಸವಾಗಿ  ಹೋಗಿದೆ.  ತನ್ನ ಪರಿಸರದಲ್ಲಿ  ಆತ ತಿರುಗಾಡುತ್ತಿದ್ದರೆ ಆತ ಕುರುಡ ಎಂದು ಹೇಳುವುದೇ ಕಷ್ಟ. ಎಲ್ಲಿ  ಯಾವ ಬಾಗಿಲಿದೆ, ಎಷ್ಟು ಮೆಟ್ಟಿಲುಗಳಿವೆ, ಎಲ್ಲಿ  ಮರಗಳಿವೆ. ಎಲ್ಲ ಚೆನ್ನಾಗಿ ಗೊತ್ತು.

ಮನೆಯಿಂದ ದೂರ ಎಲ್ಲಿಯಾದರೂ ಹೋದರೆ ಅವನ ಬಿಳಿಯ ಕೋಲು ಅವನ ಸಂಗಾತಿ. ಅದನ್ನು ಮುಂದೆ ಚಾಚಿ, ನೆಲವನ್ನು ತಟ್ಟುತ್ತ ಆತ್ಮವಿಶ್ವಾಸದಿಂದ ಹೊರಟೇಬಿಡುತ್ತಿದ್ದ. ಒಂದು ಬಾರಿ ತಮ್ಮ ದೂರದ ಸಂಬಂಧಿಯಾದ ಹಿರಿಯರನ್ನು ನೋಡಲು ಹೋದ.
ಅಲ್ಲಿಯೇ ಅವರು ಊಟಮಾಡಿ ಹೋಗಲು ಒತ್ತಾಯ ಮಾಡಿದರು. ಅಲ್ಲಿಂದ ಹೊರಡುವಾಗ ಕತ್ತಲೆಯಾಯಿತು.  ಹೊರಟು ನಿಂತ ಈತನಿಗೆ ಹಿರಿಯರು `ಒಂದು ನಿಮಿಷ ಇರು, ನಿನಗೊಂದು ಲಾಟೀನು ಕೊಡುತ್ತೇನೆ. ರಸ್ತೆಯಲ್ಲಿ  ಕತ್ತಲೆ ಇದೆ~ ಎಂದರು. ಆಗ ಆತ  `ನನಗೆ ಲಾಟೀನೇಕೆ. ಹುಟ್ಟು ಕುರುಡನಾದ ನನಗೆ ಈ ಲಾಟೀನಿನಿಂದ ಏನು ಪ್ರಯೋಜನ~  ಎಂದ. ಅವರು ನಕ್ಕು,  `ಅದು ನನಗೆ ಗೊತ್ತಿಲ್ಲವೇ. ನಿನ್ನ ಕೈಯಲ್ಲಿ  ಲಾಟೀನಿದ್ದರೆ ಕತ್ತಲೆಯಲ್ಲಿ ಎದುರು ಬರುವವರಿಗೆ ಗೊತ್ತಾಗುತ್ತದೆ. ಯಾರೊಬ್ಬರೂ ಬಂದು ನಿನಗೆ ಹಾಯುವುದಿಲ್ಲ~  ಎಂದರು. ಈತನಿಗೂ ಸರಿ ಎನ್ನಿಸಿತು. ಲಾಟೀನನ್ನು ಎಡಕೈಯಲ್ಲಿ  ಹಿಡಿದು, ಬಲಗೈಯಲ್ಲಿ  ಬಿಳಿ  ಕೋಲನ್ನು ಹಿಡಿದು ಮನೆಯ ಕಡೆಗೆ ನಡೆದ.
ಅವನಿನ್ನೂ ಅರ್ಧ ಫರ್ಲಾಂಗ್ ಕೂಡ ಹೋಗಿರಲಿಲ್ಲ. ಯಾವನೋ ಒಬ್ಬ ಸೈಕಲ್ ಮೇಲೆ ಬರುತ್ತಿದ್ದವನು ಇವನಿಗೇ ನೇರವಾಗಿ ಬಂದು ಹಾಯ್ದು ಬಿಟ್ಟ. ಸೈಕಲ್ ಸವಾರನೂ ಕೆಳಗೆ ಬಿದ್ದ, ಕುರುಡನೂ ಲಾಟೀನಿನ ಜೊತೆಗೆ ಬಿದ್ದ. ಸೈಕಲ್ಲಿ ನವನು ಎದ್ದು ಸೈಕಲ್ಲನ್ನು ನೇರವಾಗಿ ನಿಲ್ಲಿ ಸಿ, ಈತನ ಲಾಟೀನನ್ನು ಎತ್ತಿ ಇವನ ಕೈಗೆ ಕೊಟ್ಟ. ಅಷ್ಟರಲ್ಲಿ  ಕುರುಡನಿಗೆ ಭಾರಿ ಸಿಟ್ಟು ಬಂದಿತ್ತು.  `ಏನಪ್ಪಾ, ನೀನೂ ಕುರುಡನೇ. ನಾನಂತೂ ಕುರುಡ.
ಎದುರು ಬರುವವರಾದರೂ ಲಾಟೀನನ್ನು ನೋಡಿ ನನಗೆ ಹಾಯಬಾರದೆಂದು ಇದನ್ನು ತಂದರೆ ಅದನ್ನು ಗಮನಿಸಲಿಲ್ಲವೇ~  ಎಂದು ಧ್ವನಿ ಏರಿಸಿದ. ಆಗ ಸೈಕಲ್ಲಿನವ, `ಸ್ವಾಮಿ, ನೀವು ಲಾಟೀನೇನೋ ತಂದಿರಿ ಸರಿ. ಆದರೆ ಅದರೊಳಗೆ ದೀಪವಿರಬೇಡವೇ. ದೀಪವಿಲ್ಲದ ಲಾಟೀನು ಅದು ಹೇಗೆ ಕಂಡೀತು~  ಎಂದು ಪ್ರಶ್ನಿಸಿದ.
ಈತ ಮುಖ ತಗ್ಗಿಸಿಕೊಂಡು ಮರಳಿ ಮನೆಯ ಯಜಮಾನ ಬಳಿಗೆ ಹೋದ.  ಸ್ವಾಮಿ, `ಇನ್ನು ಮೇಲೆ ಯಾವ ಕುರುಡನ ಕೈಯಲ್ಲೂ ಲಾಟೀನು ಕೊಡಬೇಡಿ. ಯಾಕೆಂದರೆ ಅದರೊಳಗೆ ದೀಪವಿದೆಯೋ, ಇಲ್ಲವೋ ಎಂದು ತಿಳಿಯುವುದು ಹೇಗೆ. ನಾನು ಲಾಟೀನಿಲ್ಲದಾಗ ಊರುಗೋಲಿನ ಆಸರೆಯೊಂದಿಗೆ ಆತ್ಮವಿಶ್ವಾಸದಿಂದ ನಡೆಯುತ್ತಿದ್ದೆ.
ಈ ಲಾಟೀನು ಕೈಗೆ ಬಂದೊಡನೆ ನನಗೆ ಊರುಗೋಲಿನ ಮೇಲಿನ ವಿಶ್ವಾಸ ಕಡಿಮೆಯಾಗಿ ಲಾಟೀನಿನ ಮೇಲೆ ನಂಬಿಕೆ ಹೆಚ್ಚಾಯಿತು. ನನಗೆ ಗೊತ್ತಿಲ್ಲದ ವಿಷಯದಲ್ಲಿ  ನಂಬಿಕೆ ಹೆಚ್ಚಾಗಿ, ಗೊತ್ತಿರುವ ವಿಷಯದಲ್ಲಿ  ನಂಬಿಕೆ ಕಡಿಮೆಯಾದಾಗ ಇಂತಹ ಅನಾಹುತಗಳಾಗುತ್ತವೆ~  ಎಂದು ಲಾಟೀನನ್ನು ಅಲ್ಲಿಯೇ ಇಟ್ಟು ಮನೆಗೆ ಬಂದ. ಎಷ್ಟೋ ಬಾರಿ ನಾವು ಒಳ್ಳೆಯದನ್ನೇ ಮಾಡಲು ಹೋದಾಗ ಪ್ರತಿಕೂಲವೇ ಆಗುತ್ತದೆ. ಸಹಾಯ ಮಾಡುವಾಗ, ನಮ್ಮ ಸಹಾಯದಿಂದ ನಿಜವಾಗಿಯೂ ಪಡೆದವರಿಗೆ ಒಳ್ಳೆಯದಾದೀತೇ ಎಂದು ಹತ್ತು ಬಾರಿ ಚಿಂತಿಸಬೇಕು. ನಮ್ಮ ಸಹಾಯ ಅವರ ಸ್ವಾಭಾವಿಕ ಆತ್ಮವಿಶ್ವಾಸ ಕುಗ್ಗಿಸಬಾರದು.

By unknown
🔹🔹🔹🔹🔹🔹🔹🔹🔹🔹🔹

Be more concerned with your CHARACTER than your Reputation,
because your character is what you really are,
while your REPUTATION is merely what others think you are!!!!

★★



Discover yourself like a Lotus Flower in full bloom, even in a muddy pond, beautiful and strong..

★★

ನಾಯಿಬಾಳು

BY VIGHNESHWARA S

ಮನುಷ್ಯನಿಗೆ ಇರುವ ಮಮಕಾರ.
ಅಧಿಕಾರದಾಹ ಅಷ್ಟಿಷ್ಟಲ್ಲ. ಏನಾದರೂ
ಮಾಡಿ ಈ ಪ್ರಪಂಚದ ಮೇಲೆ ಒಡೆತನ
ಸಾಧಿಸಲು ನೋಡಿದ. ಅದಕ್ಕಾಗಿ ಕೋಟೆ
ಕೊತ್ತಲೆಗಳನ್ನು ಕಟ್ಟಿ
ಶಸ್ತ್ರಾಸ್ತ್ರಗಳನ್ನಿಟ್ಟು
ರಾಜ್ಯವನ್ನಾಳಿದ. ಆದರೆ ಈ ಪ್ರಪಂಚವು
ಮಾನವನ ಮಾತು ಕೇಳಲಿಲ್ಲ. ಇವನ
ಒಡೆತನವನ್ನು ಜಗತ್ತು
ಒಪ್ಪಿಕೊಳ್ಳಲಿಲ್ಲ. ಆಗ ಮನುಷ್ಯನು
ತಾನಿದ್ದ ಮನೆಯ ಮಾಲೀಕನಾದರೂ ಆಗಲು
ಬಯಸಿದ. ತನ್ನ ಮಡದಿ ಮಕ್ಕಳೇ ಆತನ ಮಾತು
ಕೇಳಲಿಲ್ಲ. ಕೊನೆಗೆ ನಾಯಿಗೆ ಒಂದು
ತುತ್ತು ರೊಟ್ಟಿ ಹಾಕಿ ಅದರ
ಒಡೆಯನಾಗಲುಹೋದ. ‘ನೀನು ಹಾಕಿದ
ರೊಟ್ಟಿಗೆ ನಾನು ನಿನ್ನ ಮನೆ
ಕಾಯ್ದಿದ್ದೇನೆ. ನಿನ್ನದೇನು ನನಗೆ
ಹಂಗಿಲ್ಲ’ ಎಂದಿತು ನಾಯಿ. ಇಷ್ಟಾದರೂ
ಮನುಷ್ಯನಿಗೆ ಬುದ್ಧಿ ಬರಲಿಲ್ಲ.
ಅಹಂಕಾರ, ಮಮಕಾರ, ನಾನು ನನ್ನದು
ಎನ್ನುವುದನ್ನು ಬಿಡಲಿಲ್ಲ. ಹೀಗೆ
ದೇವನೇ ಸರ್ವಶಕ್ತನೆಂದು
ಅರಿಯದಿದ್ದರೆ, ಅಹಂಕಾರ, ಮಮಕಾರವನ್ನು
ಬಿಡದ ಮನುಷ್ಯನ ಬಾಳು ನಾಯಿಬಾಳು.

➖➖➖➖➖➖➖➖➖➖➖

ವಿಶಾಲ ಮನಸ್ಸಿನವರು ಮಹಾತ್ಮರು

ವಿಶಾಲ ಮನಸ್ಸಿನವರು ಮಹಾತ್ಮರು

ಶ್ರೀ ಸಿದ್ಧೇಶ್ವರ ಸ್ವಾಮೀಜಿ

ವಿಶ್ವ ಹಾಗೂ ವಿಶ್ವಾತ್ಮನ ಕುರಿತಾದ ಜ್ಞಾನವು ಸರ್ವಶ್ರೇಷ್ಠವಾದುದು. ಇದುವೆ ಆತ್ಮಜ್ಞಾನ, ಇದರಿಂದ ನಮ್ಮ ಜೀವನದಲ್ಲಿ ಪರಮಶಾಂತಿ, ಪರಮಾನಂದ ನೆಲೆಸುತ್ತದೆ. ಹೃದಯ ವೈಶಾಲ್ಯ ಅಥವಾ ಮನೋವಿಕಾಸ ಉಂಟಾಗಿ ಜೀವನವು ಸಾರ್ಥಕವೆನಿಸುತ್ತದೆ. ಹಿಮಾಲಯ, ಬೆಟ್ಟ, ಆಗಸ ಎಂಬ ಶಬ್ದಗಳನ್ನು ಕೇಳಿದಾಗ ನಮ್ಮ ಮನಸ್ಸು ಸಹಜವಾಗಿಯೇ ವಿಶಾಲವಾಗುತ್ತದೆ. ಅದೇ ಹೊಲ, ಮನೆ, ಅಂಗಡಿ, ದುಡ್ಡು-ಕಾಸು ಎಂದಾಗ ನಮ್ಮ ಮನಸ್ಸು ಅಷ್ಟೇ ಚಿಕ್ಕದಾಗುತ್ತದೆ. ಗಣಿತದಲ್ಲಿ ತ್ರಿಕೋನ, ಚೌಕೋನ, ಆಯತ, ವೃತ್ತ ಎಂದು ಬರೆಯುತ್ತಾ ಹೋಗುತ್ತೇವೆ. ಆ ಎಲ್ಲ ಆಕೃತಿಗಳನ್ನು ಅಳಿಸಿದಾಗ ಉಳಿಯುವುದೇ ನಿಸ್ಸೀಮ, ನಿರಾಕಾರ ಬಯಲು.

ಹೀಗೆ ಸಣ್ಣದರಿಂದ, ದೊಡ್ಡದರತ್ತ ಅನಂತದತ್ತ ಮನಸ್ಸನ್ನು ಮುನ್ನಡೆಸುವುದೇ ಸಾಧನೆಯಾಗಿದೆ. ಬರೀ ಮನೆ-ಮಠ, ಸತಿ-ಸುತರು, ಪಕ್ಷ -ಪಂಗಡ, ಜಾತಿ-ಮತ ಇದೇ ಸೀಮಿತ ವಲಯದಲ್ಲಿಯೇ ನಾವು ನಿಂತುಬಿಟ್ಟರೆ ನಮ್ಮ ಮನಸ್ಸು ವಿಶಾಲವಾಗುವುದು ಹೇಗೆ? ಪ್ರಾಪಂಚಿಕವಾದ ಎಲ್ಲೆ ಮೀರಿ ಮಹದೆತ್ತರಕ್ಕೆ ತಮ್ಮ ಮನಸ್ಸನ್ನು ಎತ್ತರಿಸಿದವರೇ ಮಹಾತ್ಮರು. 'ಮಹಾನ್‌ ಆತ್ಮಾ ಯಸ್ಯ ಸಃ ಮಹಾತ್ಮಾ' ವಿಶಾಲವಾದ ಮನಸ್ಸುಳ್ಳವರೇ ಮಹಾತ್ಮರು. ಸಂಕುಚಿತ ಮನಸ್ಸುಳ್ಳವರೇ ಅಲ್ಪಾತ್ಮರು. ಮಹಾತ್ಮರಂತೆ ನಮ್ಮ ಮನಸ್ಸು ವಿಶಾಲವಾದಾಗ ಜೀವನದಲ್ಲಿ ಶಾಂತಿ-ಸಮಾಧಾನ ಸಹಜವಾಗಿ ನೆಲೆಸುತ್ತದೆ. ನಮ್ಮ ಬದುಕು ಭವ್ಯ, ದಿವ್ಯವಾಗುತ್ತದೆ.

ಸಂಭೂತಿ ಎಂದರೆ ಯಾವಾಗಲೂ ಇರುವಂಥದ್ದು. ಅ ಸಂಭೂತಿ ಎಂದರೆ ಮೊದಲು ಇರುವದಿಲ್ಲ, ಕೊನೆಗೂ ಇರುವುದಿಲ್ಲ. ಮಧ್ಯದಲ್ಲಿ ಮಾತ್ರ ತೋರುತ್ತದೆ. ಗಡಿಗೆಯು ಮೊದಲಿರಲಿಲ್ಲ, ಕೊನೆಗೂ ಇರುವುದಿಲ್ಲ. ಒಂದುದಿನ ಒಡೆದು ಹೋಗುತ್ತದೆ. ಮಣ್ಣು ಮಾತ್ರ ಮೊದಲೂ ಇತ್ತು, ಈಗಲೂ ಇದೆ, ಮುಂದೂ ಇರುತ್ತದೆ. ಅದು ಒಡೆದು ಹೋಗುವ ಪ್ರಶ್ನೆಯೇ ಇಲ್ಲ. ಈ ಪ್ರಪಂಚವು ಗಡಿಗೆಯಂತೆ. ಮಧ್ಯದಲ್ಲಿ ತೋರಿದೆ. ಇದು ಆದಿಯಲ್ಲಿ ಇರಲಿಲ್ಲ. ಅಂತ್ಯದಲ್ಲಿಯೂ ಇರುವುದಿಲ್ಲ. 'ಏತತ್‌ ಜಗತ್‌ ಕ್ಷ ಣಿಕಂ' ಈ ಜಗತ್ತು ಕ್ಷ ಣಿಕ, ನಶ್ವರ ಎಂದು ಬುದ್ಧನು ಸಾರಿದ. ಇದನ್ನು ಕ್ಷ ಣದರ್ಶನ ಎಂದು ಕರೆಯುತ್ತಾರೆ. ಪರಮಸತ್ಯ ಪರಮಾತ್ಮನು ಮಾತ್ರ ಗಡಿಗೆಯಂತೆ ಒಡೆದು ಹೋಗುವವನಲ್ಲ. ಅವನು ಗಡಿಗೆಗೆ ಆಧಾರವಾಗಿರುವ ಮಣ್ಣಿನಂತೆ, ಆಭರಣಕ್ಕೆ ಆಧಾರವಾಗಿರುವ ಚಿನ್ನದಂತೆ ಶಾಶ್ವತವಾಗಿ ಇರುತ್ತಾನೆ. ಈ ಪರಮಸತ್ಯವನ್ನೇ ಈಶ್ವರ, ಪರಮಾತ್ಮ, ಪರಬ್ರಹ್ಮ, ದೇವ ಎಂದು ಕರೆಯುತ್ತಾರೆ.

ಅಲ್ಲಮ ಪ್ರಭುದೇವರು ತಮ್ಮ ಒಂದು ವಚನದಲ್ಲಿ ಆ ಮಹಾದೇವನ ಕುರಿತು ಹೀಗೆ ಹೇಳುತ್ತಾರೆ-

ಆದಿ ಅನಾದಿ ಒಂದಾದಂದು, ಸೂರ್ಯ ಚಂದ್ರರೊಂದಾದಂದು

ಧರೆಯಾಕಾಶ ಒಂದಾದಂದು, ಗೊಹೇಶ್ವರ ಲಿಂಗ ನಿರಾಳ.

ಆದಿ-ಅನಾದಿ, ಸೂರ್ಯ-ಚಂದ್ರರು, ಭೂಮಿ-ಆಕಾಶ ಯಾವುದೂ ಇಲ್ಲದಾಗ ಬಯಲಿಗೆ ಬಯಲಾಗಿ ಇದ್ದವನೇ ದೇವನು. ಅವನೇ ಮಹಾ ಬಯಲು, ನಿರಾಳ! ದೇವನ ನಿಜಸ್ವರೂಪವನ್ನು ಅರಿತು ಪರಮಶಾಂತಿಯ ಪ್ರಾಪ್ತಿಗಾಗಿ ಮಾಡುವ ಪೂಜೆಯೇ ಸಾತ್ವಿಕ ಪೂಜೆ. ಇದರಿಂದ ನಮ್ಮ ಬದುಕು ಹೂವಂತೆ ಅರಳಿ ಎಲ್ಲರಿಗೂ ಸಂತಸದ ಸುಗಂಧವನ್ನೇ ನೀಡುತ್ತದೆ. ನಮ್ಮ ಋುಷಿ-ಮುನಿಗಳು, ಸಂತರು-ಶರಣರು ಈ ಬಗೆಯಾದ ಸಾತ್ವಿಕ ಉಪಾಸನೆಯನ್ನು ಯಾವುದೇ ಭೌತಿಕ ಬಯಕೆಗಳಿಲ್ಲದೆ ನಿಷ್ಕಾಮ ಭಾವನೆಯಿಂದ ಮಾಡಿ ಮುಕ್ತಾತ್ಮರಾದರು, ಜಗದ್ವಂದ್ಯರಾದರು.

ದೇವನ ಪೂಜೆಯ ಹೆಸರಿನಲ್ಲಿ ಕೆಲವರು ತಮ್ಮ ಸಿರಿ-ಸಂಪದ, ಶಕ್ತಿ-ಸಾಮರ್ಥ್ಯ‌, ವಿದ್ಯಾಬುದ್ಧಿಯನ್ನು ಪ್ರದರ್ಶಿಸುತ್ತಾರೆ. ದೇವರಿಗಿಂತ ತಾವೇ ದೊಡ್ಡವರಾಗಲು ಹೋಗುತ್ತಾರೆ. ನಾವಿಲ್ಲದಿದ್ದರೆ ದೇವರ ಗುಡಿಯ ಗಂಟೆಯೇ ಬಾರಿಸುವುದಿಲ್ಲ. ಎನ್ನುವಂತೆ ವರ್ತಿಸುತ್ತಾರೆ. ಇನ್ನು ಕೆಲವರು ನನ್ನಂತೆ ದೇವರನ್ನು ತಿಳಿದುಕೊಂಡವರು, ದೇವರ ಪೂಜೆ ಮಾಡುವವರೇ ಇಲ್ಲವೆಂದು ಹೇಳಿಕೊಳ್ಳುತ್ತಿರುತ್ತಾರೆ. ಒಟ್ಟಿನಲ್ಲಿ ಬರೀ ಬಾಹ್ಯ ಆಡಂಬರದಲ್ಲಿ ಮುಳುಗಿದ ಇವರು ಭಗವಂತನ ನಿಜಸ್ವರೂಪವನ್ನೇ ಮರೆಯುತ್ತಾರೆ

ಆಧಾರ : ಈಶ ಪ್ರಸಾದ

▪▪▪▪▪▪▪▪▪▪▪

ಅಂಥವರು ನಿಮಗೆಲ್ಲಾದರು ಸಿಕ್ಕರೆ ನನಗೂ ತೋರಿಸಿ

ಅಂಥವರು ನಿಮಗೆಲ್ಲಾದರು ಸಿಕ್ಕರೆ ನನಗೂ ತೋರಿಸಿ!

ಕೆಲವರಿಗೆ ದುಡ್ಡಿನಲ್ಲಿ ಸಂತೋಷ ಸಿಕ್ಕರೆ, ಇನ್ನೊಬ್ಬರಿಗೆ ಕೀರ್ತಿಯಲ್ಲಿ ಸಿಗುತ್ತದೆ. ಹಾಗಂತ ಹಣ-ಹೆಸರು ಸಂಪಾದಿಸಿದವರೆಲ್ಲ ನೆಮ್ಮದಿಯಿಂದಿದ್ದಾರೆ ಎಂದು ಹೇಳಲಾಗದು. ಹಣದ ಹಿಂದೆ ಬಿದ್ದು ನೆಮ್ಮದಿ ಹಾಳು ಮಾಡಿಕೊಂಡವರಿದ್ದಾರೆ, ಬಡತನವಿದ್ದರೂ ಸಂತೃಪ್ತ ಜೀವನ ನಡೆಸುವವರಿದ್ದಾರೆ.

ನೀವು ಎಲ್ಲ ರೀತಿಯ ಜನರನ್ನು ಭೇಟಿ ಮಾಡಿರಬಹುದು. ಹಣ ಬೇಡ ಎನ್ನುವವರು, ಕೀರ್ತಿ ಬೇಡ ಎನ್ನುವವರು, ಐಷಾರಾಮಿ ಜೀವನ ಬೇಡ ಎನ್ನುವವರು, ಶ್ರಮ ಪಟ್ಟು ಕೆಲಸ ಮಾಡಲು ಇಚ್ಛಿಸದವರು ನಮ್ಮ-ನಿಮ್ಮ ನಡುವೆ ಇದ್ದಾರೆ. ಆದರೆ ಸಂತೋಷ-ನೆಮ್ಮದಿ ಬೇಡ ಎನ್ನುವವರು ನಿಮಗೆ ಸಿಕ್ಕಿದ್ದಾರೆಯೇ? ಇಲ್ಲ ತಾನೆ? ನಾನು ಕೂಡ ಅವೆಷ್ಟೋ ದೇಶಗಳನ್ನು ಸುತ್ತಿದ್ದೇನೆ, ಜನರನ್ನು ಭೇಟಿ ಮಾಡಿದ್ದೇನೆ. ಆದರೆ, ‘ನನಗೆ ಸಂತೋಷದಿಂದಿರಲು ಇಷ್ಟವಿಲ್ಲ ಸ್ವಾಮಿ’ ಎಂದು ಹೇಳಿದ ಒಬ್ಬನೇ ಒಬ್ಬ ಕೂಡ ಇಲ್ಲಿಯವರೆಗೆ ಸಿಕ್ಕಿಲ್ಲ. ಅಂಥವರು ನಿಮಗೆಲ್ಲಾದರು ಸಿಕ್ಕಿದ್ದರೆ ದಯವಿಟ್ಟು ನನಗೂ ತಿಳಿಸಿಕೊಡಿ. ಏಕೆಂದರೆ ನನ್ನ ಪ್ರವಚನಗಳನ್ನು ಕೇಳಲು ಬರುವ ಅಸಂಖ್ಯ ಜನರು ‘ಜೀವನದಲ್ಲಿ ಸಂತೋಷ, ನೆಮ್ಮದಿಯೇ ಇಲ್ಲವಾಗಿದೆ ಸ್ವಾಮೀಜಿ. ಹಣಕಾಸಿಗೇನೂ ಕೊರತೆಯಿಲ್ಲ ಆದರೆ ನೆಮ್ಮದಿ ಮಾಯವಾಗಿದೆ. ಏನು ಮಾಡಲಿ?’ ಎಂದು ನನ್ನನ್ನೇ ಕೇಳಿದ್ದಾರೆ.

ನನ್ನ ನಂಬಿಕೆಯ ಪ್ರಕಾರ ಸಂತೋಷವನ್ನು ಬಯಸದ ಮನುಷ್ಯನೊಬ್ಬ ಇರಲೂ ಸಾಧ್ಯವಿಲ್ಲ. ಹೌದು, ಪ್ರತಿ ಮನುಷ್ಯನ ಅಂತಿಮ ಗುರಿಯೇ ಸಂತೋಷದಿಂದ ಜೀವನ ನಡೆಸುವುದು. ಹಾಗಾದರೆ ಈ ಜಗತ್ತಿನಲ್ಲಿ ಎಲ್ಲರೂ ಸುಖಿಗಳೇ? ಇಲ್ಲ, ಎಲ್ಲರಿಗೂ ಸಂತೋಷ, ನೆಮ್ಮದಿ ಸಿಗುವುದಿಲ್ಲ. ಕೆಲವರಿಗೆ ಅದು ಯಾವತ್ತೂ ಮರಳುಗಾಡಿನ ಮರೀಚಿಕೆಯಿದ್ದಂತೆ. ಏಕೆಂದರೆ ಸಂತೋಷ ಎಲ್ಲಿದೆ ಎಂಬುದು ಅನೇಕರಿಗೆ ಗೊತ್ತಿಲ್ಲ.

ಕೆಲವರಿಗೆ ದುಡ್ಡಿನಲ್ಲಿ ಸಂತೋಷ ಸಿಕ್ಕರೆ, ಇನ್ನೊಬ್ಬರಿಗೆ ಕೀರ್ತಿಯಲ್ಲಿ ಸಿಗುತ್ತದೆ. ಹಾಗಂತ ಹಣ-ಹೆಸರು ಸಂಪಾದಿಸಿದವರೆಲ್ಲ ನೆಮ್ಮದಿಯಿಂದಿದ್ದಾರೆ ಎಂದು ಹೇಳಲಾಗದು. ಹಣದ ಹಿಂದೆ ಬಿದ್ದು ನೆಮ್ಮದಿ ಹಾಳು ಮಾಡಿಕೊಂಡವರಿದ್ದಾರೆ, ಬಡತನವಿದ್ದರೂ ಸಂತೃಪ್ತ ಜೀವನ ನಡೆಸುವವರಿದ್ದಾರೆ.  ಬದುಕಿನ ಸಣ್ಣ ಪುಟ್ಟ ಸಂತೋಷವನ್ನು ಹಾಳು ಮಾಡುತ್ತಿರುವುದೇ ತೀರದ ಆಸೆಗಳು. ಮನುಷ್ಯನ ಆಸೆಗಳಿಗೆ ಮಿತಿ ಎಂಬುದೇ ಇಲ್ಲ. ನಮ್ಮ ಆಕಾಂಕ್ಷೆಗಳ ಚೀಲದಲ್ಲಿ ದೊಡ್ಡ ತೂತು ಬಿದ್ದಿರುವ ಹಾಗಿದೆ. ಏನೇ ಮಾಡಿದರೂ ಆಸೆಗಳು ಪೂರೈಸುವುದಿಲ್ಲ. ಅವುಗಳ ಬೆಂಬೀಳುವ ನಾವು ಇರುವುದನ್ನು ಅನುಭವಿಸುವುದೂ ಇಲ್ಲ. ಸಾಧಾರಣ ಕಾರಿನಲ್ಲಿ ಸಂಚರಿಸುವವನೊಬ್ಬ, ತನ್ನಲ್ಲಿ ದುಬಾರಿ ಕಾರು ಇಲ್ಲವಲ್ಲ ಎಂದು ದುಃಖಿಸುತ್ತಾನೆ. ಅದೇ ಬೈಕ್ ಇರುವವನಿಗೆ ಕಾರಿಲ್ಲವಲ್ಲ ಎಂಬ ಕೊರಗು. ಸೈಕಲ್‌ನಲ್ಲಿ ಹೋಗುವವನ ಕಣ್ಣು ಬೈಕ್‌ನವನ ಮೇಲೆ.

ಪಾದಚಾರಿಗೆ ಸೈಕಲ್ ಇದ್ದಿದ್ದರೆ ಎಂಬ ಬಯಕೆ. ಚಪ್ಪಲಿಯಿಲ್ಲದೆ ನಡೆಯುವವನಿಗೆ ಚಪ್ಪಲಿ ಬೇಕು, ಆದರೆ ಕಾಲೇ ಇಲ್ಲದವನಿಗೆ ಕಾಲಿರುವವನ ಮೇಲೆ ಅಸೂಯೆ….ಹೀಗೆ ನಾವೆಲ್ಲರೂ ಬೇರೆಯವರೊಂದಿಗೆ ನಮ್ಮನ್ನು ನಾವು ಹೋಲಿಸಿಕೊಂಡು ತೀರಲಾರದ ಆಸೆಗಳ ಬಲೆಯಲ್ಲಿ ಬಿದ್ದು ಅತೃಪ್ತ ಜೀವನ ನಡೆಸುತ್ತೇವೆ. ಇಂಗ್ಲಿಷ್‌ನಲ್ಲಿ ಒಂದು ಮಾತಿದೆ- He who knows that enough is enough will always have enough.

ನೆಮ್ಮದಿಯ ಬದುಕು ನಡೆಸಲು ಏನು ಬೇಕು, ಎಷ್ಟು ಬೇಕು ಎಂದು ತಿಳಿದಿರುವವನಿಗೆ ಸಂತೃಪ್ತ ಜೀವನ ನಡೆಸಲು ಬೇಕಾದ್ದೆಲ್ಲವೂ ಇರುತ್ತದಂತೆ. ಅದಕ್ಕೆ ಸಂಬಂಧಿಸಿದ ಕತೆಯೊಂದಿದೆ. ಅದೊಂದು ಸುಂದರ ದ್ವೀಪ. ಅಲ್ಲಿ ಒಂದಷ್ಟು ಮೀನುಗಾರರು ವಾಸವಾಗಿದ್ದರು. ನಿರ್ಜನವಾಗಿದ್ದ ಆ ದ್ವೀಪಕ್ಕೆ ಆಗಾಗ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಅಲ್ಲೊಬ್ಬ ಮೀನುಗಾರನಿದ್ದ. ಜೀವನ ನಿರ್ವಹಣೆಗಾಗಿ ಮೀನುಗಾರಿಕೆ ನಡೆಸಿಕೊಂಡು, ಪ್ರವಾಸಿಗರಿಗಾಗಿ ದೋಣಿ ನಡೆಸುತ್ತ ಆರಾಮಾಗಿದ್ದ. ಅವನೆಂದೂ ದುಡ್ಡಿಗಾಗಿ ಆಸೆ ಪಟ್ಟವನಲ್ಲ. ಸಂಜೆ ಕೆಲಸ ಮುಗಿಸಿ ಬಂದು ಮಕ್ಕಳೊಡನೆ ಖುಷಿಯಿಂದ ಸಮಯ ಕಳೆಯುತ್ತಿದ್ದ. ಅವನೊಂದಿಗಿದ್ದ ಅನೇಕ ಗೆಳೆಯರು ಉದ್ಯೋಗ, ಸಂಪಾದನೆಯೆಂದು ಕುಟುಂಬ ತೊರೆದು ನಗರಗಳಿಗೆ ವಲಸೆ ಹೋಗಿದ್ದರು. ಹೀಗಿರುವಾಗ, ಒಮ್ಮೆ ಶ್ರೀಮಂತ ವ್ಯಾಪಾರಿಯೊಬ್ಬ ದ್ವೀಪದ ಸೌಂದರ್ಯ ಸವಿಯಲೆಂದು ಅಲ್ಲಿಗೆ ಬಂದ. ಮೀನುಗಾರ ಅವನನ್ನು ದ್ವೀಪದೆಲ್ಲೆಡೆ ಸುತ್ತಾಡಿಸಿದ. ದ್ವೀಪದ ಶ್ರೀಮಂತಿಕೆ ಗಮನಿಸಿ ಪ್ರವಾಸಿಗನ ವ್ಯಾಪಾರಿ ಬುದ್ಧಿ ಜಾಗೃತವಾಯ್ತು. ಅಲ್ಲೊಂದು ಐಷಾರಾಮಿ ಹೋಟೆಲ್, ವಸತಿಗೃಹ ನಿರ್ಮಿಸಿ ಅದ್ಭುತ ಪ್ರವಾಸಿತಾಣವನ್ನಾಗಿಸಿದರೆ ಹಣ ಮಾಡಬಹುದು ಎಂಬ ಯೋಚನೆ ಬಂತು.

‘ನೀನೇಕೆ ಇಲ್ಲೊಂದು ಹೋಟೆಲ್ ತೆರೆಯಬಾರದು. ಆಗ ಇಲ್ಲಿಗೆ ಬರುವವರ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ ಅಲ್ಲವೆ?’ ಎಂದು ಮೀನುಗಾರನನ್ನು ಕೇಳಿದ. ‘ಹೋಟೆಲ್…?’ ಗೊಂದಲದಿಂದ ಕೇಳಿದ ಮೀನುಗಾರ. ‘ಹೌದು, ಹೋಟೆಲ್. ಜತೆಗೆ ಇಲ್ಲಿ ರಜಾದಿನಗಳನ್ನು ಕಳೆಯಲು ಬರುವವರಿಗಾಗಿ ಒಂದು ಲಾಡ್‌ಜ್‌, ಹಾಲಿಡೆ ವಿಲೇಜ್ ನಿರ್ಮಿಸಿದರೆ ಕೈ ತುಂಬ ದುಡ್ಡು ಬರುತ್ತದೆ. ಇಂಥದ್ದೊಂದು ಜಾಗವನ್ನು ಹಾಗೇ ಸುಮ್ಮನೆ ಬಿಟ್ಟಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ’ ಎಂದ. ‘ಆದರೆ ನಾನೇಕೆ ಅವನ್ನೆಲ್ಲ ಮಾಡಬೇಕು?’ ಎಂದು ಕೇಳಿದ ಮೀನುಗಾರ. ‘ಅಯ್ಯೋ ದಡ್ಡ, ಈ ಜಾಗ ಚಿನ್ನದ ಮೊಟ್ಟೆಯಿಡುವ ಕೋಳಿಯಿದ್ದಂತೆ. ಒಮ್ಮೆ ಬಂಡವಾಳ ಹಾಕಿದರೆ ಸಾಕು. ನೀನು ನನಗಿಂತ ಶ್ರೀಮಂತನಾಗಬಲ್ಲೆ’ ಎಂದ ವ್ಯಾಪಾರಿ. ‘ಹಾಗಾದರೆ ಅದಕ್ಕೆಲ್ಲ ಎಷ್ಟು ವರ್ಷ ಬೇಕಾಗುತ್ತದೆ?’ ‘ನಾನು ಹೇಳಿದಂತೆ ಮಾಡಿದರೆ ಹೆಚ್ಚು ಕಡಿಮೆ ಮುಂದಿನ ಹತ್ತು ವರ್ಷಗಳಲ್ಲಿ ನೀನೊಬ್ಬ ಯಶಸ್ವಿ
ಉದ್ಯಮಿಯಾಗಿರುತ್ತೀಯ’. ‘ಹೌದಾ? ಆಮೇಲೆ ಅಷ್ಟೊಂದು ದುಡ್ಡು ತೆಗೆದುಕೊಂಡು ನಾನೇನು ಮಾಡಲಿ?’ ಎಂದು ಕೇಳಿದ ಮೀನುಗಾರ ನಿರ್ಲಿಪ್ತನಾಗಿ.

‘ಲೋ ದಡ್ಡಾ ಅದಕ್ಕೇ ನೀನಿನ್ನೂ ಮೀನು ಹಿಡಿಯುತ್ತಿದ್ದೀಯ. ಶ್ರೀಮಂತನಾದ ಮೇಲೆ ನೀನೂ ನನ್ನ ಹಾಗೆ ಪ್ರವಾಸ ಮಾಡಬಹುದು, ದ್ವೀಪಗಳನ್ನು ಸುತ್ತಬಹುದು, ಫಿಶಿಂಗ್ ಮಾಡಬಹುದು, ಹೆಂಡತಿ ಮಕ್ಕಳೊಡನೆ ಆರಾಮಾಗಿ ಸಮಯ ಕಳೆಯಬಹುದು’ ಎಂದು ವ್ಯಾಪಾರಿ. ‘ಅಯ್ಯೋ! ಅಷ್ಟೇನಾ? ನಾನು ಈಗ ಮಾಡುತ್ತಿ ರುವುದು ಅದನ್ನೇ ಅಲ್ವಾ? ಮತ್ತೇಕೆ ಅಷ್ಟು ಕಷ್ಟ ಪಡಲಿ ಹೇಳಿ?’ ಎಂದ ಮೀನುಗಾರ. ವ್ಯಾಪಾರಿಯಲ್ಲಿ ಉತ್ತರವಿರಲಿಲ್ಲ.

ರೈತನೊಬ್ಬ ತನ್ನ ಎಸ್ಟೇಟ್ ಹಾಗೂ ಅಲ್ಲಿದ್ದ ತನ್ನ ಮನೆಯನ್ನು ಮಾರಲು ನಿರ್ಧರಿಸಿದ. ಆತ ಹಲವಾರು ವರ್ಷಗಳಿಂದ ಆ
ಮನೆಯಲ್ಲಿ ನೆಲೆಸಿದ್ದ. ಆದರೆ ಇತ್ತೀಚೆಗೇಕೋ ಆ ಮನೆ ಚೆನ್ನಾಗಿಲ್ಲವೆಂದು, ಎಸ್ಟೇಟ್‌ನಲ್ಲಿ ಗಿಡ ಮರಗಳು ಒಣಗಿ ಹೋಗುತ್ತಿವೆಯೆಂದೂ, ಮಧ್ಯದ ಕೆರೆಯಲ್ಲಿ ಹೂಳು ತುಂಬಿಕೊಂಡಿದೆಯೆಂದೂ, ತೋಟದಿಂದ ಮನೆಗಿರುವ ದೂರ
ಜಾಸ್ತಿಿಯಾಯಿತು, ಎಸ್ಟೇಟ್‌ನಿಂದ ಸಿಟಿ ಬಹಳ ದೂರದಲ್ಲಿದೆಯೆಂದು….ಹೀಗೆ ಹಲವಾರು ತೊಂದರೆಗಳು ಎದ್ದೆೆದ್ದು ಕಾಣಿಸತೊಡಗಿದವು. ಕೊನೆಗೂ ಆತ ಒಂದು ನಿರ್ಧಾರಕ್ಕೆ ಬಂದ. ತನ್ನ ಎಸ್ಟೇಟ್ ಹಾಗೂ ಮನೆ ಮಾರಾಟಕ್ಕಿದೆಯೆಂದು, ಸೂಕ್ತ ವ್ಯಕ್ತಿಗಳ್ಯಾರಾದರೂ ಇದ್ದಾರೆಯೇ ಎಂದು ತಿಳಿಸಬೇಕೆಂದು ದಲ್ಲಾಳಿಯಲ್ಲಿ ಕೇಳಿಕೊಂಡ. ಅವರಿಗೆ ಸೂಕ್ತ ಕಮಿಷನ್ ಕೂಡ
ನೀಡಿದ. ಅದಾದ ನಂತರ ಆತನೂ ಬೇರೊಂದು ಜಾಗದ ಹುಡುಕಾಟದಲ್ಲಿದ್ದ. ಆದಷ್ಟು ಬೇಗ ಈ ಜಮೀನನ್ನು ಮಾರಿದರೆ
ಸಾಕು ಎಂದುಕೊಂಡ.

ಒಂದು ಬೆಳಗ್ಗೆೆ ಆತ ಪೇಪರ್ ಓದುತ್ತಿದ್ದಾಗ ಜಾಹೀರಾತೊಂದು ಕಣ್ಣಿಗೆ ಬಿತ್ತು. ‘ಸುಂದರ ಎಸ್ಟೇಟ್ ಮಾರಾಟಕ್ಕಿದೆ’ ಎಂದಿತ್ತು.
ಕುತೂಹಲದಿಂದ ಅದನ್ನು ಓದಿದ. ‘ನಗರದ ಜಂಜಾಟದಿಂದ ದೂರದಲ್ಲಿ ಮನೆಯಿರಬೇಕೆಂದು ಬಯಸುತ್ತಿದ್ದೀರ? ಹಾಗಾದರೆ
ಈ ಜಾಗವನ್ನೊಮ್ಮೆ ನೀವು ನೋಡಲೇಬೇಕು. ಈ ಎಸ್ಟೇಟ್ ಸಿಟಿಯಿಂದ ದೂರದಲ್ಲಿದ್ದರೂ ಸಕಲ ಮೂಲ ಸೌಕರ್ಯಗಳು
ಇಲ್ಲಿವೆ. ಹಸಿರಿನಿಂದ ಕಂಗೊಳಿಸುವ ಎಸ್ಟೇಟ್‌ನ ಮಧ್ಯೆದಲ್ಲಿ ಮನೆಯೊಂದಿದ್ದು, ಹಿಂಬದಿಯೇ ಕೆರೆ ಕೂಡ ಇದೆ. ಇನ್ನೇನು
ಬರಲಿರುವ ಚಳಿಗಾಲದಲ್ಲಿ ಮರ-ಗಿಡಗಳು ಮತ್ತೆ ಚಿಗುರಿ ಎಸ್ಟೇಟ್‌ನ ಸೌಂದರ್ಯ ಇಮ್ಮಡಿಯಾಗಲಿದೆ’ ಎಂದು ಬರೆದಿತ್ತು.

ಅದನ್ನು ಓದಿದ ರೈತನಿಗೆ ಬಹಳ ಖುಷಿಯಾಯಿತು. ವಾಸವಿದ್ದರೆ ಇಂಥ ಜಾಗದಲ್ಲಿ ವಾಸವಿರಬೇಕು, ಏನಾದರಾಗಲಿ ಈ ಎಸ್ಟೇಟ್
ನ್ನು ನಾನೇ ಕೊಂಡುಕೊಳ್ಳುತ್ತೇನೆ ಎಂದುಕೊಂಡ. ವಿಳಾಸ ಎಲ್ಲಿದೆ ಎಂದು ನೋಡಿದ. ಜಾಹೀರಾತಿನ ಕೊನೆಯಲ್ಲಿ ಎಸ್ಟೇಟ್‌ನ
ವಿಳಾಸ ಹಾಗೂ ಮಾಲೀಕನ ದೂರವಾಣಿ ಸಂಖ್ಯೆ ನಮೂದಿಸಲಾಗಿತ್ತು. ಆ ವಿಳಾಸ ನೋಡಿದ ಮೇಲೆ ಆತ ಎರಡೆರಡು ಬಾರಿ ಜಾಹೀರಾತನ್ನು ಓದಿದ. ಹೌದು, ಆ ಜಾಹೀರಾತು ಈತನ ಎಸ್ಟೇಟ್‌ನದ್ದೇ ಆಗಿತ್ತು. ಆತ ಕಾಣದಿದ್ದ ಎಸ್ಟೇಟ್‌ನ ಸೌಂದರ್ಯವನ್ನು ದಲ್ಲಾಳಿ ಕಂಡಿದ್ದ. ಅದನ್ನು ಸುಂದರ ಸಾಲುಗಳಲ್ಲಿ ಬರೆದು ಪತ್ರಿಕೆಗೆ ಜಾಹೀರಾತು ನೀಡಿದ್ದ. ಅದನ್ನು ಪದೇ ಪದೆ ಓದಿದ ಮೇಲೆ ರೈತನಿಗೂ ತನ್ನ ಎಸ್ಟೇಟ್‌ನ ಬಗ್ಗೆೆ ಹೆಮ್ಮೆಯೆನಿಸಿತು.

ಕೊನೆಗೆ ಆತ ದಲ್ಲಾಳಿಗೆ  ಫೋನಾಯಿಸಿ ‘ನಾನು ಮನಸ್ಸು ಬದಲಿಸಿದ್ದೇನೆ. ಎಸ್ಟೇಟನ್ನು ಮಾರುವುದಿಲ್ಲ. ನೀವು ನೀಡಿರುವ ಜಾಹೀರಾತನ್ನು ವಾಪಸ್ ತೆಗೆದುಕೊಳ್ಳಿ’ ಎಂದ. ಆಮೇಲೆ ಆತ ತನ್ನ ಎಸ್ಟೇಟ್‌ನ ಸೌಂದರ್ಯವನ್ನು ನೋಡುವ ದೃಷ್ಟಿಕೋನವೇ ಬದಲಾಯಿತು. ಕೆಲವೊಮ್ಮೆೆ ನಾವೂ ಕೂಡ ರೈತನ ಹಾಗೆಯೇ ವರ್ತಿಸುತ್ತೇವಲ್ಲವೆ?

Gour  Gopal prabhu

ವಸ್ತುಗಳ ಜತೆಗಿರುವ ಖುಷಿ ಕ್ಷಣಿಕ

🔹🔹🔹🔹🔹🔹🔹🔹🔹🔹🔹

ಅಜ್ಜಿಯೊಬ್ಬರು ಹಿಮಾಲಯದಲ್ಲಿ ಇರುತ್ತಿದ್ದರು. ಒಂದೊಮ್ಮೆ ಯಾವುದೋ ಕೆಲಸದ ಮೇಲೆ ಬೇರೆಲ್ಲಿಗೋ ಪ್ರಯಾಣಿಸುತ್ತಿದ್ದರು. ಹಿಮಾಲಯದಲ್ಲಿ ಆಕೆಗೆ ಒಂದು ಬೆಲೆಬಾಳುವ ಕಲ್ಲು ಸಿಕ್ಕಿತ್ತು. ಅದನ್ನು ತನ್ನ ಬ್ಯಾಗಿಗೆ ಹಾಕಿಕೊಂಡು ಪ್ರಯಾಣ ಮುಂದುವರಿಸುತ್ತಿದ್ದಳು. ಬಸ್ ಹತ್ತಿ ಕುಳಿತಾಗ, ತರುಣ ಯುವಕನೊಬ್ಬ ಅವರ ಪಕ್ಕ ಕೂತ. ಆತ ಬಸ್ ಗಡಿಬಿಡಿಯಲ್ಲಿ ಹತ್ತಿದ್ದ. ಹಸಿದವನಂತೆ ಕಾಣುತ್ತಿದ್ದ. ಅಂತೂ ಬಾಯಿಬಿಟ್ಟು ಅಜ್ಜಿಯ ಬಳಿ ‘ತಿನ್ನಲು ಏನಾದರೂ ಇದೆಯೇ?’ ಕೇಳಿದ. ಅಜ್ಜಿ ತನ್ನ ಬಳಿ ಏನಿದೆ ಎಂದು ನೋಡಲು ಬ್ಯಾಗ್‌ನನ್ನು ತೆಗೆದರು. ಅದರಲ್ಲಿ ಆ ಬೆಲೆಬಾಳುವ ಕಲ್ಲು ಕಾಣಿಸಿತು. ಆಗ ಆ ಯುವಕ ಈ ಕಲ್ಲನ್ನು ನನಗೆ ನೀಡಿ ಎಂದು ಕೇಳಿದ. ಅದಕ್ಕೆ ಅಜ್ಜಿ ಮರುಮಾತಾಡದೇ ಕಲ್ಲನ್ನು ನೀಡಿದಳು. ಇದನ್ನು ಮಾರಿಕೊಂಡರೆ ಜೀವನವಿಡೀ ಕೂತು ತಿನ್ನುವಷ್ಟು ಹಣ ಸಿಗುತ್ತದೆ ಎಂದು ಖುಷಿ ಪಟ್ಟ.

ಕೆಲ ಸಮಯದ ನಂತರ ಅಜ್ಜಿ ಬಸ್ ಇಳಿದು ತನ್ನ ದಾರಿ ಹುಡುಕಿ ಹೊರಟಳು. ಇದಾದ ದಿನಗಳ ನಂತರ ಆ ಹುಡುಗ ಅಜ್ಜಿಯನ್ನು ಹುಡುಕತೊಡಗಿದ. ಜತೆಗೆ ಆ ಕಲ್ಲೂ ಇತ್ತು. ಎಷ್ಟು ಹುಡುಕಿದರೂ ಅಜ್ಜಿ ಸಿಗುತ್ತಲೇ ಇರಲಿಲ್ಲ. ಆಗ ನೆನಪಾಯಿತು ಅಜ್ಜಿ ಹಿಮಾಲಯದಲ್ಲಿ ಇರುತ್ತಿದ್ದರು ಎಂದು. ಅಜ್ಜಿಯನ್ನು ಹುಡುಕುತ್ತಾ ಅಲ್ಲಿಗೂ ಹೋದ. ಕೊನೆಗೂ ಅಜ್ಜಿ ಅವನಿಗೆ ಸಿಕ್ಕಿದರು. ಅಜ್ಜಿಯ ಬಳಿ ಹೋಗಿ ಕಲ್ಲನ್ನು ವಾಪಸ್ ನೀಡಿದ. ಅದಕ್ಕೆ ಅಜ್ಜಿ ‘ ಇದನ್ನು ಏಕೆ ನನಗೆ ವಾಪಸ್ ಮಾಡುತ್ತಿದ್ದೀಯ?’ ಎಂದರು. ಅದಕ್ಕೆ ಆತ ‘ ನಿಮ್ಮಲ್ಲಿ ಇದಕ್ಕಿಂತ ಇನ್ನೊಂದಿದೆ ಅದಕ್ಕಾಗಿ ಬಂದೆ’ ಎಂದ. ಅದಕ್ಕೆ ಅಜ್ಜಿ ‘ ಇಲ್ಲಪ್ಪಾ ನನ್ನ ಬಳಿ ಇದಕ್ಕಿಂತ ಬೆಲೆಬಾಳುವುದು ಏನೂ ಇಲ್ಲ’ ಎಂದಳು. ಅದಕ್ಕೆ ಆತ ‘ ಇಷ್ಟು ಬೆಲೆ ಬಾಳುವ ವಸ್ತುವನ್ನು ಕೇಳಿದ ತಕ್ಷಣ ಯಾರೋ ದಾರಿಹೋಕನಿಗೆ ನೀಡುತ್ತೀರಿ ಎಂದರೆ ನಿಮ್ಮ ಮನಸ್ಸು ಎಷ್ಟು ವಿಶಾಲವಾದ್ದು, ಆ ಉದಾರ ಬುದ್ಧಿ ನನಗೆ ಬೇಕು. ಅದನ್ನು ನಿಮ್ಮ ಜತೆಗಿದ್ದರೆ ನಾನು ಕಲಿಯುತ್ತೇನೆ’ ಎಂದ.

ವಸ್ತುಗಳ ಜತೆಗಿರುವ ಖುಷಿ ಕ್ಷಣಿಕ. ಅವು ನಮ್ಮ ಇಂದಿರುತ್ತವೆ ನಾಳೆ ಹೋಗುತ್ತವೆ. ಒಬ್ಬರನ್ನು ನೋಡಿ ಅವರ ಬಳಿ ಇರುವ ಆ ವಸ್ತು ನನಗೂ ಬೇಕು ಎಂದುಕೊಳ್ಳಬೇಡಿ. ಅವರಲ್ಲಿರುವ ಒಳ್ಳೆ ಗುಣ ನೋಡಿ, ಈ ಗುಣವನ್ನು ನಾನೂ ಅಳವಡಿಸಿಕೊಂಡರೆ ನನ್ನ ಜೀವನ ಇನ್ನೂ ಸುಂದರವಾಗುತ್ತದೆ ಎಂದು ಆಲೋಚಿಸಿ. ವಸ್ತುಗಳು ಯಾವಾಗ ಬೇಕಾದರೂ ನಿಮ್ಮ ಕೈತಪ್ಪಬಹುದು. ಆದರೆ ನೀವು ಅವರಿಂದ ಕಲಿತ ಒಳ್ಳೆ ಗುಣಗಳು ನೀವು ಸಾಯುವವರೆಗೂ ನಿಮ್ಮ ಜತೆಯೇ ಇರುತ್ತವೆ.

***

🔸🔸🔸🔸🔸🔸🔸🔸🔸🔸🔸

ಜೀವನ ಬೇಜಾರು ಅನ್ನೋರು ಬುದ್ಧನ ಈ 19 ವಿಷಯಗಳನ್ನ ತಲೇಲಿ ಇಟ್ಕೊಂಡ್ರೆ ಒಳ್ಳೇದು

ಜೀವನ ಬೇಜಾರು ಅನ್ನೋರು ಬುದ್ಧನ ಈ 19 ವಿಷಯಗಳನ್ನ ತಲೇಲಿ ಇಟ್ಕೊಂಡ್ರೆ ಒಳ್ಳೇದು


👉🏾1.ಒಳ್ಳೆಯವರಾಗಿರಿ ಆದರೆ ಅದನ್ನು ಸಾಬೀತುಪಡಿಸವಲ್ಲಿಯೇ ನಿಮ್ಮ ಜೀವನವನ್ನು ಮತ್ತು ಸಮಯವನ್ನು ವ್ಯರ್ಥ ಮಾಡಬೇಡಿ.

👉🏾2.ನೀವೇ ನಿಮ್ಮ ಜೀವನದ ಚಾಲಕರು ಆ ಚಾಲನೆಯ ಅಧಿಕಾರವನ್ನು ಮತ್ತು ಆ ಸ್ಥಳವನ್ನು ಬೇರೆಯವರು ಕದಿಯಲು ಅವಕಾಶ ಮಾಡಿಕೊಡಬೇಡಿ.

👉🏾3.ಯಾವತ್ತೂ ಬೆರೆಯವರಲ್ಲಿ ಕ್ಷಮೆ ಕೇಳಬೇಡಿ ಯಾಕೆಂದರೆ ಅವರು ನಿಮ್ಮ ಮಾತನ್ನು ತಪ್ಪು ಅರ್ಥ ಮಾಡಿಕೊಂಡರೆ ನೀವ್ಯಾಕೆಕ್ಷಮೆ ಕೇಳಬೇಕು.

👉🏾4.ನಾವು ಒಂಟಿಯಾಗಿ ಇದ್ದರೆ ಅದರ ಅರ್ಥ ನಾವು ಒಂಟಿಯಾಗಿದ್ದೇವೆ ಎಂದು ಅಲ್ಲ.ಅದರ ಅರ್ಥ ನಾವು ಒಬ್ಬರೇ ಎಲ್ಲಾ ವಿಷಯಗಳನ್ನು ಎದುರಿಸುವ ಸಾಮರ್ಥ್ಯ ನಮಗಿದೆ ಎಂದು.

👉🏾5.ಎಲ್ಲೇ ಆಗಲಿ ನೀವು ಒಂದೇ ತರದ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಒಂದೇ ತರನಾದ ವ್ಯಕ್ತಿಯಾಗಿರಿ ಅದು ನಿಮ್ಮ ಸ್ವಂತ ವಿಷಯದಲ್ಲಾಗಲಿ,ಸರ್ವಜನಿಕವಾಗಲಿ ಅಥವಾ ಖಾಸಗಿಯಾಗಲಿ.

👉🏾6. ಹಣ ಮನುಷ್ಯರ ಜೀವನದ ಒಂದು ಅತೀ ಕೆಟ್ಟ ಸಂಶೋಧನೆ.ಆದರೆ ಅದು ನಂಬಿಕೆಗೆ ಮನುಷ್ಯನು ಅರ್ಹನೋ ಆಲ್ಲೊವೋ ಎಂಬುದನ್ನು ಮತ್ತು ಮನುಷ್ಯನ ಸ್ವಭಾವವನ್ನು ಪರೀಕ್ಷೆ ಮಾಡುತ್ತದೆ.

👉🏾7.ಈ ಜಗತ್ತಿನ ತುಂಬೆಲ್ಲಾ ಆಧಿಕವಾಗಿ ರಾಕ್ಷಸರೇ ಇರುವುದು ಆದರೆ ಸ್ನೇಹಿತರಂತೆ ಮುಖವಾಡವನ್ನು ಹಾಕಿಕೊಂಡಿದ್ದಾರೆ ಅಷ್ಟೇ.

👉🏾8.ನಿಮ್ಮ ಮಕ್ಕಳನ್ನು ಶ್ರೀಮಂತರನ್ನಾಗಿ ಮಾಡಿಸಲು ಶಿಕ್ಷಣ ಕೊಡಿಸಬೇಡಿ ಅದರ ಬದಲು ಜೀವನದಲ್ಲಿ ಹೇಗೆ ಖುಷಿಯಾಗಿರುವುದು ಎಂದು ಹೇಳಿಕೊಡಿ.ಆಗ ಅವರು ಬೆಳೆದು ದೊಡ್ಡವರಾದಾಗ ವಸ್ತುಗಳ ಮಹತ್ವ ತಿಳಿಯುತ್ತಾರೆ ಬರೀ ಅದರ ಬೆಲೆಯನಲ್ಲ.

👉🏾9.ನೀವು ಎಷ್ಟು ಕಡಿಮೆ ಕೆಟ್ಟ ವ್ಯಕ್ತಿಗಳಿಗೆ ಸ್ಪಂದಿಸದೇ ಇರುತ್ತೀರೋ ಜೀವನದಲ್ಲಿ ಅಷ್ಟು ನೆಮ್ಮದಿಯಿಂದ ಇರುತ್ತೀರಿ.

👉🏾10.ಬಲಹೀನ ವ್ಯಕ್ತಿಗಳು ಪ್ರತೀಕಾರವನ್ನು ತೆಗೆದುಕೊಳ್ಳುತ್ತಾರೆ. ಬಲವಾದ ವ್ಯಕ್ತಿಗಳು ಕ್ಷಮಿಸಿಬಿಡುತ್ತಾರೆ,ಬುದ್ದಿವಂತ ವ್ಯಕ್ತಿಗಳು ನಿರ್ಲಕ್ಷಿಸುತ್ತಾರೆ.

👉🏾11.ನೀವು ಸಂತೋಷದಿಂದ ಇರಬೇಕಾದರೆ ಹಿಂದೆ ನಿಮ್ಮ ಜೀವನದಲ್ಲಿ ಆದ ಘಟನೆಗಳನ್ನು ನೆನೆಸಿಕೊಂಡು ಕೊರಗಬೇಡಿ.ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳಬೇಡಿ. ಈಗಿರುವ ಜೀವನದ ಬಗ್ಗೆ ಸಂಪೂರ್ಣವಾಗಿ ಹೇಗಿರಬೇಕೆಂದು ಯೋಚಿಸಿ.

👉🏾12.ನೀವು ನಿಮ್ಮ ಜೀವನದಲ್ಲಿ ಗಳಿಸುವ ಸಂತೋಷಕ್ಕೆ ನೀವೇ ಕಾರಣ ಕರ್ತರಾಗಬೇಕು.ಬೇರೆಯವರು ನಿಮ್ಮನ್ನು ಸಂತೋಷ ಪಡಿಸುತ್ತಾರೆ ಎಂದು ಅಂದುಕೊಂಡರೆ.ಅದು ಯಾವಾಗಲೂ ಕೊನೆಗೆ ನಿರಾಸೆಯಿಂದಲೇ ಕೊನೆಗೊಳ್ಳುತ್ತದೆ.

👉🏾13.ನಾನು ಸತ್ಯವನ್ನು ಹೇಳುವವರನ್ನು ಗೌರವಿಸುತ್ತೇನೆ.ಸತ್ಯವೂ ಎಷ್ಟೇ ಕಠಿಣವಾಗಿದ್ದರೂ ಸರಿಯೇ.

👉🏾14.ನೀವು ಜೀವನದಲ್ಲಿ ಗಿಣಿಯ ತರ ಇರಬೇಡಿ ಬದಲಿಗೆ ಹದ್ದುಗಳಾಗಿ ಇರಿ.ಗಿಣಿಯೂ ಅಧಿಕವಾಗಿ ಮಾತನಾಡುತ್ತದೆ. ಆದರೆಹದ್ದು ಶಾಂತವಾಗಿ ಇದ್ದು, ಅದಕ್ಕೆ ಆಕಾಶವನ್ನು ಮುಟ್ಟುವಂತಹಯೋಚನಾ ಶಕ್ತಿ ಇದೆ.

👉🏾15.ಜೀವನದಲ್ಲಿ ಬದಲಾವಣೆಯನ್ನು ಕಾಲಕ್ಕೆ ತಕ್ಕಂತೆ ಮಾಡಿಕೊಳ್ಳಿ,ಎದರಿಕೊಳ್ಳಬೇಡಿ,ನೀವು ಯಾವುದೋ ಒಂದು ಒಳ್ಳೆಯದನ್ನು ಕಳೆದುಕೊಳ್ಳುತ್ತೀರ ಆದರೆ ಏನೋ ಒಂದು ಉತ್ತಮವಾದುದನ್ನು ಪಡೆದುಕೊಳ್ಳುತ್ತೀರ.

👉🏾16.ನಮ್ಮ ತೊಂದರೆಗಳ ಬಗ್ಗೆ ಮಾತನಾಡುವುದೇ ನಮ್ಮ ಅತೀ ದೊಡ್ಡ ತಪ್ಪು,ಹುಚ್ಚು ಚಟವಾಗಿದ್ದು ,ಅಂತಹ ಅಭ್ಯಾಸವನ್ನು ಬಿಟ್ಟುಬಿಡಿ,ನಿಮ್ಮ ಸಂತೋಷ ಮತ್ತು ಖುಷಿಯ ಬಗ್ಗೆ ಮಾತನಾಡಿ.

👉🏾17.ಯಾರ ಜೊತೆಗೂ ಯಾವತ್ತೂ ಕೂಡ ಅತಿಯಾದ ಬಾಂಧವ್ಯವನ್ನು ಇಟ್ಟುಕೊಳ್ಳಬೇಡಿ,ಯಾಕೆಂದರೆ ಆ ಅತಿಯಾದ ಬಾಂಧವ್ಯ ಅತಿಯಾದ ನಿರೀಕ್ಷೆಗಳನ್ನು ತಂದೊಡ್ಡಿ ಆ ನೀರಿಕ್ಷೆಗಳು ಸುಳ್ಳಾದಾಗ ನೋವಿನಿಂದ ಬಳಲುವಂತೆ ಮಾಡುತ್ತದೆ.

👉🏾18.ಅತಿಯಾದ ಯೋಚನೆಯೇ ನಮ್ಮ ಜೀವನದ ಸಂತೋಷವನ್ನು ಹಾಳುಮಾಡಿದುಃಖಪಡಲು ಅತೀ ದೊಡ್ಡ ಕಾರಣವಾಗುತ್ತದೆ.

🍁🍁🍁🍁🍁🍁🍁🍁🍁🍁🍁

Your success and failure

▪▪▪▪▪▪▪▪▪▪▪
Your success and failure , happiness and sorrow,

love and hate, peace and stress

lies in response to situations

And this response depends on Your attitude.

You have the power of Choice, the power to choose…

Choose wisely..and shape up the life which you desire…

*REMEMBER*

Your attitude and Your choices Make your Life.

▪▪▪▪▪▪▪▪▪▪▪

ಆತ್ಮವಿಶ್ವಾಸವೆಂಬ ಅಕ್ಷಯ ನಿಧಿ

ಆತ್ಮವಿಶ್ವಾಸವೆಂಬ ಅಕ್ಷಯ ನಿಧಿ

ಡಾ. ಡಿ. ವೀರೇಂದ್ರ ಹೆಗ್ಗಡೆ, ಶ್ರೀಕ್ಷೇತ್ರ ಧರ್ಮಸ್ಥಳ

ಈ ಜಗತ್ತಿನಲ್ಲಿ ಜನಿಸಿದ ಮಾನವನಿಗೆ ಭಗವಂತನು ಅತ್ಯಂತ ಸುಂದರವೂ, ಯುಕ್ತವೂ ಆದ ಶರೀರವನ್ನು ನೀಡಿದ್ದಾನೆ. ಈ ಶರೀರದಲ್ಲಿ ಐದು ಇಂದ್ರಿಯಗಳನ್ನೂ, ಅವುಗಳನ್ನು ಬಳಸಲು ಸೂಕ್ತವಾದ ಬುದ್ಧಿಯನ್ನೂ ನೀಡಿದ್ದಾನೆ. ಎಷ್ಟೇ ಉಪಯುಕ್ತ ಸಾಧನಗಳು ಇದ್ದರೂ ಅವುಗಳನ್ನು ಸಂದರ್ಭಕ್ಕೆ ಸರಿಯಾಗಿ ಸಮರ್ಪಕವಾಗಿ ಬಳಸಿಕೊಳ್ಳುವ ಆತ್ಮವಿಶ್ವಾಸದ ಕೊರತೆಯಿಂದಾಗಿ ಅನೇಕ ಬಾರಿ ವಿಫಲನಾಗಿ ಬಿಡುವುದುಂಟು. ಈ ನಿಟ್ಟಿನಲ್ಲಿ ಆತ್ಮವಿಶ್ವಾಸದ ಮಹತ್ವವನ್ನು ನಿರೂಪಿಸುವಂತಹ ಒಂದು ಪ್ರಸಂಗ ಇಲ್ಲಿದೆ.

ಅಮೆರಿಕ ದೇಶದ ನ್ಯೂಯಾರ್ಕ್‌ ನಗರದಲ್ಲಿ ಎಡ್ವರ್ಡ್‌ ಐನಿಸ್‌ ಎಂಬ ಒಬ್ಬ ಶ್ರೀಮಂತನಿದ್ದನು. ಆತ ಧರ್ಮ-ಕರ್ಮ, ಭಗವಂತ ಇತ್ಯಾದಿ ವಿಚಾರಗಳಲ್ಲಿ ಅಪಾರ ವಿಶ್ವಾಸ ಉಳ್ಳವನಾಗಿದ್ದ. ತನ್ನ ಬಂಧು-ಬಳಗದವರ ಪೈಕಿ ಬಹಳ ಬಡವನಾಗಿದ್ದರೂ ಅವನಲ್ಲಿ ಅದ್ಭುತ ಆತ್ಮವಿಶ್ವಾಸವಿತ್ತು. ಆದ್ದರಿಂದಲೇ ಎಲ್ಲರೂ ಆತನನ್ನು ಗೌರವಿಸುತ್ತಿದ್ದರು. ಒಮ್ಮೆ ಊರಿಂದ ಹೊರಗೆ ನೆರೆಯ ನಗರಕ್ಕೆ ಹೋಗುತ್ತಿರುವಾಗ ತಾನು ನಡೆಯುತ್ತಿರುವ ದಾರಿಯ ಪಕ್ಕದ ಪರಿಸರದ ಭೂಮಿಯಡಿಯಲ್ಲಿ ಸಾಕಷ್ಟು ಬಂಗಾರದ ನಿಧಿ ಇದೆ ಎಂದೆನಿಸಿತು. ಪಕ್ಕದ ಊರಲ್ಲಿ ಅವನ ಪರಿಚಯದ ಒಬ್ಬ ಜ್ಯೋತಿಷಿಯಿದ್ದರು. ಅವರೊಡನೆ ಈ ಬಂಗಾರದ ನಿಧಿಯ ಬಗ್ಗೆ ಸಲಹೆ ಕೇಳಿದ. ಐನಿಸ್‌ನ ಬಳಿ ಹಣವಿರದಿದ್ದರೂ ಆತನ ಆತ್ಮವಿಶ್ವಾಸದ ಬಗ್ಗೆ ಜ್ಯೋತಿಷಿಗೆ ಪೂರ್ಣ ಭರವಸೆ ಇದ್ದುದರಿಂದ 'ನೀನು ಮುನ್ನಡೆಯುವಂತವನಾಗು. ಭಗವತ್‌ ಕೃಪೆಯಿಂದ ಯಶಸ್ವಿಯಾಗಬಲ್ಲೆ' ಎಂದು ಸಲಹೆ ನೀಡಿದರು.

ಅಂತೆಯೇ ಐನಿಸ್‌ ತನ್ನ ಬಳಿಯಿದ್ದ ಸಾಧನ-ಸಂಪತ್ತು ಮತ್ತು ಗೆಳೆಯರ ನೆರವು ಪಡೆದು, ಬಂಗಾರದ ನಿಧಿ ಇದ್ದಿರಬಹುದಾದ ಜಮೀನನ್ನು ಖರೀದಿಸಿ, ಅಲ್ಲಿ ಅಗೆತವನ್ನು ಆರಂಭಿಸಿಯೇ ಬಿಟ್ಟ. ಹಾಗೆ ಅಗೆದಾಗ ಕೆಲವು ಬೆಳ್ಳಿಯ ತುಂಡುಗಳು ದೊರೆತರೂ ಬಂಗಾರ ಸಿಗಲೇ ಇಲ್ಲ. ಆಗ ಆತ ತನ್ನ ಕುಟುಂಬದ ಹಿರಿಯ ಮಹಿಳೆಯಾದ ಮಾರಿಯಾ ಮಾರ್ಲೆ ಎಂಬಾಕೆಯೊಡನೆ ನುಡಿದ- ''ನನ್ನ ಆತ್ಮವಿಶ್ವಾಸದಲ್ಲಿ ನನಗೆ ಪೂರ್ಣ ನಂಬಿಕೆಯಿದೆ. ಅಲ್ಲಿ ಬಂಗಾರ ಇದ್ದೇ ಇದೆ. ನನಗೆ ಸಿಗದಿದ್ದರೂ ಮುಂದೆ ಸಿಗಲಿದೆ,'' ಎಂದು ಹೇಳಿ ಮಡಿದೇ ಬಿಟ್ಟ.

ಆತನ ಮೃತ್ಯುವಿನ 16 ವರ್ಷಗಳ ಬಳಿಕ ಮಾರಿಯಾ ಮಾರ್ಲೆ ಎಂಬ ಮಹಿಳೆ ಮತ್ತೆ ಅಗೆತವನ್ನು ಆರಂಭಿಸಿದಳು. 600 ಅಡಿ ಆಳಕ್ಕೆ ಹೋದಾಗ ಚಿನ್ನ, ಬೆಳ್ಳಿ, ತಾಮ್ರ, ಸತುಗಳ ನಿಧಿಯೇ ದೊರೆಯಿತು. ಇದರಿಂದ ಲಕ್ಷಾಂತರ ಡಾಲರ್‌ಗಳ ಲಾಭವಾದಾಗ ಆ ಮಹಿಳೆ ನುಡಿದರು- ''ಆತ್ಮವಿಶ್ವಾಸವೇ ಒಂದು ಮಹಾ ನಿಧಿ ಇದ್ದಂತೆ. ಇದರಿಂದ ಮನುಷ್ಯನ ಸ್ವಂತಕ್ಕೆ ಲಾಭವಾಗದಿದ್ದರೂ ಇತರರ ಕಲ್ಯಾಣಕ್ಕೆ ನೆರವಾಗುವುದರಲ್ಲಿ ಸಂಶಯವಿಲ್ಲ,'' ಆ ಮಹಿಳೆ ಆ ನಿಧಿಯನ್ನು ಎಡ್ವರ್ಡ್‌ನ ಹೆಸರಲ್ಲಿ ಲೋಕಕಲ್ಯಾಣಕ್ಕೆ ಬಳಸಲು ನಿರ್ಧರಿಸಿದಳು.

ಹೀಗೆ ಆತ್ಮವಿಶ್ವಾಸದ ಫಲವು ತಕ್ಷ ಣವೇ ದೊರಕದಿದ್ದರೂ ಪ್ರಯತ್ನವನ್ನು ಮುನ್ನಡೆಸಿದಲ್ಲಿ ಯಶಸ್ಸು ದೊರೆಯುವುದರಲ್ಲಿ ಸಂದೇಹವಿಲ್ಲ. ಆತ್ಮವಿಶ್ವಾಸವುಳ್ಳವರು, ಆಶಾವಾದಿಗಳಾಗಿ ಭಗವಂತನನ್ನು ನಂಬಿಸಿ ಕಾರ್ಯವನ್ನು ಮುನ್ನಡೆಸಿದಾಗ ಸಫಲತೆ ದೊರೆತೇ ತೀರುವುದು. ಆತ್ಮವಿಶ್ವಾಸವುಳ್ಳವರು ಭಗವತ್‌ ಕೃಪೆಯೊಡನೆ ಪರಿಶ್ರಮ ವಹಿಸಿದಾಗ ಯಶಸ್ಸು ಗಳಿಸುವುದು ಖಂಡಿತ.

〰〰〰〰〰〰〰〰〰〰〰

ನಿಮ್ಮ ಜೀವನಶೈಲಿಯಿಂದ ಈ 12 ಅಭ್ಯಾಸ ಬಿಟ್ಟುಬಿಟ್ಟರೆ ಸಂತೋಷ ನಿಮ್ನ ಹುಡುಕ್ಕೊಂಡ್ ಬರುತ್ತೆ

ನಿಮ್ಮ ಜೀವನಶೈಲಿಯಿಂದ ಈ 12 ಅಭ್ಯಾಸ ಬಿಟ್ಟುಬಿಟ್ಟರೆ ಸಂತೋಷ ನಿಮ್ನ ಹುಡುಕ್ಕೊಂಡ್ ಬರುತ್ತೆ

ಬದುಕಿನಲ್ಲಿ ಖುಷಿಯಾಗಿರೋದೇ ಎಲ್ಲರ ಗುರಿ. ಆದರೆ ಒಂದೇ ರೀತಿ ಯೋಚನೆ ಮಾಡೋದ್ರಿಂದ ನಾವೇನು ಮಾಡ್ಬೇಕು, ಬದುಕಿನಲ್ಲಿ ನಾವು ಎಲ್ಲಿ ಹೋಗ್ಬೇಕು ಅನ್ನೋದು ನಮ್ಗೆ ಮರ್ತು ಹೋಗಿ ನಾವು ಪ್ರತಿಯೊಂಂದಕ್ಕೂ ರಾಜಿ ಮಾಡ್ಕೊಳೋಕೆ ಶುರು ಮಾಡ್ತೀವಿ. ಬೇರೆಯವ್ರ ಜೊತೆ ನಮ್ಮನ್ನ ಹೋಲಿಸಿ ನೋಡ್ಕೊಳ್ಳೋದ್ರಿಂದ, ಬದುಕಿನಲ್ಲಿ ನಾವು ಮಾಡ್ಬೇಕಿರೋದು ಇನ್ನೂ ತುಂಬಾ ಇದೆ ಅಂದ್ಕೊಳ್ತಾ, ನಾವು ಏನು ಮಾಡಿದ್ರೂ ಎಷ್ಟು ಮಾಡಿದ್ರೂ ಅದು ತುಂಬಾ ಕಡಿಮೆ ಆಯ್ತು ಅನ್ನೋ ಕೊರಗಿನಲ್ಲೇ ಇರ್ತೀವಿ. ಆದರೆ, ಯಾವಾಗ್ಲಾದ್ರೂ ಒಮ್ಮೆ ಅವ್ರಿವ್ರು ಹೇಳೋ ಮಾತೆಲ್ಲ ಮರ್ತು, ನಮಗೆ ನಿಜಕ್ಕೂ ಖುಷಿ ಕೊಡೋದು ಯಾವ್ದು ಅನ್ನೋದನ್ನ ಅರ್ಥ ಮಾಡ್ಕೋಬೇಕಾಗುತ್ತೆ. ನಿಮ್ಮ ಖುಷಿ ಯಾವುದ್ರಲ್ಲಿ ಇದೆ ಅನ್ನೋದನ್ನ ಅರ್ಥ ಮಾಡ್ಕೊಳ್ಳೋಕೆ ಕೆಳಗಿರೋ 12 ವಿಷಯಾನ ನಿಮ್ ಬದುಕಿಂದ ತೆಗ್ದು ಹಾಕಿದ್ರೆ ಅರ್ಥ ಆಗತ್ತೆ...

*1. ನಿಮ್ ಸುತ್ತ ಇರೋರ್ ಬದುಕನ್ನ ನೀವು ಬದುಕೋಕೆ ಹೋಗೋದು

ನಿಮ್ ಸ್ನೇಹಿತ್ರು, ಕಲೀಗ್ಸ್, ಅಥವಾ ನಿಮ್ ಒಡಹುಟ್ಟಿದೋರು ಏನಾದ್ರೂ ಸಾಧನೆ ಮಾಡಿದಾಗ, ನೀವು ಯಾಕಿನ್ನೂ ಏನೂ ಕಡಿದು ಗುಡ್ಡೆ ಹಾಕೋಕಾಗಿಲ್ಲ ಅಂತ ಅನ್ಸೋದು ಸಹಜ. ಬೇರೆಯವ್ರ ಸಾಧನೆ ನೋಡಿ ನೀವು ಅಸೂಯೆಯ ಗುಂಡಿಗೆ ಬೀಳ್ತೀರಿ. ಅವ್ರ ವೈಭವ, ಫೇಮ್ ನಿಮ್ಗೂ ಬೇಕು ಅನ್ಸುತ್ತೆ. ಅವ್ರ ಶ್ರೀಮಂತಿಕೆ, ಆಡಂಬರ ನಿಮ್ಗೆ ಯಾಕಿಲ್ಲ ಅನ್ನೋ ಯೋಚನೆ ನಿಮ್ಮನ್ನ ನುಂಗಿ ಹಾಕುತ್ತೆ. "ನಂಗ್ಯಾಕಿಲ್ಲ?" ಅನ್ನೋ ಪ್ರಶ್ನೆ ಕಾಡುತ್ತೆ. ಈ ಪ್ರಶ್ನೆಗೆ ಉತ್ತರ ಸುಲಭ : ನಿಮ್ ಟೈಮ್ ಇನ್ನೂ ಬಂದಿಲ್ಲ. ನೀವು ಮಾಡ್ತಿರೋದನ್ನ ಏಕಾಗ್ರತೆಯಿಂದ ಮಾಡಿ, ನಿಮ್ಮ ಗುರಿ ಮೇಲಿಂದ ಕಣ್ಣು ತೆಗೀಬೇಡಿ. ನಿಮ್ ಬದುಕನ್ನ ಬದುಕಿ, ಬೇರೆಯವರ್ನ ನೋಡಿ ಉರ್ಕೊಬೇಡಿ, ಹೊಟ್ಟೆಕಿಚ್ಚು ಪಡ್ಬೇಡಿ.

*2. ತುಂಬಾ ತುಂಬಾ ತುಂಬಾ ಕಷ್ಟಪಟ್ಟು ಕೆಲ್ಸ ಮಾಡೋದು

"ಕೈ ಕೆಸರಾದ್ರೆ ಬಾಯಿ ಮೊಸರು.", ಅನ್ನೋ ಗಾದೆ ಮಾತು ಇದೆ. ಪರಿಶ್ರಮ ಮುಖ್ಯ ಹೌದು, ಆದ್ರೆ ಅಗತ್ಯಕ್ಕಿಂತ ಜಾಸ್ತಿ ಕಷ್ಟ ಪಡೋದು ಕೂಡ ತಪ್ಪು. ನಿಮ್ ದೇಹ ಮತ್ತು ಮನಸ್ಸು ಬಸವಳಿಯೋವರೆಗೆ ಕೆಲಸ ಮಾಡೋದ್ರಿಂದ ಅದು ನಿಮ್ ಕೆಲಸದ್ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಯಾವಾಗ್ಲೂ ಸುಸ್ತು ಹೊಡಿಯೋದ್ರಿಂದ ನಿಮ್ಮ ಆರೋಗ್ಯ ಹಾಳಾಗುತ್ತೆ. ನಿಮ್ ಎನರ್ಜೀನ ಸರಿಯಾಗಿ ಉಪಯೋಗಿಸ್ಕೊಳ್ಳಿ. ಒಂದು ಸಲಕ್ಕೆ ಒಂದೇ ಕೆಲಸಕ್ಕೆ ಕೈ ಹಾಕಿ. ಕೆಲಸದ ಸಮಯದಲ್ಲಿ ಆಗಾಗ ಬ್ರೇಕ್ ತೆಗೊಳ್ಳಿ, ಇದರಿಂದ ನಿಮ್ ಮೆದುಳಿಗೆ ಸ್ವಲ್ಪ ಹಾಯಾಗಿ ಉಸಿರಾಡೋಕೆ ಪುರುಸೊತ್ತು ಸಿಗುತ್ತೆ.

*3. ಸ್ಪಷ್ಟ ಗುರಿ ಇಟ್ಕೊಳ್ಳೋಕೆ ಭಯ ಪಡೋದು

ನಿಮ್ ಗುರಿ ಮುಟ್ಟೋಕೆ ಬೇಕಾದ ಪ್ರತಿಭೆ ನಿಮ್ಮಲ್ಲಿದ್ಯಾ ಇಲ್ವಾ ಅನ್ನೋದು ಮೊದ್ಲೇ ಗೊತ್ತಾಗೊಲ್ಲ. ಆದರೆ ಆ ಗುರಿ ಮುಟ್ಟೋಕೆ ನೀವು ಏನೆಲ್ಲ ಮಾಡ್ಬೇಕೋ, ಅದನ್ನೆಲ್ಲ ನೀವು ಹಿಂದೆ ಮುಂದೆ ನೋಡದೆ ಮಾಡೋಕೆ ತಯಾರಿದ್ದೀರಿ ಅಂತ ಆದ್ರೆ, ನೀವು ನಿಮ್ ಗುರಿ ಕಡೆಗೆ ನಡೀತಾ ಇದ್ದೀರಿ ಅಂತಾನೆ ಅರ್ಥ. ಕೂತಲ್ಲೇ ಕೂತು, "ನನ್ ಕೈನಲ್ಲಿ ಇದೆಲ್ಲ ಆಗುತ್ತಾ?" ಅಂತ ಚಿಂತೆ ಮಾಡ್ಕೊಂಡು ಟೈಮ್ ವೇಸ್ಟ್ ಮಾಡ್ಬೇಡಿ. ನಿಮ್ಮ ಗುರಿಗಳ್ನ ಪಟ್ಟಿ ಮಾಡ್ಕೊಂಡು, ಅದರ ಕಡೆಗೆ ಪುಟ್ಟ ಹೆಜ್ಜೆ ಇಡ್ತಾ ಹೋಗಿ. ನಿಮ್ ಗುರಿಗೆ ನೀವು ಎಷ್ಟು ಹತ್ತಿರ ಅಥವಾ ದೂರ ಇದ್ದೀರಾ ಅಂತ ಅಳಿಯೋಕೆ ಇದೊಂದೇ ದಾರಿ.

*4. ಕೆಲಸ ಮುಂದ್-ಮುಂದಕ್ಕೆ ಹಾಕೋದು

ಎಲ್ಲಾರ್ಗೂ 'ಸ್ಟಾರ್ಟಿಂಗ್ ಪ್ರಾಬ್ಲಂ' ಇರುತ್ತೆ. ಆದ್ರೆ ಒಮ್ಮೆ ಶುರು ಮಾಡಿದ್ರೆ, ಗಾಡಿ ತಾನಾಗಿಯೇ ಮುಂದೆ ಹೋಗುತ್ತೆ. ನಾವಿನ್ನೂ ಪೂರ್ತಿ ತಯಾರಾಗಿಲ್ಲ ಅನ್ನೋ ಭಯ ನಮ್ಮನ್ನ ಕುಗ್ಗೋ ಹಾಗೆ ಮಾಡುತ್ತೆ. ಆದ್ರೆ ನಿಜ ಏನಪ್ಪಾ ಅಂದ್ರೆ, ಯಾರೂ ಯಾವ ಕೆಲಸಕ್ಕೂ ಪೂರ್ತಿ ತಯಾರಾಗಿರೊಲ್ಲ. ನಾವು ಹೋಗ್ಬೇಕಿರೋ ದಾರಿಯಲ್ಲಿ ತಪ್ಪು ತಪ್ಪಾಗಿಯಾದ್ರೂ ಕೆಲವು ಹೆಜ್ಜೆಗಳನ್ನ ಇಟ್ರೆ, ನಮ್ ಪ್ಲಸ್ಸು-ಮೈನಸ್ಸು ನಮ್ಗೇ ಗೊತ್ತಾಗುತ್ತೆ. ಮನೇಲಿ ಕೂತು ಚಿಂತೆ ಮಾಡೋದ್ರಿಂದ ಫಲ ಇಲ್ಲ.

*5. ನಿನ್ನೆಯಲ್ಲಿ ಬದುಕೋದು

ನಿನ್ನೆ ಹಾಗೆ ಮಾಡ್ಬೇಕಿತ್ತು, ಮಾಡ್ಬಹುದಿತ್ತು, ಮಾಡ್ಬಿಟ್ರೆ ಆಗ್ತಿತ್ತು ಅಂತ ಯೋಚಿಸಿ ಪ್ರಯೋಜನ ಇಲ್ಲ. ನಿನ್ನೆ ಏನೋ ತಪ್ಪಾಗಿರುತ್ತೆ, ಇವತ್ತು ಅದನ್ನ ತಿದ್ಕೋಬಹುದು. "ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇಂದು ನಮ್ಮದೇ!" - ನೆನಪಿಡಿ.

*6. ನಾಳೆಗಳಲ್ಲಿ ಬದುಕೋದು

ನಾಳೆಯ ಯೋಚನೆ ಭಯ ತರೋದು ಸಹಜ. ನನ್ ಗುರಿ ಮುಟ್ಟೋವರ್ಗೂ ಬದುಕು ನಡ್ಸೋ ಅಷ್ಟು ವರಮಾನ ಬರುತ್ತಾ? ನಾನೇನಾದ್ರೂ ಎಡವಿದ್ರೆ, ನನ್ ಮನೆಯವ್ರು, ಸ್ನೇಹಿತ್ರು ನಂಗೆ ಆಸರೆ ಆಗ್ತಾರಾ? - ಅನ್ನೋದೆಲ್ಲ ಯೋಚನೆ ಮಾಡ್ಬೇಕಾದ ವಿಷಯಗಳೇ, ಆದರೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡ್ಬಾರ್ದು. ಮುಂದೆ ಏನು ಕಾದಿದೆ ಅನ್ನೋದು ಯಾರಿಗೂ ಗೊತ್ತಿಲ್ಲ, ಅದು ನಮ್ಮಲ್ಲಿ ಅಳುಕು ಹುಟ್ಸೋದು ಸಹಜ. ನಾಳೆಯ ಬಗ್ಗೆ ಉಡಾಫೆ ಇರ್ಬಾರ್ದು, ಆದ್ರೆ ನಾಳೆ ಚಿಂತೆ ಮಾಡೀನೂ ಫಲ ಇಲ್ಲ. ನಿಮ್ ಗುರಿಗಳಿಗೆ ನೀವು ಕಮಿಟ್ ಆಗಿದ್ದು, ಸಣ್ಣ-ಪುಟ್ಟ ಹೊಂದಾಣಿಕೆಗಳ್ನ ್ ಮಾಡ್ಕೊಳ್ತಾ ಹೋದ್ರೆ ಎಲ್ಲ ಸರಿ ಇರುತ್ತೆ. "ಇವತ್ತು ಬಹಳ ಮುಖ್ಯ ದಿನ." - ಪ್ರತಿದಿನವೂ ಹೇಳ್ಕೊಳ್ಳಿ. "ನಿನ್ನೆನಿನ್ನೆಗೆ, ನಾಳೆ ನಾಳೆಗೆ, ಇಂದು ನಮ್ಮದೇ!" - ಆಗ್ಲೇ ಮರ್ತು ಹೋದ್ರಾ ಹೇಗೆ?

*7. ನೀವು ಪರ್ಫೆಕ್ಟ್ ಆಗಿರ್ಬೇಕು ಅಂತ ಬಯಸೋದು

ಸಂತೋಷವಾಗಿರೋಕೆ ನೀವು ಪರ್ಫೆಕ್ಟ್ ಆಗಿರ್ಬೇಕು ಅಂತ ಏನೂ ಇಲ್ಲ. ನೀವು ಪರ್ಫೆಕ್ಟ್ ಆಗ್ಬಿಟ್ರೆ, ಅಲ್ಲಿಗೆ ಎಲ್ಲ ಮುಗಿದ್ ಹಾಗೆ ಲೆಕ್ಕ. ನಿಮ್ಗೆ ಮಾಡೋಕೆ ಏನ ಇರೋಲ್ಲ. ಸಂತೋಷ ನಿಮ್ಮ ಗುರಿ, ಪರ್ಫೆಕ್ಟ್ ಆಗಿರೋದಲ್ಲ - ನೆನಪಿಡಿ.

*8. ನಿಮ್ ಸಂಬಂಧಗಳು ಪರ್ಫೆಕ್ಟ್ ಆಗಿರ್ಬೇಕು ಅಂತ ಬಯಸೋದು

ಪ್ರೀತಿ ಪರ್ಫೆಕ್ಟ್ ಅಲ್ಲ. ಸಂಬಂಧಗಳು ಚೆನ್ನಾಗಿರ್ಬೇಕಾದ್ರೆ, ನೀವು ಅದನ್ನ ಚೆಂದ ಮಾಡೋಕೆ ತುಂಬಾ ಕೆಲಸ ಮಾಡ್ಬೇಕು. ನಿಮ್ಗೆ ಪರ್ಫೆಕ್ಟ್ ಆಗಿರೋ ಗಂಡ ಅಥವಾ ಹೆಂಡತಿ ಸಿಗೋಕೆ ಸಾಧ್ಯ ಇಲ್ಲ. ಯಾಕಂದ್ರೆ ಯಾರೂ ಪರ್ಫೆಕ್ಟ್ ಅಲ್ಲ. ನಿಮ್ಗೆ ಸಿಕ್ಕಿರೋ ಪ್ರೀತಿಯನ್ನ ಅನುಭವಿಸಿ. ಮತ್ತೊಬ್ರ ತಪ್ಪನ್ನ ಎತ್ತಿ ತೋರಿಸ್ಬೇಡಿ. ಅವ್ರನ್ನ ಪೂರ್ತಿಯಾಗಿ ಒಪ್ಕೊಳ್ಳಿ, ಅವ್ರು ಹೇಗಿದ್ದಾರೋ ಹಾಗೆಯೇ ಒಪ್ಕೊಳ್ಳಿ. ಬದುSantosh Savadi:
ಕಿನ ಬಗ್ಗೆ ಅವರ ದೃಷ್ಟಿಕೋನ ಏನು, ಅವ್ರು ಹೇಗೆ ತಮ್ಮನ್ನ ತಾವೇ ಇಂಪ್ರೂ ಮಾಡ್ಕೊಳ್ಳೋಕೆ ನೋಡ್ತಿದ್ದಾರೆ - ಅನ್ನೋದನ್ನೆಲ್ಲ ತಿಳ್ಕೊಳ್ಳಿ. ನಿಮ್ಗೆ ಅವ್ರೂ ಇದನ್ನೆಲ್ಲ ಮಾಡ್ತಾರೆ.

*9. ನಿಮ್ ದೇಹ ಪರ್ಫೆಕ್ಟ್ ಆಗಿರ್ಬೇಕು ಅಂತ ಬಯಸೋದು

"ಜಿಮ್ ಬಾಡಿ", "ಝೀರೋ ಫಿಗರ್" - ಅನ್ನೋ ಮಾತೆಲ್ಲ ಕೇಳಿರ್ತೀರಿ. ನಿಮ್ಗೂ ಅಂಥ ದೇಹ ಬೇಕು ಅಂತ ತುಂಬ ಸಲ ಅಂದ್ಕೊಂಡಿರ್ತೀರಿ. ನೀವು ಯಾವ ಬಟ್ಟೆ ಹಾಕ್ಕೊಬೇಕು, ಎಷ್ಟು ದಪ್ಪ ಇರ್ಬೇಕು ಅನ್ನೋದನ್ನೆಲ್ಲ ಯಾರ್ಯಾರೋ ಹೇಳೋ ಸ್ಟ್ಯಾಂಡರ್ಡ್ಸಿಗೆ ಹೋಲಿಸಿ ನೋಡೋದು ಅನಾವಶ್ಯಕ ತಲೆನೋವಿಗೆ ಮೂಲ. ನಮ್ಮ ಟೀವಿ, ಸಿನಿಮಾ ಎಲ್ಲ ಕಡೆ ಇದೇ ಜಿಮ್ ಬಾಡಿ, ಝೀರೊ ಫಿಗರ್ಗಳು ಇರೋದ್ರಿಂದ ಇದನ್ನ ತಲೆಯಿಂದ ತೆಗ್ದು ಹಾಕೋದು ಸ್ವಲ್ಪ ಕಷ್ಟ ಆದ್ರೂ ಅಸಾಧ್ಯ ಏನಲ್ಲ. ನೀವು ಹೇಗಿರ್ಬೇಕು ಅಂತ ನೀವು ತೀರ್ಮಾನ್ ಮಾಡಿ. ನಿಮ್ಮ ಸ್ಟ್ಯಾಂಡರ್ಡ್ ನೀವೇ ಆಯ್ಕೆ ಮಾಡ್ಕೊಳ್ಳಿ. ಯಾರಾದ್ರೂ ಅಡ್ಡ ಮಾತಾಡಿದ್ರೆ, "ನೀನು ನೀನೇ, ಇಲ್ಲಿ ನಾನು ನಾನೇ!", ಅಂತ ಹೇಳಿ.

*10. "ಇಲ್ಲ, ಬೇಡ, ಆಗೊಲ್ಲ" ಅನ್ನೋ ಪದಗಳ್ನ ಒಪ್ಕೊಳ್ಳೋಕೆ ಆಗ್ದೆ ಇರೋದು

ನಿಮ್ಮ ಮಾತನ್ನ, ಆಸೆಗಳ್ನ ಬೇರೆಯವ್ರು ಒಪ್ಕೊಳ್ಳೋದಕ್ಕಿಂತ, ಒಪ್ಕೊಳ್ಳದೇ ಇರೋ ಚಾನ್ಸ್ ಹೆಚ್ಚು. ಹಾಗಾದಾಗ ನೀವು ಕುಗ್ಗಿ ಹೋಗ್ಬಹುದು. ಆದ್ರೆ ಪ್ರತಿ ಸಲ ಈ ರೀತಿ ಆದಾಗ್ಲೂ ಮುಂದೆ ಎಲ್ಲೋ ನಿಮಗೆ ಒಪ್ಪಿಗೆ, ಸ್ವೀಕಾರ ಕಾದಿದೆ ಅಂತ ನೆನಪಿಟ್ಕೊಳ್ಳಿ. "ಇಲ್ಲ, ಆಗೊಲ್ಲ, ಬೇಡ", ಅಂತ ಯಾರಾದ್ರೂ ಹೇಳ್ದಾಗ ತುಂಬ ಪರ್ಸನಲ್ ಆಗಿ ತೆಗೋಬೇಡಿ. ಬಿಟ್ಟಾಕಿ ಮುಂದಕ್ ಹೋಗಿ.

*11. ಕುಂಟುನೆಪ ಹುಡ್ಕೋದು

ಜವಾಬ್ದಾರಿಯಿಂದ ತಪ್ಪಿಸ್ಕೊಳ್ಳೋಕೆ ಸುಳ್ಳು, ಪರದೂಷಣೆ, ಕಟ್ಟುಕತೆಗಳ್ನ ಹೇಳೋದು - ಇದೆಲ್ಲ ಒಳ್ಳೇದಲ್ಲ. ಹೀಗೆ ಮಾಡ್ತಾ ಇದ್ರೆ, ನೀವು ಸ್ವತಃ ಈ ಸುಳ್ಳುಗಳ್ನ ನಂಬೋಕೆ ಶುರು ಮಾಡ್ತೀರಿ. ನಿಮ್ಮಲ್ಲಿರೋ ತಪ್ಪುಗಳನ್ನ ನೀವು ಸರಿಯಾಗಿ ನೋಡ್ಕೊಂಡು ತಿದ್ಕೊಳ್ಳೋಕೆ ಸಾಧ್ಯ ಆಗೊಲ್ಲ. ಕುಂಟುನೆಪ ಹುಡುಕ್ಬೇಡಿ, ತಪ್ಪು ನಿಮ್ದಿದ್ರೆ ಒಪ್ಕೊಳ್ಳಿ.

*12. ತೀರ ಜಾಸ್ತಿ ನಿರೀಕ್ಷೆ / ಅಪೇಕ್ಷೆ ಮಾಡೋದು

ಬದುಕಿನ ಬಗ್ಗೆ ನಿಮ್ ನಿರೀಕ್ಷೆಗಳು ಏನು? ಅದನ್ನ ನೀವೇ ಆಯ್ಕೆ ಮಾಡ್ಕೊಂಡ್ರಾ ಅಥವಾ ನಿಮ್ ತಂದೆ-ತಾಯಿ ಹೇಳಿ ಕೊಟ್ರಾ? ಅಥವಾ ಯಾವುದೋ ಸೆಲ್ಫ್-ಹೆಲ್ಪ್ ಪುಸ್ತಕ ಓದಿ ಅದರಲ್ಲಿ ಹೇಳಿದೆ ಅಂತ ಈ ನಿರೀಕ್ಷೆಗಳು ನಿಮಗೆ ಬಂತಾ? ಬೇರೆಯವ್ರಿಂದ ಬಂದಿದ್ದಾದ್ರೆ, ಅದನ್ನ ಈಗ್ಲೇ ತೆಗ್ದು ಹಾಕಿ. ಬೇರೆಯವ್ರು ಹೇಳಿದ್ ಹಾಗೆ ಬದುಕಿದ್ರೆ ಸಂತೋಷವಾಗಿರ್ಲಿಕ್ಕೆ ಸಾಧ್ಯಾನೇ ಇಲ್ಲ. ನಿಮ್ ಮನಸಿನ ಮಾತು ನೀವು ಕೇಳೋದ್ರಿಂದ ಮಾತ್ರ ಸಂತೋಷವಾಗಿರ್ಲಿಕ್ಕೆ ಸಾಧ್ಯ. ಸುತ್ತಲೂ ಜೋರು ಗದ್ದಲ ಇದ್ರೆ ನಿಮ್ ಮಾತು ನಿಮ್ಗೇ ಕೇಳ್ಸೊಲ್ಲ. ಬೇರೆಯವ್ರು ಹೇಳೋದೆಲ್ಲ ಈ ರೀತಿ ಅನಾವಶ್ಯಕ ಗದ್ದಲ ಇದ್ದ ಹಾಗೆ. ಅದನ್ನೆಲ್ಲ ಮರ್ತು, ನಿಮ್ಮ ಮನಸಿನ ಮಾತಿಗೆ ಕಿವಿ ಕೊಡಿ. ಅದು ಏನು ಪಿಸುಗುಡ್ತಾ ಇದೆ ಅನ್ನೋದನ್ನ ಕೇಳಿಸ್ಕೊಳ್ಳಿ. ಇದೇ ನಿಜವಾಗ್ಲೂ ಖುಷಿ ಕೊಡೋದು.

★★ಆ ಮಾತಿಗೆ ಮನಸೋತಿದ್ದ ಹೃದಯ ಅದೇ ಮಾತಿಗೆ ಒಡೆದು ಹೋಯ್ತು!★

ಆ ಮಾತಿಗೆ ಮನಸೋತಿದ್ದ ಹೃದಯ ಅದೇ ಮಾತಿಗೆ ಒಡೆದು ಹೋಯ್ತು!

ಗೌರ್ ಗೋಪಾಲ ಪ್ರಭು


ಆ ದಿನ ಅಪ್ಪ ಮಗ ಇಬ್ಬರು ಸೋಫಾ ಕುಳಿತು ಮಾತನಾಡುತ್ತಿದ್ದರು. ಅಪ್ಪನಿಗೆ ತುಂಬಾ ವಯಸ್ಸಾಗಿದೆ. ಅವರ ಜತೆ ಸಮಯವನ್ನೇ ಕಳೆಯಲಾಗುತ್ತಿಲ್ಲ ಎಂದು ಮಗನಿಗೆ ಅನಿಸಿತ್ತು. ಅಲ್ಲದೇ ತಾನು ಅಪ್ಪನನ್ನು ಬಿಟ್ಟು ದೂರದ ಊರಿಗೆ ಹೋಗುತ್ತಿರುವ ಸುದ್ದಿಯನ್ನು ಅಪ್ಪನಿಗೆ ನಿಧಾನವಾಗಿ ತಿಳಿಸಬೇಕಿತ್ತು. ಇಬ್ಬರೂ ಮಾತನಾಡುತ್ತಿರುವಂತೆ ಕಾಗೆ ಬಂದು ಕಿಟಕಿಯ ಬಳಿ ಕೂತಿತು. ಅಪ್ಪ ಮಗನ ಮಾತಿನ ಕಡೆ ಗಮನಿಸದೇ ‘ಅದೇನು?’ ಎಂದು ಪ್ರಶ್ನಿಸಿದ. ಮಗ ಅದಕ್ಕೆ ನಗುತ್ತಾ ‘ಅದಾ ಕಾಗೆ’ ಎಂದ. ಸ್ವಲ್ಪ ಹೊತ್ತಿನ ಬಳಿಕ ‘ಅದು ಇಲ್ಲಿಗ್ಯಾಕೆ ಎಂದು ಅಪ್ಪ ಪ್ರಶ್ನಿಸಿದ. ಅದಕ್ಕೆ ಮಗ ‘ನಾವು ಇಲ್ಲಿ ಯಾಕೆ ಇದ್ದೇವೆ? ಉತ್ತರ ಇದೆಯಾ? ಹಾಗೆ ಅದು ಎಲ್ಲೋ ಹೋಗುತ್ತಿರುತ್ತದೆ ಇಲ್ಲಿ ಬಂದು ಇಳಿದಿದೆ’ ಎಂದ. ಮತ್ತೆ ಸ್ವಲ್ಪ ಸಮಯದ ನಂತರ ‘ಮಗಾ ಅದು ಏನು?’ ಎಂದು ಅಪ್ಪ ಕೇಳಿದ.

ಆಗಲೇ ಮಗನ ತಾಳ್ಮೆ ಸ್ವಲ್ಪ ಕಮ್ಮಿ ಆಗಿತ್ತು. ‘ಅದು ಕಾಗೆ ಅಪ್ಪ ಎಷ್ಟ್ ಸಲ ಕೇಳ್ತಿರಿ’ ಎಂದ. ಅಪ್ಪ ಮಗನ ಮಾತಿಗೆ ಬೇಸರಿಸಿಕೊಂಡ. ಆದರೆ ಆ ಬೇಸರ ಮೇಲೆ ಮೂಡಲಿಲ್ಲ. ಮತ್ತೆ ಸ್ವಲ್ಪ ಸಮಯ ಕಳೆದಂತೆ ಅಪ್ಪ‘ಹೌದು ಆ ಕಾಗೆ ಕಪ್ಪು ಬಣ್ಣ ಏಕೆ?’ ಎಂದು ಕೇಳಿದ. ಮಗನಿಗೆ ಕೋಪವೇ ಬಂತು. ಹೇಳಬೇಕಾದ ವಿಷಯ ಹೇಳಲು ಆಗುತ್ತಲೇ ಇರಲಿಲ್ಲ. ಅಪ್ಪ ನೋಡಿದರೆ ಕಾಗೆಯ ಹಿಂದೆ ಬಿದ್ದಿದ್ದಾರೆ ಎಂದು ಸಿಟ್ಟು ಬಂತು. ಅಪ್ಪ ಏನೂ ಮಾತನಾಡಲಿಲ್ಲ. ಮತ್ತೆ ಸ್ವಲ್ಪ ಸಮಯದ ನಂತರ ‘ಮಗಾ ಅದೇನು?’ ಎಂದು ಕೇಳಿದರು. ಅದಕ್ಕೆ ಮಗ ‘ನಾನು ಹೇಳುವ ವಿಷಯದ ಮೇಲೆ ನಿಮಗೆ ಸ್ವಲ್ಪವೂ ಇಲ್ಲ’ ಎಂದು ಎದ್ದು ರೂಮು ಸೇರಿಕೊಂಡ. ಮತ್ತೆ ಸ್ವಲ್ಪ ಸಮಯದ ನಂತರ ಅಪ್ಪ ರೂಮಿನ ಬಾಗಿಲು ಬಡಿದ. ಮಗ ಅಲ್ಲಿಂದಲೇ ‘ಅದು ಕಾಗೆ!’ ಎಂದು ಕೂಗಿದ. ಅದಕ್ಕೆ ಅಪ್ಪ ‘ನೀನು ಚಿಕ್ಕವನಿದ್ದಾಗ ಇನ್ನೂ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಿದ್ದೆ. ಆದರೆ ನಾನೆಂದೂ ನಿನ್ನ ಬಿಟ್ಟು ಹೋಗಿ ರೂಮು ಸೇರಲಿಲ್ಲ’ ಎಂದರು.

*ಹೌದು ಅಲ್ಲವೇ, ಚಿಕ್ಕವರಿದ್ದಾಗ ನಾವು ಸಾವಿರಾರು ಪ್ರಶ್ನೆ ಕೇಳಿರುತ್ತೇವೆ. ಕೇಳಿದ್ದನ್ನೇ ಮತ್ತೆ ಮತ್ತೆ ಕೇಳಿರುತ್ತೇವೆ. ಆಗೆಂದೂ ನಮ್ಮ ಪೋಷಕರು ಮೇಲೆ ರೇಗಿಲ್ಲ. ಹಾಗಾದರೆ ಅವರಿಗೆ ವಯಸ್ಸಾದ ಮೇಲೆ ನಾವ್ಯಾಕೆ ಅವರಂತೆ ಇರುವುದಿಲ್ಲ? ನೆನಪಿರಲಿ ವಯಸ್ಸಾದ ಎಲ್ಲ ಪೋಷಕರೂ ಮಕ್ಕಳಂತೆಯೇ!*

ಯಾಕೆ ಭಯಪಡುತ್ತೀರಿ?

ಯಾಕೆ ಭಯಪಡುತ್ತೀರಿ?


- ಜಿಡ್ಡು ಕೃಷ್ಣಮೂರ್ತಿ

ಭಯ ಎಂದರೇನು? ಅದು ಇದೆ ಎಂದು ನಿಮಗೆ ಗೊತ್ತಿರುವಾಗ, ಅದರ ಸ್ವರೂಪ ತಿಳಿದಿರುವಾಗ, ಅದರ ಮಿಡಿತ ತಿಳಿದಿರುವಾಗ, ನಿಮ್ಮ ಶರೀರ ಹೇಗೆ ಮುದುಡುತ್ತದೆ ಮತ್ತು ಬುದ್ಧಿ ಹೇಗೆ ಮಂಕಾಗುತ್ತದೆ ಎಂಬುದು ನಿಮಗೆ ಗೊತ್ತು. ಇದೆಲ್ಲ ನಿಮಗೆ ಗೊತ್ತಲ್ಲವೆ? ಇದು ವಸ್ತುಸ್ಥಿತಿ. ಅದು ನಿಮ್ಮ ನಿದ್ರೆ, ನಿತ್ಯಜೀವನಕ್ಕೆ ಬಾಧಕ. ಅದು ಸಂಶಯ, ಖಿನ್ನತೆ, ಆತಂಕ ಇತ್ಯಾದಿಯನ್ನು ಉಂಟುಮಾಡುತ್ತದೆ. ಆಗ ನೀವು ಯಾವುದನ್ನೋ ನೆಚ್ಚಿಕೊಳ್ಳುತ್ತೀರಿ ಮತ್ತು ಅದು ಬದಲಾಗುವುದಿಲ್ಲ ಹಾಗೂ ಅದರಿಂದ ಭಯ ಉತ್ಪನ್ನವಾಗುವುದಿಲ್ಲ ಎಂದು ನಂಬುತ್ತೀರಿ. ಒಂದೋ ನಾವು ಭಯದ ಬೇರುಗಳನ್ನು ಕಿತ್ತೊಗೆಯಬೇಕು ಅಥವಾ ಅದರ ರೆಂಬೆಗಳನ್ನು ಕಡಿಯಬೇಕು. ನೀವು ಯಾವುದನ್ನು ಮಾಡುವವರಿದ್ದೀರಿ? ಸಾವಿರ ಭಯಗಳಿವೆ. ಜಗತ್ತಿನ ಸುಂದರ ಸೃಷ್ಟಿಗಳಲ್ಲಿ ಒಂದಾದ ವೃಕ್ಷದಂತೆ, ಕುರೂಪಿಯಾದ ಭಯಕ್ಕೆ ಸಾವಿರಾರು ರೆಂಬೆ ಕೊಂಬೆಗಳಿವೆ; ಎಲೆಗಳಿವೆ. ವಿಧವಿಧ ಅಭಿವ್ಯಕ್ತಿಗಳಿವೆ. ನೀವು ಈ ಅಭಿವ್ಯಕ್ತಿಗಳನ್ನು, ಮೇಲ್ಮೈಯನ್ನು ಅಥವಾ ಬಹಿರಂಗವನ್ನು ಮುಖಾಮುಖಿಯಾಗುವಿರಾ? ಅಥವಾ ನಾವು ಜೊತೆಗೂಡಿ ಅದರ ಬೇರುಗಳತ್ತ ಹೋಗೋಣ. ಭಯದ ಕಾರಣವೇನು ಎಂಬುದನ್ನು ಒಟ್ಟಿಗೆ ಕಂಡುಹಿಡಿಯೋಣ. ನನಗೆ ಭಯದ ಅಭಿವ್ಯಕ್ತಿಗಳೆಲ್ಲ ಗೊತ್ತು. ಹೀಗಾಗಿ ನಾವು ಅದರ ಮೂಲವನ್ನು ಕಂಡುಕೊಂಡರೆ, ಬಾಹ್ಯ ಅಭಿವ್ಯಕ್ತಿಗಳು ತಾನಾಗಿ ಉದುರಿ ಹೋಗುತ್ತವೆ.

ಹಾಗಿದ್ದರೆ ಭಯಕ್ಕೆ ಕಾರಣವೇನು? ವಿವರಣೆಯೇ ವಸ್ತುಸ್ಥಿತಿಯಲ್ಲ. ನೀವು ಒಂದು ಪರ್ವತದ ಸುಂದರ ಚಿತ್ರ ಬಿಡಿಸಬಹುದು. ಆದರೆ ಆ ಚಿತ್ರವೇ ಪರ್ವತವಲ್ಲ. ಭಯ ಎಂಬ ಶಬ್ದವು ಭಯವಲ್ಲ. ಆದರೆ ಭಯ ಎಂಬ ಶಬ್ದವು ಭಯವನ್ನುಂಟುಮಾಡುತ್ತದೆ. ಹೀಗಾಗಿ ನಾವು ಬಣ್ಣನೆ, ಶಬ್ದ ಇತ್ಯಾದಿಗಳ ಜೊತೆಗೆ ವ್ಯವಹರಿಸದೆ ಭಯದ ಆಳ ಹಾಗೂ ಶಕ್ತಿಯನ್ನು ಗಮನಿಸುವವರಿದ್ದೇವೆ. ನಾವು ಒಟ್ಟಿಗೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆಯೇ ಹೊರತು ನಾನು ವಿವರಿಸಿದ್ದನ್ನು ನೀವು ಒಪ್ಪಿಕೊಳ್ಳುತ್ತಿಲ್ಲ. ನಾವು ಸತ್ಯವನ್ನು ನಮ್ಮಷ್ಟಕ್ಕೆ ಕಂಡುಕೊಳ್ಳುತ್ತಿದ್ದೇವೆ. ಹೀಗೆ ಮಾಡುವ ಮೂಲಕ ಅದು ನಿಮ್ಮ ಸತ್ಯವಾಗುವುದೇ ಹೊರತು ಬೇರೆಯವರ ಸತ್ಯವಾಗುವುದಲ್ಲ. ಬೇರೆಯವರ ಸತ್ಯದೊಂದಿಗೆ ನೀವು ಬದುಕಲು ಸಾಧ್ಯವಿಲ್ಲ. ನೀವು ನಿಮ್ಮ ಸತ್ಯದೊಂದಿಗೆ ಮಾತ್ರ ಬದುಕಲು ಸಾಧ್ಯ. ಭಯಕ್ಕೆ ಕಾರಣವೇನು? ಆಲೋಚನೆಯೇ? ಕಾಲವೇ? ಅದನ್ನೀಗ ಪರಿಶೀಲಿಸೋಣ. ನಾನು ಈಗ ಬದುಕುತ್ತಿದ್ದೇನೆ, ನೀವು ಈಗ ಬದುಕುತ್ತಿದ್ದೀರಿ. 'ನಾನು ನಾಳೆ ಸಾಯಬಹುದು' ಅಥವಾ 'ನಾನು ನನ್ನ ಕೆಲಸ ಕಳೆದುಕೊಳ್ಳಬಹುದು'. 'ಬ್ಯಾಂಕಿನಲ್ಲಿ ನನ್ನ ಹಣವಿದೆ, ಆದರೆ ಬ್ಯಾಂಕು ದಿವಾಳಿಯಾಗಬಹುದು'. 'ನನ್ನ ನನ್ನ ಹೆಂಡತಿ ಜೊತೆ ಚೆನ್ನಾಗಿದ್ದೇನೆ, ಆದರೆ ನಾಳೆ ಅವಳು ಬೇರೆ ಯಾರನ್ನಾದರೂ ಪ್ರೀತಿಸಬಹುದು'. 'ನಾನೊಂದು ಪುಸ್ತಕ ಪ್ರಕಟಿಸಿದ್ದೇನೆ, ಅದು ಚೆನ್ನಾಗಿ ಜನಪ್ರಿಯವಾಗಬಹುದು'. ಇದೆಲ್ಲವೂ ಭಯವೇ. 'ನಾನು ಜನಪ್ರಿಯನಾಗಬೇಕು' ಎಂಬುದು ಜಗತ್ತಿನಲ್ಲಿ ಅತ್ಯಂತ ಬಾಲಿಶವಾದ ಸಂಗತಿ. ನಾನು ಎಲ್ಲರಿಗೂ ಸುಪರಿಚಿತನಾಗಬೇಕು. ಯಾರೋ ಒಬ್ಬರು ಈಗಾಗಲೇ ನಮಗಿಂತ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಹೀಗೆ ನಾನು ಕಳೆದುಕೊಳ್ಳಬಹುದು, ಗಳಿಸಬಹುದು, ಒಂಟಿಯಾಗಬಹುದು ಎಂಬ ಚಿಂತನೆ ನಮ್ಮಲ್ಲಿದೆ. ಇದು ಭಯದ ಅಂಶಗಳಲ್ಲೊಂದು. ನಾನು ನನ್ನ ಪತ್ನಿಯ ಜೊತೆ, ಮಕ್ಕಳ ಜೊತೆ ಚೆನ್ನಾಗಿದ್ದೇನೆ, ಆದರೆ ಹತಾಶೆ, ಒಂಟಿತನವನ್ನೂ ನಾನು ನನ್ನೊಳಗೆ ಅನುಭವಿಸಿದ್ದೇನೆ. ಒಂಟಿತನವೆಂದರೇನು ಎಂಬುದನ್ನು ನೀವು ಪರಿಶೀಲಿಸಿದ್ದೀರಾ? ಒಂಟಿತನದ ಬಗ್ಗೆ ಮನುಷ್ಯ ಯಾಕೆ ಇಷ್ಟೊಂದು ಭಯಪಡುತ್ತಾನೆ? ಇದನ್ನು ನಮ್ಮೊಳಗೆ ಪರಿಶೀಲಿಸೋಣ.


ಆ ಮಾತಿಗೆ ಮನಸೋತಿದ್ದ ಹೃದಯ ಅದೇ ಮಾತಿಗೆ ಒಡೆದು ಹೋಯ್ತು!

☘🍃☘🍃☘🍃☘🍃☘🍃☘
New one

ಆ ಮಾತಿಗೆ ಮನಸೋತಿದ್ದ ಹೃದಯ ಅದೇ ಮಾತಿಗೆ ಒಡೆದು ಹೋಯ್ತು!



ಒಂದು ಜೋಡಿಯಿತ್ತು. ಜೋಡಿ ಎಂದರೆ ಹೀಗಿರಬೇಕು ಎಂದು ಜನ ಮಾತನಾಡುವಷ್ಟು. ಆ ಹುಡುಗನೇ ಆಕೆಗೆ ಪ್ರೇಮ ನಿವೇದನೆ ಮಾಡಿದ.‘ ನಾನು ನಿನಗೆ ಏನಾಗಬೇಕು?’ ಎಂದು ಆಕೆ ಕೇಳಿದಳು. ‘ನೀನು ಕಳೆದುಹೋಗಿರುವ ನನ್ನ ಹೃದಯದ ಅವಿಭಾಜ್ಯ ಅಂಗ’ ಎಂದ. ಈ ಮಾತಿಗೆ ಮನಸೋತು ಆಕೆ ಅವನನ್ನು ಒಪ್ಪಿದಳು. ಇಬ್ಬರೂ ಜೀವನ ಚೆನ್ನಾಗಿತ್ತು. ಪ್ರೀತಿಸಿದವರನ್ನೇ ಮದುವೆಯಾದೆವು ಎಂಬ ಖುಷಿ ಇಬ್ಬರಿಗೂ ಇತ್ತು. ಆದರೆ ಇದು ಹೆಚ್ಚು ದಿನ ಉಳಿಯಲಿಲ್ಲ. ಗಂಡ ಹೆಂಡತಿ ಇಬ್ಬರೂ ದುಡಿಯುವವರಾದ್ದರಿಂದ ಅವರಿಗೆ ಸಮಯವೇ ಸಿಗುತ್ತಿರಲಿಲ್ಲ. ಕ್ರಮೇಣ ಸಣ್ಣ ಪುಟ್ಟ ವಿಷಯಗಳಿಗೂ ಜಗಳಗಳಾದವು. ಇದು ಹೀಗೆ ಮುಂದುವರಿಯಿತು. ಗಂಡ ಹೆಂಡತಿಯ ಹುಟ್ಟಿದ ದಿನ ಮರೆತರೆ, ಹೆಂಡತಿ ಆನಿವರ್ಸರಿ ಮರೆಯುತ್ತಿದ್ದಳು. ಇಬ್ಬರೂ ಕ್ರಮೇಣ ದೂರವಾದರು. ಬ್ಯುಸಿ ದಿನಚರಿಯಲ್ಲಿ ಒಬ್ಬರ ಮುಖ ಒಬ್ಬರು ನೋಡುವುದೇ ಅಪರೂಪವಾಯ್ತು.

ಒಮ್ಮೆ ಅವರ ಜಗಳ ಆಕೆ ಮನೆಯಿಂದ ಹೊರ ಬಂದು ನಿನ್ನದೇ ತಪ್ಪು ಎಂದು ಕೂಗಿದಳು. ಮನೆಯಲ್ಲಿ ನಡೆಯುತ್ತಿದ್ದ ಜಗಳ ಬೀದಿಗೆ ತಂದಳಲ್ಲ ಎಂದು ಅವನಿಗೆ ಕೋಪ, ಬೇಸರ ಆಯಿತು. ಆಕೆಯನ್ನು ಮನೆಯೊಳಗೆ ಎಳೆದು ತಂದು ‘ ನೀನು ಕಳೆದುಹೋಗಿರುವ ನನ್ನ ಹೃದಯದ ಅವಿಭಾಜ್ಯ ಅಂಗ ಅಲ್ಲವೇ ಅಲ್ಲ, ನಿನ್ನನ್ನು ಪ್ರೀತಿಸಿ ತಪ್ಪು ಮಾಡಿದೆ’ ಎಂದುಬಿಟ್ಟ. ಆಗ ಆತ ಹೇಳಿದ ಮಾತಿಗೆ ಮನಸೋತಿದ್ದ ಹೃದಯ ಈಗ ಮತ್ತದೇ ಮಾತಿಗೆ ಒಡೆದು ಹೋಯ್ತು. ಆಕೆಯೂ ಕೋಪದಲ್ಲಿ ‘ ಆಯ್ತು, ಸರಿಯಾದ ಹೃದಯವನ್ನೇ ಹುಡುಕಿಕೊಳ್ಳಿ. ನಾನು ನನ್ನ ಹೃದಯದ ಕಳೆದುಹೋಗಿರುವ ಅವಿಭಾಜ್ಯ ಅಂಗವನ್ನು ಹುಡುಕುತ್ತೇನೆ’ ಎಂದು ಹೇಳಿ ತನ್ನ ವಸ್ತುಗಳನ್ನೆಲ್ಲ ಬ್ಯಾಗ್‌ಗೆ ಹಾಕಿ ಮನೆಯಿಂದ ಹೊರನಡೆದಳು. ಹೋಗಬೇಡ ಎಂದು ಒಂದು ಮಾತು ಹೇಳಿದ್ದರೂ ಆಕೆ ಉಳಿಯುತ್ತಿದ್ದಳು. ಆದರೆ ಆತನಿಗೂ ಕೋಪವಿತ್ತು. ಎರಡು ದಿನ ಸುತ್ತಾಡಿ ಮತ್ತೆ ಬರುತ್ತಾಳೆ ಎಂದು ಸುಮ್ಮನಾದ. ಇಬ್ಬರು ದೂರವಾದರು. ಅವನು ಅವಳನ್ನು ನೆನೆಸದ ದಿನವೇ ಇರಲಿಲ್ಲ. ಆದರೂ ಮಾತನಾಡಿಸುತ್ತಿರಲಿಲ್ಲ.

ಇದಾಗಿ ವರ್ಷಗಳು ಕಳೆದವು. ಎಲ್ಲಿದ್ದಾಳೆ, ಹೇಗಿದ್ದಾಳೆ, ಯಾರ ಜತೆ ಮಾತನಾಡುತ್ತಾಳೆ ಎಲ್ಲವನ್ನೂ ಇವನು ತಿಳಿದುಕೊಂಡಿರುತ್ತಿದ್ದ. ಆದರೆ ಆಕೆ ತನ್ನ ಕನಸುಗಳ ಬೆನ್ನತ್ತಿದ್ದಳು.ಒಂದು ದಿನ ಏರ್‌ಪೋರ್ಟ್‌ನಲ್ಲಿ ಇಬ್ಬರೂ ಎದುರಾದರು. ಆಕೆ ಕಿರುನಗೆಯೊಂದನ್ನು ಬೀರಿದಳು. ಇವನೇ ಹೋಗಿ ಮಾತನಾಡಿಸಿದ. ಹೇಗಿದ್ದೀಯಾ? ಎಂದು ಕೇಳಿದ. ಅದಕ್ಕೆ ಅವಳು ‘ ತುಂಬಾ ಚೆನ್ನಾಗಿದ್ದೇನೆ’ ಎಂದಳು. ‘ಹೃದಯದ ಅವಿಭಾಜ್ಯ ಅಂಗ ಸಿಕ್ಕಿತಾ?’ ಎಂದು ಆಕೆ ಕೇಳಿದಾಗ ಆತ ಮುಗುಳುನಗುತ್ತಾ ‘ಇಲ್ಲ’ ಎಂದ. ಇಬ್ಬರಿಗೂ ಒಂದಾಗುವ ಮನಸ್ಸಿತ್ತು. ಆದರೆ ಅವನು ಬರಲಿ ಅವಳು, ಅವಳು ಬರಲಿ ಎಂದು ಅವನು ಹೀಗೆ ಇಬ್ಬರೂ ಮಾತನಾಡಲಿಲ್ಲ. ಆಕೆ ಹೊರಡುವ ಸಮಯ ಬಂತು. ‘ ಒಂದು ವಾರದ ನಂತರ ವಾಪಾಸಾಗುತ್ತೇನೆ. ಸಿಕ್ಕು ಮಾತನಾಡೋಣ’ ಎಂದು ಹೊರಟಳು. ಆದರೆ ಆಕೆ ಮತ್ತೆಂದೂ ವಾಪಾಸ್ ಬರಲೇ ಇಲ್ಲ. ಆಕೆ ಹೋದ ಪ್ಲೇನ್ ಕ್ರಾಶ್ ಆಗಿತ್ತು. ಈಗಲೂ ಅವನು ಅವಳನ್ನು ಮಿಸ್ ಮಾಡಿಕೊಳ್ಳುತ್ತಲೇ ಜೀವನ ದೂಡುವಂತಾಯ್ತು.

ಪ್ರೀತಿ ಮಧ್ಯೆ ಅಹಂಗೆ ಎಂದೂ ಜಾಗ ನೀಡದಿರಿ. ಪ್ರೀತಿಗೆ ಎಲ್ಲವನ್ನೂ ಮೀರುವ ಶಕ್ತಿ ಅಹಂ ಅದರ ಮಧ್ಯೆ ಬರದಿರುವವರೆಗೆ ಮಾತ್ರ. ಹಿಂದಿನ ಬಾರಿ ಮನಸ್ತಾಪವಾದಾಗ ನಾನು ಮಾತನಾಡಿಸಿದ್ದೆ ಈಗ ಅವನು ಬರಲಿ, ಪ್ರತೀ ಬಾರಿ ನಾನೇ ಏಕೆ ಹೋಗಬೇಕು? ಈ ರೀತಿ ಮಾತನಾಡದಿರಿ. ಪ್ರೀತಿ ಮಾಡುವುದೇ ಹೌದು ಎಂದಾದರೆ ಪ್ರತಿ ಸಲ ನೀವೇ ಹೋದರೇನು, ಅವರು ಬಂದರೇನು? ಮನಸ್ತಾಪ ಕರಗಬೇಕು ಅಷ್ಟೆ. ನಿಮ್ಮವರಿಗೆ ಏನೇ ಮೆಚ್ಚುಗೆ ಮಾತು ಹೇಳಬೇಕಾದರೂ ಇಂದೇ ಹೇಳಿ, ನಾಳೆಗಾಗಿ ಕಾಯುವುದು ಅನಿವಾರ್ಯವಲ್ಲ. ಯಾರನ್ನಾದರೂ ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದರೆ ಅದನ್ನು ಹಾಗೆ ಹೇಳುವುದರಿಂದ ನೀವು ಚಿಕ್ಕವರಾಗುವುದಿಲ್ಲ. ಸಂಬಂಧ ಉಳಿಸಿಕೊಳ್ಳುವುದರಲ್ಲಿ ನಾನು ನೀನು ಎಂಬ ಮಾತೇ ಇಲ್ಲ. ಅಲ್ಲವೆ?

Gour  Gopal prabhu

ಸಮಾಜ ನಮ್ಮ ಆಲೋಚನೆಗಳ ಪ್ರತಿಬಿಂಬ

ಒಂದು ಊರಿನಲ್ಲಿ ಮ್ಯೂಸಿಯಂ ಒಂದು ಇತ್ತು. ಮೇಲೆ, ಕೆಳಗೆ, ಅಕ್ಕ,ಪಕ್ಕ ಎಲ್ಲೆಡೆ ಕೇವಲ ಕನ್ನಡಿ ಇರುವ ರೂಮ್ ಒಂದು ಅದರಲ್ಲಿತ್ತು. ಒಂದು ದಿನ ರಾತ್ರಿ ವಾಚ್‌ಮ್ಯಾನ್ ಬಾಗಿಲು ತೆರೆದಿಟ್ಟು ನಿದ್ದೆ ಮಾಡುತ್ತಿದ್ದ. ನಾಯಿಯೊಂದು ಮಿರರ್ ರೂಮ್ ಒಳ ಹೊಕ್ಕಿತು. ಎಲ್ಲ ಕಡೆಯೂ ನಾಯಿಯೇ ಕಂಡು ಅದಕ್ಕೆ ತೀರಾ ಗಾಬರಿಯಾಯಿತು. ವಾಪಾಸು ಹೋಗುವ ದಾರಿ ತಿಳಿಯದೇ ಒದ್ದಾಡಿತು. ಅಷ್ಟೊಂದು ನಾಯಿಗಳನ್ನು ಹೆದರಿ ಜೋರಾಗಿ ಬೊಗಳಿತು. ಕನ್ನಡಿಗಳಲ್ಲಿ ತನ್ನ ಪ್ರತಿಬಿಂಬ ಬೊಗಳಿತು. ಇಷ್ಟೊಂದು ನಾಯಿಗಳು ಒಟ್ಟಿಗೆ ತನ್ನನ್ನು ಅಟ್ಯಾಕ್ ಮಾಡಿದರೆ ಎಂಬ ಭಯ ಕಾಡಿತು. ಮರುದಿನ ಬೆಳಗ್ಗೆ ವಾಚ್‌ಮ್ಯಾನ್ ಎಂದಿನಂತೆ ಮಿರರ್ ರೂಮ್‌ಗೆ ಬಂದಾಗ, ಸತ್ತ ನಾಯಿಯೊಂದು ಅವನ ಕಣ್ಣಿಗೆ ಬಿತ್ತು.

ಸಮಾಜ ನಮ್ಮ ಆಲೋಚನೆಗಳ ಪ್ರತಿಬಿಂಬ ಅಷ್ಟೆ. ನಾವು ಸಮಾಜದ ಬಗ್ಗೆ ಒಳ್ಳೆಯ ಆಲೋಚನೆ ಬೆಳೆಸಿಕೊಂಡರೆ ಒಳ್ಳೆಯದು, ಕೆಟ್ಟ ಆಲೋಚನೆ ಬೆಳೆಸಿಕೊಂಡರೆ ಕೆಟ್ಟದು ಆಗುತ್ತದೆ. ಇಡೀ ಜಗತ್ತು ಕನ್ನಡಿಯ ಹಾಗೆ ಏನು ಕೊಡುತ್ತೀರೋ ಅದೇ ನಿಮಗೆ ವಾಪಾಸು ಬರಲಿದೆ. ಆದಷ್ಟು ಒಳ್ಳೆಯದನ್ನು ಮಾಡಿ, ಸಕಾರಾತ್ಮಕವಾಗಿ ಜೀವಿಸಿ.

ಓಂಕಾರ

ಓಂಕಾರ ಒಂದು ಬೀಜಾಕ್ಷರ. ಈ ಬೀಜಾಕ್ಷರವನ್ನು ಬಿಡಿಸಿದರೆ ಅದು ಸಮಸ್ತ ಭಾರತೀಯ ತತ್ತ್ವ ಶಾಸ್ತ್ರವನ್ನು ತನ್ನ ಗರ್ಭದಲ್ಲಿ ಧರಿಸಿದೆ ಎನ್ನುವುದು ನಮಗೆ ತಿಳಿಯುತ್ತದೆ. ವೇದದ ಸಾರ 'ಓಂಕಾರ'-ಅದೇ  ಪ್ರಣವಃ.
ವೇದಗಳು ಅನೇಕ. ಋಗ್ವೇದದಲ್ಲಿ 24 ಶಾಖೆ, ಯಜುರ್ವೇದದಲ್ಲಿ 101 ಶಾಖೆ, ಸಾಮವೇದದಲ್ಲಿ 1000 ಶಾಖೆ, ಅಥರ್ವವೇದದಲ್ಲಿ 12 ಶಾಖೆ. ಹೀಗೆ ಒಟ್ಟು 1137 ಸಂಹಿತೆಗಳು. ಅದಕ್ಕೆ ಅಷ್ಟೇ ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳು. ಹೀಗೆ ವೇದವೆಂದರೆ ವಿಪುಲವಾದ ವೈದಿಕ ವಾಙ್ಮಯ. ಎಷ್ಟೇ ವೇದಗಳಿದ್ದರೂ ಕೂಡಾ, ಮೂಲತಃ ವೇದದಲ್ಲಿ ಪ್ರಮುಖವಾದ ಮೂರು ವಿಭಾಗವಿದೆ. ಪದ್ಯರೂಪ(ಋಗ್ವೇದ), ಗದ್ಯರೂಪ(ಯಜುರ್ವೇದ) ಮತ್ತು  ಗಾನರೂಪ(ಸಾಮವೇದ). ಈ ಮೂರು ವೇದಗಳ, ಮೂರು ಅಕ್ಷರಗಳನ್ನು ತೆಗೆದುಕೊಂಡು ನಿರ್ಮಾಣವಾಗಿರುವುದು ಓಂಕಾರ.
 “ಓಂಕಾರಕ್ಕೆ ಸಾರತ್ವವನ್ನು ಕೊಟ್ಟು ಸಾರಭೂತನಾಗಿ ‘ಪ್ರಣವಃ’ ಶಬ್ದವಾಚ್ಯನಾಗಿ ನಾನು ಓಂಕಾರದಲ್ಲಿ ನೆಲೆಸಿದ್ದೇನೆ” ಎಂದು ಗೀತೆಯಲ್ಲಿ ಸ್ವಯಂ ಭಗವಂತನೇ ಹೇಳಿದ್ದಾನೆ(ಗೀತಾ-೭-೦೮). ಇದು ಬಹಳ ವಿಚಾರಗರ್ಭಿತ ಸಂಗತಿ. ಪ್ರಾಚೀನರು ಮೂರು ವೇದಗಳನ್ನು ಭಟ್ಟಿ ಇಳಿಸಿ, ಅದರ ಸಾರವಾದ ಮೂರು ವರ್ಗಗಳ ಒಂದು ಸೂಕ್ತ ಮಾಡಿದರು. ಅದೇ ಪುರುಷಸೂಕ್ತ. ಈ ಕಾರಣದಿಂದ ವೇದಸೂಕ್ತಗಳಲ್ಲೇ ಪುರುಷಸೂಕ್ತ ಅತ್ಯಂತ ಶ್ರೇಷ್ಠವಾದ ಸೂಕ್ತ. ಈ ಸೂಕ್ತವನ್ನು ಮತ್ತೆ ಭಟ್ಟಿಇಳಿಸಿ, ಮೂರು ಪಾದಗಳ ಗಾಯತ್ತ್ರಿ ಮಂತ್ರ(ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್) ನಿರ್ಮಾಣವಾಯಿತು. ಇಲ್ಲಿ ‘ತತ್ ಸವಿತುರ್ ವರೇಣ್ಯಂ’ ಋಗ್ವೇದಕ್ಕೆ ಸಂಬಂಧಪಟ್ಟಿದ್ದು,  ‘ಭರ್ಗೋ ದೇವಸ್ಯ ಧೀಮಹಿ’ ಯಜುರ್ವೇದಕ್ಕೆ ಸಂಬಂಧಪಟ್ಟಿದ್ದು, ‘ಧೀಯೊ ಯೊ ನಃ ಪ್ರಚೋದಯಾತ್’ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಹೀಗೆ ಮೂರು ವೇದಗಳ ಸಾರ ಗಾಯತ್ತ್ರಿಯ ಮೂರುಪಾದಗಳುಳ್ಳ ಒಂದು ಮಂತ್ರದಲ್ಲಿದೆ. ಇದಕ್ಕಾಗಿ ಗಾಯತ್ತ್ರಿ ಮಂತ್ರವನ್ನು ‘ವೇದಮಾತಾ’ ಎನ್ನುತ್ತಾರೆ. ಈ ಗಾಯತ್ತ್ರಿಯಿಂದ ರಸ ತೆಗೆದಾಗ ಮೂರು ಪಾದಗಳಿಂದ ಮೂರು ಪದಗಳುಳ್ಳ ವ್ಯಾಹೃತಿ:  “ಭೂಃ ಭುವಃ ಸ್ವಃ”.  ಈ ಮೂರು ಪದಗಳ ಸಾರ ಮೂರು ಅಕ್ಷರದ(ಅ, ಉ, ಮ) ಓಂಕಾರ-ॐ.
 ಓಂಕಾರದಲ್ಲಿ ‘ಅ’ಕಾರ ಋಗ್ವೇದಕ್ಕೆ, ‘ಉ’ಕಾರ ಯಜುರ್ವೇದಕ್ಕೆ ಮತ್ತು ‘ಮ’ಕಾರ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಋಗ್ವೇದ " ಅಗ್ನಿಮೀ”ಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾ”ರಂ ರತ್ನ ಧಾತಮಂ |..."  ಎಂದು ‘ಅ’ ಕಾರದಿಂದ ಪ್ರಾರಂಭವಾಗುತ್ತದೆ. ಮತ್ತು “....ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ಹಃ: | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ॥” ಎಂದು ‘ಇ’ಕಾರದಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದುವರಿದು ಯಜುರ್ವೇದ “ಇಷೇ ತ್ವೋರ್ಜೆ ತ್ವಾ …” ಎಂದು ‘ಇ’ಕಾರದಿಂದ ಪ್ರಾರಂಭವಾಗಿ “……..ಸಮುದ್ರೋ ಬಂಧುಃ” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಹೀಗೆ ಓಂಕಾರದಲ್ಲಿನ ‘ಅ’ಕಾರ ಮತ್ತು ‘ಉ’ಕಾರ ಋಗ್ವೇದ ಮತ್ತು ಯಜುರ್ವೇದವನ್ನು ಪೂರ್ಣವಾಗಿ ಸೂಚಿಸುವ ಸಂಕ್ಷೇಪಣಾ(abbreviation)ರೂಪ. ಇಲ್ಲಿಂದ ಮುಂದೆ ಸಾಮವೇದ. ಸಾಮವೇದ “ಅಗ್ನ ಆ ಯಾಹಿ ………” ಎಂದು ‘ಅ’ಕಾರದಿಂದ ಆರಂಭವಾಗಿ “……ಬ್ರ್ಹಸ್ಪತಿರ್ದಧಾತು” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ ಇಲ್ಲಿ ‘ಮ’ ಕಾರ ಬಂದಿಲ್ಲ. ಆದರೆ ನಮಗೆ ತಿಳಿದಂತೆ ಸಾಮವೇದ ನಾದ ರೂಪದಲ್ಲಿದೆ. ಓಂಕಾರದಲ್ಲಿ ಕೂಡಾ ‘ಮ’ ಎನ್ನುವುದು ನಾದರೂಪದಲ್ಲಿ ಹೊರ ಹೊಮ್ಮುವ ಅಕ್ಷರ- ಅದು ಸಂಗೀತ. ಹೀಗೆ ಓಂಕಾರ ವೇದದ ಸಂಕ್ಷೇಪಣಾರೂಪವಾದ ಬೀಜಾಕ್ಷರ. ಇದು ನಮಗೆ ವೇದವನ್ನು ಗುರುತಿಸುವ ಮಾರ್ಗದರ್ಶಿ. ಆದ್ದರಿಂದ ಇದು ಭಗವಂತನನ್ನು ಸ್ತೋತ್ರ ಮಾಡುವ ಮಂತ್ರಗಳಲ್ಲಿ ಅತ್ಯಂತ ಪ್ರಕೃಷ್ಟವಾದುದ್ದು. ಇದಕ್ಕಿಂತ ದೊಡ್ಡ ಸ್ತೋತ್ರಮಾಡುವ ಶಬ್ದ ಈ ಪ್ರಪಂಚದಲ್ಲಿಲ್ಲ.

ನಡೆ ಮುಂದೆ ನಡೆ ಮುಂದೆ

ನಡೆ ಮುಂದೆ ನಡೆ ಮುಂದೆ

ನಾವು ನಡೆದಾಗಲಷ್ಟೇ, ನಮ್ಮ ಪ್ರಯಾಣವನ್ನು ಸ್ವತಂತ್ರವಾಗಿ, ಪ್ರಭಾವಶಾಲಿಯಾಗಿ ಹಾಗೂ ತೃಪ್ತಿಕರವಾಗಿ ಮಾಡಬಲ್ಲೆವು. ಚಲನೆಯ ಬಗ್ಗೆ ನಮ್ಮ ಆಲೋಚನೆಗಳು ಕ್ರಿಯೆಯಾಗಿ ಮಾರ್ಪಡುತ್ತವೆ. ನಡೆಯಬೇಕು ಎಂಬ ಇಚ್ಛೆಯೇ ನರಗಳ ಮೂಲಕ, ನ್ಯೂರಾನ್‌ಗಳ ಮೂಲಕ ಪ್ರಬಲವಾದ ತರಂಗಗಳನ್ನು ಎಬ್ಬಿಸುತ್ತದೆ. ಆಗ ಮನಸ್ಸು ಹಾಗೂ ದೇಹ ಈ ಕ್ರಿಯೆಯನ್ನು ಆಗು ಮಾಡಿಸಲು ಒಂದರೊಡನೊಂದು ಸಹಕರಿಸುತ್ತವೆ. ಅನೇಕರಿಗೆ ನಡೆಯಬೇಕು ಎನ್ನಿಸುತ್ತದೆ. ಆದರೆ ಈ ಬಯಕೆಯ ತರಂಗಗಳು ನರಗಳ ಮೂಲಕ, ಸ್ನಾಯುಗಳ ಮೂಲಕ ಸಂವಹಿಸಲಾರವು. ದೇಹ, ಮನಸ್ಸಿನ ಈ ಇಚ್ಛೆಯನ್ನು ಸ್ವೀಕರಿಸುವ, ಅದಕ್ಕೆ ಸ್ಪಂದಿಸುವ ಹಾಗಿರಬೇಕು. ಆಗ ಸಮತೋಲನದ, ಸ್ವತಂತ್ರ ನಡಗೆಯನ್ನು ಒಬ್ಬ ನಡೆಯಬಲ್ಲ. ಜನರು ನಡೆಯುವಾಗ ಮುಂದಕ್ಕೆ ಮಾತ್ರ ಹೆಜ್ಜೆಯನ್ನು ಹಾಕಬಲ್ಲರು. ಕಾರಣ, ನಮ್ಮ ಕಾಲುಗಳ ವಿನ್ಯಾಸವೇ ಈ ಮುನ್ನಡೆಗೆ ಸೂಕ್ತವಾಗಿದೆ. ಹಿಮ್ಮುಖವಾಗಿಯಾಗಲೀ, ಪಕ್ಕಕ್ಕಾಗಲೀ ನಡೆಯುವುದು ಸುಲಭವಲ್ಲ ಹಾಗೂ ಅಸುರಕ್ಷಿತ. ಮಾನವ ದೇಹದ ಬೆನ್ನೆಲುಬು ಸಹ ಮುಂದಕ್ಕೆ ಬಾಗಲು ಮಾತ್ರ ವಿನ್ಯಾಸಗೊಂಡಿದೆ.

ಹಾಗೆಯೇ ನಮ್ಮ ಕಣ್ಣುಗಳು ಮುಂದಿರುವ ದೃಶ್ಯವನ್ನು ನೋಡಲು ಮಾತ್ರ ಸೃಷ್ಟಿಗೊಂಡಿವೆ. ನಿಮ್ಮ ಪಕ್ಕದಲ್ಲಿ ಏನಿದೆ ಎಂಬುದನ್ನು ನೋಡಲು ನೀವು ಕತ್ತು ತಿರುಗಿಸಬೇಕಾಗುತ್ತದೆ. ನಿಮ್ಮ ಕಣ್ಣನ್ನು ಪಕ್ಕಕ್ಕೆ ನೀವು ಹೊರಳಿಸಬಹುದು, ಆದರೆ ಸ್ಪಷ್ಟವಾಗಿ ಏನಿದೆ ಎಂಬುದನ್ನು ನಿಮಗೆ ನೋಡಲಾಗುವುದಿಲ್ಲ.

ಮಗು ನಡೆಯಲು ಆರಂಭಿಸಿದಾಗ, ಅದರ ಸರಳತನ ಹೃದಯದೊಳಗೆ ಇಳಿಯುತ್ತದೆ ಹಾಗೂ ಮನಸ್ಸು ಹೊರಗೆ ನೋಡಲು ಆರಂಭಿಸುತ್ತದೆ. ನರಶಾಸ್ತ್ರದ ಪ್ರಕಾರ ಎಲ್ಲ ಮನುಷ್ಯರು ಒಂದೇ ರೀತಿ ನಡೆಯುತ್ತಾರೆ ಎನ್ನಬಹುದಾದರೂ, ಪ್ರತಿಯೊಬ್ಬರ ನಡಿಗೆಯಲ್ಲಿ ಗುರುತಿಸಬಹುದಾದ ವ್ಯತ್ಯಾಸಗಳಿರುತ್ತವೆ. ಅವರ ಪ್ರಕೃತಿಯಲ್ಲಿ ವ್ಯತ್ಯಾಸ ಇರುವುದರಿಂದ, ಜನರು ವೈಯಕ್ತಿಕ ನಡಿಗೆಯ ಶೈಲಿಗಳನ್ನು, ಮಾದರಿಗಳನ್ನು ರೂಪಿಸಿಕೊಂಡಿರುತ್ತಾರೆ. ಅವರ ಆಲೋಚನಾ ರೀತಿಯಲ್ಲಿ ವ್ಯತ್ಯಾಸಗಳಿರುತ್ತವೆ./ ಅವರ ಅಭಿರುಚಿಗಳಲ್ಲಿ, ಪ್ರವೃತ್ತಿಗಳಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಮುಮ್ಮುಖವಾಗಿ ನಡೆಯುವುದರಲ್ಲಿ ವ್ಯತ್ಯಾಸವಿರುವುದಿಲ್ಲ. ಮಾನವನು ಸೃಷ್ಟಿಗೊಂಡಾಗಿನಿಂದ ಇದೇ ರೀತಿ ನಡೆದುಬಂದಿದೆ. ಜೀವನವೇ ಒಂದು ನಡಿಗೆ. ಈ ಪ್ರಯಾಣದಲ್ಲಿ ನಿದ್ರೆ ಎಂಬುದು ಒಂದು ಆರಾಮ ತಾಣ. ಕೆಲವರು ಸಂತೋಷ ಪಡೆಯಲು ನಡೆಯುತ್ತಾರೆ. ಇನ್ನು ಕೆಲವರು ಹೊರಗೆ ಏನು ನಡೆದಿದೆ ಎಂಬುದನ್ನು ಅರಿಯುವ ಕುತೂಹಲದಿಂದ ನಡೆಯುತ್ತಾರೆ. ಮಿಕ್ಕವರು ಶಾಂತಿಗಾಗಿ, ಆರೋಗ್ಯಕ್ಕಾಗಿ, ನಾವೀನ್ಯಕ್ಕಾಗಿ ನಡೆಯುತ್ತಾರೆ. ನಡೆಯುವುದಕ್ಕೆ ಅನೇಕ ಕಾರಣಗಳಿವೆ. ಪ್ರಜ್ಞಾವಂತ ಜೀವಿಗಳು ಈ ಭೂಮಿಯ ಮೇಲೆ ಅನೇಕ ಕಾರಣಗಳನ್ನಿಟ್ಟುಕೊಂಡು ನಡೆಯುತ್ತಾ ಬಂದಿವೆ.

ನಡೆಯುವುದು ಒಂದು ಆಯನ. ಅದಕ್ಕೊಂದು ಗಮ್ಯ ಸ್ಥಾನವಿರಬೇಕು. ಏತಕ್ಕೆಂದರೆ ನಾವೆಲ್ಲರೂ. ಮೂಲದಿಂದ ನಮ್ಮ ಅಯನವನ್ನು ಆರಂಭಿಸಿದ್ದೇವೆ. ನಮ್ಮ ಗಮ್ಯಸ್ಥಾನವನ್ನುಅರ್ಥ ಮಾಡಿಕೊಳ್ಳದಿದ್ದರೆ ನಮ್ಮ ಆಯನ ವ್ಯರ್ಥ. ಅದು ಸಾಗರದ ಮಧ್ಯೆ ದಟ್ಟವಾದ ಮಂಜಿನ ನಡುವೆ ಅವಿತು ಕುಳಿತಿರುವ ಹಡಗಿನಂತೆ. ಅದು ಆ ಪರಿಸ್ಥಿತಿಯಲ್ಲೂ ಪ್ರಮಾಣ ಮಾಡಬಲ್ಲದು. ಆದರೆ ಅದಕ್ಕೊಂದು ಗುರಿಯಿರುವುದಿಲ್ಲ.

ನಾವು ಮುಮ್ಮುಖವಾಗಿ ಪ್ರಯಾಣ ಮಾಡುವುದರಿಂದ, ನಮ್ಮೊಳಗೆ ನಮ್ಮ ಭವಿಷ್ಯವನ್ನು ತಿಳಿಯುವ ಇಚ್ಛೆ ಕುಳಿತಿದೆ. ಮನುಷ್ಯನ ದೇಹವೇ ಅವನ ಹಿಂದಿನ ಜನ್ಮದ ಫಲ. ಹೀಗಾಗಿ ಈ ದೇಹ ನಮಗೆ ನಮ್ಮ ಭೂತಕಾಲವನ್ನು ನೆನಪಿಸುತ್ತದೆ. ಮನಸ್ಸು ಭವಿಷ್ಯವನ್ನು ತಿಳಿಯಲು ಪ್ರಯತ್ನಿಸುತ್ತದೆ.

By Unknown
▪▪▪▪▪▪▪▪▪▪▪

Thought for the Day

🌺🌺☘☘🌺🌺☘☘🌺🌺☘

No-Thought for the Day


Whatever you do, remember one thing:
out of fear you are not going to grow; you will only shrink and die.
Fear is in the service of death.
Mahavira is right. He makes fearlessness the fundamental of a religious person,
and I can understand what he means by fearlessness - that means dropping all armor.
A fearless person has everything that life wants to give to you as a gift.
Now there is no barrier: you will be showered with gifts, and whatever you will be doing you will have a strength, a power, a certainty,
a tremendous feeling of authority.

Osho

🍁🍁🌿🌿🍁🍁🌿🌿🍁🍁🌿

Man O Man!

Man O Man!

🔱Man O Man!🔱

When without money, eat wild vegetables at home;

When has money, eats the same wild vegetables in a fine restaurant.

When without money, rides bicycle;

When has money rides the same ‘exercise machine’.

When without money walks to earn food

When has money, walks to burn fat;

Man O Man! Never fails to deceive thyself!

When without money, wishes to get married;

When has money, wishes to get divorced.

When without money, wife becomes secretary;

When has money, secretary becomes wife.

When without money, acts like a rich man;

When has money acts like a poor man.

Man O Man! Never can tell the simple truth!

Says share market is bad, but keeps speculating;

Says money is evil, but keeps accumulating.

Says high Positions are lonely, but keeps wanting them.

Says gambling & drinking is bad, but keeps indulging;

Man O Man! Never means what he says and never says what he means!

Collected

💢💢💢💢💢💢💢💢💢💢💢

When life gets tough… Which one are you?

When life gets tough… Which one are you?


Once upon a time a daughter complained to her father that her life was miserable and that she didn’t know how she was going to make it.

She was tired of fighting and struggling all the time. It seemed just as one problem was solved, another one soon followed.

Her father, a chef, took her to the kitchen. He filled three pots with water and placed each on a high fire. Once the three pots began to boil, he placed potatoes in one pot, eggs in the second pot, and ground coffee beans in the third pot.

He then let them sit and boil, without saying a word to his daughter. The daughter, moaned and impatiently waited, wondering what he was doing.

After twenty minutes he turned off the burners. He took the potatoes out of the pot and placed them in a bowl. He pulled the eggs out and placed them in a bowl.

He then ladled the coffee out and placed it in a cup. Turning to her he asked. “Daughter, what do you see?”

“Potatoes, eggs, and coffee,” she hastily replied.

“Look closer,” he said, “and touch the potatoes.” She did and noted that they were soft. He then asked her to take an egg and break it.

After pulling off the shell, she observed the hard-boiled egg. Finally, he asked her to sip the coffee. Its rich aroma brought a smile to her face.

“Father, what does this mean?” she asked.

He then explained that the potatoes, the eggs and coffee beans had each faced the same adversity– the boiling water.

However, each one reacted differently.

The potato went in strong, hard, and unrelenting, but in boiling water, it became soft and weak.

The egg was fragile, with the thin outer shell protecting its liquid interior until it was put in the boiling water. Then the inside of the egg became hard.

However, the ground coffee beans were unique. After they were exposed to the boiling water, they changed the water and created something new.

“Which are you,” he asked his daughter. “When adversity knocks on your door, how do you respond? Are you a potato, an egg, or a coffee bean? “

Moral:In life, things happen around us, things happen to us, but the only thing that truly matters is what happens within us.

Which one are you? Remember … *Life is 10% what happens to you and 90% how you respond to it…*

🍃🌿🍃🌿🍃🌿🍃🌿🍃🌿🍃

ನಮ್ಮ ಸ್ವಭಾವವೇ ಸಂತೋಷ

ನಮ್ಮ ಸ್ವಭಾವವೇ ಸಂತೋಷ

ಶ್ರೀಶ್ರೀರವಿಶಂಕರ್‌

ಸ್ವಲ್ಪ ಹಿಂದಿರುಗಿ ನೋಡಿ. ನೀವು ಮಗುವಾಗಿದ್ದಾಗ ನಿಮ್ಮ ಜೀವನವನ್ನು ನೋಡಿ. ನೀವು ಎಷ್ಟು ಬಾರಿ ಅತ್ತಿದ್ದೀರಿ? ನರಕವೇ ನಿಮ್ಮ ತಲೆಯ ಮೇಲೆ ಬಿದ್ದುಬಿಟ್ಟಂತೆ ಅತ್ತಿದ್ದೀರಿ. ಪ್ರಪಂಚವೇ ಮುಗಿಯಿತು. ಎಂದುಕೊಂಡು ನೀವು ಅತ್ತು ಅತ್ತು ಮಲಗಿಬಿಟ್ಟಿರಿ. ನಂತರ ಏನಾಯಿತು? ಈಗ ನೀವು ಇನ್ನೂ ಜೀವಂತವಾಗಿಯೆ ಇದ್ದೀರಿ. ನಿಮ್ಮ ಸ್ನೇಹಿತೆ ಅಥವಾ ಸ್ನೇಹಿತನೊಡನೆ ನಿಮ್ಮ ಸಂಬಂಧ ಮುರಿದಾಗ ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ತೀರಿಹೋದ ಆ ಕ್ಷ ಣಗಳನ್ನು ನೆನಪಿಸಿಕೊಳ್ಳಿ. ನಿಮಗೆ ಏನಾಯಿತು? ನೀವು ಚದುರಿ ಹೋದಂತೆ ನಿಮಗೆ ಅನಿಸಿತು. ಆದರೆ ವಾಸ್ತವಿಕವಾಗಿ ನಿಮಗೆ ಏನೂ ಆಗಲಿಲ್ಲ.

ನೀವು ನಿಮ್ಮ ಜೀವನ ಪೂರ್ತಿ ಅಳುತ್ತಿರಬೇಕೆಂದು ಜನರು ಎದುರು ನೋಡುತ್ತಾರೆ. ಇದೇ ಸಹಜವೆಂದು ಜನ ತಿಳಿದಿರುತ್ತಾರೆ. ಯಾರಿಗಾದರೂ ಮುನ್ನಡೆಯುವ ಧೈರ್ಯ ಇದ್ದರೆ, ಆ ವ್ಯಕ್ತಿಯಲ್ಲಿ ಏನೋ ದೋಷವಿರಬೇಕು ಎಂದು ಅಂದುಕೊಳ್ಳುತ್ತೇವೆ. ನಮ್ಮ ಸ್ವಭಾವವೇ ಸಂತೋಷ, ಆನಂದ. ದುಃಖ, ಬವಣೆಗಳೆಲ್ಲಾ ಕೇವಲ ಹೊರಗಿನವಷ್ಟೆ. ನೀವೇ ಆಗಿರುವ ಬೆಳಕನ್ನು ಮೋಡಗಳು ಕೆಲಕಾಲ ಮುಚ್ಚಿದ ಹಾಗೆ. ನಿಮ್ಮ ಸ್ವಭಾವವೇ ಆನಂದ. ಅದರ ತೆರೆಯನ್ನು ಸರಿಸಬೇಕು. ಯಾರಿಗಾದರೂ ಎಂತಹ ಆಘಾತವೇ ಬಂದೊದಗಿದರೂ ಸಹ, ಅವುಗಳನ್ನೆಲ್ಲಾ ದಾಟಿ ಹೊರಬರಬಹುದು. ಅದಕ್ಕೆ ಬೇಕಾಗಿರುವುದು ಕೇವಲ ದೃಢತೆ, ಅಷ್ಟೆ.

ಸದಾ ಸಂತೋಷದ ಮೂಡಿನಲ್ಲಿರುವ ಅಗತ್ಯವಿಲ್ಲ. ಯಾರಾದರೂ ತೀರಿ ಹೋದಾಗ ನೀವು, ''ಸರಿ, ಈಗ ನಾನು ಸಂತೋಷದಿಂದ ಇರುತ್ತೇನೆ'' ಎಂದು ನಕ್ಕು, ನರ್ತಿಸಲು ಸಾಧ್ಯವಿಲ್ಲ. ನೀವು ಹಾಗೆ ಮಾಡಬಾರದು. ಅದರ ಸಲುವಾಗಿಯೆ ಪ್ರಾಚೀನರು ಒಂದು ಕ್ರಮವನ್ನು ಮಾಡಿದ್ದರು. ಅವರು ಹೇಳಿದರು, ಯಾರ ಮನೆಯಲ್ಲಾದರೂ ಒಬ್ಬರು ಸತ್ತರೆ, ಆ ಮನೆಯವರೆಲ್ಲಾ ಹತ್ತು ದಿನ ಅಶೌಚದಲ್ಲಿ ಇರಬೇಕೆಂದರು. ನೀವು ಅಳದೆ ಇದ್ದರೆ, ಯಾರಾದರೂ ಅಳುವವರನ್ನು ಕರೆತರುತ್ತಾರೆ. ಭಾರತದಲ್ಲಿ, ಅವರಿಗೆ ಹಣವನ್ನು ನೀಡದರೆ, ಅವರು ಬಂದು ಅತ್ತು ಹೋಗುತ್ತಾರೆ. ಇದು ಚೀನಾ, ಹಾಂಗ್‌ಕಾಂಗ್‌ ಮತ್ತು ಸಿಂಗಪೂರ್‌ ದೇಶಗಳಲ್ಲೂ ಇದೆ.ಸತ್ತು ಹೋದವರನ್ನು ಹೊಗಳುತ್ತಾ ಅವರು ಅಳುತ್ತಿದ್ದಾಗ ಇತರರಿಗೆ ತಮ್ಮ ದುಃಖವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಹತ್ತು ದಿನಗಳ ಶೋಕದ ನಂತರ, ಹನ್ನೊಂದನೆಯ ದಿನ, ಜನರಿಗೆ ತಿಂಡಿಗಳನ್ನು ಹಂಚಿ, ಉತ್ಸವವನ್ನು ಆಚರಿಸಿ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಮನೆಯವರೆಲ್ಲಾ ಒಂದಾಗಿ ಸೇರುತ್ತಾರೆ. ಉಡುಗೊರೆಗಳನ್ನು ಪರಸ್ಪರ ಹಂಚಿ, ಔತಣವನ್ನು ಆಚರಿಸುತ್ತಾರೆ. ಔತಣದ ದಿವಸ ಸ್ವಲ್ಪ ತುಪ್ಪ ಮತ್ತು ನೀರನ್ನು ತೆಗೆದುಕೊಂಡು ಎಲ್ಲರ ಕಣ್ಣಿನ ರೆಪ್ಪೆಯ ಮೇಲೆ ಹಚ್ಚಲಾಗುತ್ತದೆ, ಕಣ್ಣನ್ನು ತಣ್ಣಗೆ ಮಾಡಲೆಂದು. ನಂತರ, ''ಈಗ ಜೀವನವನ್ನು ಮುಂದುವರಿಸೋಣ. ಆದದ್ದು ಆಯಿತು'' ಎಂದು ನಿರ್ಧರಿಸುತ್ತಾರೆ. ಸ್ವಂತ ಮನೆಯವರಿಗೆ ಶೋಕಾಚರಣೆಯು ಹತ್ತು ದಿನಗಳವರೆಗೆ. ಸ್ವಲ್ಪ ದೂರದ ನೆಂಟರಿಗೆ ಶೋಕಾಚರಣೆಯು ಕೇವಲ ಒಂದು ದಿನಕ್ಕಾಗಿ. ಶೋಕವನ್ನು ಹೇಗೆ ಆಚರಿಸುವುದು ಎಂಬ ಒಂದು ಪದ್ಧತಿಯನ್ನೆ ಮಾಡಿದ್ದಾರೆ.

ಆದರೆ ಒಬ್ಬ ಆಧ್ಯಾತ್ಮಿಕ ವ್ಯಕ್ತಿಯು ತೀರಿ ಹೋದರೆ, ಇದೂ ಸಹ ಇರುವುದಿಲ್ಲ. ಆಗ ಪ್ರತಿ ಕ್ಷ ಣವೂ ಒಂದು ಉತ್ಸವ. ಏಕೆಂದರೆ ಆತ್ಮ ಸರ್ವವ್ಯಾಪ್ತಿಯಾಗಿದೆ. ಅದೇ ರೀತಿಯಾಗಿ, ಮನೆಯಲ್ಲಿ ಒಂದು ಮಗುವು ಜನಿಸಿದಾಗಲೂ ಸಹ ಆ ಮನೆಯಲ್ಲಿ ಹತ್ತು ದಿವಸಗಳ ಕಾಲದವರೆಗೆ ಶೌಚವಿರುತ್ತದೆ. ನಿಮ್ಮ ಮನೆಯಲ್ಲಿ ಒಂದು ಹೊಸ ಜೀವ ಬಂದಿದೆಯೆಂದು ನೀವು ಬಹಳ ಉದ್ರೇಕಗೊಂಡಿರುತ್ತೀರಿ. ಸರಿ, ಆ ಸಂತೋಷದೊಡನೆಯೆ, ಆ ಉದ್ರೇಕದೊಡನೆಯೆ ಹತ್ತು ದಿನಗಳವರೆಗೆ ಇರಿ. ಎಲ್ಲಾ ಸಾಮಾಜಿಕ ಕಟ್ಟುಪಾಡುಗಳಿಂದ, ಕರ್ತವ್ಯಗಳಿಂದ ನಿಮ್ಮನ್ನು ಮುಕ್ತಗೊಳಿಸಲಾಗುತ್ತದೆ, ನೀವು ನೂರು ಪ್ರತಿಶತ ಸಂತೋಷವಾಗಿ ಇರಲೆಂದು. ನಂತರ ನಿಮ್ಮ ಜವಾಬ್ದಾರಿಗಳಿಗೆ ಮತ್ತು ಬದ್ಧತೆಗಳಿಗೆ ಮರಳಿ ಬರಬೇಕು. ಶೌಚ, ಎರಡನೆಯದು ನಿಯಮ.

☘🍁☘🍁☘🍁☘☘☘🍁☘