Wednesday, 19 October 2016

ಸೇವೆಯ ತೃಪ್ತಿ

ಪ್ರಶ್ನೆ: ಸೇವೆಯು ತೃಪ್ತಿಯನ್ನು ತರುತ್ತದೆ, ಪ್ರತಿಯೊಬ್ಬರೂ ಅದನ್ನು ಯಾಕೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ? ಅದು ಯಾಕೆ ಎಲ್ಲರಿಗೂ ಸಹಜವಾಗಿ ಬರುವುದಿಲ್ಲ?



ಶ್ರೀ ಶ್ರೀ ರವಿ ಶಂಕರ್: ಸೇವೆಯನ್ನು ಮಾಡದಿರುವವನೊಬ್ಬನು ಒತ್ತಡದಲ್ಲಿರುವವನಾಗಿರುವುದು, ಅಸುರಕ್ಷಿತ, ಸ್ವಾರ್ಥಪರ ಅಥವಾ ಜ್ಞಾನವಿಲ್ಲದಿರುವವನಾಗಿರುವುದು ಸ್ವಾಭಾವಿಕವೇ. ಸ್ವಲ್ಪವಾದರೂ ಜ್ಞಾನವಿದ್ದರೆ, ಸೇವೆಯು ಸಹಜವಾಗಿರುತ್ತದೆ. ನೀವು ಸುಸಂಸ್ಕೃತರೂ ನಾಗರಿಕರೂ ಆಗಿದ್ದರೆ, ಆಗ ಸೇವೆಯು ಸಹಜವಾಗಿರುತ್ತದೆ. ಸೇವೆ ಮಾಡುವುದನ್ನು ಯಾರೂ ನಿಮಗೆ ಕಲಿಸಬೇಕಾಗಿಲ್ಲ. ಯಾವುದಾದರೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯಾರೂ ನಿಮಗೆ ಹೇಳಬೇಕಾಗಿಲ್ಲ.
ಚೆನ್ನೈ ಪ್ರವಾಹದ ಸಂದರ್ಭದಲ್ಲಿ ಏನಾಯಿತು ನೋಡಿ? "ನೀವೆಲ್ಲಾ ಬಂದು ಸಹಾಯ ಮಾಡಿ" ಎಂದು ಯಾರೂ ಜನರನ್ನು ಆಹ್ವಾನಿಸಲಿಲ್ಲ. ಚೆನ್ನೈಯ ಇಡೀ ಯುವಕರು, ಯುವಕರು ಮಾತ್ರವಲ್ಲ, ಚೆನ್ನೈಯ ಜನರೆಲ್ಲಾ ಒಟ್ಟು ಸೇರಿ ಪರಸ್ಪರ ಸಹಾಯ ಮಾಡಿದರು. ಈ ದುರಂತಗಳು ಯಾವುದೋ ವಿಚಿತ್ರವಾದ ರೀತಿಯಲ್ಲಿ ಜನರನ್ನು ಒಂದುಗೂಡಿಸುತ್ತವೆ, ಶತ್ರುಗಳನ್ನು ಒಂದುಗೂಡಿಸುತ್ತವೆ. ತಮ್ಮ ಸಹಜವಾದ ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಲು ದುರಂತಗಳು ಜನರನ್ನು ವಿವಶರಾಗಿಸುತ್ತವೆ. ನೀವು ಬುದ್ಧಿವಂತರಾಗಿದ್ದರೆ, ನಿಮ್ಮ ಅತ್ಯಂತ ಒಳ್ಳೆಯ ಗುಣವನ್ನು ಹೊರತರುವುದಕ್ಕಾಗಿ ನೀವೊಂದು ದುರಂತಕ್ಕಾಗಿ ಕಾಯುವುದಿಲ್ಲ.  

No comments:

Post a Comment