Wednesday, 19 October 2016

ಅರ್ಥವಾಗಿದೆ ಎಂದರೇನು?

✨ಅರ್ಥವಾಗಿದೆ ಎಂದರೇನು?✨


''ಆಲೋಚನೆಯ ಸ್ವರೂಪ ಮತ್ತು ರಚನೆಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ,'' ಎಂದು ಯಾರಾದರೂ ಹೇಳಿದರೆ ಏನರ್ಥ? ''ನಾನು ಅರ್ಥಮಾಡಿಕೊಂಡಿದ್ದೇನೆ ನನಗೆ ತಿಳಿದಿದೆ,'' ಎಂದಲ್ಲವೇ? ''ನನಗೆ ಅರ್ಥವಾಗಿದೆ,'' ಎಂದು ಹೇಳುವ ಮನಸ್ಸಿನ ಸ್ಥಿತಿ ಏನು? ಯಾವುದು? ದಯವಿಟ್ಟು ಎಚ್ಚರಿಕೆಯಿಂದ ಅನುಸರಿಸಿ. ಯಾವುದನ್ನು ಸ್ಥಾಪಿಸಲು ಹೋಗಬೇಡಿ. ಆಲೋಚನೆ ಅರ್ಥವಾಗುವುದೇ? ಎಂದು ನಾನು ಪ್ರಶ್ನಿಸುತ್ತಿದ್ದೇನೆ. ನೀವೇನು ಹೇಳುತ್ತೀರಿ, ಉದಾಹರಣೆಗೆ ನೀವು ಆಧುನಿಕ ಜೀವನದ ಸಂಕೀರ್ಣತೆಯನ್ನು ತುಂಬಾ ಸೂಕ್ಷ ್ಮವಾಗಿ ಬಣ್ಣಿಸುತ್ತೀರಿ- ಆಗ 'ನನಗೆ ಅರ್ಥವಾಯಿತು' ಎನ್ನುತ್ತೇನೆ. ಬರೀ ವರ್ಣನೆ ಮಾತ್ರವಲ್ಲದೆ, ಅದರ ವಸ್ತು, ವಿಷಯದ ಆಳ ಇದೆಲ್ಲ ಅರ್ಥವಾಯಿತು. ಎನ್ನುತ್ತೇನೆ. ಆಗ ನನಗೆ ಆಧುನಿಕ ಜೀವನದಲ್ಲಿ ಸಿಲುಕಿಕೊಂಡ ಮನುಷ್ಯರು ಹೇಗೆ ನರದೌರ್ಬಲ್ಯ ಪೀಡಿತರಾಗಿದ್ದಾರೆ, ಎಂಥ ದುಃಖಸ್ಥಿತಿ ಅವರದ್ದು ಎಂಬುದು ತಿಳಿಯುತ್ತದೆ. ನಾನು ನನ್ನ ಕಿವಿಗಳು, ನರಗಳು ಭಾವಗಳೊಂದಿಗೆ ಅರ್ಥ ಮಾಡಿಕೊಂಡಿದ್ದೇನೆ. ಹೀಗಾಗಿ ನಾನು ಅದರಲ್ಲಿ ಸಿಲುಕಿಕೊಂಡಿಲ್ಲ. ಸರ್ಪವು ಅಪಾಯಕಾರಿ ಎಂಬುದು ನನಗೆ ಅರ್ಥವಾದಾಗ ನಾನು ಅದರ ಹತ್ತಿರ ಸುಳಿಯುವುದಿಲ್ಲ. ಒಂದು ವೇಳೆ ಅದು ನನ್ನೆದುರಿಗೆ ಬಂದಾಗ ನನ್ನ ವರ್ತನೆ ಸಂಪೂರ್ಣ ಭಿನ್ನವಾಗಿರುತ್ತದೆ. ಏಕೆಂದರೆ ಈಗ ನನಗೆ ಆ ಬಗ್ಗೆ ಅರ್ಥವಾಗದೆ. ಹಾಗಾದರೆ ವ್ಯಕ್ತಿಯು ಆಲೋಚನೆಯ ಸ್ವರೂಪ ಮತ್ತು ಆಲೋಚನೆಯ ಫಲವನ್ನು ಅಂದರೆ ಭಯ ಮತ್ತು ಸುಖವನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾನೆಯೇ? ವ್ಯಕ್ತಿ ಅದನ್ನು ಹಿಡಿತಕ್ಕೆ ತಂದುಕೊಂಡಿದ್ದಾನಾ? ಅದು ಹೇಗೆ ಕೆಸಲ ಮಾಡುತ್ತದೆ ಎಂಬುದನ್ನು ಯಥಾರ್ಥವಾಗಿ ನೋಡಿದ್ದಾನಾ? ಅಥವಾ ನಾನಿನ್ನೂ ಆ ವರ್ಣನೆ, ವಾದ, ತಾರ್ಕಿಕತೆ ಜೊತೆಗೇ ಇದ್ದೇನಾ? ವಸ್ತುಸ್ಥಿತಿಯೊಂದಿಗಿಲ್ಲವಾ? ನನಗೆ ವರ್ಣನೆಯಿಂದ ಸಂತೋಷವಷ್ಟೇ ಅದರೆ, ಅದೂ ಶಾಬ್ದಿಕ ವಿವರಣೆಯಿಂದ ಖುಷಿಯಾಗಿದ್ದರೆ, ಆಗ ನಾನು ಅದರೊಂದಿಗೆ ಆಲೋಚನೆ ಮಾಡುತ್ತಿದ್ದೇನಷ್ಟೆ. ವರ್ಣನೆಯ ವರ್ಣಿಸಲ್ಪಟ್ಟ ವಸ್ತುವನ್ನು ನಿಜಕ್ಕೂ ದರ್ಶಿಸಲು ಸಾಧ್ಯವಾದರೆ ಅದರ ಪ್ರತ್ಯಕ್ಷ ಪರಿಭಾವನೆ ಸಾಧ್ಯವಾದರೆ, ಆಗ ಸಂಪೂರ್ಣ ಭಿನ್ನವಾದ ಕ್ರಿಯೆ ನೆರವೇರುತ್ತದೆ. (ಹಸಿದವನಿಗೆ ಅನ್ನ ಬೇಕೇ ಹೊರತು ಅನ್ನದ ಬಣ್ಣನೆಯಲ್ಲ. ಅವನಿಗೆ ಅನ್ನಬೇಕು; ಅನ್ನ ತಿಂದರೆ ಏನಾಗುತ್ತದೆ ಎಂಬ ತೀರ್ಮಾನವಲ್ಲ.) ಆಲೋಚನೆಯು ಭಯವನ್ನು ಹೇಗೆ ಸೃಷ್ಟಿಸುತ್ತದೆ ಎಂಬುದನ್ನು ವ್ಯಕ್ತಿ ಕಂಡುಕೊಂಡಾಗ ಏನಾಗುತ್ತದೆ? ಹಸಿದವನ ಮುಂದೆ ಊಟ ಎಷ್ಟು ರುಚಿಯಾಗಿದೆ ಎಂದು ಯಾರಾದರೂ ಬಣ್ಣಿಸಿದರೆ ಆಗ ಅವನ ಪ್ರತಿಕ್ರಿಯೆ ಏನು? ಏನು ಮಾಡುತ್ತಾನೆ? ''ಅನ್ನವನ್ನು ಬಣ್ಣಿಸಬೇಡ ಅನ್ನವನ್ನಿಕ್ಕು'' ಎಂದು ಹೇಳಬಹುದು. ಅಲ್ಲಿ ನೇರಕ್ರಿಯೆ ಇದೆ; ಅದು ತಾತ್ತ್ವಿಕವಲ್ಲ. ಹೀಗಾಗಿ 'ನನಗೆ ಅರ್ಥವಾಗಿದೆ' ಎಂದು ಯಾರಾದರೂ ಹೇಳಿದಾಗ ಆಲೋಚನೆ, ಭಯ ಹಾಗೂ ಸುಖದ ಬಗೆಗೆ ನಿರಂತರವಾದ ಕಲಿಕೆಯ ಚಲನೆ ನಡೆದಿದೆ ಎಂದು ಅರ್ಥ. ಈ ನಿರಂತರ ಚಲನೆಯಿಂದಾಗಿ ವ್ಯಕ್ತಿ ಕರ್ತವ್ಯದಲ್ಲಿ ಮಗ್ನನಾಗುತ್ತದೆ. ಕಲಿಕೆಯ ಚಲನೆಯಲ್ಲೇ ಅವನು ಕರ್ಮ ಮಾಡುತ್ತಾನೆ. ಭಯದ ಬಗೆಗೆ ಕಲಿಕೆ ನೆರವೇರಿದಾಗ ಭಯವೂ ಕೊನೆಗೊಳ್ಳುತ್ತದೆ.

* ಜೆ. ಕೃಷ್ಣಮೂರ್ತಿ
🍃☘🌿🍃☘🌿🍃☘🌿

No comments:

Post a Comment