Wednesday, 19 October 2016

ನಾವು ಯಾರು?

#ಮಧುವಿದ್ಯಾ

ನಾವು ಯಾರು?

ಇದನ್ನು ಯಾರೂ ಸರಿಯಾಗಿ,
ಪೂರ್ಣವಾಗಿ ತಿಳಿಯರು.

ಪ್ರಾಸಂಗಿಕವಾಗಿ,
ಸಾಪೇಕ್ಷಿಕವಾಗಿ
ನಾವು ಯಾರು?
ಎಂಬುದನ್ನು ಜಗತ್ತು ಹೇಳುತ್ತದೆ.

ಆದರೆ ನಿಜವಾಗಿ ನಾವು ಯಾರು?
ಯಾರಿಗೂ ತಿಳಿಯದು.
ಎಲ್ಲ ಅಭಿಪ್ರಾಯ ಕಳೆದು ನೋಡಿದಾಗ ಎನು ಸತ್ಯವಾಗಿ ಉಳಿಯುತ್ತದೆಯೋ ಅದೇ "ನಾನು" ಎನ್ನುವುದರ ನಿಜ!

ಅದು ದೇವರು,
ಅದು ನಮ್ಮ ಸ್ವರೂಪ,
ಮಾನವ ತಳೆದ ಎಲ್ಲ ದೈವೀ ಕಲ್ಪನೆಗಳನ್ನು ಕಳೆದುಹಾಕಿದಾಗ ಏನು ಉಳಿಯುತ್ತದೆಯೋ ಅದು ದೇವರು.

ಘನ ಸತ್ಯ.
ಅದಕ್ಕೆ ಯೋಗ್ಯ ಶಬ್ದ
'ಬಯಲು! '
"ಶೂನ್ಯ!"

ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು

No comments:

Post a Comment