Wednesday, 19 October 2016

ವಿಶ್ವಾಸ

ಪ್ರಶ್ನೆ: ನನ್ನ ವಿಶ್ವಾಸವು ಅಲುಗಾಡಿದೆ. ಒಬ್ಬ ವ್ಯಕ್ತಿಯಾಗಿ ನಾನು, ಈ ಆಘಾತದಿಂದ ಹೊರಬರಲು ಇತರರಿಗೆ ಸಹಾಯ ಮಾಡಲು ಸಾಧ್ಯವೇ?




ಶ್ರೀ ಶ್ರೀ ರವಿ ಶಂಕರ್: ಹೇ! ಒಂದು ನೆರೆಯು ನಿನ್ನ ವಿಶ್ವಾಸವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಹಾಗಿದ್ದಲ್ಲಿ ಅದು ವಿಶ್ವಾಸವೇ ಅಲ್ಲ. ಸಂಕಟದ ಪ್ರತಿ ಕ್ಷಣದಲ್ಲೂ ನಿನಗೆ ಸಹಾಯವು ದೊರಕುವುದು ಮತ್ತು ನಿನಗೆ ಸಹಾಯ ಮಾಡಲಾಗುವುದು ಎಂಬುದನ್ನು ಸುಮ್ಮನೇ ತಿಳಿ. ನಿನ್ನೊಂದಿಗೆ ನಿಲ್ಲುವ, ನಿನಗೆ ಸಹಾಯ ಮಾಡುವ ಒಂದು ಶಕ್ತಿಯಿದೆ. ಅಷ್ಟನ್ನೇ ನೀನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದುದು.

ಒಂದು ಧಾರಾಕಾರ ಮಳೆ ಅಥವಾ ಒಂದು ನೆರೆ ಅಥವಾ ಒಂದು ಕ್ಷಾಮವು ನಿನ್ನ ವಿಶ್ವಾಸವನ್ನು ಅಲುಗಾಡಿಸಬಲ್ಲದಾದರೆ, ಆಗ ಅದು ನಿಜವಾಗಿಯೂ ವಿಶ್ವಾಸವಲ್ಲ. ಅದೊಂದು ಪ್ರಾಸಂಗಿಕ ಪರಿಕಲ್ಪನೆ ಅಷ್ಟೇ. ಇದು ವಿಶ್ವಾಸಕ್ಕಿರುವ ಪರೀಕ್ಷೆಯ ಸಮಯವಾಗಿದೆ, ಹೀಗಾಗಿ ಅದನ್ನು ಅಚಲವಾಗಿರಿಸು

ಪ್ರಶ್ನೆ: ಗುರುದೇವ, ಸಂಕಟಕಾಲದಲ್ಲಿ ಭಾವನೆಗಳನ್ನು ನಿಯಂತ್ರಿಸುವುದು ಹೇಗೆ?



ಶ್ರೀ ಶ್ರೀ ರವಿ ಶಂಕರ್:ಉಸಿರಾಡುವುದು, ಉಸಿರಾಡುವುದು ಮತ್ತು ಉಸಿರಾಡುವುದು.
ಉಸಿರಾಟವೆಂಬುದು ಪ್ರಕೃತಿಯು ನಿಮ್ಮಲ್ಲಿ ಹಾಕಿರುವ ಅತ್ಯಂತ ದೊಡ್ದ ರಹಸ್ಯವಾಗಿದೆ. ಅದು ನಿಮ್ಮ ಭಾವನೆಗಳೊಂದಿಗೆ ಸಂಬಂಧ ಹೊಂದಿದೆ. ಉಸಿರಾಟದ ಅಭ್ಯಾಸದ ತಂತ್ರದ ಮೂಲಕ ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬಹುದು. ನಿಮ್ಮಲ್ಲಿ ಹಲವರು ಇದನ್ನು ಅನುಭವಿಸಿರುವಿರಿ ಎಂದು ನನಗನಿಸುತ್ತದೆ, ಅಲ್ಲವೇ?

(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ಯಾರು ಇದನ್ನು ಅನುಭವಿಸಿಲ್ಲವೋ ಅವರು ನಿಯಮಿತವಾಗಿ ಸ್ವಲ್ಪ ಉಸಿರಾಟದ ಅಭ್ಯಾಸಗಳನ್ನು ಮಾಡಬೇಕು. ಆಗ ನಿಮಗೆ ನಿಮ್ಮ ಮನಸ್ಸಿನ ಮೇಲೆ ಹೆಚ್ಚಿನ ಹಿಡಿತವಿರುವುದು.

No comments:

Post a Comment